Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
ವಿಮರ್ಶೆ

‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ

ಬೇಳೂರು ಸುದರ್ಶನBy ಬೇಳೂರು ಸುದರ್ಶನApril 18, 2014Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ ಆವರಿಸಿಕೊಂಡಿದ್ದಾದರೂ ಯಾವಾಗ? ಕವಿಯಿಂದ ಹಿಡಿದು ಇತಿಹಾಸಕಾರನವರೆಗೆ ಈ ಪ್ರಶ್ನೆಗಳು ಕಾಡುತ್ತವೆ; ಮತ್ತೆ ದಿನನಿತ್ಯದ ಜಂಜಡದಲ್ಲಿ ಎಲ್ಲವನ್ನೂ ಮರೆಯಲಾಗುತ್ತದೆ. 

ವಿಜ್ಞಾನಿ ಹಾಗಲ್ಲ. ವಿಜ್ಞಾನಿಗೆ ಇಂಥ ಆಕಾಶ ಕಂಡರೆ ಹುಚ್ಚೇ ಹಿಡಿಯುತ್ತದೆ. ಆಕಾಶದ ರಹಸ್ಯಗಳನ್ನು ಭೇದಿಸುವವರೆಗೆ ಆತ ಸುಮ್ಮನಿರಲಾರ. ಶತಶತಮಾನಗಳಿಂದ ಹೀಗೆ ವಿಜ್ಞಾನಿಗಳು ಬ್ರಹ್ಮಾಂಡದ ಕುರಿತು ಸಂಶೋಧನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಭಾರತದ ಋಷಿಮುನಿಗಳು, ಇಟೆಲಿಯ ಗಣಿತಜ್ಞರು, ಅಮೆರಿಕಾದ ಭೌತಶಾಸ್ತ್ರಜ್ಞರು – ಎಲ್ಲರೂ ವಿಶ್ವ ಎನ್ನುವ ವಿಸ್ಮಯದ ಬಗ್ಗೆ ತಮ್ಮದೇ ತರ್ಕ, ವಿಚಾರ, ಲೆಕ್ಕ, ಸಿದ್ಧಾಂತ ಮಂಡಿಸುತ್ತಲೇ ಬಂದಿದ್ದಾರೆ.

vishwa-emba-vismaya-to-mitramaadhyama

—————————————

ಲೇಖಕರು: ಶಶಿಧರ ವಿಶ್ವಾಮಿತ್ರ
ಪ್ರಕಾಶನ: ವಸಂತ ಪ್ರಕಾಶನ
ಪುಟಗಳು: ೨೬೬
ಬೆಲೆ: ೧೬೦ ರೂ.

—————————————

ಶಶಿಧರ ವಿಶ್ವಾಮಿತ್ರ ಬರೆದ `ವಿಶ್ವ ಎನ್ನುವ ವಿಸ್ಮಯ’ ಪುಸ್ತಕವು ವಿಶ್ವದ ಉಗಮ, ಬೆಳವಣಿಗೆಯ ಬಗ್ಗೆ ಮನುಕುಲವು ಕಂಡುಹಿಡಿದ ಈವರೆಗಿನ ಸತ್ಯಗಳನ್ನು ಹಿಡಿದಿಡುವ ಅಚ್ಚಗನ್ನಡದ ಪ್ರಯತ್ನವಾಗಿದೆ. ಬಹುಶಃ ಕನ್ನಡದಲ್ಲಿ ಇಂಥ ಪುಸ್ತಕವೊಂದು ಬಂದಿದೆ ಎಂದರೆ ಅನುವಾದವೇ ಇರಬಹುದು ಎಂಬ ಅನುಮಾನ ಕಾಡಲೂಬಹುದು! ಆದರೆ ಲೇಖಕರು ಖವಿಜ್ಞಾನದ ನೂರಾರು ಪದಗಳನ್ನು ಕನ್ನಡದಲ್ಲೇ ಬರೆದು ಬಳಸಿದ ಮೊದಲ ಕನ್ನಡ ಪುಸ್ತಕ ಇದು ಎಂದೇ ಭಾಸವಾಗುತ್ತದೆ. ಬ್ರಹ್ಮಾಂಡದ ಉಗಮದ ಕಥೆಯೊಂದಿಗೇ ಕನ್ನಡದ ಶಬ್ದಕೋಶವೂ ಶ್ರೀಮಂತವಾಗಿರುವುದು ಒಂದು ಕುತೂಹಲಕಾರಿ ಅಂಶ. ಭಾಷೆಯ ಅವನತಿಯ ಆತಂಕಗಳ ನಡುವೆಯೇ ಇಂಥದ್ದೊಂದು ಕನ್ನಡದ ಪುಸ್ತಕ ಪ್ರಕಟವಾಗಿರುವುದು ಅಚ್ಚರಿ ಹುಟ್ಟಿಸುತ್ತದೆ. ನಿಜಕ್ಕೂ ಇಂಥ ಪುಸ್ತಕವನ್ನು ಓದುವ ಮನಸ್ಸುಗಳಿವೆಯೆ ಎಂಬ ಪ್ರಶ್ನೆಯೂ ಮೂಡುತ್ತದೆ.

