Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
ವಿಮರ್ಶೆ

ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 26, 2016Updated:May 19, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಕೊನೆಗೂ ಬಾಲಿವುಡ್‌ ಪ್ರಾಯಶ್ಚಿತ್ತಕ್ಕೆ ಮನಸ್ಸು ಮಾಡಿದೆ! ಎಂಟು ದಶಕಗಳ ಕಾಲ ಹೆಣ್ಣನ್ನು ಮಾಂಸದ ಮುದ್ದೆಯಂತೆ, ಭೋಗದ ವಸ್ತುವಿನಂತೆ ತೋರಿಸಿ ಮೂರ್ನಾಲ್ಕು ಪೀಳಿಗೆಗಳ ಯುವ ಸಮುದಾಯವನ್ನು ಹಾದಿ ತಪ್ಪಿಸಿದ / ತಪ್ಪಿಸುತ್ತಿರುವ ಬಾಲಿವುಡ್-ಸ್ಯಾಂಡಲ್‌ವುಡ್- ಇತ್ಯಾದಿ ಸಿನೆಮಾ ಕಾರ್ಖಾನೆಗಳು ಅಂತೂ ಇಂತೂ ವಾಸ್ತವತೆಗೆ ಕಣ್ಣು ತೆರೆಯುತ್ತಿವೆ; ಅಥವಾ ತೆರೆದಂತೆ ಕಾಣಿಸುತ್ತಿವೆ. ಅನಿರುದ್ಧ ರಾಯ್‌ ಚೌಧರಿ ನಿರ್ದೇಶನದ `ಪಿಂಕ್’ ಸಿನೆಮಾವನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ.

amitabh-bachchan-pink-movie-stills-pics-7

ಮಹಿಳೆಯರ ಸಮಾನತೆಯ ಕುರಿತ ಚರ್ಚೆ ಇಂದು ನಿನ್ನೆಯದಲ್ಲ; ನಾಳೆಯೇ ಇದು ಮುಗಿದುಬಿಡುತ್ತದೆ ಎಂಬ ಅತಿವಿಶ್ವಾಸವೂ ನನಗಿಲ್ಲ. ಸಂಸತ್ತಿನಲ್ಲೇ ಸರ್ವಪಕ್ಷಗಳ ಮಹಿಳೆಯರೂ ಸೇರಿದರೂ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಯಾವುದೇ ಖಚಿತ ಹೆಜ್ಜೆ ಇಡಲಾಗಿಲ್ಲ; ಮಂಡಲ ಪಂಚಾಯತ್‌ಗಳಲ್ಲಿ ಪ್ರಾಕ್ಸಿಗಳಾಗಿ ಗೆದ್ದ ಮಹಿಳಾ ಪ್ರತಿನಿಧಿಗಳು ತಮ್ಮ ಪತಿ-ಸೋದರ-ಸಂಬಂಧಿಕರ ಅಡಿಯಾಳಾಗಿರುವುದು ನಿಂತಿಲ್ಲ; ಮಹಿಳೆಯರ ಮೇಲೆ ಅತ್ಯಾಚಾರ ಕಡಿಮೆಯಾಗಿಲ್ಲ; ಸಮಾಜತಾಣಗಳಲ್ಲಿ ಮಹಿಳೆಯರ ಬಹಿರಂಗ ಅವಹೇಳನಕ್ಕೆ ಮಿತಿಯಿಲ್ಲ; ಕಚೇರಿಗಳಲ್ಲಿ ಲೈಂಗಿಕ ಅತ್ಯಾಚಾರಗಳ ಪ್ರಮಾಣ ಕುಗ್ಗಿಲ್ಲ….  ಸಮಾಜ ಬದಲಾದರೇನೇ ಸರ್ಕಾರವೂ ಬದಲಾಗುತ್ತದೆ ಎಂಬ ಮಾತಿಗೆ ಈಗಲೂ ಕುಂದಿಲ್ಲ!  ಈ ಹಿನ್ನೆಲೆಯಲ್ಲಿ ‘ಪಿಂಕ್’ ಎತ್ತುವ ಪ್ರಶ್ನೆಗಳು, ಕಂಡುಕೊಳ್ಳುವ ಉತ್ತರಗಳು ನಮ್ಮನ್ನು ಕೊಂಚವಾದರೂ ಚರ್ಚೆಗೆ ತಳ್ಳಬೇಕು; ಅದೂ ಇಲ್ಲವಾದರೆ ನಾವು ಸಿನೆಮಾ ನೋಡುವುದೂ ವ್ಯರ್ಥ.

