Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
ಲೇಖನಗಳು

ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 3, 2016Updated:May 19, 2025No Comments12 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಕನ್ನಡ ಸಾಹಿತ್ಯ ಪರಿಷತ್ತಿನ ೮೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಲು ಅವಕಾಶ ಆಡಿಕೊಟ್ಟ ಸಂಸ್ಥೆಯ ಅಧ್ಯಕ್ಷ  ಡಾ|| ಮನು ಬಳಿಗಾರ್‌ ಅವರಿಗೆ ನನ್ನ ವಂದನೆಗಳು.

ನನ್ನ ಈ ವಿಚಾರ ಮಂಡನೆಯಲ್ಲಿ ಮಾತೃಭಾಷೆ ಮತ್ತು ಮುಕ್ತಜ್ಞಾನ ಎಂಬ ಎರಡು ವಿಷಯಗಳಿವೆ. ಮಾತೃಭಾಷೆಯನ್ನು ನಾವು ತಾಯ್ನುಡಿ ಎಂದೂ ಕರೆಯಬಹುದು; ಪರಿಸರದ ಭಾಷೆ ಎಂಬ ವಿವರಣೆಯೂ ಇದೆ. ಕನ್ನಡದ ಉಪಭಾಷೆಯಾದ ಹವ್ಯಕ ಕನ್ನಡವನ್ನೇ ಬಾಲ್ಯದಿಂದ ಕಲಿತು, ಕನ್ನಡದಲ್ಲೇ ಪ್ರೌಢಶಾಲೆವರೆಗೆ ಓದಿದ ನಾನು ಇಂಗ್ಲಿಶ್‌ ಭಾಷೆಯನ್ನು ಕೇವಲ ಅನುಭವದಿಂದಲೇ ಕಲಿತಿದ್ದೇನೆ. ಆದರೂ ನಾನು ಇಂದಿಗೂ ಜಾಲತಾಣಗಳಲ್ಲಿ, ಸಮಾಜತಾಣಗಳಲ್ಲಿ ಕನ್ನಡವನ್ನೇ ಬಳಸುತ್ತೇನೆ.

೨೦೧೦ರಲ್ಲಿ ಕರ್ನಾಟಕ ಸರ್ಕಾರದ  ಜ್ಞಾನ ಆಯೋಗದ ಯೋಜನೆಯಾದ `ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶವನ್ನು ಒಂದು ವರ್ಷದ ಕಾಲ ಕಟ್ಟಿ ಬೆಳೆಸಿದ ಕಾಲಘಟ್ಟದಲ್ಲಿ ನಾನು ಮುಕ್ತಜ್ಞಾನದ ಅವಶ್ಯಕತೆಯನ್ನು ಮನಗಂಡೆ. ವಿಶ್ವವ್ಯಾಪಿ ಜಾಲವನ್ನು ರೂಪಿಸಿದ ಟಿಮ್‌ ಬರ್ನರ್ಸ್‌ ಲೀಯವರು ಮುಕ್ತಜ್ಞಾನದ ಬಗ್ಗೆ ಹೇಳಿದ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೆಲಸ ಮಾಡಿದೆ.

ಟಿಂ ಹೇಳಿದ ಮಾತುಗಳಿವು: “ಶಿಕ್ಷಣ ನೀಡುವವರು ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಆನ್‌ಲೈನ್‌ನಲ್ಲಿ ಬೃಹತ್ತಾದ ಮಾಹಿತಿಯ ಪೂರೈಕೆ ಮಾಡುತ್ತಾರೆ ಎಂಬ ನಿರೀಕ್ಷೆ ನನ್ನದು. ಅದರಲ್ಲೂ ಈ ಮಾಹಿತಿಗಳು ಹೆಚ್ಚಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಇರುವವರಿಗೆ ಉಚಿತವಾಗಿಯೇ ಸಿಗಬೇಕು ಎಂಬುದು ನನ್ನ ಅಪೇಕ್ಷೆ ; ಏಕೆಂದರೆ ಅವರೆಲ್ಲ ಈ ಮಾಹಿತಿಗಳನ್ನು ಬೇರೆ ವಿಧಾನದಲ್ಲಿ ಪಡೆಯುವುದು ಕಷ್ಟ.“

beluru-kasapa-speech-final-ppt-to-print

beluru-kasapa-speech-final-ppt-to-print-2

beluru-kasapa-speech-final-ppt-to-print-3

ದೇಶದಲ್ಲೇ ಅತಿದೊಡ್ಡ ಪಠ್ಯ ಆಧಾರಿತ, ಸರ್ಕಾರಿ ನೆರವಿನ ಜ್ಞಾನಕೋಶವಾಗಿ `ಕಣಜ’ವನ್ನು ರೂಪಿಸಿದ ಸಂದರ್ಭದಲ್ಲಿ ನನ್ನ ನೆರವಿಗೆ ಮೊದಲು ಬಂದವರು ರಾಷ್ಟ್ರಕವಿ ಡಾ|| ಜಿ ಎಸ್‌ ಶಿವರುದ್ರಪ್ಪನವರು. ನಿಮ್ಮ ಎಲ್ಲ ಗ್ರಂಥಗಳನ್ನೂ ಕಣಜಕ್ಕೆ ಮುಕ್ತ ಪ್ರಕಟಣೆಗೆ ಕೊಡಿ ಎಂದು ವಿನಂತಿಸಿದಾಗ ಅತ್ಯಂತ ಪ್ರೀತಿಯಿಂದ ಮತ್ತು ಸಂತೋಷದಿಂದ ತಮ್ಮೆಲ್ಲ ಕೃತಿಗಳನ್ನೂ ತಕ್ಷಣವೇ ಕೊಟ್ಟ ಜಿಎಸ್‌ಎಸ್‌ ಕನ್ನಡದಲ್ಲಿ ಮುಕ್ತಜ್ಞಾನದ ಚಳವಳಿ ಆರಂಭಿಸಿದ ಮುಂಚೂಣಿ ಚೇತನ ಎಂದು ಈ ಸಂದರ್ಭದಲ್ಲಿ ಅತ್ಯಂತ ವಿನೀತವಾಗಿ ನೆನಪಿಸಿಕೊಳ್ಳಬಯಸುತ್ತೇನೆ.  ಅವರ ಹಾದಿಯಲ್ಲೇ ಡಾ|| ಯು ಆರ್‌ ಅನಂತಮೂರ್ತಿಯವರು, ಡಾ|| ಚಂದ್ರಶೇಖರ ಕಂಬಾರರೂ ತಮ್ಮ ಕೃತಿಗಳನ್ನು ಕಣಜಕ್ಕೆ ಕೊಟ್ಟರು. ಕುವೆಂಪುರವರ ಕೃತಿಗಳನ್ನು ಅವರ ಪುತ್ರಿಯವರು ಮುಕ್ತ ಬಳಕೆಗೆ ಒದಗಿಸಿದರು. ಮುಕ್ತಜ್ಞಾನ ಚಳವಳಿಯ ಮೊದಲ ಹೆಜ್ಜೆಗಳನ್ನು ಇಟ್ಟವರು ಮೂವರು ಜ್ಞಾನಪೀಠ ಪುರಸ್ಕೃತರ ಮತ್ತು ರಾಷ್ಟ್ರಕವಿಗಳು ಎಂಬುದು ಕನ್ನಡಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೆ ಅತ್ಯಂತ ಹೆಮ್ಮೆ ತರುವ ವಿಚಾರವಾಗಿದೆ. ಇವರ ಎಲ್ಲರ ಕೃತಿಗಳೂ ಅಪಾರ ಸಂಖ್ಯೆಯಲ್ಲಿ ಮಾರಾಟವಾಗುತ್ತಲೇ ಇವೆ. ಅಂತರಜಾಲದಲ್ಲಿ ಈ ಕೃತಿಗಳನ್ನು ಪ್ರಕಟಿಸಿರುವುದರಿಂದ ತಮಗೆ ನಷ್ಟವಾಗಿದೆ ಎಂದು ಈ ಸಾಹಿತಿಗಳ ಕಡೆಯಿಂದಾಗಲೀ, ಪ್ರಕಾಶಕರ ಕಡೆಯಿಂದಾಗಲೀ ಈ ಆರು ವರ್ಷಗಳಲ್ಲಿ ಯಾವುದೇ ದೂರು ಬಂದಿಲ್ಲ.  ಅವರಂತೆಯೇ ಸುಮಾರು ಏಳುನೂರು ಕನ್ನಡ ಸಾಹಿತಿಗಳು ಕಣಜ ಜಾಲತಾಣಕ್ಕೆ ಆರು ವರ್ಷಗಳ ಹಿಂದೆಯೇ ಬೆಂಬಲ ಪ್ರಕಟಿಸಿದ್ದರು. ಆದ್ದರಿಂದ ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳನ್ನು ತೋರಿಸಿಕೊಟ್ಟ ಎರಡನೇ ರಾಜ್ಯ ಎಂಬುದು ನಮಗೆಲ್ಲರಿಗೂ ಖುಷಿ ತರುವ ಸಂಗತಿಯಾಗಿದೆ.

