Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಮಕ್ಕಳ ಪ್ರಬಂಧಗಳು»ಹಿತ್ತಲ ಗಿಡ ಮದ್ದಲ್ಲ
ಮಕ್ಕಳ ಪ್ರಬಂಧಗಳು

ಹಿತ್ತಲ ಗಿಡ ಮದ್ದಲ್ಲ

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 1, 2008Updated:May 19, 20252 Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಯಾವುದೋ ರೋಗಕ್ಕೆ ಕಂಡಕಂಡ ಗಿಡದ ರಸವಾಗಲೀ, ಬೇರಾಗಲೀ ಔಷಧವಾಗಲಾರದು ಎಂಬುದು ಈ ನಾಣ್ಣುಡಿಯ ಸ್ಥೂಲ ಅರ್ಥ. ಆದರೆ ಇದರ ಒಳಾರ್ಥವೇ ಬೇರೆ. ನಾವು ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ತುರ್ತು ಉಪಾಯಗಳನ್ನೇ ಹುಡುಕುತ್ತೇವೆ. ಉದಾಹರಣೆಗೆ  ಬಿದ್ದು ಗಾಯವಾದರೆ ಕೂಡಲೇ ಅದನ್ನು ತಣ್ಣೀರಿನಿಂದ ತೊಳೆದು ಅದಕ್ಕೆ ಪೌಡರ್ ಹಚ್ಚುತ್ತೇವೆ. ಆದರೆ ಹೀಗೆ ತಕ್ಷಣ ಕೈಗೆ ಸಿಕ್ಕಿದ ವಸ್ತುವನ್ನು ಬಳಸುವುದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ಗಾಯಕ್ಕೆ ಸೂಕ್ತವಾಗ ಔಷಧವನ್ನು ಹಚ್ಚುವುದೇ ಸರಿಯಾದ ಮಾರ್ಗ. 

ಹಾಗೆಯೇ ಬದುಕಿನಲ್ಲಿ ನಾವು ಎದುರಿಸುವ ಹಲವು ಸಮಸ್ಯೆಗಳಿಗೆ  ನಾವು ತಾತ್ಕಾಲಿಕ ಪರಿಹಾರವನ್ನು ಹುಡುಕುವುದು ಸರಿಯಲ್ಲ ಎಂಬುದೂ ಈ ಗಾದೆಯ ಅರ್ಥ. ಉದಾಹರಣೆಗೆ ಹಣದ ಸಮಸ್ಯೆ ಬಂದಾಗ ತಕ್ಷಣ ಸಾಲ ಮಾಡುವುದಕ್ಕೆ ಮುಂದಾಗುತ್ತಾರೆ. ಆದರೆ ದುಡಿದು ಸಂಪಾದಿಸುವುದೇ ಹಣದ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಉತ್ತರವಾಗಿದೆ. ಹೀಗೆ ನಾವು ಬದುಕಿನಲ್ಲಿ ಹಠಾತ್ ನಿರ್ಧಾರಗಳನ್ನು ಮಾಡುವ ಬದಲು ಖಾಯಂ ಪರಿಹಾರಕ್ಕಾಗಿ ಪ್ರಯತ್ನಿಸಬೇಕು. ಕೈಗೆ ಸಿಕ್ಕಿದ್ದೇ ಪರಿಹಾರ ಎಂದುಕೊಳ್ಳಬಾರದು.

Share. Facebook Twitter Pinterest LinkedIn Tumblr Email
Previous Articleಜಲ ಸಂರಕ್ಷಣೆ
Next Article DNA Bangalore : Double subscription attempts, no paper yet!!
ಬೇಳೂರು ಸುದರ್ಶನ
  • Website

Related Posts

ಪುಸ್ತಕ ಭಂಡಾರಗಳು

December 4, 2008

ಅರ್ಥವಿಲ್ಲದ ಓದು ವ್ಯರ್ಥ

December 3, 2008

ಜಲ ಸಂರಕ್ಷಣೆ

December 1, 2008

2 Comments

  1. sharanabasava on August 11, 2010 12:30 am

    hai I need article on Jala,jala samraksane,adara matva
    mattu jagatika jala samasse

  2. ನಮನಗಣೇಶ್ ಕಾರ್ಕಳಬಜಗೋಳಿ on September 5, 2010 3:00 pm

    ನಮಸ್ತೆ
    “ಹಿತ್ತಲ ಗಿಡ ಮದ್ದಲ್ಲ” ಇದರ ಅರ್ಥ ನೀವಂದಂತೆ ಅಲ್ಲ ಅನಿಸ್ತದೆ ಸರ್ , ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು, ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ, ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ ….ಉದಾಹರಣೆಗೆ ನಮ್ಮೂರಲ್ಲೇ ಇರುವ ಕವಿ/ಕವಯತ್ರಿಯರು,ನಾಟಕಕಾರರು,ಕಲಾವಿದರು ನಮಗೆ ಕಾಣಿಸೋದೆ ಇಲ್ಲ,ಅದೇ ಬೇರೆ ಊರಿನವರಾದರೆ ತುಂಬ ಒಳ್ಳೆಯವರೆನಿಸುತ್ತಾರೆ,ನಮಗೆ ಹತ್ತಿರವಿರುವ ಕಾರ್ಕಳದ ಗೊಮ್ಮಟೇಶ್ವರ ಬೆಟ್ಟಕ್ಕೆ 12 ವರ್ಷಕ್ಕೊಮ್ಮೆ ಮಹಾಮಸ್ತಕಾಬಿಷೆಕಕ್ಕೆಮಾತ್ರ ನಾವು ಹೋಗೋದು,ಅದೇ ದಿನಂಪ್ರತಿ ಬರುವ ಪ್ರವಾಸಿಗರನ್ನು ನೋಡಿದರೆ ಏನಿದೆ ಅಲ್ಲಿ ಅನಿಸ್ತದೆ, ಈ ಅರ್ತದಲ್ಲಿಯೇ ಹುಟ್ಟಿದ ಗಾದೆ ” ಹಿತ್ತಲ ಗಿಡ ಮದ್ದಲ್ಲ”!

ಮಕ್ಕಳ ಪ್ರಬಂಧಗಳು
  • ಪುಸ್ತಕ ಭಂಡಾರಗಳು
  • ಅರ್ಥವಿಲ್ಲದ ಓದು ವ್ಯರ್ಥ
  • ಜಲ ಸಂರಕ್ಷಣೆ
  • ದೇಶ ಸುತ್ತು, ಕೋಶ ಓದು
  • ಶಿಕ್ಷಕರ ದಿನಾಚರಣೆ ಮತ್ತು ಗಾಂಧಿ ಜಯಂತಿ
  • ಸುವರ್ಣ ಕರ್ನಾಟಕ
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.