Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
ವಿಮರ್ಶೆ

ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 29, 2009Updated:May 19, 20251 Comment3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಜೇಮ್ಸ್ ಗಲಿಯೆನ್ ಆ ಪ್ರಯಾಣಿಕನನ್ನು ಕಂಡಿದ್ದೇ ಫೇರ್‌ಬ್ಯಾಂಕ್ಸ್‌ನಿಂದ ಐದು ಮೈಲು ದೂರ ಸಾಗಿದ ಮೇಲೆ. ಅಲಾಸ್ಕಾದ ಆ ಮುಂಜಾನೆಯಲ್ಲಿ ನಖಶಿಖಾಂತ ನಡುಗುತ್ತ, ಹೆಬ್ಬೆಟ್ಟು ತೋರುತ್ತ ನಿಂತ ಯುವಕನ ಬೆನ್ನೇರಿದ ಚೀಲದಿಂದ ಬಂದೂಕೊಂದು ಇಣುಕುತ್ತಿತ್ತು. `ನಾನು ಅಲೆಕ್ಸ್’ ಎಂದಷ್ಟೆ ಪರಿಚಯಿಸಿಕೊಂಡ ಆತ ಡೆನಾಲಿ ರಾಷ್ಟ್ರೀಯ ಪಾರ್ಕಿನ ತುತ್ತತುದಿಗೆ ಹೋಗಿ ಕೆಲವು ತಿಂಗಳುಗಳ ಕಾಲ ಇರಬೇಕಿದೆ ಎಂದ. ಅವನ ಚೀಲವೋ ೨೫ & ೩೦ ಪೌಂಡ್ ತೂಗುತ್ತಿದೆಯಲ್ಲ ಎಂದು ಜೇಮ್ಸ್ ಅಚ್ಚರಿಪಟ್ಟ. ಇಂಥ ಥಂಡಿಯಲ್ಲಿ ಈ ಅಲೆಕ್ಸ್ ಬದುಕುವುದು ಹೇಗೆ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತ್ತು.

Chris_McCandless

ಮೂರು ತಾಸು ಸಾಗಿದ ಮೇಲೆ `ಅಲೆಕ್ಸ್’ ಜೇಮ್ಸ್‌ನ ಟ್ರಕ್ಕಿನಿಂದ ಇಳಿದ. ತನ್ನ ಗಡಿಯಾರ, ಬಾಚಣಿಗೆ, ೮೫ ಸೆಂಟ್‌ಗಳಷ್ಟು ಹಣ, ಸ್ಥಳನಕಾಶೆ….. ಎಲ್ಲವನ್ನೂ ಟ್ರಕ್ಕಿನೊಳಗೇ ಬಿಟ್ಟ. `ಈ ಸಮಯ ಎಷ್ಟೆಂದು ನನಗೆ ತಿಳಿಯಬೇಕಿಲ್ಲ. ಯಾವ ದಿನವಿದು, ನಾನೆಲ್ಲಿದ್ದೇನೆ ಯಾವುದೂ ನನಗೆ ಗೊತ್ತಾಗಬೇಕಿಲ್ಲ. ಇಂಥ ಯಾವ ಸಂಗತಿಗಳೂ ನನಗೆ ಬೇಕಾಗಿಲ್ಲ’ ಎಂದು ನಸುನಗುತ್ತ ಅಲಾಸ್ಕಾದ ಹಿಮಹಾದಿಯಲ್ಲಿ ನಡೆದ. `ಇಂಥ ಪ್ರದೇಶಕ್ಕೆ ಬರಬೇಡ’ ಎಂದು ಜೇಮ್ಸ್ ಹೇಳಿದ್ದೆಲ್ಲವೂ ವ್ಯರ್ಥವಾಯಿತು. ಅಪ್ಪ, ಅಮ್ಮಂದಿರಿಗೂ ತನ್ನ ಯೋಜನೆಯನ್ನು ತಿಳಿಸಿಲ್ಲ; ನಿಜ ಹೇಳಬೇಕಂದ್ರೆ ನಾನು ಅವರ ಜೊತೆಗೆ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಮಾತಾಡೇ ಇಲ್ಲ ಎಂದು ಅಲೆಕ್ಸ್ ಹೇಳಿದ್ದನ್ನು ಕೇಳಿ ಜೇಮ್ಸ್ ಮತ್ತಷ್ಟು ಅಚ್ಚರಿಗೆ ಬಿದ್ದು ಮೂರು ತಾಸುಗಳಾಗಿದ್ದವು.