ಕಣಜ ಜಾಲತಾಣದ ಅನುಭವದಲ್ಲೇ ನಾನು ಈಗ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ `ಭಾರತವಾಣಿ’ ಯೋಜನೆಯ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಂದು ಒಂದು ಕನ್ನಡ ಭಾಷೆಗಾಗಿ ಕೆಲಸ ಮಾಡಿದ ನಾನು ಈಗ  ಮೊದಲ ಹಂತದಲ್ಲಿ ೧೨೧ ಭಾರತೀಯ ಭಾಷೆಗಳಲ್ಲಿ ವಿಷಯ ಸಂಗ್ರಹ ಮಾಡುವ ಗುರಿಯನ್ನು ಹೊಂದಿದ್ದೇನೆ. ಅದರಲ್ಲಿ ೫೦ ಭಾಷೆಗಳಲ್ಲಿ ಒಂದಲ್ಲ ಒಂದು ಬಗೆಯ ಪ್ರಕಟಣೆ  ಶುರುವಾಗಿದೆ. ಇನ್ನಷ್ಟು ಭಾಷೆಗಳ ಮಾಹಿತಿ ಸಂಗ್ರಹ ಭರದಿಂದ ಸಾಗಿದೆ. ಸಿರಿಗನ್ನಡದ ನೆಲೆಯಾದ ಮೈಸೂರಿನಲ್ಲಿ ಭಾರತೀಯ ಭಾಷೆಗಳ ಜ್ಞಾನಸಂಗ್ರಹ ಮತ್ತು ಮುಕ್ತ ಬಳಕೆಯ ಪ್ರಕಟಣೆ ಆಗುತ್ತಿರುವುದನ್ನು ಕಂಡರೆ ಭಾರತ ಜನನಿಯ ತನುಜಾತೆಯು ಜನನಿಗೇ ನೆರವಾಗುತ್ತಿದ್ದಾಳೆ ಎಂದೇ ಅನ್ನಿಸುತ್ತಿದೆ. ಹೆತ್ತ ತಾಯಿಗೆ ನೆರವಾಗುವ ಮಗಳು ನಮ್ಮ ಕನ್ನಡ ಮಾತೆ. ಮೈಸೂರು ವಿಶ್ವವಿದ್ಯಾಲಯ, ತುಳು, ಕೊಂಕಣಿ ಅಕಾಡೆಮಿಗಳು ಭಾರತವಾಣಿಯೊಂದಿಗೆ ಕೈ ಜೋಡಿಸಿವೆ. ಈ ಸಮ್ಮೇಳನದಲ್ಲಿ ಸಂಕ್ಷಿಪ್ತ ಕನ್ನಡ ನಿಘಂಟು ಆಂಡ್ರಾಯ್ಡ್‌ ಅಪ್ಲಿಕೇಶನ್‌ ಬಿಡುಗಡೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತೂ ಮುಕ್ತಜ್ಞಾನದತ್ತ ಹೆಜ್ಜೆ ಹಾಕಿದೆ. ಕೆಲವೇ ದಿನಗಳಲ್ಲಿ ಭಾರತವಾಣಿಗೆ ಕನ್ನಡ-ಕನ್ನಡ ನಿಘಂಟನ್ನೂ ಒದಗಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಭರವಸೆ ನೀಡಿದೆ; ನಿರ್ಣಯ ಅಂಗೀಕರಿಸಿದೆ.

ಮುಕ್ತಜ್ಞಾನ ಅಭಿಯಾನದ ಭಾಗವಾದ  ಭಾರತವಾಣಿ ಯೋಜನೆ ಮತ್ತು ಆಪ್‌ ಕುರಿತು ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

beluru-kasapa-speech-final-ppt-to-print-6

beluru-kasapa-speech-final-ppt-to-print-7

beluru-kasapa-speech-final-ppt-to-print-8

beluru-kasapa-speech-final-ppt-to-print-9

beluru-kasapa-speech-final-ppt-to-print-10

beluru-kasapa-speech-final-ppt-to-print-11

beluru-kasapa-speech-final-ppt-to-print-12

ಭಾರತವಾಣಿ ಪೋರ್ಟಲ್ ಈ ಕೆಳಗಿನ ಪ್ರಮುಖ ವಿಭಾಗಗಳಲ್ಲಿ ವಿಷಯಗಳನ್ನು ಪ್ರಕಟಿಸುತ್ತದೆ.

  1. ಪಠ್ಯಪುಸ್ತಕ ಕೋಶ: ಪಠ್ಯಪುಸ್ತಕಗಳು
  2. ಜ್ಞಾನಕೋಶ: ಜ್ಞಾನಾಧಾರಿತ (ಅಭಿವೃದ್ಧಿ ಹಂತದಲ್ಲಿದೆ)
  3. ಶಬ್ದಕೋಶ: ನಿಘಂಟುಗಳು
  4. ಭಾಷಾ ಕೋಶ: ಭಾಷಾ ಕಲಿಕೆ
  5. ಮಾಹಿತಿ ತಂತ್ರಜ್ಞಾನ: ಮಾಹಿತಿ ತಂತ್ರಜ್ಞಾನ ಸಾಧನಗಳು (ಟಿಡಿಐಎಲ್ ಗೆ ಲಿಂಕ್ ಮಾಡಲಾಗಿದೆ)
  6. ಬಹುಮಾಧ್ಯಮ ಕೋಶ: ಬಹುಮಾಧ್ಯಮ
  • ಈ ಪೋರ್ಟಲ್ ನ ಮುಖಪುಟ (bharatavani.in) ಹಿಂದಿ-ಇಂಗ್ಲಿಶಿನಲ್ಲಿರುತ್ತದೆ. ನೀವು ಎಲ್ಲಾ ಲಭ್ಯ ಭಾಷೆಗಳಲ್ಲಿ language.bharatavni.in ತರಹದ ಬೇರೆ ಬೇರೆ ಉಪವಿಭಾಗಗಳನ್ನೂ ಗುರುತಿಸಬಹುದು. ಉದಾಹರಣೆಗೆ; kannada.bharatavani.in ನಲ್ಲಿ ಕನ್ನಡ ವಿಷಯ ಪ್ರಾಥಮಿಕವಾಗಿ ಲಭ್ಯವಿರುತ್ತದೆ.
  • ಭಾಷೆಯ ಪ್ರತಿಯೊಂದು ಉಪವಿಬಾಗವೂ ಮೇಲೆ ತಿಳಿಸಿರುವಂತೆ ಪ್ರಮುಖ ವಿಭಾಗಗಳನ್ನು ಹೊಂದಿದ್ದು, ಅದೇ ವಿಷಯ ಪದ, ಲಿಪಿ ಮತ್ತು ವಿಷಯಗಳ ಮೂಲಕ ಬೇರೆ ಭಾಷೆಗಳ ಜತೆಗೆ ಜೋಡಿಸಿದ್ದರೆ ಬೇರೆ ಭಾಷೆಗಳಲ್ಲಿಯೂ ದೊರೆಯುತ್ತದೆ. ಉದಾಹರಣೆಗೆ; ಬೆಂಗಾಲಿ-ನೇಪಾಲಿ ನಿಘಂಟನ್ನು ನೀವು ಎರಡೂ ಉಪವಿಭಾಗಗಳಲ್ಲಿಯೂ ಗುರುತಿಸಬಹುದು.
  • ನಿಮ್ಮ ಆಯ್ಕೆಯ ಪುಸ್ತಕವನ್ನು ಗುರುತಿಸಲು ಶೋಧಕಗಳಿವೆ. ಅವುಗಳನ್ನು ಸೂಕ್ತವಾಗಿ ಬಳಸಿ. ಬೃಹತ್ ದತ್ತಾಂಶದ ಅಪ್ ಲೋಡ್ ಮಾಡುವ ಗಣಕೀಕರಣ ಪ್ರಕ್ರಿಯೆ ನಡೆಯುತ್ತಿದೆ.

ಮುಖ್ಯ ವಿಭಾಗಗಳನ್ನು ಕುರಿತ ಸಂಕ್ಷಿಪ್ತ ವಿವರ

  1. ಪಠ್ಯಪುಸ್ತಕ ಕೋಶ: ಪಠ್ಯಪುಸ್ತಕಗಳು
  • ಬೇರೆ ಬೇರೆ ಸರ್ಕಾರಗಳ ಹಲವಾರು ಪುಸ್ತಕ ಪ್ರಾಧಿಕಾರಗಳು ನೀಡಿರುವ ಪಠ್ಯಪುಸ್ತಕಗಳನ್ನು ಪುಸ್ತಕಗಳ ಗ್ಯಾಲರಿಯಲ್ಲಿ ಒದಗಿಸಲಾಗುತ್ತಿದೆ. ಇವುಗಳನ್ನು ನೀವು ತರಗತಿ, ಭಾಷೆ, ವಿಷಯ ಮತ್ತು ರಾಜ್ಯವಾರು ಶೋಧಿಸಬಹುದು. ಡೌನ್ ಲೋಡ್ ಮಾಡಿಕೊಂಡು ಬಳಸಿ.
  1. ಜ್ಞಾನಕೋಶ: ಜ್ಞಾನಾಧಾರಿತ (ಅಭಿವೃದ್ಧಿಪಡಿಸಬೇಕಿದೆ)
  • ಈ ವಿಭಾಗ ಅಭಿವೃದ್ಧಿ ಹಂತದಲ್ಲಿದ್ದು, ಈಗಾಗಲೆ ಗಮನಾರ್ಹ ಪ್ರಮಾಣದ ದತ್ತಾಂಶವನ್ನು ಸಂಗ್ರಹಿಸಲಾಗಿದೆ, ಅದರ ಗಣಕೀಕರಣ ಕಲಸ ಆಗಬೇಕಾಗಿದ್ದು ಆನಂತರ ಇದನ್ನು ಅನುಕ್ರಮಸೂಚಿಯಲ್ಲಿ ಪ್ರಕಟಿಸಲಾಗುತ್ತದೆ. ದಯಮಾಡಿ ನಮ್ಮ ಜತೆ ಸಹಿಸಿಕೊಳ್ಳಿ.
  1. ಶಬ್ದ ಕೋಶ: ನಿಘಂಟುಗಳು

ನಿಘಂಟುಗಳ ದತ್ತಾಂಶ ಹುಡುಕಾಟ

      ನೀವು ನಿಘಂಟುಗಳ ದತ್ತಾಂಶವನ್ನು ಹಲವಾರು ರೀತಿಯಲ್ಲಿ ಹುಡುಕಬಹುದು

  • ನಿಮ್ಮ ಆಯ್ಕೆಯ ಭಾಷೆಯನ್ನು ಟೈಪ್ ಮಾಡುವ ಮೂಲಕ ಹುಡುಕಿ (ಲಭ್ಯವಿರುವ ಭಾಷೆಗಳ ಪಟ್ಟಿಯನ್ನು ನಿಮಗೆ ಪ್ರದರ್ಶಿಸಲಾಗುತ್ತದೆ)
  • ಇಂಗ್ಲಿಶ್ ಪದಗಳನ್ನು ಟೈಪ್ ಮಾಡುವ ಮೂಲಕ ಹುಡುಕಿ. ನೀವು ಇಲ್ಲಿ ಲಭ್ಯವಿರುವ ಭಾಷಾ ದತ್ತಾಂಶಗಳಿಂದ ಫಲಿತಾಂಶವನ್ನು ಪಡೆಯುವಿರಿ.

