2019 ರ ನವೆಂಬರ್ ತಿಂಗಳಿನಿಂದ ಆರಂಭವಾದ ಕನ್ನಡ ತಂತ್ರಜ್ಞಾನ ಕುರಿತ ಸಮುದಾಯ ಸಂವಾದ, ಸಲಹಾ ಸಭೆಯಿಂದ ಹಿಡಿದು ನಂತರದ ಹಲವು ಸರ್ಕಾರಿ ಸಭೆಗಳು, ಮೈಸೂರಿನಲ್ಲಿ ನಡೆದ ಎರಡು ದಿನಗಳ ಇ – ಕನ್ನಡ ಕಮ್ಮಟ – ಈ ಹೆಜ್ಜೆಗಳ ಮುಂದುವರಿಕೆಯಾಗಿ ಕರ್ನಾಟಕ ಸರ್ಕಾರ ಇ – ಆಡಳಿತ ಇಲಾಖೆಯು ಇದೇ ಮಾರ್ಚ್ 13 ರಂದು ನಾಲ್ಕು ಪ್ರಮುಖ ಸರ್ಕಾರಿ ಆದೇಶಗಳನ್ನು ಪ್ರಕಟಿಸಿದೆ (ಇ-ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 211 ಇಜಿಎಂ 2019 ಬೆಂಗಳೂರು, ದಿನಾಂಕ : 13-03-2020) ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಆದೇಶಗಳು ಹೀಗಿವೆ: ಕನ್ನಡ ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಸ್ಥೂಲ ಮಾನದಂಡಗಳು ಇ-ಕನ್ನಡ ಕಲಿಕಾ ಅಕಾಡೆಮಿ ಹಿನ್ನೆಲೆಯಲ್ಲಿ ಪೋರ್ಟಲ್ ನಿರ್ವಹಣೆ…
"ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ"ನಾನು ಮೈಸೂರಿನಲ್ಲಿ ಇದ್ದ ನಾಲ್ಕು ವರ್ಷಗಳ ಕಾಲ ಹತ್ತಾರು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಬಸ್ಸು ಅಥವಾ ರೈಲಿನಲ್ಲಿ ರಾಮನಗರವನ್ನು ಹಾದುಹೋಗುವಾಗ ಅಂಥಾದ್ದೇನೂ ಮಹತ್ವ ಅನ್ನಿಸುತ್ತಿರಲಿಲ್ಲ. ರಾಮನಗರದ ಪತ್ರಕರ್ತ ಮತ್ತು ಜನಪದ ಸಂಶೋಧನಾ ವಿದ್ಯಾರ್ಥಿ ಶ್ರೀ ರುದ್ರೇಶ್ವರ ಅವರ ಅಜ್ಜ ಅಜ್ಜಿ ಸ್ಮರಣಾರ್ಥ ಪ್ರಗತಿ ವಿದ್ಯಾಸಂಸ್ಥೆಗೆ ಬ್ಯಾಂಡ್ಸೆಟ್ ವಿತರಣಾ ಕಾರ್ಯಕ್ರಮಕ್ಕೆ ಫೆ. 23 ರಂದು ಹೋಗಿದ್ದೆ. ಈ ಕಾರ್ಯಕ್ರಮದಲ್ಲಿ ಹಲವು ನಾಗರಿಕರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಮೂಲಕ ನಾನು ರಾಮನಗರದ ಹೃದಯವನ್ನೇ ನೋಡಿದಷ್ಟು ಸಂತಸವಾಯಿತು.
