Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಸುದ್ದಿ»ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ
ಸುದ್ದಿ

ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ

ಬೇಳೂರು ಸುದರ್ಶನBy ಬೇಳೂರು ಸುದರ್ಶನMarch 11, 2010Updated:May 19, 2025No Comments13 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಸುಸ್ಥಿರ ಅಭ್ಯುದಯದ ಸೂತ್ರದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ನಾಡಿನ ಗಣ್ಯರು ಮುಖ್ಯಮಂತ್ರಿಯವರಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನನಗೆ ತೀರ ಇತ್ತೀಚೆಗೆ ಪರಿಚಿತರಾದ ವಿದ್ಯುತ್ ವಿಶ್ಲೇಷಕ ಶ್ರೀ ಶಂಕರ್ ಶರ್ಮರವರು ಮೂಲತಃ ಸಿದ್ಧಪಡಿಸಿದ ಈ ಪತ್ರಕ್ಕೆ ರಾಷ್ಟ್ರಕವಿ ಜಿ ಎಸ್ ಎಸ್ ರಿಂದ ಹಿಡಿದು ಹಲವು ಹಿರಿಯರು, ತಜ್ಞರು, ಸಾಹಿತಿಗಳು ಸಹಿ ಹಾಕಿದ್ದಾರೆ. ಈ ಪತ್ರವನ್ನು ಓದಿ, ಇವೆಲ್ಲವೂ ತಮಗೆ ಸಮ್ಮತ ಎಂದು ಹೃತ್ಪೂರ್ವಕವಾಗಿ ತಿಳಿಸಿ ಸಹಿ ಹಾಕಿದ ಈ ಮಹನೀಯರು ಅಭ್ಯುದಯದ ಹಾದಿಯನ್ನು ಸರ್ಕಾರಕ್ಕೆ ನೆನಪು ಮಾಡಿಕೊಟ್ಟಿದ್ದಾರೆ.

ಬಹಿರಂಗ ಪತ್ರವನ್ನು ಓದುತ್ತಿರುವ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ

ಈ ಪತ್ರದ ಪೂರ್ಣಪಾಠವನ್ನು ಪ್ರಕಟಿಸಲು ರಾಜ್ಯದ ದಿನಪತ್ರಿಕೆಗಳ ಸಂಪಾದಕರು, ಆಡಳಿತ ವರ್ಗದವರು ಅತ್ಯಂತ ಕಾಳಜಿಯಿಂದ ಮುಂದೆ ಬಂದಿದ್ದಾರೆ. ಅವರೆಲ್ಲರಿಗೂ ಬಹಿರಂಗ ಪತ್ರ ಬರೆದ ಎಲ್ಲರ ಪರವಾಗಿ ನನ್ನ ವಂದನೆಗಳು.

 

ಈ ಪತ್ರವನ್ನು ಮಿತ್ರಮಾಧ್ಯಮದ ಎಲ್ಲ ಓದುಗರೂ ಓದಿ ಪ್ರತಿಕ್ರಿಯಿಸಲು ಕೋರುತ್ತಿದ್ದೇನೆ. ರಚನಾತ್ಮಕ ಚರ್ಚೆಯ ಮೂಲಕ ನಾಡಿನ ವಿದ್ಯುತ್ ಸಮಸ್ಯೆಯ ಪರಿಹಾರದ ಬಗ್ಗೆ ನಾವೆಲ್ಲರೂ ಪುಟ್ಟ ಹೆಜ್ಜೆ ಇಡೋಣ ಬನ್ನಿ!

ಒಂದು ಬಹಿರಂಗ ಪತ್ರ

 

ಇವರಿಗೆ                                                                                                                                                            ದಿನಾಂಕ: ೧೦ ಮಾರ್ಚ್ ೨೦೧೦

ಸನ್ಮಾನ್ಯ ಮುಖ್ಯ ಮಂತ್ರಿಗಳು

ಕರ್ನಾಟಕ ರಾಜ್ಯ ಸರ್ಕಾರ

ಬೆಂಗಳೂರು.

ಮಾನ್ಯರೇ,

ವಿಷಯ: ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿದ್ಯುತ್ ಶಕ್ತಿ ರಂಗದ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಮನವಿ

 ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ವಿದ್ಯುತ್ ಶಕ್ತಿ ರಂಗವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಸರ್ವ ವಿದಿತವಾಗಿದೆ.  ಸ್ವಾತಂತ್ರ್ಯ ಬಂದಾಗಿನಿಂದ ರಾಜ್ಯದ ವಿದ್ಯುತ್ ಶಕ್ತಿ ರಂಗವು ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಆದರೆ ಅದು ಸದಾ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಲಾಗುವುದಿಲ್ಲ. ೧೯೭೦ ರ ದಶಕದ ಮೊದಲ ಕೆಲವು ವರ್ಷಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ವರ್ಷಗಳಲ್ಲೂ ನಮ್ಮ ರಾಜ್ಯವು ವಿದ್ಯುತ್ ಸಮಸ್ಯೆಯನ್ನು ಎದುರಿಸಿದೆ. ನಮ್ಮ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪೇಕ್ಷಿತ ಮಟ್ಟದ ಅಭಿವೃದ್ಧಿ ಆಗದೇ ಇರಲು ವಿದ್ಯುತ್ ಸಮಸ್ಯೆಯು ಮುಖ್ಯ ಕಾರಣವಾಗಿದೆ. ಈ ಸಮಸ್ಯೆಯಿಂದಾಗಿಯೇ ಬಡತನ ಮತ್ತು ಸಾಮಾಜಿಕ ಅಸಮತೊಲನದ ನಿವಾರಣೆಯೂ ಅಸಾಧ್ಯವಾಗಿದೆ.

ರಾಜ್ಯದಲ್ಲಿ ವಿದ್ಯುತ್ ಸರಬರಾಜು ಅಸಮರ್ಪಕವಾಗಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಇದರ ಪರಿಣಾಮವಾಗಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹಲವಾರು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಸಹ ತೀವ್ರವಾದ ಕೊರತೆ ಉಂಟಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ತಡೆಯಲಾರದ ಬಿಸಿಲಿನ ಬೇಗೆ; ಜೊತೆಗೇ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೂ, ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗಳಿಗೂ ಭಾರಿ ಹಿನ್ನಡೆಯಾಗಿದೆ. ಸಮರ್ಪಕವಾದ ವಿದ್ಯುತ್ ಸರಬರಾಜು ದೊರೆಯುವುದೆಂಬ ಆಶ್ವಾಸನೆಯೊಂದಿಗೆ ಪ್ರಾರಂಭಗೊಂಡ ಬಹುತೇಕ ಕೈಗಾರಿಕಾ ಚಟುವಟಿಕೆಗಳಿಗೂ ಇದೇ ಸಮಸ್ಯೆ. ವಿದ್ಯುತ್ ಸರಬರಾಜಿನ ಮೇಲಿನ ನಂಬಿಕೆಯೇ ಹೊರಟುಹೋಗಿದೆ; ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು – ಮಹಿಳೆಯರ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಬೃಹತ್ ವಿದ್ಯುತ್ ಉತ್ಪಾದನಾ ಸ್ಥಾವರಗಳ ಸಂಖ್ಯೆ ಮಿತಿ ಮೀರುತ್ತಿರುವುದರಿಂದ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಉಲ್ಬಣಿಸುತ್ತಿವೆ.

ಉಚಿತವಾಗಿ ಅಥವ ಅತಿ ಕಡಿಮೆ ಬೆಲೆಯಲ್ಲಿ ವಿದ್ಯುತ್ ಪಡೆಯುತ್ತಿರುವ ರೈತ ಸಮುದಾಯಕ್ಕಾಗಲೀ ಅಥವ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಇರುವ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿಯನ್ನು ನಂಬಿಕೊಂಡಿರುವ ನಿವಾಸಿಗಳಿಗಾಗಲೀ ಅಥವ ವೆಚ್ಚಕ್ಕಿಂತ ಹೆಚ್ಚಿನ ದರ ಪಾವತಿಸುತ್ತಿರುವ ಕಾರ್ಖಾನೆಗಳಿಗಾಗಲೀ ಮತ್ತು ವ್ಯಾಪಾರಸ್ತರಿಗಾಗಲೀ ಸಮರ್ಪಕವಾದ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಎಲ್ಲ ಗ್ರಾಹಕ ವರ್ಗಗಳಿಗೂ ತೀವ್ರ ಅಸಮಾಧಾನ ಉಂಟಾಗಿದೆ.

೧೯೯೦ರ ದಶಕದಿಂದೀಚೆಗೆ ವಿದ್ಯುತ್ ಸಮಸ್ಯೆಗಳು ಗಂಭೀರ ಸ್ವರೂಪ ಪಡೆದಿವೆ. ಇದರ ಪರಿಹಾರಕ್ಕೆ ಸಮರೋಪಾದಿಯಲ್ಲಿ ಹೆಚ್ಚು ಗಮನ ಕೊಡಲೇಬೇಕಾದ ಅನಿವಾರ್ಯತೆ ಈಗ ಬಂದಿದೆ. ರಾಜ್ಯದ ವಿದ್ಯುತ್ ಶಕ್ತಿ ರಂಗವು ಇದುವರೆಗೆ ಸಾಗಿಬಂದ ವಿಧಾನವನ್ನು ಕೂಲಂಕಷವಾಗಿ ವಿಶ್ಲೇಷಿಸುವ ಮತ್ತು ಸುಸ್ಥಿರ ಅಭಿವೃಧ್ಧಿಗಾಗಿ ಸೂಕ್ತ ಕಾರ್ಯಕ್ರಮಗಳನ್ನು ಆದಷ್ಟು ಬೇಗ ಅಳವಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಮುಖ್ಯ ಕರ್ತವ್ಯವಾಗಿದೆ.

ಸಮಸ್ಯೆಗಳು

ರಾಜ್ಯದಲ್ಲಿನ ಎಲ್ಲ ರಂಗಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗದಿರಲು ವಿದ್ಯುತ್ ಸಮಸ್ಯೆಯು ಮುಖ್ಯ ಕಾರಣವಾಗಿದೆ; ಅಷ್ಟೇ ಅಲ್ಲ, ವಿದ್ಯುತ್ ರಂಗವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಹೆಚ್ಚಿವೆ. 

