Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
ಲೇಖನಗಳು

ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 8, 2008Updated:May 19, 20254 Comments5 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
ನಿನ್ನೆಯಷ್ಟೇ ನಾನು ಮಾವೋ ಎಂಬ ಏಳುಕೋಟಿ ಸಾವಿನ ಸರದಾರನ ಬಗ್ಗೆ ಬಂದ ಪುಸ್ತಕದ ಅನುವಾದವನ್ನು (ನಿಮಗೆ ಗೊತ್ತಿಲ್ಲದ ಮಾವೋ) ಕೈಗೆತ್ತಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಅದರಂತೆ ವೆಬ್‌ಸೈಟಿನಲ್ಲಿ ಪುಸ್ತಕದ ಬಗ್ಗೆ ಒಂದೆರಡು ಬ್ಲಾಗ್‌ಗಳನ್ನು ಸಿದ್ಧ ಮಾಡಿಟ್ಟು ಇವತ್ತಿಗೆ ಶೆಡ್ಯೂಲ್ ಮಾಡಿದ್ದೆ. ಆದರೆ ದುರಂತ ನೋಡಿ, ಈ ಸಾವಿನ ಸರದಾರನ ಬಂಟರು ಮತ್ತೊಂದು ಜೀವವನ್ನು ತೆಗೆದಿದ್ದಾರೆ. ಮಲೆನಾಡಿನ ಹಸಿರು ಮತ್ತೆ ರಕ್ತದ ಕಲೆ ಬಳಿದುಕೊಂಡಿದೆ. ನಕ್ಸಲೀಯರೆಂಬ ಜೀವವಿರೋಧಿ ಗ್ಯಾಂಗು ಬಂದು ಜಮೀನ್ದಾರರೊಬ್ಬರನ್ನು ಕೊಂದುಹಾಕಿದೆ. ಇದು ಪತ್ರಿಕೆಗಳ ಪ್ರಕಾರ ಮಲೆನಾಡಿನಲ್ಲಿ ನಕ್ಸಲರು ಮಾಡಿದ ಏಳನೇ ಹತ್ಯೆ. 

ಕಳೆದ ವಾರವಷ್ಟೇ ನಾನು ಪತ್ರಕರ್ತ ಮಿತ್ರನೊಬ್ಬನ ಬಳಿ ಚಾಟ್ ಮಾಡುತ್ತ, ಅವನ ಪತ್ರಗಳಿಗೆ ಉತ್ತರಿಸುತ್ತ ಬರೆದಿದ್ದೆ: 

 I always oppose the Life-threatening revolutions. I have read hundreds of stories of death of SC ST policemen, commoners and other low class, poor people tortured, killed, and amputated in various parts of nation, particularly Andhra, by naxalites. 

ಕನ್ನಡಪ್ರಭದಲ್ಲಿ ಬಂದ ಛಾಯಾಚಿತ್ರ ನೋಡಿದಾಗ ಇಲ್ಲಿನ ನಕ್ಸಲೀಯರೂ ಇದೇ ತಂತ್ರವನ್ನು ಅನುಸರಿಸಿದ್ದಾರೆ ಎಂಬುದು ಖಚಿತವಾಗುತ್ತೆ. ಪೊಲೀಸ್ ಮಾಹಿತಿದಾರರಿಗೆ ಪಾಠ ಕಲಿಸುವ ಕರಪತ್ರಗಳ ಚಿತ್ರಗಳನ್ನು ನಾವೆಲ್ಲರೂ ಪತ್ರಿಕೆಗಳಲ್ಲಿ ನೋಡಿದ್ದೇವೆ. ನಮ್ಮ ಬ್ಲಾಗುಗಳಲ್ಲಿ ಕಾವ್ಯ, ಚಾರಣ, ವಿವಾದದ ಚರ್ಚೆ, ರಾಜಕಾರಣ, ಸಂಗೀತ,  ಹೀಗೆ ಎಲ್ಲ ಬಗೆಯ ಮನೋರಂಜಕ ವಿಷಯಗಳ ಬಗ್ಗೆ ಬರೆಯುವವರು ಬೇಕಾದಷ್ಟಿದ್ದಾರೆ. ಆದರೆ ಬಂದೂಕಿಲ್ಲದವರ ಜೀವವನ್ನು ನಡುರಾತ್ರಿ ಬಂದು ತೆಗೆಯುವಂಥ ಹೃದಯಹೀನರು ಮತ್ತು ವಿಕೃತದ್ವೇಷಿಗಳ ಬಗ್ಗೆ ಬರೆಯುವವರು ಯಾರು? ಎಲ್ಲರಿಗೂ ಲೈಫ್ ಥ್ರೆಟ್ ಇದ್ದೇ ಇರುತ್ತೆ. ಥ್ರೆಟ್ ಇಲ್ಲ ಎಂದುಕೊಂಡವರೂ ಹೇಗೆ ಚಿಲ್ಲರೆಯಾಗಿ ನಗರದ ರಸ್ತೆಗಳಲ್ಲಿ ಜೀವ ಕಳೆದುಕೊಳ್ಳುತ್ತಾರೆ ಅಲ್ವೆ? ಆದರೆ ನಮಗೆ ನಕ್ಸಲರ ಬಗ್ಗೆ ಬರೆಯಬೇಕಾದರೆ ಜೀವಭಯ; ಒಳಗೆಲ್ಲೋ ನಡುಕ… ನಮ್ಮ ಮನೆಗೂ ರಾತ್ರಿ ಯಾರಾದರೂ ನಕ್ಸಲರು ಬಂದರೆ…. ನಮ್ಮ ಜೀವವನ್ನು ತೆಗೆದುಬಿಟ್ಟರೆ?  ಇಷ್ಟಾಗಿಯೂ ನಾವು ನಕ್ಸಲರ ವೈಚಾರಿಕ ಸಂಗತಿಗಳನ್ನು ವಿರೋಧಿಸುವುದಾದರೂ ಹೇಗೆ? 

ನಾನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಯುವ ಕಾರ್ಯಕರ್ತನಾಗಿದ್ದ ೧೯೮೬-೯೧ರ ದಿನಗಳಲ್ಲಿ ಆಂಧ್ರದಲ್ಲಿ ನಮ್ಮ ಹಲವು ಕಾರ್ಯಕರ್ತರು ಇದೇ ಜೀವವಿರೋಧಿ ನಕ್ಸಲರಿಂದ ಹತರಾದರು. ಪ್ರತೀ ಸಲವೂ ಅವರನ್ನು ನಕ್ಸಲರು ಅಟ್ಟಾಡಿಸಿಕೊಂಡು ಗುಂಡು ಹೊಡೆದು ಸಾಯಿಸಿದ ಕಥೆಗಳನ್ನು ನಮ್ಮ ಹೈದರಾಬಾದಿನ ಕಾರ್ಯಕರ್ತರು ಹೇಳುತ್ತಿದ್ದರು. ಪೊಲೀಸ್ ಮಾಹಿತಿದಾರರು ಎಂದೇ ಹೇಳಿ ನೂರಾರು ಅಮಾಯಕರ ಕೈಕಾಲುಗಳನ್ನು ಕತ್ತರಿಸಿದ ಕಥೆಗಳು ನಮ್ಮೆದುರು ಇದ್ದವು. ಈ ಕಥೆ ಅಂದಿನಿಂದಲೂ ಮುಂದುವರಿದುಕೊಂಡೇ ಬಂದಿದೆ. 

ನಾವು ಮಾತ್ರ ಬ್ಲಾಗಮಂಡಲದಲ್ಲಿ ಹಾಯಾಗಿದ್ದೇವೆ ಅನ್ನಿಸುವುದಿಲ್ಲವೆ? ನಮ್ಮ ಬ್ಲಾಗುಗಳಲ್ಲಿ ಕೇವಲ ವೈಯಕ್ತಿಕ ಅಭಿವ್ಯಕ್ತಿಯ ಮಾಧ್ಯಮವಾಗುವುದು ಬಿಟ್ಟು ಸಾಮಾಜಿಕ ಕಳಕಳಿಯ ವೇದಿಕೆಯಾಗುವುದು ಯಾವಾಗ? ಓದುಗರೆ, ಇದೇನು ನನ್ನ ಕಟಕಿಯಲ್ಲ; ವ್ಯಥೆಯಿಂದ ಮೂಡಿಬಂದ ಪ್ರಶ್ನೆ. 

