Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
ಲೇಖನಗಳು

ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 16, 2017Updated:May 19, 2025No Comments11 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಹದಿನಾರು ವರ್ಷಗಳ ಹಿಂದಿನ ಮಾತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಿಂಪ್ಯೂಟರ್‌ ಎಂಬ ಕೈಗಣಕವನ್ನು ರೂಪಿಸಿದ್ದರು. ಯಾರು ಬೇಕಾದರೂ ಪಡೆದು ತಯಾರಿಸಬಹುದಾದ ಹಕ್ಕುಸ್ವಾಮ್ಯವೇ ಇಲ್ಲದ ಯಂತ್ರಾಂಶ – ತಂತ್ರಾಂಶಗಳಿಂದ ರೂಪುಗೊಂಡಿದ್ದ ಸಿಂಪ್ಯೂಟರ್‌ (www.simputer.org)ಆ ಕಾಲಕ್ಕಿಂತ ಮುಂದಿತ್ತೇನೋ! ಅದರಲ್ಲಿ ಭಾರತೀಯ ಭಾಷೆಗಳಲ್ಲಿ ಕಡ್ಡಿಯಿಂದಲೇ ಬರೆಯಬಹುದಾಗಿತ್ತು; ಗೀಚಿದ ಅಕ್ಷರಗಳನ್ನು ಅದು ಗುರುತಿಸುತ್ತಿತ್ತು. ಟೊಮ್ಯಾಟೋ ಧಾರಣೆಯನ್ನು ಕನ್ನಡದಲ್ಲೇ ಘೋಷಿಸುತ್ತಿತ್ತು;ಅಪ್ಪಟ ಭಾರತೀಯವಾದ `ಇಂಡಿಯನ್‌ ಮಾರ್ಕ್‌ ಅಪ್‌ ಲಾಂಗ್ವೇಜ್‌ ‘ (IMLI-ಇಮ್ಲಿ) ನ್ನು ಅಳವಡಿಸಿಕೊಂಡಿತ್ತು. ಹದಿನೈದು ವರ್ಷಗಳ ಹಿಂದೆಯೇ ಸಿಂಪ್ಯೂಟರ್ ರೂಪಿಸಿದ ನಮ್ಮ ಗತಿ ಹೀಗಿದೆ! “ಆಪಲ್‌ನ ಟೈಟಾನಿಯಂ ಪವರ್‌ಬುಕ್‌, ಮೈಕ್ರೋಸಾಫ್ಟ್‌ನ ವಿಂಡೋಸ್‌ ಎಕ್ಸ್‌ಪಿಗಿಂತ ಮುಖ್ಯವಾದ ಸಂಶೋಧನೆ ಎಂದರೆ ಭಾರತೀಯ ವಿಜ್ಞಾನಿಗಳು ರೂಪಿಸಿದ ಸಿಂಪ್ಯೂಟರ್‌. ಇದು ತೃತೀಯ ಜಗತ್ತಿನಲ್ಲಿ ಕಂಪ್ಯೂಟರ್‌ ಕ್ರಾಂತಿಯನ್ನೇ ಮಾಡಲಿದೆ” ಎಂದು ನ್ಯೂಯಾರ್ಕ್‌ ಟೈಮ್ಸ್‌ ಆಗ ಹಾಡಿ ಹೊಗಳಿತ್ತು.

ಸಿಂಪ್ಯೂಟರ್‌ ಈಗಿಲ್ಲ. ಕೃಷಿ ಮಾರುಕಟ್ಟೆ, ಸಾರಿಗೆ, ಶಿಕ್ಷಣ, ಕ್ಷೇತ್ರ ಮಾಹಿತಿ ಸಂಗ್ರಹ – ಹೀಗೆ ಹಲವು ರಂಗಗಳಲ್ಲಿ ತಕ್ಷಣವೇ ಬಳಕೆಯಾಗಬಹುದಾಗಿದ್ದ ಸಿಂಪ್ಯೂಟರಿಗೆ ಸರ್ಕಾರಗಳು ಯಾವುದೇ ಬೇಡಿಕೆ ನೀಡಲಿಲ್ಲ. ಸಿಂಪ್ಯೂಟರ್‌ ಸಂಶೋಧಕರೊಬ್ಬರ ಸಂದರ್ಶನವು ಇತ್ತೀಚೆಗೆ ಪ್ರಕಟವಾಗಿದೆ: ಅವರ ಮುಂದೆ ಆಪಲ್‌ ಲ್ಯಾಪ್‌ಟಾಪ್‌ ಕೂತಿದೆ! ತಪ್ಪು ಸಂಶೋಧಕರದ್ದಲ್ಲ, ಈ ಕ್ರಾಂತಿಕಾರಿ ಸಾಧನವನ್ನು ಮೂಸಿಯೂ ನೋಡದ ಸರ್ಕಾರಗಳದ್ದು.

ಸಿಂಪ್ಯೂಟರ್‌

ಆಪಲ್‌ ಬಿಡಿ, ದೇಶದೆಲ್ಲೆಡೆ ಮೈಕ್ರೋಸಾಫ್ಟ್‌ ಸಂಸ್ಥೆಯ ಆಪರೇಟಿಂಗ್‌ ತಂತ್ರಾಂಶ, ಮೈಕ್ರೋಸಾಫ್ಟ್‌ ಆಫೀಸ್‌ (ವರ್ಡ್‌, ಎಕ್ಸೆಲ್‌, ಪವರ್‌ಪಾಯಿಂಟ್‌)ಗಳದ್ದೇ ಪಾರುಪತ್ಯ. ಸರ್ಕಾರ, ಸಿಬ್ಬಂದಿ, ಸಚಿವಾಲಯ, ಶಾಲೆಗಳು – ಎಲ್ಲವೂ ತನ್ನ ದಾಸ್ಯದಲ್ಲೇ ಇರಬೇಕೆಂಬುದು ಮೈಕ್ರೋಸಾಫ್ಟ್‌ನ ಸಹಜ ಚಿಂತನೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸರ್ಕಾರವಾಗಲೀ, ಸಮುದಾಯವಾಗಲೀ ಮಾಹಿತಿ ತಂತ್ರಜ್ಞಾನದ ರಂಗದಲ್ಲಿ ನಡೆದಿರುವ, ಜಗತ್ತಿನಾದ್ಯಂತ ನೆಲೆಯೂರಿರುವ `ಸ್ವತಂತ್ರ‘ (ಫ್ರೀ ಸಾಫ್ಟ್‌ವೇರ್‌) ಮತ್ತು `ಮುಕ್ತ ತಂತ್ರಾಂಶಗಳ‘ (ಓಪನ್‌ಸೋರ್ಸ್‌ ಸಾಫ್ಟ್‌ವೇರ್‌) ಬಗ್ಗೆ ಒಟ್ಟಾರೆ ನಿರ್ಲಕ್ಷ ವಹಿಸಿರುವುದು ಸ್ಪಷ್ಟ.

ಒಮ್ಮೆ ಪಡೆದ ಮೇಲೆ (ಇದು ಉಚಿತವಾಗಿಯೂ ಇರಬಹುದು, ಖರೀದಿಯೂ ಆಗಿರಬಹುದು) ಅದನ್ನು ಮರು ಹಂಚುವ, ಅದರ ಒಳ ಸೂತ್ರಗಳನ್ನು ತಿಳಿಯುವ ಮತ್ತು ಬೇಕಾದಂತೆ ಬದಲಿಸಿಕೊಳ್ಳುವ ಅವಕಾಶಗಳಿದ್ದರೆ ಅದನ್ನು `ಸ್ವತಂತ್ರ ತಂತ್ರಾಂಶ‘ ಎಂದು ಕರೆಯುತ್ತಾರೆ.

