Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
ವಿಮರ್ಶೆ

ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ

ಬೇಳೂರು ಸುದರ್ಶನBy ಬೇಳೂರು ಸುದರ್ಶನFebruary 15, 2015Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಒಂದು ಬದಿ ಕಡಲು – ಕನ್ನಡದಲ್ಲಿ ಇತ್ತೀಚೆಗೆ ಬಂದ ಶಿಸ್ತಿನ ಬರವಣಿಗೆಯ ಕಾದಂಬರಿಯ ನಂತರ ಶ್ರೀ ವಿವೇಕ ಶಾನಭಾಗರು `ಊರು ಭಂಗ’ದ ಮೂಲಕ ತೆಂಕಣಕೇರಿಯ ಎಫೆಕ್ಟ್‌ನ್ನು ಹಬ್ಬಿಸುವ ಮೂಲಕ ಹಾಜರಾಗಿದ್ದಾರೆ. ಕಾದಂಬರಿಯ ರಚನಾ ತಂತ್ರದಲ್ಲೂ ಪ್ರಯೋಗ ಮಾಡಿದ್ದಾರೆ.

ಕ್ರಿಸ್ಟೋಫರ್‌ ನೋಲಾನ್‌ನ `ದ ಇನ್‌ಸೆಪ್‌ಶನ್‌’ ನೋಡಿದವರಿಗೆ ಒಂದೇ ಕಾಲದಲ್ಲಿ ಹಲವು ಕಾಲಗಳು ವಿವಿಧ ವೇಗದಲ್ಲಿ ಸರಿಯುವ ಕಥೆ ಗೊತ್ತಿದೆ. ಕನಸು ಮನಸುಗಳ ಒಳಗೆ ಕಳ್ಳತನ ಮಾಡುವ ವ್ಯಕ್ತಿಗಳ ಸಂಕೀರ್ಣ ಭಾವುಕ, ವೈಜ್ಞಾನಿಕ ಕಥೆ ಹೆಣೆದ ನೋಲಾನ್‌ ಪ್ರೇಕ್ಷಕರ ತಲೆಯನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ. ಯಾರು ಯಾವಾಗ ಏನು ಮಾಡಿದರು ಎಂದು ನೀವು ಸರಳವಾಗಿ ವಿವರಿಸಲು ಬರುವುದೇ ಇಲ್ಲ! ಅದೇ ಬಗೆಯ ಇನ್ನೊಂದು ತುದಿಗೆ ಹೋದ ನೋಲಾನ್‌ ಇತ್ತೀಚೆಗೆ ಮಾಡಿದ್ದು `ಇಂಟರ್‌ಸ್ಟೆಲ್ಲಾರ್‌’ ಸಿನೆಮಾ. ಇಲ್ಲೂ ಕಾಲ – ಅವಕಾಶಗಳ ವಿಪರೀತ ಸೂತ್ರಗಳ ವಿಜುಯಲೈಸೇಶನ್ ಇದೆ. ನಾನು ನೋಲಾನ್‌ ಬರೆದ ದೃಶ್ಯಗಳನ್ನೆಲ್ಲ ಕಲ್ಪಿಸಿಕೊಳ್ಳುತ್ತ, ನನ್ನೊಳಗೇ ಮಥಿಸುತ್ತಿರಬೇಕಾದರೆ `ಊರು ಭಂಗ’ನನ್ನ ಏಕಾಗ್ರತೆಗೆ ಭಂಗ ತಂದಿತು!

oorubhanga-cover

ನೋಲಾನ್‌ ಮಾದರಿಯಲ್ಲೇ ಕಾಲಚಕ್ರದ ವಿವಿಧ ಮಗ್ಗುಲುಗಳನ್ನು ವರ್ತಮಾನ ಮತ್ತು ಗತಕಾಲದ ಘಟನಾ ಸರಣಿಗಳೊಂದಿಗೆ ಜೋಡಿಸಿದ ವಿವೇಕ್‌ ಇಲ್ಲಿ ಅಚ್ಚಗನ್ನಡದ ಒಂದು ಸ್ಪೇಸ್‌ ಟೈಮ್‌ ಕಾದಂಬರಿ ಕೊಟ್ಟಿದ್ದಾರೆ.

