Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
ವಿಮರ್ಶೆ

ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’

ಬೇಳೂರು ಸುದರ್ಶನBy ಬೇಳೂರು ಸುದರ್ಶನAugust 3, 2014Updated:May 19, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಡಾಕ್ಯುಮೆಂಟರಿಗಳೆಂದರೆ ಒಂಥರ ಗೊಂದಲ ಹುಟ್ಟಿಸುತ್ತವೆ. ನೋಡಬೇಕೋ ಬೇಡವೋ ಎಂದು ನಿರ್ಧರಿಸುವಷ್ಟರಲ್ಲಿ ಆಸಕ್ತಿಯೇ ಹೊರಟು ಹೋಗಿರುತ್ತೆ. `ನಾಸ್ಟಾಲ್ಜಿಯಾ ಫಾರ್‌ ದ ಲೈಟ್‌’ ಎಂಬ ಡಾಕ್ಯುಮೆಂಟರಿಯನ್ನು ನೋಡುವ ಮೊದಲು ಆಗಿದ್ದೇ ಇದು! ಆದರೆ ನೋಡಿದ ಮೇಲೆ ಎಲ್ಲ ಗೊಂದಲಗಳೂ ಪರಿಹಾರವಾಗಿ ಇನ್ನುಮುಂದೆ ಫಿಕ್ಷನ್‌ ನೋಡೋದೇ ಬೇಡ ಅನ್ನೋ ಭಾವವೂ ಮೂಡಿಬಿಟ್ಟಿತ್ತು. ಕಾವ್ಯಾತ್ಮಕ, ಭಾವನಾತ್ಮಕ ಗುಣವುಳ್ಳವರು ಒಂದು ರಾತ್ರಿ ಏಕಾಂತದಲ್ಲಿ ಈ ಸಿನೆಮಾವನ್ನು ನೋಡಬೇಕು. ಆಮೇಲೆ ಖಂಡಿತ ನೀವು ಒಂದೆರಡು ದಿನ ಮಾತಾಡಲೂ ಹಿಂಜರಿಯುತ್ತೀರಿ. ನಾನೂ ಅದೇ ಬಗೆಯ ಮೌನಯುಗವನ್ನು ಅನುಭವಿಸಿ ಈಗಷ್ಟೇ ಬರೆಯುವ ಶಕ್ತಿ ಪಡೆದೆ.

Patricio_Guzman

ಚಿಲಿ ದೇಶದಲ್ಲಿರೋ ಅಟಕಾಮಾ ಮರುಭೂಮಿಯಲ್ಲಿ ಖಗೋಳ ವೀಕ್ಷಣಾಲಯಗಳಿವೆ. ಏಕೆಂದರೆ ಇಡೀ ಭೂಮಿಯಲ್ಲಿ ನಕ್ಷತ್ರಗಳನ್ನು ವೀಕ್ಷಿಸಲು ಅತ್ಯಂತ ಯೋಗ್ಯವಾದ ಸ್ಥಳ ಅದಂತೆ. ೪೧ ಸಾವಿರ ಚದರ ಮೈಲಿಗಳ ಪ್ರದೇಶದ ಈ ಮರುಭೂಮಿಯು (ಕರ್ನಾಟಕದ ಅರ್ಧದಷ್ಟು  ಪ್ರದೇಶಅಥವಾ ಪೋರ್ಚುಗಲ್‌ ದೇಶದಷ್ಟು ವಿಸ್ತಾರ) ಚಿಲಿ ದೇಶವಷ್ಟೇ ಅಲ್ಲ, ಪೆರು, ಬೊಲಿವಿಯ ಮತ್ತು ಅರ್ಜೆಂಟೈನಾವನ್ನೂ ಆಕ್ರಮಿಸಿದೆ. ಭೂಮಿಯಲ್ಲಿ ೩೦ ಲಕ್ಷ ವರ್ಷಗಳ ಕಾಲ ನಿರಂತರವಾಗಿ ಒಣಹವೆಯನ್ನು ಹೊಂದಿರುವ ಏಕೈಕ ಪ್ರದೇಶ ಇದು. ಇಲ್ಲಿನ ಕೆಲ ಪ್ರದೇಶವು ಮಂಗಳ ಗ್ರಹದ ನೆಲವನ್ನೇ ಹೋಲುವುದರಿಂದ `ಸ್ಪೇಸ್‌ ಒಡಿಸ್ಸಿ: ವೋಯೇಜ್‌ ಟು ದ ಪ್ಲಾನೆಟ್ಸ್‌’ ಟಿವಿ ಧಾರಾವಾಹಿಯ ದೃಶ್ಯಗಳನ್ನು ಇಲ್ಲೇ ಚಿತ್ರೀಕರಿಸಲಾಗಿದೆ.

