Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
ಲೇಖನಗಳು

ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 27, 2011Updated:May 19, 20251 Comment14 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಕನ್ನಡದ ಪತ್ರಕರ್ತ, `ಹೊಸದಿಗಂತ’ ದೈನಿಕದ ಹಿರಿಯ ವರದಿಗಾರ  ಗುರುವಪ್ಪ ಎನ್‌ ಟಿ ಬಾಳೇಪುಣಿ ಯವರಿಗೆ ೨೦೧೧ರ ಸರೋಜಿನಿ ನಾಯ್ಡು ಪ್ರಶಸ್ತಿ ದೊರೆತಿದೆ. ಅವರಿಗೆ ನಾವೆಲ್ಲರೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸೋಣ. ಅಭ್ಯುದಯ ಪತ್ರಿಕೋದ್ಯಮವೆಂದರೆ ಏನು ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾದ ಈ ಸಂದರ್ಭದಲ್ಲಿ ಬಾಳೇಪುಣಿಯಂಥ ನೈಜ ಅಭ್ಯುದಯ ಪತ್ರಕರ್ತರಿಗೆ ಈ ಪ್ರಶಸ್ತಿ ದೊರೆತಿರುವುದು, ಅದರಲ್ಲೂ ಈ ಪ್ರಶಸ್ತಿ ಸ್ಥಾಪನೆಯಾದ ಹತ್ತು ವರ್ಷಗಳಲ್ಲಿ ಇದೇ ಮೊದಲ ಸಲ ಕನ್ನಡಿಗರಿಗೆ ಈ ಪ್ರಶಸ್ತಿ ಬಂದಿರುವುದು ವಿಶೇಷವೇ. ಈ ಪ್ರಶಸ್ತಿಯೂ ಪ್ರತಿಷ್ಠಿತವೇ. ಇಂಟರ್‌ನ್ಯಾಶನಲ್‌ ಹಂಗರ್‌ ಪ್ರಾಜೆಕ್ಟ್‌ ಆಯೋಜಿಸಿರುವ ಈ ಪ್ರಶಸ್ತಿಯ ಆಯ್ಕೆಯೂ ಅತ್ಯಂತ ವಸ್ತುನಿಷ್ಠವೇ ಎನ್ನುವುದು ಅದರ ವಿವರಗಳನ್ನು ಓದಿದಾಗ ಅನ್ನಿಸುತ್ತದೆ. 

