Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ವಿಮರ್ಶೆ»ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
ವಿಮರ್ಶೆ

ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 1, 2010Updated:May 19, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಎರಡನೇ ಮಹಾಯುದ್ಧ ಯಾರಿಗೆ ಗೊತ್ತಿಲ್ಲ? ಹಿಟ್ಲರ್‌ನ ಶತ್ರು – ಮಿತ್ರ ದೇಶಗಳ ನಡುವೆ ಆರೇಳು ವರ್ಷ ನಡೆದ ಈ ಯುದ್ಧದಲ್ಲಿ ಸತ್ತವರೆಷ್ಟು ಎಂಬುದೆಲ್ಲ ಈಗ ಇತಿಹಾಸ. ಜರ್ಮನಿಯ ನಾಝಿಗಳು ಸ್ಥಾಪಿಸಿದ್ದ ಯಾತನಾಶಿಬಿರಗಳನ್ನು ಯಾರು ತಾನೇ ಮರೆಯಲು ಸಾಧ್ಯ? ೧೯೯೩ರಲ್ಲಿ ಬಂದ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ಶಿಂಡ್ಲರ್ಸ್ ಲಿಸ್ಟ್ ಸಿನೆಮಾದಿಂದ ಹಿಡಿದು, ಕಳೆದ ವರ್ಷ ಬಂದ ದಿ ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್ ವರೆಗೆ ಹೊಸ ಸಿನೆಮಾಗಳೇ ಸಾಕಷ್ಟು ಬಂದಿವೆ. ವಾರ್ ಮೂವೀ ಅನ್ನೋದು ಹಾಲಿವುಡ್ ಜಗತ್ತಿನ ಒಂದು ಅತ್ಯಾಕರ್ಷಕ ಕಲ್ಟ್. ಯುದ್ಧದಲ್ಲಿ ಏನು ನಡೆಯಿತು, ಅದರಿಂದ ಮನುಕುಲ ಕಲಿಯಬೇಕಾದ ಪಾಠವೇನು… ಹೀಗೆ ನೂರಾರು ಸಿನೆಮಾಗಳು ಬಂದಿವೆ. ಸಾಮಾನ್ಯವಾಗಿ ಜರ್ಮನಿ, ಅಮೆರಿಕಾ, ಯೂರೋಪ್ ದೇಶಗಳು, ಇಂಗ್ಲೆಂಡ್ – ಇವುಗಳೇ ಈ ಸಿನೆಮಾಗಳ ಕಥೆಗಳಲ್ಲಿ ಬಂದಿವೆ.

