Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಸುದ್ದಿ»ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು
ಸುದ್ದಿ

ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು

ಬೇಳೂರು ಸುದರ್ಶನBy ಬೇಳೂರು ಸುದರ್ಶನJune 7, 2017Updated:May 19, 2025No Comments5 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಸದ್ಯದಲ್ಲೇ ಬಿಡುಗಡೆಯಾಗಲಿರುವ ನುಡಿ ೬.೦ ಆವೃತ್ತಿಯು ಸಂಪೂರ್ಣವಾಗಿ ಯುನಿಕೋಡ್‌ ಅಕ್ಷರಗಳನ್ನು ಮಾತ್ರ ಹೊಂದಲಿದ್ದು, ಮುಕ್ತ ತಂತ್ರಾಂಶವಾಗಿಯೂ ಬಿಡುಗಡೆಯಾಗಲಿದೆ ಎಂದು ಕನ್ನಡ ಗಣಕ ಪರಿಷತ್ತಿನ ಶ್ರೀ ನರಸಿಂಹಮೂರ್ತಿಯವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್‌ ಜಿ ಸಿದ್ಧರಾಮಯ್ಯನವರು ನಡೆಸಿದ ಸಭೆಯಲ್ಲಿ ಪ್ರಕಟಿಸಿದ್ದಾರೆ. ಅಂದರೆ ಇನ್ನುಮುಂದೆ ನುಡಿ ತಂತ್ರಾಂಶವನ್ನು ಸಮುದಾಯದ ತಂತ್ರಜ್ಞರು ಸುಧಾರಿಸಬಹುದಾಗಿದೆ. ಹಳೆಯ ತಂತ್ರಾಂಶಗಳನ್ನೇ ಬಳಸುವುದಕ್ಕೆ ಕುಮ್ಮಕ್ಕು ಕೊಡುವ ಆಸ್ಕಿ ಫಾಂಟ್‌ಗಳನ್ನು ನಿರುತ್ತೇಜಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ಧರಿಸಿರುವುದು ಒಂದು ಅತ್ಯುತ್ತಮ ಬೆಳವಣಿಗೆಯಾಗಿದೆ.

ನುಡಿ ತಂತ್ರಾಂಶದ ಆರಂಭದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಧನಸಹಾಯ ನೀಡಿದ ಹಿನ್ನೆಲೆಯಲ್ಲಿ ಈಗಲಾದರೂ ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಬೇಕು ಎಂದು ಸಾರ್ವಜನಿಕ ಅಭಿಮತದ ಹಿನ್ನೆಲೆಯಲ್ಲಿ ಮಿತ್ರಮಾಧ್ಯಮದ ಟ್ರಸ್ಟಿಯಾಗಿರುವ ಶ್ರೀ ಬೇಳೂರು ಸುದರ್ಶನರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕಗಪದ ಈ ವಾಗ್ದಾನವು ಪ್ರಕಟವಾಗಿದ್ದು ಇದಕ್ಕಾಗಿ ಮಿತ್ರಮಾಧ್ಯಮವು ಕಗಪವನ್ನು ಅಭಿನಂದಿಸುತ್ತದೆ.

ಇದಲ್ಲದೆ ಮಿತ್ರಮಾಧ್ಯಮವು ಮಂಡಿಸಿದ ವಿವಿಧ ಬೇಡಿಕೆಗಳನ್ನು ಅತ್ಯಂತ ಕಾಳಜಿಪೂರ್ವಕವಾಗಿ ಪರಿಶೀಲಿಸಿದ ಶ್ರೀ ಸಿದ್ಧರಾಮಯ್ಯನವರು ಕನ್ನಡ ತಂತ್ರಾಂಶ ಚರ್ಚೆ ಮತ್ತು ಅಭಿವೃದ್ಧಿಗಾಗಿ `ಡಿಜಿಟಲ್‌ ಜಗಲಿ’ಯನ್ನು ಸ್ಥಾಪಿಸುವ ಕುರಿತು ಈ- ಆಡಳಿತ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆಗೆ ಮಾತುಕತೆ ನಡೆಸುವ ಭರವಸೆಯನ್ನು ನೀಡಿದ್ದಾರೆ.