ನಿಘಂಟು ಪುಸ್ತಕಗಳು:

  • ಹೆಚ್ಚುವರಿಯಾಗಿ, ನಿಘಂಟು ವಿಭಾಗದಲ್ಲಿ ಕೊಟ್ಟಿರುವ ಪಿಡಿಎಫ್ ಪುಸ್ತಕಗಳನ್ನೂ ಸಹ ನೀವು ಕಣ್ಣಾಡಿಸಬಹುದು. ಈ ಪುಸ್ತಕಗಳನ್ನು ಇಂಗ್ಲಿಶ್ ಪದಗಳ ಮೂಲಕ ಹುಡುಕಬಹುದು. ಈ ಎಲ್ಲಾ ಪುಸ್ತಕಗಳೂ ಗಣಕೀಕೃತಗೊಂಡು ಡಾಟಾಬೇಸ್ ನಲ್ಲೇ ದೊರಕುವಂತೆ ಮಾಡಲಾಗುತ್ತದೆ.
  1. ಭಾಷಾ ಕೋಶ: ಭಾಷಾ ಕಲಿಕೆ

ಭಾಷಾ ಕಲಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದ್ದು, ನಿಮ್ಮ ಕಲಿಕೆಯ ಮಟ್ಟವನ್ನು ಆಯ್ಕೆಮಾಡಿ ಹಾಗೆಯೇ ನಿಮ್ಮ ಪುಸ್ತಕವನ್ನು ಆರಿಸಿಕೊಳ್ಳಿ. ಭಾರತವಾಣಿಯು ಮುಂದಿನ ವರ್ಷಗಳಲ್ಲಿ ಭಾಷಾ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸವನ್ನು ಕೈಗೊಳ್ಳಲಿದೆ. ಇದಕ್ಕಾಗಿ ಎಲ್ಲ ತಜ್ಞರು, ಶಿಕ್ಷಕಕರು, ಐಟಿ ಯುವ ಸ್ವಯಂಸೇವಾ  ಸಮುದಾಯ, ವಿಶ್ವವಿದ್ಯಾಲಯಗಳು ನೆರವಾಗಬೇಕು ಎಂದು ನಾನು ವಿನಂತಿಸಿಕೊಳ್ಳುತ್ತೇನೆ.

  1. ಮಾಹಿತಿ ತಂತ್ರಜ್ಞಾನ ಕೋಶ: (ಟಿಡಿಐಎಲ್ ಗೆ ಲಿಂಕ್ ಮಾಡಲಾಗಿದೆ)

ಈ ವಿಭಾಗ ಎಲ್ಲ ಭಾಷೆಗಳ ಮಾಹಿತಿ ತಂತ್ರಜ್ಞಾನ ಸಾಧನಗಳನ್ನು ಒಂದೇ ಕಡೆ ಪಡೆಯಲು ಒಂದೇ ವಿಂಡೋವನ್ನು ಒದಗಿಸುವ ಗುರಿಯನ್ನು ಹೊಂದಿದೆ. ನಿಮ್ಮ ಆಯ್ಕೆಯ ಸಾಧನಗಳನ್ನು ಪಡೆಯಲು ದಯವಿಟ್ಟು http://www.tdil-dc.in/index.php?lang=en ಗೆ ಭೇಟಿನೀಡಿ.

  1. ಬಹುಮಾಧ್ಯಮ ಕೋಶ: ಬಹುಮಾಧ್ಯಮ

ಈ ವಿಭಾಗ ಭಾಷೆಯನ್ನು ಕುರಿತ ಬಹುಮಾಧ್ಯಮ ವಿಷಯವನ್ನು ಒದಗಿಸುತ್ತದೆ. ಮತ್ತೆ ನಿಮ್ಮ ಆಯ್ಕೆಯನ್ನು ಶೋಧಿಸಿ ಮಾಹಿತಿಯನ್ನು ಪಡೆಯಿರಿ.

ಭಾರತವಾಣಿ ನಿಘಂಟು ಅಪ್ಲಿಕೇಶನ್

ಪ್ರಸ್ತುತ, google.com. ನಲ್ಲಿ ಒಂದು ಆಂಡ್ರಾಯ್ಡ್  ಮತ್ತು ವಿಂಡೋಸ್‌ ಆಪರೇಟಿಂಗ್ ಸಿಸ್ಟಮ್ ಆಧಾರಿತ ನಿಘಂಟು ಅಪ್ಲಿಕೇಶನ್ ಲಭ್ಯವಿದೆ. ಇದೇ ಭಾರತವಾಣಿ. ಇದು ಒಂದು ಮೂಲ ಭಾಷೆಯನ್ನು ಹೊರತುಪಡಿಸಿ, ನಿಮ್ಮ ಆಯ್ಕೆಯ ಲಿಪಿಯಲ್ಲಿಯೇ ಬೇರೆ ಬೇರೆ ಭಾಷೆಗಳಲ್ಲಿ ಅರ್ಥಗಳನ್ನು ಪಡೆಯಲು ಅವಕಾಶವಿರುವ ಜಾಲತಾಣ ಆಧಾರಿತ ನಿಘಂಟು ಅಪ್ಲಿಕೇಶನ್. ಇನ್ನೂ ಹಲವಾರು ನಿಘಂಟುಗಳು ಹಂತ ಹಂತವಾಗಿ ಒಟ್ಟುಗೂಡುತ್ತವೆ.

  • ಆಂಡ್ರಾಯ್ಡ್  ಅಪ್ಲಿಕೇಶನ್‌ ಕೊಂಡಿ: http://bit.ly/1XYqodI
  • ವಿಂಡೋಸ್‌ ಅಪ್ಲಿಕೇಶನ್‌ ಕೊಂಡಿ: http://bit.ly/2a2Ew19

ಹೀಗೆ ಭಾರತವಾಣಿಯು ಮುಕ್ತಜ್ಞಾನ ಪಡೆಯುವ ನಾಗರಿಕರ ಪ್ರಜಾತಾಂತ್ರಿಕ ಹಕ್ಕನ್ನು ಅವರಿಗೆ ನೀಡುವುದಕ್ಕೆ ಮುಂದಾಗಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.

ಮುಕ್ತಜ್ಞಾನದ ಇನ್ನೂ ಕೆಲವು ಆನ್‌ಲೈನ್‌ ಪ್ರಯೋಗಗಳನ್ನು ನಾನಿಲ್ಲಿ ಕೇವಲ ಉದಾಹರಣಾರ್ಥ ನೀಡುತ್ತಿದ್ದೇನೆ.