ಭಾರತದ ಸರ್ವೋಚ್ಚ ನ್ಯಾಯಾಲಯವು `ಸ್ವತಂತ್ರ ಮತ್ತು ಮುಕ್ತ‘ ತಂತ್ರಾಂಶಗಳನ್ನೇ ಅಳವಡಿಸಿಕೊಂಡಿದೆ. ಹೆಚ್ಚಿನ ಸರ್ಕಾರಿ ಜಾಲತಾಣಗಳಲ್ಲಿ ಖಾಸಗಿ ಸಂಸ್ಥೆಗಳು ರೂಪಿಸಿದ ಪಾವತಿಸಿದ ತಂತ್ರಾಂಶಗಳೇ ಇವೆ ಎನ್ನುವುದು ವಾಸ್ತವ. ಕೇರಳ ರಾಜ್ಯವೊಂದೇ `ಸ್ವತಂತ್ರ ಮತ್ತು ಮುಕ್ತ‘ ತಂತ್ರಾಂಶಗಳನ್ನು ಇ–ಆಡಳಿತದಲ್ಲಿ ಅಳವಡಿಸಿಕೊಂಡ ಮೊದಲ ಮತ್ತು ಬಹುಶಃ ಏಕೈಕ ರಾಜ್ಯ. ೨೦೧೪ರಲ್ಲೇ ಕೇಂದ್ರ ಸರ್ಕಾರವು ಮುಕ್ತ ತಂತ್ರಾಂಶಗಳನ್ನು ಉತ್ತೇಜಿಸುವ ಕುರಿತು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದರೂ ಅದರ ಪರಿಣಾಮಕಾರಿ ಜಾರಿ ಸಾಧ್ಯವಾಗಿಲ್ಲ. ಮುಕ್ತ ತಂತ್ರಾಂಶಗಳನ್ನು ಎಲ್ಲ ಇ–ಆಡಳಿತದ ವ್ಯವಸ್ಥೆಗಳಲ್ಲಿ ಜಾರಿ ಮಾಡಿ ಒಟ್ಟಾರೆ ಖರ್ಚನ್ನು ಇಳಿಸುವ ಮಹತ್ತರ ಉದ್ದೇಶವನ್ನು ಈ ಸುತ್ತೋಲೆ ಹೊಂದಿತ್ತು. ಎಲ್ಲ ತಂತ್ರಾಂಶಗಳ ಮೂಲ ಸಂಕೇತ ವಾಕ್ಯಗಳನ್ನೂ (ಸೋರ್ಸ್‌‌ಕೋಡ್‌) ಸಮುದಾಯಕ್ಕೆ ಬಿಡುಗಡೆ ಮಾಡಬೇಕೆಂದು ಅದು ಸೂಚಿಸಿತ್ತು. ಈ ಅಧಿಸೂಚನೆಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕೆಂದೂ ಸುತ್ತೋಲೆ ಹೇಳುತ್ತದೆ. ತಂತ್ರಾಂಶ ತಯಾರಿಕಾ ಟೆಂಡರ್‌ಗಳಲ್ಲಿ ಮೊದಲ ಆಯ್ಕೆಯಾಗಿ ಮುಕ್ತ ತಂತ್ರಾಂಶಗಳನ್ನೇ ಸೂಚಿಸಲು ಸೇವೆ ನೀಡಿಕೆದಾರರಿಗೆ ತಿಳಿಸಲು ಈ ಸುತ್ತೋಲೆ ಸಲಹೆ ಮಾಡಿದೆ. ಈ ಸುತ್ತೋಲೆ ಒಂದಲ್ಲ ಒಂದು ಕಾರಣಗಳು, ನೆಪಗಳು ಮತ್ತು ಸಬೂಬುಗಳಿಂದ ಜಾರಿಯಾಗದೇ ಉಳಿದಿವೆ. ಕೇಂದ್ರ ಸರ್ಕಾರವು ಇದಕ್ಕಾಗಿಯೇ ಮುಕ್ತ ತಂತ್ರಾಂಶ ರೂಪಿಸುವ ಸಮುದಾಯಗಳೊಂದಿಗೆ ಕೆಲಸ ಮಾಡಲೂ ಮುಂದಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಹಿರಿಯ ಸಾಫ್ಟ್‌ವೇರ್‌ ತಂತ್ರಜ್ಞ ರಾಜೇಶ್‌ ರಂಜನ್‌ರನ್ನು ರಾಷ್ಟ್ರೀಯ ಇ–ಆಡಳಿತ ವಿಭಾಗದಲ್ಲಿ ಓಪನ್‌ಸೋರ್ಸ್‌ ಕಮ್ಯುನಿಟಿ ಮ್ಯಾನೇಜರ್‌ ಎಂದು ನೇಮಿಸಿದೆ.

ಕರ್ನಾಟಕದಲ್ಲಂತೂ ಮುಕ್ತ ತಂತ್ರಾಂಶಗಳ ಬಳಕೆ ನಗಣ್ಯ. ಜನಸಾಮಾನ್ಯರು, ವ್ಯವಹಾರಸ್ಥರು, ಪ್ರಕಾಶನ ಸಂಸ್ಥೆಗಳು, ಸಣ್ಣಪುಟ್ಟ ಡಿಟಿಪಿ ಆಪರೇಟರ್‌ಗಳು – ಎಲ್ಲರೂ `ಸ್ವತಂತ್ರ ಮತ್ತು ಮುಕ್ತ‘ ತಂತ್ರಾಂಶಗಳನ್ನು ಬಳಸುವುದಕ್ಕೆ ಯಾವ ತಡೆಯೂ ಇಲ್ಲ. ಆದರೆ ಅದೇ ಹಳೆಯ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ವ್ಯವಸ್ಥೆ, ಅದೇ ಹಳೆಯ ಪೇಜ್‌ಮೇಕರ್‌, ಅದೇ ಹಳೆಯ ಫಾಂಟ್‌ಗಳನ್ನು ಬಳಸುವುದರಲ್ಲೇ ಎಲ್ಲರಿಗೂ ಆಸಕ್ತಿ ಇದ್ದಂತಿದೆ. ಹೊಸಕಾಲದ ಅಗತ್ಯವಾದ ಯುನಿಕೋಡ್‌ ಅಕ್ಷರಗಳ ಮೂಲಕ, ಹೊಸ ಮತ್ತು ಸ್ವತಂತ್ರ ತಂತ್ರಾಂಶಗಳಲ್ಲಿ ವಿನ್ಯಾಸ ಮಾಡಬಹುದು ಎಂಬ ವಾಸ್ತವಿಕತೆಯನ್ನು ನಾವೆಲ್ಲರೂ ಅರಿಯಬೇಕಿದೆ. (ಈ ತಂತ್ರಾಂಶಗಳ ಪಟ್ಟಿಯನ್ನು ಈ ಲೇಖನದ ಜೊತೆಗೇ ನೀಡಲಾಗಿದೆ). ಕನ್ನಡವನ್ನು ಕಂಪ್ಯೂಟರಿನಲ್ಲಿ ಹೇಗೆ ಬಳಸಬಹುದು ಎಂಬ ಬಗ್ಗೆ `ಕಂಪ್ಯೂಟರ್‌ ಮತ್ತು ಕನ್ನಡ‘ ಎಂಬ ಉಚಿತ ಪುಸ್ತಕವನ್ನು ಮಿತ್ರಮಾಧ್ಯಮ ಟ್ರಸ್ಟ್‌ ಪ್ರಕಟಿಸಿದ್ದು ಅದನ್ನು ಜಾಲತಾಣದಲ್ಲಿ ಉಚಿತವಾಗಿ ಪಡೆದು ಬಳಸಬಹುದು. (ಕೊಂಡಿ: http://freebookculture.com/?p=37).

ತಂತ್ರಜ್ಞಾನದ ಜೊತೆಗೆ ಮುಕ್ತ ಜ್ಞಾನವೂ ಬೇಕು!

ತಾಯ್ನುಡಿಯಲ್ಲಿ ಕಲಿಸುವುದೇ ಹೆಚ್ಚಿನ ಗ್ರಹಿಕೆಗೆ ಅನುಕೂಲ. ಆದರೆ ನ್ಯಾಯಾಲಯದಲ್ಲೂ ಶಿಕ್ಷಣ ಮಾಧ್ಯಮವು ಪಾಲಕರ ಹಕ್ಕು ಎಂಬ ಮಾತು ಬಂದಿರುವುದರಿಂದ ತಾಯ್ನುಡಿ ಮಾಧ್ಯಮದ ಶಿಕ್ಷಣದ ಜಾರಿಯೇ ಆಗುತ್ತಿಲ್ಲ. ಇಂಗ್ಲಿಶ್‌ ಕಲಿಕೆಯೇ ಬೇರೆ, ಇಂಗ್ಲಿಶ್‌ ಮಾಧ್ಯಮದ ಕಲಿಕೆಯ ಅಪಾಯವೇ ಬೇರೆ ಎಂಬ ಸ್ಪಷ್ಟ ಕಲ್ಪನೆಯೂ ನಮ್ಮ ಹೋರಾಟಗಾರರಿಗೆ ಇಲ್ಲ. ಈ ಬಗೆಬಗೆಯ ಗೋಜಲುಗಳಿಂದಾಗಿ ಕನ್ನಡಕ್ಕೆ ಆತಂಕ ಬಂದಿರುವುದು ಸ್ಪಷ್ಟ. ಕನ್ನಡ ತಂತ್ರಾಂಶ, ಅಕ್ಷರಗಳು, ಪಠ್ಯ, ಸಾಹಿತ್ಯ – ಎಲ್ಲವೂ ಮುಕ್ತವಾಗಿ, ಸ್ವತಂತ್ರವಾಗಿ ದೊರೆಯುವುದರಿಂದ ಮಾತ್ರವೇ ಕನ್ನಡದ ಕಲಿಕೆಗೆ ಉತ್ತಮ ಅವಕಾಶ ಕಲ್ಪಿಸಬಹುದು. ಆದ್ದರಿಂದ ಮುಕ್ತ ತಂತ್ರಾಂಶಗಳ ಜೊತೆಗೆ ಮುಕ್ತಜ್ಞಾನವೂ ಸಿಗಬೇಕಾಗಿದೆ. ಕರ್ನಾಟಕ ಸರ್ಕಾರದ `ಕಣಜ‘ (www.kanaja.in), ಭಾರತ ಸರ್ಕಾರದ `ಭಾರತವಾಣಿ‘(www.bharatavani.in) ಯೋಜನೆಗಳು ಈ ನಿಟ್ಟಿನಲ್ಲಿ ಉಲ್ಲೇಖನೀಯ. ಭಾಷೆಯಲ್ಲಿರುವ ಜ್ಞಾನ ಮತ್ತು ಭಾಷೆಗಳ ಕಲಿಕೆಯ ಮಾಹಿತಿಗಳು,ಪಠ್ಯಪುಸ್ತಕಗಳು, ಜ್ಞಾನದ ಆಕರಗಳು, ಸಮಕಾಲೀನ ಮಾಹಿತಿಗಳು ಎಲ್ಲವೂ ಮುಕ್ತವಾಗಿ ಮತ್ತು ಮುಕ್ತ ತಂತ್ರಾಂಶಗಳ ಜೊತೆಗೇ ಸಿಗಬೇಕೆನ್ನುವ ಈ ಯೋಜನೆಗಳ ಆಶಯ ತುಂಬಾ ಸಾಮಯಿಕ. ಇದರಲ್ಲಿ ಸಾರ್ವಜನಿಕ ನಿಧಿ ಬೆಂಬಲಿತ ಸಂಸ್ಥೆಗಳು ಮತ್ತು ಸಮುದಾಯ ಚಿಂತನೆಯ ಪ್ರಕಾಶಕರು, ಲೇಖಕರು, ಶಿಕ್ಷಣ ತಜ್ಞರು ಇಂಥ ಯೋಜನೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಭಾಗಿಯಾಗಬೇಕಿದೆ. ಅಚ್ಚುಮೊಳೆ ಮುದ್ರಣ ಕ್ರಾಂತಿಯಿಂದ ಹುಟ್ಟಿದ ಹಕ್ಕುಸ್ವಾಮ್ಯಕ್ಕೆ ಮುನ್ನ ಜನಪದ ಮತ್ತು ಶಾಸ್ತ್ರೀಯ ಜ್ಞಾನಗಳು ಮುಕ್ತವಾಗಿಯೇ ಇದ್ದವಲ್ಲವೆ? ಈಗ ಅದೇ ಮುಕ್ತತೆಯತ್ತ ನಾವು ಮರಳಬೇಕಿದೆ.

ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು,ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಂತಹ ಹಲವು ಸಂಸ್ಥೆಗಳು ಈಗಾಗಲೇ ಮುಕ್ತಜ್ಞಾನಕ್ಕೆ ಕೈಜೋಡಿಸಿ ತಮ್ಮೆಲ್ಲ ಕೃತಿಗಳನ್ನೂ ಸಮುದಾಯಕ್ಕೆ ಬಿಟ್ಟುಕೊಟ್ಟಿರುವುದು ಒಂದು ದೊಡ್ಡ ಬೆಳವಣಿಗೆ. ಈ ಜ್ಞಾನವನ್ನೆಲ್ಲ ಡಿಜಿಟಲೀಕರಿಸಿದರೆ ಕಲಿಕೆ–ಸಂಶೋಧನೆಗೆ ಆಕರ ಸಿಕ್ಕಿದಂತಾಗುತ್ತದೆ. ಇಂಥ ಜ್ಞಾನಭಂಡಾರಗಳ ಸಂಚಯವೇ ಮುಂದೆ ಸ್ವತಂತ್ರ/ಮುಕ್ತ ಭಾಷಾ ಕಲಿಕೆಯ ಸಾಧನಗಳಾಗುತ್ತವೆ. ಭಾರತವಾಣಿ ಆಪ್‌ನಲ್ಲಿ ಇರುವ ೫೦ಕ್ಕೂ ಹೆಚ್ಚು ಪಠ್ಯ ನಿಘಂಟುಗಳು ಇಲ್ಲಿ ಒಂದು ಉದಾಹರಣೆ. ದೇಶದ ಎಲ್ಲ ನಿಘಂಟುಗಳೂ ಪಠ್ಯರೂಪದಲ್ಲಿ ಒಂದೇ ಕಡೆ ಸಿಕ್ಕಿದರೆ, ಬಹುಭಾಷಾ ಸಮಾನಾರ್ಥ ಕೋಶವೇ ಸೃಷ್ಟಿಯಾಗುತ್ತದೆ. ಈಗಲೂ ವಿಶ್ವದಾದ್ಯಂತ ಬಹುಬೇಡಿಕೆಯಲ್ಲಿರುವ ಅನುವಾದ ಉದ್ಯಮಕ್ಕೆ ಇದು ಇಂಬು ಕೊಡುತ್ತದೆ. ಅನುವಾದದ ಕೆಲಸಗಳು ವಾಣಿಜ್ಯದ ಉದ್ದೇಶದಲ್ಲಿ ನಡೆದರೂ, ಭಾಷೆಗಳ ಬೆಳವಣಿಗೆಗೆ, ಸೌಹಾರ್ದತೆಗೆ ಅನುಕೂಲವೇ.

ಭಾರತೀಯ ಭಾಷೆಗಳಲ್ಲಿ ಸಮಕಾಲೀನ ವಿಶ್ವಕೋಶಗಳೇ ಇಲ್ಲ ಎಂಬ ವಿಷಾದದ ಸುದ್ದಿಯನ್ನು ನಿಮಗೆ ತಿಳಿಸಲೇಬೇಕಿದೆ. ಮೈಸೂರು ವಿಶ್ವವಿದ್ಯಾಲಯವು ರೂಪಿಸಿದ ಬಹುಸಂಪುಟಗಳ ಸಾಮಾನ್ಯ ವಿಶ್ವಕೋಶ ಮತ್ತು ವಿಷಯ ವಿಶ್ವಕೋಶಗಳೇ ಇಂದು ಭಾರತದ ಅತ್ಯುತ್ತಮ ವಿಶ್ವಕೋಶ ರಚನಾ ಯತ್ನವೇನೋ. ಈ ವಿಶ್ವಕೋಶವನ್ನೇ ಆಧಾರವಾಗಿಟ್ಟುಕೊಂಡು ಭಾರತದ ಎಲ್ಲ ಭಾಷೆಗಳಲ್ಲೂ ಬಹುವಿಷಯಗಳ ಮೇಲೆ ಕೋಶಗಳು ರಚನೆಯಾದವು ಎಂದುಕೊಳ್ಳಿ. ಆಗ ಎಲ್ಲ ಶಾಲೆಗಳಲ್ಲೂ, ಆಯಾ ಭಾಷೆಯ ಕೋಶಗಳನ್ನೇ ಮಕ್ಕಳಿಗೆ ನೀಡಬಹುದು. ಈ ಕೋಶಗಳ ಜೊತೆಗೆ ಬಹುಭಾಷಾ ನಿಘಂಟುಗಳು, ಅನುವಾದದ ಸೌಲಭ್ಯ – ಎಲ್ಲವೂ ಸಿಕ್ಕಿದರೆ ಇಡೀ ದೇಶದಲ್ಲಿ ಭಾಷಾ ಸಾಮರಸ್ಯ ಮೂಡುವುದಿಲ್ಲವೆ? ಭಾಷೆಗಳ ನಡುವಣ ಮಾಹಿತಿ ಕಂದರ ಮುಚ್ಚುವುದಿಲ್ಲವೆ? ಇದೇನೂ ಮೇಲ್‌ಸ್ತರದ ವಿಜ್ಞಾನವಲ್ಲ. ಎಲ್ಲ ಭಾಷಿಗರೂ ಕಲೆತರೆ ಮೂರ್ನಾಲ್ಕು ವರ್ಷಗಳಲ್ಲಿ ಇಂಥದ್ದೊಂದು ಸಮಾನ ವಿವರಗಳ, ಸಮಾನ ಅರ್ಥಗಳನ್ನು ಒದಗಿಸುವ ಆನ್‌ಲೈನ್‌ ಬಹುಭಾಷಾ ಬೃಹತ್‌ ಕೋಶವನ್ನು ರಚಿಸಬಹುದು.

ಸ್ವತಂತ್ರ /ಮುಕ್ತ ತಂತ್ರಾಂಶಗಳು ಕನ್ನಡದ ಸಾಹಿತ್ಯ, ಸಂಶೋಧನೆಗೆ ಸಹಾಯಕವಾಗುತ್ತದೆ. ಕನ್ನಡದಲ್ಲಿ ಮುದ್ರಿಸಿದ ಹಾಳೆಗಳ ಪಠ್ಯವನ್ನು ಓದಿ ಅಕ್ಷರಗಳಾಗಿ ಪರಿವರ್ತಿಸುವ (ಆಪ್ಟಿಕಲ್‌ ಕ್ಯಾರಕ್ಟರ್‌ ರೆಕಗ್ನಿಶನ್‌ – ಓಸಿಆರ್‌) ತಂತ್ರಾಂಶವನ್ನು ಭಾರತೀಯ ವಿಜ್ಞಾನ ಸಂಸ್ಥೆಯು ಟಿಡಿಐಎಲ್‌ನ ಧನಸಹಾಯದಲ್ಲಿ ರೂಪಿಸಿಯೂ, ಹಕ್ಕುಸ್ವಾಮ್ಯವನ್ನು ತಾನೇ ಇಟ್ಟುಕೊಂಡಿದೆ. ಈ ತಂತ್ರಾಂಶವನ್ನು ಮುಕ್ತ ತಂತ್ರಾಂಶವಾಗಿ ಸಮುದಾಯಕ್ಕೆ ಬಿಡುಗಡೆ ಮಾಡಬೇಕೆಂದು ಕೇಂದ್ರದೆದುರು ಮಿತ್ರಮಾಧ್ಯಮ ಟ್ರಸ್ಟ್‌ ಇಟ್ಟ ಬೇಡಿಕೆ ಇನ್ನೂ ನನಸಾಗಬೇಕಿದೆ.