ಅಲ್ಲದೆ ಕನ್ನಡದ ಕಲಿಕೆಗಾಗಿ ಹೊಸಕಾಲದ ಆನ್‌ಲೈನ್‌ ತರಗತಿಗಳನ್ನು ರೂಪಿಸಲು ಈಗಾಗಲೇ ಕೆಲಸ ಮುಂದುವರಿದಿದೆ ಎಂದು ಅವರು ಈ ಸಭೆಯಲ್ಲಿ ತಿಳಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಲಿಬ್ರೆ ಆಫೀಸ್‌ ತಂತ್ರಾಂಶ ಹಾಗೂ ಡಿಟಿಪಿ ರಂಗದಲ್ಲಿ ಸ್ಕ್ರೈಬಸ್‌ ತಂತ್ರಾಂಶ – ಹೀಗೆ ಎಲ್ಲೆಲ್ಲೂ ಮುಕ್ತ ಮತ್ತು ಉಚಿತ ತಂತ್ರಾಂಶಗಳನ್ನು ಬಳಸಲು ವ್ಯಾಪಕ ಜನಜಾಗೃತಿ ನಡೆಸಲು ಈ ಸಭೆಯಲ್ಲಿ ಸಹಮತಕ್ಕೆ ಬರಲಾಯಿತು. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ರಾಜ್ಯದ ಪ್ರಮುಖ ಪ್ರಕಾಶನ ಸಂಸ್ಥೆಗಳ ಮತ್ತು ಕನ್ನಡ ತಂತ್ರಾಂಶ ತಯಾರಕರ ಸಭೆಯನ್ನೂ ಆಯೋಜಿಸಲು ಶ್ರೀ ಸಿದ್ಧರಾಮಯ್ಯನವರು ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ಜಾಲತಾಣಗಳನ್ನು ಕನ್ನಡದಲ್ಲಿ ಪ್ರಮುಖವಾಗಿ ಪ್ರಕಟಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ ಶ್ರೀ ಎಸ್‌ ಜಿ ಸಿದ್ಧರಾಮಯ್ಯನವರು ಈ ಸಂದರ್ಭದಲ್ಲಿ ಈ-ಗವರ್ನೆನ್ಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಮಿತ್ರಮಾಧ್ಯಮವು ಈ ಸಭೆಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಇಟ್ಟಿತು:

ಮಿತ್ರಮಾಧ್ಯಮವು ಕನ್ನಡ ಮತ್ತು ಭಾರತೀಯ ಭಾಷಾ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವ ಸಂಸ್ಥೆಯಾಗಿದೆ. ಕನ್ನಡ ಭಾಷೆಯನ್ನು ಆಧುನಿಕ ಮಾಹಿತಿ ತಂತ್ರಜ್ಞಾನದ ಸಾಧನಗಳಲ್ಲಿ ಅಳವಡಿಸುವ ಮತ್ತು ಕನ್ನಡವನ್ನು ಬಳಸುವ ಕುರಿತು ಮಿತ್ರಮಾಧ್ಯಮವು ತಮ್ಮ ಘನ ನಾಯಕತ್ವದಲ್ಲಿ ಈ ಕೆಳಗಿನ ಕ್ರಮಗಳನ್ನು ಕನ್ನಡ ಅನುಷ್ಠಾನದ ಹಿನ್ನೆಲೆಯಲ್ಲಿ ಈ ಕೂಡಲೇ ಗಮನಿಸಬೇಕಾಗಿ ವಿನಂತಿಸುತ್ತಿದ್ದೇವೆ:

  1. ಸರ್ಕಾರದ ವ್ಯವಸ್ಥೆಯಲ್ಲಿ ಯುನಿಕೋಡ್‌ ತಂತ್ರಜ್ಞಾನದಲ್ಲೇ ಕನ್ನಡ ಅಕ್ಷರ ಜೋಡಣೆ ಮಾಡಬೇಕೆಂದು ಕರ್ನಾಟಕ ಸರ್ಕಾರವು ೨೦೧೩ರಲ್ಲೇ ಆದೇಶ ಮಾಡಿದೆ. ಈ ಆದೇಶವನ್ನು ಈವರೆಗೂ ವಸ್ತುಶಃ ಜಾರಿ ಮಾಡಲಾಗಿಲ್ಲ. ಆದ್ದರಿಂದ ಈ ಅಧಿಸೂಚನೆಯಂತೆ ಕರ್ನಾಟಕ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಯುನಿಕೋಡ್‌ನಲ್ಲೇ ಅಕ್ಷರಜೋಡಣೆ ಮಾಡುವುದನ್ನು ಎಂಬುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಖಚಿತಪಡಿಸಿಕೊಳ್ಳಬೇಕು.