ಬಾಳೇಪುಣಿ ಸ್ಪರ್ಧೆಗಾಗಿ ವರದಿಯನ್ನು ಕಳಿಸಿದ್ದೇನೋ ನಿಜ. ಆದರೆ ಅವರೇನೂ ಇದಕ್ಕಾಗಿಯೇ ಅಭ್ಯುದಯ ಪತ್ರಕರ್ತರಾಗಲಿಲ್ಲ; ಅವರು ದಿನನಿತ್ಯವೂ ಇಂಥದ್ದೇ ವರದಿಗಳನ್ನೇ ಬರೆಯುವುದಕ್ಕೆ ಇಷ್ಟಪಡುತ್ತಾರೆ.
ಹಾಗಂತ ನನಗನ್ನಿಸಿದ್ದು ಕೆಲವು ವರ್ಷಗಳ ಹಿಂದೆ `ಹೊಸದಿಗಂತ’ದ ಸಂಪಾದಕೀಯ ಸಿಬ್ಬಂದಿಗೆ ರಿಫ್ರೆಶರ್‌ ಕೋರ್ಸಿಗೆಂದು ಹೋದಾಗ. ಇಡೀ ಶಿಬಿರದಲ್ಲಿ ಅವರು ದಿನನಿತ್ಯದ ವರದಿಗಾರಿಕೆಯ ನಡುವೆಯೂ ಬಂದು ಭಾಗವಹಿಸಿದ್ದು, ಅಭ್ಯುದಯ ಪತ್ರಿಕಾಕಾಯಕದ ಬಗ್ಗೆ ಮಾತನಾಡಿದ್ದು ಎಲ್ಲವೂ ಈಗ ನೆನಪಾಗುತ್ತಿದೆ. ನಾನು ಹೊಸದಿಗಂತದಿಂದ ಹೊರಬಂದ ಮೇಲೆ ಪರಿಚಯವಾದ, ನಿಕಟವಾದ `ಹೊಸದಿಗಂತ’ದ ಪತ್ರಕರ್ತರಲ್ಲಿ ಬಾಳೇಪುಣಿಯೇ ಮೊದಲ ಹೆಸರು.
ಅವರ ನನ್ನ ಸ್ನೇಹ ನಿಕಟವಾಗಿದ್ದು ವಿಚಿತ್ರ ಸಂದರ್ಭದಲ್ಲಿ! ಮಂಗಳೂರಿಗೆ ಬಂದರೆ ಒಳ್ಳೆ ಮೀನು ಊಟ ಎಲ್ಲಿ ಮಾರಾಯ್ರೆ ಎಂದು ಛೇಡಿಸಿದಾಗ `ನಾರಾಯಣಾ, ನಾರಾಯಣಾ, ಕರ್‍ಕೊಂಡು ಹೋಗ್ತೀನಿ ಬನ್ನಿ..’ ಎಂದರು. ನನಗೆ ಅರ್ಥವಾಗಲಿಲ್ಲ. ಕೊನೆಗೆ ಬಂದರಿನ ಹತ್ತಿರ ನಾರಾಯಣ ಹೋಟೆಲಿಗೆ ಕರೆದುಕೊಂಡು ಹೋಗಿ ಕೂಡಿಸಿದಾಗಲೇ ಗೊತ್ತಾಯ್ತು.. ನಾರಾಯಣ ಸ್ಮರಣೆಯ ಒಳ ಅರ್ಥ! ಈಗಲೂ ಮಂಗಳೂರಿಗೆ ಹೋದಾಗಲೆಲ್ಲ, `ನಾರಾಯಣಾ…’ ಎಂದು ಸಣ್ಣಗೆ ದನಿ ಎತ್ತಿ ನಗುತ್ತಾರೆ….
ಆಮೇಲೆ ಕೆಲವು ದಿನಗಳ ಕಾಲ ಹೊಸದಿಗಂತದ ಮಂಗಳೂರು ಆವೃತ್ತಿಯನ್ನು ಬೆಂಗಳೂರಿನಿಂದಲೇ ನೋಡಿ ಸಲಹೆ ನೀಡುವ ಪ್ರಯೋಗವನ್ನೂ ಮಾಡಿದ್ದೆವು. ಮಂಗಳೂರಿನಿಂದ ಹಲವು ವಾರಗಳ ಆವೃತ್ತಿಗಳನ್ನು ತರಿಸಿಕೊಂಡು ಯಾವ ಸುದ್ದಿಗೆ ಮಹತ್ವ ನೀಡಬಹುದಿತ್ತು ಎಂದು ಗುರುತು ಮಾಡುತ್ತಿದ್ದೆ. ಅವುಗಳಲ್ಲಿ ಹಲವು ಸಲ ಬಾಳೇಪುಣಿ ಬರೆದ ವರದಿಗಳೇ ಕೊನೆ ಪುಟದಲ್ಲೋ, ಮಧ್ಯದಲ್ಲೋ ಸಿಗುತ್ತಿದ್ದವು. ಇವೆಲ್ಲವೂ ಮುಖಪುಟ ಲೇಖನವೇ ಎಂದು ಗುರುತಿಸಿದ್ದೆ ಎಂಬುದು ನನಗೆ ಚೆನ್ನಾಗಿ ನೆನಪಿದೆ.  ಅವೆಲ್ಲವೂ ಬಾಳೇಪುಣಿಯ ಸಮಾಜಸ್ನೇಹಿ ಪತ್ರಿಕಾ ಕಾಯಕವನ್ನು ಬಿಂಬಿಸುತ್ತಿದ್ದವು.
ಎಷ್ಟೋ ಸಲ ಇತರೆ ಶಿಬಿರಗಳಲ್ಲಿ, ಸ್ನೇಹಿತರೊಂದಿಗೆ ಹರಟುವಾಗ ಬಾಳೇಪುಣಿ ನೆನಪಾಗುತ್ತಾರೆ. `ಕನ್ನಡಪ್ರಭ’ದ ಮೊದಲ ವರ್ಷದ ವ್ಯಕ್ತಿ ಹಾಜಬ್ಬನನ್ನು ಮೊದಲು ಗುರುತಿಸಿದ್ದು ಬಾಳೇಪುಣಿಯೇ! ಇದು ನನಗೆ ಗೊತ್ತಾಗಿದ್ದೂ ಬಾಳೇಪುಣಿ ಹೇಳಿದಾಗಲೇ. ಹಾಜಬ್ಬನವರ ಬಗ್ಗೆ ಬಾಳೇಪುಣಿ ಬರೆದ ಸುದ್ದಿಚಿತ್ರ ಹೊಸದಿಗಂತದಲ್ಲಿ ಪ್ರಕಟವಾಗಿತ್ತು.
ಬಾಳೇಪುಣಿ ರಾತ್ರಿಹೊತ್ತು ಮೊಬೈಲಿನಲ್ಲಿ ಸಿಗುವುದು ಕಷ್ಟ. ಹಾಗಂತ ತಪ್ಪು ತಿಳಿದುಕೊಳ್ಳಬೇಡಿ! ಅವರು ಬಾಳೇಪುಣಿಗೆ ಹೋಗಿರುತ್ತಾರೆ. ತಮ್ಮ ಪುಟ್ಟ ಮನೆಯಿಂದಲೇ ಓಡಾಡಿಕೊಂಡೇ ಹೊಸದಿಗಂತಕ್ಕೆ ವರದಿ ಮಾಡುವುದು ಅವರ ಪ್ರಿಯ ಕಾಯಕ. ವೃತ್ತಿಪರ ಪತ್ರಕರ್ತರಲ್ಲಿ ಹಲವರಿಗೆ ಇರುವ ಭಯಂಕರ ಹವ್ಯಾಸಗಳು ಅವರಿಗಿಲ್ಲ.
ಅವರು ಬಯಸಿದ್ದರೆ ಯಾವತ್ತೋ ಇನ್ನಷ್ಟು ಹೆಚ್ಚು ಸಂಬಳ ತರುವ ಕೆಲಸವನ್ನು ಹಿಡಿಯಬಹುದಿತ್ತು; ಅವರಿಗೆ ಬೇರೆ ಆಫರ್‌ಗಳೂ ಬಂದಿರಬಹುದೇನೋ. ಆದರೆ ಹೊಸದಿಗಂತದ ಪುಟ್ಟ ಕಚೇರಿಯಲ್ಲಿ ಇರುವ ಮೇಜಿನ ಮೇಲೆ ಹಾಳೆ ಹರವಿ ಬರೆಯುವುದು ಅವರಿಗೆ ಇಷ್ಟ. ಕಂಪ್ಯೂಟರಿನ ಬಳಕೆ ಅತಿ ಕನಿಷ್ಟ. ಈ ಮೈಲ್‌ ಕೂಡಾ ಹಿಡಿತ ಸಿಕ್ಕಿಲ್ಲ; ಆದರೆ ಅವೆಲ್ಲ ಅಭ್ಯುದಯ ಪತ್ರಿಕಾ ಕಾಯಕದ ಮುಂದೆ ಗೌಣ ಎಂಬುದನ್ನು ಅವರ ಈ ಪ್ರಶಸ್ತಿ ಸಾಬೀತುಪಡಿಸಿದೆ. ಫೇಸ್‌ಬುಕ್‌ಗಳಲ್ಲಿ ಸಾವಿರಗಟ್ಟಳೆ ಫ್ಯಾನುಗಳು ಇದ್ದರೇನಂತೆ, ನಿಮಿಷಕ್ಕೆ ಹತ್ತಾರು ಟ್ವೀಟ್‌ ಮಾಡಿದರೇನಂತೆ, ದಿನಕ್ಕೆರಡು ಬ್ಲಾಗುಗಳನ್ನು ಬರೆದರೇನಂತೆ… ಅಭ್ಯುದಯದ ನೋಟ ಇರಬೇಕಲ್ಲವೆ ಎಂದು ಅವರು ನನ್ನನ್ನೂ ಸೇರಿಸಿಕೊಂಡು ಎಲ್ಲ ಕಾಸ್ಮೋಪಾಲಿಟನ್‌ ಪಸೆ ಹಚ್ಚಿಕೊಂಡ ಪತ್ರಕರ್ತರನ್ನು ಪ್ರಶ್ನಿಸಿದ ಹಾಗಿದೆ.
ಇವತ್ತು ಅವರಿಗೆ ಶುಭಾಶಯ ಹೇಳಿ ಎಸ್‌ ಎಂ ಎಸ್‌ ಮಾಡಿದಾಗ, ಅವರು ಕರೆ ಮಾಡಿಯೇ ಕೃತಜ್ಞತೆ ಸಲ್ಲಿಸಿದರು. `ಸಂಬಳದ ಪ್ರಶ್ನೆ ಬಿಡಿ ಬೇಳೂರು, ಒಳ್ಳೆಯ ವರದಿಗಾರಿಕೆ ಮಾಡಿಕೊಂಡು ಖುಷಿಯಾಗಿರೋದು ಮುಖ್ಯ. ನನ್ನ ಮನೆಯಲ್ಲಿ ಅಮ್ಮ, ಅಣ್ಣ ಎಲ್ಲರೂ ಅದನ್ನೇ ಹೇಳುತ್ತಾರೆ. ಸುಳ್ಳು ಹೇಳಿ, ತಪ್ಪಿ ಬರೆದು ಬದುಕಬೇಡ, ಯಾರಿಗೂ ಅನ್ಯಾಯ ಮಾಡಬೇಡ ಎಂದು ಕಿವಿಮಾತು ಹೇಳಿಯೇ ನಾನು ಹೀಗಾಗಿದ್ದೇನೆ’ ಎಂದರು.
ಬಾಳೇಪುಣಿಯ ಸ್ವಭಾವದ ಬಗ್ಗೆ ಒಂದಷ್ಟು ಬರೆಯಲೇಬೇಕು. ಅವರು ಸ್ವಭಾವತಃ ನೇರ ಮಾತಿನ ಪತ್ರಕರ್ತ; ಎಲ್ಲೂ ಹಿಂಜರಿಕೆ ಇಲ್ಲ. ಆದರೆ ಅದೇ ಹೊತ್ತಿನಲ್ಲಿ ಆದಷ್ಟೂ ವಿನಯವಂತರಾಗಿರಲು, ನಸುನಗು ಬೀರಲು ಯತ್ನಿಸುತ್ತಾರೆ! ಅದೇ ಅವರ ಟ್ರಂಪ್‌ ಕಾರ್ಡ್‌. ಕಣ್ಣು ಕಿರಿದಾಗಿಸಿ ನಕ್ಕುಬಿಟ್ಟರೆ, ಅದೇ ಬಾಳೇಪುಣಿ ಮೊಹರು. ಕೆಲವೊಮ್ಮೆ ಚರ್ಚೆ ಮಾಡುವಾಗ ನೇರವಾಗಿ ಮಾತನಾಡಿ ವಾತಾವರಣವನ್ನು ಬಿಸಿ ಮಾಡುವುದೂ ಅವರಿಗೆ ಗೊತ್ತು.
ಈ ಪ್ರಶಸ್ತಿಯಿಂದ ಇನ್ನೊಂದು ಅಂಶ ಖಚಿತವಾಗಿದೆ. ಸಿದ್ಧಾಂತಗಳ ಮಾತಿಗಿಂತ ಅಭ್ಯುದಯದ ವಿಶ್ಲೇಷಣೆಯ ಪತ್ರಿಕೋದ್ಯಮವೇ ಕೊನೆಗೂ ಗೌರವ ಪಡೆಯುತ್ತದೆ. ಹೊಸದಿಗಂತದ ಮಾಲೀಕರು, ನೀತಿ ನಿರೂಪಕರು ಈ ಅರಿವಿನತ್ತ ಸಾಗಿದ್ದಾರೆ ಎಂಬುದು `ಇಂಡಿಯಾ ಪಾಸಿಟಿವ್‌’ ಎಂಬ ಅವರ ಸುದ್ದಿ ಕಾಲಂನಿಂದ ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಹೊಸದಿಗಂತವು ಅಭ್ಯುದಯ ಪತ್ರಿಕೋದ್ಯಮಕ್ಕೆ ಇನ್ನಷ್ಟು ಜಾಗ ಕೊಡಲಿ; ಅದರಿಂದ ಸಮಾಜದ ಒಳತಿಗಾಗಿ ಚಿಂತಿಸುವ ಸುದ್ದಿಗಳು ಬಿತ್ತರವಾಗಲಿ ಎಂದಷ್ಟೆ ಇಲ್ಲಿ ಹಾರೈಸಬಹುದು.
ಅವರಿಗೆ ಪ್ರಶಸ್ತಿ ತ ಂದುಕೊಟ್ಟ ವರದಿ ಇಲ್ಲಿದೆ. ಓದಿ.
॒॒॒॒॒॒॒॒॒॒॒॒॒॒॒॒॒॒॒

ಇಡ್ಕಿದು ಗ್ರಾಮ ಪಂಚಾಯತ್ : ಗ್ರಾಮಾಭಿವೃದ್ಧಿಗೊಂದು ಜೀವಂತ ಮಾದರಿ

ಜಲ ಸಾಕ್ಷರತೆಯ ಮೂಲಕ ವಿಶ್ವದ ಗಮನಸೆಳೆದ ಕರ್ನಾಟಕದ ಮೊದಲ ಗ್ರಾ.ಪಂ. ಇಡ್ಕಿದು. ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಗ್ರಾಮಾಭಿವೃದ್ಧಿಯಲ್ಲಿಯೂ ಇಡ್ಕಿದು ಮುಂಚೂಣಿಯಲ್ಲಿದೆ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರ ಸಮರ್ಥ ಸಾರಥ್ಯ ಈ ಗ್ರಾ.ಪಂ.ಗೆ ಲಭಿಸಿದ್ದು, ಪ್ರಗತಿಯ ವೇಗವನ್ನು ಹೆಚ್ಚಿಸಿದೆ.