೨೦೦೭ರಲ್ಲಿ ಬಂದ ‘ಕಟಿನ್’ ಸಿನೆಮಾ ಮಾತ್ರ ಇವೆಲ್ಲ ಸಿನೆಮಾಗಳಿಗಿಂತ ವಿಭಿನ್ನವಾಗೋದು ಹಲವು ಕಾರಣಗಳಿಗೆ: ಒಂದು: ಈ ಸಿನೆಮಾದ ಕಥೆ ಪೊಲ್ಯಾಂಡ್‌ನ ನತದೃಷ್ಟ ಸೇನಾಧಿಕಾರಿಗಳ ಬಗ್ಗೆ ಇರೋದು. ಎರಡು: ಈ ಕಟಿನ್ ಸಿನೆಮಾದ ಆಧಾರವಾಗಿರೋ ಕಥೆಯು ಅಧಿಕೃತ ಅಂತ ಜಗತ್ತಿಗೆ ತಿಳಿದಿದ್ದೇ ೧೯೮೯ರಲ್ಲಿ, ಘಟನೆ ನಡೆದ ೪೮ ವರ್ಷಗಳ ನಂತರ! ಮೂರು: ಈ ಸಿನೆಮಾವನ್ನು ನಿರ್ದೇಶಿಸಿರೋ ಆಂದ್ರೀಜ್ ವಾಜ್ದಾ ಕೂಡಾ ಪೊಲ್ಯಾಂಡ್‌ಗೆ ಸೇರಿದ ವ್ಯಕ್ತಿ. ನಾಲ್ಕು: ಈ ದುರಂತಮಯ ಇತಿಹಾಸದಲ್ಲಿ ಮಣ್ಣಾಗಿ ಹೋದ ಪೊಲ್ಯಾಂಡ್ ಸೇನಾಧಿಕಾರಿಗಳಲ್ಲಿ ಆಂದ್ರೀಜ್‌ನ ತಂದೆಯೂ ಒಬ್ಬರು. ಐದು: ಆಂದ್ರೀಜ್ ವಾಜ್ದಾಗೆ ವಿಶೇಷ ಆಸ್ಕರ್ ಕೊಡಬೇಕು ಎಂದು ಆಸ್ಕರ್ ಸಮಿತಿಗೆ ಪತ್ರ ಬರೆದು ಶಿಫಾರಸು ಮಾಡಿದಾತ ಸ್ವತಃ ಸ್ಟೀವನ್ ಸ್ಪೀಲ್‌ಬರ್ಗ್. ಆರು: ಈ ದುರಂತವನ್ನು ಸ್ಮರಿಸಲು ಕಟಿನ್‌ಗೆ ಹೋಗುತ್ತಿದ್ದ ಪೊಲ್ಯಾಂಡ್‌ನ ಅಧ್ಯಕ್ಷ ಲೆಕ್ ಕಜಿನ್‌ಸ್ಕಿ ಸಹಿತ ೯೬ ಅಧಿಕಾರಿಗಳು ವಿಮಾನದಲ್ಲೇ ಸುಟ್ಟುಹೋಗಿದ್ದು ಇದೇ ವರ್ಷ ಏಪ್ರಿಲ್ ೧೦ರಂದು.

ದುರಂತ ಘಟಿಸಿದ ಎಷ್ಟೋ ದಶಕಗಳ ನಂತರ, ದುರಂತದಲ್ಲಿ ಜೀವ ತೆತ್ತವನ ಮಗ ಸಿನೆಮಾ ಮಾಡುವುದು, ಅದೇ ದುರಂತದ ಸ್ಮರಣೆಗೆ ಹೋಗುತ್ತಿದ್ದ (ಕಟಿನ್ ಸಿನೆಮಾ ನಿರ್ಮಾಣಕ್ಕೆ ತನ್ನೆಲ್ಲ ಬೆಂಬಲವನ್ನೂ ನೀಡಿದ) ದೇಶದ ಅಧ್ಯಕ್ಷನೇ ವಿಮಾನದಲ್ಲಿ ಕರಕಲಾಗುವುದು, ಎಲ್ಲವೂ ಏನೋ ಹೇಳುತ್ತಿದೆಯಲ್ಲವೆ? ಹೌದು. ಇತಿಹಾಸ ಕ್ಷಣಕ್ಷಣಕ್ಕೂ ಘಟಿಸುತ್ತಲೇ ಇದೆ. ಕಾಲದ ಗಡಿಯಾರ  `ಟಿಕ್, ಟಿಕ್’ ಎನ್ನುತ್ತಲೇ ಇದೆ.