beluru-kasapa-speech-final-ppt-to-print-4

beluru-kasapa-speech-final-ppt-to-print-13

  • ಪ್ರೊಪಬ್ಲಿಕಾ ಎಂಬ ಅಮೆರಿಕಾದ ಜಾಲತಾಣವು ಹಲವು ಸಂಸ್ಥೆಗಳಿಂದ ದೇಣಿಗೆ ಪಡೆದು ಸ್ವತಂತ್ರ ಪತ್ರಿಕೋದ್ಯಮವನ್ನು ನಡೆಸುತ್ತಿದೆ. `ನಮ್ಮ ಸುದ್ದಿಗಳನ್ನು ಕದಿಯಿರಿ’ ಎಂಬುದೇ ಈ ಜಾಲತಾಣದ ಮುಖ್ಯ ಘೋಷಣೆಯಾಗಿದೆ.
  • ಇಂಟರ್‌ನೆಟ್‌ ಆರ್ಕೈವ್‌ ಎಂಬ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಪುಸ್ತಕಗಳು, ದೃಶ್ಯ-ಶ್ರಾವ್ಯ ಕಡತಗಳು ಲಭ್ಯ.
  • ವಿಕಿಪೀಡಿಯಾ ಜಾಲತಾಣದಲ್ಲಿ ಮುಕ್ತವಾಗಿ ಮಾಹಿತಿ ದೊರೆಯುವುದು ಎಲ್ಲರಿಗೂ ಗೊತ್ತಿದೆ.
  • ಮ್ಯಾಗ್ನಟ್ಯೂನ್‌ ಎಂಬ ಸಂಗೀತ ತಾಣದಲ್ಲಿ ನಿಮ್ಮ ಆಲ್ಬಮ್‌ಗಳನ್ನು ಆರಬಹುದು; ಬಳಕೆದಾರರು ಉಚಿತವಾಗಿ ಸಂಗೀತವನ್ನು ಕೇಳಬಹುದು.
  • ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ಮೊದಲ ಸಲ ಮುಕ್ತ ಕಲಿಕೆಯಯ ಅವಕಾಶಗಳನ್ನು ರೂಪಿಸಿ ತನ್ನೆಲ್ಲ ಕೋರ್ಸ್‌ಗಳ ಪಠ್ಯಗಳನ್ನು ಯಾರು ಬೇಕಾದರೂ ಬಳಸಬಹುದು ಎಂದು ಘೋಷಿಸಿತು.
  • ಪ್ರಾಜೆಕ್ಟ್‌ ಗುಟೆನ್‌ಬರ್ಗ್‌ ಎಂಬ ಅತಿ ಹಳೆಯ ಯೋಜನೆಯಲ್ಲಿ ಕೂಡಾ ಭಾರೀ ಪ್ರಮಾಣದಲ್ಲಿ ಶಾಸ್ತ್ರೀಯ ಸಾಹಿತ್ಯವನ್ನು ಸಾರ್ವಜನಿಕರೇ ಅಕ್ಷರ ಜೋಡಿಸಿ ರೂಪಿಸಿದ್ದಾರೆ.
  • ಕಣಜ ಜಾಲತಾಣಕ್ಕಿಂತ ಮುಂಚಿತವಾಗಿ ತಮಿಳುನಾಡು ಸರ್ಕಾರವು ತಮಿಳು ವರ್ಚುಯಲ್‌ ವಿಶ್ವವಿದ್ಯಾಲಯವನ್ನು ರೂಪಿಸಿ ಎಲ್ಲ ಪಠ್ಯಗಳನ್ನೂ ಪಿಡಿಎಫ್‌ ರೂಪದಲ್ಲಿ ಸಾರ್ವಜನಿಕರಿಗೆ ಕೊಟ್ಟಿದೆ.
  • ಪ್ಲಾಸ್‌ ಜಾಲತಾಣದಲ್ಲಿ ನೀವು ಸಾವಿರಾರು ಸಂಶೋಧನಾ ಲೇಖನಗಳನ್ನು ಉಚಿತವಾಗಿ ಪಡೆಯಬಹುದು.
  • ಭಾರತ ಸರ್ಕಾರವು ಈ ಪಾಠಶಾಲಾ ಎಂಬ ಯೋಜನೆಯ ಮೂಲಕ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದೆ. ಈ-ಬಾಸ್ತಾ ಎಂಬ ಇನ್ನೊಂದು ಜಾಲತಾಣದಲ್ಲಿ ಪಠ್ಯಪುಸ್ತಕಗಳಿವೆ. ಭಾರತವಾಣಿಯಲ್ಲೂ ಹಲವು ರಾಜ್ಯಗಳ ಪಠ್ಯಪುಸ್ತಕಗಳಿವೆ. ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಓಪನ್‌ ಸ್ಕೂಲಿಂಗ್‌ (ಎನ್‌ಐಓಎಸ್‌) ತಾಣದಲ್ಲಿ ಹಲವು ಪುಸ್ತಕಗಳು ಸಿಗುತ್ತವೆ.
  • ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್‌ಸಿಎ)ದಲ್ಲಿ ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಹಲವು ಪುಸ್ತಕಗಳಿವೆ.
  • ಇನ್ನೂ ಹಲವು ಉಪಯುಕ್ತ ಮುಕ್ತಜ್ಞಾನದ ಮೂಲಗಳ ವಿವರಗಳನ್ನು ಭಾರತವಾಣಿ ಜಾಲತಾಣದಲ್ಲಿ ಪಡೆಯಬಹುದು (www.bharatavani.in)
  • ಭಾರತದಾದ್ಯಂತ ಸ್ಪಿಕ್‌ಮೆಕೇ ಸಂಸ್ಥೆಯು ಶಾಸ್ತ್ರೀಯ ಸಂಗೀತದ ಕಚೇರಿಗಳನ್ನು ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕಾಗಿ ಸಂಘಟಿಸುತ್ತಿದೆ. ಇಲ್ಲಿ ಸಂಗೀತಗಾರರೊಂದಿಗೆ ಸಭಿಕರು ಪ್ರಶ್ನೋತ್ತರ ನಡೆಸಬಹುದು.

ಇವೆಲ್ಲವೂ ಜ್ಞಾನ ಹಂಚಿಕೆಯ ಪ್ರಜಾಪ್ರಭುತ್ವೀಕರಣದ ಕೆಲವು ಉದಾಹರಣೆಗಳು ಇಲ್ಲಿ ಒಂದೋ ಸರ್ಕಾರ ಅಥವಾ ಸಾರ್ವಜನಿಕ ಸಂಸ್ಥೆಗಳು ಮುಕ್ತಜ್ಞಾನ ನೀಡಲು ಮುಂದಾಗಿವೆ.

ಹಲವು ಖಾಸಗಿ ಜಾಲತಾಣಗಳಲ್ಲೂ ಇಂಥ ಮುಕ್ತಜ್ಞಾನದ ಆಕರಗಳಿವೆ. ಜ್ಞಾನರಂಗವು ಕಾರ್ಪೋರೇಟ್‌-ಬಂಡವಾಳಶಾಹಿ ಹಿಡಿತದಿಂದ ಮುಕ್ತವಾಗಿ ನಮ್ಮ ಪರಂಪರೆಯಲ್ಲಿ ಸದಾ ಆಚರಣೆಯಲ್ಲಿದ್ದ ಮುಕ್ತ ಶಿಕ್ಷಣದ ವ್ಯವಸ್ಥೆಯನ್ನು ರೂಪಿಸುವುದೇ ಇಂದಿನ ಸವಾಲು. ಕುಲಾಂತರಿ ತಳಿಯ ತಂತ್ರಜ್ಞಾನದ, ಪರಮಾಣು ಸ್ಥಾವರಗಳ ಅಪಾಯವನ್ನು, ಜನ ತಮ್ಮದೇ ಸಾಮುದಾಯಿಕ ಹೋರಾಟ ಮತ್ತು ಜ್ಞಾನದ ಬಲದಿಂದಲೇ  ತಡೆಯುತ್ತಿದ್ದಾರೆ. ಶ್ರೀಸಾಮಾನ್ಯರು, ಆಟೋ ಚಾಲಕರು ದುಡ್ಡು ಹಾಕಿ ಸಿನೆಮಾ ನಿರ್ಮಿಸುತ್ತಿದ್ದಾರೆ. ಸಮೂಹ ಬಲದ ಚಟುವಟಿಕೆಗಳು (ಕ್ರೌಡ್‌ ಸೋರ್ಸಿಂಗ್‌) ಹೆಚ್ಚುತ್ತಿರುವ ಈ ಕಾಲದಲ್ಲಿ ನಮ್ಮದೇ ಭಾಷೆಯಲ್ಲಿ ಈ ಕಾಲದ ಅರಿವನ್ನು ಮುಕ್ತವಾಗಿ ಪಡೆಯಲು ಕೇಳುವುದು ನಮ್ಮ ಹಕ್ಕು.

ಆನ್‌ಲೈನ್‌ ಮುಕ್ತಜ್ಞಾನದಲ್ಲಿ ಭಾಷೆಯ ಸವಾಲುಗಳು  

ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು ಎಷ್ಟಿವೆಯೋ, ಸವಾಲುಗಳೂ ಅಷ್ಟೇ ಇವೆ.

