Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
ವಿಮರ್ಶೆ

ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ

ಬೇಳೂರು ಸುದರ್ಶನBy ಬೇಳೂರು ಸುದರ್ಶನAugust 19, 2010Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

(ವಿಜಯ ಕರ್ನಾಟಕದಲ್ಲಿ ೧೯.೮.೨೦೧೦ರಂದು ಪ್ರಕಟಿತ)

ಜುಲೈ ೨೬ರಂದು ಶ್ರೀ ವಿನಾಯಕ ಕೋಡ್ಸರರವರು ‘ಕವಲು’ ಕಾದಂಬರಿಯ ಬಗ್ಗೆ ಬರೆದ ಲೇಖನಕ್ಕೆ ನಾನು ಕಳಿಸಿದ ಪ್ರತಿಕ್ರಿಯೆಯನ್ನು ಪ್ರಕಟಿಸುವ ಬದಲು, ನಾನು ಉಲ್ಲೇಖವಾಗಿ ಕಳಿಸಿಕೊಟ್ಟ ‘ಕವಲು’ ಕುರಿತು ನಾನು ನನ್ನ ವೆಬ್‌ಸೈಟಿನಲ್ಲಿ ಬರೆದ ವಿಮರ್ಶೆಯನ್ನು – ಭೈರಪ್ಪನವರ ಒಳ್ಳೆಯ ಕಾದಂಬರಿಗಳ ಬಗ್ಗೆ ಉಲ್ಲೇಖಿಸಿದ ಸಾಲುಗಳನ್ನು ಕಡಿತಗೊಳಿಸಿ – ಜುಲೈ ೨೯ರಂದು ಪ್ರಕಟಿಸಿದ್ದೀರಿ; ಮರುದಿನವೇ  ನನ್ನ ವೆಬ್‌ಸೈಟನ್ನು ಜಾಲಾಡಿ ನನ್ನ ಆತ್ಮರತಿಯ ಕೃತ್ಯಗಳನ್ನೆಲ್ಲ ಸಂಶೋಧಿಸಿ ಡಾ. ಅರ್ಪಿತಾ ಬಾಳೆನ್ ಬರೆದ ಪ್ರತಿಕ್ರಿಯೆಯನ್ನೂ ಪ್ರಕಟಿಸಿದ್ದೀರಿ.

ಡಾ. ಅರ್ಪಿತಾರವರು ಹೇಳಿದ ಹಾಗೆ ನಾನೇನೂ ವಿಜಯ ಕರ್ನಾಟಕಕ್ಕೆ ಎಂದು ಈ ವಿಮರ್ಶೆಯನ್ನು ಖಂಡಿತವಾಗಿಯೂ ಬರೆದಿಲ್ಲ. ನನ್ನ ಬ್ಲಾಗಿನಲ್ಲಿ ಈ ವಿಮರ್ಶೆಯನ್ನು ಜುಲೈ ೫ರಂದೇ ಪ್ರಕಟಿಸಿದ್ದೆ. ಇದೇ ವಿಮರ್ಶೆಯನ್ನು ‘ಅಗ್ನಿ’ ವಾರಪತ್ರಿಕೆ ಮತ್ತು ಕೆಂಡಸಂಪಿಗೆ ಡಾಟ್‌ಕಾಮ್‌ಗಳೂ ಪ್ರಕಟಿಸಿ ಹಲವು ದಿನಗಳಾಗಿದ್ದವು. ಇದನ್ನು ಮತ್ತೆ ಪ್ರಕಟಿಸಿದ ಹೊಣೆಗಾರಿಕೆ ತಮ್ಮದೇ ಆಗಿರುತ್ತದೆ.