ಗ್ರಾಮ ಸ್ವರಾಜ್ಯ, ಗ್ರಾಮಾಭಿವೃದ್ಧಿ ಮತ್ತು ಸ್ವಾವಲಂಬನೆಯಲ್ಲಿ ಮೌನಕ್ರಾಂತಿಯತ್ತ ಸಾಗಿರುವ ಅಪರೂಪದ ಗ್ರಾಮ ಪಂಚಾಯತೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ. ಅದುವೇ ಇಡ್ಕಿದು ಗ್ರಾಮ ಪಂಚಾಯತು.

ಗ್ರಾಮಾಭಿವೃದ್ಧಿಯಲ್ಲಿ `ಇಡ್ಕಿದು ಮಾದರಿ’ಯನ್ನು ರಾಷ್ಟ್ರಕ್ಕೆ ಪರಿಚಯಿಸಲು ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾ ಆಸಕ್ತಿ ವಹಿಸಿದ್ದಾರೆ. ರತ್ನಾ ದ.ಕ.ದಲ್ಲಿ ಭೂತ ನೃತ್ಯ ವೃತ್ತಿಯಿಂದ ಗುರುತಿಸಲ್ಪಡುವ ಪರಿಶಿಷ್ಟ ಜಾತಿಯ ನಲಿಕೆ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಗ್ರಾ.ಪಂ. ಸದಸ್ಯೆಯಾಗಿ ಗಳಿಸಿದ ಅನುಭವದಿಂದ ಇಂದು ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.

ಹೆಣ್ಣೊಂದು ಕಲಿತರೆ…

`ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತಿದೆ. ಈ ಮಾತು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಇಡ್ಕಿದು ಗ್ರಾ.ಪಂ. ಅಧ್ಯಕ್ಷೆ ರತ್ನಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪಡೆದಿದ್ದಾರೆ. ಬೆಳ್ತಂಗಡಿಯ ಹಳ್ಳಿ ನಿಡ್ಲೆಯಿಂದ ೧೦ ವರ್ಷದ ಹಿಂದೆ ಇಡ್ಕಿದು ಗ್ರಾಮ ಪಂಚಾಯತ್‌ಗೊಳಪಟ್ಟ ಕುಳ ಗ್ರಾಮದ ಸೇಕೆಹಿತ್ಲುಗೆ ಸೊಸೆಯಾಗಿ ಬಂದಿದ್ದಾರೆ. ೨ ವರ್ಷ ಕುಳ ಗ್ರಾಮದ ಮುಂದುವರಿಕಾ ಶಿಕ್ಷಣ ಕೇಂದ್ರದಲ್ಲಿ ಪ್ರೇರಕಿಯಾಗಿ ನವಸಾಕ್ಷರರನ್ನು ಸಂಘಟಿಸಿದ್ದರು. ಅವರಿಗಾಗಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದ ರತ್ನಾ, ಮುಂದೆ ತಾನು ಈ ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಏರುತ್ತೇನೆಂಬ ಕನಸನ್ನೂ ಕಂಡಿರಲಿಲ್ಲ.೨೦೦೫-೧೦ನೇ ಸಾಲಿನ ಗ್ರಾ.ಪಂ. ಚುನಾವಣೆ ಘೋಷಣೆಯಾದಾಗ ಪರಿಚಿತರೊಬ್ಬರ ಪ್ರೇರಣೆಯಿಂದ ರತ್ನಾ ಚುನಾವಣಾ ಕಣಕ್ಕಿಳಿದರು. ಮೊದಲ ಪ್ರಯತ್ನದಲ್ಲೇ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದೀಚೆಗೆ ರತ್ನಾ ಜನತೆಗೆ ಗ್ರಾಮಾಭಿವೃದ್ಧಿಯ ಪಾಠವನ್ನು ಬೋಧಿಸುತ್ತಿದ್ದು, ಇಂದು ಇಡ್ಕಿದು ಗ್ರಾ.ಪಂ.ನ ಪ್ರಥಮ ಪ್ರಜೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರಾಥಮಿಕ ಶಿಕ್ಷಣ ಹೊಂದಿರುವ ರತ್ನಾ ಅವರ ಪತಿ ಕೃಷ್ಣಪ್ಪ ರಬ್ಬರ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ರತ್ನಾ ಬೀಡಿ ಕಾರ್ಮಿಕೆ. ಇಬ್ಬರು ಪುಟ್ಟ ಗಂಡು ಮಕ್ಕಳನ್ನು ಹೊಂದಿರುವ ಚಿಕ್ಕ, ಚೊಕ್ಕ ಸಂಸಾರ ಇವರದು. ಹಿರಿಯರಿಂದ ಬಂದ ಸೇಕೆಹತ್ಲಿನ ೬ ಸೆಂಟ್ಸ್ ಜಮೀನು, ೮ ವರ್ಷದ ಹಿಂದೆ ನಿರ್ಮಿಸಿದ ಸಣ್ಣ ಆಶ್ರಯ ಮನೆ ಇವರ ಆಸ್ತಿ. ಪತಿಯ ಪ್ರೋತ್ಸಾಹ, ಬೆಂಬಲ ರತ್ನಾರವರ ಆಸಕ್ತಿಯನ್ನು ದ್ವಿಗುಣಗೊಳಿಸಿದೆ.

“ಚುನಾವಣೆಗೆ ಸ್ಪರ್ಧಿಸುವಾಗ ನನಗೆ ಅಳುಕಿತ್ತು. ಗ್ರಾ.ಪಂ. ಆಡಳಿತದ ಬಗ್ಗೆ ಯಾವುದೇ ಅನುಭವವಿರಲಿಲ್ಲ. ಆಯ್ಕೆಯಾದ ಬಳಿಕ ಸಹೋದ್ಯೋಗಿ ಸದಸ್ಯರು, ಸಿಬ್ಬಂದಿ ಹಾಗೂ ಜನತೆಯ ಸಹಕಾರದಿಂದ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಜನತೆಯ ಬೇಕು-ಬೇಡಗಳನ್ನು ಮನವರಿಕೆ ಮಾಡಿಕೊಳ್ಳುವ ಶಕ್ತಿ ಬಂತು” ಎಂದು ತಮ್ಮ ಗ್ರಾಮ ಪಂಚಾಯತ್ ಪ್ರವೇಶವನ್ನು ರತ್ನಾ `ಹೊಸ ದಿಗಂತ’ ದೊಂದಿಗೆ ಹಂಚಿಕೊಂಡರು.

ಜಾತಿ, ಮತದ ಎಲ್ಲೆ ಮೀರಿ….

“೨೦೦೫-೧೦ನೇ ಸಾಲಿನಲ್ಲಿ ೧೯ ಸದಸ್ಯರ ಪೈಕಿ ನಾನು ಸೇರಿದಂತೆ ೮ ಮಂದಿ ಮಹಿಳೆಯರಿದ್ದೆವು. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಚರ್ಚಿಸಿ ಗ್ರಾ.ಪಂ.ಗಾಗಿ ಯೋಜನೆಗಳನ್ನು ರೂಪಿಸುತ್ತಿದ್ದೆವು. ಆ ವೇಳೆ ಆಗ ಜಾತಿ, ಧರ್ಮ, ಅಂತಸ್ತು ಮರೆಯುತ್ತಿದ್ದೆವು. ಗ್ರಾಮ ಸ್ವರಾಜ್ಯ, ಸ್ವಾವಲಂಬನೆ ಮತ್ತು ಗ್ರಾಮಾಭಿವೃದ್ಧಿ ನಮ್ಮ ಮುಖ್ಯ ಧ್ಯೇಯವಾಗಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ನಮಗಾಗಿಯೇ ಯೋಜನೆಗಳನ್ನು ರೂಪಿಸುತ್ತಿರುವೆವು ಎಂಬ ಅರಿವು ನಮಗಿತ್ತು. ನಾನು ಪ್ರೌಢಶಾಲಾ ಶಿಕ್ಷಣ ಪಡೆದುದು ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಹುಬೇಗ ಅರಿತುಕೊಳ್ಳಲು ಸಹಕಾರಿಯಾಯಿತು” ಎಂದು ಹೇಳುವ ರತ್ನಾ ಸಾಕ್ಷರತೆ, ಆರೋಗ್ಯ, ಶುದ್ಧ ಕುಡಿಯುವ ನೀರು, ಮಹಿಳಾ ಸಶಕ್ತೀಕರಣ ಮತ್ತು ಮೂಲಭೂತ ಸೌಕರ್‍ಯಗಳು ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸಬಲ್ಲುದು ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಇಡ್ಕಿದು ಗ್ರಾ.ಪಂ. ಕುಳ ಮತ್ತು ಇಡ್ಕಿದು ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು ೭ ಬ್ಲಾಕ್‌ಗಳಿವೆ. ಪ್ರಸ್ತುತ ೧೯ ಸದಸ್ಯರ ಆಡಳಿತ ಮಂಡಳಿ ಇದೆ. ಪ.ಜಾ., ಪ.ಪಂ., ಮಹಿಳೆ, ಹಿಂದುಳಿದ ವರ್ಗ ಹೀಗೆ ಎಲ್ಲಾ ವರ್ಗ, ಸಮುದಾಯಗಳ ಪ್ರತಿನಿಗಳನ್ನು ಒಳಗೊಂಡಿದೆ. ೮ ಮಂದಿ ಮಹಿಳಾ ಸದಸ್ಯರಿದ್ದಾರೆ. ಪ್ರಸ್ತುತ ಮಹಿಳೆಯರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಕ್ಷೇತರ, ಕಾಂಗ್ರೆಸ್, ಬಿಜೆಪಿ ಬೆಂಬಲಿತ ಸದಸ್ಯರು ಆಡಳಿತ ಮಂಡಳಿಯಲ್ಲಿದ್ದಾರೆ.

