Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
ಲೇಖನಗಳು

ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ

ಬೇಳೂರು ಸುದರ್ಶನBy ಬೇಳೂರು ಸುದರ್ಶನOctober 3, 2017Updated:May 19, 2025No Comments10 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನೀವು ಹಣ ಪಾವತಿಗೆ ಪೇಪಾಲ್ (paypal.com) ) ಬಳಸಿ; ಖರೀದಿಗೆ ಈಬೇ (ebay.com) ತಾಣವನ್ನು ಬಳಸಿ; ಸರ್ಕಾರಕ್ಕೆ ಯಾವುದೋ ಸಾಮಾಜಿಕ ಬೇಡಿಕೆಯೊಂದನ್ನು ಸಲ್ಲಿಸಲು ಚೇಂಜ್ ಡಾಟ್ ಆರ್ಗ್ (change.org) ತಾಣಕ್ಕೆ ಹೋಗಿ ಸಹಿ ಹಾಕಿ; ಸರ್ಕಾರದ ವಿರುದ್ಧ ಬರುವ ಹಲವು ಲೇಖನಗಳನ್ನು, ಹೊಸ ಜಾಲತಾಣಗಳಲ್ಲಿ ಬರುವ ತನಿಖಾ ವರದಿಗಳನ್ನು ಓದಿ; ಕ್ವಿಕ್ರ್‌ನಲ್ಲಿ (quikr.com) ನಿಮ್ಮ ಹಳೆಯ ವಸ್ತುವನ್ನು ಮಾರಿ; ಮೊಬೈಲ್‌ನಲ್ಲಿ ಭಾರತೀಯ ಭಾಷೆಗಳೇ ಇರಬೇಕೆಂದು ಹಟ ಹಿಡಿದು ಇಂಡಸ್‌ಓಎಸ್ (indusos.com) ಸ್ಮಾರ್ಟ್‌ಫೋನ್ ಖರೀದಿಸಿ; ರಾಜಕಾರಣಿಗಳ ಭ್ರಷ್ಟಾಚಾರ – ಅಕ್ರಮ ಸಂಪತ್ತು – ಅಪರಾಧಗಳ ಬಗ್ಗೆ ತಿಳಿಯಲು (adrindia.org) ಹೊರಡಿ; ಉದ್ಯಮ ಆರಂಭಿಸಿ ಸಾಲಕ್ಕಾಗಿ ಹುಡುಕಾಡಿ : – ನಿಮ್ಮ ಇಂದಿನ ಇಂಥ ಹಲವು ಚಟುವಟಿಕೆಗಳಲ್ಲಿ ಅಮೆರಿಕಾದ ದಾನಶೂರ ಪಿಯೆರೆ ಒಮಿಡ್ಯಾರ್ ಪಾತ್ರವಿದೆ. ಮೇಲೆ ಉದಾಹರಿಸಿದ ಎಲ್ಲ ಸಂಸ್ಥೆಗಳಲ್ಲೂ ಈತನ ಪಾಲಿದೆ.

ಈಬೇ ಎಂಬ ವಾಣಿಜ್ಯ ಜಾಲತಾಣದ ಸ್ಥಾಪಕ ಪಿಯೆರೆ ಒಮಿಡ್ಯಾರ್ ಈಗ ಜಗತ್ತಿನ ಹಲವು ದೇಶಗಳ ಚಳವಳಿಗಳು, ನೀತಿ ನಿಲುವುಗಳನ್ನು ನಿರ್ಧರಿಸುವ ಹೋರಾಟಗಳು, ಸರ್ಕಾರದ – ಚುನಾವಣೆಗಳ ಮೇಲೆ ಪ್ರಭಾವ ಬೀರುವ ವಿಷಯಗಳು – ಇವೆಲ್ಲವನ್ನೂ ನಿರ್ಧರಿಸುವ ಅಸೀಮ ನಿಯಂತ್ರಣ ಸಾಧಿಸಿದ್ದಾರೆ. ಭಾರತದ ಮಾಧ್ಯಮ ಮತ್ತು ಇತರೆ ಸೇವಾ ಸಂಸ್ಥೆಗಳಿಗೆ ಒಮಿಡ್ಯಾರ್ ಅತಿಹೆಚ್ಚಿನ ಪ್ರಮಾಣದಲ್ಲಿ ದಾನ ನೀಡಿದ್ದಾರೆ. ಉದಾರವಾದಿ ಚಿಂತನೆಯ ಈ ಬಂಡವಾಳಶಾಹಿ ಸಿರಿವಂತನ ವಿಶ್ವವ್ಯಾಪಿ ಕಾರ್ಯಸೂಚಿಯನ್ನು ತಿಳಿಯುವುದು ಎಡ-ಬಲ ಸಿದ್ಧಾಂತಿಗಳಿಗೂ ಆಗಿಲ್ಲ. ಹಣ ಎಲ್ಲಿಂದ ಬಂದರೇನು, ನಮ್ಮ ಕಾರ್ಯಸೂಚಿಗೆ ಅಡ್ಡಿಯಿಲ್ಲವಲ್ಲ ಎಂಬಂತೆ ಮುಖ್ಯವಾಗಿ ಎಡಪಂಥೀಯ ಪತ್ರಕರ್ತರು ಮತ್ತು ಚಿಂತಕರು ಮಾಧ್ಯಮರಂಗಕ್ಕೆ ಧುಮುಕಿದ್ದಾರೆ. ಅದರೆ ಫಲವೇ ಈಗ ನೀವು ಎಲ್ಲೆಲ್ಲೂ ಲಿಬರಲ್ ವಾದದ ಹೆಸರಿನಲ್ಲಿ ಕಾಣುತ್ತಿರುವ ಆನ್‌ಲೈನ್ ಇಂಗ್ಲಿಶ್ ಸುದ್ದಿತಾಣಗಳು.

ಇತ್ತೀಚೆಗೆ ಹತ್ಯೆಯಾದ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಕುರಿತು ಇಂಗ್ಲಿಶ್ ಪತ್ರಕರ್ತರು ಸಮಾಜತಾಣದಲ್ಲಿ ಭಾರೀ ಪ್ರಮಾಣದಲ್ಲಿ ಬರೆದಾಗ, ಹಲವೆಡೆ ಇನ್ನೂ ಹತ್ತಾರು ಪತ್ರಕರ್ತರು ಸತ್ತರೂ ಈ ಇಂಗ್ಲಿಶ್ ಪತ್ರಕರ್ತರೇಕೆ ಸುಮ್ಮನಿದ್ದರು ಎಂದು ಆನಂದ್ ರಂಗನಾಥನ್ ಎಂಬ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ಈ ಪ್ರಶ್ನೆಯ ಜಾಡು ಹಿಡಿದು ಹೋದಾಗ ಕಳೆದ ಐದಾರು ವರ್ಷಗಳಲ್ಲಿ ಒಮಿಡ್ಯಾರ್ ಕೈಗೊಂಡ ಮಾಧ್ಯಮ ವಿಪ್ಲವ ನನ್ನೆದುರು ಅನಾವರಣವಾಯಿತು. ಹಲವಾರು ನೂರು ಕೋಟಿ ರೂ.ಗಳ ಈ ಮಹಾ ಕಾರ್ಯಸೂಚಿಯ ಆಳ – ಅಗಲ ನನಗಿನ್ನೂ ಅರಿವಾಗಿಲ್ಲ. ಆದ್ದರಿಂದ ಈ ಲೇಖನ ಹೆಚ್ಚೆಂದರೆ ಒಂದು ಪ್ರಥಮ ಮಾಹಿತಿ ವರದಿ!

