Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
ವಿಮರ್ಶೆ

ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’

ಬೇಳೂರು ಸುದರ್ಶನBy ಬೇಳೂರು ಸುದರ್ಶನApril 19, 2014Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಯಾರಿಗೆ ಗೊತ್ತಿಲ್ಲ? ಇತ್ತೀಚೆಗೆ ಈ ದೇಗುಲದ ಕೋಣೆಗಳಲ್ಲಿ ಪತ್ತೆಯಾದ ಅಪಾರ ಸ್ವಣ-ವಜ್ರಾಭರಣಗಳ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಸಂಪತ್ತಿನ ಪ್ರಾಚೀನತೆಯ ಮೌಲ್ಯವನ್ನೂ ಲೆಕ್ಕ ಹಾಕಿದರೆ, ಈ ದೇವಸ್ಥಾನವು ಪ್ರಪಂಚದ ಅತಿ ಶ್ರೀಮಂತ ದೇವಸ್ಥಾನವಾಗುತ್ತದೆ ಎಂದೇ ತಜ್ಞರು ಹೇಳುತ್ತಾರೆ. ಆದರೆ…
ಈ ದೇವಸ್ಥಾನದ ನಿರ್ಮಾಣಕ್ಕೆ ಬಳಸಿದ ಕಲ್ಲುಗಳನ್ನು ಎಲ್ಲಿಂದ ತಂದರು? ಈ ಕಲ್ಲುಗಳನ್ನು ಗಣಿಗಳಿಂದ ದೇಗುಲದ ಸ್ಥಳಕ್ಕೆ ಸಾಗಿಸಿದ್ದಾದರೂ ಹೇಗೆ? ಕಲ್ಲುಗಳನ್ನು ಕಟೆಯಲು ಎಂಥ ಉಳಿಗಳನ್ನು ಬಳಸಿದ್ದರು? ಆಗಿನ ತಂತ್ರಜ್ಞಾನ ಹೇಗಿತ್ತು? – ಈ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರವಿದೆಯೆ?

alivillada-sthavara-vimarshe

———————-

ಅಳಿವಿಲ್ಲದ ಸ್ಥಾವರ
ಲೇಖಕರು: ಸಿ ಆರ್ ಸತ್ಯ
ಪ್ರಕಾಶಕರು: ಹೇಮಂತ ಸಾಹಿತ್ಯ
ಪುಟಗಳು: ೧೩೬+೪
ಬೆಲೆ: ೮೦ ರೂ.

———————-

ಸಿ ಆರ್ ಸತ್ಯರವರ ಸಂಶೋಧನಾ ಪುಸ್ತಕ – `ಅಳಿವಿಲ್ಲದ ಸ್ಥಾವರ’ವನ್ನು ಓದಿದರೆ ಮಾತ್ರ ನಿಮಗೆ ಈ ಮಾಹಿತಿ ಸಿಗುತ್ತದೆ. ೧.೬೫ ಟನ್‌ಗಳಷ್ಟು ಕಲ್ಲುಗಳನ್ನು ಬಳಸಿ ಕಟ್ಟಿದ ಈ ದೇವಸ್ಥಾನದ ಕಲ್ಲಿನ ಕಥೆಯೇ ರೋಚಕ ಎಂಬುದು ಈ ಪುಸ್ತಕದಿಂದಲೇ ನಿಮಗೆ ಗೊತ್ತಾಗುತ್ತದೆ. ಅಲ್ಲಿ ಸಿಕ್ಕಿದ ಚಿನ್ನಾಭರಣಗಳ ಮೂಲದ ಬಗ್ಗೆ ನಮಗೆ ಈಗಂತೂ ಏನೂ ಗೊತ್ತಾಗುವುದಿಲ್ಲ. ಆದರೆ ಸತ್ಯರವರು ಬರೆದ ಈ ಪುಸ್ತಕದಲ್ಲಿ ಕಲ್ಲಿನ ಕಥೆ ಖಚಿತವಾಗಿದೆ.