ಸಂಪನ್ಮೂಲ-ಸೌಲಭ್ಯ ವೃದ್ಧಿ

ಹಿಂದೆ ಸದಸ್ಯೆಯಾಗಿದ್ದುಕೊಂಡು ಹಮ್ಮಿಕೊಂಡ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ಇದೀಗ ಅಧ್ಯಕ್ಷರಾಗಿದ್ದುಕೊಂಡು ಹೆಚ್ಚು ವೇಗದಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಗ್ರಾಮ ಪಂಚಾಯತಿಯ ಸಂಪನ್ಮೂಲವನ್ನು ಹೆಚ್ಚಿಸುವಲ್ಲಿಯೂ ರತ್ನಾ ಗಮನ ಹರಿಸಿದ್ದಾರೆ.

ಮಾರ್ಪಳ್ಳಿ, ಪೆಲತ್ತಡಿ, ಸೂರ್ಯ, ನೇರ್ಲಾಜೆ, ಮುಂಡ್ರಬೈಲು ಮುಂತಾದೆಡೆಯ ೨೨ ಕುಟುಂಬಗಳಿಗೆ ರೂ. ೧.೫ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಿಕೊಡುವಲ್ಲಿ ಗ್ರಾ.ಪಂ. ಅಧ್ಯಕ್ಷರು ಯಶಸ್ವಿಯಾಗಿದ್ದಾರೆ. ಉರಿಮಜಲು, ಅಳಕೆ ಮಜಲು ಭಾಗಗಳ ೩೦ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಅನುದಾನದಿಂದ ಕೈಗೆತ್ತಿಕೊಳ್ಳಲು ರತ್ನಾ ಸಿದ್ಧರಾಗಿದ್ದಾರೆ. ಮಹಾತ್ಮ ಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಜಿಎನ್‌ಆರ್‌ಇಜಿಎ)ಯಲ್ಲಿ ರೂ. ೪.೬೭ ಲಕ್ಷ ಮೌಲ್ಯದಲ್ಲಿ ರಸ್ತೆ ಅಭಿವೃದ್ಧಿ, ಶಾಲಾ ಮೈದಾನ, ಅಂಗನವಾಡಿಗಳಿಗೆ ಆವರಣ ಗೋಡೆ ನಿರ್ಮಿಸಲಾಗಿದೆ. ಪ.ಜಾತಿ ಮತ್ತು ಪ.ವರ್ಗಗಳ ಜಮೀನು ಅಭಿವೃದ್ಧಿಗೆ ಉದ್ಯೋಗ ಖಾತರಿಯಡಿ ರೂ. ೭೦,೫೨೯ ಮೊತ್ತವನ್ನು ವ್ಯಯಿಸಲಾಗಿದೆ. ಇದಲ್ಲದೆ ಬಿಪಿಎಲ್ ಕುಟುಂಬಗಳ ಜಮೀನು ಅಭಿವೃದ್ಧಿಗೆ ರೂ. ೨,೬೦,೮೭೫ ಖರ್ಚು ಮಾಡಲಾಗಿದೆ.

“ಸಂಪನ್ಮೂಲವಿದ್ದರೆ ಮಾತ್ರ ಗ್ರಾ.ಪಂ. ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಮಾನ ಪ್ರಗತಿ ಸಾಧಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ವ್ಯಾಪಾರ ವಹಿವಾಟಿನ ಶುಲ್ಕವನ್ನು ಪರಿಷ್ಕರಿಸಿ ಬೇಡಿಕೆ ರೂ. ೩೭ ಸಾವಿರಗಳಿಂದ ೮೭ ಸಾವಿರಕ್ಕೆ ಹೆಚ್ಚಿಸಲಾಗಿದೆ. ಗ್ರಾ.ಪಂ. ೧೦ ಅಂಗಡಿ ಕೊಠಡಿಗಳನ್ನು ಹೊಂದಿದ್ದು ವಾರ್ಷಿಕ ರೂ. ೩೫,೦೦೦ ಆದಾಯ ಬರುತ್ತಿದೆ” ಎನ್ನುತ್ತಾರೆ ರತ್ನಾ.

ಮನವೊಲಿಕೆ ಯಶಸ್ವಿ

ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ನಾಗರಿಕರನ್ನು ಮುಖತಃ ಭೇಟಿಯಾಗಿ ಮನವೊಲಿಸಿದ ರತ್ನಾರವರ ಪ್ರಯತ್ನ ಇಲ್ಲಿ ಫಲ ನೀಡಿದೆ. ೨೦೦೯-೧೦ನೇ ಸಾಲಿಗೆ ನೀರಿನ ಶುಲ್ಕದ ಬಾಬ್ತು ಬೇಡಿಕೆ ರೂ. ೨.೨೫ ಲಕ್ಷ ಇದ್ದು, ೨,೦೫,೮೫೫ ರೂ. ಸಂಗ್ರಹವಾಗಿತ್ತು. ೨೦೧೦-೧೧ನೇ ಸಾಲಿನ ಬೇಡಿಕೆ ರೂ. ೩ ಲಕ್ಷ. ವಸೂಲಿ ಹಿಂದಿನ ಬಾಕಿ ಸೇರಿ ೩,೧೨,೬೬೫. ಪ್ರಸಕ್ತ ಸಾಲಿನಲ್ಲಿ ರೂ. ೩.೦೫ ಲಕ್ಷ ಬೇಡಿಕೆ ಇದ್ದು, ಈಗಾಗಲೇ ರೂ. ೪೯,೮೬೫ ಸಂಗ್ರಹವಾಗಿದೆ.

೨೦೦೯-೧೦ನೇ ಸಾಲಿನಲ್ಲಿ ಗ್ರಾ.ಪಂ.ನ ತೆರಿಗೆ ಬಾಬ್ತುನ ಬೇಡಿಕೆ ರೂ. ೧,೮೫,೫೨೫ ವಸೂಲಿ ರೂ. ೧,೬೦,೩೨೫. ೨೦೧೦-೧೧ನೇ ಸಾಲಿನ ಬೇಡಿಕೆ ರೂ. ೨,೩೦,೧೭೦ ಆಗಿದ್ದು, ರೂ. ೨,೩೬,೪೭೫ ವಸೂಲಿಯಾಗಿದೆ. ೨೦೧೧-೧೨ನೇ ಸಾಲಿನ ಬೇಡಿಕೆ ರೂ. ೨,೩೭,೮೩೦ ಆಗಿದ್ದು, ಜೂನ್ ೧೦ರ ಅಂತ್ಯಕ್ಕೆ ರೂ. ೧೮,೫೧೦ ವಸೂಲಾಗಿದೆ.

ಶಿಕ್ಷಣ

ಗ್ರಾ.ಪಂ. ವ್ಯಾಪ್ತಿಯಲ್ಲಿ ೩ ಕಿರಿಯ ಪ್ರಾಥಮಿಕ ಶಾಲೆಗಳು, ೧ ಹಿರಿಯ ಪ್ರಾಥಮಿಕ ಶಾಲೆ ಮತ್ತೊಂದು ಪ್ರೌಢಶಾಲೆ ಇದೆ. ೧೦ ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ ೭೬೩ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆ ಪೈಕಿ ೩೯೭ ಬಾಲಕಿಯರು. ಎಲ್ಲಾ ಶಾಲೆಗಳು, ಅಂಗನವಾಡಿಗಳು ಉತ್ತಮ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಹೊಂದಿವೆ. ೯ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದ್ದು ವಿದ್ಯುತ್ ಸಂಪರ್ಕವನ್ನು ಹೊಂದಿವೆ. ೫ ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ.

೫ ವರ್ಷದ ಹಿಂದೆ ಇಬ್ಬರು ೬ರಿಂದ ೧೪ ವರ್ಷ ವಯೋಮಿತಿಯ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಈಗ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿದಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯ ೪೦ ವರ್ಷ ವಯೋಮಿತಿಯೊಳಗಿನ ಎಲ್ಲರೂ ಸಾಕ್ಷರರು. ಗ್ರಾ.ಪಂ. ಸರಾಸರಿ ಸಾಕ್ಷರತಾ ಪ್ರಮಾಣ ಶೇ. ೯೦ ದಾಟಿದೆ. ಪ.ಜಾತಿ/ಪಂಗಡದ ಹೆಮ್ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶೇ. ೨೫ರ ನಿಧಿಯಲ್ಲಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.