ಪ್ಯಾಟ್ರೀಸಿಯೋ ಗುಜ್‌ಮನ್‌ ನಿರ್ದೇಶನದ ಈ ಚಿತ್ರದ ಕಥೆ ಸರಳ ಮತ್ತು ಸಂಕೀರ್ಣ. ಅಟಕಾಮಾ ಮರುಭೂಮಿಯ ಖಗೋಳ ವೀಕ್ಷಣಾಲಯಗಳಲ್ಲಿ ಲಕ್ಷ ಲಕ್ಷ ಬೆಳಕಿನ ವರ್ಷಗಳ ದೂರದಲ್ಲಿರೋ ಆಕಾಶಕಾಯಗಳನ್ನು ವೀಕ್ಷಿಸುವ ಕೆಲಸವು ವರ್ಷದ ಎಲ್ಲಾ ದಿನಗಳಲ್ಲೂ ನಡೆದಿದ್ದರೆ, ಅಲ್ಲೇ ಹಲವು ತಾಯಂದಿರು, ಚಿಲಿಯ ವಿವಿಧ ನರಮೇಧಗಳಲ್ಲಿ ಸತ್ತು ಸಮಾಧಿಯಾದ ತಮ್ಮ ಮಕ್ಕಳು, ಸಂಬಂಧಿಕರ ದೇಹದ ಅವಶೇಷಗಳನ್ನು ವಸ್ತುಶಃ ನೆಲ ಬಗೆದು ಹುಡುಕುವ ಕಾಯಕದಲ್ಲಿ ನಡೆಯುತ್ತಿದೆ. ಮತ್ತೂ ಒಂದೆಡೆ, ಈ ಮರುಭೂಮಿಯು ಭೂಮಿಯಲ್ಲಿ  ಇತಿಹಾಸ ಸಂಶೋಧನೆಯೂ ನಡೆದಿದೆ. ಎಲ್ಲರೂ ಹೊತ್ತಿನ ಪರಿವೆ ಇಲ್ಲದೆ ತಂತಮ್ಮ ಹುಡುಕಾಟದ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಮೂರೂ ಹುಡುಕಾಟಗಳನ್ನು  ಮಿಳಿತಗೊಳಿಸಿ ಹೇಳಿದ ಪರಿಯನ್ನು  ನೋಡುತ್ತ ನಾವು ಮೈಮರೆಯುವುದು ಸಹಜ.  ೯೦ ನಿಮಿಷಗಳ ಕಾಲ ನೀವು ಮರುಭೂಮಿಯಲ್ಲಿ ಹುಡುಕುತ್ತಲೇ ಇರುತ್ತೀರಿ!