`ಅಲೆಕ್ಸ್’ ಎಂದು ಹೇಳಿಕೊಂದ ಕ್ರಿಸ್ಟೋಫರ್ ಜೆ. ಮ್ಯಾಕ್‌ಕ್ಯಾಂಡ್ಲೆಸ್ ಹೀಗೆ ತನ್ನ ಏಕಾಂಗಿತನದ ಯಾತ್ರೆಯನ್ನು ಶುರುಮಾಡಿದ್ದು ೧೯೯೨ರ ಏಪ್ರಿಲ್ ೨೮ರ ಮಂಗಳವಾರ.

ಮೇಲ್‌ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ ಕ್ರಿಸ್‌ಗೆ ಬಾಲ್ಯದಿಂದಲೇ ಲಿಯೋ ಟಾಲ್‌ಸ್ಟಾಯ್ ಎಂದರೆ ಪ್ರೀತಿ. ಆತ ಎಂಥ ಸಿರಿವಂತ ಬದುಕನ್ನು ಬಿಟ್ಟು ಅನಾಥರ, ಹತಭಾಗ್ಯರ ಜೊತೆ ಕಳೆದ ಎಂದು ಕ್ರಿಸ್ ಬೆರಗುಗಣ್ಣಿಂದ ಓದಿದ್ದ. ತನ್ನ ಪದವಿ ಶಿಕ್ಷಣ ಮುಗಿದ ಕೂಡಲೇ ಶಿಕ್ಷಣವೆಚ್ಚದಲ್ಲಿ ಉಳಿದಿದ್ದ ೨೪ ಸಾವಿರ ಡಾಲರ್‌ಗಳನ್ನು ಆಕ್ಸ್‌ಫರ್ಡ್ ಬರಗಾಲ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ ಕ್ರಿಸ್‌ಗೆ ಎಂದೂ ಈ ಲೌಕಿಕ ಬದುಕಿನಲ್ಲಿ ಅಂಥ ಆಕರ್ಷಣೆ ಹುಟ್ಟಲಿಲ್ಲವೇನೋ. ನಿರಭ್ರ ಆಕಾಶವನ್ನು ನೋಡುತ್ತ, ಪ್ರಕೃತಿದತ್ತ ಬದಲಾವಣೆಗಳನ್ನು ಗಮನಿಸುತ್ತ, ತನ್ನ ಪ್ರಿಯ ಪುಸ್ತಕಗಳನ್ನು ಓದುತ್ತ ಕಾಲ ಕೂಡುವ, ಬದುಕನ್ನು ತನ್ನದೇ ರೀತಿಯಲ್ಲಿ ಕಲಿಯುವ ವಿಶಿಷ್ಟ ಯತ್ನಕ್ಕೆ ಕ್ರಿಸ್ ಹೊರಟಿದ್ದ.

ಹಿಂದೊಮ್ಮೆ, ೧೯೯೦ರಲ್ಲಿ  ಅರಿಝೋನಾ ಮರುಭೂಮಿಯ ಹಾದಿಯಲ್ಲಿ ತನ್ನ ಕಾರು ಕೆಟ್ಟು ನಿಂತಾಗ ಇದೇ ಕ್ರಿಸ್ ತನ್ನಲ್ಲಿ ಇದ್ದಬದ್ದ ೧೬೦ ಚಿಲ್ಲರೆ ಡಾಲರ್ ಹಣವನ್ನು ಸುಟ್ಟುಹಾಕಿದ್ದ. ಮುಂದಿನ ತಿಂಗಳುಗಳಲ್ಲಿ ಕ್ರಿಸ್ ಅಲೆಮಾರಿಯಾಗಿ ಊರೂರು ಅಲೆದ. ಬಸ್ಸು, ರೈಲು  – ಹೀಗೆ ಕಂಡಕಂಡ ವಾಹನಗಳನ್ನು ಬಳಸಿದ; ನಡೆದ. ಮುಂದಿನ ತುತ್ತು ಎಲ್ಲಿ ಸಿಗುತ್ತದೆ ಎಂದು ಗೊತ್ತಿಲ್ಲದ ಆ ಕ್ಷಣಗಳು ಅತ್ಯಂತ ರೋಚಕವಾಗಿದ್ದವು ಎಂದು ಗೆಳೆಯನೊಬ್ಬನಿಗೆ ಕಾರ್ಡ್ ಹಾಕಿದ್ದ.