ಮೊದಲ ಪೀಳಿಗೆಯ ಆನ್‌ಲೈನ್ ವಾಣಿಜ್ಯತಾಣಗಳಲ್ಲಿ ಒಂದಾದ ಈಬೇ ಎಂಬುದು ಮೂಲತಃ ಸರಕುಗಳನ್ನು ಹರಾಜಿನ ಮೂಲಕ ಮಾರುವ, ಖರೀದಿಸುವ ವೇದಿಕೆ. ಇದರ ಈಗಿನ ಅಂದಾಜು ಆಸ್ತಿ ೨೪೦೦ ಕೋಟಿ ಡಾಲರ್ (ಸುಮಾರು ೧.೫ ಲಕ್ಷ ಕೋಟಿ ರೂ.). ಈ ತಾಣವನ್ನು ೧೯೯೫ರಲ್ಲಿ ಹುಟ್ಟುಹಾಕಿದ ಒಮಿಡ್ಯಾರ್ ಈಗ ೯೦೦ ಕೋಟಿ ಡಾಲರ್‌ಗಳನ್ನು ಹೊಂದಿದ್ದಾರೆ. ಈ ಮೊತ್ತದಲ್ಲಿ ಈವರೆಗೆ ೧೦೦ ಕೋಟಿ ಡಾಲರ್ (೬೪೦೦ ಕೋಟಿ ರೂ.)ಗಳನ್ನು ವಿವಿಧ ಸಂಘ, ಸಂಸ್ಥೆಗಳಿಗೆ ದಾನ ನೀಡಲಾಗಿದೆ. (ಈ ದಾನಗಳ ವಿವರಕ್ಕೆ ಬಾಕ್ಸ್ ನೋಡಿ). ಇವುಗಳಲ್ಲಿ ಅರ್ಧದಷ್ಟು ಮೊತ್ತವು ಲಾಭಸಹಿತ ಯೋಜನೆಗಳಿಗೂ, ಇನ್ನರ್ಧವು ಲಾಭರಹಿತ ಯೋಜನೆಗಳಿಗೂ ಹರಿದಿದೆ. ಲಾಭಸಹಿತ ಉದ್ದಿಮೆಗಳಲ್ಲಿ ಹೂಡಿದ ಹಣದ ವಿವರ ಸಿಗುತ್ತಿಲ್ಲ.

ಪಿಯೆರೆ ಒಮಿಡ್ಯಾರ್‌  ಇನ್ನೂ 8 ಬಿಲಿಯ ಡಾಲರ್‌ಗಳನ್ನು ದಾನ ಮಾಡಬೇಕಿದೆ!

ಪಟ್ಟಿಯಲ್ಲಿ ಇರುವ ಮಾಧ್ಯಮ ಸಂಸ್ಥೆಗಳ ಜಾಲತಾಣಗಳನ್ನು ನೀವು ನೋಡಿದರೆ ಒಂದು ವಿಷಯ ಗಟ್ಟಿಯಾಗುತ್ತದೆ: ಪಾರದರ್ಶಕತೆಯ ಹೆಸರಿನಲ್ಲಿ ಅಭಿವೃದ್ಧಿಯನ್ನೆಲ್ಲ ಟೀಕೆ ಮಾಡುತ್ತ, ಸದಾ ಎಡ ಸಿದ್ಧಾಂತಗಳನ್ನೇ ಪೋಷಿಸುತ್ತ ಅಬ್ಬರದ ಪ್ರಚಾರ ಮಾಡುವುದು. ಹೇಳುವ ವಿಷಯಗಳಲ್ಲಿ ವಾಸ್ತವತೆ ಇದ್ದರೂ ಅದನ್ನೆಲ್ಲ ಒಂದು ಸಿದ್ಧಾಂತದ ರೂಪದಲ್ಲಿ ಮಂಡಿಸುವುದು. ಸದ್ಯಕ್ಕಂತೂ ‘ಬಲಪಂಥೀಯ’ ಮೋದಿ ಸರ್ಕಾರವು ಇರುವುದರಿಂದ ಈ ಜಾಲತಾಣಗಳಿಗೆ ಬಿಡುವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ಬಗೆಯ ಸರ್ಕಾರ ವಿರೋಧಿ ವಿಶ್ಲೇಷಣೆಗಳು ಈ ಜಾಲತಾಣಗಳಲ್ಲಿ ಬರುತ್ತಲೇ ಇರುತ್ತವೆ. ಸ್ಕ್ರೋಲ್ ತಾಣದ (scroll.in) ಮೂಲ ಕಂಪನಿ ಅಮೆರಿಕಾದಲ್ಲಿದೆ. ನ್ಯೂಸ್‌ಲಾಂಡ್ರಿ ಎಂಬ ತಾಣದಲ್ಲಿ (www.newslaundry.com) ಒಮಿಡ್ಯಾರ್‌ನ ಪಾಲು ಶೇಕಡಾ ೧೮ ದಾಟಿದೆ. ಸ್ಕ್ರೋಲ್‌ನಲ್ಲಿ ಒಮಿಡ್ಯಾರ್ ಏನಿಲ್ಲೆಂದರೂ ೨೦ ಕೋಟಿ ಡಾಲರ್ (೧೨೮೦ ಕೋಟಿ ರೂ.) ಹೂಡಿಕೆಯಾಗಿದೆ ಎಂಬ ವರದಿಯಿದೆ. ಈ ಹಣವನ್ನು ನ್ಯೂಯಾರ್ಕ್‌ನಲ್ಲಿರುವ ಮೀಡಿಯಾ ಡೆವಲಪ್‌ಮೆಂಟ್ ಇನ್ವೆಸ್ಟ್‌ಮೆಂಟ್ ಫಂಡ್ (ಎಂಡಿಐಎಫ್ www.mdif.org) ಮೂಲಕ ಹರಿಸಲಾಗಿದೆ. ಅಂದರೆ ದೇಣಿಗೆ ರೂಪದ ವೆಂಚರ್ ಕ್ಯಾಪಿಟಲ್ ಹೂಡಿಕೆಯಲ್ಲಿ ಆಸಕ್ತಿ ಇರುವ ಜಾಗತಿಕ ಸಂಸ್ಥೆಯೊಂದು ‘ಭಾರತದಲ್ಲಿ ಸ್ವತಂತ್ರ ಮಾಧ್ಯಮ’ಕ್ಕಾಗಿ ಹೂಡಿಕೆ ಮಾಡುತ್ತದೆ! ಸ್ಕ್ರೋಲ್ ಕಚೇರಿಯಿಂದ ಸಿಬ್ಬಂದಿಗೆ ಮತ್ತು ಲೇಖಕರಿಗೆ ಕೈತುಂಬ ಹಣ ಬರುತ್ತದೆ ಎಂಬುದು ಸಂಬಳದ ದೃಷ್ಟಿಯಿಂದ ಒಳ್ಳೆಯದೇ. ಸಮಾಜದ ದೃಷ್ಟಿಯಿಂದ ನೋಡಿದಾಗ ಪ್ರಶ್ನೆ ಮೂಡುತ್ತದೆ.

ರಾಜಕೀಯ ಬದಲಾವಣೆಗಾಗಿ

ಪಿಯರೆ ಒಮಿಡ್ಯಾರ್ ೨೦೦೪ರಲ್ಲಿ ಒಮಿಡ್ಯಾರ್ ನೆಟ್‌ವರ್ಕ್ ಸ್ಥಾಪಿಸಿದಾಗ ಈ ಜಾಲದ ಹೇಳಿಕೆ ತುಂಬಾ ಖಚಿತವಾಗಿಯೇ ಇತ್ತು; ಈಗಲೂ: ’ನಾವು ಜನರ ಬದುಕನ್ನು, ಸಮುದಾಯಗಳನ್ನು ಮತ್ತು ತಮ್ಮ ಸುತ್ತಲಿನ ಜಗತ್ತನ್ನು ಸುಧಾರಿಸುವ ಅವಕಾಶಗಳನ್ನು ಸೃಷ್ಟಿಸುವ ಉದ್ಯಮಶೀಲರಲ್ಲಿ ಮತ್ತು ಅವರ ದೂರದೃಷ್ಟಿಯ ಕನಸುಗಳಲ್ಲಿ ಹೂಡಿಕೆ ಮಾಡುತ್ತೇವೆ’ ಎಂಬುದು ಈ ಜಾಲದ ಹೇಳಿಕೆ. ‘ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ರಭಸ ನೀಡುತ್ತೇವೆ’ ಎಂಬುದು ಈ ಜಾಲದ ಇನ್ನೊಂದು ನಂಬಿಕೆ. ಇದರ ಅರ್ಥ ನಿಗೂಢವಾಗೇನೂ ಉಳಿದಿಲ್ಲ; ರಾಜಕೀಯ ಉಲ್ಲಟಪಲ್ಲಟಗಳನ್ನು ಉಂಟುಮಾಡಲು ಎಲ್ಲಾ ಬಗೆಯ ಕಾನೂನಾತ್ಮಕ ಮತ್ತು ಕಾನೂನೇತರ ರಾಜಕೀಯ ಚಟುವಟಿಕೆಗಳನ್ನು ನಡೆಸುವ ಹುನ್ನಾರ ಇದು ಎಂದು ಪತ್ರಕರ್ತ ಪಂಕಜ್ ಸಕ್ಸೇನಾ ಬರೆಯುತ್ತಾರೆ.