ಕಾದಂಬರಿಯು ವರ್ತಮಾನದಲ್ಲಿ ಆರಂಭವಾಗಿ ಕೆಲವೇ ದಿನಗಳಲ್ಲಿ, ವರ್ತಮಾನದಲ್ಲೇ ಮುಗಿಯುತ್ತದೆ. ಆದರೆ ಅದರ ಹೊಟ್ಟೆಯೊಳಗೆ ಹುಟ್ಟಿ ವ್ಯಾಪಿಸುವ ಕಥೆಗಳು ಎಷ್ಟೋ ವರ್ಷಗಳ ಕಾಲ ನಡೆಯುತ್ತವೆ. ಅಲ್ಲೂ ಕಾಲಾನುಕ್ರಮ ಎಂದಿನಂತಿಲ್ಲ. ಮತ್ತೊಂದು ಪೀಠಿಕೆ, ಆಮೇಲೆ ಫ್ಲಾಶ್‌ ಬ್ಯಾಕ್‌ – ಹೀಗೆ ಕಾದಂಬರಿ ಓದುಗರನ್ನು ಹಿಗ್ಗಾಮುಗ್ಗಾ ಜಗ್ಗುತ್ತದೆ. ನೀವು ಮತ್ತೆ ವರ್ತಮಾನಕ್ಕೆ ಬಂದಿರಿ ಎನ್ನುವಾಗ ಉಳಿದೇ ಹೋದ ಭೂತಕಾಲದ ಕಥೆಯು ಇನ್ನೊಂದು ಆಯಾಮದಲ್ಲಿ ಬೆಳೆಯುತ್ತದೆ. ಇದನ್ನು ಕಥಾನಾಯಕ ಯಾರಿಗೆ ಹೇಳಿದರು ಎಂಬುದೂ ನಿಮ್ಮ ಊಹೆಗೇ ಬಿಟ್ಟಿದ್ದು! ಅಲ್ಲೂ ಒಂದು ಸಂಕೀರ್ಣ ದೃಶ್ಯ ಸರಪಳಿ ಇದೆ. ಅದಾದ ಮೇಲೆ ಮತ್ತೆ ಕಥಾ ನಾಯಕನಿಂದಲೇ ಕಥೆಗೆ ಒಂದು `ಅಂತ್ಯ’ ದೊರಕುತ್ತದೆ.

ಇದು `ಊರು ಭಂಗ’ಕಾದಂಬರಿಯ ನಿರೂಪಣಾ ತಂತ್ರದ ಬಗ್ಗೆ ನಾನು ಭಾವಿಸಿದ ವಿಚಾರ.

ಕಾದಂಬರಿಯನ್ನೇ ಇಡಿಯಾಗಿ ತೆಗೆದುಕೊಂಡರೆ, ಮತ್ತೆ ವಿವೇಕ ಶಾನಭಾಗರ ಬರೆಯುವ ಶಿಸ್ತು ಮತ್ತು ಉತ್ಪ್ರೇಕ್ಷೆಯ ಅಂಚಿಗೆ ಹೋಗದಂಥ ಎಚ್ಚರಿಕೆ, ಪದಗಳ ಬಳಕೆಯಲ್ಲಿ ಸಂಯಮ, – ಎಲ್ಲವೂ ಎಂದಿನಂತೆ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತವೆ. ಸಮಕಾಲೀನ ಕಥೆಯಾಗಿ ಶುಗರ್‌ಡ್ಯಾಡಿ ಸಿಂಡ್ರೋಮ್‌ ಸಂಬಂಧಗಳು ಸಾಕಷ್ಟು ನಿರ್ಭಿಡೆಯಿಂದಲೇ ಕಾಣಿಸಿಕೊಳ್ಳುತ್ತವೆ. ಕಿಮಾನಿ ವಕೀಲರ ಕಥೆಯು ಭೂತಕಾಲದ ಮುಖ್ಯ ಪ್ರವಾಹವಾಗಿ ನಮ್ಮನ್ನು ಕಾಡುತ್ತದೆ.

ಇಷ್ಟಾಗಿಯೂ ಕಾದಂಬರಿಯು `ಒಂದು ಬದಿ ಕಡಲು’ಗಿಂತ ವಿಭಿನ್ನವಾಗಿ ನಿಲ್ಲುವುದು ಈ ಕಾಲಗಣನೆಯ ಅಂಶದಿಂದಲೇ. ಜೊತೆಗೆ ಎರಡು ವಿಭಿನ್ನ ಲೊಕೇಶನ್‌ಗಳ, ವಿಭಿನ್ನ ವೇಗದ ಮತ್ತು ವಿಭಿನ್ನ ಸಂಬಂಧಗಳ ಕಥೆಗಳನ್ನು ಒಂದಾದ ಮೇಲೆ ಇನ್ನೊಂದರಂತೆ ಹೆಣೆದಿರುವುದರಿಂದ ಸಾಮಾನ್ಯ ಓದುಗರು ಕಾದಂಬರಿಯ ಏಕಸೂತ್ರತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಆಗಿದೆ! ಹೀಗೆ ಕಾದಂಬರಿಯನ್ನು ವಿಭಿನ್ನ ಕಾಲಾವಧಿಗಳಲ್ಲಿ ಹಿಗ್ಗಿಸುವ ಮತ್ತು ಕುಗ್ಗಿಸುವ ಉದ್ದೇಶವನ್ನೇ ಕಾದಂಬರಿಕಾರರು ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಓದಿದಾಗ `ಊರು ಭಂಗ’ಒಂದು ಒಳ್ಳೆಯ ಅನುಭವವನ್ನು ಕೊಡುತ್ತದೆ.

