Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಸುದ್ದಿ»ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)
ಸುದ್ದಿ

ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 30, 2021Updated:May 19, 2025No Comments6 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

೨೦೧೯ರ ಅಕ್ಟೋಬರ್‌ ಕೊನೆಯ ವಾರ ನನ್ನನ್ನು ಆಗಿನ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.‌ ಯಡಿಯೂರಪ್ಪನವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್‌ ೩೧ / ನವೆಂಬರ್‌ ೧ರಿಂದ ನನ್ನ ಕೆಲಸ ಆರಂಭಿಸಿದೆ. ಅಂದಿನಿಂದ ಲೆಕ್ಕ ಹಿಡಿದರೆ ಕೊರೋನಾ ಪೂರ್ವ ನಾಲ್ಕು ತಿಂಗಳುಗಳು, ಲಾಕ್‌ಡೌನ್‌ನ ಮೂರು ತಿಂಗಳುಗಳು, ಅನ್‌ಲಾಕ್‌ ಕಾಲದ ಐದು ತಿಂಗಳುಗಳು – ಹೀಗೆ ವಿಂಗಡಿಸಬಹುದು. ಕೊನೆಯ ಭಾಗದಲ್ಲಿ ನನ್ನ ಸ್ವಯಂ ಗೃಹನಿರ್ಬಂಧದ ಎರಡು ವಾರಗಳೂ ಸೇರಿವೆ. ೨೦೨೧ ರಲ್ಲಿ ಕೊರೋನಾ ಮಾದರಿಯ ಅನಾರೋಗ್ಯದಿಂದ (ಲಾಕ್‌ಡೌನ್‌ ಅವಧಿಯಲ್ಲಿಯೇ) ಒಂದೂವರೆ ತಿಂಗಳು ಕೆಲಸ ಮಾಡಲಾಗಲಿಲ್ಲ. ಈ ವರ್ಷವೂ ಕೊರೋನಾದಿಂದಾಗಿ ಸಾಕಷ್ಟು ದಿನಗಳಲ್ಲಿ ಸೂಕ್ತ ಕಾರ್ಯನಿರ್ವಹಣೆ ಸಾಧ್ಯವಾಗಲಿಲ್ಲ ಎಂಬುದು ವಾಸ್ತವ.

ನನ್ನ ನೇಮಕಾತಿಯಿಂದ ೨೦೨೧ ರ ಜುಲೈ ೨೬ವರೆಗಿನ ಅವಧಿಯಲ್ಲಿ ಮಾಡಿದ ಒಟ್ಟು ಕೆಲಸಗಳ ಸಂಕ್ಷಿಪ್ತ ನೋಟವನ್ನು ಸಾರ್ವಜನಿಕರ ಮುಂದೆ ಇಡುತ್ತಿದ್ದೇನೆ. ನನ್ನದು ಅಪ್ಪಟ ರಾಜಕೀಯ ನೇಮಕಾತಿ ! ಆದ್ದರಿಂದ ನಾನು ಕೇವಲ ಸಲಹೆಗಳನ್ನು ನೀಡಬಹುದೇ ಹೊರತು ಹೆಚ್ಚಿನ ಎಕ್ಸಿಕ್ಯುಟಿವ್‌ ಕೆಲಸಗಳನ್ನು ಮಾಡಲಾಗದು; ಆದೇಶ ನೀಡಲಾಗದು ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಈ ಮಿತಿಯ ಒಳಗೇ ನಾನು ಇಷ್ಟು ಕೆಲಸಗಳನ್ನು ಮಾಡಿರುತ್ತೇನೆ.