ಹಾಗಾದರೆ ಕಥೆಯಾದರೂ ಏನು? ಕಟಿನ್ ದುರಂತ ಎಂದೇ ಕುಪ್ರಸಿದ್ಧವಾದ ಈ ಘಟನೆಯಲ್ಲಿ ಆಗಿನ ಸೋವಿಯೆತ್ ದೇಶದ ಗೂಡಚರ ಪೊಲೀಸ್ ಪಡೆ (ಎನ್ ಕೆ ವಿ ಡಿ)ಯು ೧೯೪೦ರ ಏಪ್ರಿಲ್ – ಮೇ ತಿಂಗಳುಗಳಲ್ಲಿ ೨೧,೭೬೮ ವಿವಿಧ ಸ್ತರಗಳ ಪೊಲಿಶ್ ಸೇನಾ ಅಧಿಕಾರಿಗಳನ್ನು ತಲೆಗೆ ಗುಂಡಿಕ್ಕಿ ಸಾಯಿಸಿ ಹೂತುಬಿಡುತ್ತದೆ. ಅದು ಸ್ಟಾಲಿನ್ ಕಾಲದ `ನ್ಯಾಯ’. ಸ್ಮಾಲೆನ್‌ಸ್ಕ್ ಎಂಬಲ್ಲಿದ್ದ ವಧಾಸ್ಥಾನದಲ್ಲಿ ಈ ಅಧಿಕಾರಿಗಳನ್ನು ಒಬ್ಬೊಬ್ಬರನ್ನೇ ಎಳೆದು ತಂದು ತಣ್ಣಗೆ ಹಿಂಬದಿಯಿಂದ ಗುಂಡಿಕ್ಕಿ ಸಾಯಿಸುವ ಸನ್ನಿವೇಶಗಳನ್ನು ನೀವು ನೋಡುತ್ತಿದ್ದರೆ ಎದೆ ತಲ್ಲಣಿಸುತ್ತದೆ. ಆಮೇಲೆ ಅದೆಲ್ಲ ತಡವಾಯಿತೆಂದು ಅಲ್ಲಲ್ಲೇ ಈ ಪೊಲಿಶ್ ಅಧಿಕಾರಿಗಳನ್ನು ಚಕಚಕನೆ ಮುಗಿಸಿಬಿಡುವ, ಬಗೆದಿಟ್ಟ ಕಾಲುವೆಯ ಪಕ್ಕದಲ್ಲೇ ಗುಂಡಿಕ್ಕಿ ತಳ್ಳುವ, ಹೆಣದ ರಾಶಿಯನ್ನು ನೋಡಿದನೆಂದು ಒಬ್ಬ ಬಂಧಿತನಿಗೆ ಮುಸುಕುಹಾಕಿ ಮುಗಿಸಿಬಿಡುವ…. ಒಂದೆ ಎರಡೆ……. ಈ ಸಾಯಿಸುವ ಕಾರ್ಖಾನೆಯ ದೃಶ್ಯಗಳನ್ನು ನೀವು ನಿಮ್ಮ ಭಾವುಕ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಾದರೂ ನೋಡಲೇಬೇಕು….. ಮುಂದೆ ತನ್ನ ದೇಶವಾಸಿಗಳನ್ನೇ ಐದಾರು ಲಕ್ಷ ಸಂಖ್ಯೆಯಲ್ಲಿ ಕೊಂದ ಸ್ಟಾಲಿನ್‌ಗೆ ಬಹುಶಃ ಇದೇ ಕಟಿನ್ ಸ್ಫೂರ್ತಿಯಾಗಿರಬೇಕು….

ಆದರೆ ಈ ದೃಶ್ಯಗಳೆಲ್ಲ ನಿಮ್ಮ ಹೃದಯವನ್ನು ಸೀಳುವ ಮುನ್ನ ಸಿನೆಮಾದಲ್ಲಿ ಆಂದ್ರೀಜ್ ಎಂಬ ಸೇನಾಧಿಕಾರಿಯ ಕಥೆ ನಡೆಯುತ್ತದೆ. ಒಬ್ಬ ಅಪ್ಪ, ಅವನೊಗೊಬ್ಬ ಮುದ್ದಾದ ಮಗಳು, ಅವನೇ ಸರ್ವಸ್ವ ಎಂದು ಸೈಕಲ್ಲಿನಲ್ಲೇ ಅರ್ಧ ಪೊಲ್ಯಾಂಡ್ ಸುತ್ತಿ ಅವನ ಸೆರೆವಾಸದ ಸ್ಥಳಕ್ಕೆ ಬಂದ ಅವನ ಹೆಂಡತಿ, ತನ್ನ ಮಗ ಎಂಥ ಧೀರ ಎಂದು ಮನೆಯಲ್ಲಿ ಮಗನ ಫೋಟೋ ನೋಡಿ ಖುಷಿಪಡುವ ಅವನ ಅಪ್ಪ, ಅಮ್ಮ…… ಅಲ್ಲಿಂದ ಶುರುವಾಗುವ ಈ ಕಥೆಯಲ್ಲಿ ಆ ಅಪ್ಪ ಅಷ್ಟೇ ಅಲ್ಲ, ಅಂಥ ಎಷ್ಟೋ ಜೀವಿಗಳ ಕಥೆಗಳು ನಮಗರಿವಿಲ್ಲದೆ ಬಂದು ಹೋಗುತ್ತವೆ. ಯೂನಿವರ್ಸಿಟಿಗೆ ಹೋದ ಆಂದ್ರೀಜ್‌ನ ಅಪ್ಪ ಅಲ್ಲಿಂದ ಸೀದಾ ಯಾತನಾಶಿಬಿರಕ್ಕೆ ರವಾನೆಯಾಗಿ ಸಾಯುತ್ತಾನೆ.