ಹಾಗಂತ `ಪಿಂಕ್’ ಸಿನೆಮಾ ರಿಯಲಿಸ್ಟಿಕ್ ಆಗೇನೂ ಇಲ್ಲ; ಹಾಲಿವುಡ್‌ ಲೆಕ್ಕಾಚಾರದಲ್ಲಿ ಇದು `ಸೋಶಿಯಲ್ ಡ್ರಾಮಾ ಥ್ರಿಲ್ಲರ್’ ವರ್ಗಕ್ಕೆ ಸೇರುತ್ತದೆ. ಗಂಭೀರ ನಾಟಕದಂತೆಯೂ ಕಾಣಿಸುವ `ಪಿಂಕ್’ನಲ್ಲಿ ಸಿನೆಮಾದ ಅಂಶಗಳೂ ಇರುವುದು ನಿಜ. ಮಿನಾಲ್‌ ಅರೋರಾ (ತಾಪ್ಸಿ ಪನ್ನು), ಫಲಕ್‌ ಆಲಿ (ಕೀರ್ತಿ ಕುಲ್ಹರಿ) ಮತ್ತು ಆಂದ್ರಿಯಾ (ಆಂದ್ರಿಯಾ ತರಿಯಾಂಗ್‌ ) ಎಂಬ ಮೂವರು ಯುವತಿಯರು ರಾಕ್ ಪಾರ್ಟಿಗೆ ಹೋದಮೇಲೆ ನಡೆಯುವ ಲೈಂಗಿಕ ಅತ್ಯಾಚಾರದ ನಂತರದ ಸನ್ನಿವೇಶಗಳಿಂದ ಆರಂಭವಾಗುವ ಈ ಸಿನೆಮಾವು ಈ ಯುವತಿಯರ ಪರವಾದ ನ್ಯಾಯಾಧೀಶರ ಜಜ್‌ಮೆಂಟ್‌ನೊಂದಿಗೆ ಕೊನೆಗೊಳ್ಳುತ್ತದೆ. ಒಂದು ರೀತಿಯಲ್ಲಿ `ಜಜ್‌ಮೆಂಟಲ್‌’ (ಇದೇ ನಮ್ಮ ತೀರ್ಪು ಎಂದು ಪ್ರತಿಪಾದಿಸುವ) ಆಗಿಯೇಬಿಡುವ ಈ ಸಿನೆಮಾ ತನ್ನ ಚಿತ್ರಕಥೆ, ನಿರ್ಮಾಣದ ಗುಣಮಟ್ಟ, ಸಂಗೀತ ಮತ್ತು ಸಹಜ ನಟನೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಸಿನೆಮಾದ ಮೊತ್ತೊಬ್ಬ ಮುಖ್ಯ ಪಾತ್ರಧಾರಿಯಾಗಿ ಅಮಿತಾಭ್‌ ಬಚ್ಚನ್‌ ನಟಿಸಿ ಇಡೀ ಚಿತ್ರಕ್ಕೆ ವಿಭಿನ್ನ ಆಯಾಮ ಒದಗಿಸಿದ್ದಾರೆ.