ಈ ಪುಸ್ತಕ್ಕೆ ಮುನ್ನುಡಿ ಬರೆದ ಪ್ರೊ|| ಎಚ್.ಆರ್.ರಾಮಕೃಷ್ಣರಾವ್ ಮತ್ತು ಹಿನ್ನುಡಿ ಬರೆದ ವಿಜ್ಞಾನ ಲೇಖಕ ಟಿ.ಆರ್.ಅನಂತರಾಮು ಹೇಳಿರುವಂತೆ ಪುಸ್ತಕವು ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನ ಆಸಕ್ತ ಮನಸ್ಸುಗಳಿಗೆ ಮಾಹಿತಿ ಒದಗಿಸುವ ಯತ್ನ. ಈ ಪುಸ್ತಕದ ವಿಷಯವಸ್ತು ಎಂದಿಗೂ ಮುಗಿಯದ ರೋಚಕ ಕಥೆ; ಆದ್ದರಿಂದ ಈ ಪುಸ್ತಕವನ್ನು ನೀವು ಎಷ್ಟು ವರ್ಷ ಬೇಕಿದ್ದರೂ ಕಾದಿಟ್ಟು ಓದಿಕೊಳ್ಳಬಹುದು; ಮುಂದಿನ ಅಧ್ಯಾಯಗಳನ್ನು ನೀವೇ ಬರೆದುಕೊಳ್ಳಬಹುದು!

`ಮನುಷ್ಯನ ಮನಸ್ಸಿನ ಅದ್ಭುತಗಳು ಮತ್ತು ಪರಿಮಿತಿಗಳು’ ಎಂಬ ಎರಡನೇ ಅಧ್ಯಾಯದೊಂದಿಗೆ ಈ ಪುಸ್ತಕದ ಪಯಣ ಆರಂಭವಾಗುತ್ತದೆ. ಕ್ರಿಸ್ತಪೂರ್ವದ ಕಾಲದಲ್ಲಿ ಯಾವ್ಯಾವ ಚಿಂತಕರು ಏನೇನು ಹೇಳಿದರು ಎಂಬ ಒಂದು ಕಣ್ಣೋಟವನ್ನು ಮೂರನೇ ಅಧ್ಯಾಯದಲ್ಲಿ ಅಚ್ಚುಕಟ್ಟಾಗಿ ನೀಡಿದ ಲೇಖಕರು ಮುಂದೆ ಕ್ರಮೇಣವಾಗಿ ಜಗತ್ತಿನ ಕುರಿತ ಪರಿಕಲ್ಪನೆಗಳ ಸಂಶೋಧನೆಯ ಕಥೆಯನ್ನು ಬಿಚ್ಚುತ್ತ ಹೋಗುತ್ತಾರೆ.