  • ಲಿಪಿ ಕಾಣದೆ ಏನೂ ಸಾಧ್ಯವಿಲ್ಲ: ಕಂಪ್ಯೂಟರಿನಲ್ಲಿ ನಮಗೆ ಬೇಕಾದ ಲಿಪಿಯ ಅಕ್ಷರಗಳನ್ನು ಮೂಡಿಸುವುದು ಮತ್ತು ನಮಗೆ ಬೇಕಾದ ಭಾಷೆ, ಲಿಪಿಯಲ್ಲಿ ಬರೆಯುವುದು. ಇದನ್ನು ಪರಿಹರಿಸಲು ಭಾರತವಾಣಿ ಯೋಜನೆಯು ಪ್ರಯತ್ನ ಆರಂಭಿಸಿದೆ. ಮೊದಲ ಹಂತದಲ್ಲಿ ಒಂದು ಲಿಪಿಯಿಂದ ಇನ್ನೊಂದು ಲಿಪಿಗೆ ಬದಲಾವಣೆ ಮಾಡಿಕೊಳ್ಳುವ ಲಿಪ್ಯಂತರಣವನ್ನು ಭಾರತವಾಣಿಯು ತನ್ನ ಆಪ್‌ನಲ್ಲಿ ಅಳವಡಿಸಿಕೊಂಡಿದೆ. ವಿವಿಧ ಭಾಷೆಗಳ ಲಿಪಿಗಳನ್ನು ಇಂದಿನ ಮಾಹಿತಿ ತಂತ್ರಜ್ಞಾನಾಧಾರಿತ ಸಾಧನಗಳಲ್ಲಿ (ಬಟ್ಟೆ ಒಗೆಯುವ ಯಂತ್ರದಿಂದ ಹಿಡಿದು ಸ್ಮಾರ್ಟ್‌ಫೋನ್‌ – ಟ್ಯಾಬ್ಲೆಟ್‌ವರೆಗೆ) ಮೂಡಿಸದ ಹೊರತು ಮಾತೃಭಾಷೆಯಲ್ಲಿ ಜ್ಞಾನವು ಸಿಗುವ ಸಾಧ್ಯತೆ ಕ್ಷೀಣ ಎಂಬುದು ನನ್ನ ಸ್ಪಷ್ಟ ಅನಿಸಿಕೆ.  ಕೆಲವು ದಿನಗಳ ಹಿಂದೆ ಕಿಂಡೆಲ್‌ ಈ-ಬುಕ್‌ ರೀಡರ್‌ನಲ್ಲಿ ವಸುಧೇಂದ್ರ ಅವರ ಕನ್ನಡ ಪುಸ್ತಕವು ಪ್ರಕಟವಾಗದೇ ಹೋದ ಬಗ್ಗೆ  ಫೇಸ್‌ಬುಕ್‌ನಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದ್ದನ್ನು ನೀವು ಗಮನಿಸಿರಬಹುದು. ನಾನು ಆಗ ಭಾರತದ ಎಲ್ಲ ಐಟಿ ಸಾಧನಗಳಲ್ಲೂ ಭಾರತೀಯ ಭಾಷೆಗಳ ತಂತ್ರಾಂಶವನ್ನು ಮೊದಲೇ ಹಾಕಿರಬೇಕು ಎಂಬ ಆನ್‌ಲೈನ್‌ ಸಹಿಸಂಗ್ರಹ ಚಳವಳಿಯನ್ನು ಆರಂಭಿಸಿದೆ. ಈ ಬಗ್ಗೆ ಮತ್ತೆ ಶ್ರೀವಸುಧೇಂದ್ರ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ವಾಣಿಜ್ಯ ಸಚಿವರಲ್ಲಿ ಈ ಬಗ್ಗೆ ವಿನಂತಿ ಮಾಡಲು ಮುಂದಾಗಿದ್ದೇನೆ.  ಅಲ್ಲದೆ ಭಾರತದಲ್ಲಿ ಮಾರಾಟವಾಗುವ ಎಲ್ಲ ಪೊಟ್ಟಣಗಳ ಮೇಲೆ ಒಂದಲ್ಲ ಒಂದು ಪ್ರಾದೇಶಿಕ ಭಾಷಾ ಲಿಪಿಯಲ್ಲಿ ಮಾಹಿತಿ ಇರಬೇಕು ಎಂದೂ ನಾನು ಕೇಂದ್ರ ವಾಣಿಜ್ಯ ಸಚಿವೆಯರನ್ನು ವಿನಂತಿಸಲಿದ್ದೇನೆ.
  • ಪಠ್ಯರೂಪ ಭಾಷಾ ದತ್ತಾಂಶದ ಕೊರತೆ: ಆನ್‌ಲೈನ್‌ ಎಂದರೆ ಪಿಡಿಎಫ್‌ ಎಂದು ತಿಳಿದುಕೊಂಡಿರುವ ಈ ಕಾಲದಲ್ಲಿ ಯುನಿಕೋಡ್‌ ಬಳಸಿದ, ಪಠ್ಯಗಳನ್ನು ದೊರಕಿಸುವ ಕೆಲಸ ತುಂಬಾ ಸವಾಲಿನದು. ಹಳೆಯ ಪುಸ್ತಕಗಳನ್ನು ಮತ್ತೆ ಡಿಟಿಪಿ ಮಾಡಬೇಕಾದ, ಪಿಡಿಎಫ್‌ ಮಾಡಬೇಕಾದ ಸನ್ನಿವೇಶವೇ ಈಗಲೂ ಇದೆ.  ಸರ್ಕಾರಗಳು ಜ್ಞಾನ ಆಧಾರಿತ ಮಾಹಿತಿಗಳನ್ನು ಯುನಿಕೋಡ್‌ ರೂಪದಲ್ಲಿ ಒಂದೆಡೆ ಸಂಗ್ರಹಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಉದಾಹರಣೆಗೆ ಪಠ್ಯಪುಸ್ತಕಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಕೊಡುವಾಗ ಯುನಿಕೋಡ್‌ ಪಠ್ಯವೇ ಬೇಕಾಗುತ್ತದೆ. ವಿವಿಧ ಯೋಜನೆಗಳಲ್ಲಿ ಈಗಾಗಲೇ ಸಂಗ್ರಹಿಸಿರುವ ಬಹು ಭಾಷಾ ಪದ-ವಾಕ್ಯ ಸಮುಚ್ಚಯವನ್ನು ಮುಕ್ತವಾಗಿ ಬಿಡುಗಡೆ ಮಾಡಿ ಸಮುದಾಐದಿಂದಲೇ ಭಾಷಾ ವ್ಯಾಕರಣದ ತಂತ್ರಾಂಶಗಳು, ಅನುವಾದದ ಸೂತ್ರಗಳು ಹೊರಹೊಮ್ಮಬೇಕು ಎಂಬುದು ನನ್ನ ಆಶಯವಾಗಿದೆ.
  • ವ್ಯಾಪಕ ಅನುವಾದದ ತೀವ್ರ ಅವಶ್ಯಕತೆ: ಮೈಸೂರು ವಿಶ್ವವಿದ್ಯಾಲಯವು ರೂಪಿಸಿದ ಸಾಮಾನ್ಯ ವಿಶ್ವಕೋಶ ಮತ್ತು ವಿಷಯ ವಿಶ್ವಕೋಶಗಳು ನಿಜಕ್ಕೂ ದೇಶವೇ ಹೆಮ್ಮೆ ಪಡುವಂಥ ಕೋಶಗಳು. ಇವುಗಳನ್ನು ವಿಶ್ವವಿದ್ಯಾಲಯವು ಭಾರತವಾಣಿಗೆ ನೀಡಿ ಮುಕ್ತಜ್ಞಾನದ ಚಳವಳಿಯಲ್ಲಿ ದೊಡ್ಡ ಹೆಜ್ಜೆ ಹಾಕಿದೆ. ಆದರೆ ಇಂಥದ್ದೇ ಕೋಶಗಳು ಎಲ್ಲ ಭಾಷೆಗಳಲ್ಲೂ ಬರಬೇಕು ಮತ್ತು ಇವು ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಗಾಗಬೇಕು. ಇದು ಭಾರತೀಯ ಭಾಷೆಗಳ ಮುಂದೆ ಇರುವ ದೊಡ್ಡ ಸವಾಲು. ಬೆಂಗಾಲಿ, ಗುಜರಾತಿ, ಹಿಂದಿಯಂತಹ ಹೆಚ್ಚುನ ಮಾತಾಡುವ ಭಾಷೆಗಳಲ್ಲೂ ಇಂಥ ಕೋಶಗಳನ್ನು ಹುಡುಕುವುದು ಕಷ್ಟ.
  • ಹಕ್ಕುಸ್ವಾಮ್ಯ – ಬೌದ್ಧಿಕ ಸ್ವಾಮ್ಯದ ಸವಾಲು: ಮುದ್ರಣ ಆಧಾರಿತ ಪ್ರಕಟಣಾ ರಂಗವು ಬಲವಾದ ಮೇಲೆ ಭಾರತ ದೇಶದಲ್ಲಿ ಹಕ್ಕುಸ್ವಾಮ್ಯವು ವಕ್ಕರಿಸಿತು. ಮುದ್ರಿತ ಪ್ರತಿಗಳ ಕಾಲಕ್ಕಿಂತ ಮೊದಲು ಭಾರತದಲ್ಲಿ ಹಕ್ಕುಸ್ವಾಮ್ಯ ಎಂಬ ಪರಿಕಲ್ಪನೆಯೇ ಇರಲಿಲ್ಲ. ಪಂಪಭಾರತವನ್ನು ತನ್ನದು ಎಂದು ಶತಮಾನಗಳ ಕಾಲ ಇನ್ನಾರೋ ಹೇಳಿಕೊಳ್ಳಲಿಲ್ಲ. ಹಕ್ಕುಸ್ವಾಮ್ಯ ಸಂಪೂರ್ಣವಾಗಿ ಒಂದು ವಿದೇಶಿ ಮಾದರಿ. ಅದು ಅರಿವಿನ ಆಕರಗಳ ವಾಣಿಜ್ಯೀಕರಣದ ಫಲ. ಆದ್ದರಿಂದ ನನ್ನ ಕನಸಿನ ಮುಕ್ತಜ್ಞಾನ ಸಮಾಜದಲ್ಲಿ ಹಕ್ಕುಸ್ವಾಮ್ಯದ ಬಿಗಿಬಂಧವು ಅತ್ಯಂತ ಸಡಿಲಾಗಿರುತ್ತದೆ ಅಥವಾ ಇರುವುದೇ ಇಲ್ಲ. ಇದನ್ನು ಹೇಳುವುದು ಸುಲಭ; ಜಾರಿಗೊಳಿಸುವುದು ಕಷ್ಟ. ಸಾರ್ವಜನಿಕ ಹಣದಿಂದ ಜ್ಞಾನಸೃಷ್ಟಿಯಲ್ಲಿ ತೊಡಗಿರುವ ಸಂಸ್ಥೆಗಳಿಂದ ಈ ಅಭಿಯಾನ ಶುರುವಾಗಿದೆ ಎಂಬುದು ಸಂತೋಷದ ವಿಷಯ.
  • ಸಂಪನ್ಮೂಲಗಳ ದುರ್ಬಳಕೆಗೆ ತಡೆ : ನಮ್ಮ ರಾಜ್ಯದಲ್ಲಿ ಒಂದೇ ಜಾನಪದ ಅಕಾಡೆಮಿ, ಜಾನಪದ ವಿವಿ, ಜಾನಪದ ಪರಿಷತ್ತು – ಮೂರು ಸಂಘಟನೆಗಳು; ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ರಾಜ್ಯ ತಂತ್ರವಿದ್ಯಾ ಮಂಡಳಿ – ಹೀಗೆ ವಿಜ್ಞಾನಕ್ಕೆ ಮೂರು ಸಂಸ್ಥೆಗಳಿವೆ. ಕನ್ನಡ ವಿಶ್ವವಿದ್ಯಾಲಯವು ರೂಪಿಸಿದ ಕನ್ನಡ ಫಾಂಟ್‌ ಪರಿವರ್ತಕವನ್ನೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಲಕ್ಷಗಟ್ಟಳೆ ರೂಪಾಯಿ ಕೊಟ್ಟು ತಯಾರಿಸುತ್ತದೆ.  ಹೀಗೆ ನಾಡಿನ ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ. ಇವೆಲ್ಲವನ್ನೂ ಒಂದು ಕೇಂದ್ರೀಕೃತ, ಸಮನ್ವಯ ವ್ಯವಸ್ಥೆಗೆ ಒಳಪಡಿಸಬೇಕು ಎಂಬುದು ನನ್ನ ಮನವಿ.
  • ಮುಕ್ತಜ್ಞಾನ ಎಂದರೆ ಕೇವಲ ಇಂಟರ್‌ನೆಟ್‌ ಅಲ್ಲ ಎಂಬ ಜ್ಞಾನೋದಯ. ಮುಕ್ತಜ್ಞಾನವೆಂದರೆ ಕಂಪ್ಯೂಟರ್‌ ಮತ್ತು ಅಂತರಜಾಲದ ಸಂಪರ್ಕ ಉಳ್ಳವರಿಗೆ ನೀಡುವ ಉಚಿತ ಮಾಹಿತಿ ಎಂಬ ತಪ್ಪು ಅಭಿಪ್ರಾಯ ಇದೆ. ಅಂತರಜಾಲವು ಜ್ಞಾನದ ಮಾಧ್ಯಮವೇ ಹೊರತು ಅದೇ ಸ್ವತಃ ಜ್ಞಾನವಲ್ಲ ಎಂಬ ಮಿತಿ ನಮಗೆ ಗೊತ್ತಿರಬೇಕು. ಜ್ಞಾನವನ್ನು ಎಲ್ಲ ಬಗೆಯ ಮಾಧ್ಯಮಗಳಿಂದ ಯುವಪೀಳಿಗೆಗೆ ಹಂಚುವುದೇ ನಿಜವಾದ ಚಳವಳಿ.