ಮಹಿಳೆಯರ ಹಕ್ಕುಗಳ ಬಗ್ಗೆ ಬೆಳಕು ಚೆಲ್ಲುವ ಇಂಥ ಚಿತ್ರಗಳನ್ನು ಗಂಭೀರವಾಗಿ ಚರ್ಚಿಸುವ ಅಗತ್ಯವಿದೆ. ಯಾವ ಮಹಿಳೆಯೂ ಬಯಸದಿದ್ದರೆ ಲೈಂಗಿಕ ಸುಖಕ್ಕೆ ಮುಂದಾಗಬಾರದು ಎನ್ನುವುದು ಸಿನೆಮಾದ ಮುಖ್ಯ ವಸ್ತು. ಮಿನಾಲ್‌: ಅವಿವಾಹಿತೆಯಾದರೂ ಲೈಂಗಿಕ ಅನುಭವ ಹೊಂದಿದ ಯುವತಿ; ಫಲಕ್ : ವಯಸ್ಕ ವಿವಾಹಿತನೊಂದಿಗೆ ಸಂಬಂಧ ಬೆಳೆಸಿರುವ ಯುವತಿ; ಆಂದ್ರಿಯಾ ಪೂರ್ವಾಂಚಲದಿಂದ ಬಂದಿರುವ, ಮುಖ್ಯನೆಲದಲ್ಲಿ –ಮೈನ್‌ಲ್ಯಾಂಡ್‌- ಅನ್ಯಳೆಂಬ ಚಹರೆ ಹೊತ್ತಿರುವ ಯುವತಿ. ಈ ಮೂವರೂ ತಮ್ಮ ಹಳೆಯ ಮಿತ್ರನ ಮೂಲಕ ಪರಿಚಯವಾದ ಯುವಕರ ಹೋಟೆಲ್ ಕೋಣೆಗೆ ಹೋಗುತ್ತಾರೆ; ಊಟ ಮಾಡುತ್ತಾರೆ; ಮದ್ಯ ಸೇವಿಸುತ್ತಾರೆ; ಆದರೂ ಅವರು ಸೆಕ್ಸ್‌ ಗೆ ಒತ್ತಾಯಿಸಿದಾಗ `ಬೇಡ’ ಎನ್ನುತ್ತಾರೆ. ಅದನ್ನೂ ಧಿಕ್ಕರಿಸಿ ರಾಜ್‌ವೀರ್ (ಅಂಗದ್ ಬೇಡಿ) ಎಂಬ ಪುಢಾರಿಯ ಪುತ್ರ ಮಿನಾಲ್‌ಳನ್ನು ಬಲಾತ್ಕಾರಿಸುತ್ತಾನೆ; ಮಿನಾಲ್ ಆತನ ತಲೆಗೆ ಬಾಟಲಿಯಿಂದ ಹೊಡೆದು ತಪ್ಪಿಸಿಕೊಳ್ಳುತ್ತಾಳೆ. ಇದೇ ಮುಂದೆ ಕಥೆಯಾಗಿ ಬೆಳೆದು ಯುವತಿಯರ ದೂರು ದಾಖಲಾಗದೆ ರಾಜ್‌ವೀರ್ ನ ಕೊಲೆ ಯತ್ನದ ಆರೋಪವೇ ದಾವೆಯಾಗುತ್ತದೆ. ಇದು ಕಥಾ ಹಂದರ. ಯುವ ನಟ-ನಟಿಯರು ನಿಜಜೀವನದಲ್ಲೇ ಸಿಗುವ ಪಾತ್ರಗಳಂತೆ ವರ್ತಿಸಿ ದೃಶ್ಯಗಳಿಗೆ ಜೀವ ತುಂಬಿಸಿದ್ದಾರೆ.