ನೈರ್ಮಲ್ಯ ಮತ್ತು ಆರೋಗ್ಯ

ಇಡ್ಕಿದು ಗ್ರಾಮ ಪಂಚಾಯತ್ ಆರೋಗ್ಯ ಕಾರ್‍ಯಕ್ರಮಗಳಿಗೆ ವಿಶೇಷ ಒತ್ತು ನೀಡಿದೆ. ಕಳೆದ ೧೬ ವರ್ಷಗಳಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಈ ಸಾಲಿನ ರೇಬಿಸ್ ನಿರೋಧಕ ಲಸಿಕಾ ಆಂದೋಲನ ಫೆ. ೧೦ರಂದು ನಡೆದಿದೆ. ಹಸುಗಳಿಗೆ ಕಾಲುಬಾಯಿ ನಿರೋಧಕ ಚುಚ್ಚುಮದ್ದನ್ನು ಕೂಡಾ ಇದೇ ವೇಳೆ ಉಚಿತವಾಗಿ ನೀಡಲಾಗುತ್ತಿದೆ. ಆರೋಗ್ಯ ತಪಾಸಣಾ ಶಿಬಿರಗಳು, ನೇತ್ರ ಚಿಕಿತ್ಸಾ ಶಿಬಿರ, ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಕಾರ್‍ಯಕ್ರಮಗಳನ್ನು ಪಂಚಾಯತ್ ತನ್ನ ವ್ಯಾಪ್ತಿಯ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಸಿಕೊಂಡು ಬರುತ್ತಿದೆ.

ಸಂಪೂರ್ಣ ಸ್ವಚ್ಛತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಇಡ್ಕಿದು ಗ್ರಾ.ಪಂ. ೨೦೦೮ರಲ್ಲಿ `ನಿರ್ಮಲ ಗ್ರಾಮ’ ಪುರಸ್ಕಾರ ಪಡೆದಿದೆ. ಸಂಪೂರ್ಣ ಸ್ವಚ್ಛತಾ ಆಂದೋಲನ ಆರಂಭದ ದಿನಗಳಲ್ಲಿ ಶೌಚಾಲಯ ರಹಿತ ಕುಟುಂಬಗಳ ಸಂಖ್ಯೆ ೩೬೦. ಆ ಪೈಕಿ ೨೧೬ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನವುಗಳಾಗಿದ್ದವು. ಗ್ರಾ.ಪಂ. ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮದ ಜನತೆಯ ಸಹಕಾರದೊಂದಿಗೆ ಎಲ್ಲಾ ಕುಟುಂಬಗಳು ಶೌಚಾಲಯ ಹೊಂದಲು ಯಶಸ್ವಿಯಾಗಿದೆ.

`ಪ್ಲಾಸ್ಟಿಕ್ ಹೆಕ್ಕಿಕೋ’ ಆಂದೋಲನ, ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಮತ್ತು ಜನತೆಯ ಸಹಕಾರದಿಂದ ಯಶಸ್ವಿಯಾಗಿದ್ದು. ಪ್ಲಾಸ್ಟಿಕ್ ಬಳಕೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎನ್ನುತ್ತಾರೆ ಪಂ.ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್.

ನೀರು-ನೈರ್ಮಲ್ಯ ಸಮಿತಿ

ಗ್ರಾ.ಪಂ. ಒಂದು ಪ್ರಧಾನ ನೀರು ನೈರ್ಮಲ್ಯ ಸಮಿತಿ(ವಿಡಬ್ಲ್ಯುಎಸ್)ಯನ್ನು ಹೊಂದಿದೆ. ೯ ಪ್ರದೇಶಾವಾರು ಸಮಿತಿಗಳಿವೆ. ಎಲ್ಲಾ ಸಮಿತಿಗಳಿಗೂ ಗ್ರಾ.ಪಂ. ಅಧ್ಯಕ್ಷೆ ರತ್ನಾರವರೇ ಅಧ್ಯಕ್ಷರು. ರತ್ನಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ೯ ಸಮಿತಿಗಳಿಗಿದ್ದ ಪ್ರತ್ಯೇಕ ಬ್ಯಾಂಕು ಖಾತೆಗಳನ್ನು ರದ್ದುಪಡಿಸಿ ಒಂದೇ ಖಾತೆ ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಅಪರೂಪವಾಗಿದ್ದ ವಿಡಬ್ಲ್ಯುಎಸ್ ಸಭೆಗಳು ಈಗ ೩ ತಿಂಗಳಿಗೊಮ್ಮೆ ನಿಯಮಿತವಾಗಿ ನಡೆಯುತ್ತಿವೆ. ನೀರಿನ ಶುಲ್ಕ ಸಂಗ್ರಹದಲ್ಲಿಯೂ ಏರಿಕೆಯಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್‍ಯಕ್ರಮಗಳು ಜಾರಿಯಾಗುತ್ತಿವೆ ಎನ್ನುತ್ತಾರೆ ಗ್ರಾಮಸ್ಥರಾದ ವೆಲ್ಡರ್ ವೃತ್ತಿ ಮಾಡುತ್ತಿರುವ ಕರೀಂ.

ನಿರ್ಮಲ ಪುರಸ್ಕಾರದಲ್ಲಿ ಬಂದ ನಗದು ರೂ. ೪ ಲಕ್ಷ ಮೊತ್ತದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಮತ್ತು ಒಳಚರಂಡಿ ಕಾಮಗಾರಿ ನಡೆಸುವುದಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು ಜಿಲ್ಲಾ ಪಂಚಾಯತ್‌ನಿಂದ ಇತ್ತೀಚೆಗೆ ಅನುಮೋದನೆ ಪಡೆಯಲಾಗಿದೆ.

ಕ್ಷೀರಕ್ರಾಂತಿ-ಮಹಿಳಾ ಸಬಲೀಕರಣ

ಇಡ್ಕಿದು ಗ್ರಾ.ಪಂ. ವ್ಯಾಪ್ತಿಯಲ್ಲಿ ೧,೦೦೦ ಪುರುಷರಿಗೆ ೧,೦೦೪ ಮಹಿಳಾ ಪ್ರಮಾಣವಿದೆ. ಹಿಂದೆ ಇದೇ ಗ್ರಾ.ಪಂ. ಅಧ್ಯಕ್ಷರಾಗಿದ್ದ ಕೆ.ಟಿ. ಶೈಲಜಾ ಭಟ್ ಇಂದು ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ. ೨೦೦೫-೧೦ನೇ ಸಾಲಿನ ಮೊದಲ ಅವಧಿಯಲ್ಲಿ ಭಾಗೀರಥಿ ಅಧ್ಯಕ್ಷರಾಗಿ, ಎರಡನೇ ಅವಧಿಯಲ್ಲಿ ಸುಜಾತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅಧ್ಯಕ್ಷ -ಉಪಾಧ್ಯಕ್ಷ ಎರಡೂ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದ್ದಾರೆ.

ಇಲ್ಲಿ ಒಟ್ಟು ೨೮೪ ಸ್ವಸಹಾಯ ಗುಂಪುಗಳಿವೆ. ಆ ಪೈಕಿ ೧೬೬ ಗುಂಪುಗಳು ಮಹಿಳೆಯರದ್ದಾಗಿದೆ. ಸ್ವಸಹಾಯ ಗುಂಪುಗಳ ವಾರ್ಷಿಕ ಉಳಿತಾಯ ರೂ. ೬೧ ಲಕ್ಷವಾಗಿದ್ದು, ಮಹಿಳೆಯರ ಪಾಲು ರೂ. ೩೦.೯೦ ಲಕ್ಷವಾಗಿದೆ.

ಹೈನುಗಾರಿಕೆಯಿಂದ ಶಕ್ತಿ

ಗ್ರಾ.ಪಂ. ವ್ಯಾಪ್ತಿಯಲ್ಲಿ ೩ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಇವುಗಳಲ್ಲಿ ೨೫೦ ಸದಸ್ಯರಿದ್ದಾರೆ. ಇವರ ಪೈಕಿ ಬಹಳಷ್ಟು ಮಂದಿ ಮಹಿಳೆಯರು ಹಾಗೂ ಹಾಲು ಉತ್ಪಾದನೆಯ ಹಿಂದಿನ ಶ್ರಮವೆಲ್ಲ ಇವರದ್ದೇ ಆಗಿದೆ. ದಿನವೊಂದರ ೧,೬೦೦ ಲೀಟರ್‌ನಿಂದ ೧,೮೦೦ ಲೀ. ಹಾಲು ಸಹಕಾರ ಸಂಘಕ್ಕೆ ಪೂರೈಕೆಯಾಗುತ್ತಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸಿದೆ.

“ಹೈನುಗಾರಿಕೆಯಲ್ಲಿ ಯಾವುದೇ ನಷ್ಟವಿಲ್ಲ. ಆಳುಗಳನ್ನು ನೇಮಿಸದೇ ಕುಟುಂಬದ ಸದಸ್ಯರೇ ಕೆಲಸ ಮಾಡಿದರೆ ಲಾಭಾಂಶ ಜಾಸ್ತಿ. ಹಾಲು ಹೊರಗಿನಿಂದ ತರಬೇಕಾಗಿಲ್ಲ. ಗೋಬರ್ ಗ್ಯಾಸ್ ಸ್ಥಾವರದಿಂದ ಅಡುಗೆ ಅನಿಲ ಲಭ್ಯ. ಗೊಬ್ಬರ ಕೃಷಿಗೆ ಬಳಕೆಯಾಗುತ್ತಿದೆ”. ಇದು ೨೫ ವರ್ಷಗಳಿಂದ ಹೈನುಗಾರಿಕೆಯಲ್ಲಿ ಸಂತೃಪ್ತಿ ಕಂಡಿರುವ ಉರಿಮಜಲಿನ ತೆರೆಸಾ ಪಾಯಸ್ ಅವರ ಅನುಭವದ ನುಡಿಗಳಾಗಿವೆ.