ಇ – ಆಡಳಿತದ ಕೆಲಸಗಳು

  • ಕರ್ನಾಟಕ ಸರ್ಕಾರವು ರೂಪಿಸಿದ ಎಲ್ಲ ಆಪ್‌ಗಳನ್ನು ವ್ಯವಸ್ಥಿತವಾಗಿ ಪರಿಚಯಿಸುವ ದೃಷ್ಟಿಯಿಂದ ಕರ್ನಾಟಕ ಆಪ್‌ ತಾಣವನ್ನು ರೂಪಿಸಲಾಗಿದೆ. ಇದರಿಂದಾಗಿ ಅಧಿಕೃತ ಆಪ್‌ಗಳ ಮಾಹಿತಿಯನ್ನು ಪಡೆಯುವುದು ಸುಲಭವಾಗಿದೆ. (apps.karnataka.gov.in)
  • ರಾಜ್ಯದ ದತ್ತಾಂಶ ಸಂರಕ್ಷಣೆ ಕುರಿತು ಡಾಟಾ ಸಂರಕ್ಷಣಾ ನೀತಿಸೂತ್ರಗಳನ್ನು ಸರ್ಕಾರವು ಪ್ರಕಟಿಸಿದೆ. ಸೈಬರ್‌ ಸೆಕ್ಯುರಿಟಿ ಕುರಿತ ಇನ್ನೊಂದು ದಾಖಲೆಯ ಪರಾಮರ್ಶೆ ಮಾಡಿದ್ದೇನೆ.
  • ಹಲವು ಕೋವಿಡ್‌ ಡ್ಯಾಶ್‌ಬೋರ್ಡ್‌ ಗಳು ಇದ್ದದ್ದನ್ನು ಒಂದೇ ಡ್ಯಾಶ್‌ಬೋರ್ಡ್‌ ಮಾಡಿಸುವ ಆರಂಭಿಕ ಕಾರ್ಯದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ನಾನೂ ಪ್ರಮುಖವಾಗಿ ಭಾಗವಹಿಸಿದ್ದೆ.
  • ರಾಜ್ಯ ಸರ್ಕಾರದ ಹಲವು ಇ – ಆಡಳಿತ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆಯುವಲ್ಲಿಯೇ ನನ್ನ ಮೊದಲ ಆರು ವಾರಗಳು ಕಳೆದಿದ್ದವು. ಈವರೆಗೆ ಜನಹಿತ, ಮೊಬೈಲ್‌ ಒನ್‌ ಆಪ್‌ಗಳು, ಮಾಹಿತಿ ಕಣಜ, ಪಬ್ಲಿಕ್‌ ಗ್ರೀವಾನ್ಸ್‌ ರಿಡ್ರೆಸಲ್‌ ವ್ಯವಸ್ಥೆ, ಕಾವೇರಿ ತಂತ್ರಾಂಶ, ಇ – ಮಾಪನ ತಂತ್ರಾಂಶ, ಆನ್‌ಲೈನ್‌ ಮಾಹಿತಿ ಹಕ್ಕು ತಾಣ, – ಹೀಗೆ ಹಲವು ತಂತ್ರಾಂಶಗಳ ಸಭೆಗಳಲ್ಲಿ ಭಾಗಿಯಾಗಿ ಜನಬಳಕೆ ಕುರಿತ ಅಂಶಗಳನ್ನು ಗಮನಕ್ಕೆ ತರಲಾಗಿದೆ.
  • ಮಾನ್ಯ ಮುಖ್ಯಮಂತ್ರಿಯವರಿಗೆ ಈ ಕೆಳಕಂಡ ಸಂಗತಿಗಳ ಬಗ್ಗೆ ಪತ್ರ ಬರೆಯಲಾಗಿದೆ:
    1. ೨೦೨೦-೨೧ ರಾಜ್ಯ ಬಜೆಟ್‌ಗೆ ವಿವಿಧ ಇಲಾಖೆಗಳ ಮಾಹಿತಿ ತಂತ್ರಜ್ಞಾನ ಕಾರ್ಯಗಳ ಕುರಿತಾಗಿ ಸಲಹೆಗಳು.
    2. ಕರ್ನಾಟಕ ೨೦೨೦-೨೧ ಆಯವ್ಯಯದಲ್ಲಿ ಇ-ಆಡಳಿತ ಇಲಾಖೆಗೆ ಸಂಬಂಧಿಸಿದಂತೆ ಸಲಹೆಗಳು.
    3. ಕರ್ನಾಟಕ ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸಲು ಕೋರಿಕೆ.
    4. ಸರ್ಕಾರದ ಜಾಲತಾಣ ಸುಧಾರಿಸಿ ರಾಷ್ಟ್ರೀಯ ಮೌಲ್ಯಮಾಪನದಲ್ಲಿ ಹೆಚ್ಚಿನ ಶ್ರೇಯಾಂಕ ಗಳಿಸುವ ಬಗ್ಗೆ ಪತ್ರ
    5. ರಾಜ್ಯ ಸರ್ಕಾರದ ಟೆಂಡರ್‌ಗಳಲ್ಲಿ (ಪಬ್ಲಿಕ್‌ ಪ್ರೊಕ್ಯೂರ್‌ಮೆಂಟ್‌) ಸ್ಟಾರ್ಟಅಪ್‌ ಸಂಸ್ಥೆಗಳಿಗೆ ಬೆಂಬಲ ನೀಡುವ ಕುರಿತು.
    6. ಕನ್ನಡ ಲಿಪಿಯ ವೆಬ್ ವಿಳಾಸ ಮತ್ತು ಕನ್ನಡ ಲಿಪಿಯ ಇಮೈಲ್‌ ಸೇವೆ ಆರಂಭಿಸಲು ಕೋರಿಕೆ
    7. ಮಾದರಿ ವಿನ್ಯಾಸ ಅಳವಡಿಸುವ ಪ್ರಕ್ರಿಯೆ ವಿಳಂಬವನ್ನು ನಿವಾರಿಸುವ ಕುರಿತು ಪ್ರಸ್ತಾವನೆ
    8. ದಸರಾ ವಸ್ತುಪ್ರದರ್ಶನದಲ್ಲಿ ಚೀನೀ ವಸ್ತುಗಳ ಮಾರಾಟ ನಿಷೇಧಿಸಿರುವ ದಿಟ್ಟಕ್ರಮಕ್ಕೆ ಅಭಿನಂದನೆ ಮತ್ತು ದಸರಾ ಕುರಿತು ಕೆಲವು ಸಲಹೆಗಳು.
    9. ಯುನಿಕೋಡ್ ಕನ್ಸೊರ್ಟಿಯಮ್ ನ ಎನ್ ಕೋಡಿಂಗ್‌ ನಕಾಶೆಯಲ್ಲಿ ತುಳು ಲಿಪಿಯನ್ನು ಪಟ್ಟೀಕರಣ ಮಾಡುವ ಬಗ್ಗೆ
    10. ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ನಿರ್ವಹಿಸುವ ಎರಡು ಮುಖ್ಯ ಪ್ರಸ್ತಾವನೆಗಳಾದ KiGLiMS ಮತ್ತು AGOMS ತಂತ್ರಾಂಶಗಳನ್ನು ರೂಪಿಸಿ ಕಾನೂನು ಪ್ರಕರಣಗಳ ನಿರ್ವಹಣಾ ಕಾರ್ಯದಕ್ಷತೆ ಹೆಚ್ಚಿಸುವ ಬಗ್ಗೆ