  2. ಕನ್ನಡವನ್ನು ಪಠ್ಯಕ್ಕೆ ಬೇಕಾದ ಫಾಂಟ್‌ನಿಂದ ಹಿಡಿದು (ಬುಕ್‌ಫಾಂಟ್‌) ಯುನಿಕೋಡ್‌ನ ವಿವಿಧ ಶೈಲಿಯ ಅಕ್ಷರಗಳಲ್ಲಿ ಅಕ್ಷರ ಜೋಡಿಸುವ ತಂತ್ರಜ್ಞಾನವು ಈಗ ಸುಧಾರಿಸಿದೆ. ಅಲ್ಲದೆ ಸ್ಕ್ರೈಬಸ್‌ ಎಂಬ ಮುಕ್ತ ಮತ್ತು ಉಚಿತ ತಂತ್ರಾಂಶದ ಮೂಲಕ ಯುನಿಕೋಡ್‌ ಕನ್ನಡದಲ್ಲೇ ಎಲ್ಲ ಬಗೆಯ ಕಡತಗಳನ್ನು ರೂಪಿಸಬಹುದಾಗಿದೆ. ಪೇಜ್‌ಮೇಕರ್‌, ಇನ್‌ಡಿಸೈನ್‌ ಮುಂತಾದ ಪಾವತಿಸಿ ಬಳಸುವ ತಂತ್ರಾಂಶಗಳ ಬದಲಿಗೆ ಸ್ಕ್ರೈಬಸ್‌ನ್ನು ಯಾವುದೇ ಖರ್ಚಿಲ್ಲದೆ ಬಳಸಬಹುದಾಗಿದೆ. ಇದರ ಮೂಲಕ ಕನ್ನಡದ ಯುನಿಕೋಡ್‌ ವಿನ್ಯಾಸಗಳನ್ನೂ ಅಂದಚೆಂದವಾಗಿ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಕ್ರೈಬಸ್‌ ತಂತ್ರಾಂಶವನ್ನು ಬಳಸು ಆರಂಭಿಸುವಂತೆ ಸೂಚನೆ ನೀಡಬೇಕಾಗಿದೆ. (ಇದು ಮುಕ್ತ ತಂತ್ರಾಂಶವಾಗಿರುವುದರಿಂದ ಯಾವುದೇ ಖಾಸಗಿ ಸಂಸ್ಥೆಯನ್ನು ಶಿಫಾರಸು ಮಾಡಿದಂತೆ ಆಗುವುದಿಲ್ಲ. ). ಈ ತಂತ್ರಾಂಶವು ಇನ್‌ಡಿಸೈನ್‌ / ಪೇಜ್‌ಮೇಕರ್‌ಗಳಿಗಿಂತ ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಅಲ್ಲದೆ ಇದಕ್ಕೆ ಪದಸೂಚಕ (prompt) ಮುಂತಾದ ಅನುಕೂಲಗಳನ್ನು ಸೇರಿಸಿದರೆ ಈಗಿರುವದಕ್ಕಿಂತ ಮೂರುಪಟ್ಟು ವೇಗದಲ್ಲಿ ಅಕ್ಷರ ಜೋಡಣೆ ಮಾಡಬಹುದು.
  3. ಇನ್ನು ವಿಂಡೋಸ್‌ ಆಪರೇಟಿಂಗ್‌ ತಂತ್ರಾಂಶವನ್ನು ಎಕ್ಸ್‌ಪಿ ಆವೃತ್ತಿಗಿಂತ ಮೇಲ್ದರ್ಜೆಗೇರಿಸದ ಯಂತ್ರಗಳನ್ನು ಹಂತಹಂತವಾಗಿ ಮೇಲ್ದರ್ಜೆಗೇರಿಸಲೇಬೇಕಾಗಿದೆ. ಒಂದೋ ವಿಂಡೋಸ್‌ ಆವೃತ್ತಿಯನ್ನೇ ಬಳಸುವುದು ಅಥವಾ ನೇರವಾಗಿ ಮುಕ್ತ ಆಪರೇಟಿಂಗ್‌ ವ್ಯವಸ್ಥೆಗೆ ಬದಲಾಗುವುದು – ಈ ಎರಡು ಆಯ್ಕೆಗಳ ಬಗ್ಗೆ ಈ ಗವರ್ನೆನ್ಸ್‌ ಇಲಾಖೆಯೊಂದಿಗೆ ಪ್ರಾಧಿಕಾರವು ಸಮನ್ವಯ ಸಾಧಿಸಬಹುದಾಗಿದೆ.