ಇದಕ್ಕೆ ಯುಕ್ರೇನ್‌ನ ರಾಜಕೀಯ ಸ್ಥಿತ್ಯಂತರದ ಉದಾಹರಣೆಯೂ ಇದೆ. ಅಲ್ಲಿ ನ್ಯೂ ಸಿಟಿಝನ್ ಎಂಬ ಸ್ಕ್ರೋಲ್‌ನಂಥದ್ದೇ ಜಾಲತಾಣ ಮಾಧ್ಯಮದ ಮೂಲಕ ರಶ್ಯಾ ಪರವಾಗಿದ್ದ ಅಧ್ಯಕ್ಷ ಯಾನುಕೋವಿಚ್‌ನನ್ನು ಪದಚ್ಯುತಗೊಳಿಸಲಾಯಿತು ಎಂಬ ವಿಶ್ಲೇಷಣೆಗಳೂ ಇವೆ. ಇದನ್ನೇ ಒಮಿಡ್ಯಾರ್ ‘ಆಕ್ರಮಣಕಾರಿ ಮತ್ತು ಸ್ವತಂತ್ರ ಪತ್ರಿಕೋದ್ಯಮ’, ’ಹೆಚ್ಚಿನ ಪಾರದರ್ಶಕತೆ’ ಎಂದು ಕರೆಯುತ್ತಾರೆ.

ವಿಕಿಲೀಕ್ಸ್‌ಗೆ ವಿರೋಧ; ಸ್ನೋಡೆನ್‌ಗೆ ಮಣೆ!

ಈ ಸ್ವತಂತ್ರ ಪತ್ರಿಕೋದ್ಯಮದ ವಿಚಿತ್ರವೆಂದರೆ, ಇಂಥದ್ದೇ ಸ್ವತಂತ್ರ ಮತ್ತು ನಿರ್ಭೀತ ಪತ್ರಿಕೋದ್ಯಮ ಕೈಗೊಂಡ ವಿಕಿಲೀಕ್ಸ್‌ನ್ನು ದಮನಿಸಲು ಸ್ವತಃ ಒಮಿಡ್ಯಾರ್ ಯತ್ನಿಸುತ್ತಿರುವುದು! ವಿಕಿಲೀಕ್ಸ್‌ನ ಪೇಪಾಲ್ ಆನ್‌ಲೈನ್ ಹಣ ಪಾವತಿ ವ್ಯವಸ್ಥೆಯನ್ನು ಸ್ತಂಭನಗೊಳಿಸಿದ್ದು ಇದೇ ಒಮಿಡ್ಯಾರ್. ಏಕೆಂದರೆ ಪೇಪಾಲ್ ಆನ್‌ಲೈನ್ ಪಾವತಿ ಜಾಲವು ಈಗ ಒಮಿಡ್ಯಾರ್ ಕೈಯಲ್ಲಿದೆ. ಪೇಪಾಲ್ ಎಂಬುದೀಗ ಈ-ಬೇಯ ಅತಿ ಪ್ರಮುಖ ಅಂಗ. ಖರೀದಿ ಮಾಡುವವರಿಂದ ಉತ್ಪನ್ನದ ಮೇಲೆ ಲಾಭ ಪಡೆಯುವುದಲ್ಲದೆ ಪೇಪಾಲ್ ಮೂಲಕ ಹಣ ವರ್ಗಾವಣೆ ಶುಲ್ಕವನ್ನೂ ಒಮಿಡ್ಯಾರ್ ಪಡೆಯುತ್ತಾರೆ. ಅಭಿವ್ಯಕ್ತಿ ಹಕ್ಕಿನ ಬಗ್ಗೆ ಇಷ್ಟೆಲ್ಲ ಕಾಳಜಿ ಇರುವ ಒಮಿಡ್ಯಾರ್ ಇಲ್ಲಿ ವಿಕಿಲೀಕ್ಸ್‌ನ್ನು ಏಕೆ ವಿರೋಧಿಸುತ್ತಾರೆ ಎಂಬುದಕ್ಕೆ ಈವರೆಗೂ ಖಚಿತ ಉತ್ತರ ದೊರಕಿಲ್ಲ. ಜೂಲಿಯಾನ್ ಅಸಾಂಜೆ ರೀತಿಯಲ್ಲೇ ಅಮೆರಿಕಾದ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ ಎಡ್ವರ್ಡ್ ಸ್ನೋಡೆನ್ ಮೇಲೆ ಒಮಿಡ್ಯಾರ್ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ; ಈ ಪ್ರಕರಣದಲ್ಲಿ ಸಕ್ರಿಯನಾಗಿರುವ ಪತ್ರಕರ್ತ ಗ್ಲೆನ್‌  ಗ್ರೀನ್‌ವಾಲ್ಡ್ ಈಗ ಒಮಿಡ್ಯಾರ್‌ನ ಸಂಬಳ ಪಡೆಯುತ್ತಿದ್ದಾರೆ. ಒಮಿಡ್ಯಾರ್ ಹುಟ್ಟುಹಾಕಿದ ಫರ್ಸ್ಟ್ ಲುಕ್ ಮೀಡಿಯಾದಲ್ಲಿ(www.firstlook.media) ಗ್ರೀನ್‌ವಾಲ್ಡ್ ಹಿರಿಯ ಪತ್ರಕರ್ತ. ಈ ಸಂಸ್ಥೆಯ ಮೂಲಕವೇ ದ ಇಂಟರ್‌ಸೆಪ್ಟ್ (theintercept.com) ಎಂಬ ಸುದ್ದಿತಾಣ ನಡೆಯುತ್ತಿದೆ.

‘ಒಮಿಡ್ಯಾರ್ ಜೊತೆಗೆ ಕೆಲಸ ಮಾಡೋದ್ರಲ್ಲಿ ಸಾಕಷ್ಟು ಸಮಸ್ಯೆಗಳಿವೆ’ ಎಂದು ಚೆಲ್ಸಿಯಾ ಮ್ಯಾನಿಂಗ್ (ವಿಕಿಲೀಕ್ಸ್‌ಗೆ ಲಕ್ಷಗಟ್ಟಲೆ ಪುಟದ ಅಮೆರಿಕಾ ದಾಖಲೆಯನ್ನು ಒದಗಿಸಿ ಸೆರೆಯಾಳಾಗಿ, ಈಗ ಬಿಡುಗಡೆಯಾದ ವ್ಯಕ್ತಿ) ಬಗ್ಗೆ ವಿಶೇಷ ತನಿಖಾ ವರದಿಗಳನ್ನು ಪ್ರಕಟಿಸಿದ ಅಮೆರಿಕಾದ ಇನ್ನೊಬ್ಬ ಫ್ರೀಲಾನ್ಸ್ ಪತ್ರಕರ್ತೆ ಅಲೆಕ್ಸಾ ಓಬ್ರೈನ್ ಖಡಾಖಂಡಿತವಾಗಿ ಹೇಳುತ್ತಾರೆ. ಪೇಪಾಲ್ ಕುರಿತು ತನ್ನ ಎಲ್ಲ ಪ್ರಶ್ನೆಗಳಿಗೂ ಒಮಿಡ್ಯಾರ್ ಖಚಿತವಾಗಿ ಉತ್ತರಿಸಲಿಲ್ಲ ಎನ್ನುವ ಅಲೆಕ್ಸಾಗೆ ಒಮಿಡ್ಯಾರ್ ಮಾಧ್ಯಮ ಜಾಲಕ್ಕೆ ಸೇರುವ ಆಸೆ ಇಲ್ಲ. ‘ನಿಮಗೆ ಎಷ್ಟು ಸಾವಿರ ಡಾಲರ್ ಬೆಂಬಲ ಇದೆ ಅನ್ನೋದಕ್ಕಿಂತ ನೀವು ಎಷ್ಟು ಚೆನ್ನಾಗಿ ವರದಿ ಮಾಡುತ್ತೀರಿ ಎಂಬುದೇ ಮುಖ್ಯ’ ಎಂದು ಅಲೆಕ್ಸಾ ಹೇಳುತ್ತಾರೆ.