ಇತಿಹಾಸದ ಪ್ರಕಾರವೇ ಈ ನರಮೇಧವನ್ನು ಮೊದಲು ಪತ್ತೆ ಮಾಡಿದ್ದು ನಾಝಿಗಳೇ! ಅಷ್ಟು ಹೊತ್ತಿಗೆ ರಶಿಯಾ ಮತ್ತು ಜರ್ಮನಿಯ ಸ್ನೇಹ ಹಳಸಿರುತ್ತದೆ. ನಾಪತ್ತೆಯಾದ ಪೊಲಿಶ್ ಅಧಿಕಾರಿಗಳೆಲ್ಲ ಕಟಿನ್‌ನಲ್ಲಿ ಹೂತುಹೋಗಿದ್ದಾರೆ ಎಂದು ಹಿಟ್ಲರ್‌ನ ಪ್ರಚಾರ ಅಧಿಕಾರಿ ಗೋಬೆಲ್ಸ್ ದೇಶ ದೇಶಗಳಲ್ಲಿ ಪ್ರಚಾರ ಮಾಡುತ್ತಾನೆ. ಅದಕ್ಕೆ ರಶಿಯಾವೇ ಕಾರಣ ಎಂದು ಬೊಬ್ಬಿಡುತ್ತಾನೆ. ಆದರೆ ರಶಿಯಾ ಸುಮ್ಮನಿರಬೇಕಲ್ಲ……. ಮಿತ್ರದೇಶಗಳ ಜೊತೆ ಸೇರಿದ್ದೂ, ಅದು ಈ ನರಮೇಧಕ್ಕೆ ಜರ್ಮನಿಯೇ ಕಾರಣ ಎಂದು ವಾದಿಸುತ್ತದೆ.

ಯುದ್ಧ ಮುಗಿದ ಮೇಲೆ ಪೊಲ್ಯಾಂಡ್ ಸಹಾ ಕಮ್ಯುನಿಸ್ಟ್ ದೇಶವಾಗುತ್ತದೆ. ಅಲ್ಲಿ ಈ ನರಮೇಧಕ್ಕೆ ಬಲಿಯಾದ ಕುಟುಂಬಗಳ ಸದಸ್ಯರಿಗೆ ನರಮೇಧವನ್ನು ನೆನಪಿಸುವುದಕ್ಕೂ ಪೊಲ್ಯಾಂಡ್ ಸರ್ಕಾರ ಬಿಡುವುದಿಲ್ಲ. ೧೯೮೯ರವರೆಗೂ ಇದೇ ಸ್ಥಿತಿ ಇತ್ತು ಎಂದರೆ ಯೋಚಿಸಿ…. ೧೯೯೦ರಲ್ಲಿ ಆಗ ಗೊರ್ಬಚೆವ್ ನಾಯಕತ್ವದಲ್ಲಿದ್ದ ರಶಿಯಾ ದೇಶವು ಈ ನರಮೇಧದ ಬಗ್ಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ ಮೇಲೆಯೇ ಈ ನರಮೇಧ ನಡೆದಿದೆ ಎಂದು ಹೇಳುವುದಕ್ಕೆ ಪೊಲ್ಯಾಂಡ್ ಪ್ರಜೆಗಳಿಗೆ ಅವಕಾಶ ಸಿಕ್ಕಿತು. ೧೯೯೧ರಲ್ಲಿ ಈ ನರಮೇಧದ ಕಉರಿತ ದಾಖಲೆಗಳನ್ನು ರಶಿಯಾದ ಅಧ್ಯಕ್ಷ ಬೋರಿಸ್ ಯೆಲ್ಸಿನ್ ಬಿಡುಗಡೆ ಮಾಡಿದರು.