  4. ಕನ್ನಡವನ್ನು ಸಾಮಾನ್ಯ ಕಚೇರಿ ಸಂವಹನದಲ್ಲಿ, ದತ್ತ ಸಂಸ್ಕರಣೆಯಲ್ಲಿ, ಲೆಕ್ಕಪತ್ರದ ಹಾಳೆಗಳಲ್ಲಿ ಬಳಸಲು ಲಿಬ್ರೆ ಆಫೀಸ್‌ ಎಂಬ ಇನ್ನೊಂದು ಮುಕ್ತ, ಉಚಿತ ತಂತ್ರಾಂಶವು ಲಭ್ಯವಿದೆ. ಆದ್ದರಿಂದ ವಿಧಾನಸೌಧದ ಮತ್ತು ರಾಜ್ಯ ಸರ್ಕಾರದ ಎಲ್ಲ ಕಚೇರಿಗಳಲ್ಲೂ ಈ ತಂತ್ರಾಂಶವನ್ನು ಬಳಸಿ ಎಂ ಎಸ್‌ ಆಫೀಸ್‌ ಎಂಬ ಮೈಕ್ರೋಸಾಫ್ಟ್‌ನ ಪಾವತಿಸಿ ಬಳಸುವ ತಂತ್ರಾಂಶದ ಖರೀದಿಯನ್ನೇ ನಿಲ್ಲಿಸಿ, ಭಾರೀ ಪ್ರಮಾಣದ ಹಣವನ್ನು ಉಳಿಸಬಹುದಾಗಿದೆ. ಲಿಬ್ರೆ ಆಫೀಸ್‌ ಕೂಡ ಎಂ ಎಸ್‌ ಆಫೀಸ್‌ಗಿಂತ ಹೆಚ್ಚಿನ ಪ್ರಮಾಣದ ಅನುಕೂಲಗಳನ್ನು ಹೊಂದಿದೆ. ಈ ಹಲವು ಮುಕ್ತ ಮತ್ತು ಉಚಿತ ತಂತ್ರಾಂಶಗಳ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.
  5. ಇಸ್ಕಿ ಫಾಂಟ್‌ಗಳಿಗೆ ನಿರುತ್ತೇಜನ: ಈಗಲೂ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇಸ್ಕಿ ಫಾಂಟ್‌ಗಳನ್ನೇ ಬಳಸುತ್ತಿವೆ. ಅದರಲ್ಲೂ ಸರ್ಕಾರದ ಅಧಿಕೃತ ಕೀಲಿಮಣೆಯನ್ನು ಹೊಂದಿದೆ ಎಂದು ಪ್ರಕಟಿಸಿ ಪ್ರಚಾರ ಮಾಡುತ್ತಿರುವ ನುಡಿ ತಂತ್ರಾಂಶವನ್ನೇ ಹೆಚ್ಚಿನ ಸಿಬ್ಬಂದಿ ವರ್ಗವು ಬಳಸುತ್ತಿದೆ. ಈಗ ಬಂದಿರುವ ನುಡಿ ೫.೦ ಆವೃತ್ತಿಯಲ್ಲಿ ಆಸ್ಕಿ ಫಾಂಟ್‌ಗಳೇ ಇವೆ. ಆಸ್ಕಿ ಫಾಂಟ್‌ ಸ್ಥಾಪನೆಯಾಗಿರುವ ಕಂಪ್ಯೂಟರುಗಳಲ್ಲಿ ಕನ್ನಡವು ಕಾಣಿಸಿಕೊಂಡು, ಉಳಿದೆಡೆ ಅದು ಕಾಣಿಸುವುದೇ ಇಲ್ಲ. ಅಲ್ಲದೆ ದತ್ತ ಸಂಸ್ಕರಣೆ,ಪದಸಂಸ್ಕರಣೆ, ಅಕಾರಾದಿ ವಿಂಗಡಣೆ, ಅಂತರಜಾಲ ಪ್ರಕಟಣೆ, ಡಾಟಾಬೇಸ್‌ ನಿರ್ವಹಣೆ, ಅನ್ವಯಿಕ ತಂತ್ರಾಂಶಗಳ ಮೆನ್ಯುಗಳ ಲೋಕಲೈಸೇಶನ್‌, ಕಾಗುಣಿತ ತಿದ್ದುವಿಕೆ – ಹೀಗೆ ಹಲವು ಬಗೆಯ ಸಾರ್ವತ್ರಿಕ ತಾಂತ್ರಿಕ ಕೆಲಸಗಳಲ್ಲಿ ಯುನಿಕೋಡ್‌ ಇದ್ದರೇನೇ ಎಲ್ಲವೂ ಸಾಧ್ಯ. ಆದ್ದರಿಂದ ಆಸ್ಕಿ ಫಾಂಟ್‌ಗಳನ್ನು ಪ್ರಾಧಿಕಾರವು ನಿರುತ್ತೇಜಿಸಬೇಕು. ಈಗ ಬರಲಿರುವ ನುಡಿ ೬.೦ ಆವೃತ್ತಿಯಲ್ಲಿ ಆಸ್ಕಿ ಫಾಂಟ್‌ಗಳಿದ್ದರೆ ಅದನ್ನು ಕರ್ನಾಟಕ ಸರ್ಕಾರವು ಬೆಂಬಲಿಸಬಾರದು; ಅದನ್ನು ಬಿಡುಗಡೆ ಮಾಡುವುದಕ್ಕೂ ಹೋಗಬಾರದು. ಕೇವಲ ಯುನಿಕೋಡ್‌ ಕೀಲಿಮಣೆ, ಫಾಂಟ್‌ಗಳಿದ್ದರೆ ಮಾತ್ರ ಅದನ್ನು ಸರ್ಕಾರವು ಬೆಂಬಲಿಸಬೇಕು.