"ರಾಮನಗರದ ಹೃದಯ"ಕಲಬುರಗಿಯಲ್ಲಿ ನಡೆದ ೮೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ ಕನ್ನಡ ಭಾಷೆ – ಹೊಸ ತಂತ್ರಜ್ಞಾನ : ಈ ಗೋಷ್ಠಿಯಲ್ಲಿ ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳ ಬಗ್ಗೆ ನಾನು ನನ್ನ ಅರಿವಿಗೆ ಬಂದ ಸಂಗತಿಗಳನ್ನು ನಿಮ್ಮ ಮುಂದೆ ಇಡಲು ಬಯಸಿದ್ದೇನೆ. ಅನ್ವಯಿಕ ತಂತ್ರಾಂಶಗಳ ವಿಷಯದಲ್ಲಿ ಇರುವ ತೊಡಕುಗಳ ಬಗ್ಗೆ ತಮ್ಮೆಲ್ಲರ ಗಮನವನ್ನು ಸೆಳೆಯಲು ಯತ್ನಿಸುತ್ತೇನೆ. ಕಾರ್ಯ ಸಮನ್ವಯದ ಕೊರತೆ: ಭಾಷಾ ಸಾಧನ ಮತ್ತು ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆಗಳು ವಿವಿಧ ಸಂಘ ಸಂಸ್ಥೆಗಳ ನಡುವೆ ಹಂಚಿಹೋಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಬಂಧಿತ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ಮುಕ್ತ ತಂತ್ರಾಂಶ ಸಮುದಾಯದ ನಡುವೆ ಸೂಕ್ತವಾದ ಸಮನ್ವಯವಿಲ್ಲ. ಮಾನದಂಡಗಳಿಗೆ ಅನುಗುಣವಾಗಿ ತಂತ್ರಜ್ಞಾನ ರೂಪಿಸುವುದು,…
"ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು"ಬೆಂಗಳೂರಿಗೆ ಭಾರತದ ಸಿಲಿಕಾನ್ ಸಿಟಿ ಎಂಬ ಹೆಸರು ಬರಲು ಕಾರಣರಾದ ಹಲವರಲ್ಲಿ ನನ್ನ ಹಿರಿಯ ಮಿತ್ರ ಶ್ರೀ ಮಂಜಪ್ಪ ಪ್ರೇಮ್ ಕುಮಾರ್ – ಎಂ ಪಿ ಕುಮಾರ್ ಪ್ರಮುಖರು. ಗ್ಲೋಬಲ್ಎಡ್ಜ್ ಸಾಫ್ಟ್ವೇರ್ ಸಂಸ್ಥೆಯನ್ನು (https://www.globaledgesoft.com)ಕಟ್ಟಿ ಬೆಳೆಸಿದ ಶ್ರೀ ಎಂ ಪಿ ಕುಮಾರ್ ಈಗ ಅಧಿಕೃತವಾಗಿ ಸಂಸ್ಥೆಗೆ ವಿದಾಯ ಹೇಳಿದ್ದಾರೆ. ಸದ್ಯಕ್ಕೆ ಅವರು ಸಂಸ್ಥೆಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವಾರ ಅವರ ಕಡೆಯ ದಿನದಂದು ಸಂಸ್ಥೆಯ ಸಿಬ್ಬಂದಿ ವರ್ಗವು ಅವರನ್ನು ಬೀಳ್ಕೊಟ್ಟ ವಿಡಿಯೋ ಇಲ್ಲಿದೆ. ಅದಾದ ಕೆಲವೇ ದಿನಗಳಲ್ಲಿ (ನಿನ್ನೆ!) ೩ ಗುರುಕುಲಗಳಿಗೆ ಒಟ್ಟು ೬ ಕೋಟಿ ರೂ.ಗಳನ್ನು ಅವರು ದಾನ ಮಾಡಿದ ಚಿತ್ರವೂ ಇಲ್ಲಿದೆ. ಎಂಪಿಕೆ ಎಂದೇ ನಮಗೆಲ್ಲ ಪರಿಚಿತರಾಗಿರುವ ಎಂ ಪಿ ಕುಮಾರ್…