ಒಂದು ಆಯಾಮದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಹರಿಕಾರನಂತೆ ಕಾಣುವ ಒಮಿಡ್ಯಾರ್ ಇನ್ನೊಂದು ಆಯಾಮದಲ್ಲಿ ತನ್ನ ಮೂಗಿನ ನೇರಕ್ಕೇ ಅಭಿವ್ಯಕ್ತಿಯನ್ನು ವ್ಯಾಖ್ಯಾನಿಸುತ್ತಾರೆ. ಇದಕ್ಕೂ ಕಾರಣವಿದೆ. ಒಮಿಡ್ಯಾರ್ ಎಂದೆಂದಿಗೂ ಶ್ವೇತಭವನದ ಸ್ನೇಹಿತ ಎಂದು ಪಂಕಜ್ ಬರೆಯುತ್ತಾರೆ. ಅಮೆರಿಕಾದ ನೆರವು ಸಂಸ್ಥೆ ಯುಎಸ್‌ಏಡ್ (ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್- USAID) ಜೊತೆಗೆ ಸೇರಿ ಯುಕ್ರೇನಿನಲ್ಲಿ, ನೈಜೀರಿಯಾದಲ್ಲಿ, ಸುಡಾನಿನಲ್ಲಿ, ಹವಾಯಿ ದ್ವೀಪದಲ್ಲಿ ಚಿಲಿಯಲ್ಲಿ ಭಾಗೀದಾರರಾಗಿರುವ ಒಮಿಡ್ಯಾರ್ ಭಾರತದಲ್ಲೂ ಇಂಥದ್ದೇ ಅಮೆರಿಕಾ ಪರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅನುಮಾನಿಸಲು ಸಾಕಷ್ಟು ಹಿನ್ನೆಲೆ ಇದೆ.

ಲಾಭಸಹಿತ ಯೋಜನೆಗಳಿಗೂ ಹಣ

ಭಾರತದಲ್ಲಿ ಒಮಿಡ್ಯಾರ್ ಮಾಡಿರುವ ಹೂಡಿಕೆಗಳನ್ನೇ ಗಮನಿಸಿ: ಒಂದೆಡೆ ಸದಾ ಎಡ ಸೈದ್ಧಾಂತಿಕ ನೀತಿಗಳನ್ನೇ ಬಿಂಬಿಸುತ್ತ ವಸ್ತುನಿಷ್ಠ ಮತ್ತು ಸಮಾಜನಿಷ್ಠ ಪತ್ರಿಕೋದ್ಯಮವನ್ನೇ ಮರೆತ ಜಾಲತಾಣಗಳು, ನೀರಿನ ಖಾಸಗೀಕರಣಕ್ಕೂ ಬೆಂಬಲ ನೀಡಿತ್ತು ಎನ್ನಲಾದ ಜನಾಗ್ರಹದಂತದ ಸಾಮಾಜಿಕ ಸಂಸ್ಥೆಗಳು, ಒಂದಷ್ಟು ಲಾಭರಹಿತ ಸೇವೆ; ಬಹಳಷ್ಟು ಲಾಭಸಹಿತ ಸಂಸ್ಥೆಗಳು! ಒಮಿಡ್ಯಾರ್ ನೆಟ್‌ವರ್ಕ್ ಮೂಲಕ ಲಾಭರಹಿತ ಮತ್ತು ಲಾಭಸಹಿತದ ಎರಡೂ ಬಗೆಯ ಸಂಸ್ಥೆಗಳಿಗೆ ಉದಾರವಾಗಿ ಹಣ ನೀಡುವುದು ಬಹುಶಃ ಅತ್ಯಂತ ಅಪರೂದ ವಿದ್ಯಮಾನ. ಕಾರ್ಪೋರೇಟ್ ಸಮಾಜಸೇವಾ ಹೊಣೆಗಾರಿಕೆಗಳನ್ನು (ಸಿಎಸ್‌ಆರ್) ನಿರ್ವಹಿಸಲು ಸಾಮಾನ್ಯವಾಗಿ ಒಂದು ಲಾಭವೇತರ ಸಂಸ್ಥೆ ಇರುತ್ತದೆ; ಆದರೆ ಇಲ್ಲಿ ಮಾತ್ರ ವಾಣಿಜ್ಯದ ಉದ್ದೇಶಗಳು ಮತ್ತು ಸಾಮಾಜಿಕ ಉದ್ದೇಶಗಳ ನಡುವಣ ಗೆರೆಯೇ ಮಾಯವಾಗಿದೆ. ‘ಲಾಭಸಹಿತ ವ್ಯವಹಾರವೋ, ಲಾಭರಹಿತ ಸಂಘಟನೆಯೋ – ಎರಡೂ ಬಗೆಯ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಮಾಜದ ಒಳಿತಿಗಾಗಿ ಕೊಡುಗೆ ನೀಡಬಹುದು’ ಎಂಬುದು ಒಮಿಡ್ಯಾರ್ ನೆಟ್‌ವರ್ಕ್ ಪ್ರಕಟಿಸಿರುವ ಅಧಿಕೃತ ಪ್ರತಿಪಾದನೆ. ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಮಾರುಕಟ್ಟೆಯನ್ನು ನಿರ್ಲಕ್ಷಿಸಲಾಗದು ಎಂಬುದು ಈ ಸಂಘಟನೆಯ ವಾದ.

ಈಗ ಹವಾಯಿ ದ್ವೀಪದಲ್ಲಿ ನೆಲೆಸಿರುವ, ಬೌದ್ಧ ಧರ್ಮದ ಕಟ್ಟಾ ಅಭಿಮಾನಿಯಾಗಿರುವ ಒಮಿಡ್ಯಾರ್ ಗ್ರೀನ್‌ವಾಲ್ಡ್‌ನಂತಹ ಹಿರಿಯ ಪತ್ರಕರ್ತನಿಗೂ ಸಿಗುವುದು ಕಷ್ಟವಂತೆ; ಹಾಗೆಂದು ಅಮೆರಿಕಾದ ಹಿರಿಯ ಫ್ರೀಲಾನ್ಸರ್ ಪತ್ರಕರ್ತ ಆಂಡ್ರೂ ರೈಸ್ ‘ನ್ಯೂಯಾರ್ಕ್ ಮ್ಯಾಗಜಿನ್’ ತನಿಖಾ ವರದಿಯಲ್ಲಿ ದಾಖಲಿಸಿದ್ದಾರೆ. ಸ್ನೋಡೆನ್ ದಾಖಲೆಗಳು ಸಿಕ್ಕಿದ್ದೇ ಒಮಿಡ್ಯಾರ್‌ರ ಮಾಧ್ಯಮ ಯೋಜನೆಗಳು ಗರಿಗೆದರಲು ಕಾರಣ ಎಂಬುದು ರೈಸ್ ತರ್ಕ. ‘ನಮ್ಮ ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ಹೆಚ್ಚಿನ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಇರಬೇಕೆಂದೇ ನಾನು ಗಮನಿಸುತ್ತಿದ್ದೇನೆ’ ಎಂದು ಒಮಿಡ್ಯಾರ್ ರೈಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರೂ, ಅದೇ ಮುಂಜಾನೆಯ ಕಾಲಂನಲ್ಲಿ ಒಬಾಮಾರ ಸಿರಿಯಾ ಬಾಂಬಿಂಗ್‌ನ್ನು ಕಟುವಾಗಿ ಟೀಕಿಸಿ ಗ್ರೀನ್‌ವಾಲ್ಡ್ ಬರೆದಿದ್ದನ್ನೂ ರೈಸ್ ಉಲ್ಲೇಖಿಸುತ್ತಾರೆ. ಶತಕೋಟ್ಯಧಿಪತಿಗಳಿಗೆ ತಮ್ಮ ಅಸಂತೋಷವನ್ನು ಪ್ರಕಟಿಸಲು ಚೆನ್ನಾಗಿ ಗೊತ್ತು ಎಂದು ರೈಸ್ ಹೇಳುತ್ತಾರೆ.

ಸಾಂಸ್ಕೃತಿಕ ಮಾರ್ಕ್ಸಿಸಂ?

‘ಹಿಂದೆ ಇದ್ದಿದ್ದು ಕೇವಲ ಕ್ಲಾಸಿಕಲ್ ಮಾರ್ಕ್ಸಿಸಂ. ಈಗ ಚಾಲ್ತಿಯಲ್ಲಿರುವುದು ಕಲ್ಚರಲ್ ಮಾರ್ಕ್ಸಿಸಂ – ಸಾಂಸ್ಕೃತಿಕ ಕಮ್ಯುನಿಸಂ. ಇದನ್ನು ಕಡೆಗಣಿಸುವುದು ದೊಡ್ಡ ಪ್ರಮಾದ’ ಎಂದು ಒಪ್‌ಇಂಡಿಯಾ ಜಾಲತಾಣದಲ್ಲಿ ಇಂಥ ಬೆಳವಣಿಗೆ ಬಗ್ಗೆ ಬ್ಲಾಗ್ ಬರೆದಿರುವ ಡಿ ವಿ ಶ್ರೀಧರ್ ಎಂಬ ಮಾಜಿ ನೌಕಾ ವೃತ್ತಿಪರ ಹೇಳುತ್ತಾರೆ. ಈಗ ೭೫ರ ಹರೆಯದಲ್ಲಿರುವ ಶ್ರೀಧರ್‌ಗೆ ೨೦೦೦ದ ಇಸವಿಯವರೆಗೂ ತಾನು ಹಿಂದೂ ಎಂಬ ಅರಿವೇ ಇರಲಿಲ್ಲವಂತೆ. ’ಭಾರತದ ಮಾಧ್ಯಮಗಳು ತೆಗೆದುಕೊಂಡ ಪಕ್ಷಪಾತಿ ನಿಲುವುಗಳು, ಬುದ್ಧಿಜೀವಿಗಳು, ಪ್ರಗತಿಪರರು ಎನ್ನಿಸಿಕೊಂಡವರು ನನ್ನನ್ನು ಹಿಂದು ಅಥವಾ ಬಲಪಂಥೀಯನನ್ನಾಗಿಸಿದರು’ ಎಂದು ಶ್ರೀಧರ್ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ.