  6. ನುಡಿ ತಂತ್ರಾಂಶದ ಮೊದಲ ಆವೃತ್ತಿಯನ್ನು ಕರ್ನಾಟಕ ಸರ್ಕಾರದ ಧನಸಹಾಯದೊಂದಿಗೆ ರೂಪಿಸಲಾಗಿದ್ದು ಆಗಲೇ ಅದನ್ನು ಮುಕ್ತ ತಂತ್ರಾಂಶದ ಅಡಿಯಲ್ಲಿ ಸಮುದಾಯದ ಬಳಕೆಗೆ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಹದಿನೈದು ವರ್ಷಗಳ ನಂತರವೂ ನುಡಿ ತಂತ್ರಾಂಶವು ಕೇವಲ ಉಚಿತ ತಂತ್ರಾಂಶವಾಗಿದೆಯೇ ವಿನಃ, ಸಮುದಾಯವು ಅಭಿವೃದ್ಧಿಪಡಿಸಬಹುದಾದ ಮುಕ್ತ ತಂತ್ರಾಂಶವಾಗಿಲ್ಲ. ನುಡಿಯ ಆರಂಭದಲ್ಲಿ ಧನಸಹಾಯ ನೀಡಿದ ಹಿನ್ನೆಲೆಯಲ್ಲಿ ನುಡಿ ೫.೦ ಮತ್ತು ನಂತರದ ಎಲ್ಲಾ ಆವೃತ್ತಿಗಳನ್ನೂ ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಬೇಕೆಂದು ಸರ್ಕಾರವು ಕನ್ನಡ ಗಣಕ ಪರಿಷತ್ತಿಗೆ ಸೂಕ್ತ ಆದೇಶವನ್ನು ನೀಡಬೇಕು. ಮುಕ್ತವಲ್ಲದ, ಕೇವಲ ಉಚಿತ ತಂತ್ರಾಂಶವಾಗಿದ್ದರೆ ಅದರ ಹೊಸ ಆವೃತ್ತಿಯನ್ನು ಕರ್ನಾಟಕ ಸರ್ಕಾರವು ಬೆಂಬಲಿಸಬಾರದು.
  7. ಕರ್ನಾಟಕದ ಮತ್ತು ಹೊರಗಿನ ಎಲ್ಲ ಕನ್ನಡ ಸಂಬಂಧಿತ ತಂತ್ರಾಂಶ ತಯಾರಕರ ಸಭೆಯನ್ನು ಕರೆದು ಅವರು ತಮ್ಮ ಎಲ್ಲ ಹಳೆಯ ಫಾಂಟ್‌ಗಳನ್ನೂ ಯುನಿಕೋಡ್‌ ಆಗಿ ಪರಿವರ್ತಿಸಲು ಮತ್ತು ಅವನ್ನು ಸಾಧ್ಯವಾದರೆ ಮುಕ್ತ ಫಾಂಟ್‌ಗಳಾಗಿ ಬಿಡುಗಡೆ ಮಾಡಲು ಆಗ್ರಹಿಸಬೇಕು. ಇದರಿಂದ ಕನ್ನಡ ಪ್ರಕಟಣಾ ರಂಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಗೆಬಗೆಯ ಫಾಂಟ್‌ಗಳು ಸಿಗಲಿವೆ.