(೧)      ಗ್ರಾಮೀಣ ಪ್ರದೇಶಗಳನ್ನು ಕಡೆಗಣಿಸಿ ನಗರ ಪ್ರದೇಶಗಳಿಗೆ ಹೆಚ್ಚು ಹೆಚ್ಚು ವಿದ್ಯುತ್ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಬಹುತೇಕ ಕುಂಠಿತಗೊಂಡಿದೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳ ನಿವಾಸಿಗಳು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅಂದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮೀಣ ಪ್ರದೇಶಗಳಿಂದ ದೊರಕಬೇಕಾಗಿದ್ದ ಅಪಾರ ಕೊಡುಗೆ ನಷ್ಟವಾಗುತ್ತಿದೆ. ಬದಲಿಗೆ ಬೆಂಗಳೂರಿನಂತಹ ನಗರಗಳು ಮಿತಿ ಮೀರಿ ಬೆಳೆಯುತ್ತಿದ್ದು ನಗರೀಕರಣವು ನಿರ್ವಹಣೆ ಮಾಡಲಾಗದ ಗತಿ ಒದಗಿದೆ; ಸಮಸ್ಯೆಗಳು ಉಲ್ಬಣಗೊಂಡಿವೆ. ಈ ಸಮಸ್ಯೆಗಳು ನಮ್ಮ ಸಮಾಜದ ಶೀಘ್ರ ಅವನತಿಗೆ ಕಾರಣವಾಗಲಿವೆ. ಆದ್ದರಿಂದ ಇವುಗಳ ಬಗ್ಗೆ ತತ್‌ಕ್ಷಣವೇ ಮುಂಜಾಗ್ರತೆ ವಹಿಸಬೇಕಾಗಿದೆ. 

(೨)      ದೇಶದ ಇತರೆ ಪ್ರದೇಶಗಳಂತೆ ನಮ್ಮ ರಾಜ್ಯದಲ್ಲೂ ಬಹುತೇಕ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಪೇಕ್ಷಿತ ಮಟ್ಟದ ಅಭಿವೃದ್ಧಿಯಾಗದಿರಲು ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸಂಪರ್ಕ, ಶಿಕ್ಷಣ, ಆರೋಗ್ಯದಂತೆಯೇ ವಿದ್ಯುತ್ತಿನ ಅಭಾವವೂ ಮುಖ್ಯ ಕಾರಣವೆಂಬುದು ಈಗಾಗಲೇ ಸರ್ವ ವಿದಿತ.  ಹೀಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಸರ್ಕಾರಗಳು ಗ್ರಾಮೀಣ ಪ್ರದೇಶಗಳನ್ನು ಕಡೆಗಣಿಸಿವೆ.  ನಮ್ಮ ರಾಜ್ಯದಲ್ಲಿ ೧೯೯೯ ರಿಂದ ೨೦೦೯ರ ಅವಧಿಯಲ್ಲಿ ವಿದ್ಯುತ್ತಿನ ಉತ್ಪಾದನಾ ಸಾಮರ್ಥ್ಯವು ಸುಮಾರು ೫,೪೦೦ ಮೆಗಾವಾಟ್‌ನಿಂದ ಸುಮಾರು ೯,೨೦೦ ಮೆಗಾವಾಟ್‌ವರೆಗೆ ಏರಿಕೆಯಾಗಿದ್ದು, ವಾರ್ಷಿಕ ವಿದ್ಯುತ್ತಿನ ಬಳಕೆ ಸುಮಾರು ೧೬,೦೦೦ ದಶ ಲಕ್ಷ ಯೂನಿಟ್ಟುಗಳಿಂದ ಸುಮಾರು ೩೨,೦೦೦ ದಶ ಲಕ್ಷ ಯೂನಿಟ್ಟುಗಳಿಗೆ  ಏರಿಕೆಯಾಗಿದೆ. ಇದೇ ಅವಧಿಯಲ್ಲಿ ತಲಾವಾರು ವಾರ್ಷಿಕ ವಿದ್ಯುತ್ ಬಳಕೆ ೩೦೯ ಯೂನಿಟ್ಟುಗಳಿಂದ ೫೪೩ ಯೂನಿಟ್ಟುಗಳಿಗೆ ಏರಿದೆ. ಈ ದಶಕವೊಂದರಲ್ಲೇ ವಿದ್ಯುತ್ತಿನ ಲಭ್ಯತೆ ಶೇಕಡಾ ೭೦ರಷ್ಟು ಏರಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ ೨೨ ರಷ್ಟು ಕುಟುಂಬಗಳಿಗೆ ವಿದ್ಯುತ್ತಿನ ಸೌಲಭ್ಯ ಇನ್ನೂ ದೊರಕಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ತಲಾವಾರು ವಾರ್ಷಿಕ ಬಳಕೆ ಸುಮಾರು ೨,೭೦೦ ಯೂನಿಟ್ಟುಗಳಿಗೆ ಏರಿಕೆಯಾಗಿದೆ. ಇದು ನಮ್ಮ ರಾಜ್ಯದ ಮತ್ತು ದೇಶದ ತಲಾ ವಾರ್ಷಿಕ ಬಳಕೆಯ ಸುಮಾರು ಐದು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯವಾಗಿ ದಿನಂಪ್ರತಿ ೨೪ ಗಂಟೆಗಳ ಕಾಲವೂ ವಿದ್ಯುತ್ತಿನ ಸರಬರಾಜು ಸಮಾಧಾನಕರವಾಗಿ ಇದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ದಿನಂಪ್ರತಿ ೧೨ ಗಂಟೆಗಳ ಕಾಲವೂ ಸಹ ವಿದ್ಯುತ್ತಿನ ಸರಬರಾಜು ಸಮರ್ಪಕವಾಗಿ ಇರುವುದಿಲ್ಲ (೨೦೦೯ ರ ನವೆಂಬರ್ ಮಾಹೆಯಲ್ಲಿ ಬಿಡುಗಡೆಯಾದ ಗ್ರೀನ್ ಪೀಸ್ ಸಂಸ್ಥೆಯ ವರದಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ವಾರ್ಷಿಕ ವರದಿಗಳು ಮತ್ತು ಕರ್ನಾಟಕ ಆರ್ಥಿಕ ಸಮೀಕ್ಷೆ ೨೦೦೮-೦೯ ಗಳ ಆಧಾರ).

ತೀವ್ರವಾದ ಅಸಮಾನತೆಯ ಇಂತಹ ವಿಪರ್ಯಾಸಗಳನ್ನು ಏನೆಂದು ಕರೆಯಬೇಕು? ಇದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರದ ಮಲ ತಾಯಿ ಧೋರಣೆಗೆ ನಿಚ್ಚಳ ಉದಾಹರಣೆಯಾಗಿದೆ. ಅಲ್ಲದೇ ಕಳೆದ ೬೦ ವರ್ಷಗಳಲ್ಲಿ ಸರಾಸರಿ ದಶಕಕ್ಕೊಮ್ಮೆ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ದ್ವಿಗುಣಗೊಳ್ಳುತ್ತಿದ್ದರೂ ವಿದ್ಯುತ್ ಕಡಿತದ ಪ್ರಕ್ರಿಯೆ ಮುಂದುವರೆಯುತ್ತಲೇ ಇರುವುದರಿಂದ ವಿದ್ಯುತ್ ಕ್ಷೇತ್ರವು ತನ್ನ ಸಾಮಾಜಿಕ ಮತ್ತು ಆರ್ಥಿಕ ಜವಾಬ್ದಾರಿಯಲ್ಲಿ ವಿಫಲವಾಗಿದೆ ಎಂದೇ ಹೇಳಬೇಕಾಗುತ್ತದೆ. 

(೩)      ಗ್ರಾಮೀಣ ಪ್ರದೇಶಗಳ ಮತ್ತು ನಗರ ಪ್ರದೇಶಗಳ ನಡುವಿನ ಇಂತಹ ಅಸಮಾನತೆಯನ್ನು ಹೋಗಲಾಡಿಸುವ ಯಾವ ಪ್ರಯತ್ನಗಳೂ ಇದುವರೆಗೆ ಕಂಡುಬಂದಿಲ್ಲ. ದೊಡ್ಡ ವಿಪರ್ಯಾಸ ಎಂದರೆ ಸರ್ಕಾರಗಳು ವಿದ್ಯುತ್ತಿನ ಕೊರತೆಯ ನೆಪದಲ್ಲಿ ದೊಡ್ಡ ದೊಡ್ಡ ವಿದ್ಯುತ್ ಉತ್ಪಾದನಾ ಘಟಕಗಳಿಗಾಗಿ ಅಪಾರ ಪ್ರಮಾಣದ ಹಣವನ್ನು ಮತ್ತು ಅತಿ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ವೆಚ್ಚ ಮಾಡುತ್ತಿವೆ! ಇಷ್ಟಾಗಿಯೂ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಮಾತ್ರ ಉತ್ತಮಗೊಳ್ಳುತ್ತಿಲ್ಲ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯ ಬಹುತೇಕ ಪ್ರಮಾಣವು ನಗರ ಪ್ರದೇಶಗಳ ಮಿತಿ ಮೀರಿದ ಹಾಗೂ ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ದುರ್ಬಳಕೆಯಾಗುತ್ತಿದೆ. ನಗರ ಪ್ರದೇಶಗಳ ನಿರಂಕುಶ ಬೇಡಿಕೆಯನ್ನು ಪೂರೈಸಲು ಗ್ರಾಮೀಣ ಪ್ರದೇಶಗಳ ಜನರು ಅಪಾರ ತ್ಯಾಗವನ್ನು ಮಾಡಬೇಕಾಗಿ ಬಂದಿದೆ. ದೊಡ್ಡ ದೊಡ್ಡ ವಿದ್ಯುತ್ ಉತ್ಪಾದನಾ ಘಟಕಗಳಿಗಾಗಿ ಹಾಗೂ ಅವುಗಳಿಗೆ ಸಂಬಂಧಿಸಿದ ಸಾಗಣೆ ಮಾರ್ಗಗಳಿಗಾಗಿ ಗ್ರಾಮೀಣ ಪ್ರದೇಶಗಳ ಜನರು ಫಲವತ್ತಾದ ಕೃಷಿ ಭೂಮಿ, ಸಮೀಪದ ಅರಣ್ಯ, ನೀರು ಮುಂತಾದ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ. ಹಲವಾರು ಕುಟುಂಬಗಳು ಕೆಲವೇ ದಶಕಗಳಲ್ಲಿ ಎರಡು ಅಥವಾ ಮೂರು ಬಾರಿ ಸ್ಥಳಾಂತರಗೊಂಡು ಅತಿ ದಾರುಣ ಸ್ಥಿತಿಯಲ್ಲಿ ಬದುಕುತ್ತಿರುವ ವರದಿಗಳೂ ಇವೆ. 