ಜಗತ್ತಿನ ಎಲ್ಲೆಡೆ, ಎಲ್ಲ ರಂಗಗಳಲ್ಲೂ ದಮನಕಾರರು ಮತ್ತು ದಮನಿತರನ್ನು ಗುರುತಿಸುವುದು- ಈ ಮೂಲಕ ಹೊಸ ಬಗೆಯ ಸಾಂಸ್ಕೃತಿಕ ಸಂಘರ್ಷಗಳನ್ನು ಹುಟ್ಟುಹಾಕುವುದು – ಇದೇ ಸಾಂಸ್ಕೃತಿಕ ಕಮ್ಯುನಿಸಂನ ಮೂಲ ತಂತ್ರ. ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲೂ ಇಂಥ ಸಮಸ್ಯೆಗಳು ಇದ್ದೇ ಇರುವುದು ನಿಜ. ‘ಹಾಗಂತ ಎಲ್ಲೆಲ್ಲೂ ತಮ್ಮ ವಾದವೊಂದೇ ನಿಜ ಎಂಬ ಮಂಡನೆಯೂ ನಡೆಯುತ್ತಿರುವುದು ಸರಿಯೆ?’ ಎಂಬುದು ಶ್ರೀಧರ್ ಪ್ರಶ್ನೆ.

‘ಸಾಂಸ್ಕೃತಿಕ ಕಮ್ಯುನಿಸಂಗೆ ಬೆಂಬಲವಾಗಿ ನಿಂತಿರುವವರು ಏಕವ್ಯಕ್ತಿ ಬಂಡವಾಳಶಾಹಿಗಳು. ಇವರೆಲ್ಲ ಗಂಭೀರ ಚಿಂತಕರು. ಇವರಿಗೆ ತಮ್ಮ ಖಾಸಗಿ ಆಸ್ತಿಯನ್ನೆಲ್ಲ ಹೀಗೆ ಬಳಸುವಲ್ಲಿ ದೂರಗಾಮಿ ಕಾರ್ಯತಂತ್ರವಿದೆ. ಅವರಿಗೆ ತುಂಬಾ ಸ್ಥಿರವಾಗಿಯೂ ಇರದ, ಆದರೆ ತುಂಬಾ ಅಸ್ತಿರವೂ ಆಗಿರದ ದೇಶಗಳು, ಸರ್ಕಾರಗಳು ಇರಬೇಕು. ಆಗಲೇ ಅವರಿಗೆ ಭಾರೀ ಪ್ರಮಾಣದ ಲಾಭವಾಗುತ್ತದೆ. ಅವರು ಮಾಧ್ಯಮಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಹಣ ಊಡಿಸುತ್ತಾರೆ; ಸಭೆ – ಕಾರ್ಯಕ್ರಮ, ಸೆಮಿನಾರುಗಳಿಗೆ ಪ್ರಾಯೋಜಕತ್ವ ನೀಡುತ್ತಾರೆ. ಹೀಗಿದ್ದ ಮೇಲೆ ಸಾಂಸ್ಕೃತಿಕ ಕಮ್ಯುನಿಸಂನ ಸಿಪಾಯಿಗಳಿಗೇನೂ ಕೊರತೆಯಿಲ್ಲ. ಹಲವು ಪೀಠಗಳಿಗೆ, ಅಧ್ಯಯನ ಕೇಂದ್ರಗಳಿಗೆ ಇವರೆಲ್ಲರನ್ನೂ ನೇಮಿಸಲಾಗುತ್ತದೆ. ಇಲ್ಲಿ ದಡ್ಡತನದ ಅಭಿಯಾನಕ್ಕೆ ಯಾರೂ ಹೋಗುವುದಿಲ್ಲ. ಅಂಕಿ ಅಂಶಗಳಿಂದ ಕೂಡಿದ ಸಂಶೋಧನಾತ್ಮಕ ವಿಶ್ಲೇಷಣೆಗಳನ್ನು ನಾಜೂಕಿನಿಂದ ಪ್ರಕಟಿಸಲಾಗುತ್ತದೆ.’ – ಇದು ಶ್ರೀಧರ್ ನೀಡಿರುವ ವಿವರಣೆ.

ಅಮೆರಿಕಾದಲ್ಲಿ ಒಮಿಡ್ಯಾರ್ ಸೇರಿದಂತೆ ಐವರು ಗರಿಷ್ಠ ಪ್ರಮಾಣದಲ್ಲಿ ಮಾಧ್ಯಮ ಹೂಡಿಕೆಯಲ್ಲಿ ತೊಡಗಿದ್ದಾರೆ ಎಂದು ಅಮೆರಿಕಾದ ಮಾಧ್ಯಮ ನಿಗಾ ಸಂಸ್ಥೆ ಮೀಡಿಯಾ ವಾಚ್ ಸೆಂಟರ್ (www.mrc.org) ಹೇಳುತ್ತದೆ. ೨೦೦೦ರಿಂದ ೨೦೧೧ರವರೆಗೆ ಜಾರ್ಜ್ ಸೊರೋಸ್ ಅಮೆರಿಕಾದಲ್ಲಿ ಹೂಡಿದ ಎಡ ಸಿದ್ಧಾಂತ ಪರ ಮಾಧ್ಯಮ ಹೂಡಿಕೆಯ ಮೊತ್ತ ೫೫ ಕೋಟಿ ಡಾಲರ್; ಸೊರೊಸ್‌ನ ಒಟ್ಟು ದೇಣಿಗೆಯ ಮೊತ್ತ ಬರೋಬ್ಬರಿ ೯೦೦ ಕೋಟಿ ಡಾಲರ್‌ಗಳು. ಈಗ ಅವರ ಮಗ ಜೊನಾಥನ್, ಮೈಕೇಳ್ ಬ್ಲೂಮ್‌ಬರ್ಗ್, ವಾರೆನ್ ಬಫೆಟ್, ಪಿಯೆರೆ ಒಮಿಡ್ಯಾರ್, ಟಾಮ್ ಸ್ಟೇಯರ್ – ಇವರೇ ಈ ಪಂಚ ಹೂಡಿಕೆದಾರರು. ಒಟ್ಟು ೮೮ ಮಾಧ್ಯಮ ಸಂಸ್ಥೆಗಳು ಒಟ್ಟು ೨೭೦೦ ಕೋಟಿ ಡಾಲರ್ ಮೊತ್ತದ ಈ ದೇಣಿಗೆಗಳನ್ನು ಪಡೆದಿವೆ. ಹೀಗೆ ದೇಣಿಗೆ ನೀಡಿದ ಈ ಐವರ ಬಗ್ಗೆಯೂ ಮಾಧ್ಯಮಗಳು ಮೆದುವಾಗೇ ನಡೆದುಕೊಂಡಿವೆ; ಋಣಾತ್ಮಕ ವರದಿಗಳನ್ನು ಪ್ರಕಟಿಸಿಲ್ಲ ಎಂದು ನಿಗಾ ಸಂಸ್ಥೆ ಹೇಳುತ್ತದೆ. ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಿ ಸರ್ಕಾರಗಳ ಮೇಲೆ ಪ್ರಭಾವ, ನಿಯಂತ್ರಣ ಸಾಧಿಸುವುದು ಇವರೆಲ್ಲರ ಗುರಿ. ೨೦೦೪ರಿಂದ ಅಮೆರಿಕಾದ ಮಾಧ್ಯಮಗಳಲ್ಲಿ ಒಮಿಡ್ಯಾರ್ ಹೂಡಿದ ಮೊತ್ತ ಸುಮಾರು ೨೭.೩೦ ಕೋಟಿ ಡಾಲರ್.