ಎಂಟು ವರ್ಷಗಳ ಹಿಂದೆ ನಾನು ಈ ಕಮ್ಯುನಿಸ್ಟರ ಕಥೆ ಏನು ಎಂದು ಓದಲಾರಂಭಿಸಿದೆ. ಅದಕ್ಕೇ ನಾನು ಚೀನಾ – ಟಿಬೆಟ್ ಬಗ್ಗೆ ಹೆಚ್ಚು ತಿಳಕೊಂಡೆ. ಪುಸ್ತಕಗಳನ್ನು ಅನುವಾದಿಸಿದೆ. ಕನ್ನಡದಲ್ಲಿ ಚೀನಾ – ಟಿಬೆಟ್ ಬಗ್ಗೆ ಹೆಚ್ಚು ಬರೆದವನು ನಾನೇ ಎಂಬ ಹಮ್ಮೂ ನನಗಿದೆ. ಈಗಲೂ ನಾನು ಈ ವಿಷಯಗಳನ್ನು ಓದುವುದನ್ನು ಬಿಟ್ಟಿಲ್ಲ; ಟಿಬೆಟನ್ನರ ಗೆಳೆತನವನ್ನು ಉಳಿಸಿಕೊಂಡಿದ್ದೇನೆ. ಜೊತೆಗೆ ನಮ್ಮವರೇ ಆದ ನಕ್ಸಲರ ಜೀವವಿರೋಧಿ, ಹಂತಕ ಪ್ರವೃತ್ತಿಯ ಬಗ್ಗೆ ನಿಜಕ್ಕೂ ಆಘಾತಗೊಂಡಿದ್ದೇನೆ. 

ಹೇಳಿದೆನಲ್ಲ, ಕಳೆದ ವಾರ ಪತ್ರಕರ್ತನ ಜೊತೆ ನಡೆಸಿದ ಮಾತುಕತೆಯ ಹೊತ್ತಿನಲ್ಲಿ ಅವನಿಗೆ ನಕ್ಸಲರು ಹೇಗೆ ದಲಿತರನ್ನು ಕೊಚ್ಚಿಹಾಕಿದ್ದಾರೆ ಎಂಬ ಅಂಕಿ ಆಂಶವನ್ನು ಒದಗಿಸಿದೆ. ನಿಜ, ಕೆ ಪಿ ಎಸ್ ಗಿಲ್ ಎಂಬ ಪೊಲೀಸ್ ಅಧಿಕಾರಿ ಈ ವೆಬ್‌ಸೈಟಿನಲ್ಲಿ ಮಾಹಿತಿ ನೀಡಿದ್ದಾರೆ. ಅದನ್ನು ನಂಬದಿರಲು ಅದೊಂದೇ ಕಾರಣವಾಗಬೇಕೆ?

ಇನ್ನೂ ಒಂದು ಪ್ರಶ್ನೆಯನ್ನು ನನ್ನ ಮಿತ್ರನಲ್ಲಿ ಕೇಳಿದ್ದೆ: ಈ ನಕ್ಸಲರು ಯಾಕೆ ಮಲೆನಾಡಿನಲ್ಲೇ ತಮ್ಮ ಚಳವಳಿಯನ್ನು ಆರಂಭಿಸಬೇಕು? ಗೆರಿಲ್ಲಾ ಸಮರ ಮಾಡಬೇಕಲ್ಲ…. ಬಯಲುಸೀಮೆಯಲ್ಲಿ ತಪ್ಪಿಸಿಕೊಳ್ಳುವುದು ಕಷ್ಟ. ನಿಶ್ಶಸ್ತ್ರವಾಗಿರುವ ಜನರನ್ನು ನಡುರಾತ್ರಿ ಗುಂಡಿಟ್ಟು ಕೊಂದು ಪರಾರಿಯಾಗುವುದು ಎಂದರೆ ಸಾಮಾನ್ಯವೆ? ಎಂಥ ಧೈರ್ಯ ಇವರದ್ದು? ಛೀ ಎನ್ನುತ್ತದೆ ನನ್ನ ಮನಸ್ಸು. ರಾತ್ರಿ ಬಂದು ಮುಂಬಯಿಯನ್ನು ನಡುಗಿಸಿದ ಭಯೋತ್ಪಾದಕರಿಗೂ, ಇವರಿಗೂ ಏನಾದರೂ ವ್ಯತ್ಯಾಸ ಇದೆಯೆಂದು ನನಗೆ ಅನ್ನಿಸುವುದಿಲ್ಲ.