    11. ಕರ್ನಾಟಕ ಸರ್ಕಾರದ ಇ – ಆಡಳಿತ ಮತ್ತು ಇತರೆ ಎಲ್ಲಾ ಇಲಾಖೆ, ಸಂಸ್ಥೆಗಳಲ್ಲಿ ರೂಪುಗೊಳ್ಳುತ್ತಿರುವ ವಿವಿಧ ಆಪ್‌ಗಳು ಮತ್ತು ತಂತ್ರಾಂಶಗಳ ಕ್ರೋಡೀಕೃತ ಪಟ್ಟಿಯನ್ನು (IT TOOL INVENTORY) ಹೊಂದುವ ಮತ್ತು ಸಂಬಂಧಿತ ತಾಂತ್ರಿಕ ಅಗತ್ಯಗಳ ಬಗ್ಗೆ
    12. ಕರ್ನಾಟಕ ಸರ್ಕಾರದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶದ ಮತ್ತು ಸಂಬಂಧಿತ ಸಂಗತಿಗಳ ಸುಧಾರಣೆ ಕುರಿತು ಮನವಿ
    13. ಕರ್ನಾಟಕ ೨೦೨೧-೨೨ ರ ಆಯವ್ಯಯದಲ್ಲಿ ಇ – ಆಡಳಿತ ಇಲಾಖೆಯ ಮತ್ತು ವಿವಿಧ ಇಲಾಖೆಗಳ ತಂತ್ರಜ್ಞಾನ ಸಂಬಂಧೀ ಕಾರ್ಯಯೋಜನೆಗಳಿಗೆ ಸಂಬಂಧಿಸಿದಂತೆ ಸಲಹೆಗಳು
    14. ಇ – ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನಕ್ಕಾಗಿ ಸಮಗ್ರ ಚಲನಶೀಲ ದೇಸೀಕರಣ ತಂತ್ರಾಂಶ ಸ್ಥಾಪನೆ (Integrated Dynamic Localisation Software) ಪ್ರಸ್ತಾವನೆ
    15. ಕರ್ನಾಟಕ ಸರ್ಕಾರದ ತಂತ್ರಾಂಶಗಳು ಮತ್ತು ಆಪ್‌ಗಳಲ್ಲಿ ಇರುವ ಆಕ್ಸೆಸಿಬಿಲಿಟಿ ಅವಶ್ಯಕತೆಗಳನ್ನು ಪೂರೈಸುವ ಕುರಿತು ಮನವಿ
  • ಕರ್ನಾಟಕ ಸರ್ಕಾರದ ಎಲ್ಲ ಜಾಲತಾಣಗಳೂ ಕಡ್ಡಾಯವಾಗಿ ಸರ್ಕಾರದ ಮಾದರಿ ಜಾಲತಾಣ ವಿನ್ಯಾಸವನ್ನೇ ಅಳವಡಿಸುವುದನ್ನು ಕಡ್ಡಾಯ ಮಾಡುವ ಆದೇಶ ಈಗ ಪ್ರಕಟವಾಗಿದೆ.
  • ಇ – ಕನ್ನಡ ಎಂಬ ಪೋರ್ಟಲ್‌ ಆರಂಭಿಸಿ ಈಗ ಪ್ರಯೋಗಾರ್ಥ ಬಳಕೆಯಲ್ಲಿದೆ : ekannada.karnataka.gov.in)
  • ಅದರಲ್ಲಿ ಇರುವ ಪದಕಣಜ ಜಾಲತಾಣದಲ್ಲಿ ( padakanaja.karnataka.gov.in) ೨೦೦ಕ್ಕೂ ಹೆಚ್ಚು ನಿಘಂಟು – ಪದಕೋಶಗಳನ್ನು ಪ್ರಕಟಿಸುವ ಕೆಲಸ ಆರಂಭವಾಗಿದೆ. ಈಗಾಗಲೇ ೯೦ಕ್ಕೂ ಹೆಚ್ಚು ನಿಘಂಟುಗಳ ಪ್ರಕಟಣೆಗೆ ಬೇಕಾದ ಹಕ್ಕು ಸ್ವಾಮ್ಯ ಸಿಕ್ಕಿದ್ದು ೫೦ಕ್ಕೂ ಹೆಚ್ಚು ನಿಘಂಟು – ಪದಕೋಶಗಳು ಪ್ರಕಟವಾಗಿವೆ. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಜ್ಞಾನ – ತಂತ್ರಜ್ಞಾನಗಳ ಮಾಹಿತಿಗಳನ್ನು ಒಂದೆಡೆ ನೀಡುವುದೇ ಇ – ಕನ್ನಡ ಪೋರ್ಟಲ್‌ನ ಉದ್ದೇಶವಾಗಿದೆ. ಈ ಮಾಹಿತಿಯನ್ನು ಆಪ್‌ ಮೂಲಕ ನೀಡುವ ಪ್ರಕ್ರಿಯೆ ಆರಂಭವಾಗಿದೆ.
  • ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಎಂಬ ಸರ್ಕಾರದ್ದೇ ಸಾಫ್ಟ್‌ವೇರ್‌ ತಯಾರಿಕಾ ಸಂಸ್ಥೆ ಇರುವುದೇ ಹಲವು ಇಲಾಖೆಗಳಿಗೆ ಗೊತ್ತಿರಲಿಲ್ಲ! ಕೆಲವು ಇಲಾಖೆಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.
  • ತುಳು, ಕೊಡವ,ಕೊಂಕಣಿ, ಅರೆಭಾಷೆ ಮತ್ತು ಬ್ಯಾರಿ ಭಾಷಾ ಅಕಾಡೆಮಿಗಳು ಆಯಾ ಭಾಷೆಗಳಲ್ಲೂ ಮಾಹಿತಿ ಕೊಡಬೇಕೆಂಬ ದೃಷ್ಟಿಯಿಂದ ಕನ್ನಡ – ಇಂಗ್ಲಿಶ್‌ ಜೊತೆಗೆ ಇನ್ನೊಂದು ಭಾಷೆಯ ಅವಕಾಶ ಇರುವ ಜಾಲತಾಣಗಳನ್ನು ರೂಪಿಸಲು ಸಲಹೆ ನೀಡಿದ್ದೇನೆ .