ದೇಸೀಕರಣ ಮತ್ತು ಅನುವಾದ

ನಮ್ಮ ದೇಶದಲ್ಲಿ ಇಂಗ್ಲಿಶ್‌ ಬಲ್ಲವರ ಸಂಖ್ಯೆ ನೂರರಲ್ಲಿ ಹತ್ತು. ಇನ್ನುಳಿದ ತೊಂಭತ್ತು ಜನರಿಗೆ ಮಾತೃಭಾಷೆಯೇ ಜೀವಾಳ. ಆದರೂ ನಮ್ಮ ಮೊಬೈಲುಗಳಲ್ಲಿ, ಟಿವಿ ವಾಹಿನಿಗಳಲ್ಲಿ, ಮುದ್ರಿತ ದೈನಿಕಗಳಲ್ಲಿ ಇಂಗ್ಲಿಶಿನ ಅಬ್ಬರ. ನಮ್ಮ ಗಣಕಗಳಲ್ಲಿ ಕನ್ನಡವನ್ನು ಅಳವಡಿಸಿಕೊಂಡು ಬರೆಯುವ ಹೊತ್ತಿಗೆ ಸಾಕುಬೇಕಾಗುತ್ತದೆ. ಈಗಲೂ ಲಕ್ಷಗಟ್ಟಳೆ ಕನ್ನಡಿಗರು ರೋಮನ್‌ ಲಿಪಿಯಲ್ಲೇ ಕನ್ನಡ ಬರೆಯುತ್ತಿದ್ದಾರೆ. ಸಿಲಿಕಾನ್‌ ಸಿಟಿಯನ್ನು ರಾಜಧಾನಿ ಮಾಡಿಕೊಂಡ ನಾಡಿನ ಕರುಣಾಜನಕ ಸ್ಥಿತಿ ಇದು!

ಕಂಪ್ಯೂಟರ್‌ ಬಿಡಿ, ಮುಂದಿನ ದಿನಗಳಲ್ಲಿ ನಾವು ಖರೀದಿಸುವ ಎಲ್ಲ ವಸ್ತುಗಳೂ ಮಾತನಾಡಲಿವೆ. ಪ್ರಪಂಚದಲ್ಲೇ ಅತಿಹೆಚ್ಚು ಕುತೂಹಲಿ ಮತ್ತು ಸ್ವತಂತ್ರ ಗ್ರಾಹಕರಿರುವ ಭಾರತದಲ್ಲಿ ಈಗಾಗಲೇ ಬಟ್ಟೆ ತೊಳೆವ ಯಂತ್ರ, ಟೆಲಿವಿಜನ್‌ಗಳು, ಏರ್‌ಕಂಡೀಶನಿಂಗ್‌ ಸಾಧನಗಳು ಬಂದಿವೆ. ಇವುಗಳನ್ನು ನೀವು ಇಂಗ್ಲಿಶಿನಲ್ಲಿಯೇ ಮಾತನಾಡಿಸಬೇಕು. ಕಂಪ್ಯೂಟರ್‌ ಮೂಲಕ ದಾಳಿಯಿಟ್ಟ ಇಂಗ್ಲಿಶ್‌ ವಸಾಹತುಶಾಹಿ ಈಗ ಇಂಥ ಸಾಧನಗಳ ಮೂಲಕ ಮತ್ತೊಂದು ಅವತಾರದಲ್ಲಿ ವಕ್ಕರಿಸಿದೆ. `ಇಂಟರ್‌ನೆಟ್‌ ಆಫ್‌ ಥಿಂಗ್ಸ್‌‘ (IOT) ಎಂಬ ಹೊಸ ಯುಗದಲ್ಲಿ ಈ ಎಲ್ಲ ನಿತ್ಯಬಳಕೆಯ ಸಾಧನಗಳೂ ಅಂತರಜಾಲಕ್ಕೆ ಜೋಡಣೆಯಾಗುತ್ತವೆ. ಆಗ ನಾವು ಇಂಗ್ಲಿಶಿನ ದಾಸ್ಯದಲ್ಲೇ ಇರಬೇಕೆ? ನಿಮ್ಮ ಸ್ಮಾರ್ಟ್‌‌ಪೋನ್‌, ಟ್ಯಾಬ್ಲೆಟ್‌ಗಳಿಂದ ಹಿಡಿದು ಇಂಥ ಎಲ್ಲ ಸಾಧನಗಳಲ್ಲೂ ಕನ್ನಡ ಮತ್ತು ಭಾರತೀಯ ಭಾಷೆಗಳನ್ನು ಅಳವಡಿಸಿರಬೇಕು ಎಂಬ ಒತ್ತಾಯವನ್ನೂ ನಾವು ಮಾಡಬೇಕಿದೆ.

ಲೋಕಲೈಸೇಶನ್‌ ಎಂಬ ಈ ಕಾರ್ಯವನ್ನು `ದೇಸೀಕರಣ‘ ಎಂದು ಕರೆಯಬಹುದು. ದೇಸೀಕರಣವು ಮಾಹಿತಿ ತಂತ್ರಜ್ಞಾನದ ಸಾಧನಗಳ ಯುಗದಲ್ಲಿ ಸ್ಥಳೀಯ ಭಾಷೆಗಳನ್ನು ಉಳಿಸುವ ಮೊದಲ ಹೆಜ್ಜೆ. ಈ ಹೊಸಕಾಲದ ಇಂಗ್ಲಿಶ್‌ ಸವಾರಿಯಿಂದ ಬಿಡುಗಡೆ ಹೊಂದಲು ನಾವು ಬಳಸುವ ತಂತ್ರಾಂಶಗಳ ಆದೇಶ ಪಟ್ಟಿ (ಮೆನ್ಯು) ಕನ್ನಡದಲ್ಲಿ ಇರಬೇಕಾದ್ದು ಅತ್ಯಗತ್ಯ. ಪಾವತಿಸಿ ಪಡೆದ ತಂತ್ರಾಂಶಗಳಲ್ಲಿ ನಮ್ಮ ಭಾಷೆಯ ಅವತರಣಿಕೆಗಾಗಿ ಕಾಯಬೇಕು. ಸ್ವತಂತ್ರ/ಮುಕ್ತ ತಂತ್ರಾಂಶಗಳ ವಿಷಯದಲ್ಲಿ ಹೀಗಿಲ್ಲ. ಉದಾಹರಣೆಗೆ ಲಿಬ್ರೆ ಆಫೀಸ್‌ ಎಂಬ ಮುಕ್ತ ತಂತ್ರಾಂಶದ ಬಹ್ವಂಶ ಆದೇಶಗಳನ್ನು ನೀವು ಕನ್ನಡದಲ್ಲಿಯೇ ನೋಡಲು ಸಾಧ್ಯ. ಕಂಪನಿಯ ಬದಲಿಗೆ ಇಲ್ಲಿ ಸಮುದಾಯವೇ ಕೈಗೆ ಕೈ ಜೋಡಿಸಿ ಅನುವಾದ ಕೈಗೊಳ್ಳುತ್ತದೆ.

ವಿವಿಧ ಸ್ವತಂತ್ರ / ಮುಕ್ತ ತಂತ್ರಾಂಶಗಳ ಆದೇಶ ಪಟ್ಟಿಯು ಏಕರೂಪವಾಗಿರಬೇಕು; ಗೊಂದಲವಿಲ್ಲದ, ಖಚಿತ ಪದಗಳನ್ನೇ ಬಳಸಬೇಕು ಎಂಬುದು ಇಲ್ಲಿನ ಆದ್ಯತೆ. ಇದಕ್ಕಾಗಿ ಫ್ಯುಯೆಲ್‌ ಪ್ರಾಜೆಕ್ಟ್‌ (http://fuelproject.org) ಬಹುಭಾಷಾ ಅಭಿಯಾನ ಕೈಗೊಂಡಿದೆ.