`ಇಂಥ `ನೀತಿಗೆಟ್ಟ’ ಯುವತಿಯರು ಯುವಕರೊಂದಿಗೆ ಮುಕ್ತವಾಗಿ ಹರಟುವುದು, ಸೆಕ್ಸ್ ಜೋಕ್‌ ಸಿಡಿಸುವುದು, ಗುಂಡು ಹಾಕುವುದು- ಎಲ್ಲವೂ ಸೆಕ್ಸ್‌ಗೆ ಆಹ್ವಾನಿಸಿದಂತೆಯೇ ಅಲ್ಲವೆ? ಅವರೊಂದಿಗೆ ಮಜಾ ಮಾಡಿದರೆ ತಪ್ಪೇನು?’ – ಇದು ಸಿರಿವಂತ ಯುವಕರ ವಾದ. ಮಿನಿಸ್ಕರ್ಟ್‌ ತೊಡುವ, ಒಂಟಿಯಾಗಿ ಕೆಲಸ ಮಾಡುವ, ಪಾಲಕರಿಂದ ದೂರವಾಗಿರುವ, ಮನೆಗೆ ತಡವಾಗಿ ಬರುವ ಯುವತಿ / ಮಹಿಳೆಯರೆಲ್ಲರೂ ಜಾರಿಣಿಯರೇ ಆಗಿರುತ್ತಾರೆ ಎಂಬ ಸಹಜ ತರ್ಕವನ್ನು ಈ ಸಿನೆಮಾ ಬಲವಾಗಿ ಪ್ರಶ್ನಿಸುತ್ತದೆ.

ಇಷ್ಟಾಗಿಯೂ, ಸೆಕ್ಸ್ ವಿಷಯದಲ್ಲಿ NO ಎಂದರೆ ಬೇಡ ಎಂಬ ಅರ್ಥವೇ ವಿನಃ ಬೇರೇನೂ ಇಲ್ಲ (ಪತ್ನಿಯನ್ನೂ ಒಳಗೊಂಡಂತೆ) ಎಂದು ಅಮಿತಾಭ್‌ ಬಚ್ಚನ್‌ರ ವಕೀಲ ಪಾತ್ರವು ಸಮರ್ಥವಾಗಿ ಪ್ರತಿಪಾದಿಸಿ ದಾವೆಯಲ್ಲಿ ಗೆಲುವು ಸಾಧಿಸುತ್ತದೆ. ಸಿನೆಮಾದ ಪಾತ್ರಗಳ ಮತ್ತು ಕಥೆಯ ರೂಪದ ತೀರ್ಪುಗಳು ಒಂದೇ ಆಗಿಬಿಡುತ್ತವೆ. ಮಹಿಳೆಯರ ಮೇಲಿನ ರೂಢಿಗತ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಬೇಕು ಎಂಬುದೇ ಈ ಸಿನೆಮಾದ ಸಂದೇಶ. ಮಜಾ ಅಂದ್ರೆ ಹಿಂದೊಮ್ಮೆ `ನಿಮ್ಮ ಗಂಡು ಮಕ್ಕಳನ್ನು ನಿಯಂತ್ರಿಸಿ, ಹೆಣ್ಣು ಮಕ್ಕಳನ್ನಲ್ಲ’ ಎಂದು ಪ್ರಧಾನಿ ಮೋದಿಯವರು ೨೦೧೪ರ ಭಾಷಣದಲ್ಲಿ ಹೇಳಿದ್ದನ್ನೇ ಅಮಿತಾಭ್‌ ಬಚ್ಚನ್ ಪಾತ್ರವೂ ಕೋರ್ಟಿನಲ್ಲಿ ಹೇಳುತ್ತದೆ.