intothewildposter

 

ಈಗ ಕ್ರಿಸ್ ಅಲಾಸ್ಕಾದ ಕಾಡಿನಲ್ಲಿ ನಡೆಯುತ್ತ ಒಂದು ಪಾಳುಬಿದ್ದ ೪೦ರ ದಶಕದ ಬಸ್ಸೊಂದನ್ನು ಕಂಡ. ಅಲ್ಲಿಂದ ಅವನ ಹೊಸ ಬದುಕು ಶುರುವಾಯಿತು. ೧೮೯ ದಿನಗಳ ಕಾಲ ಹೀಗೆ ಹೊಸಲೋಕದಲ್ಲಿ ಸಂಚರಿಸಿದ ಕ್ರಿಸ್ ಆಗಸ್ಟ್ ೧೮ರಂದು ತಣ್ಣಗೆ ಈ ಲೋಕದಿಂದ ಹೊರನಡೆದ. ಸೆಪ್ಟೆಂಬರ್ ೬ರಂದು ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಹಾಸಿಗೆ ಚೀಲದಲ್ಲಿ ಕ್ರಿಸ್‌ನ ದೇಹ ಮಲಗಿದ್ದನ್ನು ಕಂಡರು. ೬೭ ಪೌಂಡ್ ತೂಗುತ್ತಿದ್ದ ಆ ದೇಹದಲ್ಲಿ ಏನೂ ಇರಲಿಲ್ಲ. ಆತ ಹಸಿವಿನಿಂದ ಸತ್ತ ಎಂದು ವೈದ್ಯರು ಅಭಿಪ್ರಾಯಪಟ್ಟರು. ಆದರೆ ಹಾಗೇನೂ ಅಲ್ಲ, ಆತ ತನ್ನದೇ ನಿರ್ಣಯದಿಂದ ಹೀಗೆ ಹೊರಟುಹೋದ ಎಂದು ಕ್ರಿಸ್ ಬದುಕಿನ ಬಗ್ಗೆ `ಇನ್ ಟು ದಿ ವೈಲ್ಡ್’ ಎಂಬ ಜೀವನಕಥೆಯನ್ನು ಬರೆದ ಜೋನ್ ಕ್ರಾಕೂರ್ ಹೇಳುತ್ತಾನೆ. ಇನ್ನೇನು ಸತ್ತೇಹೋಗುತ್ತೇನೆ ಎನ್ನುವಾಗ ಕ್ರಿಸ್ ತನ್ನನ್ನೇ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿಕೊಂಡ ಚಿತ್ರವನ್ನು ನೋಡಿ. ಅವನ ಮುಖದಲ್ಲಿ ಹೇಗೆ ಮಂದಹಾಸ ಮಿನುಗುತ್ತಿದೆ…..

ತನ್ನ ದಿನಚರಿಯ ಪುಟಗಳನ್ನು ಬಿಟ್ಟುಹೋದ ಕ್ರಿಸ್ ಹಸಿವಿನಿಂದ ಬಳಲುತ್ತಿದ್ದುದೂ ನಿಜ; ತನ್ನ ಬದುಕು ನಿಜಕ್ಕೂ ಸಂತೋಷಮಯವಾಗಿತ್ತು; ದೇವರಿಗೆ ವಂದನೆಗಳು ಎಂದು ಹೇಳಿದ್ದೂ ನಿಜ. ನಮ್ಮ ಜೈನ ಮುನಿಗಳು ಸ್ವೀಕರಿಸುವ ಸಲ್ಲೇಖನ ವ್ರತದಂತೆ ಎಂದು ಸ್ಥೂಲವಾಗಿ ಹೇಳಬಹುದು (ಹಾಗಂತ ಕ್ರಿಸ್ ಅಹಿಂಸೆಯನ್ನು ಪಾಲಿಸಲಿಲ್ಲ. ಕಾಡತೂಸು ಇರುವವರೆಗೆ ಕೆಲವು ಪ್ರಾಣಿಗಳನ್ನು ಬೇಟೆಯಾಡಿ ತಿಂದ).

