Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಸುದ್ದಿ»ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ
ಸುದ್ದಿ

ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ

ಬೇಳೂರು ಸುದರ್ಶನBy ಬೇಳೂರು ಸುದರ್ಶನJune 24, 2009Updated:May 19, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಇವರಿಗೆ,
ಶ್ರೀ ಎಲ್. ಕೆ. ಆಡ್ವಾನಿಜಿ,
ಲೋಕಸಭೆಯ ಮಾನ್ಯ ಪ್ರತಿಪಕ್ಷ ನಾಯಕರು
ಕ್ಯಾಂಪ್ : ೨೨ ಸಾವಿರ ರೂ. ದಿನಬಾಡಿಗೆಯ ಯಾವುದೋ ಒಂದು ಕೊಠಡಿ
ಆರೆಂಜ್ ಕೌಂಟಿ
ಕರಡಿಗೋಡು ಪೋಸ್ಟ್
ಸಿದ್ದಾಪುರ
ಕೊಡಗು ಜಿಲ್ಲೆ ೫೭೧೨೫೩

ಪ್ರಿಯ ಆಡ್ವಾನಿಜಿ,
ಇತಿಹಾಸ ಆಗುವುದು ಬೇರೆ, ಬರೆಯುವುದು ಬೇರೆ, ನೆನಪಿಸಿಕೊಳ್ಳುವುದು ಬೇರೆ. ಅಲ್ಲವೆ ಆಡ್ವಾನಿಜಿ……. ?
ಕಳೆದ ವರ್ಷ ಇದೇ ದಿನ, ಜೂನ್ ೨೫ರಂದು ನೀವು ಬೆಂಗಳೂರಿನಲ್ಲಿದ್ದಿರಿ. ಫ್ರೀಡಂ  ಪಾರ್ಕ್ ಉದ್ಘಾಟಿಸಲು. ಅದೇ, ನೀವೇ ಬರೆದಿದ್ದೀರಿ, ಒಂದು ಕಾಲದಲ್ಲಿ ಬೆಂಗಳೂರು ಸೆಂಟ್ರಲ್ ಜೈಲಾಗಿತ್ತು. ನೀವಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದಿರಿ. ಎಷ್ಟೋ ವರ್ಷಗಳಿಂದ ಅದೇ ದಿನ, ಜೂನ್ ೨೫ – ನೀವು ಬೆಂಗಳೂರಿಗೆ ಬರುತ್ತಿದ್ದಿರಿ. ಸೆರೆಮನೆಗೊಂದು ಭೇಟಿ ಕೊಟ್ಟು ನಾಸ್ಟಾಲ್ಜಿಯಾಕ್ಕೆ ಜಾರುತ್ತಿದ್ದಿರಿ. ಪತ್ರಕರ್ತರೊಂದಿಗೆ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಂಡು ನಿಟ್ಟುಸಿರು ಬಿಡುತ್ತಿದ್ದಿರಿ. ಕಾಂಗ್ರೆಸ್ ಪಕ್ಷದ, ಅದರಲ್ಲೂ ಇಂದಿರಾ ಗಾಂಧಿಯವರ  ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆಯ ಸರ್ಕಾರದ ದಮನಕಾರಿ ಕ್ರಮಗಳನ್ನು ಉಲ್ಲೇಖಿಸುತ್ತಿದ್ದಿರಿ. ಪ್ರಜಾತಂತ್ರವೇ ಹೇಗೆ ಬುಡಮೇಲಾಯ್ತು ಎಂದೆಲ್ಲ ನಿಮ್ಮ ವಿವರಣೆಯನ್ನು ಕೇಳಿಯೇ ಬಚ್ಚಾ ಪತ್ರಕರ್ತರು ತುರ್ತುಪರಿಸ್ಥಿತಿಯನ್ನು ಊಹಿಸಿಕೊಳ್ಳುತ್ತಿದ್ದರು.


ಹೌದು ಆಡ್ವಾನಿಜಿ…… ಊಹಿಸಿಕೊಳ್ಳುತ್ತಿದ್ದರು.

ಯಾಕೆಂದರೆ ಅವರಿಗೆ ಅಂದಿನ ದಿನಗಳ ಕಾಠಿಣ್ಯ ಎಂದೂ ಅರ್ಥವಾಗುವುದಿಲ್ಲ.