ಕನ್ನಡ ಮತ್ತು ತಂತ್ರಜ್ಞಾನ

  1. ಕನ್ನಡ ಭಾಷಾ ತಂತ್ರಜ್ಞಾನ ಕುರಿತ ಹತ್ತು ವಿಸ್ತೃತ ಯೋಜನಾ ವರದಿಗಳ ಬಗ್ಗೆ ಎರಡು ದಿನಗಳ ಕಾರ್ಯಾಗಾರ ನಡೆಸಿ, ಸಮುದಾಯದಲ್ಲಿರುವ ತಜ್ಞರಿಗೇ ಈ ಬಗ್ಗೆ ಕಡತ ರೂಪಿಸಲು ಕೋರಿದ್ದು, ಅವುಗಳನ್ನು ಸಂಗ್ರಹಿಸಲಾಗಿದೆ. ಈ ವರದಿಗಳನ್ನು ಸರ್ಕಾರದಿಂದ ಪರಿಶೀಲಿಸಿ ಅನುಮೋದಿಸಲು ಸಮಿತಿಯೊಂದನ್ನು ರಚಿಸಿದ ಆದೇಶವು (ಜುಲೈ 20, 2021) ಹೊರಬಿದ್ದಿದೆ.
  2. ಕನ್ನಡ ಭಾಷಾ ತಂತ್ರಜ್ಞಾನ ಕುರಿತಂತೆ ಸಮುದಾಯದಲ್ಲಿರುವ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ. “ಸಮಿತಿಯಲ್ಲ, ಸಮುದಾಯ” ಎಂಬ ನಿಲುವನ್ನು ಆದಷ್ಟೂ ಪಾಲಿಸಿಕೊಂಡು ಬರಲಾಗುತ್ತಿದೆ.
  3. ಕನ್ನಡ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಾಲ್ಕು ಸರ್ಕಾರಿ ಆದೇಶಗಳು ಜಾರಿಯಾಗಿವೆ:
  4. ಕನ್ನಡ ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಸ್ಥೂಲ ಮಾನದಂಡಗಳು
  5. ಇ-ಕನ್ನಡ ಕಲಿಕಾ ಅಕಾಡೆಮಿ ಹಿನ್ನೆಲೆಯಲ್ಲಿ ಪೋರ್ಟಲ್‌ ನಿರ್ವಹಣೆ ಮಾಡಲು ಸರ್ಕಾರ ಮತ್ತು ಸಮುದಾಯಗಳ ಪ್ರತಿನಿಧಿಗಳಿರುವ ಸಮಿತಿ ರಚನೆ
  6. ಕನ್ನಡ ಪದಕಣಜ – ದೇಸೀಕರಣದ ಕೆಲಸಕ್ಕಾಗಿ ತಜ್ಞರ ಸಮಿತಿ ರಚನೆ
  7. ಇ-ಆಡಳಿತದಲ್ಲಿ ಕನ್ನಡ ಪದಗಳಿಗಾಗಿ ತಜ್ಞರ ಸಮಿತಿ ರಚನೆ
  8. ರಾಜ್ಯ ಸರ್ಕಾರವು ಕನ್ನಡದ ವೆಬ್‌ ವಿಳಾಸವನ್ನು (ಕರ್ನಾಟಕ.ಸರ್ಕಾರ.ಭಾರತ) ನೋಂದಾಯಿಸಿದ್ದು ಅದೀಗ ಚಾಲ್ತಿಯಲ್ಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದಂತೆ ಹಲವು ಸರ್ಕಾರಿ ಜಾಲತಾಣಗಳ ಕನ್ನಡ ವೆಬ್‌ ವಿಳಾಸಗಳು ಈಗ ನೋಂದಣಿಯಾಗಿವೆ. ಕನ್ನಡ ಅಥವಾ ಈಗಾಗಲೇ ಬಳಕೆಯಲ್ಲಿದ್ದ ಇಂಗ್ಲಿಶ್‌ – ಈ ಎರಡೂ ವೆಬ್‌ ವಿಳಾಸಗಳಲ್ಲಿ ಯಾವುದನ್ನು ಬಳಸಿದರೂ ಅದೇ ಜಾಲತಾಣಕ್ಕೆ ಹೋಗುವುದರಿಂದ ಕನ್ನಡೇತರರಿಗೆ ಇದ್ದ ಭಾಷಾ ಸಮಸ್ಯೆಯೂ ನಿವಾರಣೆಯಾಗಿದೆ.