ಈ ಪುಸ್ತಕವನ್ನೇ ಆಧರಿಸಿ ಸಿಯಾನ್ ಪೆನ್ `ಇನ್ ಟು ದಿ ವೈಲ್ಡ್’ ಹೆಸರಿನ ಸಿನೆಮಾ ಮಾಡಿದ್ದಾನೆ. ಕ್ರಿಸ್ ತನ್ನ ಕೊನೆ ದಿನಗಳನ್ನು ಕಳೆದ ಬಸ್ಸಿನಲ್ಲೇ, ಅದೇ ತಾಣದಲ್ಲೇ ಈ ಸಿನೆಮಾವನ್ನು ಚಿತ್ರೀಕರಿಸಲಾಗಿದೆ. ಅಬ್ಬರದ ಬದುಕಿನಲ್ಲಿ ನಮ್ಮನ್ನು ನಾವು ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡ ಅನುಭವಕ್ಕಾಗಿ ಈ ಸಿನೆಮಾವನ್ನು ಖಂಡಿತ ನೋಡಿ.

ಅಲಾಸ್ಕಾದ ಜನ ಮಾತ್ರ ಕ್ರಿಸ್‌ನ ಮರಣ ಒಂದು ಮೂರ್ಖ ಘಟನೆ ಎನ್ನುತ್ತಾರೆ. ಕೊನೆಗಾಲದಲ್ಲಿ ಕ್ರಿಸ್ ಜನವಸತಿಯತ್ತ ಹೋಗಲು ನಿರ್ಧರಿಸಿದ್ದ. ಆದರೆ ಅವನು ಮೊದಲು ದಾಟಿ ಬಂದ ಕೊಲರಾಡೋ ನದಿ ಈಗ ಅಗಲವಾಗಿತ್ತು; ದಾಟುವುದು ದುಸ್ಸಾಹಸವಾಗಿತ್ತು; ಆದರೆ ಕಾಲು ಮೈಲು ದೂರದಲ್ಲೇ ಅದನ್ನು ದಾಟಬಹುದಿತ್ತು ಎಂಬ ವಿಚಾರವೂ ಕ್ರಿಸ್‌ಗೆ ತಿಳಿದಿರಲಿಲ್ಲ ಎಂದರೆ ಈತ ಎಂಥ ಚಾರಣಿಗ ಎಂದು ಅಲಾಸ್ಕನ್ನರು ಹೇಳುತ್ತಾರೆ.

ಏನೇ ಇರಲಿ, ಬದುಕಿನ ಬಗ್ಗೆ ನಮಗೂ ಇರುವ ಪ್ರಶ್ನೆಗಳನ್ನೇ ಕ್ರಿಸ್ ಗಂಭೀರವಾಗಿ ತೆಗೆದುಕೊಂಡು ಕಾಡು ಮೇಡು ಅಲೆದ; ಗಿಡಗಂಟಿಗಳನ್ನು ತಿಂದ; ಹಸಿವನ್ನು ಆನಂದಿಸಿದ; ಬದುಕಿನ ಕೊನೆಯನ್ನು ತೀವ್ರವಾಗಿ, ಅಷ್ಟೇ ಅಕ್ಕರೆಯಿಂದ ಅನುಭವಿಸಿದ. ಇಂದಿನ ನಾಗರಿಕತೆಯ ಯಾವ ಸಾಧನಗಳೂ ಇಲ್ಲದೆ ಬದುಕುವುದು ಅಸಾಧ್ಯವಾಯಿತು ಎನ್ನುವುದು ಒಪ್ಪಿಕೊಳ್ಳಬೇಕಾದ ವಿಷಯವೇ. ಆದರೆ ಕ್ರಿಸ್ ತನ್ನ ನಗುಮುಖದ ಮೂಲಕ ಏನನ್ನೋ ಹೇಳಹೊರಟಿದ್ದಾನೆ ಎನ್ನಿಸುವುದಿಲ್ಲವೆ?