ನಿಮಗೋ, ಮಧು ದಂಡವತೆಯವರಿಗೋ, ಹೊ.ವೆ. ಶೇಷಾದ್ರಿಯವರಿಗೋ, ದತ್ತಾತ್ರೇಯ ಹೊಸಬಾಳೆಯವರಿಗೋ…. ನೂರಾರು, ಸಾವಿರಾರು ಕಾರ್ಯಕರ್ತರಿಗೆ ಆ ದಿನಗಳು ಎಂದಿಗೂ ಮರೆತುಹೋಗುವುದು ಅಸ್ಸಾಧ್ಯ. ಹೆಸರಿಲ್ಲದ ಎಷ್ಟೋ ಕಾರ್ಯಕರ್ತರು ಈ ಜೈಲಿನಲ್ಲಿ, ಆ ಜೈಲಿನಲ್ಲಿ, ದೇಶದಾದ್ಯಂತ ಹಬ್ಬಿದ ಸೆರೆಮನೆಗಳಲ್ಲಿ ದಿನ ಕಳೆದರು. ಮೈಕೇಲ್ ಫೆರ್ನಾಂಡಿಸ್, ಸ್ನೇಹಲತಾ ರೆಡ್ಡಿ, – ಒಂದಲ್ಲ ಎರಡಲ್ಲ, ಎಲ್ಲ ಸೈದ್ಧಾಂತಿಕ ಪಂಥ ಭೇದಗಳನ್ನೂ ಬದಿಗಿಟ್ಟು ಇಂದಿರಾಗಾಂಧಿಯವರು ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದವರ, ಸೆರೆಮೆ ಸೇರಿದವರ, ಹಿಂಸೆಗೆ ಒಳಗಾದವರ, ಕೈಕಾಲು ಮುರಿದುಕೊಂಡವರ, ಮಾನಸಿಕ ಅಸ್ವಸ್ಥತೆಗೆ ಒಳಗಾದವರ ಸಂಖ್ಯೆಗೆ ಮಿತಿಯಿಲ್ಲ. ಕನ್ನಡದಲ್ಲಿ ಬಂದ ‘ಭುಗಿಲು’ ಪುಸ್ತಕದಲ್ಲಿ ಇರುವ ತುರ್ತುಪರಿಸ್ಥಿತಿಯ ವಿವರಗಳನ್ನು ಓದಿದರೆ ಎಂಥ ಕಲ್ಲು ಹೃದಯದವನಿಗೂ ಕಣ್ಣೀರು ಬರುತ್ತದೆ.

ಅದಾಗಿ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಿದ್ದು, ಒಳಜಗಳದಿಂದ ಕುಸಿದಿದ್ದು, ಮತ್ತೆ ಇಂದಿರಾ ಗಾಂಧಿ, ಅವರ ಹತ್ಯೆ, ಬಿಜೆಪಿಯ ಹುಟ್ಟು, ರಾಜೀವ್ ಗಾಂಧಿ, ಏಳು ಬೀಳುತ್ತ ವಿ ಪಿ ಸಿಂಗ್ ಸರ್ಕಾರಕ್ಕೆ ಷರತ್ತಿನ ಬಾಹ್ಯ ಬೆಂಬಲ, ರಾಮ ರಥಯಾತ್ರೆ, ಲಾಲೂರಿಂದ ನಿಮ್ಮ ಬಂಧನ, ರಾಜೀವ್ ಹತ್ಯೆ, ರಾಮಜನ್ಮಭೂಮಿಯಲ್ಲಿ ಬಾಬ್ರಿ ಕಟ್ಟಡದ ನಿರ್ನಾಮ, ರಾ.ಸ್ವ.ಸಂಘದ ಮೇಲೆ ನಿಷೇಧ, ಚುನಾವಣೆ, ೧೩ ದಿನಗಳ ಸರ್ಕಾರ, ಅಮೇಲೆ ಆರು ವರ್ಷಗಳ ಸಮ್ಮಿಶ್ರ ಸರ್ಕಾರ, ಮತ್ತೆ ಮನಮೋಹನ್‌ಸಿಂಗ್ ನಾಯಕತ್ವದ ಕಾಂಗ್ರೆಸ್‌ಗೆ ದೇಶದ ಆಡಳಿತ ಚುಕ್ಕಾಣಿ……. ಚಕಚಕನೆ ಸರಿದುಹೋದ ದಿನಗಳನ್ನು ಒಂದು ಪ್ಯಾರಾದಲ್ಲಿ ಕಟ್ಟಿಕೊಡಲಾದೀತೆ ಹೇಳಿ…… ಇವತ್ತಿಗೆ ತುರ್ತುಪರಿಸ್ಥಿತಿ ಘೋಷಣೆಯಾಗಿ ೩೪ ವರ್ಷಗಳಾಗಿವೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂತು, ಕೇಂದ್ರದಲ್ಲಿ ನಿಮ್ಮ ನಾಯಕತ್ವದ ಬಿಜೆಪಿ ಸರ್ಕಾರ ಬರುವ ಕನಸು ಹ್ಯಾಗೋ ಏನೋ, ನುಚ್ಚುನೂರಾಯಿತು. ಬಿಜೆಪಿಯಲ್ಲಿ ಅಪಸ್ವರದ, ಒಡಕಿನ ದನಿಗಳು ಕೇಳಿಬಂದವು. (ನಾನು ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರೋ ರಾಜಕಾರಣವನ್ನು ಹೇಳುತ್ತಿಲ್ಲ). ಮಾತಿನ ಹೊಡೆದಾಟವೆಲ್ಲ ಬಹಿರಂಗವಾದವು. ನೀವು ಮತ್ತೆ ಇನ್ನೊಂದು ರಥಯಾತ್ರೆ ಹೊರಡುವುದಾಗಿ ಘೋಷಿಸಿ…….