ಸಾಮಾಜಿಕ ಕಾರ್‍ಯಕರ್ತ ಮತ್ತು ಪಶು ವೈದ್ಯಾಕಾರಿ ಡಾ| ಕೃಷ್ಣ ಭಟ್ ಹೇಳುವಂತೆ, ಹೈನುಗಾರಿಕೆ ಇಲ್ಲಿಯ ಮಹಿಳೆಯರಿಗೆ ದೊಡ್ಡ ಶಕ್ತಿ ನೀಡಿದೆ ಮತ್ತು ಅವರ ಶ್ರಮವೇ ಕ್ಷೀರಕ್ರಾಂತಿಗೆ ಕಾರಣವಾಗಿದೆ. “ಹಸು, ಕರುಗಳಿಗೆ ಅನಾರೋಗ್ಯವಿದ್ದರೆ ಫೋನ್ ಕರೆ ಮಾಡುವವರಲ್ಲಿ ಮಹಿಳೆಯರೇ ಅಧಿಕ. ಅವರು ತಮ್ಮ ಮನೆ ಮಂದಿಯೊಂದಿಗೆ ಹಾಲು ಉತ್ಪಾದನೆಯಲ್ಲಿ ಒಂದಾಗಿ ಸೇರಿ ಹೋಗಿದ್ದಾರೆ. ಸೊಸೈಟಿಗೆ ಹಾಲು ತರುವವರು ಮಾತ್ರ ಪುರುಷರು” ಎಂದು ಭಟ್ ಹೇಳತ್ತಾರೆ.

ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘ ಗ್ರಾಮಾಭಿವೃದ್ಧಿಗಾಗಿ ೧೨ ಸೂತ್ರಗಳನ್ನು ಕೈಗೊಂಡಿದೆ. ಗ್ರಾ.ಪಂ. ಆ ಸೂತ್ರಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದೆ. ಈಗಿನ ಅಧ್ಯಕ್ಷೆ ಶಿಕ್ಷಣ ಪಡೆದವರಾಗಿದ್ದಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅವರಲ್ಲಿದೆ ಎನ್ನುತ್ತಾರವರು.

ಎಸ್‌ಜಿಎಸ್‌ವೈ

ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ (ಎಸ್‌ಜಿಎಸ್‌ವೈ)ಯಡಿಯಲ್ಲಿ ಗ್ರಾ.ಪಂ. ಅನೇಕ ಮಹಿಳೆಯರಿಗೆ ಹೈನುಗಾರಿಕೆ, ಮಲ್ಲಿಗೆ ಕೃಷಿ, ಹೊಲಿಗೆ ತರಬೇತಿ, ಕೋಳಿ ಸಾಕಣೆ ಮೊದಲಾದ ಸ್ವ ಉದ್ಯೋಗ ನಡೆಸಲು ತರಬೇತಿ ನೀಡಿರುವುದಲ್ಲದೆ, ಸಹಾಯಧನ ಒದಗಿಸಲಾಗಿದೆ. ಇಂದು ಇದರಿಂದ ಅನೇಕರು ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

೨ ವರ್ಷಗಳಲ್ಲಿ ಎಸ್‌ಜಿಎಸ್‌ವೈಯಲ್ಲಿ ರೂ. ೨೨ ಲಕ್ಷ ಗ್ರಾ.ಪಂ.ಗೆ ಲಭಿಸಿದ್ದು ಅವುಗಳನ್ನು ಸಂಪೂರ್ಣವಾಗಿ ವ್ಯಯಿಸಲಾಗಿದೆ. ಸ್ವ ಸಹಾಯ ಸಂಘಗಳ ೨೩೦ ಸದಸ್ಯರು ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಹೇಳುತ್ತಾರೆ.

ಜಲ ಸಾಕ್ಷರತೆ

ಜಲ ಸಾಕ್ಷರತೆಗೆ ನಿಜಾರ್ಥ ತಂದು ಕೊಟ್ಟ ಗ್ರಾ.ಪಂ.ಗಳ ಪೈಕಿ ಇಡ್ಕಿದುಗೆ ಮೊದಲ ಸ್ಥಾನ ಸಲ್ಲಬೇಕು. ಒಂದೂವರೆ ದಶಕಗಳ ಹಿಂದೆಯೇ ಮಳೆಕೊಯ್ಲು, ನೀರಿಂಗಿಸುವಿಕೆ, ಕಟ್ಟಗಳ ಕುರಿತು ಆಸಕ್ತಿ ವಹಿಸಿ ಕಾರ್‍ಯೋನ್ಮುಖರಾದ ಜನತೆ ಇಂದಿಗೂ ಅದೇ ಮಾದರಿಯಲ್ಲಿ ಮುಂದುವರಿದಿದ್ದಾರೆ. ಶಾಲೆ, ಮನೆಗಳು ಸರಕಾರಿ ಕಟ್ಟಡಗಳು ಮಾತ್ರವಲ್ಲದೆ ಆರಾಧನಾ ಕೇಂದ್ರಗಳಲ್ಲೂ ಜಲ ಮರುಪೂರಣದ ಪ್ರಯೋಗಗಳು ಯಶಸ್ವಿಯಾಗಿ ನಡೆದಿದ್ದು, ಇಂದಿಗೂ ಜೀವಂತವಾಗಿವೆ.

ನೀರಿಂಗಿಸುವಿಕೆ, ಔಷಯ ವನ, ಗ್ರಾಮ ತೋಟ ಮತ್ತು ಗ್ರಾಮಾಭಿವೃದ್ಧಿ ಚರ್ಚಾ ಕೂಟಗಳ ಮೂಲಕ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ನಾಡಿನ ಗಮನ ಸೆಳೆದಿದೆ.

ಇಡ್ಕಿದು ಗ್ರಾಮದ ನೀರಿನ ಬಗೆಗಿನ ಎಚ್ಚರಿಕೆ ಅತ್ಯಂತ ಮಾದರಿಯಾದುದು. ನೀರಿಂಗಿಸುವಿಕೆಯಲ್ಲಿ ಇಲ್ಲಿನ ಸಮುದಾಯದ ಭಾಗವಹಿಸುವಿಕೆ ವಿಶ್ವದ ಗಮನ ಸೆಳೆದಿದೆ. ಇತರೆಡೆಗಳಿಗೆ ಪ್ರೇರಣೆಯಾಗಬಲ್ಲ ಪ್ರಯತ್ನಗಳು ನಡೆದಿವೆ. ಜಲ ಸಾಕ್ಷರತೆ, ಸಾವಯವ ಕೃಷಿ, ರೇಬಿಸ್ ನಿರ್ಮೂಲನ, ಹೈನುಗಾರಿಕೆಯ ಮೂಲಕ ಇಡ್ಕಿದು ಮಿಕ್ಕೆಲ್ಲಾ ಗ್ರಾ.ಪಂ.ಗಳಿಗಿಂತ ಭಿನ್ನವಾಗಿ ಗುರುತಿಸಲ್ಪಡುತ್ತದೆ ಎನ್ನುತ್ತಾರೆ ಜಲತಜ್ಞ ಶ್ರೀ ಪಡ್ರೆ.

ಸೌಕರ್ಯಕ್ಕೆ ಒತ್ತು

ರತ್ನಾ ಅವರೊಂದಿಗೆ ಐದು ವರ್ಷಗಳ ಕಾಲ ಗ್ರಾ.ಪಂ. ಸದಸ್ಯರಾಗಿ ಒಡನಾಟದಲ್ಲಿದ್ದ ಅಳಕೆಮಜಲಿನ ಸೆಫಿಯಾರವರ ಪ್ರಕಾರ, ರತ್ನಾ ತುಂಬ ಒಳ್ಳೆಯ ಮೆಂಬರ್, ಅವರು ನೈರ್ಮಲ್ಯ ಕಾರ್‍ಯಕ್ರಮಗಳು, ಹೆಮ್ಮಕ್ಕಳ ಶಿಕ್ಷಣ, ಮೂಲಭೂತ ಸೌಕರ್‍ಯಗಳ ಬಗ್ಗೆ ಮುನ್ನೋಟ ಹೊಂದಿದ್ದಾರೆ.

ಪಾರದರ್ಶಕ ಆಡಳಿತ

ಇಲ್ಲಿಯ ಸಾಕ್ಷರತಾ ಪ್ರಮಾಣ, ಮಹಿಳಾ ಸಬಲೀಕರಣ, ಜಲ ಸಾಕ್ಷರತೆ, ಆರೋಗ್ಯ ಕಾರ್‍ಯಕ್ರಮಗಳು ಗ್ರಾಮ ಪಂಚಾಯತ್ ಆಡಳಿತ ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿದೆ ಎಂಬುದನ್ನು ಪ್ರತಿಫಲಿಸುತ್ತದೆ. ಇಲ್ಲಿ ಪ್ರತೀ ತಿಂಗಳು ಸಾಮಾನ್ಯ ಸಭೆ ನಡೆಯುತ್ತಿದೆ. ಸದಸ್ಯರ ಹಾಜರಾತಿ ಬಹುತೇಕ ಶೇ. ೧೦೦. ಗ್ರಾಮ ಸಭೆ, ಜಮಾಬಂದಿಗೆ ಮತದಾರರ ಪ್ರತಿಕ್ರಿಯೆ ಉತ್ತಮವಾಗಿವೆ. ಉಪಸಮಿತಿಗಳು ಸಕ್ರಿಯವಾಗಿವೆ. ಎಲ್ಲಾ ರೀತಿಯ ಸಭೆಗಳಿಗೆ ಅಧ್ಯಕ್ಷರ ಹಾಜರಾತಿ ೧೦೦ ಶೇ. ಎಂಬುದನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಖಚಿತ ಪಡಿಸುತ್ತಾರೆ.