ಬದುಕನ್ನು ಅತ್ಯಂತ ಉತ್ಕಟವಾಗಿ ಪ್ರೀತಿಸುವವರೇ ದುರಂತಕ್ಕೆ ಒಳಗಾಗುತ್ತಾರೆ ಎನ್ನುವುದು ನಮಗೆ ಆಗಿರಬಹುದಾದ ಸಾಮಾನ್ಯ ಅನುಭವ. ದೇಶವನ್ನೇ ನುಂಗಿ ನೀರು ಕುಡಿಯುವ ಭ್ರಷ್ಟ  ರಾಜಕಾರಣಿಗಳು, ಬಾಂಬುಗಳನ್ನು ಸ್ಫೋಟಿಸುವ ಸಂಚನ್ನು ಕ್ಷಣಕ್ಷಣಕ್ಕೂ ಹೂಡುವ ಭಯೋತ್ಪಾದಕರು ಯಾಕಾದರೂ ಸಾಯುವುದಿಲ್ಲ ಎಂದು ನಾವೆಲ್ಲ ಹತಾಶೆಯಿಂದ ಗೋಣು ಬಗ್ಗಿಸಿದ್ದೇವೆ. ಬದುಕನ್ನು ಅತಿಯಾಗಿ ಪ್ರೀತಿಸಿದ್ದ ಹೀರೋ ಕೊನೆಗೆ ಸಮುದ್ರದಲ್ಲಿ ಯಾರಿಗೂ ಸಿಗದಂತೆ ಲೀನವಾಗುವುನ್ನೂ, ಬದುಕಿನಲ್ಲಿ ಯಾವ ಸುಖವೂ ಇಲ್ಲ ಎಂದೇ ವ್ಯಥಿಸುತ್ತಿದ್ದ ಹೀರೋಯಿನ್ ಬದುಕಿದ್ದನ್ನೂ `ಟೈಟಾನಿಕ್’ ಸಿನೆಮಾದಲ್ಲಿ ನೋಡಿದ್ದೇವೆ.

ಕ್ರಿಸ್‌ನ ಹಾಗೆ ಯಾರೂ ಹಸಿವಿನಿಂದ ಸಾಯುತ್ತಲೇ ಬದುಕನ್ನು ಅನುಭವಿಸಬೇಕಿಲ್ಲ. ಆದರೆ ಕ್ರಿಸ್‌ಗೆ ಇದ್ದ ನಿಸರ್ಗದತ್ತ ಜೀವನಪ್ರೀತಿಯನ್ನು ನಾವೆಲ್ಲ ಕಲಿಯಬಹುದೇನೋ. ಲೌಕಿಕ ಬದುಕಿನ ಆಯಾಮಗಳನ್ನು ನಾವು ಅಳೆಯುವುದು ಯಾವಾಗ? ಈ ಯಾಂತ್ರಿಕ ಬದುಕಿನಲ್ಲಿ ನಿಸರ್ಗದ ನಿಯಮಗಳನ್ನು ಅರಿತು, ಪ್ರಕೃತಿಯೊಂದಿಗೆ ಬೆರೆಯುತ್ತ ಬದುಕುವ ಪರಿಯನ್ನು ನಾವು ಕಲಿಯುವುದು ಯಾವಾಗ? ನಗರೀಕರಣದ, ಕಾಂಕ್ರೀಟೀಕರಣದ ಜಂಜಡದಲ್ಲಿ ಇರುವ ಬದಲು  ಬಯಲಿನಲ್ಲಿ ಕೂತು ಹೊಸ ಗಾಳಿಯನ್ನು ಉಸಿರಾಡುವುದು ಯಾವಾಗ?

 

Into the Wild
Share. Facebook Twitter Pinterest LinkedIn Tumblr Email
Previous Article‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
Next Article ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
ಬೇಳೂರು ಸುದರ್ಶನ
  • Website

Related Posts

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

October 4, 2020

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

May 27, 2020

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

October 6, 2019

1 Comment

  1. Kallare on September 29, 2009 12:36 pm

    welwriten… thanks. wil watch d movie

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.