ನಾನು ನನ್ನ ವಿಮರ್ಶೆಯಲ್ಲಿ ಶ್ರೀ ಎಸ್. ಎಲ್. ಭೈರಪ್ಪನವರು ತೆವಲುಳ್ಳವರು ಎಂದಿಲ್ಲ; ಕಾದಂಬರಿಯಲ್ಲಿ ಈ ವಿಚಾರಗಳೆಲ್ಲ ಹಳೆ ಸಂಗತಿಗಳ ತೆವಲು ಎಂದಿರುವುದು ನಿಜ. ಭೈರಪ್ಪನವರ ಕಾದಂಬರಿಗಳನ್ನು ಓದಿಯೇ ಕೊಂಚ ಬರೆಯುವ ಶಕ್ತಿ ಪಡೆದ, ಕೆಲವು ವರ್ಷಗಳ ಹಿಂದೆ ಇದೇ ‘ವಿಜಯ ಕರ್ನಾಟಕ’ಕ್ಕಾಗಿ ಭೈರಪ್ಪನವರನ್ನು ಅವರ ಮನೆಯಲ್ಲಿಯೇ ಸಂದರ್ಶನ ಮಾಡಿದ ನನಗೆ ಭೈರಪ್ಪನವರ ಮೇಲೆ ಅಪಾರ ಗೌರವವಿದೆ. ಅವರನ್ನು ವೈಯಕ್ತಿಕವಾಗಿ ತೆಗಳಿ ಆಗಬೇಕಾಗಿದ್ದೇನೂ ಇಲ್ಲ. ಆದರೆ ಅದೇ ‘ತೆವಲು’ ಪದಕ್ಕೆ ಬದಲಿಯಾಗಿ ‘ನೀವು  ಅವಿವೇಕಿ, ಅಜ್ಞಾನಿ, ಬಾಲಿಶತನವುಳ್ಳವ, ‘ಕವಲು’ ಕಾದಂಬರಿಯನ್ನು ಓದಿ ಪೌರುಷವೇ  ಕಲಕಿ ಹೋದವ, ಮನಸ್ಸಿಗೆ ತೋಚಿದಂತೆ ಗೀಚುವವ, ಚೇಳು ಬಿಟ್ಟುಕೊಂಡವ, ವುಮನೈಸರ್ ಥರ ಕಾಣಿಸುತ್ತೀರಿ, ಬ್ಲಾಗಿನಲ್ಲಿ ಆತ್ಮರತಿ ಮಾಡಿಕೊಂಡವರು’ – ಇಂಥ ಮಾತುಗಳನ್ನು ಡಾ. ಅರ್ಪಿತಾ ಬರೆದಿದ್ದಾರೆ. ನಾನು ಕಾದಂಬರಿಯಲ್ಲಿ ಕಾದಂಬರಿಕಾರನ ವಿಚಾರಗಳ ಬಗ್ಗೆ ಕಾಮೆಂಟ್ ಮಾಡಿದರೆ, ಡಾ. ಅರ್ಪಿತಾರವರು ನನ್ನ ಮೇಲೇ ವಿಮರ್ಶೆ ಮಾಡಿದ್ದಾರೆ! ಅವರು ನನ್ನನ್ನು ಮೌಲ್ಯಮಾಪನ ಮಾಡಿದ ಬಗೆಗೆ ನಾನು ಹೇಳುವುದೇನೂ ಇಲ್ಲ; ಈ ಥರ ಚರ್ಚೆ ಮಾಡಲು ನನಗೆ ಸರ್ವಥಾ ಇಷ್ಟವಿಲ್ಲ.  