ಭಾರತೀಯರಿಂದಲೂ…

ಭಾರತದಲ್ಲೂ ಇಂತಹ ಹೂಡಿಕೆಗಳು ನಡೆದಿವೆ. ಅರ್ಘ್ಯಂ ಸಂಸ್ಥೆಯ ಅಧ್ಯಕ್ಷೆ ರೋಹಿಣಿ ನಿಲೇಕಣಿಯವರು ಎಕನಾಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆಯಲ್ಲಿ ಹೂಡಿಕೆ ಮಾಡಿದ್ದಾರೆ. ಅವರೂ ಒಳಗೊಂಡಿರುವ, ಪತ್ರಕರ್ತ ರಾಮಚಂದ್ರ ಗುಹಾರವರೂ ಇರುವ ಸಂಸ್ಥೆ ಇಂಡಿಪೆಂಡೆಂಟ್ ಎಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ – ಐಪಿಎಸ್‌ಎಂಎಫ್- ipsmf.org) ಸಂಸ್ಥೆಯು ಒಟ್ಟಾರೆ ೧೫೦ ಕೋಟಿ ರೂ.ಗಳನ್ನು ೧೦-೧೫ ಸಂಸ್ಥೆಗಳಲ್ಲಿ ಹೂಡಲು ನಿರ್ಧರಿಸಿದೆ. ಈ ಸಂಸ್ಥೆಯ ಮೂಲಕ ಈಗಾಗಲೇ ದ ವೈರ್, ಇಂಡಿಯಾ ಸ್ಪೆಂಡ್, ದ ಬೆಟರ್ ಇಂಡಿಯಾ, ಲೈವ್ ಲಾ, ಸಿಜಿನೆಟ್ ಸ್ವರ, ಗಾಂವ್ ಕನೆಕ್ಷನ್ – ಹೀಗೆ ಹಲವು ಮಾಧ್ಯಮ ಪ್ರಯೋಗಗಳಲ್ಲಿ ಹೂಡಿಕೆ ಮಾಡಿದೆ. ಇದೇ ರಾಮಚಂದ್ರ ಗುಹಾ ಈಗ ಸ್ಕ್ರೋಲ್‌ನ ಅಂಕಣಕಾರರೂ ಹೌದು!

ಪರಿಣಾಮಗಳೇನು?

ಹೀಗೆ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ದಾನ ಮಾಡುತ್ತ ಸಾಮಾಜಿಕ, ಸಾಂಸ್ಕೃತಿಕ, ಮಾಧ್ಯಮ ಸಂಘಟನೆಗಳ ಮೇಲೆ ಹಿಡಿತ ಸಾಧಿಸುತ್ತ, ಲಾಭ – ಲಾಭರಹಿತ ಸಂಸ್ಥೆಗಳನ್ನು ಒಂದೊಂದಾಗಿ ಹುಟ್ಟುಹಾಕಿದ ಒಮಿಡ್ಯಾರ್ ಸಾಧಿಸುವುದಾದರೂ ಏನು? ಈ ಬೆಳವಣಿಗೆಗಳು ಭಾರತದಲ್ಲಿ ಯಾವ ಪರಿಣಾಮವನ್ನು ಉಂಟು ಮಾಡಲಿವೆ?