ನಿಜ, ನಮ್ಮ ರಾಜಕೀಯ ವ್ಯವಸ್ಥೆ ಸತ್ತುಹೋಗಿರಬಹುದು; ಭ್ರಷ್ಟಾಚಾರ ಮಿತಿ ಮೀರಿರಬಹುದು; ಸಮಾಜದಲ್ಲಿ ಬಡತನ ಹೆಚ್ಚಾಗಿರಬಹುದು. ಇದಕ್ಕಿಂತ ದುರವಸ್ಥೆ ರಾಜ ಮಹಾರಾಜರ ಕಾಲದಲ್ಲೂ ಇತ್ತಲ್ಲವೆ? ನಿನ್ನೆ ಮೈಸೂರಿನ ಅರಮನೆಯಲ್ಲಿ ಅಡ್ಡಾಡಿದಾಗ ಈ ಪ್ರಶ್ನೆ ನನ್ನನ್ನು ಬಲವಾಗಿ ಕಾಡಿತು. ಎಂಥ ವೈಭೋಗದಲ್ಲಿ ಇದ್ದರಲ್ಲವೆ ಅಂದಿನ ರಾಜರು, ರಾಣಿಯರು ಎಂದು ಊಹಿಸಿಕೊಳ್ಳಿ….. ಈಗ ರಾಜರೇನೋ ಇಲ್ಲ; ಬಂಡವಾಳಶಾಹಿಗಳು ಬೆಳೆದಿದ್ದಾರೆ. ಅವರು ರಾಜಕಾರಣಿಗಳನ್ನು ಕುಣಿಸುತ್ತಾರೆ. ಪಾತ್ರಗಳು ಬದಲಾಗಿವೆ; ಪರಿಸ್ಥಿತಿ ಹಾಗೆಯೇ ಇದೆ. 

ಹಾಗಂತ ಸಮಾಜ ಸುಧಾರಣೆಯ ಕಾರ್ಯವೇನೂ ನಡೆಯಲಿಲ್ಲವೆ? ನಮ್ಮ ಬಸವೇಶ್ವರರು ಮಹಾಮಂತ್ರಿಯಾಗಿದ್ದೂ ಕೊನೆಗೆ ಸಾಮಾಜಿಕ ಕ್ರಾಂತಿಯನ್ನು ಮಾಡಿದರಲ್ಲ… ಎಂದಾದರೂ ಖಡ್ಗ ಹಿಡಿದರೆ? ಸಂತ ಕಬೀರ ಎಂದಾದರೂ ಕತ್ತಿ ಹಿರಿದನೆ? ಸ್ವಾಮಿ ವಿವೇಕಾನಂದರು ಮೂವತ್ತರ ಹರೆಯದಲ್ಲೇ ದೇಶದ ಅಸ್ಮಿತೆಯನ್ನು ಎತ್ತಿ ಹಿಡಿದರಲ್ಲ, ದಲಿತರ ಬಗ್ಗೆ ಸಿರಿವಂತರ ಮನಸ್ಸಿಗೆ ಚುಚ್ಚುವಂತೆ ಮಾತನಾಡಿದರಲ್ಲ…. ಎಂದಾದರೂ ಹಿಂಸೆಯನ್ನು ಪ್ರಚೋದಿಸಿದರೆ? ಎಪ್ಪತ್ತಕ್ಕೂ ಹೆಚ್ಚು ದೇಶಗಳ ಸ್ವಾತಂತ್ರ್ಯಕ್ಕೆ ಕಾರಣರಾದ ಮಹಾತ್ಮಾ ಗಾಂಧಿ ಎಂದಾದರೂ ಅಹಿಂಸೆಯ ಹಾದಿ ಬಿಟ್ಟರೆ? ಅಂಬೇಡ್ಕರ್ ಎಂದಾದರೂ ದಲಿತರು ಧರ್ಮವನ್ನು ಅಫೀಮು ಎನ್ನಬೇಕೆಂದು ಕರೆ ಕೊಟ್ಟರೆ? ಸಾಮಾಜಿಕ ಸೇವಕ ಬಾಬಾ ಆಮ್ಟೆ ಎಂದಾದರೂ ಬಂದೂಕಿನ ಮಾತಾಡಿದರೆ? ಹತ್ತಾರು ಕೆರೆಗಳಿಗೆ ಮತ್ತೆ ಜೀವ ತಂದ ರಾಜೇಂದ್ರ ಸಿಂಗ್ ಮರುಭೂಮಿಯಲ್ಲೇ ವಿಶ್ವಪ್ರಸಿದ್ಧ ಜೀವನಕ್ರಾಂತಿ ಮಾಡಲಿಲ್ಲವೆ? 