೨೦೦೫-೧೦ರ ಸಾಲಿನಲ್ಲಿ ೪೪ ಮಾಸಿಕ ಸಭೆಗಳು ನಡೆದು, ೪೧ ಸಭೆಗಳಲ್ಲಿ ರತ್ನಾ ಪಾಲ್ಗೊಂಡಿದ್ದಾರೆ. ಆ ಸಾಲಿನ ಎಲ್ಲಾ ಆರು ವಿಶೇಷ ಸಭೆಗಳಲ್ಲಿ ರತ್ನಾರವರ ಹಾಜರಾತಿಯಿದೆ. ೨೦೧೦-೧೧ನೇ ಸಾಲು ೨೩.೬.೨೦೧೦ರಿಂದ ಪ್ರಾರಂಭವಾಗಿದೆ. ಈಗಾಗಲೇ ೮ ಸಾಮಾನ್ಯ ಸಭೆಗಳು, ೩ ವಿಶೇಷ ಸಭೆಗಳು ಜರುಗಿದ್ದು, ಅಧ್ಯಕ್ಷೆ ರತ್ನಾ ಎಲ್ಲಾ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ವಿಡಬ್ಲ್ಯುಎಸ್ ಸಭೆಗಳಲ್ಲೂ ಅಧ್ಯಕ್ಷೆ ರತ್ನಾ ಶೇ. ೧೦೦ ಹಾಜರಾತಿ ಕಾಯ್ದುಕೊಂಡಿದ್ದಾರೆ.

ಮದಕಕ್ಕೆ ಕಾಯಕಲ್ಪ ಬೇಕು

ಉದ್ಯೋಗ ಖಾತರಿಯಡಿ ತೋಟ ನಿರ್ಮಾಣದಲ್ಲಿ ತೊಡಗಿರುವ ನಾರ್ಣ ನಲಿಕೆ ಕುಟುಂಬ

 

ಇಡ್ಕಿದು ಗ್ರಾಮದ ಏಮಾಜೆಯಲ್ಲಿ ಒಂದು ಮದಕವಿದ್ದು, ಹೂಳು ತುಂಬಿದೆ. ಅದರ ಹೂಳೆತ್ತಿ ಅಭಿವೃದ್ಧಿ ಪಡಿಸಿದರೆ ಸೂರ್ಯ, ಕೋಲ್ಪೆ ಮತ್ತು ಕೆದಿಮಾರು ಭಾಗದ ಕೃಷಿ ಭೂಮಿಗೆ ನೀರು ಒದಗಿಸಬಹುದಾಗಿದೆ ಎನ್ನುತ್ತಾರೆ ಕಳೆದ ಅವಯಲ್ಲಿ ಉಪಾಧ್ಯಕ್ಷರಾಗಿದ್ದು ಪ್ರಸ್ತುತ ಸದಸ್ಯರಾಗಿರುವ ಸುಧೀರ್ ಕುಮಾರ್.

ಕುಳ ಗ್ರಾಮದ ೫ ಅಂಗನವಾಡಿಗಳಿಗೆ ಅಡುಗೆ ಅನಿಲದ ಸಂಪರ್ಕ, ಇಡ್ಕಿದು ಗ್ರಾಮದ ಮಿತ್ತೂರು ಬರೆ ಎಂಬಲ್ಲಿ ಅಪಾಯ ದಂಚಿನಲ್ಲಿರುವ ೫ ಮನೆಗಳ ಸಂರಕ್ಷಣೆಗಾಗಿ ತಡೆಗೋಡೆ, ಕಬಕ- ಓಜಾಲ- ಕುಂಡಡ್ಕ ಸಂಪರ್ಕ ರಸ್ತೆ, ಉರಿಮಜಲು- ದೇವಸ್ಯ- ಕೋಲ್ಪೆ- ಮಿತ್ತೂರು ಕೂಡುರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ನೀರಿಂಗಿಸುವಿಕೆ, ಗೋಬರ್ ಗ್ಯಾಸ್ ಸ್ಥಾವರ ನಿರ್ಮಾಣ ಹೆಚ್ಚಳವಾಗಬೇಕು ಎಂಬುದು ಸುಧೀರ್‌ರವರ ಆಶಯ.

ಇಡ್ಕಿದು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ತಂಡವಾಗಿ ಗ್ರಾಮಾಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದು, ಜನತೆ ಇನ್ನಷ್ಟು ಪ್ರೋತ್ಸಾಹಿಸುವ ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆಯ ಬೇರುಗಳನ್ನು ಬಲಪಡಿಸಬಹುದು ಮತ್ತು ಗ್ರಾಮಾಭಿವೃದ್ಧಿಯನ್ನು ಸಾಸಬಹುದು ಎಂಬುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಲ್ಲಿಕಾರವರ ಅನಿಸಿಕೆಯಾಗಿದೆ.

ಹೊಗೆ ರಹಿತ ಗ್ರಾ.ಪಂ.ನತ್ತ….

ಹೈನುಗಾರಿಕೆ ನಿರತರ ಪೈಕಿ ನೂರಕ್ಕೂ ಅಧಿಕ ಕುಟುಂಬಗಳು ಗೋಬರ್ ಗ್ಯಾಸ್ ಸ್ಥಾವರ ಹೊಂದಿವೆ. ಅಡುಗೆ ಅನಿಲ ಸಂಪರ್ಕ ಪಡೆದ ಕುಟುಂಬಗಳ ಸಂಖ್ಯೆ ಮುನ್ನೂರನ್ನು ದಾಟಿದೆ. ೫ ಅಂಗನವಾಡಿಗಳು ಅಡುಗೆ ಅನಿಲದ ಸಂಪರ್ಕ ಹೊಂದಿವೆ.

ಹೊಗೆ ರಹಿತ ಗ್ರಾ.ಪಂ. ಕಲ್ಪನೆ ಅಧ್ಯಕ್ಷರ ಮನದಲ್ಲಿ ಸುಳಿದಾಡತೊಡಗಿದೆ. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಹಾಗೂ ಗ್ರಾಮದ ಜನತೆಯ ಸಹಕಾರದೊಂದಿಗೆ ಯೋಜನೆಯನ್ನು ಜಾರಿಗೆ ತರುವ ಆಸಕ್ತಿಯನ್ನು ರತ್ನಾರವರು ಹೊಂದಿದ್ದಾರೆ.

ಶಿಶು ಮರಣವಿಲ್ಲ

೨೦೦೮ರ ಏಪ್ರಿಲ್ ೧ರಿಂದ ೨೦೧೧ರ ಮಾರ್ಚ್ ೩೧ರ ವರೆಗೆ ೩ ವರ್ಷಗಳ ಅವಯಲ್ಲಿ ೩೧೭ ಶಿಶುಗಳು ಇಲ್ಲಿ ಜನ್ಮತಾಳಿವೆ. ಶಿಶು ಮರಣ, ಬಾಣಂತಿ ಮರಣ ಪ್ರಕರಣಗಳು ಸಂಭವಿಸಿಲ್ಲ ಎಂಬುದನ್ನು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಕಾರಿ ಡಾ. ರಾಮಕೃಷ್ಣ ದೃಢೀಕರಿಸಿದ್ದಾರೆ. ಕಳೆದ ೩ ವರ್ಷಗಳ ಅವಧಿಯಲ್ಲಿ ಕೇವಲ ೩ ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು (ಸಾವು ಸಂಭವಿಸಿಲ್ಲ), ಇತರ ಯಾವುದೇ ಸಾಂಕ್ರಾಮಿಕ ರೋಗಗಳು ಇಡ್ಕಿದುನಿಂದ ವರದಿಯಾಗಿಲ್ಲ.

ಗ್ರಾಮಾಭಿವೃದ್ಧಿಗೆ ೧೨ ಸೂತ್ರಗಳು

ಇಡ್ಕಿದು ಸೇವಾ ಸಹಕಾರಿ ಸಂಘವು ಗ್ರಾಮ ಸ್ವರಾಜ್ಯ, ಸ್ವಾವಲಂಬನೆ ಮತ್ತು ಗ್ರಾಮಾಭಿವೃದ್ಧಿಗಾಗಿ ೧೨ ಸೂತ್ರಗಳನ್ನು ರೂಪಿಸಿದೆ. ಆ ಸೂತ್ರಗಳನ್ನು ಗ್ರಾ.ಪಂ.ಆಡಳಿತ ಮಂಡಳಿ ಪೋಷಿಸುತ್ತಾ ಬಂದಿದೆ. ಅವುಗಳೆಂದರೆ,

ಜಲ ಸುರಕ್ಷತೆಗೆ ಜನ ಚಿಂತನೆ, ಮಿಶ್ರ ಕೃಷಿ, ಮನೆ ಬಳಕೆಗೆ ಬಾವಿ ನೀರು, ಔಷಧೀಯ ಸಸ್ಯಗಳನ್ನು ಬೆಳೆಸುವುದು, ಅಡುಗೆ ಮನೆಗೆ ಬಯೋಗ್ಯಾಸ್, ಸೌರ ವಿದ್ಯುತ್ ಬಳಕೆ, ಆಹಾರ-ತರಕಾರಿ ಸ್ವಾವಲಂಬನೆ, ದೇಶಿ ಗೋವು ತಳಿಗಳ ಪೋಷಣೆ, ದಿನಬಳಕೆ ವಸ್ತುಗಳ ತಯಾರಿ, ದುಶ್ಚಟಗಳಿಂದ ದೂರ. ಇವುಗಳಿಗೆಲ್ಲಾ ಪೂರಕ ವಾತಾವರಣಕ್ಕಾಗಿ ಸಾಮರಸ್ಯ.