ಈ ಕಾದಂಬರಿಯಲ್ಲಿ ಇರುವ ಕೆಲವೇ ಕೆಲವು ಉಪಮೆಗಳನ್ನು ಕಾರ್ಯಕ್ರಮದಲ್ಲೇ ಶ್ರೀ ಜಯಂತ ಕಾಯ್ಕಿಣಿಯವರು ಉಲ್ಲೇಖಿಸಿದ್ದಾರೆ. ಅವುಗಳ ಹೊರತಾಗಿಯೂ ಕಾದಂಬರಿಯು ನಮ್ಮನ್ನು ಕಾಡುವುದು ವಿವೇಕ್‌ ಇಲ್ಲಿ ಹೇಳದೇ ಉಳಿಸಿದ ಹಲವು ಮುಖ್ಯ ವಿಚಾರಗಳಿಂದ! ಹೇಳಿದಂತೆ ಮಾಡಿ, ಹೇಳದೆಯೂ ಉಳಿದು, ನಿಮಗೆ ಓದಿನ ಖುಷಿಯನ್ನೂ ಕೊಡಬಲ್ಲ ಅಪರೂಪದ ನಿರೂಪಣೆಯನ್ನು ವಿವೇಕ್‌ ಸಾಧಿಸಿದ್ದಾರೆ. ಉದಾಹರಣೆಗೆ ರೇವತಿ, ಸನ್ಯಾಲ್‌, ಸಮೀರ್‌ ಸಾಹು – ಈ ಪಾತ್ರಗಳು ಏನೋ ಹೇಳುತ್ತ, ಮತ್ತೇನನ್ನೋ ಅಡಗಿಸುತ್ತ ಹೋಗುತ್ತವೆ ಎಂದು ಭಾಸವಾಗುತ್ತದೆ.

ವಿವೇಕ್‌ `ಒಂದು ಬದಿ ಕಡಲು’ವಿನಲ್ಲಿ ಘಟನೆಗಳು ಶಾಂತ ಸಮುದ್ರದಲ್ಲಿ ನಡೆದಂತೆ ಅನ್ನಿಸಿದರೆ, ಇಲ್ಲಿರುವ ಘಟನೆಗಳು ಹುಚ್ಚುಹೊಳೆಯಂತೆ ಏರಿಳಿತಗಳನ್ನು, ತಿರುವುಗಳನ್ನು ಕಾಣುತ್ತ ಹೊರಳುತ್ತವೆ. `ಕಡಲು’ ಓದಿದ ನಂತರ ಉಳಿಯುವ ಕ್ಷೇಮಭಾವ ಇಲ್ಲಿಲ್ಲ.

ಎರಡೂ ಕಾದಂಬರಿಗಳು ವಿಭಿನ್ನವಾಗಿ ಓದಿಸಿಕೊಳ್ಳುತ್ತವೆ; ಆದ್ದರಿಂದಲೇ ಎರಡನ್ನೂ ಹೋಲಿಸಿ ಬರೆದೆ.