ಹಾಗಾದರೆ ದೇಶರಕ್ಷಣೆಗೆ ಜೀವಹರಣ ಮಾಡುವ ಸೈನಿಕರೂ ಅಪರಾಧಿಗಳಲ್ಲವೆ ಎಂದು ಯಾರಾದರೂ ಕೇಳಬಹುದು. ಸೇನೆ-ಸಮರ-ರಕ್ತಪಾತದ ಬಗ್ಗೆ ಮಾತನಾಡುವ ಅಥಾರಿಟಿ ನನಗಿಲ್ಲ. ಅಲ್ಲದೆ ದೇಶ, ಗಡಿ, ರಕ್ಷಣೆಯ ಬಗ್ಗೆ ಹೆಚ್ಚು ಹೇಳುವುದಕ್ಕೂ ನನಗೆ ಮನಸ್ಸಿಲ್ಲ. ಸರಸ್ವತೀ ನದಿಯನ್ನು ನನ್ನ ಹಿರೀಕರ ತೊಟ್ಟಿಲು ಎಂದು ಕಾಣುವ ನನಗೆ, ಸಿಂಧೂ ಸಂಸ್ಕೃತಿಯೇ ನನ್ನ ಇವತ್ತಿನ ಈ ಅಕ್ಷರಗಳ ಮೂಲತಾಣ ಎಂದು ನಂಬಿರುವ ನನಗೆ ಪಾಕಿಸ್ತಾನದ ನೆಲವೂ ನನ್ನ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೇ ಎನಿಸುತ್ತದೆ. ಕಂದಹಾರದಿಂದ ಬಂದ ಕಾಬೂಲಿವಾಲಾ, ಕ್ಯಾಂಬೋಡಿಯಾದ ಆಂಗ್‌ಕಾರ್ ವಾಟ್ – ಎಲ್ಲವೂ ನನ್ನ ಪರಿಚಿತ ಬದುಕು ಎಂದೇ ನನಗೆ ಯಾವಾಗಲೂ ಭಾಸವಾಗುತ್ತದೆ. ಜಪಾನಿನಲ್ಲಿ ಹರಡಿರೋ ಬೌದ್ಧಧರ್ಮ, ಚೀನಾದ ಅಪಾರ ಪ್ರಾಚೀನ ಇತಿಹಾಸ ಮತ್ತು ಕಲೆ – ಸಂಸ್ಕೃತಿ, ಅಮೆಝಾನ್ ತಟದಲ್ಲಿರುವ ಶಮಾನ್‌ಗಳು, ಪೆರು ದೇಶದ ಹಿರೀಕರು – ಎಲ್ಲರೂ ಒಂದಲ್ಲ ಒಂದು ಥರ ನನ್ನ ಪರಿಸರದ ಕೊಂಡಿಗಳಾಗಿದ್ದಾರೆ ಅನ್ನಿಸುತ್ತದೆ. 