  9. ಕನ್ನಡ ಲಿಪಿಯ ಇ – ಅಂಚೆ ಸೇವೆಯನ್ನು ಪ್ರಯೋಗಾರ್ಥ ಬಳಸಿದ್ದು, ಈಗ ಸಾರ್ವಜನಿಕರಿಗೆ ಇದನ್ನು ಒದಗಿಸುವ ಪ್ರಕ್ರಿಯೆ ಆರಂಭವಾಗಿದೆ.
  10. ಕಣಜ ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಇರುವ ಲೋಪದೋಷಗಳನ್ನು (ಪ್ರತ್ಯೇಕವಾದ ಪ್ರತಿಯಲ್ಲಿ) ಸರಿಪಡಿಸಲಾಗಿದ್ದು ಅದನ್ನು ಸರ್ಕಾರದ ವೆಬ್‌ವಿಳಾಸಕ್ಕೆ ವರ್ಗಾಯಿಸಲಾಗಿದೆ.
  11. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಅಧೀನ ಸಂಸ್ಥೆಗಳ ಜ್ಞಾನಸಂಗ್ರಹವನ್ನು ಕಣಜ ಜಾಲತಾಣಕ್ಕೇ ನೀಡಿ ಅಲ್ಲಿ ಪ್ರಕಟಿಸುವ ಬಗ್ಗೆ ಸಚಿವರಾಗಿದ್ದ ಶ್ರೀ ಅರವಿಂದ ಲಿಂಬಾವಳಿ ಆದೇಶ ನೀಡಿದ್ದಾರೆ.
  12. ಕನ್ನಡ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ತರಲು ಬೇಕಾದ ಡಿಟಿಪಿ ಕೆಲಸಗಳ ಮತ್ತು ಕರಡು ತಿದ್ದುವ ಕೆಲಸಗಳ ದರಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹೊಸ ಕಾಲದ ಯುನಿಕೋಡ್‌ / ಆನ್‌ಲೈನ್‌ ಕಾರ್ಯಗಳಿಗೆ ತಕ್ಕಂತೆ ಈ ದರಗಳನ್ನು ಹೆಚ್ಚಿಸಲಾಗಿದೆ.
  13. ಕಣಜ ಜಾಲತಾಣದಲ್ಲಿದ್ದ ೮೦೦ಕ್ಕೂ ಹೆಚ್ಚು ಪಿಡಿಎಫ್‌ ಕೃತಿಗಳನ್ನು ಓಸಿಆರ್‌ ಮೂಲಕ ಪಠ್ಯವಾಗಿ (ವೈಯಕ್ತಿಕ ಪ್ರಯತ್ನದಿಂದ) ಪರಿವರ್ತಿಸಿದ್ದು, ಇದರ ಡಿಟಿಪಿ ಮೌಲ್ಯವು (ಸಮಯ ಉಳಿದಿದ್ದನ್ನು ಹೊರತುಪಡಿಸಿ) ಸುಮಾರು ೫೦ ಲಕ್ಷ ರೂ.ಗಳಾಗಿವೆ.
  14. ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜೊತೆಗೆ 25 ಇಲಾಖೆಗಳ ಜಾಲತಾಣಗಳ ಪರಿವೀಕ್ಷಣೆ ನಡೆದಿದೆ. ಇವನ್ನೆಲ್ಲ ಆಯಾ ಇಲಾಖೆಗಳ ಅಧಿಕಾರಿಗಳೇ ಸರಿಪಡಿಸಬೇಕೆಂದು ಸೂಚಿಸಲಾಗಿದೆಯಲ್ಲದೆ ಅವರಿಗೆ ಅನುವಾದ ಮುಂತಾದ ಕೆಲಸಗಳಿಗೆ ಬೇಕಾಗುವ ಮಾಹಿತಿ ನೆರವನ್ನೂ ನೀಡಲಾಗುವುದು ಎಂದು ತಿಳಿಸಲಾಗಿದೆ.