"ದಣಿವರಿಯದ ಸಾಫ್ಟ್ವೇರ್ ಸಂಘಟಕ ಎಂಪಿ ಕುಮಾರ್ಗೆ ಇದು ವಿದಾಯವಲ್ಲ, ಹೊಸ ಆರಂಭ !!"1983 ರ ದಿನಗಳಲ್ಲಿ ದಾವಣಗೆರೆಯ ಸಿವಿ ಹಾಸ್ಟೆಲ್ನಲ್ಲಿ ಪ್ರಜಾವಾಣಿ ಪದರಂಗ ಬಿಡಿಸುವುದು ಎಂದರೆ ಒಂದು ಸವಾಲೇ ಆಗಿತ್ತು. ಏನು ಮಾಡಿದರೂ ಎರಡು ಮೂರು ಪದಗಳು ಸಿಗುತ್ತಲೇ ಇರಲಿಲ್ಲ. ಇದನ್ನು ರಚಿಸಿದವರಿಗೇ ಈ ಪದ ಗೊತ್ತಿರಲಿಕ್ಕಿಲ್ಲ ಎಂದೇ ಅನುಮಾನಪಟ್ಟಿದ್ದೆ. ಆದರೆ ಮೂರ್ನಾಲ್ಕು ವರ್ಷಗಳ ನಂತರ ಇವನ್ನು ರಚಿಸುವ ಪದಬ್ರಹ್ಮನೇ ನನ್ನ ಎದುರಿಗೆ ಬಂದಿದ್ದರು! ಕೆ ಎಸ್ ನಾಗಭೂಷಣಂ…. ಪ್ರೀತಿಯಿಂದ ಕರೆಯುವುದು ‘ನಾಣ’. ಪ್ರಜಾವಾಣಿಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ, ಕಬ್ಬಿಣದ ಕಡಲೆಯಂತಹ ಪದಬಂಧ ರಚನೆಯಲ್ಲಿ ದಾಖಲೆ ನಿರ್ಮಿಸಿದ ಅವರನ್ನು ನಾನು ಭೇಟಿಯಾಗುವೆ ಎಂದು ಊಹಿಸಿರಲೇ ಇಲ್ಲ. ಆದರೆ 1987 – 90ರ ಸಂಕಷ್ಟದ ದಿನಗಳಲ್ಲಿ ಬೆಂಗಳೂರೆಂಬ ಮಹಾನಗರಿಯಲ್ಲಿ ನನಗೆ ಮಾನಸಿಕ ನೆಮ್ಮದಿ, ಆಸರೆ, ಆಹಾರ ಕೊಟ್ಟು…
"ಪದಬ್ರಹ್ಮ ‘ನಾಣ’ ಮತ್ತು ಆಶುಕವನ!"ನಾನೇ ಕನಸು ಕಂಡು ಹೊಣೆ ಹೊತ್ತಿದ್ದ ಭಾರತವಾಣಿ ಯೋಜನೆಗೆ ನಾಲ್ಕು ವರ್ಷಗಳ ನಂತರ ರಾಜೀನಾಮೆ ನೀಡಿ, ಕರ್ನಾಟಕ ಸರ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಕಾರ್ಯ ಆರಂಭಿಸಿದ ಈ ದಿನದ ಕೊನೆಗೆ ನನಗೆ ಅನ್ನಿಸಿದ್ದು…… ಬದಲಾವಣೆ ಜಗದ ನಿಯಮ! ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅವರಿಂದ ನನ್ನ ಹೊಣೆ ನಿರ್ವಹಿಸಲು ಬೇಕಾದ ಕಿವಿಮಾತುಗಳನ್ನು ಸ್ವೀಕರಿಸಿದೆ. ಮೊನ್ನೆ ಭಾರತವಾಣಿ ತಂಡ ಮತ್ತು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು, ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರಿಂದ ಬೀಳ್ಕೊಡುಗೆಯ ಭಾವುಕ ಸನ್ನಿವೇಶ ಅನುಭವಿಸಿದೆ. ಇಂದು ನನಗೆ ವಹಿಸಿದ ಹೊಣೆಯನ್ನು ನಿರ್ವಹಿಸಲು ಆರಂಭಿಸಿದೆ. ಮೂರ್ನಾಲ್ಕು ದಿನಗಳಲ್ಲಿ ಏನೆಲ್ಲ ಬದಲಾವಣೆ ಆಗಿಹೋಯಿತು…
"ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!"`ಜೋಕರ್’ (೨೦೧೯) ಸಿನೆಮಾದ ಬಗ್ಗೆ ದ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್ನಂತಹ ದೊಡ್ಡ ಪತ್ರಿಕೆಗಳೇ `ಚೆನ್ನಾಗಿಲ್ಲ’ ಎಂದು ಬರೆದ ಮೇಲೆ, ಹಾಲಿವುಡ್ ರಂಗದಲ್ಲೇ ಹಲವು ತಿಂಗಳುಗಳ ನಂತರ ಸುದ್ದಿ ಮಾಡಿದ ಈ ಒಂದಾದರೂ ಹಾಲಿವುಡ್ ಸಿನೆಮಾನ ನೋಡಬೇಕೇ ಬೇಡವೇ ಎಂಬ ಗೊಂದಲಕ್ಕೆ ಬಿದ್ದಿದ್ದೆ. ಇವತ್ತು ನೋಡಿದ ಮೇಲೆ, ಈ ಕೂಡಲೇ ನನ್ನ ಇನ್ಸ್ಟಂಟ್ ವಿಮರ್ಶೆ ಬರೆಯಲೇಬೇಕು ಅನ್ನಿಸಿ… (ಸಿನೆಮಾವು A ಪ್ರಮಾಣಪತ್ರ ಹೊಂದಿದೆ) `ಕೆಟ್ಟವರು’ ಎಂಬ ಹಣೆಪಟ್ಟಿ ಅಂಟಿಸಿಕೊಂಡವರು ಎಲ್ಲೆಲ್ಲೂ ಯಾವ ಕಾಲದಲ್ಲೂ ಇರುತ್ತಾರೆ. ಅವರು ಹುಟ್ಟಿದಾಗ ಕೆಟ್ಟವರೇನೂ ಆಗಿರುವುದಿಲ್ಲ; ಮುಗ್ಧ ಮಗುವೇ ಆಗಿರುತ್ತಾರೆ. ಅಂತಹ ಹೂವಿನ ಮನಸ್ಸಿನ ವ್ಯಕ್ತಿಗಳೂ ಹೇಗೆ ಕೆಟ್ಟವರಾಗುತ್ತಾರೆ ಎಂಬ ಒಂದು ಉದಾಹರಣೆಯನ್ನು `ಜೋಕರ್’ ಸಿನೆಮಾ ಅದ್ಭುತ / ಭೀಕರ ದೃಶ್ಯ, ಎದೆ…
"`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ"ಚಿಕ್ಕ ಹುಡುಗನಾಗಿದ್ದ ದಿನಗಳಿಂದ ಯಕ್ಷಗಾನ ಪ್ರಸಂಗಗಳನ್ನು ರಾತ್ರಿಯಿಡೀ ನೋಡುತ್ತ ಬೆಳೆದ ನನಗೆ ಅದೊಂದು ತಮ್ಯ ಲೋಕ. ನಿನ್ನೆ (೮ ಸೆಪ್ಟೆಂಬರ್ ೨೦೧೯) ಬೆಂಗಳೂರಿನಲ್ಲಿ ಯಕ್ಷ ಸಿಂಚನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದಾಗ ತುಂಬಾ ಸಂತೋಷವಾಯಿತು. ಬಹುದಿನಗಳ ನಂತರ ಅರ್ಧ ದಿನದಷ್ಟಾದರೂ ಯಕ್ಷಗಾನದ ವಿವಿಧ ಆಯಾಮಗಳನ್ನು ಅರಿಯುವುದಕ್ಕಾಗಿ ಕಳೆದೆ ಎಂಬ ಸಮಾಧಾನವಾಯಿತು. ಈ ಕಾರ್ಯಕ್ರಮಕ್ಕೆ ಮಿತ್ರಮಾಧ್ಯಮ ಟ್ರಸ್ಟ್ನಿಂದಲೂ ಕಿರು ಬೆಂಬಲ ನೀಡಿದ್ದು ಸಾರ್ಥಕ ಅನ್ನಿಸಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಪರಂಪರೆಯಲ್ಲಿ ಮರೆತೇ ಹೋದ / ಅಪರೂಪದ ಬಳಕೆಯಲ್ಲಿರುವ ಕೆಲವು ಹೆಜ್ಜೆಗಳನ್ನು ಹಿರಿಯ ಕಲಾವಿದ ಶ್ರೀ ಬನ್ನಂಜೆ ಸಂಜೀವ ಸುವರ್ಣರು ತೋರಿಸಿದ್ದು ಮರೆಯಲಾಗದ ಅನುಭವವೇ. ೬೫ರ ಹರೆಯದಲ್ಲೂ ಅವರ ಅಭಿನಯ, ಲಾಲಿತ್ಯ, ಲಯ-ಲಾಸ್ಯ, ಗತಿ – ಎಲ್ಲವೂ ಪರಂಪರೆಯ ಬಿಳಲುಗಳೊಂದಿಗೇ ಚಿತ್ತಾಕರ್ಷಕವಾಗಿ…
"ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ"ಹೆಗ್ಗೋಡು ಮನು ಆ ವಿಸಿಟಿಂಗ್ ಕಾರ್ಡನ್ನು ಪೋಸ್ಟ್ ಮಾಡದೇ ಇದ್ದಿದ್ದರೆ ನಾನು ನನ್ನ ಬದುಕಿನ ಅತ್ಯಂತ ಇಂಟೆರೆಸ್ಟಿಂಗ್ ಕೆಲಸದ ಈ ಬ್ಲಾಗ್ ಬರೆಯುತ್ತಿರಲಿಲ್ಲ! ಏನೂ ಬರೆಯುವುದು, ಓದುವುದು ಬೇಡ ಎಂಬ ಮೂಡಿನಲ್ಲೇ ದಿನ ಕಳೆಯುತ್ತಿರುವ ನನಗೆ ಕೆಲವರಿಗಾದರೂ ಮಾಹಿತಿ ಹಂಚಿಕೊಳ್ಳಲು ಒಂದಷ್ಟು ಬರೆಯೋಣ ಅನ್ನಿಸಿ…. 1999-2001ರ ಆ ದಿನಗಳನ್ನು ಜನ ಡಾಟ್ಕಾಮ್ ಯುಗ ಎಂದು ಕರೆಯುತ್ತಿದ್ದರು. ಎಲ್ಲೆಂದರದಲ್ಲಿ ಹೊಸ ವೆಬ್ಸೈಟ್ ಹುಟ್ಟಿಕೊಳ್ಳುತ್ತಿತ್ತು. ಪ್ರತಿಯೊಂದೂ ವೆಬ್ಸೈಟ್ ಆರಂಭವಾದಾಗ ಒಂದು ಕ್ರಾಂತಿಯೇ ಆಗಿಬಿಟ್ಟಿತು ಎಂಬ ಚರ್ಚೆ ಮಾಧ್ಯಮದ ಪಡಸಾಲೆಗಳಲ್ಲಿ ಕೇಳಿ ಬರುತ್ತಿತ್ತು. ಅಷ್ಟು ಹೊತ್ತಿಗೆ ಕಂಪ್ಯೂಟರ್ ಖರೀದಿಸಿ, ಸ್ವತಃ ನಾನೇ ಮೋಡೆಮ್ (೧೪.೪ ಕೆಬಿಪಿಎಸ್ ವೇಗದ್ದು!!!!) ಜೋಡಿಸಿ, ಯಾಹೂ ವೆಬ್ಸೈಟ್ ತೆರೆಯುತ್ತಿದ್ದೆ; ಅಷ್ಟಕ್ಕೇ ನನ್ನ ಪತ್ರಕರ್ತ ಮಿತ್ರರು ಕಂಪ್ಯೂಟರ್…
"ಇ-ದಕ್ಷಿಣ್ ಡಾಟ್ಕಾಮ್ : ಮಿಸ್ ಕಾಲ್ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!"ನಿನ್ನೆ (೭ ಆಗಸ್ಟ್ ೨೦೧೯) ವಿಚಾರ ಸಂಕಿರಣವೊಂದರಲ್ಲಿ ಮಾತನಾಡಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಗ್ರಂಥಗಳ ಡಿಜಿಟಲೀಕರಣದ ಬಗ್ಗೆ ಇದ್ದ ನನ್ನ ಗೋಷ್ಠಿ ಮುಗಿದ ಮೇಲೆ ಅಲ್ಲಿನ ಹಳೆಯ ಪತ್ರಿಕೆಗಳ ಸಂಗ್ರಹಾಗಾರಕ್ಕೆ ಹೋಗಿದ್ದೆ. ನೂರಾರು ವರ್ಷಗಳ ಹಿಂದಿನ ದಿನಪತ್ರಿಕೆಗಳು ಮತ್ತು ಅಪರೂಪದ ಪುಸ್ತಕಗಳನ್ನು ನೋಡಿದೆ. ಮೆಲುವಾಗಿ ಮುಟ್ಟಿ ನಮ್ಮ ಪರಂಪರೆಗೆ ಮನದಲ್ಲೇ ನಮಸ್ಕರಿಸಿದೆ. ಈ ಪುಸ್ತಕಗಳ ಜೊತೆಗೇ ಒಂದು ದಪ್ಪನೆಯ ಕನ್ನಡ- ಇಂಗ್ಲಿಶ್ ನಿಘಂಟೂ ಇತ್ತು. ಅದರ ಕೆಲವು ಪುಟಗಳ ಛಾಯಾಗ್ರಹಣ ಮಾಡಿಕೊಂಡು ಬಂದಿದೆ. ಅತಿದೊಡ್ಡ ಕನ್ನಡ – ಇಂಗ್ಲಿಶ್ ನಿಘಂಟು ರೂಪಿಸಿರುವ ಶ್ರೀ ವಿ ಕೃಷ್ಣ ಅವರಿಗೆ ಈ ಪುಟಗಳನ್ನು ಕಳಿಸಿದೆ. ಅದು ರೆವರೆಂಡ್ ವಿಲಿಯಂ ರೀವ್ (೧೭೯೪-೧೮೫೦) ಸಂಪಾದಿಸಿದ ಕನ್ನಡ-ಇಂಗ್ಲಿಶ್ ನಿಘಂಟು ಎಂದು ಮಾಹಿತಿ…
"ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!"