ಚಿಲಿಯ ಸರ್ವಾಧಿಕಾರಿ ಪಿನೋಚೆಟ್೧೭ ವರ್ಷಗಳ ಕಾಲ ನಿರಂತರವಾಗಿ ನಡೆಸಿದ ಹತ್ಯಾಕಾಂಡಗಳಿಗೆ ಸಾಕ್ಷಿಯಾಗಿ, ಅವನ ಯಾತನಾಶಿಬಿರದಲ್ಲಿ ಇದ್ದು ಜೀವಂತ ಹೊರಬಂದ ಮಿಗುಯೆಲ್‌ ಲಾನರ್‌ ಕೂಡಾ ಈ ಚಿತ್ರದಲ್ಲಿ ಭಾಗವಹಿಸಿದ್ದಾರೆ. ಯಾತನಾಶಿಬಿರದಲ್ಲಿ ಕಳೆದ ದಿನಗಳು, ಅನುಭವಿಸಿದ ಶಿಕ್ಷೆ, ಜನರು ಸತ್ತ ಬಗೆ – ಎಲ್ಲವನ್ನೂ ಆತ ವಿವರಿಸುವಾಗ ನೀವು ಹಿಟ್ಲರನನ್ನು, ಪಾಲ್‌ಪೋಟ್‌ನನ್ನು, ಕಿಮ್‌ ಇಲ್‌ ಜಂಗ್‌ನನ್ನು, ಚೀನಾದ ಲಾಗೋಯ್‌ಗಳನ್ನು ನೆನಪಿಸಿಕೊಳ್ಳಲೇಬೇಕು. ೨೦ನೇ ಶತಮಾನದ ಪ್ರಮುಖ ನರಮೇಧ ಪಾತಕಿಗಳಿವರು. ಶಿಬಿರದ ದೃಶ್ಯಗಳನ್ನು ಚಿತ್ರಗಳಲ್ಲಿ ಮೂಡಿಸಿದ ಮಿಗುಯೆಲ್‌, ಸೈನಿಕರು ಬಂದಾಗ ಅವನ್ನೆಲ್ಲ ಶೌಚಾಲಯದಲ್ಲಿ ಅಡಗಿಸಿದ್ದೂ ಇದೆ.

೨೮ ವರ್ಷಗಳಿಂದ ತಾಯಂದಿರು ಹುಡುಕಾಟ ನಡೆಸುತ್ತ, ಕೊನೆಕೊನೆಗೆ ಅವರ ಸಂಖ್ಯೆ ಕಡಿಮೆಯಾಯಿತು. ಆದರೆ  ಕೆಲವರ ಶೋಧ ಮುಗಿದೇ ಇಲ್ಲ. ನರಮೇಧ ಎಲ್ಲಿ ನಡೆಯಿತು ಎಂಬ ಸ್ಥಳದ ವಿವರಗಳನ್ನೂ ಸರ್ಕಾರ ಇದುವರೆಗೆ ಕೊಟ್ಟಿಲ್ಲ. ಅಂದಮೇಲೆ ಆ ವಿಶಾಲ ಮರುಭೂಮಿಯಲ್ಲಿ ಈ ತಾಯಂದಿರು ತಮ್ಮ ಕುಟುಂಬದ ಸದಸ್ಯರ, ಉಳಿದಿರಬಹುದಾದ ಮೂಳೆಗಳನ್ನು ಹುಡುಕುವುದಾದರೂ ಹೇಗೆ? ಕಂಡ ಕಂಡ ಕಡೆ ಈ ತಾಯಂದಿರು ಪ್ರೇತಗಳ ಹಾಗೆ ಓಡಾಡುತ್ತ, ಕೋಲಿನಲ್ಲಿ ಕೆದಕುತ್ತ, ಅಗೆಯುತ್ತ ದಿನಕಳೆಯುತ್ತಿರುವ ಈ ಮಾತೆಯರನ್ನು ಗುಜ್‌ಮನ್‌  ಸಂದರ್ಶಿಸಿದ್ದಾರೆ.

alg-viva-nostalgia-jpg

Nostalgia_for_the_Light_(film_poster)

portrait-desert-atacama-pierre-etoile-roche-548x308

ಈ ಸಾಕ್ಷ್ಯಚಿತ್ರದ ನಿರೂಪಣೆಯ ಧ್ವನಿಯೂ ಗುಜ್‌ಮನ್ದೇ. ಒಮ್ಮೊಮ್ಮೆ ಈ ನಿರೂಪಣೆಯು `ಸೊಲಾರಿಸ್‌’ ಸಿನೆಮಾದ ನಿರೂಪಣೆ ಮತ್ತು ಸಂಭಾಷಣೆಗಳನ್ನು ನೆನಪಿಗೆ ತರುತ್ತದೆ.