ಇಲ್ಲಿ ಪಾತ್ರಗಳ ಮೂಲಕವೇ ಅವರ ಗುಣಾವಗುಣಗಳು ಬಹಿರಂಗವಾಗುವುದು ಈ ಕಾದಂಬರಿಯ ಇನ್ನೊಂದು ಮುಖ್ಯ ಅಂಶ. ಸಾಮಾನ್ಯವಾಗಿ ಪಾತ್ರಗಳು ಒಳ್ಳೆಯವು, ಕೆಟ್ಟವು ಎಂದೆಲ್ಲ ಗಮನಿಸುವಂಥ ಸ್ಥಿತಿಗೆ ಇಂದಿನ ಕಾದಂಬರಿ ಪ್ರಪಂಚ ಬಂದಿದೆ. ಆದರೆ ವ್ಯಕ್ತಿಗಳನ್ನು ಅವರವರ ಚಹರೆಗಳೊಂದಿಗೆ ನೇರವಾಗಿ ಕಾದಂಬರಿಯ ಕ್ಯಾನ್‌ವಾಸಿನಲ್ಲಿ ತಂದಿಡುವ ಕೆಲಸ ಕಷ್ಟದ್ದೇ. ಇಲ್ಲಿ ವಿವೇಕ್‌ ಗೆದ್ದಿದ್ದಾರೆ. ಕಥಾ ನಿರೂಪಕನ ಪಾತ್ರದ ಆತ್ಮ ವಿಶ್ಲೇಷಣೆ ಹಲವೆಡೆ ಇರುವುದು ನಿಜ. ಆದರೆ ಅಲ್ಲೆಲ್ಲೂ ಆತ ತನ್ನ ಪಾತ್ರವನ್ನು ಸಮರ್ಥಿಸಿಕೊಳ್ಳುವ ಪ್ರತಿಪಾದನೆಯನ್ನು ಮಾಡಿಲ್ಲ. ಕಾರ್ಯಕಾರಣಕ್ಕೆ ಸಂಬಂಧ ಇರದ ಹಲವು ನಡೆಗಳನ್ನು ಅವನಿಂದ ನಾವು ಕಾಣುತ್ತೇವೆ. ಕಾದಂಬರಿಯ ಒಳಸಂದೇಶದ ಆಳಕ್ಕಿಳಿಯದೇ ಹೊರನೋಟದಿಂದ ನೋಡಿದರೆ, ಒಮ್ಮೆ ವಿಪರೀತ ಕಿರಿಕಿರಿ ಎನಿಸಿದ ಹುಡುಗಿಯನ್ನು ಮತ್ತೆ ಕಾಣಲು ಹೋದ ಈ ನಾಯಕನ ಕಥೆಯು ‘ಶುಗರ್‌ಡಾಡಿ’ ಲವ್‌ ಆಸಕ್ತರಿಗೆ ದೊಡ್ಡ ಪಾಠವೇ. ಕೊನೆಯ ಪುಟಗಳಲ್ಲಿ ಕಾಣುವ ಚಂದು ಪಾತ್ರವಂತೂ ಫಾಸ್ಟ್‌ ಫಾರ್ವರ್ಡ್‌ ಮಾದರಿಯಲ್ಲಿ ಇಡೀ ಕಾದಂಬರಿಗೆ ಮೂರನೆಯ ಕಾಲಪದರವನ್ನು ಒದಗಿಸಿದೆ.

ವ್ಯಕ್ತಿ, ಸಮುದಾಯ – ಎಲ್ಲವೂ ಭಂಗವಾಗುತ್ತ ಹೋಗುವ ಪ್ರಕ್ರಿಯೆಯನ್ನು ಏರುಪೇರಾದ/ ಅದಲು ಬದಲಾದ ಕಾಲಪದರಗಳಲ್ಲಿ ಕೊಡುತ್ತ, ಅಲ್ಲಲ್ಲಿ ಮೊನಚು ಹಾಸ್ಯವನ್ನು ಗಂಭೀರವಾಗಿ ತುಳುಕಿಸುತ್ತ, ಭಾಷೆಯ ಮೇಲೆ ಹಿಡಿತ ಸಾಧಿಸುತ್ತಲೇ ಪಾತ್ರಗಳ ಚಿತ್ರಣವನ್ನು ನಾಜೂಕಾಗಿ ಮಾಡುತ್ತ ಹೋಗುವ ವಿವೇಕ ಶಾನಭಾಗರು ಕನ್ನಡಕ್ಕೆ ಒಳ್ಳೆಯ ಕಾದಂಬರಿಯನ್ನು ಕೊಟ್ಟಿದ್ದಾರೆ, ಅಭಿನಂದನೆಗಳು. ಜಾತ್ರೆಗೆ ಮೂರು ಮಾರು ನೇಯ್ದಂತೆ ಮಾಡದೆ, ಕನ್ನಡದ ತೇರಿಗೆ ಒಪ್ಪವಾಗಿ ಕೂಡುವಂತೆ ಶ್ರದ್ಧೆಯಿಂದ ಕಟ್ಟಿಕೊಟ್ಟ ಹೂಮಾಲೆ ಇದು. ದುಂಡುಮಲ್ಲಿಗೆ ಮೊಗ್ಗಿನ ಮಾಲೆಯನ್ನು ಕಟ್ಟಿದಂತೆ ಘಟನೆಗಳ ಜೋಡಣೆಯಿದೆ. ಕಾದಂಬರಿ ಬರೆಯಬೇಕು ಎನ್ನುವವರಿಗೆ ಒಳ್ಳೆಯ `ಚಾಲೆಂಜಿಂಗ್‌’ ಮತ್ತು ಶಿಸ್ತಿನ ಮಾದರಿ ಎನ್ನಬಹುದು.

Share. Facebook Twitter Pinterest LinkedIn Tumblr Email
Previous Articleಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
Next Article ಕ್ಯಾಪ್ಸಿಕಂ ಮಸಾಲಾ: ಕಥಾ ಸಂಕಲನ [ಬೇಳೂರು ಸುದರ್ಶನ]
ಬೇಳೂರು ಸುದರ್ಶನ
  • Website

Related Posts

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

October 4, 2020

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

May 27, 2020

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

October 6, 2019

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.