ಮುದ್ರಣ ರಂಗದಲ್ಲೂ ಮುಕ್ತಜ್ಞಾನದ ಸಾಧ್ಯತೆಗಳಿವೆ

ಮುಕ್ತ ಜ್ಞಾನ ಎಂದಕೂಡಲೇ ಮುದ್ರಿತ ಪುಸ್ತಕಗಳು ಮಾರಾಟಕ್ಕೆ, ಆನ್‌ಲೈನ್‌ ಮಾಹಿತಿ ಬಿಟ್ಟಿ ಎಂಬ ಮಾನಸಿಕತೆ ಬರುವುದು ಸಹಜ. ಆದರೆ ಮುದ್ರಣ ಮಾಧ್ಯಮದಲ್ಲೂ ಮುಕ್ತ ಮತ್ತು ಉಚಿತ ಮಾಹಿತಿಪುಸ್ತಕಗಳ ಚಳವಳಿ ಆರಂಭವಾಗುವುದರಿಂದ ಮಾತ್ರವೇ ನೈಜ ಮುಕ್ತಜ್ಞಾನದ ಚಳವಳಿ ಆರಂಭವಾಗುತ್ತದೆ. ಕನ್ನಡದಲ್ಲಿ ಈ ಬಗ್ಗೆ ನನ್ನ ಪುಟ್ಟ ಪ್ರಯತ್ನವಾಗಿ ಮಿತ್ರಮಾಧ್ಯಮ ಟ್ರಸ್ಟ್‌ನಿಂದ `ಕಂಪ್ಯೂಟರ್‌ ಮತ್ತು ಕನ್ನಡ’ ಎಂಬ ಕಲಿಕೆಯ ಪುಸ್ತಕವನ್ನು  ಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಿದ್ದೇನೆ. ದಾನಿಗಳು ಹೆಚ್ಚಾದರೆ ಇಂಥ ಪುಸ್ತಕ ದಾಸೋಹವನ್ನೂ ವಿಸ್ತರಿಸಬಹುದು.

ಈಗ ಮುದ್ರಣ ಮಾಧ್ಯಮವು ಬಲವಾಗಿರುವಾಗ ಆನ್‌ಲೈನ್‌ ಮುಕ್ತಜ್ಞಾನವು ಪುಸ್ತಕ ಪ್ರಕಟಣೆಗಳಿಗೇ ಕುತ್ತಾಗುತ್ತದೆ ಎಂದು ಕೆಲವು ಕನ್ನಡ ಲೇಖಕರೂ ಸೇರಿದಂತೆ ಹಲವರು ಭಾವಿಸಿದ್ದಾರೆ. ಇದು ತಪ್ಪು ಕಲ್ಪನೆ. ನೀವು ಇಂಗ್ಲಿಶ್‌ ಪ್ರಕಟಣಾ ರಂಗವನ್ನೇ ನೋಡಿದರೆ, ಅಮೆಝಾನ್‌ ಜಾಲತಾಣವು ಬಂದಮೇಲೆ ಪುಸ್ತಕಗಳ ಮಾರಾಟ ಹಲವು ಪಟ್ಟು ಹೆಚ್ಚಿದೆ. ಕಂಪ್ಯೂಟರಿನಲ್ಲೇ ಓದಬಹುದಾದ ಈ-ಬುಕ್‌ಗಳ ಮಾರಾಟವೂ ಹೆಚ್ಚಿದೆ. ಆನ್‌ಲೈನ್‌ ಪುಸ್ತಕ ಮತ್ತು ಮುದ್ರಿತ ಪುಸ್ತಕಗಳ ನಡುವಿನ ಅಂತರವು ಭಾರತದಲ್ಲಿ ಸದ್ಯಕ್ಕಂತೂ ಕಡಿಮೆಯಾಗುವುದಿಲ್ಲ. ಈ-ಪುಸ್ತಕಗಳ ಸಂಖ್ಯೆಯು ಹೆಚ್ಚಾದರೂ ನಷ್ಟವಿಲ್ಲ; ಇಲ್ಲಿ ಪುಸ್ತಕದ ಸರಬರಾಜಿನ, ಮುದ್ರಣದ ವೆಚ್ಚದ ಚಿಂತೆ ಇಲ್ಲ. ಆದ್ದರಿಂದ ಕಡಿಮೆ ಬೆಲೆ ಇಟ್ಟರೂ ಲಾಭವೇ. ಮೈಸೂರಿನ ಒಬ್ಬ ಹುಡುಗಿ ಕಿಂಡೆಲ್‌ ಸ್ಟೋರ್‌ನಲ್ಲಿ ತನ್ನದೇ ಒಂದು ಇಂಗ್ಲಿಶ್‌ ಕಾದಂಬರಿಯನ್ನು ಪ್ರಕಟಿಸಿದ್ದಾಳೆ ಎಂದು ನನ್ನ ಕಚೇರಿಯಲ್ಲಿ ಇದ್ದವರು ತಿಳಿಸಿದರು.

beluru-kasapa-speech-final-ppt-to-print-5

ತಂತ್ರಜ್ಞಾನವೊಂದು ದೈತ್ಯಾಕಾರದಲ್ಲಿ ಬೆಳೆದ ಮೇಲೆ ಅದನ್ನು ತಡೆದು ನಿಲ್ಲಿಸುವುದು ಅಸಾಧ್ಯ. ಆದ್ದರಿಂದ ಈ-ಪುಸ್ತಕಗಳ ಜನಪ್ರಿಯತೆ ಹೆಚ್ಚಿದರೆ ಅದನ್ನು  ವಿರೋಧಿಸುವ ಬದಲು ಅದರೊಂದಿಗೆ ಬಾಳುವ ಸಹನೆಯನ್ನು ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಗಳು ಹೊಂದಬೇಕಿದೆ ಎಂಬುದು ನನ್ನ ಖಚಿತ ಅಭಿಮತವಾಗಿದೆ. ಅದನ್ನು ನಮಗೆ ಬೇಕಾದ ವಿಷಯಕ್ಕೆ ಮಾತ್ರ ಸೀಮಿತಗೊಳಿಸಲೂ ಬರುವುದಿಲ್ಲ. ಮನುಕುಲವು ಈ ಎಲ್ಲ ರಾಜಿಗಳನ್ನು ಮೀರಿ ಮುನ್ನಡೆದಿದೆ.

ಇಂದು ಜಗತ್ತಿನಲ್ಲಿ ಕಲಿಕೆಗಾಗಿ ಇರುವ ಜ್ಞಾನವನ್ನು ಮುಕ್ತವಾಗಿ ಕೊಡುವ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ಸಂಶೋಧನೆ ಮತ್ತು ಉನ್ನತ ಹಂತದ ಜ್ಞಾನವನ್ನು ಪಡೆಯುವ ದಾರಿ ಇನ್ನೂ ಸುದೀರ್ಘವಾಗಿದೆ. ಒಂದೆಡೆ ಉನ್ನತ ಸಂಶೋಧನೆಗಳನ್ನು ಸಂರಕ್ಷಣಾವಾದದ ಬಂಧದಲ್ಲಿ ಬಿಗಿಯುವ ಬೆಳವಣಿಗೆ ಕಂಡುಬರುತ್ತಿದೆ; ಇನ್ನೊಂದೆಡೆ ನಮ್ಮ ದೇಸಿ ಅರಿವಿನ ದಾಖಲೀಕರಣವು ನಿಧಾನಗತಿಯಲ್ಲಿರುವುದು ಆತಂಕ ಹುಟ್ಟಿಸುತ್ತದೆ.

ಮಾತೃಭಾಷೆಯಲ್ಲಿ ಮುಕ್ತಜ್ಞಾನವನ್ನು ಬಿತ್ತರಿಸಲು ಯಾರ್‍ಯಾರು ಏನೇನು ಮಾಡಬೇಕು ಎಂಬ ಬಗ್ಗೆ ನನ್ನ ಸಲಹೆಗಳನ್ನು ಮಂಡಿಸಬಯಸುತ್ತೇನೆ:

  1. ತಂದೆ-ತಾಯಂದಿರು ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಬೇಕು; ಸ್ಮಾರ್ಟ್‌‌ಫೋನ್‌ಗಳಲ್ಲಿ, ಸಮಾಜತಾಣಗಳಲ್ಲಿ, ಈಮೈಲಿನಲ್ಲಿ ಮಾತೃಭಾಷೆಯಲ್ಲೇ ವ್ಯವಹರಿಸಬೇಕು. ಇದು ನಾಗರಿಕರಾಗಿ ಭಾಷೆಯನ್ನು ರಕ್ಷಿಸುವ ಬಹುಮುಖ್ಯ ಹೊಣೆಗಾರಿಕೆ.
  2. ರಾಜ್ಯ ಸರ್ಕಾರಗಳು ಎಲ್ಲಾ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಸರ್ಕಾರದ ನಿಧಿಯ ಸಹಾಯ ಪಡೆದ ಸಂಘ-ಸಂಸ್ಥೆಗಳು ಪ್ರಕಟಿಸಿರುವ ಮಾಹಿತಿ ಸಾಹಿತ್ಯ, ಪಠ್ಯಪುಸ್ತಕಗಳನ್ನು, ಸರ್ಕಾರದ ಅಧಿಕೃತ ಜ್ಞಾನಕೋಶವಾದ `ಕಣಜ’ದಲ್ಲಾಗಲೀ, `ಭಾರತವಾಣಿ’ಯಲ್ಲಾಗಲೀ ಪಠ್ಯರೂಪದಲ್ಲಿ ಮುಕ್ತ ಬಳಕೆಗೆ ಪ್ರಕಟಿಸಬೇಕು. ಖಾಸಗಿ ಲೇಖಕರು ಮತ್ತು ಸಮಾಜಸೇವಾ ಸಂಸ್ಥೆಗಳೂ ಈ ಮುಕ್ತಜ್ಞಾನದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಆಯಾ ರಾಜ್ಯಗಳಲ್ಲಿ ಇರುವ ಇತರೆ ಭಾಷೆಗಳ ಬಗ್ಗೆಯೂ ರಾಜ್ಯ ಸರ್ಕಾರಗಳು ಪಠ್ಯಕ್ರಮಗಳನ್ನು ರೂಪಿಸಬೇಕು. ತುಳು,ಕೊಂಕಣಿ,ಕೊಡವ, ಬ್ಯಾರಿ ಅಕಾಡೆಮಿಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಎಲ್ಲ ಅಥವಾ ಪ್ರಮುಖ ಜ್ಞಾನಪ್ರವಾಹಗಳ ಮಾಹಿತಿ ಸಾಹಿತ್ಯದ ಪ್ರಕಟಣೆಗಳೂ ಬರಬೇಕು.
  3. ಭಾರತ ಸರ್ಕಾರದ ಮತ್ತು ವಿವಿಧ ರಾಜ್ಯ ಸರ್ಕಾರಗಳ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಯೋಜನೆಗಳಲ್ಲಿ ಪರಸ್ಪರ ಹೊಂದಾಣಿಕೆ ಮೂಡಿಸುವಂತೆ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಜಾಲವನ್ನು ಸ್ಥಾಪಿಸಬೇಕು. ಈ ಜಾಲದಲ್ಲಿ ಸಾರ್ವಜನಿಕರೂ ಇರುವಂತಾಗಿ ಭಾಷಾ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯಲ್ಲಿ ರೂಪಿಸುವಂತೆ ಯತ್ನಿಸಬೇಕು. ಬಹುಶಃ ಕಳೆದ ಹತ್ತು ವರ್ಷಗಳಲ್ಲಿ ಸಂಶೋಧನೆ ನಡೆಸಿ ರೂಪಿಸಿದ ಬಹುತೇಕ ತಂತ್ರಾಂಶಗಳು ಬಳಕೆಗೆ ಅಯೋಗ್ಯವಾಗಿವೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈವರೆಗೆ ನಡೆಸಿರುವ ಕೆಲಸ ಕಾರ್ಯಗಳ ಸ್ಥಿತಿವರದಿಗಳನ್ನು ಪ್ರಕಟಿಸಬೇಕು.
  4. ಸರ್ಕಾರದ ಎಲ್ಲ ಸುತ್ತೋಲೆಗಳೂ, ಯೋಜನೆಗಳ ಮಾಹಿತಿಗಳು ಮೊದಲ ಹಂತದಲ್ಲಿ ಬಹುಭಾಷಾ ಪಠ್ಯರೂಪದಲ್ಲಿ ಇರಬಹುದು; ಆಮೇಲೆ ಇವನ್ನು ಬಹುಭಾಷಾ ಅನುವಾದದ ಪ್ರತಿಗಳ ಮೂಲಕ ಹಂಚಬಹುದು. ಕನ್ನಡದಿಂದ ತೆಲುಗಿಗೆ ಅತ್ಯಂತ ಹೆಚ್ಚಿನ ಗುಣಮಟ್ಟದಿಂದ ಅನುವಾದ ಮಾಡುವ ತಂತ್ರಾಂಶವನ್ನು ಹೈದರಾಬಾದ್‌ ವಿಶ್ವವಿದ್ಯಾಲಯವು ರೂಪಿಸಿದೆ. ಇದೇ ರೀತಿ ಬಹುಭಾಷಾ ಅನುವಾದ ತಂತ್ರಾಂಶವನ್ನು ಇನ್ನೆರಡು ವರ್ಷಗಳಲ್ಲಿ ರೂಪಿಸುವುದು ಕಷ್ಟದ ಕೆಲಸವೇನಲ್ಲ. ಕನ್ನಡಿಗರೇ ಆದ ಡಾ|| ಕವಿ ನಾರಾಯಣಮೂರ್ತಿಯವರನ್ನು ನಾನು ಈ ತಂತ್ರಾಂಶವನ್ನು ರೂಪಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ಯಾವುದೇ  ಯಾಂತ್ರಿಕ ಅನುವಾದವೂ ಮನುಷ್ಯ ಅನುವಾದದ ಗುಣಮಟ್ಟವನ್ನು ಮೀರಲು ಕಷ್ಟವಿದೆ. ಆದರೆ ಮನುಷ್ಯ – ಯಂತ್ರ ಅನುವಾದಗಳ ಸಮನ್ವಯದಿಂದ ಅನುವಾದವನ್ನು ಕರಾರುವಾಕ್ಕಾಗಿ, ಬಹುಬೇಗ ಮಾಡಬಹುದು ಎಂಬುದು ಶ್ರೀ ನಾರಾಯಣಮೂರ್ತಿಯವರ ಅಭಿಮತ. ಅವರ ತಂತ್ರಾಂಶವು ಯಾವುದೇ ಸಾಮಾನ್ಯ ಗಣಕಯಂತ್ರದಲ್ಲಿ  ಒಂದು ಸೆಕೆಂಡಿಗೆ ಒಂದು ಲಕ್ಷ ಕನ್ನಡ ವಾಕ್ಯಗಳನ್ನು ತೆಲುಗಿಗೆ ಅನುವಾದ ಮಾಡುತ್ತದೆ.
  5. ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಟೆಕ್ನಾಲಜಿ ಡೆವಲಪ್‌ಮೆಂಟ್‌ ಫಾರ್‌ ಇಂಡಿಯನ್‌ ಲಾಂಗ್ವೇಜಸ್‌ (ಟಿಡಿಐಎಲ್‌) ಎಂಬ ಸಂಸ್ಥೆಯು ಕಾರ್ಯ ನಿರ್ವಹಿಸುತ್ತ ನೂರಾರು ಭಾಷಾ ಸಾಧನಗಳನ್ನು ಪ್ರಕಟಿಸಿದೆ. ಈ ಸಾಧನಗಳನ್ನು ಸಾರ್ವಜನಿಕರ ಮುಕ್ತ ಬಳಕೆಗೆ ತತ್‌ಸಾಮಯಿಕಗೊಳಿಸಿ ಬಿಡುಗಡೆ ಮಾಡಬೇಕೆಂದು ನಾವೆಲ್ಲರೂ ವಿನಂತಿಸಬೇಕು.
  6. ಮಾತೃಭಾಷೆಯಲ್ಲೇ ಮುಕ್ತಜ್ಞಾನವನ್ನು ಪಸರಿಸಲು ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು ಉಚಿತವಾದ ವಿವಿಧ ವಿಷಯಾಧಾರಿತ ಪಠ್ಯಕ್ರಮಗಳನ್ನು ರೂಪಿಸಬೇಕು. ಪ್ರಾಥಮಿಕ ಮಾಧ್ಯಮದಲ್ಲೇ ಕನ್ನಡವನ್ನು ತರುವುದು ಕಷ್ಟವಾಗಿರುವುವಾಗ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಮಾತೃಭಾಷಾ ಮಾಧ್ಯಮವನ್ನು ರೂಪಿಸುವುದು ಅತಿ ದೊಡ್ಡ ಸವಾಲು. ಇದನ್ನು ಎದುರಿಸಲು ಸರ್ಕಾರಗಳು ಎಲ್ಲ ತರಗತಿಗಳಲ್ಲೂ, ಎಲ್ಲ ವಿಷಯಗಳಲ್ಲೂ ಮಾತೃಭಾಷಾ ಪಠ್ಯಪುಸ್ತಕಗಳನ್ನು ರೂಪಿಸಲು ಮುಂದಾಗಬೇಕು. ಇಂಗ್ಲಿಶಿನಂತಹ ವಸಾಹತುಶಾಹಿ ಭಾಷೆಯ ಪ್ರಭಾವ ಮತ್ತಷ್ಟು ಹೆಚ್ಚುತ್ತಿರುವ ಸಂದರ್ಭದಲ್ಲಿ ನಾವು ಭಾಷೆಗಳ, ಲಿಪಿಗಳ ಬೆಳವಣಿಗೆಗೆ ಒತ್ತಡ ಹೇರುವ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಯಾರಿಗೂ ಯಾವ ಒತ್ತಾಯವನ್ನೂ ಮಾಡುವುದಿಲ್ಲ ಎಂದಾದರೆ ನಾವು ಮಾತೃಭಾಷೆಯ ಬಗ್ಗೆ ಮಾತನಾಡುವುದೇ ವ್ಯರ್ಥ.
  7. ಮುಕ್ತಜ್ಞಾನದ ನಕಾಶೆ ರಚನೆ, `ಅರಿವಿನ ಗೋಮಾಳ’ದ ಸ್ಥಾಪನೆ: ಜ್ಞಾನವೆಂದರೆ ಸಮಕಾಲೀನ ವಿಜ್ಞಾನ, ಮಾನವಿಕ ವಿಷಯಗಳಷ್ಟೇ ಅಲ್ಲ ಎಂಬ ಹಿನ್ನೆಲೆಯಲ್ಲಿ ನಮ್ಮ ದೇಶದ ಎಲ್ಲ ಅರಿವಿನ ಶಾಖೆಗಳ ಸಮಗ್ರ ನಕಾಶೆಯೊಂದನ್ನು ಸಿದ್ಧಪಡಿಸುವ ತುರ್ತು ಈಗ ಇದೆ. ಈಗಲೂ ಅಲ್ಲಲ್ಲಿ ಕಂಡುಬರುವ ದೇಸಿ ಲೋಹ ವಿಜ್ಞಾನ, ನಾಟಿ ವೈದ್ಯಕೀಯದಂತಹ ದೇಸಿ ಜ್ಞಾನ,  ನಮ್ಮ ವಾಸ್ತುಶಿಲ್ಪ, ಜನಪದ ಕಲಾಪ್ರಕಾರಗಳ ಪಾರಂಪರಿಕ ಜ್ಞಾನ,  ಸಮುದಾಯದಲ್ಲಿ ನಶಿಸಿಹೋಗುತ್ತಿರುವ  ಮೌಖಿಕ ಜ್ಞಾನ – ಹೀಗೆ ಎಲ್ಲ ಬಗೆಯ ಬದುಕು ಕಟ್ಟುವ ಅರಿವಿನ ಹರಿವನ್ನು ದಾಖಲಿಸುವ ಕೆಲಸಕ್ಕೆ ಈ ನಕಾಶೆಯನ್ನು ಬಳಸಬೇಕು. ಇದನ್ನು ನಾನು `ಅರಿವಿನ ಗೋಮಾಳ’  ಎಂದು ಕರೆಯುತ್ತೇನೆ. ಅರಿವನ್ನು ಎಲ್ಲರೂ ಸಮಾನವಾಗಿ ಪಡೆಯುವುದಕ್ಕೆ ಇಂಥ ವೇದಿಕೆಗಳು ಈ ಕಾಲದ ಅಗತ್ಯವಾಗಿದೆ.  ಪಠ್ಯದಲ್ಲಿರುವ ಜ್ಞಾನದ ಹೊರತಾಗಿರುವ ಇಂಥ ಸಾವಿರಾರು ಕವಲುಗಳ  ದೇಸಿ ಜ್ಞಾನವನ್ನು ವೈಜ್ಞಾನಿಕವಾಗಿ ದಾಖಲೀಕರಿಸುವ ಕೆಲಸ ನಿಧಾನವಾಗಿ ನಡೆಯುತ್ತಿರುವುದು ವಿಷಾದನೀಯ. ನಮ್ಮ ಸರ್ಕಾರಗಳು ವಿವಿಧ ಭಾಷೆಗಳಲ್ಲಿ ಇರುವ ಮೌಖಿಕ ಪರಂಪರೆಯ ಅರಿವಿನ ದಾಖಲೀಕರಣ, ಹಳೆಯ ತಾಳೆಗರಿಗಳ ದಾಖಲೀಕರಣ- ಪಠ್ಯಸಂಗ್ರಹ, – ಇವನ್ನೆಲ್ಲ ಅತ್ಯಂತ ಬೇಗ ಮಾಡದಿದ್ದರೆ ಈಗ ನಡೆಯುತ್ತಿರುವ ಕೆಲಸಗಳೂ ವ್ಯರ್ಥ. ಆರು ವರ್ಷಗಳಿಂದ ಮುಕ್ತಜ್ಞಾನ ರಂಗದ ಬಗ್ಗೆ ಅಧ್ಯಯನ ನಡೆಸುತ್ತಿರುವ ನನಗೆ ಈ ಅಪಾಯ ಹೆಚ್ಚು ಹೆಚ್ಚಾಗಿ ಕಾಣುತ್ತಿದೆ.