  • ಅಸ್ಥಿರತೆ,ನಿಯಂತ್ರಣ: ಭಾರತವೂ ಸೇರಿದಂತೆ ಜಗತ್ತಿನಲ್ಲಿ ಸಾಮಾಜಿಕ ಸಮಸ್ಯೆಗಳು, ಸವಾಲುಗಳು ಇದ್ದೇ ಇವೆ; ಆದರೆ ಅವುಗಳನ್ನು ಬಂಡವಾಳವಾಗಿಸಿಕೊಂಡ ಬಂಡವಾಳಶಾಹಿ ನಿದರ್ಶನ ಹಿಂದೆ ಇರಲಿಲ್ಲ. ಈಗ ಸಾಮಾಜಿಕ ಸಮಸ್ಯೆಗಳೂ ಬಂಡವಾಳಶಾಹಿಗಳ ಲಾಭದ ಅಸ್ತ್ರಗಳಾಗಿವೆ. ಸ್ನೋಡೆನ್ ದಾಖಲೆಗಳ ಅಸ್ತ್ರದ ಮೂಲಕ ಅಮೆರಿಕಾದ ಸರ್ಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮಾನಸಿಕತೆಯನ್ನೇ ಭಾರತದಲ್ಲೂ ಒಮಿಡ್ಯಾರ್ ಬಳಸಬಹುದು. ಸರ್ಕಾರಗಳನ್ನು ಅಸ್ಥಿರಗೊಳಿಸಿದರೆ ಇಂಥ ಕೆಲಸ ಸುಲಭ. ಸಾಮರಸ್ಯದ ಬಾಳುವೆಗಾಗಿ, ಸರ್ವಾಂಗೀಣ ಅಭ್ಯುದಯಕ್ಕಾಗಿ ನೀಲನಕಾಶೆ ಹಾಕಿಕೊಳ್ಳುವುದು ವಸಾಹತುಶಾಹಿಯನ್ನೇ ಧಿಕ್ಕರಿಸಿ ಸ್ವತಂತ್ರವಾದ ಭಾರತಕ್ಕೆ ದೊಡ್ಡ ಸಮಸ್ಯೆಯಲ್ಲ. ಸಾಮಾಜಿಕ ಸಮಸ್ಯೆಗಳನ್ನು ಸಾಮಾನ್ಯೀಕರಿಸಿ ಅವುಗಳಿಗೆ ಇಂಜಿನಿಯರಿಂಗ್ ಸಮೀಕರಣಗಳನ್ನು ಅನ್ವಯಿಸಿ ಪರಿಹಾರ ಹುಡುಕುವುದು ಮತ್ತು ಅದನ್ನೂ ಲಾಭಕ್ಕೆ ಜೋಡಿಸುವುದು ಸಾಮಾಜಿಕ ಅಭ್ಯುದಯ ಅಭಿಯಾನಕ್ಕೇ ದೊಡ್ಡ ಸಮಸ್ಯೆಯಾಗಬಹುದು. ಇಂಥ ಜಾಗತೀಕರಣದಿಂದ ಸ್ಥಳೀಯತೆಯ ಅಂಶಗಳು ನಿರ್ಲಕ್ಷಕ್ಕೆ ಒಳಗಾಗಿ, ಹಲವು ವಿಷಯಗಳಿಗೆ ಈ ದೈತ್ಯ ಸಂಸ್ಥೆಗಳೇ ಸರ್ಕಾರದಂತೆ ವರ್ತಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.
  • ಪ್ರಬಲ ಎಡ ವೇದಿಕೆ:ತನ್ನ ನೈಜ ವಾದಗಳನ್ನು ಜನರಲ್ಲಿ ಬಿಂಬಿಸಲಾಗದೆ ವಿಫಲವಾದ ಕಮ್ಯುನಿಸ್ಟರು ಈಗ ಕಾಂಗ್ರೆಸ್ ಸರ್ಕಾರದ ನೆರಳಿನಿಂದಲೂ ವಂಚಿತರಾಗಿದ್ದಾರೆ. ಇವರಿಗೆಲ್ಲ ಒಮಿಡ್ಯಾರ್ ದೇಣಿಗೆಗಳು ಅತಿ ದೊಡ್ಡ ಬೆಂಬಲವಾಗಿ ಒದಗಿವೆ. ಬಹುತೇಕ ಎಲ್ಲ ಎಡಪಂಥೀಯ ಇಂಗ್ಲಿಶ್ ಪತ್ರಕರ್ತರಿಗೆ ಈಗ ಕೆಲಸವೋ ಕೆಲಸ; ಸಂಬಳವೋ ಸಂಬಳ. ವಿಫಲವಾದ ಜನಪರ ಚಳವಳಿಯನ್ನು ಬಂಡವಾಳಶಾಹಿ ನೆರವಿನಿಂದ ಮತ್ತೆ ಕಟ್ಟಲು ಹೊರಟಿರುವ ವಿಪರ್ಯಾಸ ಇಲ್ಲಿ ಕಾಣುತ್ತಿದೆ. ತಳಮಟ್ಟದಿಂದ ಚಳವಳಿಯನ್ನು ಕಟ್ಟುವ ಬದಲು, ಮೇಲುಹಂತದ ಮಾಧ್ಯಮ ಮತ್ತು ಹಣದ ಬಲದ ಸಂಘಟನೆಗಳ ಮೂಲಕ ಚಳವಳಿಗಳನ್ನು ಹುಟ್ಟುಹಾಕಿ ಸರ್ಕಾರದ ಮೇಲೆ ಒತ್ತಡ ಬೀರುವ, ಪ್ರಭಾವಿಸುವ ವಿದ್ಯಮಾನ ಈಗ ಆರಂಭವಾಗಿದೆ. ಇದು ಎಡಪಂಥೀಯರ ದ್ವಂದ್ವವಾದರೂ ಇವರ ಧ್ವನಿಗೆ ವೇದಿಕೆಯಂತೂ ಸಿಕ್ಕಿದಂತಾಗಿದೆ.
  • ಯುವ ಸಮುದಾಯದ ಮೇಲೆ ಪ್ರಭಾವ:ಮುದ್ರಣ ಮಾಧ್ಯಮಕ್ಕಿಂತ ಆನ್‌ಲೈನ್ ಮಾಧ್ಯಮದಲ್ಲೇ ತನಗೆ ಬೇಕಾದ ಮಾಹಿತಿಗಳನ್ನು ಪಡೆಯುವ ಯುವ ಸಮುದಾಯವೀಗ ಇಂತಹ ನವ ಮಾಧ್ಯಮ ತಾಣಗಳನ್ನೇ ನಿಜವಾದ ಹೋರಾಟ ಎಂದು ನಂಬುತ್ತಿದೆ. ಬಂಡವಾಳ ಆಧಾರಿತ ಯಾವುದೇ ಹೋರಾಟವೂ ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ ಎಂದು ಈ ಯುವ ಸಮುದಾಯಕ್ಕೆ ಹೇಳುವ ಅಧಿಕಾರವನ್ನೂ ಹಿರಿಯರು ಕಳೆದುಕೊಂಡಿದ್ದಾರೆ. ಸಾಂಪ್ರದಾಯಿಕ ಮಾಧ್ಯಮಗಳಲ್ಲೇ ಹಳೆಯ ಜನರು ಬದುಕುತ್ತ, ಹೊಸ ಮಾಧ್ಯಮಗಳಲ್ಲೇ ಯುವಜನರು ಬದುಕುತ್ತ, ಬಹುದೊಡ್ಡ ಆರ್ಥೈಸುವಿಕೆಯ ಕಂದರ ಉಂಟಾಗಿದೆ. ಇದು ಭಾರತವಷ್ಟೇ ಅಲ್ಲ, ಯಾವುದೇ ದೇಶಕ್ಕೂ ಅಪಾಯಕಾರಿ. ಪರಂಪರೆಯ ಓದು, ಅರಿವು – ಎಲ್ಲದಕ್ಕೂ ಆನ್‌ಲೈನ್ ಮೂಲಗಳೇ ಆಧಾರವಾದರೆ ಅಪಾಯ ತಪ್ಪಿದ್ದಲ್ಲ. ಮಾಹಿತಿ ಮೂಲಗಳೇ ಅಪಕ್ವ ಮತ್ತು ವಸ್ತುನಿಷ್ಠವಲ್ಲದ ಮಾಹಿತಿಯನ್ನು ವ್ಯಾಪಕವಾಗಿ, ಬಳಕೆದಾರ ಸ್ನೇಹಿಯಾಗಿ ಕೊಟ್ಟರೆ ನಿಷ್ಠುರ ಸಂವಾದವೂ ವಿಫಲವಾಗುತ್ತದೆ. ಈ ‘ಅರಿವಿನ ಕಂದರ’ವು ಮುಂದಿನ ದಿನಗಳಲ್ಲಿ ಬಹುದೊಡ್ಡ ಸವಾಲಾಗಲಿದೆ. ಅಭ್ಯುದಯದ ಕುರಿತು ಅರೆಬೆಂದ ವಿಚಾರಗಳನ್ನೇ ಮುಂದಿಟ್ಟು ಅಧಿಕಾರಕ್ಕೆ ಬಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಬೆಳವಣಿಗೆಯ ಒಂದು ಉದಾಹರಣೆ.
  • ’ಬಂಡವಾಳಶಾಹಿ ಉದಾರವಾದ’ (ಕ್ಯಾಪಿಟಲಿಸ್ಟಿಕ್ ಲಿಬರಲಿಸಂ): ಇದೊಂದು ವಿರೋಧಾಭಾಸದ ಬೆಳವಣಿಗೆ. ಈ ವಿಚಿತ್ರ ಸನ್ನಿವೇಶಕ್ಕೆ ಇಂಟರ್‌ನೆಟ್ ಕಾರಣವಾಗಿರುವುದು ವಿಚಿತ್ರವಾದರೂ ಸತ್ಯ. ಈ ವಿದ್ಯಮಾನಗಳು ರಾತ್ರೋರಾತ್ರಿ ಸರಿಹೋಗುವುದಿಲ್ಲ. ಅದರಲ್ಲೂ ಸರ್ಕಾರಗಳು, ಸಮುದಾಯಗಳು ಈ ಕುರಿತು ಸತತ ನಿಗಾ ಇಡದಿದ್ದರೆ, ಎಲ್ಲ ಸಾಮಾಜಿಕ ಹೋರಾಟಗಳೂ ‘ಬಂಡವಾಳಶಾಹಿ ಸಾಂಸ್ಕೃತಿಕ ಮಾರ್ಕ್ಸಿಸಂ’ ಆಗುತ್ತವೆ. ಉದಾರೀಕರಣದಿಂದ ಭಾರತವನ್ನು ಪ್ರವೇಶಿಸಿದ ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳೇ ಈಗ ಸೇವಾ ರಂಗದಲ್ಲಿ ಹೂಡಿಕೆ ಮಾಡಿ ಉದಾರವಾದಿ ಎಡಪಂಥೀಯರಿಗೆ ಆಶ್ರಯ ನೀಡುತ್ತಿರುವುದು ವಿಚಿತ್ರವಾದರೂ ನಿಜ.
  • ಪೂರ್ವಾಗ್ರಹದ, ಅಸಂತುಲಿತ ಪತ್ರಿಕೋದ್ಯಮ: ವಿದೇಶಗಳಿಂದ ದಾನ ಹರಿದು ಬರಲೇಕೂಡದು ಎಂಬ ಅಭಿಪ್ರಾಯ ನನ್ನದಲ್ಲ. ಆದರೆ ಈ ದಾನಪ್ರವಾಹವು ನಮ್ಮ ನೆಲದ ಮೂಲ ಸಂಸ್ಕೃತಿ- ಪರಂಪರೆಯನ್ನೇ ಧಿಕ್ಕರಿಸುವ, ಎಲ್ಲವನ್ನೂ ಉದಾರವಾದದ, ಎಡಪಂಥೀಯ ಕಣ್ಣಿನಲ್ಲೇ ನೋಡುವ ಪ್ರಯತ್ನವನ್ನು ಖಂಡಿಸಲೇಬೇಕಾಗಿದೆ. ಜಾತ್ಯತೀತತೆಯ ನಿಜವಾದ ಅರ್ಥವು ಎಲ್ಲ ಮಾನವೀಯ ನಂಬಿಕೆಗಳನ್ನು ಗೌರವಿಸುವುದೇ ಆಗಿದೆಯೇ ಹೊರತು ಯಾವುದೋ ಒಂದು ಧರ್ಮ – ಮತದ ಧಿಕ್ಕಾರವಲ್ಲ. ಈಗ ಹುಟ್ಟಿರುವ ಎಡ ಮಾಧ್ಯಮತಾಣಗಳನ್ನು ನೋಡಿದರೆ ಅಲ್ಲಿ ಈ ಬಗೆಯ ಸಂತುಲನೆ, ಸಹಿಷ್ಣುತೆ ಏನೂ ಕಾಣುತ್ತಿಲ್ಲ. ಪತ್ರಕರ್ತರು, ಲೇಖಕರು ಎಲ್ಲರೂ ಒಂದೇ ನಂಬಿಕೆಯ ಮೇಲೆ ಕಾರ್ಯಾಚರಿಸುತ್ತಿದ್ದಾರೆ. ಇದು ಪ್ರಜಾತಂತ್ರವೂ ಅಲ್ಲ; ಸಮಾನತೆಯೂ ಅಲ್ಲ. ವಸ್ತುನಿಷ್ಠ ವಿಶ್ಲೇಷಣೆ ಮತ್ತು ತಜ್ಞರ ಕಾಮೆಂಟರಿಗಳು ಇರುತ್ತವೆ ಎನ್ನುವ ಸ್ಕ್ರೋಲ್‌ನಲ್ಲಿ ಅದರ ಮೂಗಿನ ನೇರಕ್ಕೆ ಬರೆಯುವವರೇ ಇದ್ದಾರೆಯೇ ವಿನಃ ಮುದ್ರಣ ರಂಗದಲ್ಲಿ ಈಗಲೂ ಗಮನಾರ್ಹವಾಗಿ ಬಳಕೆಯಲ್ಲಿರುವ ವಿವಿಧ ಆಯಾಮಗಳ – ಕೋನಗಳ ವಿಚಾರ ಮಂಡನೆ ಇಲ್ಲವೇ ಇಲ್ಲ. ಎಡ ಪರ ಎಂದೇ ಗುರುತಿಸುವ ‘ದ ಹಿಂದೂ’ ಪತ್ರಿಕೆಯಲ್ಲೂ ಎಲ್ಲ ಬಗೆಯ ಅಭಿಪ್ರಾಯಗಳಿಗೆ ವಾರಕ್ಕೊಮ್ಮೆಯಾದರೂ ಜಾಗ ಕೊಡಲಾಗಿದೆ. ಇಲ್ಲಿ ಅವನ್ನೆಲ್ಲ ನಿರೀಕ್ಷಿಸುವಂತಿಲ್ಲ.
  • ದೇಸಿ ಸಮಸ್ಯೆಗೆ ಅನ್ಯ ಪರಿಹಾರ: ಯುರೋಪ್ ಕೇಂದ್ರಿತ ಸಮಾನತೆಗಳ ಸೂತ್ರವನ್ನು ಭಾರತದ ಬಹುಸಂಸ್ಕೃತಿಯ ಮೇಲೆ ಹೇರುವುದು ನಮ್ಮ ವೈವಿಧ್ಯಮಯ ಸಮಾಜಕ್ಕೆ ದೊಡ್ಡ ಹೊಡೆತ. ಜಾತೀಯತೆ, ಲಿಂಗ ತಾರತಮ್ಯ, ಬಡತನ, ನಿರುದ್ಯೋಗ – ಎಲ್ಲವನ್ನೂ ಅವುಗಳದ್ದೇ ಆದ ನಿರ್ದಿಷ್ಟ ಕೋನಗಳಿಂದ ನೋಡಬೇಕೇ ವಿನಃ ಎಲ್ಲವನ್ನೂ ಮಿತಿಯಿಲ್ಲದಂತೆ ಮಿಶ್ರಣ ಮಾಡಿ ಗೊಂದಲ ಹುಟ್ಟಿಸುವುದಲ್ಲ. ೨೦೧೨ರಲ್ಲಿ ಆಂಧ್ರಪ್ರದೇಶದಲ್ಲಿ ೨೦೦ಕ್ಕೂ ಹೆಚ್ಚು ಜನರು ಮೈಕ್ರೋಫೈನಾನ್ಸ್ ಸಾಲಗಳ ಬಾಧೆಯಿಂಧಾಗಿ ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಬಡ್ಡಿ ಸಾಲವನ್ನು ವಸೂಲಿ ಮಾಡಲು ರೈತರ ಮೇಲೆ ಒತ್ತಡ ಹಾಕಿದ ಸಂಸ್ಥೆಗಳಲ್ಲಿ ಒಮಿಡ್ಯಾರ್ ಬೆಂಬಲಿಸಿದ್ದ ಎಸ್‌ಕೆಸ್ ಮೈಕ್ರೋಫೈನಾನ್ಸ್ ಕೂಡಾ ಒಂದು (ಅದರ ಈಗಿನ ಹೆಸರು ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಜನ್ ಲಿಮಿಟೆಡ್). ಎಲ್ಲ ಜನ ಕೇಂದ್ರಿತ ಉದ್ಯಮಗಗೆ ಒಂದೇ ಬಗೆಯ ವರಮಾನ ಸೂತ್ರ ಇರಲು ಸಾಧ್ಯವಿಲ್ಲ ಎಂಬುದಕ್ಕೆ ಇದೇ ಉದಾಹರಣೆ. ಇಂಧು ನಿದರ್ಶನ: ಇಂಡಸ್ ಓಎಸ್ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವುದು ಒಳ್ಳೆಯ ಕೆಲಸವಲ್ಲವೇ ಎಂದು ಅನ್ನಿಸಬಹುದು. ಆದರೆ ಈ ಸಂಸ್ಥೆಯು ಕೇಂದ್ರ ಸರ್ಕಾರದ ನೆರವಿನ ಸಂಶೋಧನೆಯಾದ ಭಾರತೀಯ ಭಾಷೆಗಳಲ್ಲಿ ಪಠ್ಯವನ್ನು ಧ್ವನಿಯಾಗಿ ಪರಿವರ್ತಿಸುವ ತಂತ್ರಾಂಶವನ್ನು ಹಕ್ಕುಸ್ವಾಮ್ಯ ಸಹಿತ ಖರೀದಿಸಿದೆ. ಭಾಷಾ ಬೆಳವಣಿಗೆಗೆ ಪೂರಕವಾದ ಈ ತಂತ್ರಜ್ಞಾನವನ್ನು ಸರ್ಕಾರವೇ ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಿದ್ದರೆ ಯಾವುದೇ ಸಂಸ್ಥೆಯೂ ಇದನ್ನು ಅಳವಡಿಸಿಕೊಳ್ಳಬಹುದಾಗಿತ್ತು; ಏಕಸ್ವಾಮ್ಯದ ಸಮಸ್ಯೆಯೇ ಇರುತ್ತಿರಲಿಲ್ಲ.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಾಧ್ಯಮಗಳೇ ಈಗ ವರಮಾನದ ಮೂಲಗಳಾಗಿ ಪರಿವರ್ತಿತವಾಗಿವೆ. ಒಮಿಡ್ಯಾರ್ ವಿದ್ಯಮಾನದಿಂದ ಜನಪರ ಕಾಳಜಿಯ ವಿಷಯಗಳೂ ಲಾಭ ಗಳಿಸುವ ಸರಕುಗಳಾಗಿವೆ ಎಂಬುದನ್ನು ಎಡ-ಬಲ ಪಂಥದ ಚಿಂತಕರು ಅರಿಯಬೇಕಾಗಿದೆ. ‘ಮಾಧ್ಯಮದ ಕಾರ್ಪೋರೇಟೀಕರಣ ತಪ್ಪಲ್ಲ’ ಎಂಬ ವಿಚಾರ ಸಂಕಿರಣವನ್ನು ನ್ಯೂಸ್‌ಲಾಂಡ್ರಿಯೇ ಸಂಘಟಿಸುತ್ತದೆ; ಅದರಲ್ಲಿ ಒಮಿಡ್ಯಾರ್‌ನ ಪ್ರತಿನಿಧಿಯೂ, ಬಲ ಚಿಂತನೆಯ ಕಾರ್ಪೋರೇಟ್ ಹೂಡಿಕೆದಾರರೂ ಭಾಗವಹಿಸುತ್ತಾರೆ!