ಈಗ ಆರೆಂಜ್ ಕೌಂಟಿಯಲ್ಲಿ ಬಂದು ಕುಳಿತಿದ್ದೀರಿ. ೨೨ ಸಾವಿರ ರೂ.ಗಳ ನಿಮ್ಮ ಕೊಠಡಿಯಲ್ಲಿ ಶಾಂತ ವಾತಾವರಣ ಇರಬಹುದು; ನಿಮ್ಮ ಸೇವೆಗಾಗಿ ಹತ್ತಾರು ನೌಕರರು ತುದಿಗಾಲಲ್ಲಿ ನಿಂತಿರಬಹುದು; ನೀವು ಯಾವುದೋ ಮಹತ್ತರ ಚಿಂತನೆಯನ್ನು ಮಾಡುತ್ತ ಆರಾಮು ಕುರ್ಚಿಯಲ್ಲಿ ಕೂತು ಮನನ, ಮಂಥನ ನಡೆಸುತ್ತಿರಬಹುದು. ಆರು ದಶಕಗಳ ಕಾಲ ದೇಶದ ರಾಜಕಾರಣದಲ್ಲಿ ಸಕ್ರಿಯವಾಗಿರುವ ನೀವು ಆರೆಂಜ್ ಕೌಂಟಿಗೆ ಬಂದಕೂಡಲೇ ಮಜಾ ಮಾಡುತ್ತೀರಿ ಎಂದು ಯಾರೂ ಹೇಳಲಾರರು. ಸಿದ್ಧಾಂತ (ಹಿಂದೂಯಿಸಂ) , ವಾದ (ನಾಯಕತ್ವ), ವಿವಾದ (ಜಿನ್ನಾ?), ಚರ್ಚೆ (ಸೋಲಿನ ಹೊಣೆ ಯಾರದು?) – ಯಾವುದೋ ಗಹನ ವಿಚಾರದಲ್ಲಿ ನೀವು ಸಹಜವಾಗೇ ತೊಡಗಿರುತ್ತೀರಿ. ಅಥವಾ ಅನೌಪಚಾರಿಕವಾಗಿ ಕಾಲ ಕಳೆಯುತ್ತ ಯಾವುದೋ ಹೊಸ ವಿಚಾರದ ಪುಸ್ತಕ ಓದುತ್ತ ಹೊರಗಿನ ನಿಸರ್ಗ ರಮಣೀಯ ದೃಶ್ಯವನ್ನು ಮತ್ತೆ ಮತ್ತೆ ನಿರುಕಿಸುತ್ತ…. ಬರೀ ಊಹೆಯೇ ಆಗಿಹೋಯಿತು ಎನ್ನಬೇಡಿ. ನಾನು ಆ ರೆಸಾರ್ಟಿಗೆ ಹೋಗಿಲ್ಲ.  