ಒಪ್ಪತಕ್ಕ ವಿಚಾರವೇ. ನಗರೀಕರಣವೇ ಎಲ್ಲೆಲ್ಲೂ ಕಂಡುಬರುತ್ತಿರುವ ಈ ದಿನಗಳಲ್ಲಿ `ಪಿಂಕ್’ ಖಂಡಿತ ದೊಡ್ಡ, ಮುಖ್ಯ ಸಂದೇಶವನ್ನೇ ಕೊಟ್ಟಿದೆ. ಆದರೆ ಈ ಸಂದೇಶವನ್ನು ಬಾಲಿವುಡ್‌ ನೀಡಿದ್ದು ಮಾತ್ರ ವಿಚಿತ್ರ ಸತ್ಯ. ಬಾಲಿವುಡ್ ಮುಂದಿನ ದಿನಗಳಲ್ಲೂ ಇಂಥದ್ದೇ ಧೈರ್ಯ, ಪ್ರಾಮಾಣಿಕತೆ ಪ್ರದರ್ಶಿಸುತ್ತದೆಯೆ? ಗೊತ್ತಿಲ್ಲ. ಕೊನೇ ಪಕ್ಷ ಅದು ಕ್ಯಾಬರೆ ಸಂಸ್ಕೃತಿಯ ಬದಲಿಗೆ ವಕ್ಕರಿಸಿದ ಐಟಂ ಸಾಂಗ್‌ ತಂದಿರುವುದನ್ನಾದರೂ ನಿಲ್ಲಿಸುತ್ತದೆಯೆ? ಕಾದು ನೋಡಬೇಕು, ಅಷ್ಟೆ. ಈಗಲೂ ಹೀರೋ-ಹೀರೋಯಿನ್‌ ಯುಗದಲ್ಲೇ `ಹೀರೋ ಆರಾಧನೆ’ಯಲ್ಲಿ ಮುಂದುವರಿದಿರುವ ಬಾಲಿವುಡ್‌ ಈ ಸಿನೆಮಾದ ಮೂಲಕ ವಿಭಿನ್ನ ವರ್ತನೆಯನ್ನು  ತೋರಿಸಿದೆ ಎಂದ ಮಾತ್ರಕ್ಕೆ ಬಾಲಿವುಡ್‌ನ ಪಾಪಕರ್ಮಗಳು ತೊಳೆದುಹೋಗುವುದಿಲ್ಲ.

ಹಾಗೆ ನೋಡಿದರೆ `ಪಿಂಕ್’ ಸಿನೆಮಾದ ಪಾತ್ರಗಳು ಬಿ-ಸಿ ಕೇಂದ್ರಗಳ ವೀಕ್ಷಕರಿಗೆ ಅರ್ಥವಾಗುವುದೇ ಕಷ್ಟ ಎಂದು ನನಗನ್ನಿಸಿದೆ. ಜಿಲ್ಲಾ-ತಾಲೂಕು-ಗ್ರಾಮಮಟ್ಟದ ಮಹಿಳೆಯರ ಸಮಸ್ಯೆಗಳೇ ಬೇರೆ. ಅವರಿಗೆ ಬೆಳಗಾದರೆ ಶೌಚಾಲಯವೂ ಇಲ್ಲ. ಶೌಚಕ್ಕೆಂದು ಹೋದ ನೂರಾರು ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿ ಸತ್ತ ಘಟನೆಗಳು ನಮ್ಮ ದೇಶದಲ್ಲಿ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಅಂಥದ್ದರಲ್ಲಿ `ಸೆಕ್ಸ್‌ ಯಾವಾಗ ಬೇಕು, ಯಾವಾಗ ಬೇಡ’ ಎಂಬ ಆಯ್ಕೆಯ ಹಂತಕ್ಕೆ ಬಂದಿರುವ ಮಹಿಳೆಯರ ಹಕ್ಕಿನ ಕಥೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬ ಅನುಮಾನ ನನ್ನಲ್ಲಿ ಮೂಡುತ್ತದೆ.