(೪)      ದಶಕಗಳ ಕಾಲದಿಂದ ಮುಂದುವರಿದುಕೊಂಡೇ ಬಂದಿರುವ ವಿದ್ಯುತ್ ರಂಗದ ಅದಕ್ಷತೆಯಿಂದಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಧಕ್ಕೆಯಾಗುತ್ತಿರುವ ಜೊತೆಗೇ ರಾಜ್ಯದ ಹಾಗೂ ದೇಶದ ಪರಿಸರಕ್ಕೆ ಆಗುತ್ತಿರುವ ಹಾನಿಯೂ ಅಪಾರ ಪ್ರಮಾಣದ್ದಾಗಿದೆ. ವಿದ್ಯುತ್ ರಂಗದ ಅದಕ್ಷತೆಯಿಂದಾಗಿ ಭೂ ತಾಪಮಾನದ ಏರಿಕೆ, ಹವಾಮಾನದಲ್ಲಿ ತೀವ್ರ ಬದಲಾವಣೆಯಾಗುತ್ತಿರುವುದರ ಜೊತೆ ಜೊತೆಗೇ ನಮ್ಮ ನೈಸರ್ಗಿಕ ಸಂಪನ್ಮೂಲಗಳಾದ ನದಿಗಳು, ಅರಣ್ಯಗಳು, ಸಮುದ್ರ, ಫಲವತ್ತಾದ ಭೂಮಿ ಮುಂತಾದವುಗಳು ಕೂಡ ಶೀಘ್ರ ಅವನತಿ ಹೊಂದುತ್ತಿವೆ.

(೫)      ೨೫.೨.೨೦೧೦ ರಂದು ಸಂಸತ್ತಿನಲ್ಲಿ ೧೩ ನೇ ಹಣಕಾಸು ಆಯೋಗವು ಮಂಡಿಸಿದ ವರದಿಯಂತೆ ವಿದ್ಯುತ್ತಿನ ಸಾಗಣೆ ಮತ್ತು ವಿತರಣೆಯಲ್ಲಿ ತೊಡಗಿರುವ ಸಾರ್ವಜನಿಕ ಉದ್ಯಮಗಳ ದಕ್ಷತೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳದಿದ್ದರೆ ಅವುಗಳ ಒಟ್ಟು ನಿವ್ವಳ ನಷ್ಟವು ೨೦೧೦-೧೧ ರಲ್ಲಿ ರೂ. ೬೮,೬೪೩ ಕೋಟಿಗಳಿಂದ ೨೦೧೪ -೧೫ ರ ಹೊತ್ತಿಗೆ ಸುಮಾರು ರೂ ೧,೧೬,೦೮೯ ಕೋಟಿಗಳಿಗೆ ಹೆಚ್ಚಾಗಬಹುದಾಗಿದೆ. ಈ ಅವ್ಯವಹಾರಕ್ಕೆ ನಮ್ಮ ರಾಜ್ಯದ ಕೊಡುಗೆಯೂ ಅಪಾರವಾಗಿದ್ದು ಆತಂಕಕ್ಕೆ ಕಾರಣವಾಗಿದೆ.

(೬)      ಛತ್ತೀಸ್‌ಗಢ ರಾಜ್ಯದಲ್ಲಿ ಒಂದು ಉಷ್ಣ ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕುವ ಸಮಯದಲ್ಲಿ ಮುಖ್ಯಮಂತ್ರಿಗಳಾದ ತಾವೇ ಹೇಳಿದಂತೆ ನಮ್ಮ ರಾಜ್ಯದಲ್ಲಿ ಕಲ್ಲಿದ್ದಲಿನ ನಿಕ್ಷೇಪವೇ ಇಲ್ಲದಿರುವುದರಿಂದ ನಮ್ಮಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಆರ್ಥಿಕವಾಗಿ ಸಮರ್ಥನೀಯ ಅಲ್ಲವೇ ಅಲ್ಲ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ನೀರು, ಭೂಮಿ ಮತ್ತು ಗಾಳಿಯ ಮಾಲಿನ್ಯಕ್ಕೆ ಕಾರಣವಾಗುವುದರ ಜೊತೆಗೇ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬಾರಿ ಒತ್ತಡ ಹೇರುತ್ತವೆ; ಆದ್ದರಿಂದ ಅವುಗಳು ನಮ್ಮ ರಾಜ್ಯಕ್ಕೆ ಸಾಮಾಜಿಕ ಮತ್ತು ಪರಿಸರ ಸಂಬಂಧಿ ಕಾರಣಗಳಿಂದಲೂ ಸೂಕ್ತವಲ್ಲ. ಪಶ್ಚಿಮ ಘಟ್ಟಗಳ ಸನಿಹದಲ್ಲಿ ಮತ್ತು ಕರಾವಳಿಯಲ್ಲಿ ಸರ್ಕಾರ ಯೋಜಿಸಿರುವ / ಅನುಮತಿಸಿರುವ ಹಲವಾರು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಈ ಹಿನ್ನೆಲೆಯಲ್ಲಿ ರಾಜ್ಯದ ಹಿತ ದೃಷ್ಟಿಯಿಂದ ಹಾನಿಕಾರಕವಾಗಿವೆ. ಉಡುಪಿ, ತದಡಿ, ಚಾಮಲಾಪುರ, ಹಣುಕೋಣ ಮುಂತಾದೆಡೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ವಿರುದ್ಧ ನಡೆದ ಜನಾಂದೋಲನದ ಹಿಂದಿನ ಜನಾಭಿಪ್ರಾಯವನ್ನು ಸರ್ಕಾರವು ಗೌರವಿಸಬೇಕು.

(೭)      ಹಲವಾರು ಅಣೆಕಟ್ಟು ಆಧಾರಿತ ಜಲವಿದ್ಯುತ್ ಯೋಜನೆಗಳಿಂದ ಪಶ್ಚಿಮ ಘಟ್ಟಗಳಲ್ಲಿನ ನಮ್ಮ ಅಪೂರ್ವ ಅರಣ್ಯ ಸಂಪತ್ತಿನ ಹಲವಾರು ಮುಖ್ಯ ಭಾಗಗಳು ಈಗಾಗಲೇ ನಾಶವಾಗಿವೆ. ಇದರಿಂದ ಊಹೆಗೆ ನಿಲುಕಲಾರದಷ್ಟು ನಷ್ಟವುಂಟಾಗಿದೆ. ಇಂತಹ ಯೋಜನೆಗಳನ್ನು ಮತ್ತೆಂದೂ ಕೈಗೆತ್ತಿಕೊಳ್ಳಬಾರದೆಂಬ ಜನಾಭಿಪ್ರಾಯ ಈಗಾಗಲೇ ವ್ಯಕ್ತವಾಗಿದೆ. ಬೇಡ್ತಿ ನದಿ ಮತ್ತು ಗುಂಡ್ಯ ನದಿ ಯೋಜನೆಗಳ ಸಂದರ್ಭದಲ್ಲಿ ಅಣೆಕಟ್ಟು ಆಧಾರಿತ ಜಲವಿದ್ಯುತ್ ಯೋಜನೆಗಳ ವಿರುದ್ಧವಾದ ಇಂತಹ ಜನಾಭಿಪ್ರಾಯ ಸ್ಪಷ್ಟವಾಗಿದೆ. ವಿದ್ಯುತ್ ರಂಗದ ಅತೀವ ಅದಕ್ಷತೆಯ ಪರಿಣಾಮವಾಗಿ ಹೆಚ್ಚು ಹೆಚ್ಚು ವಿದ್ಯುತ್ ಸ್ಥಾವರಗಳ ಸ್ಥಾಪನೆ ಮಾಡುತ್ತಿರುವುದರಿಂದ ನಾಡಿನ ಕರಾವಳಿ ಮತ್ತು ಪಶ್ಚಿಮ ಘಟ್ಟದ ಸೂಕ್ಷ್ಮ ಜೀವವೈವಿಧ್ಯಕ್ಕೆ  ಹಿಂದಿರುಗಲಾರದಷ್ಟು ನಷ್ಟ ಉಂಟಾಗುತ್ತಿದೆ.

(೮) ರಾಜ್ಯದಲ್ಲಿ ವಿದ್ಯುತ್ತಿನ ತೀವ್ರ ಕೊರತೆ ಮತ್ತು ನೀರಿನ ಸಮಸ್ಯೆ ಇರುವಾಗಲೂ ಇಂತಹ ಮೂಲಭೂತ ಸೌಕರ್ಯಗಳ ಅನಿವಾರ್ಯತೆ ಇರುವ ಹಲವಾರು ಬೃಹತ್ ಉದ್ಯಮಗಳನ್ನು ಸ್ವಾಗತಿಸಲಾಗುತ್ತಿದೆ. ಉದ್ಯೋಗಸೃಷ್ಟಿಯ ಆಯಾಮದಲ್ಲಿ ಉದ್ದಿಮೆಗಳು ಬರಬೇಕೆನ್ನುವುದು ಸಹಜ ಅಭಿಪ್ರಾಯವಾಗಿದ್ದರೂ ಸುಸ್ಥಿರ ಅಭ್ಯುದಯದ ದೃಷ್ಟಿಯಿಂದ ಇಂತಹ ಎಷ್ಟು ಬೃಹತ್ ಉದ್ಯಮಗಳನ್ನು ನಮ್ಮ ರಾಜ್ಯದ ಸಂಪನ್ಮೂಲಗಳು ಪೋಷಿಸಬಹುದಾಗಿದೆ ಎಂಬುದನ್ನೂ ಪರಾಮರ್ಶಿಸಬೇಕಾಗಿದೆ.

ಹಲವಾರು ದಶಕಗಳಿಂದಲೂ ನಮ್ಮ ರಾಜ್ಯವನ್ನು ಕಾಡುತ್ತಿರುವ ವಿದ್ಯುತ್ ರಂಗದ ಈ ಎಲ್ಲ ಸಮಸ್ಯೆಗಳಿಗೆ ಸುಸ್ಠಿರ ಪರಿಹಾರ ಪಡೆಯುವುದಕ್ಕಾಗಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮತ್ತು ಅತಿ ಮುಖ್ಯವಾದ ಪರಿಸರದ ಅಳಿವು /ಉಳಿವಿನ ಹಿನ್ನೆಲೆಯಲ್ಲಿ, ವಿದ್ಯುತ್ ರಂಗದ ಈವರೆಗಿನ ನೀತಿಗಳನ್ನು ಸಮಗ್ರವಾಗಿ ಪರಿಶೀಲಿಸಲೇಬೇಕಾದ ಅತಿ ತುರ್ತು ಸಂದರ್ಭ ಈಗ ಒದಗಿದೆ.