೧೯೭೫ರ ಜೂನ್ ೨೫ಕ್ಕೂ, ೨೦೦೯ರ ಜೂನ್ ೨೫ಕ್ಕೂ ಎಷ್ಟೆಲ್ಲ ವ್ಯತ್ಯಾಸ ಅಲ್ಲವೆ ಆಡ್ವಾನಿಜಿ…….

ಜನಸಂಘವಾಗಿ ಜೈಲಿಗೆ ಹೋಗಿ ಜನತಾಪಾರ್ಟಿಯಾಗಿ ಹೊರಬಂದು, ನಂತರ ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ : ರಾ.ಸ್ವ.ಸಂಘದ ರಾಜಕೀಯ ಕೂಸು. ಅಸಾಮಿನಲ್ಲೂ ಬಿಜೆಪಿ ಇದೆ. ಮಣಿಪುರದಲ್ಲೂ ಅದನ್ನು ಜನ ಗುರುತಿಸುತ್ತಾರೆ. ಕಾಶ್ಮೀರದಲ್ಲಿ, ತಮಿಳುನಾಡಿನಲ್ಲಿ, ಕೇರಳದಲ್ಲಿ ಬಿಜೆಪಿಗೆ ಮತಗಳು ಬರುತ್ತಿವೆ. ಗುಜರಾತಿನಂಥ ಉದ್ಯಮಶೀಲ ರಾಜ್ಯದಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸುವುದಕ್ಕೆ ಇನ್ನೆಂದೂ ಆಗದೇನೋ ಎಂಬ ಸ್ಥಿತಿ; ಕರ್ನಾಟಕದಲ್ಲಿ, ದಕ್ಷಿಣ ಭಾರತದ ಪ್ರಥಮ ರಾಜ್ಯ ಸರ್ಕಾರ ಸ್ಥಾಪಿಸಿದ ಕೀರ್ತಿ.

ಅಷ್ಟೇನೇ? ಆರು ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಮಾತ್ರಕ್ಕೇ ಬಿಜೆಪಿಯ ಶಕ್ತಿಯೆಲ್ಲ ಹೃಸ್ವವಾಯಿತೇ? ಅಲ್ಪಕಾಲದ ಅಧಿಕಾರವನ್ನು ಅನುಭವಿಸಿದ ಮಾತ್ರಕ್ಕೆ ಶಕ್ತಿಯೆಲ್ಲ ಉಡುಗಿಹೋಗುವಂಥ ಘನ ದುರಂತವೇನಾಯಿತು? ಎಲ್ಲ ರಾಜ್ಯಗಳಲ್ಲೂ ಬಹುತೇಕ ಬೀಳು. ವ್ಯಕ್ತಿ (ಗುಜರಾತ್) , ಜಾತಿ (ಕರ್ನಾಟಕ) ಆಧಾರಿತ ಪ್ರದೇಶಗಳಲ್ಲಿ ಮಾತ್ರವೇ ಕೊಂಚ ಏಳು. ಹಾಗಾದರೆ ಈ ಸಿದ್ಧಾಂತಗಳೇನಾದವು? ರಾಷ್ಟ್ರೀಯತೆ, ರಾಷ್ಟ್ರೀಯ ಅಸ್ಮಿತೆ, ಮಾನವತಾವಾದ, ನೈಜ ಸೆಕ್ಯುಲರಿಸಮ್ – ಎಲ್ಲವೂ ಬೆಲೆ ಕಳೆದುಕೊಂಡವೆ? ಅಧಿಕಾರವೇ ರಾಜಕೀಯ ಪಕ್ಷವೊಂದರ ಅಂತಿಮ ಗಮ್ಯವೇ? ಚುನಾವಣೆಯೇ ರಾಜಕೀಯ ಪಕ್ಷವೊಂದರ ಏಕೈಕ ಮಾನದಂಡವೇ? ಒಂದು ಸೋಲೇ ಪಕ್ಷದ ವಿಘಟನೆಯ ಸಾಧನವಾಗಬಹುದೆ?
ಐದು ವರ್ಷಗಳಿಗೊಮ್ಮೆ ಹೊಸ ಖಾದಿ, ಗರಿಗರಿ ಜುಬ್ಬಾ…. ಎಲ್ಲ ಪಕ್ಷಗಳಂತೆ ಬಿಜೆಪಿಯದೂ ಒಂದು ಪ್ರಣಾಳಿಕೆ. ಈಗಂತೂ ರೆಸಾಟ್‌ಗಳಲ್ಲಿಯೇ ದೇಶದ ಬಗ್ಗೆ ಚಿಂತನ, ಮಂಥನ. ಸರಳ, ಸುಂದರ ಹಳ್ಳಿ ಬದಿಯ ವಾತಾವರಣದಲ್ಲಿ ಜಮಖಾನಾ ಹಾಸಿ ಕೂತುಗೊಳ್ಳುವ ದಿನಮಾನದ ಬಗ್ಗೆ ನೆನಪಿಸುವುದೇ ಬೇಡ ಅಲ್ಲವೆ? ಹೊಸ ಪೀಳಿಗೆಯ ನಾಯಕರಿಗೆ ಸರಿಯಾದ ವ್ಯವಸ್ಥೆ ಬೇಕಲ್ಲ ಎಂದು ಸಮರ್ಥಿಸಿಕೊಳ್ಳಬಹುದೇನೋ ಬಿಡಿ.