ಕನ್ನಡದ ಮಟ್ಟಿಗೆ ಇಂತಹ ದೇಸೀಕರಣಕ್ಕಾಗಿ `ಸಂಚಯ‘ (sanchaya.net) ಸಮೂಹವು ಒಂದು ಆನ್‌ಲೈನ್‌ ವೇದಿಕೆಯನ್ನು ಒದಗಿಸಿದೆ. ಇಲ್ಲಿ ಮುಖ್ಯವಾಗಿ ಮೊಜಿಲ್ಲಾ ಫೈರ್‌ಫಾಕ್ಸ್‌ ಎಂಬ ಜಾಲವಿಹಾರ ತಂತ್ರಾಂಶ, ಲಿಬ್ರೆ ಆಫೀಸ್‌, ಜಿನೋಮ್‌, ಉಬುಂಟು (ಗ್ನು/ಲಿನಕ್ಸ್‌ ಆಧಾರಿತ ಆಪರೇಟಿಂಗ್ ವ್ಯವಸ್ಥೆ), ಮೀಡಿಯವಿಕಿ, ಓಪನ್‌ಸ್ಟ್ರೀಟ್‌ ಮ್ಯಾಪ್‌, ವರ್ಡ್‌ಪ್ರೆಸ್‌ (ಜಾಲ ವಿನ್ಯಾಸ ತಂತ್ರಾಂಶ) – ಇವುಗಳ ದೇಸೀಕರಣಕ್ಕೆ ಅಂತರಜಾಲ ಕೊಂಡಿಗಳನ್ನು ನೀಡಿದೆ. ಇವಲ್ಲದೆ ಗಿಂಪ್‌, ಸ್ಕ್ರೈಬಸ್‌, ಇಂಕ್‌ಸ್ಕೇಪ್‌ ಮುಂತಾದ ಡಿಟಿಪಿ ಅಗತ್ಯದ ಸ್ವತಂತ್ರ / ಮುಕ್ತ ತಂತ್ರಾಂಶಗಳ ಆದೇಶ ಪಟ್ಟಿಯನ್ನು ಕನ್ನಡೀಕರಿಸುವ ಕೆಲಸವನ್ನು ಪೂರ್ಣಗೊಳಿಸುವ ಕೆಲಸವೂ ಇದೆ. ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍ಯಾದ `ಸಂಚಯ‘ವು ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ ಮತ್ತು `ದಾಸ ಸಂಚಯ‘ಗಳು ಒಂದು ಉತ್ತಮ ಸಮುದಾಯ ಕಾರ್ಯವಾಗಿ ನಮ್ಮ ಮುಂದಿವೆ. ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶ ಕೇವಲ `ಸಂಚಯ‘ದ್ದಾಗದೆ ನಮ್ಮ ನಿಮ್ಮೆಲ್ಲರದೂ ಆಗಬೇಕಿದೆ.

ಕೇವಲ ಪದ ಪದಗುಚ್ಛಗಳನ್ನಷ್ಟೆ ಕನ್ನಡಕ್ಕೆ ತಂದುಬಿಟ್ಟರೆ ಸ್ಥಳೀಯತೆ ದಕ್ಕುವುದಿಲ್ಲ. ನಮ್ಮ ನಾಡಿನ ದೇಸಿ ಪದಗಳು ಪಠ್ಯವಾಗಿ ಹರಡಬೇಕು. ಐಕನ್‌ಗಳೆಂದು ಕರೆಯುವ ಪುಟ್ಟ ಪುಟ್ಟ ಚಿತ್ರಗಳನ್ನು ಕನ್ನಡ ನಾಡಿಗಾಗಿಯೂ ನಮ್ಮ ಕಲಾವಿದರು ಬರೆಯಬೇಕು. ನಾಡಿನ ಪ್ರಮುಖ ತಾಣಗಳ, ಸಂಸ್ಕೃತಿ, ಪರಂಪರೆ, ಜನಜೀವನದ ಚಿತ್ರಗಳು ಸಹಜವಾಗಿಯೇ ವಿದ್ಯಾರ್ಥಿಗಳಿಗೆ ಸಿಗಬೇಕು. ಪುಟವಿನ್ಯಾಸ ಮಾಡುವಾಗ ನಾಡಿನ ಕಣ್ಣು–ಸಸ್ಯ–ಬೀಜ–ಹೂವು–ಪ್ರಾಣಿಗಳ ಚಿತ್ರಗಳು ನಮಗೆ ಸಿಗಬೇಕೇ ವಿನಃ ಅಮೆರಿಕಾ – ಯುರೋಪಿನ ಹೂವುಗಳಲ್ಲ. ಇಂಥ ಹತ್ತಾರು ಬಗೆಯ ಕನ್ನಡೀಕರಣ, ಸ್ಥಾನೀಕರಣ ನಡೆಯುವ ತುರ್ತು ಒದಗಿಬಂದಿದೆ.

ಯಂತ್ರಾನುವಾದವೂ ಸಾಧ್ಯ

ಭಾಷಾ ಸೂತ್ರಗಳನ್ನು ಗುರುತಿಸಿ ಯಂತ್ರಾನುವಾದ ಮಾಡಲು ತಂತ್ರಾಂಶ ರೂಪಿಸುವುದು ಭಾರತೀಯ ಭಾಷೆಗಳ ಮಟ್ಟಿಗೆ ಮರೀಚಿಕೆಯಾಗಿಯೇ ಉಳಿದಿದೆ. ಟಿಡಿಐಎಲ್‌ ಸಂಸ್ಥೆಯು ರೂಪಿಸಿದ ಆನ್‌ಲೈನ್‌ ಯಂತ್ರಾನುವಾದದ ಗುಣಮಟ್ಟ ಪ್ರಾಥಮಿಕ ಹಂತದಲ್ಲೇ ಇದೆ. ಈ ನಿಟ್ಟಿನಲ್ಲಿ ಹೈದರಾಬಾದ್‌ ವಿವಿಯ ಪ್ರಾಧ್ಯಾಪಕ, ಕನ್ನಡಿಗ ಪ್ರೊ|| ಕವಿ ನಾರಾಯಣಮೂರ್ತಿಯವರು ರೂಪಿಸಿರುವ ಕನ್ನಡ – ತೆಲುಗು ಅನುವಾದ ‘ಸಾರ‘ ತಂತ್ರಾಂಶವು ಹೊಸ ಭರವಸೆ ಮೂಡಿಸಿದೆ. ಇದು ಸೆಕೆಂಡಿಗೆ ಒಂದು ಲಕ್ಷ ವಾಕ್ಯಗಳನ್ನು, ಶೇಕಡಾ ೯೦ರಷ್ಟು ಗುಣಮಟ್ಟದಲ್ಲಿ ತೆಲುಗಿಗೆ ಅನುವಾದಿಸುತ್ತದೆ. `ಸಾರ‘ದ ವಿನ್ಯಾಸವನ್ನೇ ಅನುಸರಿಸಿ ಜಗತ್ತಿನ ಯಾವುದೇ ಎರಡು ಭಾಷೆಗಳ ನಡುವೆ ಯಂತ್ರಾನುವಾದದ ಸೌಲಭ್ಯವನ್ನು ಸುಲಭವಾಗಿ ರೂಪಿಸಬಹುದು ಎಂದು ಪ್ರೊ|| ನಾರಾಯಣಮೂರ್ತಿ ಹೇಳುತ್ತಾರೆ. `ಸಾರ‘ ತಂತ್ರಾಶವನ್ನು ರೂಪಿಸಲು ವಿವಿಧ ನಿಘಂಟುಗಳು, ವಾಕ್ಯಭಾಗಗಳ ಪಟ್ಟೀಕರಣ, ವಾಕ್ಯ ವ್ಯಾಕರಣದ ಸೂತ್ರಗಳು, ಸಮಾನಾಂತರ ಪದಸಂಚಯ (ಕಾರ್ಪಸ್‌) – ಇವೆಲ್ಲವನ್ನೂ ಬಳಸಿಕೊಳ್ಳಲಾಗಿದೆ. ಇವುಗಳನ್ನು ಬಳಸಿ ಪಡೆದ ಭಾರೀ ಪ್ರಮಾಣದ ದತ್ತಾಂಶಗಳನ್ನು ಮತ್ತೆ ಮತ್ತೆ ಇದಕ್ಕೇ ಊಡಿಸಿ ಅನುವಾದ ಸುಧಾರಣೆಗೆ ಬಳಸಿಕೊಳ್ಳಲಾಗಿದೆ. ಒಂದು ರೀತಿಯಲ್ಲಿ ಇದು ಸದಾ ಗುಣಮಟ್ಟವನ್ನು ಸುಧಾರಿಸಿಕೊಳ್ಳುತ್ತ ಮುನ್ನಡೆವ ತಂತ್ರಾಂಶ. ಸದ್ಯಕ್ಕಂತೂ `ಸಾರ‘ ತಂತ್ರಾಂಶವು ದೇಶದಲ್ಲೇ ಅತ್ಯಂತ ಯಶಸ್ವೀ ಯಂತ್ರಾನುವಾದ ವ್ಯವಸ್ಥೆ. ಭಾಷೆ ಬಲ್ಲವರ ನಿಗಾ ಮತ್ತು ಭಾಗಿತ್ವ ಇದ್ದರೆ ಖಂಡಿತ ಈ ಅನುವಾದದ ಕೆಲಸಗಳು ಬಹುಬೇಗ ಆಗುತ್ತವೆ‘ ಎಂಬುದು ಪ್ರೊ|| ನಾರಾಯಣಮೂರ್ತಿಯವರ ಅಭಿಮತ.