ಸ್ವಯಂಸೇವಾ ಕಾರ್ಯಗಳು

  1. ಕರ್ನಾಟಕ ತುಳು ಅಕಾಡೆಮಿಯು ಅಂಗೀಕರಿಸಿದ ತುಳು ಲಿಪಿಗೆ ಮನ್ನಣೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಅದನ್ನು ಭಾರತೀಯ ಭಾಷಾ ಸಂಸ್ಥಾನವು ತಜ್ಞ ಸಮಿತಿಯ ಮೂಲಕ ಪರಿಶೀಲಿಸಿ ಅನುಮೋದಿಸಿದ ಮೇಲೆ ಸಚಿವರಾಗಿದ್ದ ಶ್ರೀ ಅರವಿಂದ ಲಿಂಬಾವಳಿಯವರ ಸೂಚನೆಯಂತೆ, ಯುನಿಕೋಡ್‌ ನಕಾಶೆ ಪಟ್ಟಿಯಲ್ಲಿ ಸೇರಿಸಲು ತುಳು ಅಕಾಡೆಮಿಗೆ ಸೂಚನೆ ನೀಡಲಾಗಿದೆ.
  2. ಅರೆಭಾಷೆಗೆ ಐಎಸ್‌ಓ ಕೋಡ್‌ ನಿಗದಿಪಡಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು ಕೆಲಸ ಆರಂಭವಾಗಿದೆ.
  3. ಕೊರೋನಾ ಕುರಿತಂತೆ ಕೇಂದ್ರ ಸರ್ಕಾರದ ಮಾಹಿತಿಗಳನ್ನು ಸ್ವಯಂಸೇವಾ ಕಾರ್ಯಕರ್ತರ ಮೂಲಕ ಕನ್ನಡಕ್ಕೆ ಅನುವಾದಿಸಿ ವಿನ್ಯಾಸ ಮಾಡಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
  4. ಕೊರೋನಾ ಕುರಿತಂತೆ ೨೦ಕ್ಕೂ ಹೆಚ್ಚು ಜಾಗೃತಿ ವಿಡಿಯೋಗಳನ್ನು ಸ್ವಯಂಸೇವಾ ಕಾರ್ಯಕರ್ತರ ಮೂಲಕ ನಿರ್ಮಿಸಿ ವ್ಯಾಪಕವಾಗಿ ಹಂಚಲಾಗಿದೆ.
  5. ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಡಾ. ಎಲ್‌ ಆರ್‌ ಹೆಗಡೆಯವರು ಸಂಗ್ರಹಿಸಿದ ಆರು ಜಾನಪದ ಸಂಗ್ರಹಗಳ ಡಿಜಿಟಲ್‌ ಪ್ರತಿಗಳನ್ನು ತಯಾರಿಸಿ (ಇದಕ್ಕೂ ಸಮಾಜತಾಣದ ಸ್ವಯಂಸೇವಾ ಕಾರ್ಯಕರ್ತರು ನೆರವು ನೀಡಿದ್ದರು) ಕಣಜ ಮತ್ತು ಭಾರತವಾಣಿ ಅಂತರಜಾಲಕ್ಕೆ ನೀಡಲಾಗಿದೆ. ಈಗ ಇನ್ನೂ ಆರು ಪುಸ್ತಕಗಳು ತಯಾರಿ ಹಂತದಲ್ಲಿವೆ.
  6. ವೈಯಕ್ತಿಕವಾಗಿ ಕೊರೋನಾ ಪಿಡುಗಿನ ಸಂಕಷ್ಟಕ್ಕೆ ಸಿಲುಕಿದವರಿಗೆ ಕೈಲಾದ ಆರ್ಥಿಕ ನೆರವನ್ನು ನೀಡಲಾಗಿದೆ. ಕೆಲವರಿಗೆ ಕೆಲಸ ಕೊಡಿಸಲು ಯತ್ನಿಸಲಾಗಿದೆ.
  7. ಮೈಸೂರು ದಸರಾ ಮಹೋತ್ಸವದಲ್ಲಿ ಚೀನಾದ ಉತ್ಪನ್ನಗಳ ಬದಲಿಗೆ ದೇಸಿ ಉತ್ಪನ್ನಗಳನ್ನು ಹೇಗೆ ಮಾರುಕಟ್ಟೆ ಮಾಡಬಹುದೆಂದು ಮಾನ್ಯ ಮುಖ್ಯಮಂತ್ರಿಯವರಿಗೆ ಹಲವು ಸಲಹೆಗಳನ್ನು ಸಲ್ಲಿಸಿದ್ದೇನೆ.
  8. ಸ್ಟಾರ್ಟಪ್‌ (ನವೋದ್ಯಮ) ಸಂಸ್ಥೆಗಳಿಗೆ ಸರ್ಕಾರಿ ಪ್ರೊಕ್ಯೂರ್‌ಮೆಂಟ್‌ ಪ್ರಕ್ರಿಯೆಯಲ್ಲಿ ವಿನಾಯ್ತಿಗಳನ್ನು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದು ಇದಾಗಲೇ ಜಾರಿಯಾಗಿದೆ.
  9. ವಿಶಿಷ್ಟ ಚೇತನರ ರಂಗದ ಪದಕೋಶ ರಚಿಸಲು ಇದ್ದ ಪ್ರಸ್ತಾವನೆಯಲ್ಲಿ ಭಾಗಿಯಾಗಿ ಅದನ್ನು ರೂಪಿಸಲು ತಯಾರಿ ನಡೆದಿದೆ.
  10. ರಾಷ್ಟ್ರೀಯ ಹಸ್ತಪ್ರತಿ ಅಭಿಯಾನದ ರಾಷ್ಟ್ರೀಯ ಉನ್ನತಾಧಿಕಾರದ ಸಮಿತಿಯ ಸದಸ್ಯನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನನ್ನ ಮಿತಿಯಲ್ಲಿ ಕೆಲಸ ಮಾಡಲು ತಜ್ಞರ ಜೊತೆ ಸೇರಿ ಒಂದು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಈ ಹಿಂದೆ ತಾಳೆಯೋಲೆ ಕೃತಿಗಳ ಸಂರಕ್ಷಣೆಗಾಗಿ ಒಂದು ದಿನದ ಚಿಂತನಾ ಕಾರ್ಯಾಗಾರ ನಡೆಸಿದ್ದೇನೆ. ಈ ಕುರಿತು ಕೆಲಸ ಪ್ರಗತಿಯಲ್ಲಿದೆ.

ನನ್ನ ಕೆಲಸಗಳನ್ನು ಅಂಕಿ ಅಂಶಗಳ ಹಿನ್ನೆಲೆಯಲ್ಲಿ ನೋಡಬಯಸುವವರಿಗೆ, ಸಿಬ್ಬಂದಿ ಮಾಹಿತಿ ಪಡೆಯುವವರಿಗೆ ಕೆಲವು ಅಂಶಗಳನ್ನು ಇಲ್ಲಿ ಕೊಡಬಯಸುತ್ತೇನೆ. ಕೊಂಡಿ: https://bit.ly/2HAy2dw