ಇಲ್ಲಿ ನಕ್ಷತ್ರಪುಂಜಗಳ ಕಥೆ, ಚಂದ್ರ-ಸೂರ್ಯರ ಚಲನೆ, ಬೆಳಕಿನ ವೇಗ, ಕಾಲಗಣನೆ, ದೂರನಿರ್ಣಯ, ದೂರದರ್ಶಕ – ಹೀಗೆ ಭೂಮಿ-ಆಕಾಶ-ನಕ್ಷತ್ರಗಳನ್ನು ಒಳಗೊಳ್ಳುವ ಎಲ್ಲ ಸಂಗತಿಗಳು, ಅವುಗಳ ಬಗ್ಗೆ ಚಿಂತಿಸಿದ, ತರ್ಕಿಸಿದ ಮಹನೀಯರ ಚಿಂತನೆಗಳು – ಎಲ್ಲವೂ ಕಾಲಾನುಕ್ರಮದ ವಿವರಣೆಯಲ್ಲಿ ಬರುತ್ತವೆ. ಇವರೆಲ್ಲ ಮಂಡಿಸಿದ ವಿಚಾರಗಳನ್ನು ಲೇಖಕರು ಯಾವುದೇ ಮಧ್ಯಪ್ರವೇಶ ಮಾಡದೆಯೇ ಮಂಡಿಸಿರುವುದು ಗಮನಾರ್ಹ ಮತ್ತು ಶ್ಲಾಘನೀಯ. ವಿಜ್ಞಾನ ಬರವಣಿಗೆಯ ಶಿಸ್ತಿನ ಸೂತ್ರಗಳಲ್ಲಿ ಇದು ತುಂಬಾ ಮುಖ್ಯ. ಸಮಕಾಲೀನ ಬರವಣಿಗೆಗಳಲ್ಲಿ ಮಾಹಿತಿಗಳ ನಡುವೆಯೇ ಲೇಖಕರ ಅಭಿಪ್ರಾಯಗಳನ್ನು ಸೂಚಿಸುವ, ನೀತಿ ನಿಲುವುಗಳನ್ನು ಬಿಂಬಿಸುವ ವಾಕ್ಯಗಳೂ ನುಸುಳಿರುತ್ತವೆ. ಆದರೆ ಶಶಿಧರ ವಿಶ್ವಾಮಿತ್ರರು ಎಲ್ಲಿಯೂ ಈ ಅಶಿಸ್ತನ್ನು ತೋರಿಲ್ಲ.

ಪುಸ್ತಕದ ಕೊನೆಯವರೆಗೂ ಬ್ರಹ್ಮಾಂಡದ ಉಗಮ ಮತ್ತು ವಿಸ್ತರಣೆಯ, ಮಹಾಬಾಜಣೆಯ, ಕಪ್ಪುಕುಳಿಗಳ, ಬಹುವಿಶ್ವಗಳ (ಮಲ್ಟಿವರ್ಸ್) ತರ್ಕಬದ್ಧ ಸಂಶೋಧನಾ ಸಂಗತಿಗಳು ಹರಿಯುತ್ತವೆ. ಆಲ್‌ಬರ್ಟ್ ಐನ್‌ಸ್ಟೀನ್ ನಂತರದಲ್ಲಿ ಭೌತಶಾಸ್ತ್ರದಲ್ಲಿ ನುರಿತವರೆಂದು ಖ್ಯಾತರಾದ ಸ್ಟೀವನ್ ಹಾಕಿಂಗ್, ವೆನ್ ರೂಬಿನ್‌ರನ್ನೂ ಉಲ್ಲೇಖಿಸುತ್ತ ಕೊನೆಗೆ ಬ್ರಹ್ಮಾಂಡದ ನವೋನವ ಸಿದ್ಧಾಂತಗಳಾದ `ಪರಮರೇಣು’ (ಸೂಪರ್‌ಸ್ಟ್ರಿಂಗ್ಸ್) ಮತ್ತು `ಎಂ-ಸಿದ್ಧಾಂತ’ (ಎಂ ಥಿಯರಿ)ವನ್ನೂ ಪುಸ್ತಕವು ವಿವರಿಸುತ್ತ ಮುಗಿಯುತ್ತದೆ. ಗ್ರಂಥಋಣದಲ್ಲಿ ಉಲ್ಲೇಖಿಸಿರುವ, ಐನ್‌ಸ್ಟೀನ್ ಸಿದ್ಧಾಂತದ ಪರಮ ತಜ್ಞ, ಭೌತಶಾಸ್ತ್ರ ಸಿದ್ಧಾಂತಿಯಾದ ಮಿಶಿಯೋ ಕಾಕು ಬಗ್ಗೆ ಹೆಚ್ಚೇನೂ ಹೇಳಿಲ್ಲ. ಆದರೆ ಲೇಖಕರು ಸಮಕಾಲೀನವಾದ ಎಲ್ಲ ಸಂಗತಿಗಳನ್ನೂ ಈ ಪುಸ್ತಕದಲ್ಲಿ ಸೇರಿಸಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಬ್ರಹ್ಮಾಂಡ ಕುರಿತ ಕನ್ನಡದ ಪುಸ್ತಕ ಇನ್ನೂ ತಾಜಾ ಆಗಿರುವುದು ಖಂಡಿತ ಅಸಾಧ್ಯ! (ಮಿಶಿಯೋ ಕಾಕು ಅವರ ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಎಂ-ಥಿಯರಿಯ ಲೆಕ್ಕಾಚಾರದಲ್ಲಿ ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜಂ ರೂಪಿಸಿದ ಸೂತ್ರಗಳೇ ಆಧಾರವಾಗಿವೆ ಎಂಬ ಅಂಶವನ್ನು ವಿಮರ್ಶಕ ತನ್ನ ಪ್ರತ್ಯೇಕ ಅಧ್ಯಯನದಲ್ಲಿ ಗಮನಿಸಿದ್ದಾನೆ!)