ಸೆಕ್ಸ್ ಮನುಷ್ಯನ ಮೂಲಭೂತ ಸ್ವಭಾವ ಮತ್ತು ನಿಸರ್ಗದ ಅನಿವಾರ್ಯತೆ. ಅದನ್ನು ಸಹಜವೆಂಬಂತೆ ಮೀರಿದರೆ ಮಾತ್ರವೇ ನೈಜ-ಸೃಜನಶೀಲ ಬದುಕು ಮೂಡುತ್ತದೆ ಎಂಬುದು ನನ್ನ ವಾದ. ಇದನ್ನೇ ನಾನು ಕೆಲವರ್ಷಗಳ ಹಿಂದೆ `ಕವಲು’ ಕಾದಂಬರಿಯ ವಿಮರ್ಶೆಯ ಸಂದರ್ಭದಲ್ಲಿ ಬರೆದಿದ್ದೆ. ಸೆಕ್ಸ್-ದಿನವಹಿ ದುಡಿಮೆ ಇವೆರಡನ್ನೂ ಬಿಟ್ಟು ನೀವೇನು ಸಾಧಿಸಿದ್ದೀರಿ ಎಂಬುದೇ ಮನುಕುಲವನ್ನು ಈ ಮಟ್ಟಿನ ಆಧುನಿಕತೆಗೆ ತಂದಿಟ್ಟಿದೆ ಎಂಬುದು ನನ್ನ ನಂಬಿಕೆ. ಈ ಹಿನ್ನೆಲೆಯಲ್ಲಿ `ಪಿಂಕ್’ ಗಂಭೀರ ಚರ್ಚೆಯನ್ನು ಎಬ್ಬಿಸಿದ್ದರೂ, ವ್ಯಾಪಕ ಮತ್ತು ಬದುಕಿನ ಇತರೆ ಮಜಲುಗಳನ್ನು ಪರಿಚಯಿಸುವ ಸಿನೆಮಾ ಆಗುವುದಿಲ್ಲ. ಈ ಮೂವರೂ ಮಹಿಳೆಯರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೂ ನಿಮಗೆ ಸಿಗುವುದಿಲ್ಲ. ಅವರ ಕ್ರಿಯಾಶೀಲ ಬದುಕೇನು ಎಂಬ ಲವಲೇಶವೂ ಅರಿವಾಗುವುದಿಲ್ಲ. ಲೈಂಗಿಕ ಹಲ್ಲೆಯ ಘಟನೆಯೇ ಸಿನೆಮಾದ ಕೇಂದ್ರ ವಸ್ತು ಎಂದ ಮಾತ್ರಕ್ಕೆ ಅವರ ಬದುಕಿನ ಇನ್ನಿತರೆ ಆಯಾಮಗಳು ನಮಗೆ ಸಿಗಬಾರದು ಎಂದೇನಿರಲಿಲ್ಲ. ಬಾಲಿವುಡ್‌ನ ಆದ್ಯತೆ ಕೇವಲ ಮಾಲ್‌ ಸಂಸ್ಕೃತಿಯ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಒಂದು ಸೃಜನಶೀಲ ಕೃತಿಯ ಸಾಧ್ಯತೆಗಳು ಹೀಗೆಯೇ ಇರಬೇಕು ಎಂದು ವಾದಿಸುವುದು ಸರಿಯಲ್ಲ, ನಿಜ. ಆದರೆ ಸಾಮಾಜಿಕ ಸಂದೇಶವನ್ನೇ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಬರುವ ಸಿನೆಮಾಗಳಿಂದ ಇನ್ನೂ ಪರಿಣಾಮಕಾರಿಯಾದ, ವ್ಯಾಪಕ ಪ್ರಭಾವ ಬೀರುವ ಸಂದೇಶಗಳನ್ನು ನಿರೀಕ್ಷಿಸುವುದು ತಪ್ಪೇನಲ್ಲ.