ನಕ್ಷತ್ರಗಳನ್ನು ವೀಕ್ಷಿಸುತ್ತಲೇ ಕಾಲ ಕಳೆಯುವ ವಿಜ್ಞಾನಿ ಗಾಸ್ಪರ್‌ ಗಲಾಜ್‌ `ನಾವು ಹುಟ್ಟಿದ್ದು ಹೇಗೆ, ನಮ್ಮ ಮೂಲ ಏನು, ಈ ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂತು ಎಂಬೆಲ್ಲ ಸಂಗತಿಗಳನ್ನು ತಿಳಿಯೋದಕ್ಕೇ ಈ ವೀಕ್ಷಣೆಯಲ್ಲಿ ತೊಡಗಿದ್ದೇವೆ’ ಎಂದು ವಿವರಿಸಿದರೆ, ಈ ಬೃಹತ್‌ ದೂರದರ್ಶಕಗಳನ್ನು ಆಕಾಶ ನೋಡುವ ಬದಲು ಭೂಮಿಯ ಒಳಗೆ ಹೂತುಹೋಗಿರುವ ಮಕ್ಕಳನ್ನು ಹುಡುಕಲು ಬಳಸಬಹುದಲ್ಲ ಎಂದು ತಾಯಂದಿರು ಪ್ರಶ್ನಿಸುತ್ತಾರೆ. ಖಗೋಳ ವಿಜ್ಞಾನದ ಸಾಧನೆಗಳೂ, ಭೀಕರ ಬಡತನದ ದೃಶ್ಯಗಳೂ ಒಂದಕ್ಕೊಂದು ಬೆಸೆದುಕೊಂಡಿರುವ ಭಾರತಕ್ಕೂ ಈ ಸಂಭಾಷಣೆಗಳು ಏನನ್ನೋ ತಿಳಿಹೇಳಿದಂತೆ ನನಗನ್ನಿಸಿತು. `ಅಟಕಾಮಾ ಮರುಭೂಮಿಯು ಗತಕಾಲದ ದೊಡ್ಡ ಸಂಗ್ರಹಾಗಾರ’ ಎಂದು ಗುಜ್‌ಮನ್‌ ಒಂದು ಸಂದರ್ಶನದಲ್ಲಿ ಹೇಳುತ್ತಾರೆ. ಅಲ್ಲಿ ಹೂತುಹೋದ ಧೂಮಕೇತುಗಳಿವೆ; ಪ್ರಾಗೈತಿಹಾಸಿಕ ಕಾಲದ ಅಸಂಖ್ಯಾತ ಬಸವನ ಹುಳುಗಳಿವೆ; ಆರು ಬಗೆಯ ಪ್ರಾಚೀನ ಸಂಸ್ಕೃತಿಗಳ ಮಮ್ಮಿಗಳಿವೆ – ಅವರ ಸಂಕೇತಗಳನ್ನು ಇನ್ನೂ ಬಿಡಿಸಲಾಗಿಲ್ಲ. ಅದೊಂದು ಮಂಗಳ ಗ್ರಹದಂಥ ಭೂಮಿ. ಕೆಂಪು ಮಣ್ಣಿನ ಮೇಲೆ ಉಪ್ಪಿನ ಪದರವಿದೆ. ನೀವು ಹೆಜ್ಜೆ ಇಡುತ್ತಿದ್ದಂತೆ ವಿಶಿಷ್ಟ  ಸದ್ದಾಗುತ್ತದೆ.

ಇಂಥ ಭೂಮಿಯಲ್ಲಿ ಹುಡುಕಾಟ ನಡೆಸಿರುವ ವನಿತೆಯರಲ್ಲಿ ಧೈರ್ಯ, ನೈತಿಕತೆ ಮತ್ತು ದೃಢನಿಷ್ಠೆ ಇದೆ. ಸಾವಿರಾರು ದೇಹಗಳನ್ನು ಹೂತ ಪಿನೋಚೆಟ್‌ ಈ ಮಹಿಳೆಯರು ದೇಹಗಳನ್ನು ಹುಡುಕುತ್ತಾರೆ ಎಂದು ಗೊತ್ತಾಗುತ್ತಲೇ ಹೂತ ದೇಹಗಳನ್ನೂ ಹೊರತೆಗೆದು ಇನ್ನೊಂದೆಡೆ, ಮತ್ತೊಂದೆಡೆ ಹೂಳುತ್ತಾನೆ ಎಂದು ಗುಜ್‌ಮನ್‌ ಸಂದರ್ಶನಲ್ಲಿ ಕನ್ನಡಕವನ್ನು ಅತ್ತಿತ್ತ ಜರುಗಿಸುವಾಗ ನಮ್ಮ ಕಣ್ಣು ಹನಿಗೂಡದೆ ಇರದೆ?