ಸಾಂವಿಧಾನಿಕ ಮತ್ತು ಕಾನೂನಿನ, ಹಾಗೂ ಅಂತರ ರಾಷ್ಟ್ರೀಯ ವರದಿಗಳ ಹಿನ್ನೆಲೆ

(೯)      ನಮ್ಮ ಸಂವಿಧಾನದಲ್ಲಿ (ಪರಿಚ್ಛೇದ ೪೮ (ಎ)) ಹೇಳಿರುವಂತೆ ಪರಿಸರವನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿರುವುದು ಸರ್ಕಾರದ ಒಂದು ಮೂಲಭೂತ ಕರ್ತವ್ಯವಾಗಿದೆ. ಸಂವಿಧಾನದಲ್ಲಿ (ಪರಿಚ್ಛೇದ ೫೧(ಎ) (ಜಿ)) ಹೇಳಿರುವಂತೆ ನದಿಗಳು, ಸರೋವರಗಳು, ಅರಣ್ಯ, ವನ್ಯಮೃಗಗಳೂ ಸೇರಿದಂತೆ ನೈಜ ಪರಿಸರವನ್ನು ರಕ್ಷಿಸಿ ಬೆಳೆಸಿ ಅಭಿವೃದ್ಧಿಪಡಿಸುವುದು ಮತ್ತು ಪ್ರಾಣಿ ದಯೆಯು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇದರಲ್ಲಿ ರಾಜ್ಯ ಸರ್ಕಾರಗಳ ಮತ್ತು ಕೇಂದ್ರ ಸರ್ಕಾರದ ಪಾತ್ರವೇ ಬಹಳ ಪ್ರಮುಖವಾಗಿರುವುದರಿಂದ ದೊಡ್ಡ ದೊಡ್ಡ ವಿದ್ಯುತ್ ಉತ್ಪಾದನಾ ಘಟಕಗಳಿಗಾಗಿ ಹಾಗೂ ಅವುಗಳಿಗೆ ಸಂಬಂಧಿಸಿದ ಸಂಪರ್ಕ ಮಾರ್ಗಗಳಿಗಾಗಿ ಫಲವತ್ತಾದ ಕೃಷಿ ಭೂಮಿ, ಅರಣ್ಯ, ನೀರು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಈವರೆಗೆ ಬಳಸಿರುವ ಪರಿಯನ್ನು ವಿಶ್ಲೇಷಿಸಿದರೆ ಸಂವಿಧಾನದ ಈ ಕರ್ತವ್ಯದ ಪಾಲನೆಯ ವಿಷಯದಲ್ಲಿ ನಮ್ಮ ಕರ್ತವ್ಯ ಚ್ಯುತಿ ನಿಚ್ಚಳವಾಗಿ ಗೋಚರಿಸುತ್ತದೆ. 

(೧೦)    ಭಾರತೀಯ ವಿದ್ಯುತ್ ಕಾಯ್ದೆ ೨೦೦೩, ಕರ್ನಾಟಕ ವಿದ್ಯುತ್ ಸುಧಾರಣಾ ಕಾಯ್ದೆ ೨೦೦೦, ಮತ್ತು ರಾಷ್ಟ್ರೀಯ ವಿದ್ಯುತ್ ನೀತಿಗಳಲ್ಲಿ ಪ್ರತಿಪಾದಿಸಿರುವ ಪ್ರಮುಖ ಅಂಶಗಳಾದ ದಕ್ಷತೆ, ಆರ್ಥಿಕ ಮಿತವ್ಯಯ, ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತವಾದ ಬಳಕೆ, ಗ್ರಾಹಕರ ಹಿತರಕ್ಷಣೆ, ನಂಬಲರ್ಹವಾದ ವಿದ್ಯುತ್ ಸರಬರಾಜು, ಪರಿಸರ ಸಂರಕ್ಷಣೆ ಮುಂತಾದ ವಿಷಯಗಳಲ್ಲಿ ನಮ್ಮ ರಾಜ್ಯದ ವಿದ್ಯುತ್ ಕ್ಷೇತ್ರದಲ್ಲಿನ ವಿಫಲತೆಯು ಆತಂಕ ಹುಟ್ಟಿಸಿದೆ.

(೧೧)    ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ಭೂ ಭಾಗದ ಶೇಕಡ ೩೩% ರಷ್ಟು ಪ್ರದೇಶದಲ್ಲಿ ಅರಣ್ಯ ಮತ್ತು ಮರಗಳಿರುವುದು ಅವಶ್ಯಕವೆಂದು ಹೇಳಿದ್ದರೆ, ರಾಜ್ಯದಲ್ಲಿ ಪ್ರಸಕ್ತ ಅರಣ್ಯ ಮತ್ತು ಮರಗಳಿರುವ ಭೂ ಭಾಗವು ಶೇಕಡ ೨೦% ಕ್ಕಿಂತ ಕಡಿಮೆಯಿರುವುದರಿಂದ ವಿದ್ಯುತ್ ಉತ್ಪಾದನೆ ಹಾಗೂ ಸಾಗಾಣಿಕೆಗೆ ಹೆಚ್ಚು ಹೆಚ್ಚು ಅರಣ್ಯ ಭೂಮಿಯನ್ನು ಬಳಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.

(೧೨)    ನಿಸರ್ಗವನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ೧೯೮೨ ರಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿತ್ತು. ಅದರಂತೆ ಕೆಲವು ಮಾರ್ಗದರ್ಶಿ ಸೂತ್ರಗಳು ಹೀಗಿವೆ: (ಅ) ನಿಸರ್ಗಕ್ಕೆ ಸರಿಪಡಿಸಲಾರದಷ್ಟು ಹಾನಿಯಾಗುವ ಚಟುವಟಿಕೆಗಳನ್ನು ನಿರ್ಬಂಧಿಸಬೇಕು; (ಆ) ನಿಸರ್ಗಕ್ಕೆ ಗಣನೀಯವಾದ ಅಪಾಯದ ಶಂಕೆಯಿರುವ ಸಂದರ್ಭದಲ್ಲಿ ಕೂಲಂಕಷವಾದ ಅಧ್ಯಯನ ನಡೆಸಿ, ಅಂತಹ ಚಟುಟಿಕೆಗಳಿಂದ ಆಗುವ ಲಾಭವು ನಷ್ಟಕ್ಕಿಂತಲೂ ಗಣನೀಯ ಎನ್ನಿಸದಿದ್ದರೆ, ಅಥವಾ ನಿಸರ್ಗಕ್ಕೆ ಆಗಬಹುದಾದ ಅಪಾಯದ ಬಗ್ಗೆ ಪೂರ್ಣ ತಿಳುವಳಿಕೆಯಿಲ್ಲದಿದ್ದರೆ ಅಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲಿಯವರೆಗೆ ವಿದ್ಯುತ್ ಕ್ಷೇತ್ರದಲ್ಲಿನ ಯೋಜನೆಗಳನ್ನು ಪರಾಮರ್ಶಿಸಿದಾಗ ಬಹುತೇಕ ಯೋಜನೆಗಳಲ್ಲಿ ಈ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗುತ್ತದೆ.

(೧೩)    ದೊಡ್ಡ ಅಣೆಕಟ್ಟುಗಳಿಂದ ಜೀವ ವೈವಿಧ್ಯದ ಮೇಲೆ ಆಗುವ ದುಷ್ಪರಿಣಾಮಗಳು ಎಂಬ ಅಂತರ ರಾಷ್ಟ್ರೀಯ ಸ್ತರದ ವರದಿಯಂತೆ ಪರಿಸರದಿಂದ ನಮಗೆ ಲಭ್ಯವಾಗುವ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವು ಪ್ರಪಂಚದ ವಾರ್ಷಿಕ ಉತ್ಪನ್ನದ ಸುಮಾರು ಎರಡರಷ್ಟಾಗುತ್ತದೆ.  ಇದರ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿನ ಜೀವ ವೈವಿಧ್ಯದ ಒಟ್ಟು ಆರ್ಥಿಕ ಮೌಲ್ಯವು ರಾಜ್ಯದ ವಾರ್ಷಿಕ ಉತ್ಪನ್ನದಷ್ಟು ಎಂದೇ ಅಂದಾಜು ಮಾಡಿದರೂ ಸಾಕು, ಸತತವಾಗಿ ನಶಿಸುತ್ತಿರುವ ಜೀವ ವೈವಿಧ್ಯದಿಂದ ರಾಜ್ಯಕ್ಕೆ ಒದಗುತ್ತಿರುವ ಅಪಾರ ನಷ್ಟದ ಅರಿವಾಗುತ್ತದೆ. ಜೀವ ವೈವಿಧ್ಯಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಡಂಬಡಿಕೆಯೊಂದರ ಅನ್ವಯ ಜೀವ ವೈವಿಧ್ಯದ ಸಣ್ಣ ಸಣ್ಣ ಅಂಗಗಳು ಅಳಿದು ಹೋಗುವ ಮೊದಲೇ ಅವುಗಳನ್ನು ಸಂರಕ್ಷಿಸುವುದು ಸೂಕ್ತವಾದ ಮುನ್ನೆಚ್ಚರಿಕೆಯ ಕ್ರಮ.

(೧೪)    ಭೂಮಿಯ ತಾಪಮಾನ ಹೆಚ್ಚಳ ಮತ್ತು ಹವಾಮಾನ ವೈಪರೀತ್ಯವನ್ನು ಕಡಿಮೆಗೊಳಿಸುವಲ್ಲಿ ಅರಣ್ಯಗಳ ಪಾತ್ರವು ಬಹು ಮುಖ್ಯ ಎಂಬುದು ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಖಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅರಣ್ಯಗಳ ವಿಸ್ತಾರ ಮತ್ತು ಗುಣ ಮಟ್ಟ ಕಡಿಮೆಯಾಗುತ್ತಿರುವುದು ಬಹಳ ಆತಂಕದ ವಿಷಯವಾಗಿದೆ. ನಮ್ಮ ಅರಣ್ಯಗಳನ್ನು ಸಂರಕ್ಷಿಸುವ ಸಲುವಾಗಿ ರಾಜ್ಯಗಳಿಗೆ ಆರ್ಥಿಕ ಉತ್ತೇಜನವನ್ನು ನೀಡಲು ಕೇಂದ್ರ ಸರ್ಕಾರವು ಇತ್ತೀಚೆಗೆ ಚಿಂತನೆ ನಡೆಸಿದ್ದನ್ನು ಗಮನಿಸಿಯಾದರೂ ನಮಗೆ ಅರಣ್ಯಗಳ ಮಹತ್ವದ ಅರಿವಾಗಬೇಕಾಗಿದೆ.