ನನಗೆ ಒಟ್ಟು ೫೧೩ ಪತ್ರಗಳು ಬಂದಿದ್ದು, ನಾನು ೧೬೬ ಪತ್ರಗಳನ್ನು ಬರೆದಿದ್ದೇನೆ. ಒಟ್ಟು ೨೫೧ ಸಂದರ್ಶಕರನ್ನು ಭೇಟಿ ಮಾಡಿದ್ದೇನೆ. ಕ ಅ ಪ್ರಾಧಿಕಾರ ನಡೆಸಿದ ೨೫ ಜಾಲತಾಣ ಪರಾಮರ್ಶನಾ ಸಭೆಗಳಲ್ಲಿ ಭಾಗವಹಿಸಿದ್ದೇನೆ. ೫೭ ವಿಡಿಯೋ ಸಭೆಗಳು ನಡೆದಿವೆ. ನಾಲ್ಕು ಸಲ ಬೆಂಗಳೂರಿನಿಂದ ಹೊರಗೆ ಅಧಿಕೃತ ಪ್ರವಾಸ ಮಾಡಿದ್ದೇನೆ. ಕಣಜ ಜಾಲತಾಣಕ್ಕಾಗಿ ಹಲವು ಸಲ ಸಭೆ ನಡೆಸಿದ್ದೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಂತ್ರಜ್ಞಾನ, ಆನ್‌ಲೈನ್‌ ಕನ್ನಡ ಕಲಿಕೆ ಮುಂತಾದ ಸಭೆಗಳಲ್ಲೂ ಭಾಗವಹಿಸಿದ್ದೇನೆ.

ನಾನು ಮುಖ್ಯಮಂತ್ರಿಯವರಿಗೆ ನೀಡಿದ ಕೆಲವು ಸಲಹಾತ್ಮಕ ಪತ್ರಗಳನ್ನು ಮಾಹಿತಿಗಾಗಿ ಈ ಕೊಂಡಿಯಲ್ಲಿ ಕೊಟ್ಟಿದ್ದೇನೆ.

ಕೊಂಡಿ: https://drive.google.com/drive/folders/1t02Zzxw_KyHecld_giiEbMgmvrZ_EwCh?usp=sharing

ನನ್ನನ್ನು ಈ ಹುದ್ದೆಗೆ ನೇಮಿಸಿ ಇಷ್ಟು ಕೆಲಸ ಮಾಡಲು ಅವಕಾಶ ನೀಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ ಎಸ್‌ ಯಡಿಯೂರಪ್ಪನವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಈ ಕೆಲಸಗಳಿಗೆ ನೆರವು ನೀಡಿದ ನನ್ನ ಕಚೇರಿ ಸಿಬ್ಬಂದಿಗೆ, ಇ – ಆಡಳಿತ ಇಲಾಖೆಯ ಅಧಿಕಾರಿಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಶ್ರೀ ಸಿ ಟಿ ರವಿ ಮತ್ತು ಶ್ರೀ ಅರವಿಂದ ಲಿಂಬಾವಳಿ ಅವರಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮತ್ತು ಕನ್ನಡ ಐಟಿ ಸ್ವಯಂಸೇವಾ ಕಾರ್ಯಕರ್ತರಿಗೆ ನನ್ನ ವಂದನೆಗಳು.

ತಮ್ಮ ವಿಶ್ವಾಸಿ

ಬೇಳೂರು ಸುದರ್ಶನ

ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪನವರ ಸಲಹೆಗಾರ (ಇ – ಆಡಳಿತ) (ನವೆಂಬರ್‌ ೨೦೧೯-ಜುಲೈ ೨೦೨೧)

ನನ್ನ ಖಾಸಗಿ ಇಮೈಲ್‌: belurusudarshana@gmail.com

ಜಾಲತಾಣ: www.ಬೇಳೂರುಸುದರ್ಶನ.ಭಾರತ

……………………………………………………..

ಉತ್ಕೃಷ್ಟತೆ ಎಂದೂ ಆಕಸ್ಮಿಕವಲ್ಲ; ಅದು ಉನ್ನತ ಉದ್ದೇಶ, ಪ್ರಾಮಾಣಿಕ ಯತ್ನ, ಜಾಣ ನಿರ್ದೇಶನ ಮತ್ತು
ಕುಶಲ ಜಾರಿಯ ಒಟ್ಟಾರೆ ಫಲಿತಾಂಶ; ಅದು ಹಲವು ಪರಿಹಾರಗಳ ಪೈಕಿ ಕಂಡುಕೊಂಡ ವಿವೇಚನಾಯುಕ್ತ ಆಯ್ಕೆ.

-‌ ವಿಲಿಯಂ ಏಡೆಲ್ಬರ್ಟ್ ಫಾಸ್ಟರ್

……………………………………………………..

 

 

Share. Facebook Twitter Pinterest LinkedIn Tumblr Email
Previous Articleಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
Next Article ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!

June 5, 2024

Comments are closed.