ಕೇವಲ ಬ್ಲಾಗರ್  ಆಗಿರುವ ನನ್ನ ವಿಮರ್ಶೆಯನ್ನು ಅವಿವೇಕದ ಘಮಲು ಎಂದು ಬಿಟ್ಟುಬಿಡಿ. ‘ವಿಜಯ ಕರ್ನಾಟಕ’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ‘ಕವಲು’ ಬಗ್ಗೆ ಬಂದ ವಿಮರ್ಶೆಗಳನ್ನೂ ಗಮನಿಸಿ. ಕಾದಂಬರಿಯ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚರ್ಚೆಯಲ್ಲಿ ಸ್ವತಃ ಶ್ರೀ ಭೈರಪ್ಪನವರೇ ಈ ಕಾದಂಬರಿಯ ವಿಷಯದ ಬಗ್ಗೆ ಮಾತಾಡಿದ್ದಾರೆ. ಇಂಥ ಘಟನೆಗಳು ಹೆಚ್ಚುತ್ತಿವೆ ಎಂದೂ ಅವರು ಹೇಳಿದ್ದಾರೆ. ‘ದೇಶದ ಜ್ವಲಂತ ಸಾಮಾಜಿಕ ವಿಷಯವು ಕಾದಂಬರಿಯ ಸತ್ವವಾಗಿದೆ’ ಎಂದಿದ್ದಾರೆ. ಒಟ್ಟಾರೆ, ಪುರುಷ ಶೋಷಣೆ ಮಾಡುವ ಸ್ತ್ರೀಯರೇ ಕಾಣಸಿಗುವ ಈ ಕಾದಂಬರಿಯ ಮೂಲಕ ‘ಕಾನೂನು ಬೇರೆ, ನ್ಯಾಯ ಬೇರೆ’ ಎಂಬ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂಬ ಮಾತು ಬಂದಿದೆ. ಒಟ್ಟಾರೆ, ‘ಕವಲು’ ಬರೆಯುವಾಗ ಭೈರಪ್ಪನವರಲ್ಲಿ ಈ ಸಾಮಾಜಿಕ ವಿಷಯ ಕಾಡುತ್ತಿತ್ತು ಎಂಬುದಂತೂ ನಿಜ.

ಮದುವೆಯನ್ನೇ ಶೋಷಣೆ ಮಾಡಲು ಅಸ್ತ್ರವಾಗಿ ಬಳಸಿಕೊಂಡ ಮಹಿಳೆಯರು ಭಾರತದ ಕೆಲವು ನಗರಗಳಲ್ಲಿ ಇದ್ದಾರೆ ಎಂಬುದು ವಾಸ್ತವ. ಈ ವಾಸ್ತವದ ಹಿಂದಿನ ಇನ್ನಷ್ಟು ವಾಸ್ತವಗಳನ್ನು ಹುಡುಕುವ, ಆ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ. ಅದಿಲ್ಲದೇ ಹೋದರೆ, ಈ ‘ಜ್ವಲಂತ’ ಸಮಸ್ಯೆಯನ್ನು ಪೂರ್ತಿಯಾಗಿ ಚರ್ಚಿಸಿದಂತಾಗುವುದಿಲ್ಲ. ಹಿರಿಯರಾದ ಭೈರಪ್ಪನವರು ಈ ವಿಷಯವನ್ನು ಎತ್ತಿದ್ದೇನೂ ತಪ್ಪಲ್ಲ; ಅವರ ವಾದಕ್ಕೆ ಹಿನ್ನೆಲೆಯಾಗಿ ಅನಿವಾಸಿ ಭಾರತೀಯರು ನಡೆಸುತ್ತಿರುವ ಅಭಿಯಾನವೂ ಇದೆ. ‘ಕವಲು’ ಕಾದಂಬರಿಯಲ್ಲಿ ಉಲ್ಲೇಖವಾದ ಪುರುಷ ಶೋಷಣೆಯ ವಿರುದ್ಧದ ಬೆಳವಣಿಗೆಗಳು ಸಮಾಜದಲ್ಲಿ ಈಗಾಗಲೇ ನಡೆಯುತ್ತಿವೆ.