ಆದರೆ ಹೇತಲಾಂಡಿಗಳಂತೆ ಕಾಡಿನಲ್ಲಿ ಕೂತು, ಬಂದೂಕನ್ನೇ ನೋಡದ ಮನುಷ್ಯರನ್ನು ಕಟ್ಟಿ ಕೊಲ್ಲುವ ನಕ್ಸಲೀಯರು ಮಾತ್ರ ಎಲ್ಲೂ, ಎಲ್ಲೆಲ್ಲೂ ಈ ಸಂಸ್ಕೃತಿಗೆ, ಈ ನೆಲಕ್ಕೆ ಸೇರದ ಜನ ಎಂದು ಮತ್ತೆ ಮತ್ತೆ ಅನ್ನಿಸುತ್ತದೆ. ನಕ್ಸಲರ ಬೇಡಿಕೆಗಳನ್ನು ನೋಡಿ: ಅದನ್ನು ಒಂದು ರ್‍ಯಾಲಿಯ ಮೂಲಕವೂ ಜನತೆಯ ಮುಂದಿಡಲು, ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಿದೆ. ಮಹೇಂದ್ರ ಸಿಂಗ್ ತಿಕಾಯತ್ ಮಾಡಿದ್ದು ಇನ್ನೇನು? ನಮ್ಮ ಹಿಂದಿನ ರೈತಸಂಘ ಮಾಡಿದ್ದೂ ಇದೇ ಅಲ್ಲವೆ? ಈ ರೈತ ಚಳವಳಿ ಇವತ್ತು ಮೂರಾಬಟ್ಟೆಯಾಗಿದ್ದರೆ ಅದಕ್ಕೆ ರಾಜಕಾರಣಿಗಳು ಕಾರಣವೋ, ಅಥವಾ ನಮ್ಮೊಳಗೇ ಬೆಳೆಯುತ್ತಿರುವ ರಾಜಕೀಯ ನೇತೃತ್ವದ ದುರಾಸೆ ಕಾರಣವೋ? ಯೋಚಿಸಿ. ರುದ್ರಪ್ಪ, ಸುಂದರೇಶ್, ನಂಜುಂಡಸ್ವಾಮಿ ಶುರು ಮಾಡಿದ ಕ್ರಾಂತಿ ಇವತ್ತು ಯಾಕೆ ಹೀಗಾಗಿದೆ? ಉನ್ನತ ಸಾಮಾಜಿಕ ಚಿಂತನೆಯೊಂದಿಗೆ ಆರಂಭವಾದ ದಲಿತ ಸಂಘರ್ಷ ಸಮಿತಿ ಇಬ್ಭಾಗವಾದರೆ ಅದಕ್ಕೆ ಯಾರು ಹೊಣೆ? ಮಾರ್ಕ್ಸ್‌ವಾದವನ್ನೇ ಮೂಲವಾಗಿಟ್ಟುಕೊಂಡ ನಕ್ಸಲೀಯರು ಹತ್ತಾರು ಸ್ಪ್ಲಿಂಟರ್ ಗುಂಪುಗಳಾಗಿ ಒಡೆದಿದ್ದರೆ ಅದಕ್ಕೆ ಈ ವ್ಯವಸ್ಥೆ ಕಾರಣವೆ? ಕಾಂಗ್ರೆಸ್, ಬಿಜೆಪಿ, ದಳಗಳಲ್ಲಿ ಇರುವ ಸ್ವಾರ್ಥವೇ ಇವರಲ್ಲಿ ಇಲ್ಲವಾಗಿದ್ದರೆ ಹೀಗಾಗುತ್ತಿತ್ತೆ? 

ಹೇಡಿಗಳು ಹಲವು ಸಲ ಸಾಯುತ್ತಾರೆ; ಧೈರ್ಯವಂತ ಒಮ್ಮೆ ಮಾತ್ರ ಸಾಯುತ್ತಾನೆ ಎಂಬ ಮಾತಿದೆ. ಬದುಕಿನ ಬೆಲೆ ಗೊತ್ತಿದ್ದವರಿಗೆ ಮಾತ್ರ ಇದು ಅರ್ಥವಾಗುತ್ತದೆ. 

ಪಶ್ಚಿಮಘಟ್ಟ ನಮ್ಮ ವಿಶ್ವದ ಪ್ರಮುಖ ಎಕಲಾಜಿಕಲ್ ಹಾಟ್‌ಸ್ಪಾಟ್; ಇಲ್ಲಿನ ಪ್ರತಿಯೊಂದೂ ಸೂಕ್ಷ್ಮಜೀವಿಯೂ ಬದುಕಬೇಕು ಎಂದು ಪರಿಸರಪ್ರೇಮಿಗಳು ಹೋರಾಡುತ್ತಿದ್ದಾರೆ. ತದಡಿಯಲ್ಲಿ ಕಲ್ಲಿದ್ದಲಿನ ಸ್ಥಾವರ ಬರಬಾರದು ಎಂದು ನಾಡಿನ ಹಿರಿಯರು ಘೋಷಿಸಿದ್ದಾರೆ. ಈ ಕಾಡಿನಲ್ಲಿ ಪರಿಸರವನ್ನು ಉಳಿಸಿಕೊಂಡೇ ಗಣಿಗಾರಿಕೆ ಮಾಡುವ ಬಗ್ಗೆ ಅಧ್ಯಯನ ಮಾಡುವ ಉಲ್ಲೇಖವನ್ನು ಇತ್ತೀಚೆಗೆ ಬಿಡುಗಡೆಯಾದ ರಾಜ್ಯ ಗಣಿ ನೀತಿಯಲ್ಲಿ ಉಸುರಲಾಗಿದೆ. ಆದರೆ ಇಲ್ಲಿಯ ಜನರ ಜೀವರಕ್ಷಣೆಯ ಬಗ್ಗೆ ಯಾರು ಗಮನ ಹರಿಸುತ್ತಾರೆ? ನನಗೆ ಗೊತ್ತಿಲ್ಲ. 