ಅನುವಾದದ ಕ್ರಿಯೆ ಸೃಜನಶೀಲ ಚಟುವಟಿಕೆ; ಆದ್ದರಿಂದ ಯಂತ್ರಾನುವಾದದ ಜೊತೆಗೇ ಮನುಷ್ಯರ ಮೇಲುಸ್ತುವಾರಿಯೂ ಬೇಕು. ನಾರಾಯಣಮೂರ್ತಿಯವರ ಯಂತ್ರಾನುವಾದವನ್ನು ಸುಧಾರಿಸಿದರೆ, ಅದನ್ನೇ ವಿಸ್ತರಿಸಿದರೆ, ಬಹುಭಾಷಾ ಅನುವಾದವು ಸರಳವಾಗುತ್ತದೆ; ಬೇಗನೆ ಆಗುತ್ತದೆ. ಭಾರತವಾಣಿ, ಕಣಜ ತಾಣಗಳಲ್ಲಿ ಇರುವ ಪಠ್ಯ ಆಧಾರಿತ ನಿಘಂಟು – ಪದಕೋಶಗಳನ್ನು ಸರಿಯಾಗಿ ಬಳಸಿಕೊಂಡರೆ ಮುಕ್ತ ಅನುವಾದ ತಂತ್ರಾಂಶವನ್ನೂ ರೂಪಿಸಲು ಸಾಧ್ಯವಿದೆ.

ಭಾಷೆಗಳ ನಡುವಣ ಕೊಡು–ಕೊಳ್ಳುವಿಕೆಯ ಸಾಂಸ್ಕೃತಿಕ ಬಂಧಕ್ಕೆ ಇಂಥ ತಂತ್ರಾಂಶಗಳನ್ನು ವಿಶ್ವವಿದ್ಯಾಲಯಗಳು ರೂಪಿಸಬೇಕಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯವೂ ಭಾಷಾ ಸಂಶೋಧನೆಗೆಂದು ಪದ ಸಂಚಯವನ್ನು ರೂಪಿಸಿದ್ದು ಈಗ ಮೂಲೆಗುಂಪಾಗಿದೆ. ಭಾಷಾ ತಂತ್ರಜ್ಞಾನದ ಕುರಿತ ಇಂಥ ನಿರ್ಲಕ್ಷ ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡುವುದು ನಿಶ್ಚಿತ.

ಇನ್ನು ಭಾರತೀಯ ಭಾಷೆಗಳ ವಿವಿಧ ತಂತ್ರಾಂಶಗಳನ್ನು ರೂಪಿಸುವುದಕ್ಕೆಂದೇ `ಟೆಕ್ನಾಲಜಿ ಡೆವಲಪ್‌ಮೆಂಟ್‌ ಫಾರ್‌ ಇಂಡಿಯನ್‌ ಲಾಂಗ್ವೇಜಸ್‌‘ (ಟಿಡಿಐಎಲ್‌) ಎಂಬ ಸಂಸ್ಥೆಯು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಇನ್‌ಫಾರ್ಮೇಶನ್‌ ಟೆಕ್ನಾಲಜಿ ಸಚಿವಾಲಯದ ಅಡಿಯಲ್ಲಿ ಸ್ಥಾಪನೆಯಾಗಿದೆ. ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಸಂಶೋಧನೆಗಳನ್ನು ಈ ಸಂಸ್ಥೆ ಮಾಡಿದೆ. ಸ್ವತಂತ್ರ – ಮುಕ್ತ ತಂತ್ರಾಂಶಗಳನ್ನು ಸಮಕಾಲೀನ ಆವೃತ್ತಿಗಳಾಗಿ ಬಿಡುಗಡೆ ಮಾಡುವ ಪ್ರಕ್ರಿಯೆ ಅರೆಬರೆಯಾಗಿದೆ. ಕರ್ನಾಟಕ ಸರ್ಕಾರದ ಯತ್ನಗಳು ಸರಿಯಾದ ದಿಕ್ಕಿನಲ್ಲಿ, ತಪ್ಪು ವಿಧಾನಗಳ ಮೂಲಕ ನಡೆದಿದ್ದು, ಯಾವ ಕೆಲಸಕ್ಕೂ ಬಾರದ ತಂತ್ರಾಂಶಗಳು ಬಿಡುಗಡೆಯಾಗಿದ್ದು ಈಗ ಹೊಸ ಇತಿಹಾಸ. ಭಾಷಾ ತಂತ್ರಾಂಶ ಎಂದರೆ ಅಕ್ಷರ ಜೋಡಣೆ, ಕೀಲಿಮಣೆ ಎಂಬ ಪ್ರಾಚೀನ ಚಿಂತನೆಯಲ್ಲೇ ನಾವಿದ್ದೇವೆ.

ಶಿಕ್ಷಣ ಮತ್ತು ಸ್ವತಂತ್ರ / ಮುಕ್ತ ತಂತ್ರಾಂಶಗಳು

ಹತ್ತು ವರ್ಷಗಳ ಹಿಂದೆನಾವು ಕೆಲವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಮೈಕ್ರೋಸಾಫ್ಟ್‌ ವಿಂಡೋಸ್‌, ಆಫೀಸ್‌, ಎಕ್ಸೆಲ್, ಪವರ್‌ ಪಾಯಿಂಟ್‌ ಇತ್ಯಾದಿ ಮೈಕ್ರೋಸಾಫ್ಟ್‌ಗೆ ಸಹಾಯಕವಾಗುವ ಪಠ್ಯಪುಸ್ತಕಗಳನ್ನು ಬರೆದು ಅಪರಾಧ ಎಸಗಿದ್ದೆವು! ಈ ಕೂಡಲೇ ಶಾಲಾ ಪಠ್ಯಕ್ರಮದಲ್ಲಿ ಸ್ವತಂತ್ರ / ಮುಕ್ತ ತಂತ್ರಾಂಶಗಳನ್ನೇ ಕಲಿಸಬೇಕು. ಅಲ್ಲಿಂದಲೇ ಮಾಹಿತಿ ತಂತ್ರಜ್ಞಾನ ಆಧಾರಿತ ಸಮಾಜದಲ್ಲಿ ಮುಕ್ತತೆಯ, ಸ್ವತಂತ್ರ ಚಿಂತನೆಯ ವಿಷಯಗಳನ್ನು ಬಿತ್ತಬಹುದು. ಶಾಲೆಗಳ ಕಂಪ್ಯೂಟರ್‌ ಲ್ಯಾಬ್‌ಗಳಲ್ಲಿ ಮೈಕ್ರೋಸಾಫ್ಟ್‌ ಆಧಾರಿತ ಕಲಿಕೆಯನ್ನು ನಿಲ್ಲಿಸಲು ಈಗಂತೂ ಕಾಲ ಒದಗಿದೆ. ಹಣದಲ್ಲೂ ಉಳಿತಾಯ; ವಿಚಾರದಲ್ಲೂ ಆಧುನಿಕತೆ. ಸಮುದಾಯದ ಸಹಕಾರದಿಂದ, ಸ್ವತಂತ್ರ ಚಿಂತನೆಯಿಂದ ತಂತ್ರಾಂಶಗಳನ್ನು ರೂಪಿಸಬಹುದು ಎಂಬ ಮನೋಭಾವವನ್ನು ಎಳೆವಯಸ್ಸಿನಲ್ಲೇ ಮೂಡಿಸುವುದು ನಮ್ಮ ಕರ್ತವ್ಯ. ಕಾರ್ಪೋರೇಟ್‌ ತಂತ್ರಾಂಶಗಳ ಗುಲಾಮಗಿರಿಯನ್ನು ಮೊಳಕೆಯಲ್ಲೇ ಚಿವುಟಬೇಕು. ಇದು ನಾಡಿನ ಮಕ್ಕಳಿಗೆ ನೀಡುವ ನೈತಿಕ ಶಿಕ್ಷಣವೂ ಹೌದು. ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು, ಪಾಲಕರು ಈ ವಿಷಯದಲ್ಲಿ ಸ್ವತಂತ್ರ ತಂತ್ರಾಂಶ ಚಳವಳಿಯನ್ನೇ ಹೂಡಬೇಕಿದೆ. ಇಂದಿನ ಮಕ್ಕಳನ್ನು ಈಗಲೇ ಸ್ವತಂತ್ರ ತಂತ್ರಾಂಶದ ಅಭಿಯಾನಿಗಳನ್ನಾಗಿ ಮಾಡಬೇಕಿದೆ.