ಸುಸ್ಥಿರ ವಿದ್ಯುತ್ ಸರಬರಾಜಿನೆಡೆಗೆ : ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇತರೆ ಪರ್ಯಾಂಯಗಳು

ವಿದ್ಯುತ್ ಶಕ್ತಿ ರಂಗದ ಈ ಎಲ್ಲ ಸಮಸ್ಯೆಗಳಿಗೆ ಸುಸ್ಠಿರ ಪರಿಹಾರ ಪಡೆಯುವ ದಿಸೆಯಲ್ಲಿ ಈ ರಂಗದಲ್ಲಿನ ಪ್ರಸಕ್ತ ಧೋರಣೆಗಳಲ್ಲಿ ಮೂಲಭೂತ ಬದಲಾವಣೆಯ ಅವಶ್ಯಕತೆಯನ್ನು ರಾಜ್ಯವು ಮೊದಲು ಮನಗಾಣಬೇಕು. ವಿದ್ಯುತ್ತಿನ ನಿಜವಾದ ಬೇಡಿಕೆ ಎಷ್ಟಿದೆ? ವಿದ್ಯುತ್ತಿನ ಉತ್ಪಾದನೆ, ವಿತರಣೆ ಮತ್ತು ಬಳಕೆಯಲ್ಲಿನ ನಮ್ಮ ರಾಜ್ಯದ ದಕ್ಷತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೊಯ್ಯಲು ಸಾಧ್ಯವಿಲ್ಲವೇ? ವಿದ್ಯುತ್ತಿನ ವಿವಿಧ ಗ್ರಾಹಕರಿಗೆ ಮಾರಾಟ ದರ ಸೂಕ್ತವಾಗಿದೆಯೇ? ಸಾಂಪ್ರದಾಯಿಕ ಇಂಧನ ಮೂಲಗಳಿಂದ ನಮಗೆ ಸುಸ್ಥಿರವಾಗಿ/ಸತತವಾಗಿ ವಿದ್ಯುತ್ ದೊರೆಯುತ್ತದೆಯೇ? ಅವುಗಳಿಗೆ ಸೂಕ್ತ ಪರ್ಯಾಯಗಳಿವೆಯೇ? ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಸಮಾನತೆಯನ್ನು ಹೋಗಲಾಡಿಸುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರವನ್ನು ಪಡೆಯಬೇಕಿದೆ.

(೧೫)    ವಿದ್ಯುತ್ತಿನ ನಿಜವಾದ ಬೇಡಿಕೆ ಎಷ್ಟಿದೆ ಎಂಬುದರ ಬಗ್ಗೆ ತಜ್ಞರಲ್ಲೇ ಒಮ್ಮತವಿಲ್ಲ. ಈ ವಿಚಾರದಲ್ಲಿ ಸರ್ಕಾರದ ವಿವಿಧ ಅಂಗಗಳೂ, ಸಚಿವರೂ ಬೇರೆ ಬೇರೆ ಲೆಕ್ಕಗಳನ್ನು ನೀಡುತ್ತಿದ್ದಾರೆ. ವಿದ್ಯುತ್ ಕಂಪನಿಗಳೂ ತಮ್ಮ ಅನುಕೂಲಕ್ಕಾಗಿ ಬೇಡಿಕೆಯನ್ನು ಉತ್ಪ್ರೇಕ್ಷೆ ಮಾಡುತ್ತಿದ್ದಾರೆ ಎಂಬ ವಾದವೂ ಇದೆ.  ನಮ್ಮ ರಾಜ್ಯದಲ್ಲಿ ಸಾಂಪ್ರದಾಯಿಕ ವಿದ್ಯುತ್ತಿನ ಉತ್ಪಾದನಾ ಸಾಮರ್ಥ್ಯಕ್ಕೆ ಮಿತಿ ಇರುವುದರಿಂದ ವಿದ್ಯುತ್ತಿನ ನಿಜವಾದ (ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಪೂರಕವಾದ) ಬೇಡಿಕೆಯನ್ನು ಸಾಧ್ಯವಾದ ಮಟ್ಟಿಗೆ ಮಿತಿಗೊಳಿಸುವವರೆಗೂ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿನ ಸಮಸ್ಯೆಗಳು ಮುಂದುವರೆಯುತ್ತವೆ ಎಂಬುದಾಗಿ ತಜ್ಞರ ಸಹಮತವಾಗಿದೆ.

(೧೬)    ಮಾಧ್ಯಮಗಳಲ್ಲಿ ಅಥವ ಸರ್ಕಾರದ ವರದಿಗಳಲ್ಲಿ ಸಾಮಾನ್ಯವಾಗಿ ಉಲ್ಲೇಖವಾಗುವ ವಿದ್ಯುತ್ತಿನ ಬೇಡಿಕೆ ನೈಜವಾದದ್ದೇ ? ಈ ಎಲ್ಲ ಬೇಡಿಕೆಯೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವೇ ? – ಈ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಿದಾಗ ಅಚ್ಚರಿಯ ಸಂಗತಿಗಳು ಹೊರಬೀಳುತ್ತವೆ: ರಾತ್ರಿ ಹೊತ್ತಿನ ಕ್ರೀಡೆಗಳು; ಬೆಂಗಳೂರು, ಮೈಸೂರಿನಂತಹ ತಂಪಾದ ನಗರಗಳಲ್ಲೂ ಹವಾ ನಿಯಂತ್ರಿತ ನಿವಾಸಗಳು, ವಸತಿ ಸಮುಚ್ಚಯಗಳು ಹಾಗೂ ವ್ಯಾಪಾರ ಮಳಿಗೆಗಳು; ವ್ಯಾಪಾರ ಮಳಿಗೆಗಳಲ್ಲಿನ ಮಿತಿಮೀರಿದ ಅಲಂಕಾರಿಕ ದೀಪಗಳು; ಜಾಹಿರಾತು ಫಲಕಗಳಲ್ಲಿನ ಅತಿ ಪ್ರಕಾಶಮಾನವಾದ ದೀಪಗಳು, ಇಂತಹ ಹಲವಾರು ಉದ್ದೇಶಗಳಿಗೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ತಿನ ಬಳಕೆಯಾಗುತ್ತಿದೆ.  ಈ ಚಟುವಟಿಕೆಗಳಿಂದ ಎಂತಹ ಅಭಿವೃದ್ಧಿಯಾಗುತ್ತಿದೆ ಮತ್ತು ಸಮಾಜದ ಯಾವ ವರ್ಗದವರಿಗೆ ಉಪಯೋಗವಾಗುತ್ತಿದೆ ಎಂಬುದನ್ನು ವಸ್ತುನಿಷ್ಠವಾಗಿ ವಿಮರ್ಶಿಸಿದರೆ ನಮ್ಮ ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ಅಪಾರ ಅವಕಾಶಗಳಿವೆ ಎಂಬುದು ನಿಚ್ಚಳವಾಗುತ್ತದೆ.

ಸೂರ್ಯನ ಬೆಳಕಿನಲ್ಲೂ ಬೆಳಗುವ ಬೀದಿ ದೀಪಗಳು; ರಾತ್ರಿ ಹೊತ್ತಿನಲ್ಲಿ ಅತಿಹೆಚ್ಚು ಪ್ರಕಾಶಮಾನವಾದ ಬೀದಿ ದೀಪಗಳು; ಮನೆಗಳಲ್ಲಿ, ಕಛೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ವ್ಯಾಪಾರ ಮಳಿಗೆಗಳಲ್ಲಿ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವಶ್ಯಕವಾದ್ದಕ್ಕಿಂತ ಹೆಚ್ಚು ಪ್ರಕಾಶಮಾನವಾದ ದೀಪಗಳು ಹಾಗೂ ಅನಿವಾರ್ಯತೆಯಿಲ್ಲದ ಸಮಯದಲ್ಲೂ ಬೆಳಗುವ ದೀಪಗಳು – ಇವೆಲ್ಲವನ್ನೂ ನಿಯಂತ್ರಿಸುವುದು ನಮ್ಮ ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ಇರುವ ಅಪಾರ ಅವಕಾಶಗಳಾಗಿವೆ. ಕೇಂದ್ರ ಸರ್ಕಾರದ ಇಂಧನ ಮಂತ್ರಾಲಯದ ಲೆಕ್ಕಾಚಾರದಂತೆ ಬೆಳಕಿಗಾಗಿ ಬಳಕೆಯಾಗುತ್ತಿರುವ ವಿದ್ಯುತ್ತಿನ ಪ್ರಮಾಣವೇ ದೇಶದ ಒಟ್ಟು ವಿದ್ಯುತ್ ಬಳಕೆಯ ಸುಮಾರು ಶೇಕಡ ೧೬ ರಿಂದ ೧೯ ರಷ್ಟು; ಇದರಲ್ಲಿ ವ್ಯರ್ಥವಾಗುತ್ತಿರುವ ವಿದ್ಯುತ್ತಿನ ರೂಪದಲ್ಲಿ ಒಟ್ಟು ಬಳಕೆಯ ಶೇಕಡ ಸುಮಾರು ೫ ರಿಂದ ೮ ರಷ್ಟನ್ನು ಉಳಿಸಬಹುದಾಗಿದೆ. ಹೆಚ್ಚು ದಕ್ಷತೆಯ ಸಿ.ಎಫ್.ಎಲ್ ಮತ್ತು ಎಲ್.ಇ.ಡಿ ದೀಪಗಳ ಉಪಯೋಗದಿಂದ ಮತ್ತು ಸಾರ್ವಜನಿಕ ತಿಳಿವಳಿಕೆ ಅಭಿಯಾನದಿಂದ ಇಂತಹ ಉಳಿತಾಯವನ್ನು ತುರ್ತಾಗಿ ಸಾಧಿಸಲೇಬೇಕಾದ ಅನಿವಾರ್ಯತೆ ಬಂದಿದೆ.