ಇದೇ ಕಟಿನ್‌ನಲ್ಲಿ ಕೊನೆಗೂ ಸ್ಥಾಪನೆಯಾದ ಸ್ಮಾರಕಕ್ಕೆ ತೆರಳುತ್ತಿದ್ದ ಪೊಲ್ಯಾಂಡ್ ಅಧ್ಯಕ್ಷ ಲೆಕ್ ಕಜಿನ್‌ಸ್ಕಿ ಸಹಿತ ೮೭ ಹಿರಿಯ ಆಧಿಕಾರಿಗಳು ವಿಮಾನ ದುರಂತಕ್ಕೆ ಬಲಿಯಾದರು. ಇದೂ ಒಂದು ಸಂಚಿರಬಹುದೆ ಎಂಬ ಚರ್ಚೆ ಈಗ ಅಲ್ಲಲ್ಲಿ ನಡೆಯುತ್ತಿದೆ.

ಕಟಿನ್ ದುರಂತದಲ್ಲಿ ಮಡಿದ ಅಪ್ಪನ ನೆನಪಿನಲ್ಲೇ ಬೆಳೆದ ಆಂದ್ರೀಜ್ ವಾಜ್ದಾಗೆ ಈಗ ೮೫ರ ಹರೆಯ. ಅವರು ಪೊಲ್ಯಾಂಡ್‌ನಿಂದ ಮೂಡಿ ಬಂದ ವಿಶ್ವಖ್ಯಾತ ನಿರ್ದೇಶಕರಲ್ಲಿ ಒಬ್ಬರು ಎಂದು ನನಗೆ ಈ ಸಿನೆಮಾ ನೋಡಿದಾಗಲೇ ಗೊತ್ತಾಯಿತು. ಅವರ ಬಗ್ಗೆ ಹೆಚ್ಚು ತಿಳಿಯಲು ನೀವು ವಿಕಿಪೀಡಿಯಾ ಮತ್ತು ಅವರ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಚಿಕ್ಕಪ್ಪನ ಆಸರೆಯಲ್ಲಿ ಬೆಳೆದ ಆಂದ್ರೀಜ್ ಈಗಲೂ ಸಿನೆಮಾ ನಿರ್ದೇಶನದಲ್ಲಿ ನಿರತರು.

ಒಂದು ಪುಟ್ಟ ದೇಶದ ೨೨ ಸಾವಿರ ಜನ ಅಧಿಕಾರಿಗಳೆಲ್ಲರೂ ತಿಂಗಳೊಪ್ಪತ್ತರಲ್ಲಿ ಪಾಯಿಂಟ್ ಬ್ಲಾಂಕ್ ಗುಂಡಿಗೆ ತುತ್ತಾಗಿ ನೆಲಕ್ಕೆ ಕುಸಿದರು ಎಂಬ ಮಾಹಿತಿಯೇ ಮನ ಕಲಕುತ್ತದೆ. ಯುದ್ಧದಲ್ಲಿ ಒಂದು ಗುಂಡನ್ನೂ ಹಾರಿಸದ ಈ ಅಧಿಕಾರಿಗಳು ಹಂತಕರ ಗುಂಡಿಗೆ ತಲೆಯೊಡ್ಡಿದ ಕ್ಷಣ ಹೇಗಿದ್ದೀತು ಎಂದು ಊಹಿಸಲೇ ಕಷ್ಟ. ಸಿನೆಮಾದಲ್ಲಿಯಾದರೋ ನಟನೆ. ಆದರೆ ನಿಜ ಜೀವನದಲ್ಲಿ ಈ ಕ್ಷಣ ಹೇಗೆ ಬಂದು ಹೋಯಿತು?