ಇವತ್ತಷ್ಟೇ ನೀರಜಾ ಚೌಧರಿ ಇಂಡಿಯನ್ ಎಕ್ಸ್‌ಪ್ರೆಸ್ ಕಾಲಮ್ಮಿನಲ್ಲಿ ಬರೆದಿದ್ದಾರೆ. ಯಾವುದನ್ನು ಒಪ್ಪಿಕೊಳ್ಳಬೇಕು? ಏಕಾತ್ಮ ಮಾನವತಾ ವಾದವನ್ನೋ, ಗಾಂಧಿ ಪ್ರಣೀತ ಸಮಾಜವಾದವನ್ನೋ, ಸಾಂಸ್ಖೃತಿಕ ರಾಷ್ಟ್ರೀಯತೆಯನ್ನೋ…. ಅಥವಾ ಇವೆಲ್ಲವನ್ನೂ ಬಂಧಿಸುವ ಒಂದು ಏಕೀಕೃತ ಸಿದ್ಧಾಂತವೇನಾದರೂ ಇದೆಯೆ?

ಬಿಜೆಪಿಯನ್ನು ಬೆಂಬಲಿಸಿದ ದೇಶದ ಹಲವಾರು ಮತದಾರರಲ್ಲಿ ನಾನೂ ಒಬ್ಬ. ವಿಶೇಷ ಇಷ್ಟೆ: ನಾನೂ ನಿಮ್ಮಂತೆ ಅಲ್ಲದಿದ್ದರೂ ತುರ್ತುಪರಿಸ್ಥಿತಿ ಕಾಲದಿಂದಲೂ ಪುಡಗೋಸಿ ಕಾರ್ಯಕರ್ತ. ನೀವು ಪ್ರೌಢ ನಾಯಕರಾಗಿ ಸೆರೆಮನೆ ಸೇರಿದಿರಿ. ನಾನು ತರಲೆ ಪೋರನಾಗಿ ಎಲ್ಲೋ ಕಾಡಿನಲ್ಲಿ ‘ ಇಂದಿರಾ ಗಾಂಧಿಗೆ ಧಿಕ್ಕಾರ’ ಎಂದು ನನ್ನ ಎಕ್ಸರ್‌ಸೈಜ್ ಹಾಳೆಯಲ್ಲಿ ಬರೆದು ಗಿಡಕ್ಕೆ ತೂಗು ಹಾಕಿದೆ. ನೀವು ರಾಮರಥ ಯಾತ್ರೆಯ ಹಾದಿಯಲ್ಲಿ ಬಂಧನಕ್ಕೆ ಒಳಗಾದಾಗ ನಾನು ಸಮಾಜಕಂಟಕನ ಥರ ಗಿರಿನಗರದಲ್ಲಿ ಬಿಟಿಎಸ್ ಬಸ್ಸಿನ ಟಯರಿಗೆ ಮೊಳೆ ಚುಚ್ಚುತ್ತಿದ್ದೆ. ಸಿದ್ಧಾಂತದ ಅಮಲು ನೋಡಿ.. ನಿಜಕ್ಕೂ ಅಫೀಮಿನ ಥರ…. ನನ್ನನ್ನೂ ನಿಮ್ಮನ್ನೂ, ಎಷ್ಟೋ ಕಾರ್ಯಕರ್ತರನ್ನು ಹೇಗೆ ಅಮರಿಕೊಂಡಿರುತ್ತೆ…..
ನೀವು ಈಗ ರೆಸಾರ್ಟಿನಲ್ಲಿ ರಿಲ್ಯಾಕ್ಸ್ ಮಾಡುವ ನೆಪದಲ್ಲಿ ಹೊಸ ಚಿಂತನೆಯನ್ನು ಅರಸಿ ಬಂದಿದ್ದೀರಿ; ನಾನು ಬಿಜೆಪಿಯ ಒಳಜಗಳ, ಜಾತಿ ರಾಜಕಾರಣ, ಕುಟುಂಬಗಳ ಯಜಮಾನಿಕೆ – ಇವೆಲ್ಲದರ ಬಗ್ಗೆ ರೋಸಿ ಬ್ಲಾಗ್ ಬರೆಯುತ್ತ ಸಹ ಕಾರ್ಯಕರ್ತರ ಕಟುಟೀಕೆಗೆ ಒಳಗಾಗಿದ್ದೇನೆ.