ಮುಖ್ಯವಾಗಿ, ಅನಿವಾಸಿ ಭಾರತೀಯ ಯುವಕರು ಭಾರತಕ್ಕೆ ಅರ್ಜೆಂಟಾಗಿ ಬಂದು, ಬ್ರೋಕರ್‌ಗಳ ಮೂಲಕ ‘ಅರೆಂಜಡ್ ಮ್ಯಾರೇಜ್’ ಮಾಡಿಕೊಳ್ಳುತ್ತಾರೆ; ಇಂಥ ಹಲವು ಮದುವೆಗಳಲ್ಲಿ, ಭೈರಪ್ಪನವರು ಬಣ್ಣಿಸಿದಂಥ ಘಟನೆಗಳು ನಡೆದಿವೆ, ನಡೆಯುತ್ತಿವೆ ಎಂದು ಇದೇ ಶೋಷಣೆಗೆ ಒಳಗಾದ ಪುರುಷರು ಮತ್ತು ಅವರ ಕುಟುಂಬದವರು ನಡೆಸುತ್ತಿರುವ ವೆಬ್‌ಸೈಟ್‌ಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಹಣಪಿಪಾಸು ಕುಟುಂಬಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಮದುವೆಯಾಗಿ, ಆಮೇಲೆ ಹೆಣ್ಣಿನ ಮನೆಯವರಿಂದ ೪೯೮ಎ ಕೇಸಿಗೆ ಸಿಕ್ಕಿಕೊಂಡು ಅಮೆರಿಕಾ – ಕೆನಡಾಗೆ ಹೋಗಲಾಗದೆ ಮಾನಸಿಕವಾಗಿ ಕುಸಿದುಹೋದ, ಕಾನೂನಿನ ದುರುಪಯೋಗಕ್ಕೆ ಒಳಗಾದ ಪುರುಷರು  ಭಾರತೀಯ ದಂಡಸಂಹಿತೆ ಕಲಂ ೪೯೮ಎ ವಿರುದ್ಧ ಈಗಾಗಲೇ ವೇದಿಕೆ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಹಾಗಂತ ದುರುಪಯೋಗದ ಕಾರಣಕ್ಕಾಗಿ ಈ ಕಲಂನ್ನು ರದ್ದು ಮಾಡಲಾಗದು ಎಂದು ಸರ್ವೋಚ್ಚ ನ್ಯಾಯಾಲಯವೂ ಸ್ಪಷ್ಟವಾಗಿ ಹೇಳಿದೆ. ೪೯೮ಎ ಕಲಮನ್ನು ಲಿಂಗಮುಕ್ತ ಕಲಂ (ಈಗ ಇದು ಸ್ತ್ರೀಯರ ಮೇಲಿನ ಶೋಷಣೆಗೆ ಮಾತ್ರ ಸೀಮಿತವಾಗಿದೆ) ಮಾಡಬೇಕು ಎಂಬ ವಾದವೂ ಕೇಳಿಬಂದಿದೆ.

ಶೋಷಿತ ಪುರುಷರು ಉಲ್ಲೇಖಿಸುವ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ  ೨೦೦೮ರ ವರದಿಯ ಪ್ರಕಾರವೇ ಇಂಥ ೪೯೮ಎ ಕೇಸುಗಳು ಹೆಚ್ಚಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲನೆಯದು ಪಶ್ಚಿಮ ಬಂಗಾಳ (೧೩೬೬೩),  ಆಮೇಲೆ ಉತ್ತರಪ್ರದೇಶ (೮೩೧೨), ರಾಜಸ್ಥಾನ (೮೧೧೩), ಮಹಾರಾಷ್ಟ್ರ(೭೮೨೯) ಬರುತ್ತವೆ. ಮಹಿಳಾ ಸಾಕ್ಷರತೆಯಲ್ಲಿ (ರಾಷ್ಟ್ರೀಯ ಸಾಕ್ಷರತಾ ಮಿಶನ್ ೨೦೦೧ರ ಜನಗಣತಿ ಪ್ರಕಾರ), ಈ ರಾಜ್ಯಗಳ ಪೈಕಿ (ಕೇಂದ್ರಾಡಳಿತ ಪ್ರದೇಶ ಸೇರಿದಂತೆ) ಪಶ್ಚಿಮ ಬಂಗಾಳವು (ಶೇ.೬೦.೨೨) ೧೯ನೇ ಸ್ಥಾನದಲ್ಲಿದ್ದರೆ ಉಳಿದವು ಅನುಕ್ರಮವಾಗಿ ೩೨, ೨೯ ಮತ್ತು ೧೧ನೇ ಸ್ಥಾನದಲ್ಲಿವೆ. ದಿಲ್ಲಿ, ಹೈದರಾಬಾದ್, ಲಖ್ನೋ, ಕಾನ್ಪುರ, ಮುಂಬಯಿ, ನಗರಗಳಲ್ಲಿ ಅತೀ ಹೆಚ್ಚು ೪೯೮ಎ ಕೇಸುಗಳು ದಾಖಲಾಗಿವೆ. ೪೯೮ಎ ಕಲಮನ್ನು ದುರುಪಯೋಗ ಮಾಡಿಕೊಂಡ ಕೇಸುಗಳೇ ಹೆಚ್ಚು ಎಂದು ಶೋಷಿತ ಪುರುಷರು (ಹೆಚ್ಚಾಗಿ ಅರೆಂಜಡ್ ಮ್ಯಾರೇಜ್‌ನಿಂದಲೇ ಇದಕ್ಕೆ ಸಿಕ್ಕಿದವರು) ವಾದಿಸಿದ್ದಾರೆ; ಅವನ್ನೆಲ್ಲ ಖಚಿತವಾಗಿ ಪರಿಶೀಲಿಸಿಯೇ ಒಪ್ಪಬೇಕಾಗುತ್ತದೆ.