ವಿಶ್ವಮಾನವ ಕುವೆಂಪು, ಕಡಲ ತೀರದ ಭಾರ್ಗವ ಕಾರಂತ, ಕಥೆಗಾರ, ಮಾತುಗಾರ ಯು.ಆರ್. ಅನಂತಮೂರ್ತಿ, ಕವಿ ಎಸ್ವಿಪಿ, ಕೋ. ಲ. ಕಾರಂತರು, ಚೇರ್ಕಾಡಿ ರಾಮಚಂದ್ರರಾಯರು, ಶಾಂತವೇರಿ ಗೋಪಾಲಗೌಡರು, ಪೂಚಂತೇ – ಎಲ್ಲ ವಿಚಾರವಂತರು ಹುಟ್ಟಿಬೆಳೆದ ಮಲೆನಾಡಿನಲ್ಲಿ ಈಗ ನಕ್ಸಲರು ಜೀವಹರಣದ ಕುದ್ರ ಕಾಯಕದಲ್ಲೇ ತೃಪ್ತಿಪಡುತ್ತಿದ್ದಾರೆ. ಇವರನ್ನು ಮಟ್ಟ ಹಾಕುವ ಮಾತಾಡುವ ಸರ್ಕಾರವು ಕಾರ್ಮಿಕರ ಕಲ್ಯಾಣದ ಪೊಳ್ಳು ಭರವಸೆಗಳನ್ನೇ ನೀಡುತ್ತಿದೆ. ನಮಗೆ ನಕ್ಸಲ್ ನಿಗ್ರಹ ಪಡೆಗಿಂತ ಸಮಾಜವನ್ನು ಕಟ್ಟಿ ಬೆಳೆಸುವ ಪಡೆ ಕಟ್ಟಬೇಕಿದೆ.  ಆಗಲಾದರೂ ಈ ನಕ್ಸಲರೆಂಬ ನಮ್ಮವರೇ ಮನೆಗೆ ಬಂದು ಚಾಪೆಯ ಮೇಲೆ ಕೂತು ಮಾತಾಡಬಹುದು; ಅಂಗಳದಲ್ಲಿ ಬೆಳೆದ ಕೆಂಪು ಹೂವನ್ನು ನೋಡಿ ನಸುನಗಬಹುದು; ಅರೆ, ಜೀವ ಎಂಬುದಕ್ಕೆ ಎಂಥ ವಿಶಿಷ್ಟ ಸೊಗಸಿದೆ ಎಂದು ಅಚ್ಚರಿಪಡಬಹುದು.

ಈ ಕನಸು ನನಸಾಗುವವರೆಗೆ, ಅಥವಾ ನನ್ನ ಜೀವಿತದವರೆಗೆ, ಬರಿಗೈಯಲ್ಲಿ ಇರುವವರ ಹಣೆಗೆ ಬಂದೂಕು ಹಿಡಿದ ನಕ್ಸಲರನ್ನು ನಾನು ವಿರೋಧಿಸುವೆ. ಬಯಲಿಗೆ ಬಂದು ಸತ್ಯಾಗ್ರಹ ಮಾಡುವ ಕಾಮ್ರೇಡ್‌ಗಳನ್ನು ನಾನು ಸ್ವಾಗತಿಸುವೆ. ನನ್ನ ಮಿತಿಯಲ್ಲಿ ನಾನೂ ಸಾಮಾಜಿಕ ಬದಲಾವಣೆಯ ಹೋರಾಟದಲ್ಲಿ ಭಾಗಿಯಾಗುವೆ. 

 

Share. Facebook Twitter Pinterest LinkedIn Tumblr Email
Previous Articleಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
Next Article ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