ನಿಜ, ಹೋಲಿಕೆ ಇಲ್ಲಿಗೇ ನಿಲ್ಲುತ್ತದೆ. ದೇಶದ ಉಪಪ್ರಧಾನಿಯಾಗಿದ್ದ, ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ನೀವೆಲ್ಲಿ… ಕೊನೇ ಪಕ್ಷ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದೇ ಪಾರ್ಟಿಯನ್ನು ಹಿಗ್ಗಾಮುಗ್ಗಾ ಟೀಕಿಸುವ ನಾನೆಲ್ಲಿ?

ಆದರೂ ಯಾಕೋ… ನೀವು ಕರ್ನಾಟಕಕ್ಕೆ ಬಂದಿದ್ದೀರಿ ಮತ್ತು ನಾಳೆ ಜೂನ್ ೨೫ ಎಂದೆಲ್ಲ ನೆನಪಾಗಿ ಇಷ್ಟು ಬರೆದೆ. ಬರೆಯುತ್ತ ಬರೆಯುತ್ತ ಬೆಂಗಳೂರು ಸೆರೆಮನೆಯ ಚಿತ್ರಗಳನ್ನೂ, ಆ ಬಗ್ಗೆ ನೀವು ಬರೆದಿದ್ದನ್ನೂ ನಿಮ್ಮ ಬ್ಲಾಗಿನಲ್ಲಿ ಓದಿದೆ. ಆರೆಂಜ್ ಕೌಂಟಿಯ ಸುಖಾಸೀನ ಕೊಠಡಿಗಳ ಛಾಯಾಚಿತ್ರಗಳನ್ನು ನೋಡಿ ಓಹೋ… ಆಡ್ವಾನಿಯವರು ಈ ಕುರ್ಚಿಯಲ್ಲಿ ಕೂತೇ ಚಿಂತನೆ ನಡೆಸಬಹುದೇನೋ ಎಂದು ಊಹಿಸಿಕೊಂಡೆ.

ಆಡ್ವಾನಿಜಿ, ನೀವಿನ್ನೂ ಛಲವಂತರು. ಈಗಲೂ ನೀವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮಾತನಾಡಿಲ್ಲ; ಮೆಚ್ಚತಕ್ಕದ್ದೇ. ಕರ್ನಾಟಕದ ಮುಖ್ಯಮಂತ್ರಿಯವರೂ ತಮ್ಮ ಹೊಣೆಗಾರಿಕೆ ಹೆಚ್ಚಿಸಿಕೊಳ್ಳಲು ಇನ್ನೆರಡು ದಿನಗಳಲ್ಲಿ ಇನ್ನೊಂದು ರೆಸಾರ್ಟಿಗೆ ಹೋಗಿ ಮಂಥನ ೨ ನಡೆಸಲಿದ್ದಾರೆ. ಅವರೂ ಛಲವಂತರೇ. ಅಧಿಕಾರಿಗಳಿಗೆ ಚುರುಕು ಮುಟ್ಟಿಸದೆ ಬಿಡೋದಿಲ್ಲ.