  8. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯನ್ನು ಪುನಾರಚಿಸಿ ಅದರಲ್ಲಿ ಮುಕ್ತ ತಂತ್ರಾಂಶ ಅಭಿಯಾನಿಗಳು ಮತ್ತು ಯುವ ತಂತ್ರಜ್ಞ ಕಾರ್ಯಕರ್ತರು ಇರುವಂತೆ ಖಾತ್ರಿಪಡಿಸಿಕೊಳ್ಳಲು ಸೂಕ್ತ ಮನವಿಯನ್ನು (ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ) ಮಾಡಬೇಕು. ಸಮುದಾಯದಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಸದಸ್ಯರೇ ಇಲ್ಲದ ಈ ಸಮಿತಿಯು ನಾಲ್ಕು ಗೋಡೆಗಳ ನಡುವೆ ನಿರ್ಣಯ ತೆಗೆದುಕೊಳ್ಳುತ್ತಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಕನ್ನಡದ ಓಸಿಆರ್‌ (ಚಿತ್ರದ ಪಠ್ಯಗಳನ್ನು ಗ್ರಹಿಸುವ ಆಪ್ಟಿಕಲ್‌ ಕ್ಯಾರೆಕ್ಟರ್‌ ರೆಕಗ್ನಿಶನ್‌) ತಂತ್ರಾಂಶವನ್ನು ಕೇಂದ್ರಸರ್ಕಾರದ ನಿಧಿಯನ್ನು ಬಳಸಿದ ಭಾರತೀಯ ವಿಜ್ಞಾನ ಸಂಸ್ಥೆಯೂ ಸೇರಿದಂತೆ ನಾಲ್ವರು ರೂಪಿಸಿದ್ದರೂ, ೮೦ ಲಕ್ಷ ಅಂದಾಜು ವೆಚ್ಚದ ಟೆಂಡರ್‌ನ್ನು ಕರೆದು ಕೊನೆಗೆ ಸಾರ್ವಜನಿಕ ಒತ್ತಡದಿಂದ ರದ್ದು ಮಾಡಿರುವುದು ಇದಕ್ಕೆ ಒಂದು ನಿದರ್ಶನ. ಅಲ್ಲದೆ ಈ ಹಿಂದೆ ಬಿಡುಗಡೆಯಾದ ಕನ್ನಡ ಯುನಿಕೋಡ್‌ ಫಾಂಟ್‌ಗಳು, ಬ್ರೈಲ್‌ ಕೀಲಿಮಣೆ, ಮೊಬೈಲ್‌ ಕೀಲಿಮಣೆ ಮತ್ತು ಯುನಿಕೋಡ್‌ ಪರಿವರ್ತಕಗಳು ಅಸಮರ್ಪಕವಾಗಿವೆ ಎಂಬುದನ್ನು ತಜ್ಞರು ಪದೇ ಪದೇ ಉಲ್ಲೇಖಿಸಿದ್ದಾರೆ.
  9. ಕೇವಲ ಸಮಿತಿಯಿಂದಲೇ ಎಲ್ಲ ಕೆಲಸವೂ ಆಗುವುದಿಲ್ಲ. ಆದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಅನುಷ್ಠಾನದ ಹಿನ್ನೆಲೆಯಲ್ಲಿ ನಾಯಕತ್ವವನ್ನು ವಹಿಸಿ ಉತ್ಸಾಹಿ ಕನ್ನಡ ತಂತ್ರಜ್ಞರು, ಖಾಸಗಿ ಫಾಂಟ್‌ ಅಭಿವೃದ್ಧಿಕಾರರು, ಕನ್ನಡ ಐಟಿ ಸಾಧನಗಳಿಗಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ನಿಯಮಿತವಾಗಿ ಸೇರಿಸಿ ಮುಕ್ತ ಚರ್ಚೆ ನಡೆಸಬೇಕು. ಈ ಕಾಲಘಟ್ಟದಲ್ಲಾದರೂ ಇಂಥ ಚರ್ಚೆ ನಡೆಯದಿದ್ದರೆ, ಕನ್ನಡ ತಂತ್ರಜ್ಞಾನವು ಸರಿಯಾಗಿ ರೂಪುಗೊಳ್ಳುವುದಿಲ್ಲ. ಕನ್ನಡ ತಂತ್ರಾಂಶಗಳ ಕಾರ್ಯವನ್ನು ನಿರ್ವಹಿಸಲು ಒಬ್ಬ ಸಮನ್ವಯಕಾರರನ್ನು ನೇಮಿಸಿದರೆ ತುಂಬಾ ಸೂಕ್ತವಾಗಿದೆ. ಅವರು ಕೇವಲ ಈ ಕೆಲಸಗಳಿಗೇ ಹೆಚ್ಚಿನ ಗಮನ ನೀಡಿ ಕನ್ನಡ ತಂತ್ರಾಂಶದ ಕೆಲಸಗಳ ತ್ವರಿತ ಜಾರಿಗೆ ಪ್ರಯತ್ನಿಸಬಹುದು.
  10. ಕರ್ನಾಟಕ ಸರ್ಕಾರದ ಜಾಲತಾಣಗಳ ಶೈಲಿ ಮಾನಕೀಕರಣ ಮತ್ತು ಕನ್ನಡೀಕರಣವು ಬಾಕಿ ಉಳಿದಿದೆ. ಈ ಕುರಿತು ಭಾರತ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಒಂದು ಕರಡು ಜಾಲತಾಣ ವಿನ್ಯಾಸ ಮತ್ತು ನಿರ್ವಹಣಾ ಸೂತ್ರಗಳ ಕೈಪಿಡಿಯನ್ನು ರೂಪಿಸಲು ಮಿತ್ರಮಾಧ್ಯಮದ ಟ್ರಸ್ಟಿಯಾಗಿರುವ ಶ್ರೀ ಬೇಳೂರು ಸುದರ್ಶನರು ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಡೆಸಿದ ಸಭೆಗಳಲ್ಲಿ ಸಮ್ಮತಿಸಿದ್ದರು. ಈಗಲೂ ಮಿತ್ರಮಾಧ್ಯಮವು ತಜ್ಞರೊಂದಿಗೆ ಸಭೆಗಳನ್ನು ನಡೆಸಿ ಈ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಿದ್ಧವಿದೆ.