4 Comments

  1. shreeshum on December 8, 2008 10:14 pm

    ಈ ಬ್ಲಾಗ್ ಗಳನ್ನು ಬಂದೂಕು ಬಳಸುವ ನಕ್ಸಲ್ ಗಳು ಓದುವುದಾದರೆ ಅರಹಗಳಿಗೆ ಅರ್ಥವಿರುತ್ತದೆ. ಬದಲಾವಣೆ ನಿರೀಕ್ಷಿಸಬಹುದು. ಆದರೆ ನಮ್ಮಲ್ಲಿ ಆಗುವುದು ಎಲ್ಲಾ ಉಲ್ಟಾ. ಬಡವನ ಕಥೆ ಬಡವನೇ ಓದಿದರೆ ಏನು ಪ್ರಯೋಜನ. ಬಂದೂಕಿನಿಂದ ಉತ್ತರ ಕೊಡುತ್ತೇವೆ ಎಂದು ಹೊರಡುವ ಜನರು ಅಪ್ಪಿತಪ್ಪಿಯೂ ಇದನ್ನು ಓದುವುದಿಲ್ಲ. ಇದನ್ನು ಓದುವವರು ಬಂದೂಕು ಬಳಸುವುದಿಲ್ಲ. ಹಾಗಾಗಿ ನಮ್ಮಷ್ಟಕ್ಕೆ ನಾವು ಹಲವು ತೀರ್ಮಾನಗಳನ್ನು ಕೈಗೊಂಡಂತ್ಯಾಗುತ್ತದೆ.
    ಇನ್ನು ಚಳುವಳಿಗಳ ವಿಚಾರ. ಇವತ್ತಿನ ಜನಸಾಮಾನ್ಯ ಚಳವಳಿ ಎಂಬುದನ್ನು ಮರ್ತೆತಿದ್ದಾನೆ. ಆತನಿಗೆ ಎರಡು ಗೊತ್ತಿರುವುದು ಒಂದು ರಾಜಕೀಯ ಸಮಾವೆಶ, ಎರಡು ಧಾರ್ಮಿಕ ಸಮಾರಂಭ. ಮೊದಲನೆಯದಕ್ಕೆ ಹೋದರೆ ಆಳಿಗಿಷ್ಟು ಎಂಬ ಪಗಾರ ಸಿಗುತ್ತದೆ. ಎರಡನೆಯದಕ್ಕೆ ಹೋದರೆ ಭವಿಷ್ಯದಲ್ಲಿ ದೇವರು ಕಾಪಾಡುತ್ತಾನೆ ಎಂಬ ಸಮಾಧಾನ ಸಿಗುತ್ತದೆ. ನ್ಯಾಯಪರ ಚಳವಳಿ ನಡೆಸುವವರು ಪೇಮೆಂಟ್ ಎಲ್ಲಿಂದ ತಂದಾರು?.ಹಾಗಾಗಿ ಬಂದೂಕು ಆದರೆ ಕ್ರೇಝ್ ಇದೆ. ಎಲ್ಲರೂ ಹೆದರುತ್ತಾರೆ. ಹಾಗಾಗಿ ಅದನ್ನು ಆಕೆಮಾಡೀಕೊಂಡವರ ಸಂಖ್ಯೆ ಹೆಚ್ಚುತ್ತಿದೆ.

  2. Beluru Sudarshana on December 8, 2008 11:19 pm

    Dear Shreeshum
    don’t think naxals dont read this blog. They have a good presence on internet. They run the blogs in wordpress, blogspot etc., Just search naxalites and you will find a number of them.

  3. sram26 on December 9, 2008 1:29 am

    belur,
    you are not right while writting “against” naxals. you once again cross check the fact that they visited and ran back in the midnight! It is not true. And,please give some respect to facts! unlike V.Baht? He dont care facts.

    My question is your democratic state police buys and piles up a lot of arms ? why your police kills farmers ? Do they(state) believe in Mao and his preachings ?
    Why Vasundara Raje mucilessly killed her own people in MP ?
    Why Bajaranga Dal activists killed theire own counterpart in Mangalore ?

  4. Beluru Sudarshana on December 9, 2008 1:52 am

    Dear sram
    i am not commenting that this particular incident happened during midnight. I know it was late evening. Please don’t take my statement as a technical report. But what these naxals do is typical of a cowardice act . That is what I meant. Whether it is day or night, does it matter much when they kill unarmed people? When they cannot live with a so-called police informer, how can they survive the whole State?
    If they are sure of winning the hearts of the peasants, then why should they bother about the informers?
    You have referred V Bhat. I don’t know what you meant by this statement. I am dead against giving distorted facts. I have never, ever given a wrong information,as far as my information goes. And, please mind, I will never exaggerate ,or quote without references. You can sift through my articles and you can get a feeling of it.
    Your other comments (police, bajrang Dal etc.,): I am neither supporting police, or any person with a gun. If you think these so-called criminals too must have been guided by Mao’s preaches, I don’t argue. It is your opinion. Because, as far as I know, from my studies, Mao has killed his own people as part of his idealogy. You can read more on this in my forthcoming translation.
    Thanks for the response. I will publish it with these comments. Keep visiting. You will have the fun of a serious reading.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.