ನಾವು ಸಾಕ್ಷ್ಯಚಿತ್ರಗಳನ್ನು ಮಾಡುವಾಗ ವಿಜ್ಞಾನದ ಚಿತ್ರಗಳು, ಮಹಿಳಾ ಸಮಸ್ಯೆಗಳ ಚಿತ್ರಗಳು – ಹೀಗೆ ವಿಭಾಗಿಸುತ್ತೇವೆ; ಆದರೆ ಇಂಥ ಸಮಸ್ಯೆಗಳನ್ನು ಪ್ರತ್ಯೇಕವಾಗಿ ನೋಡಲು ಬರೋದೇ ಇಲ್ಲ ಎನ್ನುವುದು ಗುಜ್‌ಮನ್‌ ವಾದ. ಖಗೋಳ ಶಾಸ್ತ್ರವೂ ರಾಜಕೀಯವೇ. ಇನ್ನು ೨೦ ವರ್ಷಗಳಲ್ಲಿ ವಿಜ್ಞಾನಿಗಳು ಹುಡುಕುವ ಡಾರ್ಕ್‌ ಮ್ಯಾಟರ್‌ನ ಆಧಾರದಲ್ಲಿ ನಮ್ಮ ಸಮಾಜದ ನಂಬಿಕೆಗಳೇ ಬದಲಾಗಬಹುದು.  `ಚಿಲಿ ದೇಶವು ಕ್ಯೂಬಾದ ಹಾಗೆ ಸಮುದ್ರದ ನಡುವೆ ಇರದಿದ್ದರೂ ಒಂದು ದೊಡ್ಡ ದ್ವೀಪವೇ. ಚಿಲಿಯನ್ನು ಹಾದು ಹೋಗುವ ಪ್ರಮೇಯವೇ ವಿವಿಧ ದೇಶಗಳಿಗೆ ಒದಗಿಲ್ಲ. ಅತ್ತ ಆಂಡಿ ಪರ್ವತಶ್ರೇಣಿಯೂ ಚಿಲಿಯ ಗಡಿಯಲ್ಲಿ ದೊಡ್ಡ ಗೋಡೆಯಂತೆ ಎದುರಾಗಿದೆ ( ಭಾರತಕ್ಕೆ ಹಿಮಾಲಯ ಇದ್ದಂತೆ).

ಚಿಲಿಯಲ್ಲಿ ರಕ್ತರಹಿತ ಕ್ರಾಂತಿ ನಡೆಸಿ ಅಧಿಕಾರಕ್ಕೆ ಬಂದು ಚಿಲಿಯನ್ನು ಸುಧಾರಣೆಯ ಯುಗಕ್ಕೆ ಒಯ್ಯುತ್ತಿದ್ದ ಸಾಲ್ವಡೋರ್‌ ಅಲೆಂಡೆ ಮತ್ತು ಅವರ ತಂಡವನ್ನು ಪಿನೋಚೆಟ್‌ ಕ್ರಾಂತಿಯ ನೆಪದಲ್ಲಿ ಕೊಂದು ಹಾಕಿದ. ಇದೇ ಕ್ರಾಂತಿಯ ನೆಪದಲ್ಲಿ ಆತ ಚಿಲಿಯ ಸಾಂಸ್ಥಿಕ ಪರಂಪರೆಯನ್ನೂ ನುಚ್ಚುನೂರು ಮಾಡಿದ ಎಂದು ಗುಜ್‌ಮನ್‌ ವಿವರಿಸುತ್ತಾರೆ.  ಆತ ಮತದಾರರ ಪಟ್ಟಿಯನ್ನೇ ಸುಟ್ಟು ಹಾಕಿದ. ಚಿಲಿಯ ಇತಿಹಾಸಕಾರರೂ   ದೇಶದಲ್ಲಿ ಎಂಥ ಅನಾಹುತವೂ ನಡೆದಿಲ್ಲ ಎಂದು ಸತ್ಯವನ್ನೆಲ್ಲ ಬಚ್ಚಿಟ್ಟರು… ಹೀಗೆ ಗುಜ್‌ಮನ್‌ ಚಿಲಿಯ ದುರಂತವನ್ನು ಬಿಚ್ಚಿಡುತ್ತಾರೆ.