  11. ಕನ್ನಡದಲ್ಲಿ ಪ್ರಕಟವಾಗುವ ಮತ್ತು ಕರ್ನಾಟಕದ ಕುರಿತ ರಾಜ್ಯ ಸರ್ಕಾರದ ಎಲ್ಲಾ ಪಠ್ಯಪುಸ್ತಕಗಳು ಮತ್ತು ಪ್ರಕಟಣೆಗಳನ್ನು `ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು.
  12. ಕನ್ನಡ ಕಲಿಕೆಯ ಆನ್‌ಲೈನ್‌ ತರಗತಿಗಳೇ ಅಲಭ್ಯವಾಗಿರುವ ಈ ಹೊತ್ತಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು MOOC (massive open online course) ಮಾದರಿಯಲ್ಲಿ ವಿವಿಧ ವಯೋಮಾನದ, ವೃತ್ತಿಪರರ ಅನುಕೂಲಕ್ಕಾಗಿ ಆನ್‌ಲೈನ್‌ ಕೋರ್ಸ್‌‌ಗಳನ್ನು ರೂಪಿಸಿ ಉಚಿತವಾಗಿ ನೀಡಬೇಕು. ಈ ಕೋರ್ಸ್‌‌ಗಳ ಪರೀಕ್ಷೆ, ಮೌಲ್ಯಮಾಫನ ಮತ್ತು ಪ್ರಮಾಣಪತ್ರಕ್ಕಾಗಿ ಶುಲ್ಕ ವ್ಯವಸ್ಥೆಯನ್ನು (ಅಗತ್ಯ ವಿದ್ದರೆ) ರೂಪಿಸಬಹುದಾಗಿದೆ. ಈ ಕಲಿಕೆಯ ಕೋರ್ಸ್‌‌ಗಳು ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವೂ ಅತ್ಯವಶ್ಯವಾಗಿದೆ. ಇದು ದೇಶ – ವಿದೇಶದ ಸಾರ್ವಜನಿಕರಿಗೆ, ಕನ್ನಡ ಆಸಕ್ತರಿಗೆ ತುಂಬಾ ಉಪಯುಕ್ತವಾಗಲಿದೆ. ಇದಕ್ಕಾಗಿ ಭಾರತೀಯ ಭಾಷಾ ಸಂಸ್ಥಾನ(CIIL)ದಂತಹ ಭಾಷಾ ಕಲಿಕೆ ಮತ್ತು ಸಂಶೋಧನಾ ಸಂಸ್ಥೆಗಳು, ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಪನ್‌ ಸ್ಕೂಲಿಂಗ್ (NIOS) ಮುಂತಾದ ಸಂಸ್ಥೆಗಳ ಸಹಕಾರವನ್ನು ಪಡೆಯಬಹುದು.
Share. Facebook Twitter Pinterest LinkedIn Tumblr Email
Previous Articleಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
Next Article The heaven created by trinity of Hindustani music turns 50!
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!

June 5, 2024

Comments are closed.

ಸುದ್ದಿ
  • ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!
  • ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!
  • ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)
  • ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ
  • ರಾಮನಗರದ ಹೃದಯ
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!
  • ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ
  • ಇ-ದಕ್ಷಿಣ್ ಡಾಟ್‌ಕಾಮ್‌ : ಮಿಸ್ ಕಾಲ್‌ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!
  • ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!
  • ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!
  • ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ಟೆಸೆರಾಕ್ಟ್‌ ಬಂತು ದಾರಿ ಬಿಡಿ; ಓಸಿಆರ್‌ ಮಾಡೋ ಚಿಂತೆ ಬಿಡಿ!
  • ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ
  • ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • Pacific Marine Climate Change Report Card 2018
  • READ: THE PERSONAL DATA PROTECTION BILL, 2018
  • New study from CSE exposes massive environmental dumping of old and used vehicles in Africa and South Asia
  • ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
  • ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  
  • “ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!
  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
  • ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!
  • ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್‌ನಲ್ಲಿ ಭಾಗವಹಿಸಿ! ಅಬ್ದುಲ್‌ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್‌ಲೈನ್‌ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ
  • ಶಂಕರ ಶರ್ಮರು ನ್ಯೂಝಿಲೆಂಡ್‌ಗೆ – ಉನ್ನತ ಅಧ್ಯಯನಕ್ಕೆ – ಹೊರಟಿದ್ದಾರೆ, ಶುಭಾಶಯ ಹೇಳೋಣ!
  • Prashant Kishor : Disruptive, Harmful
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!
  • ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]
  • ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ಆರೋಗ್ಯ ಇಲಾಖೆಗೆ ಮಾನವಹಕ್ಕು ಆಯೋಗದ ಆದೇಶ : ಕೊನೆಗೂ ನ್ಯಾಯ ಪಡೆದ ಉಡುಪಿಯ ದಾದಿಯರು
  • ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ
  • SHANKAR SHARMA: CREATION OF A SUSTAINABLE URBAN ENERGY SYSTEM
  • National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)
  • ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!
  • `ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?
  • ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು
  • ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ
  • Prayer for consideration in front of the Hon’ble High Court for the purpose of granting relief to the Endosulfan Victims
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Dattaji writes about his mother Meenakshi Amma
  • ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ 42 ವರ್ಷಗಳ ಬದಲಿಗೆ ಕೇವಲ 5 ವರ್ಷಗಳ ವೇತನ ನೀಡುವ ಹುನ್ನಾರ
  • AKKU LEELA IMAGES FOR DOWNLOAD
  • ಕೊಡಗು-ಕಾಸರಗೋಡು ಮಡಗಾಸ್ಕರ್‌ಗೆ ಸೇರಿದ್ದು!
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • Future of solar energy seems bleak if sector reforms do not pull through
  • Climate Change Report Warns of Dramatically Warmer World This Century
  • ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು
  • ಅಕ್ಕು ಮತ್ತು ಲೀಲಾ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ಸಚಿವ ಕಾಗೇರಿಯವರಿಗೆ ಮಿತ್ರಮಾಧ್ಯಮ ಮನವಿ
  • 'ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ' ಶಂಕರಶರ್ಮ ಪುಸ್ತಕ ಬಿಡುಗಡೆಗೆ ಬನ್ನಿ! (ಅಕ್ಟೋಬರ್‌ ೧೦)
  • Law abiding citizens and law disobeying Government
  • Bhoomi College offers One year Programme on Science and Management for Sustainable Living
  • ಹತ್ತನೆಯ ವರ್ಷಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಾ: ಶುಭಾಶಯ ಹೇಳಿ!
  • ಶುಕ್ರ ಸಂಕ್ರಮ: ಪುಸ್ತಕ ಓದಿ
  • THE COPYRIGHT (AMENDMENT) BILL, 2012
  • ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ
  • SC upholds constitutional validity of Right to Education Act : Judgement FULL TEXT
  • ನನ್ನ ಹಿಡನ್‌ ಅಜೆಂಡಾ ಮತ್ತು ಇತರ ಕಥೆಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ವಿರೋಧಿಸಿ: ಮುಖ್ಯಮಂತ್ರಿಯವರಿಗೆ ಮಿತ್ರಮಾಧ್ಯಮ ಸಹಿತ ಹಲವು ಸಂಘಟನೆಗಳ ಮನವಿ
  • ಮಿತ್ರಮಾಧ್ಯಮ ಮ್ಯಾಗಜಿನ್‌ ಸಂಚಿಕೆ ೧ ಓದಿ
  • ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ
  • ‘ಇಜ್ಞಾನ’ ಸಂಚಿಕೆ ಓದಿ
  • ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!
  • ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!
  • SUPREME COURT BANS MINING IN BELLARY DISTRICT
  • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
  • BAN ENDOSULFAN PERMANENTLY, CONDUCT CENSUS OF VICTIMS, PROVIDE PERMANENT REHABILITATION
  • ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ
  • Feb 5,6: Millet Mela in Bangalore – Meet the Millet! Say hello to HEALTH
  • Scandalous Decision of Jairam Ramesh to OK POSCO project
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • Publish All the Radia Tapes
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?
  • “BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”
  • ಇಂಧನ ಬಡತನ: ಜಾಗತಿಕ ವರದಿ ಹೇಳಿದ್ದೇನು?
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ
  • ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
  • ವೇದಾಂತ : ಅಗೆದಷ್ಟೂ ಅವಾಂತರ
  • ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ
  • ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು
  • Future Electricity Supply Options for India
  • How essential is the nuclear power option for India?
  • `ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ
  • ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!
  • ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ
  • ಹೀಗಿದ್ದರು ನಾನಾಜಿ ದೇಶಮುಖ್
  • Media Fest Presentation by Beluru Sudarshana
  • January 23: Participate in the Public Consultation (Bangalore) on Bt Brinjal
  • ಡಿಸೆಂಬರ್ ೧೩ರಂದು ಮೈಸೂರಿನಲ್ಲಿ ಬದನೆ ಮೇಳ
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • Please visit www.mitramaadhyama.co.in
  • Shilpashree Investigative Report Award 2010
  • ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ
  • ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ
  • Still nostalgic about Bharatiya Janasangh and old BJP? Read this !
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ನನ್ನ ಪ್ರೀತಿಯ ದತ್ತಾಜಿ
  • ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
  • DNA: Delayed , No Analysis?
  • ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !
  • Bhairappa’s interview 2002
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.