ಮುಕ್ತ ಮುಕ್ತ ಎಂದು ತಂತ್ರಾಂಶದಲ್ಲಿ ಮುಕ್ತತೆ ಇರಬೇಕೆಂದು ಹೋರಾಟ ಆರಂಭಿಸಿದ ಸಾಫ್ಟ್‌ವೇರ್‌ ಸಂತ ರಿಚರ್ಡ್‌ ಸ್ಟಾಲ್‌ಮನ್‌, ನೀವು ಗ್ಯಾಜೆಟ್‌ ಅಲ್ಲ ಎಂದು ಪ್ರತಿಪಾದಿಸಿದ ಜೆರೋನ್‌ ಲೇನಿಯೆರ್‌, `ನಾಲೆಜ್‌ ಕಾಮನ್ಸ್‌’ ಬಗ್ಗೆ ಆಳ ಅಧ್ಯಯನ ನಡೆಸಿದ ಚಾರ್ಲೆಟ್‌ ಹೆಸ್‌ ಮತ್ತು ಎಲಿನಾರ್‌ ಆಸ್ರಾಮ್‌, ವಿಕಿಪೀಡಿಯವನ್ನು ಆರಂಭಿಸಿ ಮುಕ್ತಜ್ಞಾನದ ರುಚಿ ಹತ್ತಿಸಿದ ಜಿಮ್ಮಿ ವೇಲ್ಸ್‌, ಪ್ರಾಜೆಕ್ಟ್‌ ಗುಟೆನ್‌ಬರ್ಗ್‌, ಆರ್ಕೈವ್‌, ಎಂ ಐ ಟಿ – ಈ ಎಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪ್ರಯತ್ನದಿಂದ ಜಾಗತಿಕವಾಗಿ ಮುಕ್ತಜ್ಞಾನದ ಅಭಿಯಾನವು ಹುರುಪಿನಿಂದ ನಡೆದಿದೆ. ಇದೆಲ್ಲವನ್ನೂ ಭಾರತೀಯ ಸಮಾಜದ ಸನ್ನಿವೇಶಗಳಿಗೆ ತಕ್ಕಂತೆ ಅಳವಡಿಸಿಕೊಂಡು ಮುಕ್ತಜ್ಞಾನ ಸಮಾಜವನ್ನು ಕಟ್ಟುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ.

ನನ್ನ ಮುಕ್ತಜ್ಞಾನ ಯತ್ನಗಳಿಗೆ ಬೆನ್ನೆಲುಬಾಗಿ ನಿಂತಿದ್ದ ರಾಷ್ಟ್ರಕವಿ ಜಿಎಸ್‌ಎಸ್‌ ಅವರ ಕವನವೊಂದನ್ನು ಉಲ್ಲೇಖಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಬೀಜದಿಂದ ಬೀಜಕ್ಕೆ

ಬೀಜದಿಂದ ಬೀಜಕ್ಕೆ

ಇದರ ಪಯಣ.

ಒಂದು ಹತ್ತಾಗಿ, ಹತ್ತು ನೂರಾಗಿ

ನೂರು ಸಾವಿರವಾಗಿ ಹೀಗೇ

ಅಸಂಖ್ಯವಾಗಿ ಅನಂತದ ಕಡೆಗೆ

ಇದರ ದಾರಿ.

ಬೀಜದಿಂದ ಬೀಜಕ್ಕೆ :

ಈ ನಡುವೆ ಎಷ್ಟೊಂದು ಮರ, ಎಷ್ಟು ಎಲೆ

ಎಷ್ಟು ಹೂ, ಎಷ್ಟು ಹಣ್ಣು !

ಎಲ್ಲಾ ಮಣ್ಣು

ಈ ಒಂದು ಬೀಜ ಕಡೆಗೂ ಮತ್ತೆ

ಬೀಜವಾಗುವುದಕ್ಕೆ.

ಬೀಜದಿಂದ ಬೀಜಕ್ಕೆ-

ನಡುವೆ ಎಷ್ಟೊಂದು ದೇಹ,

ಎಷ್ಟೊಂದು ಕುಡಿ-ಮಿಡಿ-ಕೊಂಬೆ ರೆಂಬೆಗಳ ಉದ್ದಕ್ಕು

ಜೋಗುಳದ ತೊಟ್ಟಿಲು ನೂರಾರು ಮೆಟ್ಟಿಲು

ಎಷ್ಟೊಂದು ಹಗಲಿರುಳು ಋತುಗಳಾರೈಕೆ

ಎಷ್ಟು ಬಗೆ ರಸವನ್ನೆತ್ತಿ

ಕಣ್ಣಿಗೆ ಕಿವಿಗೆ ಮೂಗು ನಾಲಗೆಗೆ

ರುಚಿಕೊಟ್ಟು, ಕಡೆಗೆಲ್ಲವನ್ನೂ ಮಣ್ಣಿಗೆ ಬಿಟ್ಟು,

ಕೊನೆಗೊಂದು ನೆನಪಾಗಿ, ಕಂಬನಿಯಾಗಿ,

ಕತೆಯಾಗಿ, ಕವಿತೆಯಾಗಿ,

ಲೈಬ್ರರಿಯ ತುಂಬ ಪುಸ್ತಕವಾಗಿ,

ಮತ್ತೆ ಒಂದು ಹತ್ತಾಗಿ ಹತ್ತು ನೂರಾಗಿ

ಲಕ್ಷೋಪಲಕ್ಷವಾಗಿ, ನೆಲದೊಳಗೆ ಬಿದ್ದು ಮೇಲೆದ್ದು

ಮರ ಮರದ ತುದಿಗೇರಿ ಮತ್ತೆ ಬೀಜವೆ ಆಗಿ

ಹಿಂದು ಮುಂದನ್ನೆಲ್ಲ ತನ್ನೊಳಗೆ ಸಂಧಿಸಿಕೊಂಡ ಬಿಂದುವಾಗಿ

ಬೀಜದಿಂದ ಬೀಜಕ್ಕೆ

ಬೀಜದಿಂದ ಬೀಜಕ್ಕೆ

ಇದರ ಪಯಣ : ಅಚಲೋಯಂ ಸನಾತನಃ”

ವಂದನೆಗಳು

==============================

ಬೇಳೂರು ಸುದರ್ಶನ

ಸಲಹೆಗಾರ, ಭಾರತವಾಣಿ ಯೋಜನೆ

ಭಾರತೀಯ ಭಾಷಾ ಸಂಸ್ಥೆ, ಮೈಸೂರು.

ಮಿಂಚಂಚೆ: beluru@beluru.com

ಕರವಾಣಿ: ೯೭೪೧೯೭೬೭೮೯

ಹಂಪಿಯ ಚಿತ್ರಗಳ ಕೃಪೆ: ಮಿತ್ರ, ನಮ್ಮ ನಾಡಿನ ಖ್ಯಾತ ಛಾಯಾಗ್ರಹಣಕಾರ  ಶ್ರೀ ಶಿವಶಂಕರ ಬಣಗಾರ.

Share. Facebook Twitter Pinterest LinkedIn Tumblr Email
Previous ArticleMy Bansuri Guru, friend, guide and philosopher
Next Article ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್‌ಲೈನ್‌ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.