ಬ್ರಹ್ಮಾಂಡದ ಶೋಧ, ಬದುಕುಳಿಯದ ಮಕ್ಕಳ ಮೂಳೆಗಳ ಶೋಧದ ಕೊನೆಗೆ ಈ ಇಬ್ಬರೂ ಶೋಧಕರನ್ನು ಖಗೋಳ ವೀಕ್ಷಣಾಲಯದಲ್ಲಿ ಒಗ್ಗೂಡಿಸಿದ ದೃಶ್ಯವನ್ನು ತೋರಿಸುವ ಗುಜ್‌ಮನ್‌, ನಮ್ಮ ಹುಡುಕಾಟದ, ನಮ್ಮ ಗತಕಾಲದ ಸ್ಮರಣೆಯ ಭಾವತೀವ್ರತೆಯ ಮಜಲುಗಳನ್ನು ಏಕೀಕರಿಸುತ್ತಾರೆ.  ಮನುಕುಲದ ಬಗೆಗೆ ಅತೀವ ಪ್ರೀತಿ ಮತ್ತು ಕಾಳಜಿ ಇರುವವರು ಮಾತ್ರವೇ ಇಂಥ ಡಾಕ್ಯುಮೆಂಟರಿಗಳನ್ನು ಮಾಡುತ್ತಾರೆ ಎಂದು ನನಗೆ ಆ ಕ್ಷಣ ಅನ್ನಿಸಿತು.

ಈ ಡಾಕ್ಯುಮೆಂಟರಿಯ ಚಿತ್ರೀಕರಣದ ಸಂದರ್ಭದಲ್ಲಿ ಗುಜ್‌ಮನ್‌ ಉದ್ದೇಶಪೂರ್ವಕವಾಗಿ ಪಾತ್ರಗಳನ್ನು ಮಾತಾಡಿಸಿಲ್ಲ. ಅವರೊಂದಿಗೆ ದಿನಗಟ್ಟಳೆ ಮಾತಾಡಿ, ತನಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಡಿದ್ದಾರೆ. ಅವರ ಈ ಸೂತ್ರದಿಂದಾಗಿ ಚಿತ್ರದಲ್ಲಿ ಸಹಜತೆ ಮನೆ ಮಾಡಿದೆ. ಮಿಗೆಲ್‌ ಮಿರಾಂಡ ಮತ್ತು ಮಿಗೆಲ್‌ ತೋಬಾರ್‌ ಕೊಟ್ಟ ಎದೆ ಇರಿಯುವ ಸಂಗೀತದೊಂದಿಗೆ ಮೂಡುವ ದೃಶ್ಯಗಳಲ್ಲಿ ನಾನಂತೂ ಕಳೆದೇ ಹೋದೆ.

`ಖಗೋಳಶಾಸ್ತ್ರವೂ ನನಗೆ ಕೆಲವೊಮ್ಮೆ ಸಮಾಧಾನ ಕೊಡುತ್ತದೆ. ನಾನು ಒಬ್ಬಳೇ ಇದ್ದಾಗ ನೋವು ತುಂಬಾ ಕಾಡುತ್ತದೆ. ನೋವನ್ನು ತಡೆಯಲು ಆಗುವುದೇ ಇಲ್ಲ. ಆಗ – ಇದೆಲ್ಲವೂ ಜೀವನಚಕ್ರದ ಭಾಗ. ನಕ್ಷತ್ರಗಳು ಹುಟ್ಟಿ ಸಾಯುವಂತೆ ನಾವೂ ಹುಟ್ಟಿ ಸಾಯುತ್ತೇವೆ, ಅಷ್ಟೆ – ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ’ ಎಂದು ಈಗ ವಿಜ್ಞಾನಿಯಾಗಿರುವ ವ್ಯಾಲೆಂಟಿನಾ ರಾಡ್ರಿಗಸ್‌ ಹೇಳುತ್ತಾಳೆ. ಅವಳ ತಂದೆ ತಾಯಂದಿರೂ ಪಿನೋಚೆಟ್‌ ನರಮೇಧಕ್ಕೆ ಬಲಿಯಾದವರೇ.