ವಿಸ್ತೀರ್ಣ ಮತ್ತು ಜನಸಂಖ್ಯೆ

  • ಇಡ್ಕಿದು ಗ್ರಾಮ ಪಂಚಾಯತ್ ಕುಳ ಮತ್ತು ಇಡ್ಕಿದು ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ.
  • ವಿಸ್ತೀರ್ಣ: ಇಡ್ಕಿದು-೨೦೯೪.೬೪ ಎಕರೆ, ಕುಳ-೧೩೪೯.೬೦ ಎಕರೆ
  • ಕುಟುಂಬಗಳು: ೧,೭೦೦. ಬಿಪಿಎಲ್ : ೭೦೫, ಪ.ಜಾ.: ೪೬, ಬಿಪಿಎಲ್: ೪೨, ಪ.ವರ್ಗ: ೪೩, ಬಿಪಿಎಲ್: ೩೫.
  • ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದೇ ಒಂದು ಕೊರಗ ಕುಟುಂಬವನ್ನು ಖಾತರಿ ಯೋಜನೆಗೆ ಒಳಪಡಿಸಲಾಗಿದೆ
  • ಒಟ್ಟು ಜನಸಂಖ್ಯೆ: ೭೨೧೮. ಪುರುಷರು: ೩೬೦೨. ಮಹಿಳೆಯರು: ೩೬೧೬. (ಸಾವಿರ ಪುರುಷರಿಗೆ ಮಹಿಳೆಯರ ಪ್ರಮಾಣ ೧೦೦೩.೮೮ ಆಗಿದೆ.)

೧. ಮುಂದುವರಿಕಾ ಶಿಕ್ಷಣ ಕೇಂದ್ರದಲ್ಲಿ ಪ್ರೇರಕಿಯಾಗಿದ್ದ ಶ್ರೀಮತಿ ರತ್ನಾ , ಪ್ರಸ್ತುತ ಇಡ್ಕಿದು ಗ್ರಾ.ಪಂ. ಪ್ರಥಮ ಪ್ರಜೆ.

೨. ಸಂಪನ್ಮೂಲವಿದ್ದರೆ ಮಾತ್ರ ಆಡಳಿತದಲ್ಲಿ ಸುಧಾರಣೆ ಮತ್ತು ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ.

೩. ಹದಿನಾರು ವರ್ಷಗಳಿಂದ ಇಡ್ಕಿದು ವ್ಯಾಪ್ತಿಯ ಎಲ್ಲಾ ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು  ನೀಡಲಾಗುತ್ತಿದೆ.

೪. ಜಲಸಾಕ್ಷರತೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಗ್ರಾಮ ಪಂಚಾಯತ್

೫. ಗ್ರಾ.ಪಂ. ಆಡಳಿತ ಮಂಡಳಿಯು ಪ್ರತಿಯೊಂದು ಸಭೆಯಲ್ಲೂ ಅತ್ಯುತ್ತಮ ಹಾಜರಾತಿ ಕಾಯ್ದುಕೊಂಡಿದೆ.

॒॒॒॒॒॒॒॒॒॒॒॒॒॒॒॒॒॒॒

ನೋಡಲು ಎಂಥ ಸರಳ ವರದಿ, ಇದರಲ್ಲೇನು  ವಿಶೇಷ ಅನ್ನಿಸಬಹುದು…. ಆದರೆ ಈ ವರದಿಯ ಸರಳತೆಯೇ ವಿಶೇಷ. ಈ ವರದಿಯನ್ನು ರೂಪಿಸಲು ಬಾಳೇಪುಣಿಯವರಿಗೆ ಬರೋಬ್ಬರಿ ಆರು ದಿನಗಳ ಕಾಲಾವಧಿ ಹಿಡಿಯಿತಂತೆ…  ಅದಿರಲಿ, ಇಡ್ಕಿದು ಗ್ರಾಮ ಪಂಚಾಯತಿಗೂ ಶುಭಾಶಯ ಹೇಳೋಣ… ಅಭ್ಯುದಯ ಕಂಡಿದ್ದಕ್ಕೇ ವರದಿಯಾಗಿದೆ ಅಲ್ಲವೆ? ಬಾಳೇಪುಣಿಯೇನೂ ಸ್ವಂತ ಸೃಷ್ಟಿ ಮಾಡಿಲ್ಲ!! ಅದು ಬಾಳೇಪುಣಿಗೂ ಸ್ಪಷ್ಟವಾಗಿ ಅರಿವಿದೆ.
ಬಾಳೇಪುಣಿ ಸ್ವಪರಿಚಯ ಇಲ್ಲಿದೆ. ಓದಿ. ಅವರಿಗೆ ಶುಭಾಶಯ ಹೇಳಲು ಮರೆಯಬೇಡಿ.

Name                   :    Guruvappa N.T. Balepuni

S/o. Aitha Mogera,

Narya-Thachcha Majal House,

Post Balepuni

Bantwal Taluk,

Dakshina Kannada-574 153

 

Date of birth       :    01/06/1963

 

Office address   :    Senior Reporter

Hosa Digantha Kannada Daily

Rashtrakavi Govinda Pai Circle

City Point, 4th Floor,

Kodialbail, Mangalore-575 003.

Mobile: 9448889268

E-mail: balepuni@gmail.com

Educational Qualification:

B.A. (N.C)-1985, Joint to Journalism Field-1986

Work experience:

Worked in various local media houses like Chetana Weekly, Suddi Bidugade Weekly, Amrutha Weekly, Saptasaara Weekly, Canara Times group (Canara Times, Karavali Ale, Kannada Janantaranga) Mangalore Mithra, Samyuktha karanataka, various place of Dakshina Kannada district (Sullia, Mangalore, Bantwal), Udupi District, Hubli City and Bangalore City.

Some important Reports:

1) Udupi Land Scam : investigative report

2) Bhaskar Nair Jail escape: precautionary report

3) Feature on Social worker Hajabba who later became KANNADAPRABHA MAN OF THE YEAR

4) Mysore Public School issue

5) Doctorate degree awardee: Babu in Koraga Community

6) In the weaving field Surekha is the first tribal girl.

7) Literacy movement achievers Ilanthila Sumathi, Swarnalatha Kaukrady (best SHG promoter)

8) Exposing the scams in the Tribal welfare projects

9) Mahabaleshwara Bhat (best achiever of Sericulture in the coastal region)

10) Rare project by rural ladies at Laila (Sanitary Napkin unit)

11) Special Housing Schemes for Koragas (tribals in the DK)

12) MGNREGA related series of report.

13) Reports about Grama Sabhas and different Zilla panchayaths schemes.

14) Total sanitation programmes : Development report on Ira GP, Naringana GP and Hosangadi GPs

15) Model in MGNREGA implementation about Kashipatna GP

Impacts:

1) The feature on social worker Hajabba took him to National level ; he was invited for governor’s tea-party on the occasion of republic day. Various individuals and institutions supported them to come up in the society. He was the founder of Government higher primary school in Newpadpu near Mangalore University, with the assistance of Rs 20,00,000 support from public and institutions. He was recognized by popular Kannada daily Kannada Prabha year award, CNN IBN year award and other prestigious awards.

2) Udupi Land Scam, criminal case against 11 persons by Karnataka CoD 1995.

3) Within a week of publishing an investigative report of notorious counterfeit Bhaskar Nair escapes from Mangalore Sub-jail on 26/6/1999. The report was highlighted in the Karnataka Assembly.

4) Exposure report of ITDP scam resulted in suspension of three officials and also ordered for investigation. One of the culprit is under the criminal case.

Professional guidance:

For the last 10 years, have introduced more than 30 students into Journalism by training them. Many of them now work in the various print and visual media houses. Few are working in the educational institutions and one of them working in an institution as Journalism Head of the Department.

Other interests

Rural development and Panchayat Raj, Tribal Welfare, Women empowerment, Folk and Literacy Movement.

—

ಬೇಳೂರು ಸುದರ್ಶನ
ದೂರವಾಣಿ: ೯೭೪೧೯೭೬೭೮೯

Share. Facebook Twitter Pinterest LinkedIn Tumblr Email
Previous ArticleSUPREME COURT BANS MINING IN BELLARY DISTRICT
Next Article ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

1 Comment

  1. Pingback: ಸುದ್ದಿಮನೆ ಮುಖ್ಯಾಂಶಗಳು – 28 ಸೆ. « ಕಾಲಂ9 * column9 * Kannada media

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.