ಸುದ್ದಿ
  • ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!
  • ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!
  • ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ
  • ರಾಮನಗರದ ಹೃದಯ
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!
  • ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ
  • ಇ-ದಕ್ಷಿಣ್ ಡಾಟ್‌ಕಾಮ್‌ : ಮಿಸ್ ಕಾಲ್‌ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!
  • ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!
  • ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!
  • ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ಟೆಸೆರಾಕ್ಟ್‌ ಬಂತು ದಾರಿ ಬಿಡಿ; ಓಸಿಆರ್‌ ಮಾಡೋ ಚಿಂತೆ ಬಿಡಿ!
  • ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ
  • ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • Pacific Marine Climate Change Report Card 2018
  • READ: THE PERSONAL DATA PROTECTION BILL, 2018
  • New study from CSE exposes massive environmental dumping of old and used vehicles in Africa and South Asia
  • ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
  • ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  
  • “ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!
  • ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು
  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
  • ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!
  • ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್‌ನಲ್ಲಿ ಭಾಗವಹಿಸಿ! ಅಬ್ದುಲ್‌ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್‌ಲೈನ್‌ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ
  • ಶಂಕರ ಶರ್ಮರು ನ್ಯೂಝಿಲೆಂಡ್‌ಗೆ – ಉನ್ನತ ಅಧ್ಯಯನಕ್ಕೆ – ಹೊರಟಿದ್ದಾರೆ, ಶುಭಾಶಯ ಹೇಳೋಣ!
  • Prashant Kishor : Disruptive, Harmful
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!
  • ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]
  • ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ಆರೋಗ್ಯ ಇಲಾಖೆಗೆ ಮಾನವಹಕ್ಕು ಆಯೋಗದ ಆದೇಶ : ಕೊನೆಗೂ ನ್ಯಾಯ ಪಡೆದ ಉಡುಪಿಯ ದಾದಿಯರು
  • ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ
  • SHANKAR SHARMA: CREATION OF A SUSTAINABLE URBAN ENERGY SYSTEM
  • National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)
  • ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!
  • `ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?
  • ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು
  • ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ
  • Prayer for consideration in front of the Hon’ble High Court for the purpose of granting relief to the Endosulfan Victims
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Dattaji writes about his mother Meenakshi Amma
  • ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ 42 ವರ್ಷಗಳ ಬದಲಿಗೆ ಕೇವಲ 5 ವರ್ಷಗಳ ವೇತನ ನೀಡುವ ಹುನ್ನಾರ
  • AKKU LEELA IMAGES FOR DOWNLOAD
  • ಕೊಡಗು-ಕಾಸರಗೋಡು ಮಡಗಾಸ್ಕರ್‌ಗೆ ಸೇರಿದ್ದು!
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • Future of solar energy seems bleak if sector reforms do not pull through
  • Climate Change Report Warns of Dramatically Warmer World This Century
  • ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು
  • ಅಕ್ಕು ಮತ್ತು ಲೀಲಾ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ಸಚಿವ ಕಾಗೇರಿಯವರಿಗೆ ಮಿತ್ರಮಾಧ್ಯಮ ಮನವಿ
  • 'ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ' ಶಂಕರಶರ್ಮ ಪುಸ್ತಕ ಬಿಡುಗಡೆಗೆ ಬನ್ನಿ! (ಅಕ್ಟೋಬರ್‌ ೧೦)
  • Law abiding citizens and law disobeying Government
  • Bhoomi College offers One year Programme on Science and Management for Sustainable Living
  • ಹತ್ತನೆಯ ವರ್ಷಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಾ: ಶುಭಾಶಯ ಹೇಳಿ!
  • ಶುಕ್ರ ಸಂಕ್ರಮ: ಪುಸ್ತಕ ಓದಿ
  • THE COPYRIGHT (AMENDMENT) BILL, 2012
  • ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ
  • SC upholds constitutional validity of Right to Education Act : Judgement FULL TEXT
  • ನನ್ನ ಹಿಡನ್‌ ಅಜೆಂಡಾ ಮತ್ತು ಇತರ ಕಥೆಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ವಿರೋಧಿಸಿ: ಮುಖ್ಯಮಂತ್ರಿಯವರಿಗೆ ಮಿತ್ರಮಾಧ್ಯಮ ಸಹಿತ ಹಲವು ಸಂಘಟನೆಗಳ ಮನವಿ
  • ಮಿತ್ರಮಾಧ್ಯಮ ಮ್ಯಾಗಜಿನ್‌ ಸಂಚಿಕೆ ೧ ಓದಿ
  • ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ
  • ‘ಇಜ್ಞಾನ’ ಸಂಚಿಕೆ ಓದಿ
  • ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!
  • ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!
  • SUPREME COURT BANS MINING IN BELLARY DISTRICT
  • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
  • BAN ENDOSULFAN PERMANENTLY, CONDUCT CENSUS OF VICTIMS, PROVIDE PERMANENT REHABILITATION
  • ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ
  • Feb 5,6: Millet Mela in Bangalore – Meet the Millet! Say hello to HEALTH
  • Scandalous Decision of Jairam Ramesh to OK POSCO project
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • Publish All the Radia Tapes
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?
  • “BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”
  • ಇಂಧನ ಬಡತನ: ಜಾಗತಿಕ ವರದಿ ಹೇಳಿದ್ದೇನು?
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ
  • ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
  • ವೇದಾಂತ : ಅಗೆದಷ್ಟೂ ಅವಾಂತರ
  • ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ
  • ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು
  • Future Electricity Supply Options for India
  • How essential is the nuclear power option for India?
  • `ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ
  • ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!
  • ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ
  • ಹೀಗಿದ್ದರು ನಾನಾಜಿ ದೇಶಮುಖ್
  • Media Fest Presentation by Beluru Sudarshana
  • January 23: Participate in the Public Consultation (Bangalore) on Bt Brinjal
  • ಡಿಸೆಂಬರ್ ೧೩ರಂದು ಮೈಸೂರಿನಲ್ಲಿ ಬದನೆ ಮೇಳ
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • Please visit www.mitramaadhyama.co.in
  • Shilpashree Investigative Report Award 2010
  • ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ
  • ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ
  • Still nostalgic about Bharatiya Janasangh and old BJP? Read this !
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ನನ್ನ ಪ್ರೀತಿಯ ದತ್ತಾಜಿ
  • ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
  • DNA: Delayed , No Analysis?
  • ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !
  • Bhairappa’s interview 2002
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.