ಕನ್ನಡಿಗರಾದ ಸಿ ಆರ್ ಸತ್ಯರವರು ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡಿದ ತಾಂತ್ರಿಕ ಸಲಹೆಗಾರರು. ಅವರು ೧೯೬೫ರಿಂದ ತಿರುವನಂತಪುರದಲ್ಲೇ ಇದ್ದವರು. ಅನಂತಪದ್ಮನಾಭ ದೇವಸ್ಥಾನಕ್ಕೆ ಹಲವು ಸಲ ಭೇಟಿ ಕೊಟ್ಟವರು. ಯಾವುದೋ ಒಂದು ಸಾಕ್ಷ್ಯಚಿತ್ರಕ್ಕಾಗಿ ದೇವಸ್ಥಾನದ ಚರಿತ್ರೆಯನ್ನು ಹುಡುಕುತ್ತ ಹೋದ ಅವರಿಗೆ ಅಲ್ಲಿದ್ದ ಕಲ್ಲುಗಳೇ ಆಕರ್ಷಣೆ ಹುಟ್ಟಿಸಿದವು. ದೇವಸ್ಥಾನದ ಇತಿಹಾಸವನ್ನು ಓದುತ್ತ, ಅನಂತಪದ್ಮನಾಭ ದೇವರನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತ ಬಂದ ವೇನಾಡ್ ರಾಜಮನೆತನದ ಹಿರಿಯರೊದಿಗೆ ಚರ್ಚಿಸುತ್ತ, ಸಿಕ್ಕಿದ ಮೂಲಗಳನ್ನೆಲ್ಲ ಕೆದಕುತ್ತ ಹೋದ ಸತ್ಯರವರು ೧೩೬ ಪುಟಗಳಲ್ಲಿ ಒಂದು ರೋಚಕ ಇತಿಹಾಸ-ವಿಜ್ಞಾನ-ಸಂಸ್ಕೃತಿ ಭರಿತ ಕಥನವೊಂದನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ, ಲೇಖಕರ ಹಿರಿಯ ಸಹೋದ್ಯೋಗಿ ಡಾ|| ಎ ಪಿ ಜೆ ಅಬ್ದುಲ್ ಕಲಾಂರವರೇ ಅಕ್ಕರೆಯ ಮುನ್ನುಡಿ ಬರೆದಿದ್ದಾರೆ.

ಈ ಪುಸ್ತಕ ಎಷ್ಟು ರೋಚಕವಾಗಿದೆ ಎನ್ನುವುದಕ್ಕೆ ಒಂದೇ ಉದಾಹರಣೆ ಕೊಡುತ್ತೇನೆ: ದೇವಸ್ಥಾನದಲ್ಲಿ ಬಳಸಿದ ಕಲ್ಲುಗಳ ಗಣಿ ಎಲ್ಲಿರಬಹುದು ಎಂದು ಲೆಕ್ಕ ಹಾಕಿದ ಲೇಖಕರು ತಿರುಮಲೈ ಬೆಟ್ಟದಲ್ಲಿ ಅಡ್ಡಾಡುತ್ತ ಅರ್ದಂಬರ್ಧ ಕೆತ್ತನೆಯಾಗಿದ್ದ ಕಲ್ಲುಗಳನ್ನು ಕಾಣುತ್ತಾರೆ. ಪಕ್ಕದಲ್ಲಿದ್ದ ಶ್ರೀ ನೀಲಕಂಠ ಸ್ಮಾರಕ ಆಧ್ಯಾತ್ಮಿಕ ಸಂಘದ ಬ್ರಹ್ಮಶ್ರೀ ಮಾಧವಸ್ವಾಮಿಯರ ಬಗ್ಗೆ ಗೊತ್ತಾಗಿ ಅವರಲ್ಲಿಗೆ ಹೋಗಿ ತಮ್ಮ ಅನುಮಾನಗಳನ್ನು ಹಂಚಿಕೊಳ್ಳುತ್ತಾರೆ. ಆಗ ಆ ಸ್ವಾಮೀಜಿಯವರು ತಾವು ಆ ಸ್ಥಳದಲ್ಲಿ ಸಂಗ್ರಹಿಸಿದ್ದ ಒಂಬತ್ತು ಉಕ್ಕಿನ ಉಳಿಗಳನ್ನು ಲೇಖಕರಿಗೆ ಕೊಡುತ್ತಾರೆ. ಈ ಉಕ್ಕಿನ ಉಳಿಗಳು ೨೧ನೇ ಶತಮಾನದ ಉಳಿಗಳಿಗಿಂತ ಎಷ್ಟೋ ಪಟ್ಟು ಶಕ್ತಿಯುತವಾದವು ಎಂದು ಕಂಡುಕೊಳ್ಳುತ್ತಾರೆ. `ತಿರುಮಲೈ ಉಳಿಗಳ ಉಕ್ಕಿನ ತಾಂತ್ರಿಕತೆ ಅತಿ ವಿಶಿಷ್ಟವಾದದ್ದು. ನಮ್ಮ ಪೂರ್ವಜರು ಮ್ಯಾಂಗನೀಸ್ ತರಹದ ಸಹಾಯಕ ಲೋಹವನ್ನು ಉಪಯೋಗಿಸದೇ ಗಂಧಕದ ಪ್ರಮಾಣವನ್ನು ಬಹುವಾಗಿ ತೆಗೆದುಹಾಕಿ ಅತ್ಯಂತ ಕಠಿಣವಾದ ಉಕ್ಕನ್ನು ತಯಾರಿಸಿ ಅದರಿಂದ ಉಳಿಗಳನ್ನು ತಯಾರಿಸಿದ್ದರು!’.
ಇಷ್ಟಕ್ಕೇ ಲೇಖಕರ ಕುತೂಹಲ ತಣಿಯುವುದಿಲ್ಲ. ಅವರು ಈ ಉಕ್ಕು ಎಲ್ಲಿ ತಯಾರಾಯಿತು ಎಂದು ಮತ್ತಷ್ಟು ಹುಡುಕುತ್ತಾರೆ. ಅದೇ ಸೇಲಂ! ಈಗ ಆಧುನಿಕ ಉಕ್ಕು ತಯಾರಿಕಾ ಕೇಂದ್ರವಾದ ಸೇಲಂ ಪ್ರಾಚೀನ ಕಾಲದಿಂದಲೂ ಉಕ್ಕು ತಯಾರಿಕೆಗೆ ಹೆಸರುವಾಸಿಯಾಗಿತ್ತು ಎಂಬುದು ಲೇಖಕರಿಗೆ ಖಚಿತವಾಗುತ್ತದೆ. ಎಲ್ಲಿಂದ ಎಲ್ಲಿಗೆ? ಲೇಖಕರ ಈ ಸಂಶೋಧನಾ ಪ್ರವೃತ್ತಿಯಿಂದ ಈ ಪುಸ್ತಕವು ಇಂಥ ಹಲವು ಐತಿಹಾಸಿಕ, ವೈಜ್ಞಾನಿಕ ಸುದ್ದಿಕೊಂಡಿಗಳನ್ನು ಒಳಗೊಂಡ ಸ್ಫೋಟಕ ಆಕರವಾಗಿದೆ ಎನ್ನಲಡ್ಡಿಯಿಲ್ಲ.