ಪುಸ್ತಕದಲ್ಲಿ ಕನ್ನಡವನ್ನು ಬಳಸಿರುವುದು ಒಂದು ಹೆಚ್ಚುಗಾರಿಕೆಯಾದರೂ, ಕೆಲವೊಮ್ಮೆ ಅದೇ ತೊಡಕೇನೋ ಎಂದು ಸಾಮಾನ್ಯ ಓದುಗರಿಗೆ ಅನ್ನಿಸಲೂಬಹುದು. ಮುನ್ನುಡಿಯಲ್ಲಿ ಹೇಳಿದಂತೆ ಈ ಪುಸ್ತಕದಲ್ಲಿ ಬಳಸಿದ ಶಬ್ದಗಳ ಪಟ್ಟಿಯನ್ನು ಅಕಾರಾದಿಯಾಗಿ ಕೊಟ್ಟಿದ್ದರೆ ಚೆನ್ನಾಗಿತ್ತು.  ಕನ್ನಡವನ್ನೇ ಮರೆಯುತ್ತಿರುವ ಕರ್ನಾಟಕದ ಮಹಾನಗರಗಳು, ಕನ್ನಡದ ಶಿಸ್ತುಬದ್ಧ ಕಲಿಕೆಯಿಲ್ಲದೆ ಬಳಲುತ್ತಿರುವ ಗ್ರಾಮಾಂತರ ಪ್ರದೇಶ – ಈ ಸನ್ನಿವೇಶದಲ್ಲಿ ಇಂಥ ಅಚ್ಚಗನ್ನಡದ ಪುಸ್ತಕವು ಮಾರುಕಟ್ಟೆಗೆ ಬಂದಿರುವುದು ಅಚ್ಚರಿ ಹುಟ್ಟಿಸುತ್ತದೆ. ಆಲ್‌ಬರ್ಟ್ ಐನ್‌ಸ್ಟೀನರೂ ಒಮ್ಮೆ ಫ್ರೆಡ್ ಹಾಯ್‌ಲ್ ರೂಪಿಸಿದ ಏಕಸಮ (ಸ್ಟೆಡಿ ಸ್ಟೇಟ್) ಸಿದ್ಧಾಂತವನ್ನೂ ಒಪ್ಪಲು ಮುಂದಾಗಿ ಪ್ರಬಂಧವನ್ನೇ ಬರೆದಿದ್ದರು ಎಂಬ ಸುದ್ದಿ ಈಗಷ್ಟೇ ಪ್ರಕಟವಾಗಿದೆ (ಮಾರ್ಚ್ ೨೦೧೪). ಈ ಹಿನ್ನೆಲೆಯಲ್ಲಿ ನೋಡಿದಾಗ, ಶಶಿಧರ ವಿಶ್ವಾಮಿತ್ರರ ಈ ಕೃತಿ ಎಷ್ಟೆಲ್ಲ ಮಾಹಿತಿಯುಕ್ತವಾಗಿದೆ ಎಂದು ಸಮಾಧಾನವಾಗುತ್ತದೆ.  `ವಿಶ್ವ ಎನ್ನುವ ವಿಸ್ಮಯ’ – ಇಂಥ ಪುಸ್ತಕಗಳಿಂದ ನಮ್ಮ ವಿಜ್ಞಾನದ ಮಾಹಿತಿ ಭಂಡಾರವೂ ಬೆಳೆಯುತ್ತದೆ; ಕನ್ನಡ ಮನಸ್ಸಿನ ಚಿಂತನೆಗಳೂ ಗಟ್ಟಿಯಾಗುತ್ತವೆ.

Share. Facebook Twitter Pinterest LinkedIn Tumblr Email
Previous ArticleSHANKAR SHARMA: CREATION OF A SUSTAINABLE URBAN ENERGY SYSTEM
Next Article ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
ಬೇಳೂರು ಸುದರ್ಶನ
  • Website

Related Posts

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

October 4, 2020

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

May 27, 2020

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

October 6, 2019

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.