ಶತಮಾನಗಳಿಂದ ನಮ್ಮ ದೇಶದ ಲಕ್ಷಗಟ್ಟಳೆ ಹಳ್ಳಿಗಳಲ್ಲಿ, ಅರೆಪಟ್ಟಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ, ಕಾನೂನನ್ನು ರಾಜಾರೋಷವಾಗಿ ಕಸದ ಬುಟ್ಟಿಗೆ ಎಸೆದು ಮಾಡುತ್ತಿರುವ ದೌರ್ಜನ್ಯಗಳು ಜ್ವಲಂತವಾಗಲಾರದೆ? ಮೂವತ್ತು ವರ್ಷಗಳಲ್ಲಿ ಮಾತ್ರವೇ, ಇಂಥ ಕಟು ವರ್ತನೆಯ ಸ್ತ್ರೀಯರಿಂದಲೇ ಸಮಾಜವು ಕಲುಷಿತಗೊಂಡಿತು ಎಂಬ ಭೈರಪ್ಪನವರ ಮಾತನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು.
ಸೆಕ್ಸ್ ಸಂಬಂಧಗಳು ನೈತಿಕವೋ, ಅನೈತಿಕವೋ, ಅವೆಲ್ಲವೂ ಸಮಾಜದ ಬೇಸಿಕ್ ವರ್ತನೆಗಳೇ ಹೊರತು, ಭೂಮಿಯ ಮೇಲಣ ಸಂಕೀರ್ಣ ಸಮಕಾಲೀನ ಆಗುಹೋಗುಗಳ ಮಾನದಂಡವಾಗಲಾರದು. ಸೆಕ್ಸನ್ನು ಅತ್ಯಂತ ಪ್ರಾಥಮಿಕ ಘಟಕ ಎಂದು ಬದಿಗಿರಿಸಿದಾಗಲೇ ನೀವು ಸಮಕಾಲೀನ ಸಂಗತಿಗಳ ಬಗ್ಗೆ ಯೋಚಿಸಬಹುದು. ಆದ್ದರಿಂದಲೇ ಸೆಕ್ಸ್ ಸಂಬಂಧಗಳ ಕುರಿತಂತೆ ಒಂದೊಂದು ದೇಶದಲ್ಲಿ ಒಂದೊಂದು ಕಾನೂನಿದೆ. ಅದನ್ನು ಪ್ರಶ್ನಿಸುವುದೇ ಕಾದಂಬರಿಯ ವಿಷಯವಾದರೆ ಅದನ್ನು ಅಜೆಂಡಾ ಅನ್ನದೆ ಇರಲು ಸಾಧ್ಯವಾಗದು.

‘ಕವಲು’ ಎತ್ತಿರುವ ಈ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲು ‘ವಿಜಯ ಕರ್ನಾಟಕ’ ವೇದಿಕೆಯಾಗಲಿ; ಹೊರತು ವೈಯಕ್ತಿಕ ನಿಂದನೆಯ ಸಾಧನವಾಗದಿರಲಿ ಎಂದಷ್ಟೆ ಆಶಿಸುವೆ.

beluru sudarshana kavalu vijaya karnataka
Share. Facebook Twitter Pinterest LinkedIn Tumblr Email
Previous Articleಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
Next Article ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.