ದೇಗುಲದಲ್ಲಿರುವ ಒತ್ತಕ್ಕಲ್ ಎಂಬ ಭಾರೀ ಗಾತ್ರದ (ಸುಮಾರು ೫೦ ಟನ್ ಎಂಬ ಅಂದಾಜು) ಕಲ್ಲಿನ ಕಥೆಯನ್ನೂ ಲೇಖಕರು ಬಿಡಿಸಿದ್ದಾರೆ. ಈ ಎಲ್ಲ ಕಥೆಗಳನ್ನು ವಿವರಿಸಲು ಅವರು ಐತಿಹಾಸಿಕ ದಾಖಲೆಗಳನ್ನೇ ಬಳಸಿದ್ದಾರೆ. ಕನಿಷ್ಠ ೧೨ ಶತಮಾನಗಳ ಅಧಿಕೃತ ಮತ್ತು ಇನ್ನೂ ಹಲವು ಶತಮಾನಗಳ ಅನಧಿಕೃತ ಇತಿಹಾಸದ ಹೊಂದಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಇಷ್ಟು ಚಿಕ್ಕ ಪುಸ್ತಕದಲ್ಲಿ ಎಲ್ಲವನ್ನೂ ವಿವರಿಸಲು ಸಾಧ್ಯವಿಲ್ಲ. ಆದರೆ ಲೇಖಕರು ತಮ್ಮ ವಿಷಯದ ಮಿತಿಯಲ್ಲಿ ಕಂಡುಕೊಂಡ ಸತ್ಯಾಂಶಗಳೇ ಪುಸ್ತಕವನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕಕ್ಕೆ ಅಗತ್ಯವಾದ ರೇಖಾಚಿತ್ರಗಳನ್ನೂ ತಾವೇ ಬರೆದ ಲೇಖಕರು ೨೩ ವರ್ಷಗಳ ತಮ್ಮ ಹವ್ಯಾಸಿ ಸಂಶೋಧನೆಯನ್ನು ಶಿಸ್ತಾಗಿ ಮೂಡಿಸಿದ್ದಾರೆ.

ಅನಂತಪದ್ಮನಾಭ ಸ್ವಾಮಿಯ ಚಿನ್ನದ ಪುತ್ಥಳಿಯನ್ನು ಸುತ್ತುವರೆದ ಕಲ್ಲಿನ ಕಥೆಯನ್ನು ಅಚ್ಚುಕಟ್ಟಾಗಿ ಹೇಳಿದ ಸತ್ಯರವರಿಗೆ ಅಭಿನಂದನೆಗಳು.

Share. Facebook Twitter Pinterest LinkedIn Tumblr Email
Previous Article‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
Next Article ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
ಬೇಳೂರು ಸುದರ್ಶನ
  • Website

Related Posts

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

October 4, 2020

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

May 27, 2020

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

October 6, 2019

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.