ಮಹಿಳಾ ಸಮಾನತೆ ಎಂಬುದು ಗೊಂದಲದ ಗೂಡಾಗಿದೆ. ಆಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಸ್ಥೆಯು ವೇಶ್ಯಾವಾಟಿಕೆಯನ್ನು ಸಮರ್ಥಿಸಿ ಪೋರ್ನೋಗ್ರಫಿಗೆ ಬೆಂಬಲ ನೀಡಿದೆ ಎಂದು ಮಹಿಳಾ ಹಕ್ಕು ಹೋರಾಟಗಾರ್ತಿಯರೇ ಖಂಡಿಸಿದ್ದಾರೆ. ಕಮ್ಯುನಿಸ್ಟ್ ನಾಯಕಿ ಬೃಂದಾ ಕಾರಟ್‌ ಅಥವಾ ಪರಿಸರ ಹೋರಾಟಗಾರ್ತಿ ವಂದನಾ ಶಿವರ ಹಣೆಯ ಮೇಲಿನ ಹಳೆ ರೂಪಾಯಿ ಅಗಲದ ಕುಂಕುಮವನ್ನು ನೋಡಿದಾಗ ಕುಂಕುಮವು ದಾಸ್ಯದ ಸಂಕೇತವೆ, ಉದಾರತೆಯ, ಮಹಿಳಾ ಸಮಾನತೆಯ ಚಿಹ್ನೆಯೆ ಎಂಬ ಗೊಂದಲ ನನ್ನಲ್ಲಿ ಮೂಡುತ್ತಿರುತ್ತದೆ! ಸೀರೆಯು ಭಾರತೀಯ ಸನಾತನ ಧರ್ಮದ, ಹಿಂದೂ ಮತೀಯ ಬಟ್ಟೆಯೆ ಅಥವಾ ಭಾರತದ ಜವುಳಿ ರಂಗದಲ್ಲಿ ಅಪಾರ ಬೇಡಿಕೆ ಮೂಡಿಸುವ, ಹೆಚ್ಚು ಪ್ರಮಾಣದ ಹತ್ತಿ ಬಳಸಿ ಆರ್ಥಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಉತ್ಪನ್ನವೆ ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿರುತ್ತದೆ. ಹಿಜಾಬ್‌ ಧರಿಸುವುದು ಮತೀಯ ಹಕ್ಕು ಎನ್ನುವುದಾದರೆ ಕಾನ್ವೆಂಟ್‌ ವಿದ್ಯಾರ್ಥಿನಿಯರು ಬಿಂದಿ ಹಚ್ಚಿಕೊಳ್ಳಲಾರದ ಸ್ಥಿತಿಯು ಇನ್ನೇನು ಎಂಬ ಅನುಮಾನ ನನ್ನಲ್ಲಿದೆ. ಮಹಿಳೆಯರಿಗೆ ದೇಗುಲ ಪ್ರವೇಶದ ಹಕ್ಕು ದೊರಕಿಸಲು ಹೋರಾಡುತ್ತಿರುವ ತೃಪ್ತಿ ದೇಸಾಯಿಯವರು `ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಬರುವ ನಿಯಂತ್ರಕನ ನಿಗೂಢ ಧ್ವನಿಯು ಮಹಿಳೆಯದಾಗಿದ್ದರೆ ಮಾತ್ರ ಭಾಗವಹಿಸುವೆ ಎಂದಿರುವುದು ಮಹಿಳಾ ಸಮಾನತೆಯ ಸಂದೇಶವೋ, `ಬಿಗ್ ಬಾಸ್‌’ ಎಂಬ ಕಾರ್ಪೋರೇಟ್‌  ಕೊಳ್ಳುಬಾಕ ಕಾರ್ಯಕ್ರಮದ ಗೆಲುವೋ? ಗೊತ್ತಿಲ್ಲ!

ಏನೇ ಇದ್ದರೂ, ಮಹಿಳಾ ಸಮಾನತೆಯ ಒಂದು ಚರ್ಚೆಯನ್ನು ಕೊಂಚ ದೊಡ್ಡ ಪ್ರಮಾಣದಲ್ಲಿ ಎತ್ತಿಕೊಂಡಿರುವುದಕ್ಕೆ ಬಾಲಿವುಡ್‌ನ್ನು ಅಭಿನಂದಿಸಲೇಬೇಕು.

Share. Facebook Twitter Pinterest LinkedIn Tumblr Email
Previous Articleಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
Next Article ಒಡೆದ ಗುಟ್ಟಿನ ಗೂಡು…..
ಬೇಳೂರು ಸುದರ್ಶನ
  • Website

Related Posts

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

October 4, 2020

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

May 27, 2020

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

October 6, 2019

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.