ಖಾಸಗಿ ಮುಷ್ಟಿಯಲ್ಲಿ ಇ–ಆಡಳಿತ

ಕೇಂದ್ರ ಸರ್ಕಾರವೇ ಅನುಮೋದಿಸಿದ ಮೇಲೆ ರಾಜ್ಯ ಸರ್ಕಾರಗಳು ಈಗಲೂ ಮೈಕ್ರೋಸಾಫ್ಟ್‌ ಮತ್ತಿತರೆ ಖಾಸಗಿ ಮತ್ತು ಮುಚ್ಚಿದ (closed) ತಂತ್ರಾಂಶಗಳನ್ನು ಬಳಸುವುದನ್ನು ಮುಂದುವರಿಸಿವೆ. ಸದಾಕಾಲವೂ ಅಪ್‌ಗ್ರೇಡ್‌ ಆಗಬೇಕೆಂದು ಕೋಟಿಗಟ್ಟಲೆ ಹಣ ಸುಲಿಯುವ ತಂತ್ರಾಂಶಗಳಿಂದಾಗಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಬ್ಬಿದೆ. ಅದ್ರಲ್ಲೂ ವಿಂಡೋಸ್‌ ಆಪರೇಟಿಂಗ್‌ ವ್ಯವಸ್ಥೆಯನ್ನೇ ಅಳವಡಿಸಿರುವ ಕಂಪ್ಯೂಟರುಗಳನ್ನು ಖರೀದಿ ಮಾಡಿದ ಮೇಲೆ ಉಳಿಯುವುದೇನು? ಗ್ನು / ಲಿನಕ್ಸ್‌ ಆಧಾರಿತ (ಉಬುಂಟು ಇತ್ಯಾದಿ) ಆಪರೇಟಿಂಗ್‌ ವ್ಯವಸ್ಥೆಗಳನ್ನು ಊಡಿಸಿದ ಕಂಪ್ಯೂಟರುಗಳನ್ನು ಕೊಳ್ಳುವುದಕ್ಕೆ ಸರ್ಕಾರಕ್ಕೆ ತಾಂತ್ರಿಕ ಸಮಸ್ಯೆ ಇಲ್ಲವೇ ಇಲ್ಲ. ಇದು ವಿಂಡೋಸ್‌ಗಿಂತ ಹೆಚ್ಚು ಸುರಕ್ಷಿತ. ಜಾಲತಾಣ, ಕ್ಲೌಡ್‌ ತಂತ್ರಾಂಶಗಳೂ ಮುಕ್ತವಾಗಿ ದೊರಕುತ್ತವೆ. ಸೇವೆಗೆ ಮತ್ತು ಯಂತ್ರಾಂಶಗಳಿಗೆ ಮಾತ್ರ ಹಣ ನೀಡಬೇಕಾಗುತ್ತದೆ. ತಂತ್ರಾಂಶ ತಯಾರಿಕಾ ಟೆಂಡರ್‌ಗಳನ್ನು ಕರೆಯುವಾಗಲೂ ಸ್ವತಂತ್ರ / ಮುಕ್ತ ತಂತ್ರಾಂಶಗಳನ್ನೇ ನೀಡುವಂತೆ ಸೂಚಿಸಬೇಕು. ಒಂದು ಸರ್ಕಾರದ ತಾಂತ್ರಿಕ ಅಗತ್ಯಗಳನ್ನು ಮುಚ್ಚಿದ ತಂತ್ರಾಂಶಗಳೇ ನಿರ್ಣಯಿಸುವುದು ಎಷ್ಟು ಸರಿ? ನಿಜ, ಶಿಕ್ಷಣದ ಕೋರ್ಸ್‌‌ಗಳನ್ನು ರೂಪಿಸುವ, ಇ–ಆಡಳಿತದ ಕೆಲಸಗಳಿಗೆ ಬರುವ ಮತ್ತು ದತ್ತ ಸಂಚಯದ ಮೂಲಕ ಕೆಲಸ ಮಾಡುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ತಾಂತ್ರಿಕ ಪರಿಣತಿ (ಪಾವತಿಸಿದ ಸಾಫ್ಟ್‌ವೇರ್‌ಗಳಲ್ಲೂ ಇದು ಅಗತ್ಯ ತಾನೆ?) ಬೇಕಾಗುತ್ತದೆ. ಅವುಗಳ ಸೇವೆ ನೀಡುವವರಿಗೆ, ನಿಯಮಿತವಾಗಿ ನಿರ್ವಹಣೆ ಮಾಡುವವರಿಗೆ ಶುಲ್ಕ ನೀಡಬೇಕಾಗುತ್ತದೆ. ಅಲ್ಲದೆ ಯಾವುದೇ ತಂತ್ರಾಂಶವನ್ನು ಅಳವಡಿಸುವ ಕೆಲಸಗಳಿಗೆ, ಅದನ್ನು ನೀವು ಸೇವಾ ನೀಡಿಕೆದಾರರಿಂದ ಮಾಡಿಸಿದರೆ ಅದಕ್ಕೆ ಪಾವತಿ ಮಾಡಬೇಕಾಗುತ್ತದೆ. ದುಡ್ಡು ತೆತ್ತ ತಂತ್ರಾಂಶಗಳಿಗೆ ಇದಕ್ಕಿಂತ ಹೆಚ್ಚು ಹಣ ಕಕ್ಕಬೇಕು!

ಭಾಷೆ, ನೆಲ, ಜಲ – ವಿವಾದಗಳು ಏನೇ ಇರಲಿ, ಭಾಷೆಗಳನ್ನು ಕಲಿತು ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲೆ ಇದ್ದೇ ಇದೆ. ಅದರಿಂದ ಯಾರೂ ನುಣುಚಿಕೊಳ್ಳಲಾಗದು. ಭಾಷಾ ವೈವಿಧ್ಯವನ್ನು ಉಳಿಸಿಕೊಂಡರೇನೇ ನಮ್ಮ ಜೀವವೈವಿಧ್ಯವೂ ಉಳಿಯುತ್ತದೆ. ಚಿಕ್ಕಪುಟ್ಟ ಭಾಷೆಗಳು ಸಾಂದ್ರವಾಗಿರುವ ಸ್ಥಳಗಳು ಅಮೂಲ್ಯ ಸಸ್ಯ–ಪ್ರಾಣಿ ಸಂಪತ್ತಿನಿಂದ ಕೂಡಿವೆ ಎಂಬ ಅರಿವು ನಮಗಿರಬೇಕು. ಭಾಷೆಗಳ ಉಳಿವಿನಲ್ಲೇ ನಮ್ಮ ದೇಸಿ ಪರಂಪರೆಯ, ಅರಿವಿನ ಭವಿಷ್ಯವಿದೆ. ಆದರೆ ಭಾಷೆಗಳ ನಿಧಾನ ಸಾವಿಗಾಗಿ ದುಃಖಿಸುವವರು ಕಡಿಮೆ. ಹಿಂದೆಂದೂ ನಿರೀಕ್ಷಿಸಿರದ ವೇಗದಲ್ಲಿ ತಂತ್ರಜ್ಞಾನವು ಬೆಳೆಯುತ್ತಿದೆ; ಅದಕ್ಕೆ ತಕ್ಕಂತೆ ದಕ್ಷ, ಪರಿಣಾಮಕಾರಿ ಭಾಷಾ ಸಾಧನಗಳನ್ನು ನಾವು ರೂಪಿಸುತ್ತಿಲ್ಲ.

ಹಲವು ದೇಶಗಳ ಒಟ್ಟಾರೆ ಆಂತರಿಕ ಉತ್ಪನ್ನಗಳನ್ನೂ ಮೀರಿಸಿದ ಬಹುರಾಷ್ಟ್ರೀಯ ಸಂಸ್ಥೆಗಳು ಮುಂದೆ ನಮ್ಮ ಲಿಪಿ, ವ್ಯಾಕರಣ, ಅನುವಾದ – ಎಲ್ಲವನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿವೆ. ಜಡನಿದ್ದೆಯಲ್ಲಿರುವ ನಾವು ಭಾಷೆ–ಲಿಪಿಯ ಮೂಲ ಗುಣಗಳನ್ನೇ ಕಳೆದುಕೊಳ್ಳುವ ಅಪಾಯ ಒದಗಿದೆ. ಸರಿಯಾದ ಅಕ್ಷರಭಾಗಗಳೇ ಇಲ್ಲದ, ಕೊಂಬು, ಇಳಿಗಳು ವಿಕರಾಳವಾಗಿರುವ ಯುನಿಕೋಡ್‌ ಫಾಂಟ್‌ಗಳೂ ಬಂದುಬಿಟ್ಟಿವೆ. ತಂತ್ರಜ್ಞಾನದ ಪದಗಳನ್ನು ಕನ್ನಡದಲ್ಲಿ ಟಂಕಿಸುವ ಕೆಲಸವನ್ನು ಕೆಲವು ಭಾಷಾಂಧ ತಜ್ಞರು ತಮಗೆ ತಿಳಿದ ರೀತಿಯಲ್ಲಿ ಮಾಡಿ ಕನ್ನಡಕ್ಕೂ,ದೇಸೀಕರಣಕ್ಕೂ ಅಪಚಾರ ಎಸಗುತ್ತಿದ್ದಾರೆ. ನಗರದ ಶಾಲೆಗಳಲ್ಲಿ ಕನ್ನಡವು ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಈ ಬಗೆಯ ವಿಕರಾಳ ಬೆಳವಣಿಗೆಗಳನ್ನು ತಡೆಯಲಾದರೂ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಬಳಕೆ ಮತ್ತು ದೇಸೀಕರಣ ಆಗಬೇಕಿದೆ. ಸರ್ಕಾರ ಮತ್ತು ಸಮುದಾಯಗಳು ಆದ್ಯತೆಗಳ ಮೇಲಾದರೂ ಕೆಲವು ಹೆಜ್ಜೆಗಳನ್ನು ಇಡಬೇಕಿದೆ.