(೧೭)    ನಮ್ಮ ರಾಜ್ಯದಲ್ಲಿ /ದೇಶದಲ್ಲಿ ವಿದ್ಯುತ್ತಿನ ಒಟ್ಟು ಬಳಕೆಯ ಶೇಕಡ ಸುಮಾರು ೩೫ ರಿಂದ ೪೦ ರಷ್ಟು ಕೃಷಿ ಕ್ಷೇತ್ರವೊಂದರಲ್ಲೇ ಬಳಕೆಯಾಗುತ್ತಿದ್ದು ಈ ಕ್ಷೇತ್ರದಲ್ಲಿ ವಿದ್ಯುತ್ ಬಳಕೆಯ ದಕ್ಷತೆಯು ಶೇಕಡ ಸುಮಾರು ೫೦ ರಷ್ಟು ಮಾತ್ರವಿದೆ. ರೈತ ಸಮುದಾಯಕ್ಕೆ ಅವಶ್ಯವಾದ ಮಾರ್ಗದರ್ಶನಗಳ ಜೊತೆಗೇ ನೀರಾವರಿಗಾಗಿ ಅವರು ಉಪಯೋಗಿಸುವ ವಿದ್ಯುತ್ ಯಂತ್ರಗಳ ದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ಮತ್ತು ಅತಿ ಕಡಿಮೆ ಘರ್ಷಣೆಯುಳ್ಳ ನೀರಿನ (PVC) ಕೊಳವೆಗಳ ಉಪಯೋಗದ ಮೂಲಕ ಕೃಷಿ ಕ್ಷೇತ್ರದಲ್ಲಿ ವಿದ್ಯುತ್ ಪೋಲಾಗುವುದನ್ನು ಮಿತಿಗೊಳಿಸಲು ಸಾಧ್ಯವಿದ್ದು ಇದರಿಂದಾಗಿ ನಮ್ಮ ರಾಜ್ಯದಲ್ಲಿ ವಿದ್ಯುತ್ತಿನ ಒಟ್ಟು ಬಳಕೆಯ ಶೇಕಡ ಸುಮಾರು ೧೫ ರಿಂದ ೧೯ ರಷ್ಟು ಉಳಿಸಲು ಅವಕಾಶವಿದೆ. ಇದಕ್ಕಾಗಿ ಬಂಡವಾಳ ವೆಚ್ಚವಾಗುತ್ತದಾದರೂ, ಸರ್ಕಾರ ಮತ್ತು ರೈತ ಸಮುದಾಯಕ್ಕೆ ಒಂದು ಸಲ ಮಾತ್ರ ತಗಲುವ ಈ ವೆಚ್ಚದಿಂದ ಅಪಾರ ಪ್ರಮಾಣದ ಲಾಭವಿದೆ; ಇದರ ಪ್ರಯೋಜನಗಳಂತೂ ನಿರಂತರವಾಗಿವೆ. ಇದರಿಂದಾಗಿ ಸರ್ಕಾರಕ್ಕೆ, ರೈತ ಸಮುದಾಯಕ್ಕೆ ಹಾಗೂ ವಿಶಾಲ ಸಮಾಜಕ್ಕ್ಕೆ ನಿರಂತರವಾಗಿ ತಗಲುವ ವೆಚ್ಚಗಳು ಉಳಿತಾಯವಾಗುತ್ತವೆ, ಮತ್ತು ವಿದ್ಯುತ್ ಸರಬರಾಜಿನ ವ್ಯವಸ್ಥೆಯ ಮೇಲೆ ಈಗಿರುವ ಭಾರಿ ಒತ್ತಡವೂ ಕಡಿಮೆಯಾಗುತ್ತದೆ.

(೧೮)    ಕಾರ್ಖಾನೆಗಳಲ್ಲಿ ಮತ್ತು ಸಣ್ಣ ಸಣ್ಣ ಉದ್ದಿಮೆಗಳಲ್ಲಿ ವಿದ್ಯುತ್ ಬಳಕೆಯಲ್ಲಿನ ದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ರಾಜ್ಯದಲ್ಲಿ ವಿದ್ಯುತ್ತಿನ ಒಟ್ಟು ಬಳಕೆಯಲ್ಲಿ ಶೇಕಡ ಸುಮಾರು ೫ ರಿಂದ ೮ ರಷ್ಟು ಉಳಿಸಲು ಅವಕಾಶಗಳಿವೆ ಎಂದು ವರದಿಗಳು ತಿಳಿಸುತ್ತವೆ. ಇದರೆಡೆಗೆ ಹೆಚ್ಚು ಒತ್ತು ನೀಡಿದಲ್ಲಿ ನಮ್ಮ ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ವಿಪುಲ ಅವಕಾಶವಿದೆ.

(೧೯)    ರಾಜ್ಯದಲ್ಲಿ ಲಭ್ಯವಿರುವ ಒಟ್ಟು ವಿದ್ಯುತ್ತಿನ ಶೇಕಡ ಸುಮಾರು ೨೫ ರಿಂದ ೩೦ ರಷ್ಟು ಸಾಗಣೆ ಮತ್ತು ವಿತರಣೆಯಲ್ಲಿ ವ್ಯಯವಾಗುತ್ತಿದೆ.  ಅಂತರ ರಾಷ್ಟ್ರೀಯ ಸ್ತರದಲ್ಲಿ ಈ ಕಾರಣದಿಂದ ವ್ಯಯವಾಗುತ್ತಿರುವ ವಿದ್ಯುತ್ತಿನ ಪ್ರಮಾಣವು ಕೇವಲ ೫ ರಿಂದ ೮ ರಷ್ಟಿದ್ದು, ಈ ದಿಸೆಯಲ್ಲಿ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡಿದರೆ ನಮ್ಮ ರಾಜ್ಯದಲ್ಲಿ ಶೇಕಡ ಸುಮಾರು ೧೫ ರಿಂದ ೨೦ ರಷ್ಟು ವಿದ್ಯುತ್ತನ್ನು ಅತಿ ಕಡಿಮೆ ವೆಚ್ಚದಲ್ಲಿ ಉಳಿಸಬಹುದು. ಇಂತಹ ಪ್ರಕ್ರಿಯೆಗೆ ತಗಲುವ ವೆಚ್ಚವು ಹೊಸದಾದ ವಿದ್ಯುತ್ ಉತ್ಪಾದನಾ ಕೇಂದ್ರವೊಂದರ ವೆಚ್ಚಕ್ಕೆ ಹೋಲಿಕೆಯಲ್ಲಿ ಶೇಕಡ ಸುಮಾರು ೨೦ ರಷ್ಟು ಮಾತ್ರ; ಅಲ್ಲದೆ ಈ ಪ್ರಕ್ರಿಯೆಯಲ್ಲಿ ಯಾವುದೇ ಸಾಮಾಜಿಕ ಮತ್ತು ಪರಿಸರ ಸಂಬಂಧಿ ಸಮಸ್ಯೆಗಳಿಲ್ಲದಿರುವುದರಿಂದ ಇದಕ್ಕೆ ಬಹಳ ಪ್ರಾಮುಖ್ಯವನ್ನು ನೀಡಬೇಕಿದೆ.

ಈ ಎಲ್ಲ ವಿಧಾನಗಳಿಂದ ಉಳಿತಾಯವಾಗುವ ವಿದ್ಯುತ್ತಿನ ಪ್ರಮಾಣವು ರಾಜ್ಯದಲ್ಲಿ ಲಭ್ಯವಿರುವ ಒಟ್ಟು ವಿದ್ಯುತ್ತಿನ ಶೇಕಡ ಸುಮಾರು ೪೦ ರಿಂದ ೫೦ ರಷ್ಟಾಗಬಹುದಾಗಿದ್ದು ನಮ್ಮ ರಾಜ್ಯದ ವಿದ್ಯುತ್ ಸರಬರಾಜಿನ ವ್ಯವಸ್ಥೆಯ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಧನಾತ್ಮಕ ಪರಿಣಾಮ ಬೀರಲು ಸಾಕಷ್ಟು ಅವಕಾಶವಿದೆ.  ಪ್ರಸಕ್ತ ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆಯ ಪ್ರಮಾಣವು ಶೇಕಡ ೧೫ ರಷ್ಟಿದೆ ಎಂದರೂ ಸಹ ಮೇಲೆ ಹೇಳಿದ ಸುಧಾರಣಾ ಕ್ರಮಗಳಿಂದ ಈ ಕೊರತೆಯನ್ನು ಸಂಪೂರ್ಣ ನೀಗಿಸಿ ಮುಂದಿನ ಕೆಲವು ವರ್ಷಗಳ ವಿದ್ಯುತ್ ಬೇಡಿಕೆಯನ್ನೂ ಸಮಾಧಾನಕರವಾಗಿ ಈಡೇರಿಸಬಹುದು.  ಸೋಜಿಗದ ಸಂಗತಿಯೆಂದರೆ ಇಂತಹ ಹಲವಾರು ಸುಧಾರಣಾ ಕ್ರಮಗಳಿಗೆ ತಗಲುವ ಒಟ್ಟು ವೆಚ್ಚವು ಹೊಸದಾದ ವಿದ್ಯುತ್ ಉತ್ಪಾದನಾ ಕೇಂದ್ರಗಳ ವೆಚ್ಚದ ಅರ್ಧಕ್ಕಿಂತಲೂ ಕಡಿಮೆಯಾಗಬಹುದು. ಈ ವಿಚಾರಗಳನ್ನು ತಜ್ಞರು ೧೯೮೦ರ ದಶಕದಿಂದಲೇ ಹೇಳುತ್ತ ಬಂದಿದ್ದರೂ ರಾಜ್ಯ ಸರ್ಕಾರಗಳು ಈ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗದಿರುವುದು ಅಕ್ಷಮ್ಯವಾಗಿದೆ.  ವಿದ್ಯುತ್ ಕ್ಷೇತ್ರದ  ದಕ್ಷತೆಯನ್ನು ಹೆಚ್ಚಿಸುವ ಇಂತಹ ಸುಲಭೋಪಾಯಗಳ ಪೂರ್ಣ ಪ್ರಯೋಜನ ಪಡೆಯದೆಯೇ ಪ್ರತಿ ವರ್ಷ ಸಾವಿರಾರು ಕೋಟಿಗಳಷ್ಟು ಹಣವನ್ನೂ ಮತ್ತು ನೈಸರ್ಗಿಕ ಸಂಪತ್ತನ್ನೂ ಹೊಸದಾದ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗಾಗಿ ವ್ಯಯ ಮಾಡುವುದು ನಮ್ಮ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂಬ ಅಂಶವನ್ನು ಸರ್ಕಾರವು ಈಗಲೂ ಒಪ್ಪದಿದ್ದರೆ ಸಮಾಜ ದ್ರೋಹವೆನ್ನಿಸಿಕೊಳ್ಳುತ್ತದೆ.