ಇವತ್ತು ಫ್ರೀಡಂ ಪಾರ್ಕ್ ನೋಡುತ್ತ ನಿಮ್ಮನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವೆ. ದೇಶದ ಅತಿ ಹಿರಿಯ ಮತ್ತು ಸಕ್ರಿಯ ಮುತ್ಸದ್ದಿಯಾಗಿ ನೀವು ಆರೆಂಜ್ ಕೌಂಟಿಯಲ್ಲಿ ಇರುವ ಕ್ಷಣಗಳ ಬಗ್ಗೆ, ಅದರ ಫಲಶ್ರುತಿಯ ಬಗ್ಗೆ ಖುಷಿಯಿಂದ ನಿರೀಕ್ಷಿಸುತ್ತೇನೆ. ಏನಾದರಾಗಲಿ, ತುರ್ತುಪರಿಸ್ಥಿತಿಯಲ್ಲಿ ನಿಮಗೆ ಹೊಸ ಚಿಂತನೆಗೆ ಹಚ್ಚಿದ ಕರ್ನಾಟಕವೇ ಈ ಸಲವೂ ರೆಸಾರ್ಟ್ ಮೂಲಕ ನಿಮ್ಮನ್ನು ಮತ್ತೆ ಹೊಸ ಅಧ್ಯಾಯಕ್ಕೆ ಸ್ವಾಗತಿಸುತ್ತದೆ ಎಂದು ಕನವರಿಸುತ್ತೇನೆ.

ನಿಮ್ಮನ್ನು ಸದಾ ನಿರೀಕ್ಷಿಸುತ್ತಿರುವ

ಬೇಳೂರು ಸುದರ್ಶನ

Share. Facebook Twitter Pinterest LinkedIn Tumblr Email
Previous Articleವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
Next Article Shilpashree Investigative Report Award 2010
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!

June 5, 2024

Comments are closed.