ನಕ್ಷತ್ರಗಳನ್ನು ನೋಡುವಾಗ ನಮ್ಮಲ್ಲಿ ಮೂಡುವ ನೀರವತೆ, ಮೌನದ ಭಾವಕ್ಕೂ, ಭೂಮಿಯೊಳಗೆ ಕಳೆದುಹೋದ ಜೀವಗಳನ್ನು ಹುಡುಕುವಾಗ ಆ ತಾಯಂದಿರ ಕಣ್ಣುಗಳಲ್ಲಿ ಕಾಣುವ ಮೌನಕ್ಕೂ ಪರಸ್ಪರ ಸಂಬಂಧ ಕಲ್ಪಿಸಬಹುದು, ಕಲ್ಪಿಸಲೇಬೇಕು ಎಂದು ಗುಜ್‌ಮನ್‌ ತೀರ್ಮಾನಿಸಿದ್ದರಿಂದಲೇ ನಮಗೆ ಇಂಥ ಶ್ರೇಷ್ಠ ಡಾಕ್ಯುಮೆಂಟರಿ ಸಿಕ್ಕಿದೆ. ಕೋಟಿಕೋಟಿ ವರ್ಷಗಳ ಹಿಂದಿನ ಬೆಳಕಿನ ಕಿರಣದಷ್ಟೇ ನಮ್ಮನ್ನು ಅಗಲಿದ ಜೀವಗಳ ಉಸಿರೂ ನೆನಪಿರಬೇಕು ಎಂಬ ಅತ್ಯಂತ ಗಾಢ ಸಂದೇಶವನ್ನು ನೀಡಿದ ಗುಜ್‌ಮನ್‌ಗೆ ಅಭಿನಂದನೆಗಳು. ಸಾಂಸ್ಕೃತಿಕ ವಿಸ್ಮರಣೆಯನ್ನು ಗುಜ್‌ಮನ್‌ ಕಟುವಾಗಿ ವಿರೋಧಿಸುತ್ತಾರೆ ಎಂಬುದು ಭಾರತದ ಸಮಕಾಲೀನ ಆಗುಹೋಗುಗಳ ಬಗ್ಗೆಯೂ ಏನನ್ನೋ ತಿಳಿಸಿದಂತೆ ಅನ್ನಿಸುವುದಿಲ್ಲವೆ?

ತೊಂಬತ್ತೇ ನಿಮಿಷಗಳಲ್ಲಿ ಮಹಾನ್‌ ಕಾದಂಬರಿಯಂತೆ ನಮ್ಮನ್ನು ಅಗಾಧವಾಗಿ ಆವರಿಸುವ ಈ ಸಾಕ್ಷ್ಯಚಿತ್ರದ ಬಗ್ಗೆ ಹುಡುಕಿ ತೆಗೆದ ಒಂದು ಸವಿವರ ವಿಮರ್ಶೆಯನ್ನೂ  ಕೊಟ್ಟಿದ್ದೇನೆ, ಓದಿ. ಹಾಗೆಯೇ ಇದರ ಬಗ್ಗೆ ಬಂದ ಇತರೆ ವಿಮರ್ಶೆಗಳ ಸಂಗ್ರಹವನ್ನೂ ಇಲ್ಲಿ ಓದಿ.  

Share. Facebook Twitter Pinterest LinkedIn Tumblr Email
Previous Articleಆರೋಗ್ಯ ಇಲಾಖೆಗೆ ಮಾನವಹಕ್ಕು ಆಯೋಗದ ಆದೇಶ : ಕೊನೆಗೂ ನ್ಯಾಯ ಪಡೆದ ಉಡುಪಿಯ ದಾದಿಯರು
Next Article ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
ಬೇಳೂರು ಸುದರ್ಶನ
  • Website

Related Posts

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

October 4, 2020

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

May 27, 2020

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

October 6, 2019

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.