ಮೇಲೆ ಹೇಳಿದ ಸುಧಾರಣಾ ಕ್ರಮಗಳ ಜೊತೆಗೇ ನವೀಕರಿಸಬಹುದಾದ (ಖeಟಿeತಿಚಿbಟe) ಇಂಧನ ಮೂಲಗಳಿಂದಲೂ ನಮಗೆ ಮುಂದಿನ ವರ್ಷಗಳಲ್ಲಿ ಬೇಕಾದ ಬಹುತೇಕ ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ದೊರಕಲು ಸಾಧ್ಯ; ಆದ್ದರಿಂದ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿರುವ  ಸಾಂಪ್ರದಾಯಿಕ (ನವೀಕರಿಸಲಾಗದ) ವಿದ್ಯುತ್ ಉತ್ಪಾದನಾ ವ್ಯವಸ್ಥೆಗಳಾದ ಅಣೆಕಟ್ಟು ಆಧಾರಿತ ಜಲ ವಿದ್ಯುತ್, ಕಲ್ಲಿದ್ದಲು ಆಧಾರಿತ ವಿದ್ಯುತ್ ಮತ್ತು ಅಣುಶಕ್ತಿ ಆಧಾರಿತ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲು ಯೋಚಿಸುವ ಮೊದಲು ಸಂಬಂಧಪಟ್ಟ ಎಲ್ಲ ವಿಷಯಗಳಲ್ಲೂ ವಸ್ತುನಿಷ್ಠವಾದ ಕೂಲಂಕಷ ಅಧ್ಯಯನವನ್ನು ನಡೆಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.

(೨೦)    ಉಷ್ಣ ವಲಯದ ದೇಶದ ಭಾಗವಾದ್ದರಿಂದ ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳು ವಿಪುಲವಾಗಿದ್ದು ಅವುಗಳ ಸದುಪಯೋಗದಿಂದ ವಿದ್ಯುತ್ ಸರಬರಾಜಿನ ವ್ಯವಸ್ಥೆಯ ಮೇಲೆ ಈಗಿರುವ ಭಾರೀ ಒತ್ತಡವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಿದೆ.

ನಮ್ಮ ರಾಜ್ಯದಲ್ಲಿ ಪವನ ಶಕ್ತಿ, ಕಿರು ಜಲ ವಿದ್ಯುತ್, ಸೌರ ಶಕ್ತಿ, ಜೈವಿಕ ಇಂಧನ ಮೂಲಗಳು ಮತ್ತು ಸಮುದ್ರದ ಅಲೆಗಳ ಶಕ್ತಿ ಮೂಲಗಳು – ಇವುಗಳ ಒಟ್ಟು ಸಾಮರ್ಥ್ಯವು ಅಪಾರವಾಗಿದೆ; ಇವುಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಪರಿಣಾಮಕಾರಿಯಾಗಿ ಬಳಸುವುದರಿಂದ ವಿದ್ಯುತ್ ಕ್ಷೇತದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ, ಹಾಗೂ ಭಾರಿ ಗಾತ್ರದ ಕೇಂದ್ರೀಕೃತ ಸ್ಥಾವರಗಳ ಅನಿವಾರ್ಯತೆಯಿಂದ ಖಂಡಿತವಾಗಿಯೂ ಹೊರಬರಬಹುದು.

(೨೧)    ನವೀಕರಿಸಬಹುದಾದ ಇಂಧನ ಮೂಲಗಳು ಸಣ್ಣ ಸಣ್ಣ ಗಾತ್ರಗಳಲ್ಲಿಯೇ ನಮ್ಮ ಸಮಾಜಕ್ಕೆ ಅತ್ಯಂತ ಪ್ರಯೋಜನಕಾರಿಯಾ ಗುವಂತಹವು. ವಿದ್ಯುತ್ ಸರಬರಾಜಿನ ಪ್ರಸಕ್ತ ವ್ಯವಸ್ಥೆಯ ಮುಖ್ಯ ಸಮಸ್ಯೆಗಳನ್ನು (ಭಾರಿ ಗಾತ್ರದ ಕೇಂದ್ರೀಕೃತ ಸ್ಥಾವರಗಳ ದುಷ್ಪರಿಣಾಮಗಳು ಮತ್ತು ಸಾಗಣೆ ಮತ್ತು ವಿತರಣೆಯಲ್ಲಿನ ನಷ್ಟಗಳು) ಮನೆಯ ಮೇಲೆ ಸ್ಥಾಪಿಸಲ್ಪಟ್ಟ ಸೌರ ವಿದ್ಯುತ್ ಕೋಶಗಳು / ಪವನ ಯಂತ್ರಗಳು, ಸಮುದಾಯ ಕೇಂದ್ರಗಳಲ್ಲಿ ಸ್ಥಾಪಿಸಲ್ಪಟ್ಟ ಸೌರ ವಿದ್ಯುತ್ ಕೋಶಗಳು ಅಥವ ಜೈವಿಕ ಇಂಧನ ಸ್ಥಾವರಗಳ ಮೂಲಕ ನಿವಾರಿಸಬಹುದು. ಭಾರಿ ಗಾತ್ರದ ಕೇಂದ್ರೀಕೃತ ಸ್ಥಾವರಗಳಿಂದ ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ತಗಲುವ ಅಗಾಧವಾದ ಬಂಡವಾಳವನ್ನೂ; ಅರಣ್ಯಗಳ, ನದಿಗಳ ಅಥವಾ ಕೃಷಿ ಭೂಮಿಯ ಅವನತಿಯನ್ನೂ; ಮತ್ತು ಪರಿಸರದ ಮೇಲಿನ ದುಶ್ಪರಿಣಾಮಗಳನ್ನೂ ಇಂತಹ ಸಣ್ಣ ಪ್ರಮಾಣದ ಸ್ಥಾವರಗಳ ಸಹಾಯದಿಂದ ಅತ್ಯಂತ ಕಡಿಮೆಗೊಳಿಸಬಹುದು.  ಇಂತಹ ಸಣ್ಣ ಪ್ರಮಾಣದ ಸ್ಥಾವರಗಳಿಂದ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಇಂಧನ ಸ್ವಾವಲಂಬನೆಯು ದೊರೆತು ಅವುಗಳ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ ಹಾಗೂ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ತಪ್ಪುತ್ತದೆ.

ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಸಾಮರ್ಥ್ಯ

(ಆಧಾರ: ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮೂಲಗಳ ಇಲಾಖೆ)

ಈ ಎಲ್ಲ ಸುಧಾರಣಾ ಪ್ರಕ್ರಿಯೆಗಳಿಂದ ರಾಜ್ಯದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿ ವಿದ್ಯುತ್ ಸರಬರಾಜನ್ನು ಸುಸ್ಥಿರ, ಪರಿಸರ ಸ್ನೇಹಿ, ಮತ್ತು ಜನಪರ ತಳಹದಿಯ ಮೇಲೆ ಸ್ಥಾಪಿಸಬಹುದು. ಭಾರಿ ಗಾತ್ರದ ವಿದ್ಯುತ್ ಉತ್ಪಾದನಾ ಸ್ಥಾವರಗಳ ಸಂಖ್ಯೆಯನ್ನು ಎಷ್ಟು ಹೆಚ್ಚಿಸಿದರೂ ನಗರ ವಾಸಿಗಳ ಮಿತಿಯಿಲ್ಲದ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಸಾಧ್ಯವೇ ಇಲ್ಲ. ಹಾಗೂ ವಿದ್ಯುತ್ ಕ್ಷೇತ್ರದ ಪ್ರಸಕ್ತ ವ್ಯವಹಾರದಲ್ಲಿ ಭ್ರಷ್ಟತೆ ತಾಂಡವವಾಡುತ್ತಿದೆ ಎಂಬ ಸಾರ್ವಜನಿಕರ ಖಚಿತ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರದ ದೃಷ್ಟಿಕೋನವನ್ನು ಅಮೂಲಾಗ್ರವಾಗಿ ಬದಲಾಯಿಸಲೇಬೇಕಾಗಿದೆ.

 ಸಾರ್ವಜನಿಕರ ನಿರೀಕ್ಷೆಗಳು

(೨೧) ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲಿನ ಸಾರ್ವಜನಿಕರ ನಿರೀಕ್ಷೆಗಳು ಕೆಳಕಂಡಂತಿದೆ:

(ಅ) ರಾಜ್ಯದ ವಿದ್ಯುತ್ ಬೇಡಿಕೆ/ಸರಬರಾಜಿನ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ತಜ್ಞರ ಒಂದು ತಂಡ ರಚಿಸಿ ಪರಿಣಾಮಕಾರಿ ಸಾರ್ವಜನಿಕ ಸಮಾಲೋಚನೆಯ ಮೂಲಕ ಸುಸ್ಥಿರ, ಪರಿಸರ ಸ್ನೇಹಿ, ಮತ್ತು ಜನಪರ ವಿದ್ಯುತ್ ನೀತಿಯನ್ನು ತಯಾರಿಸಬೇಕು.

(ಆ) ರಾಜ್ಯದ ನಿಜವಾದ ವಿದ್ಯುತ್ ಬೇಡಿಕೆಯನ್ನು ಮತ್ತು ಬೇಡಿಕೆಯ ಏರಿಕೆಯ ಗತಿಯನ್ನು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಪೂರಕವಾದ ಮತ್ತು ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತವಾದ ಬಳಕೆಯ ಮಿತಿಯ ಹಿನ್ನೆಲೆಯಲ್ಲಿ ಗುರುತಿಸಬೇಕು. ಈ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆಯನ್ನು ಸರ್ವಾಂಗೀಣ ಪ್ರಗತಿಗೆ ಹಿನ್ನಡೆಯಾಗದಂತೆ ಮಿತಿಗೊಳಿಸುವ ವಿಧಾನಗಳನ್ನೂ ಸಹ ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕು.

(ಇ) ಸಣ್ಣ ಗಾತ್ರದ ನವೀಕರಿಸಬಹುದಾದ ಇಂಧನ ಸ್ಥಾವರಗಳ ಬಳಕೆಯನ್ನು ರಾಜ್ಯದ ಎಲ್ಲೆಡೆ ಜನಪ್ರಿಯಗೊಳಿಸಲು ಸಾಧ್ಯವಾದ ಪ್ರಯತ್ನಗಳೆಲ್ಲವನ್ನೂ ಮಾಡಬೇಕು. ಅವಶ್ಯವಾದರೆ ಸಹಾಯ ಧನವನ್ನೂ ಪರಿಣಾಮಕಾರಿಯಾಗಿ ಬಳಸಬೇಕು.

(ಈ) ಕಲ್ಲಿದ್ದಲು ಆಧಾರಿತ ಅಥವಾ ಅಣೆಕಟ್ಟು ಆಧಾರಿತ ಜಲ ವಿದ್ಯುತ್ ಅಥವ ಪರಮಾಣು ಇಂಧನ ಆಧಾರಿತ ಉತ್ಪಾದನ ಸ್ಥಾವರಗಳನ್ನು ಸ್ಥಾಪಿಸುವ ಮೊದಲು ಬೇರೆಲ್ಲ ಪರ್ಯಾಯಗಳನ್ನೂ ಸಂಪೂರ್ಣವಾಗಿ ಬಳಸಿ, ನಂತರ ಆಗಿನ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ಪರಿಶೀಲಿಸಿ ಪರಿಣಾಮಕಾರಿಯಾದ ಸಾರ್ವಜನಿಕ ಸಮಾಲೋಚನೆಯ ಮೂಲಕವೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು.