  • ಸ್ವತಂತ್ರ / ಮುಕ್ತ ತಂತ್ರಜ್ಞಾನಕ್ಕಾಗಿ `ಡಿಜಿಟಲ್‌ ಜಗಲಿ‘ : ಸರ್ಕಾರ, ಸಂಸ್ಥೆಗಳು ಮತ್ತು ಸಮುದಾಯ ಕಾರ್ಯಕರ್ತರು ಸುಲಭವಾಗಿ ಒಂದೆಡೆ ಕಲೆತು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ, ತಂತ್ರಜ್ಞಾನ ಹಾಗೂ ಮುಕ್ತಜ್ಞಾನದ ಸಂಗ್ರಹದ ಬಗ್ಗೆ ಮಾಹಿತಿ ವಿನಿಮಯ, ನಿರ್ಣಯ ತಳೆಯಲು ಅನುಕೂಲವಾಗುವ ಒಂದು ವೇದಿಕೆಯನ್ನು ಕರ್ನಾಟಕ ಸರ್ಕಾರವೇ ರೂಪಿಸಿ ನಿರ್ವಹಿಸಬೇಕು.

  • ಮುಕ್ತ ಜ್ಞಾನಕ್ಕಾಗಿ `ಅರಿವಿನ ಗೋಮಾಳ‘ : ಇದು ಮುಕ್ತಜ್ಞಾನದ ಅಭಿಯಾನವನ್ನು ವಿಶ್ವವಿದ್ಯಾಲಯಗಳಿಂದ ಆರಂಭಿಸಿ ದೇಸಿ ಅರಿವಿನ ಗ್ರಾಮೀಣ ಜ್ಞಾನ ಕಣಜಗಳನ್ನೂ ಸಂಗ್ರಹಿಸಿ ಕಲಿಕೆ ಮತ್ತು ಸಂಶೋಧನೆಗಾಗಿ ಸಮುದಾಯದ ಬಳಕೆಗೆ ಉಚಿತವಾಗಿ ಬಿಟ್ಟುಕೊಡುವ ತತ್ವವೂ ಹೌದು; ಯೋಜನೆಯೂ ಹೌದು .

  • ಕನ್ನಡ ಕಲಿಕೆಗೆ ಅಭಿಯಾನ: ಕನ್ನಡ ಕಲಿಕೆಯ ಆನ್‌ಲೈನ್‌ ತರಗತಿಗಳೇ ಅಲಭ್ಯವಾಗಿರುವ ಈ ಹೊತ್ತಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು MOOC (massive open online course) ಮಾದರಿಯಲ್ಲಿ ವಿವಿಧ ವಯೋಮಾನದ, ವೃತ್ತಿಪರರ ಅನುಕೂಲಕ್ಕಾಗಿ ಆನ್‌ಲೈನ್‌ ಕೋರ್ಸ್‌‌ಗಳನ್ನು ರೂಪಿಸಿ ಉಚಿತವಾಗಿ ನೀಡಬೇಕು.

ಈ ಕಾಲದ ಮಹಾನ್ ಕನಸುಗಾರ–ವಿಜ್ಞಾನಿ–ಹೂಡಿಕೆದಾರ ಇಲಾನ್‌ ಮಸ್ಕ್‌, ತನ್ನ ಅತ್ಯಾಧುನಿಕ, ಪರಿಸರ ಸ್ನೇಹಿ ವಿದ್ಯುತ್‌ ಕಾರುಗಳ ವಿನ್ಯಾಸ, ತಂತ್ರಜ್ಞಾನವನ್ನೆಲ್ಲ ಮುಕ್ತವಾಗಿ ಹಂಚಲು ನಿರ್ಧರಿಸಿದ್ದಾರೆ . ಇತ್ತ ನಾವು ಕೇವಲ ಭಾಷೆಗೆ ಸಂಬಂಧಿಸಿದ ಸ್ವತಂತ್ರ / ಮುಕ್ತ ತಂತ್ರಾಂಶಗಳು ಕೈಯಲ್ಲಿದ್ದರೂ ಖಾಸಗೀಕರಣದ ಕಂದಾಚಾರಕ್ಕೆ ಜೋತುಬಿದ್ದಿದ್ದೇವೆ. ಮುಕ್ತಜ್ಞಾನ, ಮುಕ್ತ ತಂತ್ರಜ್ಞಾನದ ಅಭಿಯಾನವನ್ನು ಕನ್ನಡದ ಉಳಿವಿನ ಹೋರಾಟವಾಗಿ ಸ್ವೀಕರಿಸಬೇಕಿದೆ.

ಉತ್ತರ ನಿಮ್ಮಲ್ಲೇ ಇದೆ.

ಕೆಲವು ತಾಂತ್ರಿಕ ಸ್ಪಷ್ಟೀಕರಣಗಳು

  1. ಸ್ವತಂತ್ರ ತಂತ್ರಾಂಶ (ಫ್ರೀ ಸಾಫ್ಟ್‌ವೇರ್‌) ಚಳವಳಿಯೇ ಜಗತ್ತಿನ ಮೊಟ್ಟಮೊದಲ ಸಮುದಾಯ ತಂತ್ರಾಂಶ ಚಳವಳಿ. ಇದನ್ನು ಆರಂಭಿಸಿದವರು ಫ್ರೀ ಸಾಫ್ಟ್‌ವೇರ್‌ ಸಂತ ಎಂದೇ ಪ್ರಸಿದ್ಧರಾಗಿರುವ ರಿಚರ್ಡ್‌ ಸ್ಟಾಲ್‌ಮನ್‌.

  2. ಫ್ರೀವೇರ್‌ ಎಂದರೆ ಫ್ರೀ ಸಾಫ್ಟ್‌ವೇರ್‌ ಅಲ್ಲ: ಫ್ರೀವೇರ್‌ ಎಂದು ಸಿಗುವ ತಂತ್ರಾಂಶಗಳನ್ನು `ಸ್ವತಂತ್ರಾಂಶ‘ ಎಂದು ಕರೆಯೋಣ. ಇವುಗಳು ಖಾಸಗಿ ಒಡೆತನದ , ಸೀಮಿತ ಅನುಕೂಲಗಳಿರುವ ತಂತ್ರಾಂಶಗಳೇ ಹೊರತು ಈ ಲೇಖನದಲ್ಲಿ ಸೂಚಿಸಿದ `ಸ್ವತಂತ್ರ ತಂತ್ರಾಂಶ‘ ಗಳಲ್ಲ. ಉದಾಹರಣೆಗೆ: `ನುಡಿ‘ ತಂತ್ರಾಂಶದ ಈವರೆಗಿನ ಎಲ್ಲ ಆವೃತ್ತಿಗಳೂ `ಫ್ರೀವೇರ್‌‘ ಆಗಿವೆಯೇ ಹೊರತು ಫ್ರೀ ಸಾಫ್ಟ್‌ವೇರ್‌ ಆಗಿಲ್ಲ.

  3. ವಿಶ್ವಸಂಸ್ಥೆಯು ಫ್ರೀ ಸಾಫ್ಟ್‌ವೇರ್‌ ಮತ್ತು ಓಪನ್‌ಸೋರ್ಸ್‌ ಸಾಫ್ಟ್‌ವೇರ್‌ – ಎರಡೂ ಸಮುದಾಯ ಯತ್ನಗಳನ್ನು ಸೇರಿಸಿ ಫ್ರೀ ಎಂಡ್‌ ಓಪನ್‌ಸೋರ್ಸ್‌ ಸಾಫ್ಟ್‌ವೇರ್‌ ಎಂಬ ತನ್ನದೇ ವ್ಯಾಖ್ಯೆಯನ್ನು(Free and Open Source – FOSS) ಕೊಟ್ಟಿದೆ.

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಒಂದು ಸೂಚನಾತ್ಮಕ ಪಟ್ಟಿ


ಗಮನಿಸಿ
:

  • ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಸಂಪೂರ್ಣ ವಿವರ ಇಲ್ಲಿದೆ: https://en.wikipedia.org/wiki/List_of_free_and_open-source_software_packages

  • ಫ್ರೀ ಸಾಫ್ಟ್‌ವೇರ್‌ ಫೌಂಡೇಶನ್‌ನ ಈ ಪುಟದಲ್ಲಿ 15 ಸಾವಿರಕ್ಕೂ ಹೆಚ್ಚು  ಸ್ವತಂತ್ರ ತಂತ್ರಾಂಶಗಳ ಪಟ್ಟಿ ಇದೆ : https://directory.fsf.org/wiki/Main_Page

———————————————————-

  • ಈ ಲೇಖನಕ್ಕೆ ಪೂರಕ ಮಾಹಿತಿ ಒದಗಿಸಿದ ರಿಚರ್ಡ್‌ ಸ್ಟಾಲ್‌ಮನ್‌ರಿಗೆ ಲೇಖಕನ ಕೃತಜ್ಞತೆಗಳು

  • ಈ ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಮತ

( 16 ಜುಲೈ 2017ರಂದು ಪ್ರಜಾವಾಣಿಯಲ್ಲಿ ಬಂದ ಲೇಖನ)

Share. Facebook Twitter Pinterest LinkedIn Tumblr Email
Previous Article“ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!
Next Article Digital life : let us make it sustainable; minimise carbon footprints
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.