ಸುದ್ದಿ
  • ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!
  • ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!
  • ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)
  • ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ
  • ರಾಮನಗರದ ಹೃದಯ
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!
  • ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ
  • ಇ-ದಕ್ಷಿಣ್ ಡಾಟ್‌ಕಾಮ್‌ : ಮಿಸ್ ಕಾಲ್‌ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!
  • ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!
  • ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!
  • ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ಟೆಸೆರಾಕ್ಟ್‌ ಬಂತು ದಾರಿ ಬಿಡಿ; ಓಸಿಆರ್‌ ಮಾಡೋ ಚಿಂತೆ ಬಿಡಿ!
  • ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ
  • ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • Pacific Marine Climate Change Report Card 2018
  • READ: THE PERSONAL DATA PROTECTION BILL, 2018
  • New study from CSE exposes massive environmental dumping of old and used vehicles in Africa and South Asia
  • ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
  • ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  
  • “ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!
  • ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು
  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
  • ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!
  • ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್‌ನಲ್ಲಿ ಭಾಗವಹಿಸಿ! ಅಬ್ದುಲ್‌ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್‌ಲೈನ್‌ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ
  • ಶಂಕರ ಶರ್ಮರು ನ್ಯೂಝಿಲೆಂಡ್‌ಗೆ – ಉನ್ನತ ಅಧ್ಯಯನಕ್ಕೆ – ಹೊರಟಿದ್ದಾರೆ, ಶುಭಾಶಯ ಹೇಳೋಣ!
  • Prashant Kishor : Disruptive, Harmful
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!
  • ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]
  • ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ಆರೋಗ್ಯ ಇಲಾಖೆಗೆ ಮಾನವಹಕ್ಕು ಆಯೋಗದ ಆದೇಶ : ಕೊನೆಗೂ ನ್ಯಾಯ ಪಡೆದ ಉಡುಪಿಯ ದಾದಿಯರು
  • ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ
  • SHANKAR SHARMA: CREATION OF A SUSTAINABLE URBAN ENERGY SYSTEM
  • National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)
  • ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!
  • `ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?
  • ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು
  • ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ
  • Prayer for consideration in front of the Hon’ble High Court for the purpose of granting relief to the Endosulfan Victims
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Dattaji writes about his mother Meenakshi Amma
  • ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ 42 ವರ್ಷಗಳ ಬದಲಿಗೆ ಕೇವಲ 5 ವರ್ಷಗಳ ವೇತನ ನೀಡುವ ಹುನ್ನಾರ
  • AKKU LEELA IMAGES FOR DOWNLOAD
  • ಕೊಡಗು-ಕಾಸರಗೋಡು ಮಡಗಾಸ್ಕರ್‌ಗೆ ಸೇರಿದ್ದು!
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • Future of solar energy seems bleak if sector reforms do not pull through
  • Climate Change Report Warns of Dramatically Warmer World This Century
  • ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು
  • ಅಕ್ಕು ಮತ್ತು ಲೀಲಾ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ಸಚಿವ ಕಾಗೇರಿಯವರಿಗೆ ಮಿತ್ರಮಾಧ್ಯಮ ಮನವಿ
  • 'ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ' ಶಂಕರಶರ್ಮ ಪುಸ್ತಕ ಬಿಡುಗಡೆಗೆ ಬನ್ನಿ! (ಅಕ್ಟೋಬರ್‌ ೧೦)
  • Law abiding citizens and law disobeying Government
  • Bhoomi College offers One year Programme on Science and Management for Sustainable Living
  • ಹತ್ತನೆಯ ವರ್ಷಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಾ: ಶುಭಾಶಯ ಹೇಳಿ!
  • ಶುಕ್ರ ಸಂಕ್ರಮ: ಪುಸ್ತಕ ಓದಿ
  • THE COPYRIGHT (AMENDMENT) BILL, 2012
  • ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ
  • SC upholds constitutional validity of Right to Education Act : Judgement FULL TEXT
  • ನನ್ನ ಹಿಡನ್‌ ಅಜೆಂಡಾ ಮತ್ತು ಇತರ ಕಥೆಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ವಿರೋಧಿಸಿ: ಮುಖ್ಯಮಂತ್ರಿಯವರಿಗೆ ಮಿತ್ರಮಾಧ್ಯಮ ಸಹಿತ ಹಲವು ಸಂಘಟನೆಗಳ ಮನವಿ
  • ಮಿತ್ರಮಾಧ್ಯಮ ಮ್ಯಾಗಜಿನ್‌ ಸಂಚಿಕೆ ೧ ಓದಿ
  • ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ
  • ‘ಇಜ್ಞಾನ’ ಸಂಚಿಕೆ ಓದಿ
  • ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!
  • ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!
  • SUPREME COURT BANS MINING IN BELLARY DISTRICT
  • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
  • BAN ENDOSULFAN PERMANENTLY, CONDUCT CENSUS OF VICTIMS, PROVIDE PERMANENT REHABILITATION
  • ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ
  • Feb 5,6: Millet Mela in Bangalore – Meet the Millet! Say hello to HEALTH
  • Scandalous Decision of Jairam Ramesh to OK POSCO project
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • Publish All the Radia Tapes
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?
  • “BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”
  • ಇಂಧನ ಬಡತನ: ಜಾಗತಿಕ ವರದಿ ಹೇಳಿದ್ದೇನು?
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ
  • ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
  • ವೇದಾಂತ : ಅಗೆದಷ್ಟೂ ಅವಾಂತರ
  • ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ
  • ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು
  • Future Electricity Supply Options for India
  • How essential is the nuclear power option for India?
  • `ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ
  • ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!
  • ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ
  • ಹೀಗಿದ್ದರು ನಾನಾಜಿ ದೇಶಮುಖ್
  • Media Fest Presentation by Beluru Sudarshana
  • January 23: Participate in the Public Consultation (Bangalore) on Bt Brinjal
  • ಡಿಸೆಂಬರ್ ೧೩ರಂದು ಮೈಸೂರಿನಲ್ಲಿ ಬದನೆ ಮೇಳ
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • Please visit www.mitramaadhyama.co.in
  • Shilpashree Investigative Report Award 2010
  • ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ
  • Still nostalgic about Bharatiya Janasangh and old BJP? Read this !
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ನನ್ನ ಪ್ರೀತಿಯ ದತ್ತಾಜಿ
  • ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
  • DNA: Delayed , No Analysis?
  • ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !
  • Bhairappa’s interview 2002
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.