(ಉ) ವಿದ್ಯುತ್ ಶಕ್ತಿ ಕಂಪನಿಗಳು ದಕ್ಷತೆಯಿಂದ ಹಾಗೂ ಸಾಮಾಜಿಕ ಬದ್ದತೆಯಿಂದ ಕೆಲಸ ನಿರ್ವಹಿಸುವಂತೆ ಮಾಡಲು ಅವುಗಳಿಗೆ ಬೇಕಾದ ಸ್ವಾತಂತ್ರ್ಯವನ್ನು ನೀಡಿ, ಅವುಗಳನ್ನು ಸಮಾಜಕ್ಕೆ ನಿಜವಾದ ಉತ್ತರದಾಯಿಗಳನ್ನಾಗಿಯೂ ಮಾಡಬೇಕು.

 ತಮ್ಮ ವಿಶ್ವಾಸಿಗಳಾದ

೧.       ಡಾ. ಜಿ. ಎಸ್. ಶಿವರುದ್ರಪ್ಪ, ಕವಿ.

೨.       ನ್ಯಾ. ಎಂ. ರಾಮಾ ಜೋಯಿಸ್, ರಾಜ್ಯಸಭಾ ಸದಸ್ಯರು

೩.       ಡಾ. ಚಂದ್ರಶೇಖರ ಕಂಬಾರ, ಸಾಹಿತಿ, 

೪.       ಡಾ. ರಾಜೀವ ತಾರಾನಾಥ, ಸಂಗೀತಗಾರರು

೫.       ಪ್ರೊ. ಬಿ. ಎಂ. ಕುಮಾರಸ್ವಾಮಿ, ರಾಷ್ಟ್ರೀಯ ಸಹ ಸಂಚಾಲಕರು, ಸ್ವದೇಶಿ ಜಾಗರಣ ಮಂಚ್

೬.       ಶ್ರೀ ನಾಗೇಶ ಹೆಗಡೆ, ಪತ್ರಕರ್ತ, ಸೂಲಿಕೆರೆ

೭.       ಶ್ರೀ ಎ.ಎನ್. ಯೆಲ್ಲಪ್ಪರೆಡ್ಡಿ, ಅರಣ್ಯ ಅಧಿಕಾರಿ (ನಿವೃತ್ತ)

೮.       ಶ್ರೀ ಬರಗೂರು ರಾಮಚಂದ್ರಪ್ಪ, ಸಾಹಿತಿ.

೯.       ಮೇಜರ್ ಜನರಲ್ (ನಿ) ಎಸ್.ಜಿ. ವೊಂಬತ್‌ಕೆರೆ, ಅಧ್ಯಕ್ಷರು, ಮೈಸೂರು ಗ್ರಾಹಕರ ಪರಿಷತ್

೧೦.     ಶ್ರೀ ವೈ.ಬಿ.ರಾಮಕೃಷ್ಣ, ಅಧ್ಯಕ್ಷರು, ಸಮಗ್ರ ವಿಕಾಸ

೧೧.     ಶ್ರೀ ಶಂಕರ ಶರ್ಮ, ವಿದ್ಯುತ್ ರಂಗದ ವಿಶ್ಲೇಷಕರು, ತೀರ್ಥಹಳ್ಳಿ

೧೨.     ಶ್ರೀ ಜಿ. ಕೃಷ್ಣಪ್ರಸಾದ, ಸಹಜ ಸಮೃದ್ಧ ಸಾವಯವ ಕೃಷಿ ಸಮೂಹ

೧೩.       ಶ್ರೀ ಬೇಳೂರು ಸುದರ್ಶನ, ಫ್ರೀಲ್ಯಾನ್ಸ್ ಪತ್ರಕರ್ತ.

beluru sudarshana chief minister electricity mitramaadhyama power problem
Share. Facebook Twitter Pinterest LinkedIn Tumblr Email
Previous Articleಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!
Next Article ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!

June 5, 2024

Comments are closed.

ಸುದ್ದಿ
  • ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!
  • ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!
  • ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)
  • ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ
  • ರಾಮನಗರದ ಹೃದಯ
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!
  • ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ
  • ಇ-ದಕ್ಷಿಣ್ ಡಾಟ್‌ಕಾಮ್‌ : ಮಿಸ್ ಕಾಲ್‌ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!
  • ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!
  • ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!
  • ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ಟೆಸೆರಾಕ್ಟ್‌ ಬಂತು ದಾರಿ ಬಿಡಿ; ಓಸಿಆರ್‌ ಮಾಡೋ ಚಿಂತೆ ಬಿಡಿ!
  • ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ
  • ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • Pacific Marine Climate Change Report Card 2018
  • READ: THE PERSONAL DATA PROTECTION BILL, 2018
  • New study from CSE exposes massive environmental dumping of old and used vehicles in Africa and South Asia
  • ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
  • ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  
  • “ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!
  • ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು
  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
  • ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!
  • ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್‌ನಲ್ಲಿ ಭಾಗವಹಿಸಿ! ಅಬ್ದುಲ್‌ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್‌ಲೈನ್‌ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ
  • ಶಂಕರ ಶರ್ಮರು ನ್ಯೂಝಿಲೆಂಡ್‌ಗೆ – ಉನ್ನತ ಅಧ್ಯಯನಕ್ಕೆ – ಹೊರಟಿದ್ದಾರೆ, ಶುಭಾಶಯ ಹೇಳೋಣ!
  • Prashant Kishor : Disruptive, Harmful
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!
  • ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]
  • ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ಆರೋಗ್ಯ ಇಲಾಖೆಗೆ ಮಾನವಹಕ್ಕು ಆಯೋಗದ ಆದೇಶ : ಕೊನೆಗೂ ನ್ಯಾಯ ಪಡೆದ ಉಡುಪಿಯ ದಾದಿಯರು
  • ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ
  • SHANKAR SHARMA: CREATION OF A SUSTAINABLE URBAN ENERGY SYSTEM
  • National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)
  • ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!
  • `ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?
  • ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು
  • ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ
  • Prayer for consideration in front of the Hon’ble High Court for the purpose of granting relief to the Endosulfan Victims
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Dattaji writes about his mother Meenakshi Amma
  • ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ 42 ವರ್ಷಗಳ ಬದಲಿಗೆ ಕೇವಲ 5 ವರ್ಷಗಳ ವೇತನ ನೀಡುವ ಹುನ್ನಾರ
  • AKKU LEELA IMAGES FOR DOWNLOAD
  • ಕೊಡಗು-ಕಾಸರಗೋಡು ಮಡಗಾಸ್ಕರ್‌ಗೆ ಸೇರಿದ್ದು!
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • Future of solar energy seems bleak if sector reforms do not pull through
  • Climate Change Report Warns of Dramatically Warmer World This Century
  • ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು
  • ಅಕ್ಕು ಮತ್ತು ಲೀಲಾ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ಸಚಿವ ಕಾಗೇರಿಯವರಿಗೆ ಮಿತ್ರಮಾಧ್ಯಮ ಮನವಿ
  • 'ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ' ಶಂಕರಶರ್ಮ ಪುಸ್ತಕ ಬಿಡುಗಡೆಗೆ ಬನ್ನಿ! (ಅಕ್ಟೋಬರ್‌ ೧೦)
  • Law abiding citizens and law disobeying Government
  • Bhoomi College offers One year Programme on Science and Management for Sustainable Living
  • ಹತ್ತನೆಯ ವರ್ಷಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಾ: ಶುಭಾಶಯ ಹೇಳಿ!
  • ಶುಕ್ರ ಸಂಕ್ರಮ: ಪುಸ್ತಕ ಓದಿ
  • THE COPYRIGHT (AMENDMENT) BILL, 2012
  • ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ
  • SC upholds constitutional validity of Right to Education Act : Judgement FULL TEXT
  • ನನ್ನ ಹಿಡನ್‌ ಅಜೆಂಡಾ ಮತ್ತು ಇತರ ಕಥೆಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ವಿರೋಧಿಸಿ: ಮುಖ್ಯಮಂತ್ರಿಯವರಿಗೆ ಮಿತ್ರಮಾಧ್ಯಮ ಸಹಿತ ಹಲವು ಸಂಘಟನೆಗಳ ಮನವಿ
  • ಮಿತ್ರಮಾಧ್ಯಮ ಮ್ಯಾಗಜಿನ್‌ ಸಂಚಿಕೆ ೧ ಓದಿ
  • ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ
  • ‘ಇಜ್ಞಾನ’ ಸಂಚಿಕೆ ಓದಿ
  • ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!
  • ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!
  • SUPREME COURT BANS MINING IN BELLARY DISTRICT
  • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
  • BAN ENDOSULFAN PERMANENTLY, CONDUCT CENSUS OF VICTIMS, PROVIDE PERMANENT REHABILITATION
  • ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ
  • Feb 5,6: Millet Mela in Bangalore – Meet the Millet! Say hello to HEALTH
  • Scandalous Decision of Jairam Ramesh to OK POSCO project
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • Publish All the Radia Tapes
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?
  • “BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”
  • ಇಂಧನ ಬಡತನ: ಜಾಗತಿಕ ವರದಿ ಹೇಳಿದ್ದೇನು?
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ
  • ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
  • ವೇದಾಂತ : ಅಗೆದಷ್ಟೂ ಅವಾಂತರ
  • ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ
  • ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು
  • Future Electricity Supply Options for India
  • How essential is the nuclear power option for India?
  • `ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!
  • ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ
  • ಹೀಗಿದ್ದರು ನಾನಾಜಿ ದೇಶಮುಖ್
  • Media Fest Presentation by Beluru Sudarshana
  • January 23: Participate in the Public Consultation (Bangalore) on Bt Brinjal
  • ಡಿಸೆಂಬರ್ ೧೩ರಂದು ಮೈಸೂರಿನಲ್ಲಿ ಬದನೆ ಮೇಳ
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • Please visit www.mitramaadhyama.co.in
  • Shilpashree Investigative Report Award 2010
  • ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ
  • ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ
  • Still nostalgic about Bharatiya Janasangh and old BJP? Read this !
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ನನ್ನ ಪ್ರೀತಿಯ ದತ್ತಾಜಿ
  • ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
  • DNA: Delayed , No Analysis?
  • ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !
  • Bhairappa’s interview 2002
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.