‘ದ ಮ್ಯಾಟ್ರಿಕ್ಸ್’ ಸಿನೆಮಾದಲ್ಲಿ ಆದಂತೆ ಮನುಕುಲವೇ ತನಗೆ ಗೊತ್ತಿಲ್ಲದಂತೆ ಒಮಿಡ್ಯಾರ್ ಎಂಬ ಬಂಡವಾಳಶಾಹಿ ಯಂತ್ರದ ದಾಸ್ಯಕ್ಕೆ ಸಿಲುಕುತ್ತದೆ. ಒಮಿಡ್ಯಾರ್ ಎತ್ತಿಕೊಂಡ ವಿಷಯಗಳೆಲ್ಲವೂ ಹೆಚ್ಚುಕಡಿಮೆ ಗಮನಿಸಬೇಕಾದ ಸಂಗತಿಗಳೇ. ಆದರೆ ಒಮಿಡ್ಯಾರ್ ಹಣದ ಮೂಗು ತೂರಿಸುವಿಕೆಯಿಂದ ಈ ಸಮಸ್ಯೆಗಳು ಇನ್ನಷ್ಟು ಜಟಿಲವಾಗುತ್ತವೆಯೇ ಹೊರತು ಪರಿಹಾರವಾಗುವುದಿಲ್ಲ. ಹೀಗಾಗಿ ವಿದೇಶಿ ನೆರವಿನ ಕಬಂಧ ಬಾಹುಗಳನ್ನು ದೂರವಿಡುವ ಯತ್ನ ಮಾಡಬೇಕಿದೆ. ನನ್ನ ಅಧ್ಯಯನದ ಪ್ರಕಾರ ಈ ಯಾವುದೇ

Share. Facebook Twitter Pinterest LinkedIn Tumblr Email
Previous ArticleAttention NGOs: Transparency and probity begins from you!
Next Article ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.