ಇಂದಿನ ಜಗತ್ತಿನಲ್ಲಿ ವಾಸ್ತವವು ಕಲ್ಪನೆಗಿಂತ ಭೀಕರವಾಗಿರುತ್ತದೆ ಎಂದು ನಾನು ಕೆಲವೊಮ್ಮೆ ಹೇಳುತ್ತಿರುತ್ತೇನೆ. ಕಟಿನ್ ನೋಡಿದ ಮೇಲೆ `ಭೀಕರ’ ಪದವೂ ಎಷ್ಟು ಕ್ಷುಲ್ಲಕವಾಯಿತಲ್ಲ ಅನ್ನಿಸುತ್ತಿದೆ.

ಕಟಿನ್ ನರಮೇಧದ ಬಗ್ಗೆ ಬಿಬಿಸಿಯೂ ಸಾಕ್ಷ್ಯ ಚಿತ್ರ ಮಾಡಿದೆ. ಇತ್ತೀಚೆಗಷ್ಟೇ (೨೦೦೭)  ಕಟಿನ್ ನರಮೇಧ ಕುರಿತಂತೆ ‘ಕಟಿನ್: ಎ ಕ್ರೈಮ್ ವಿತೌಟ್ ಪನಿಶ್‌ಮೆಂಟ್’ ಎಂಬ ೬೦೦ ಪುಟಗಳ ದಾಖಲೆಯುಕ್ತ ಪುಸ್ತಕ ಪ್ರಕಟವಾಗಿದೆ.

ಪೊಲಿಶ್ ಭಾಷೆಯಲ್ಲಿರುವ ಕಟಿನ್ ಸಿನೆಮಾವನ್ನು ಇಂಗ್ಲೀಶ್ ಸಬ್‌ಟೈಟಲ್ ಹಾಕಿಕೊಂಡು ನೋಡಬೇಕು.

ಸಿನೆಮಾ ಕುರಿತ ಒಂದು ಒಳ್ಳೆಯ ವರದಿಗೆ ಈ ಕೊಂಡಿಯನ್ನು ಅನುಸರಿಸಿ.

beluru sudarshana katyn mitramaadhyama
Share. Facebook Twitter Pinterest LinkedIn Tumblr Email
Previous ArticleShankar Sharma: Electricity supply management – Lessons from Kerala
Next Article ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

Comments are closed.

ವಿಮರ್ಶೆ
  • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
  • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
  • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
  • ‘After I die, cut out my heart and eat it’ (Book Review: Tombstone)
  • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
  • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
  • `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
  • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
  • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
  • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
  • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
  • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
  • Climate thriller without Kalashnikov [Book Review: The Sands of Sarasvati by Risto Isomaki]
  • Sacred Plants of India: Marvellous lucidity of Puranic facts [book review]
  • Business Sutra : Desi Sutras for Modern Business [Book review]
  • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
  • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
  • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
  • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
  • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
  • Musical journey of a different kind
  • BOOK REVIEW [A FORT OF NINE TOWERS] : This Kabuliwala weaves a blood-chilling story
  • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
  • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
  • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
  • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
  • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
  • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
  • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಗ್ರಾನ್ ಟೊರಿನೋ : ಕ್ಲೈಂಟ್ ಈಸ್ಟ್‌ವುಡ್‌ನ ಕೊನೇ ಪರ್ಫೆಕ್ಟ್ ಫ್ರೇಮ್ !
  • ಕ್ರಿಸ್: ನಿನ್ನಿಂದ ನಾವು ಕಲಿಯೋದು ತುಂಬಾ ಇದೆ !
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
  • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
  • A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ
  • ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !
  • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
  • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
  • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
  • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.