Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
ಲೇಖನಗಳು

೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 14, 2015Updated:May 19, 20252 Comments8 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಈ ಜುಲೈ ೧೪ಕ್ಕೆ (೨೦೧೫) ನನಗೆ ೫೦ ವರ್ಷಗಳಾದವು. ದಶಮಾಂಶ ಪದ್ಧತಿಯಲ್ಲಿ ಇದು ಹಾಫ್‌ ಸೆಂಚುರಿ! ಹೊರತು ೫೦ಕ್ಕೆ ಅಂಥ ವಿಶೇಷ ಏನೂ ಇಲ್ಲ. ಅದು ಪ್ರೈಮ್‌ ನಂಬರ್‌ ಕೂಡಾ ಅಲ್ಲ. ಹಾಗೆ ನೋಡಿದರೆ ೪೭ ಮತ್ತು ೫೩ – ಈ ಪ್ರೈಮ್‌ ಸಂಖ್ಯೆಗಳ ನಡುವೆ ಸರಿಯಾಗಿ ಮಧ್ಯದಲ್ಲಿ ೫೦ ಸಿಕ್ಕಿಕೊಂಡಿದೆ, ಅಷ್ಟೆ!ನನಗೆ ೫೦ ವರ್ಷಗಳಾದ ಈ ಹೊತ್ತಿನಲ್ಲಿ ನಾನು ಹರ್‍ಯಾನಾ ರಾಜ್ಯದ ಯಾವುದೋ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ನನ್ನ ಮಗ ಹೆಚ್ಚಿನ/(ಹುಚ್ಚಿನ!) ಓದಿಗಾಗಿ ಸೋನಿಪತ್‌ಗೆ ಬಂದಿದ್ದಾನೆ. ಅವನೊಂದಿಗೆ ಹೀಗೇ ಬಂದಿದ್ದೇನೆ.

ಈ ಐವತ್ತು ವರ್ಷಗಳು ಮುಖ್ಯ ಎಂದುಕೊಂಡರೂ, ನಾನು ದುಡಿಮೆಯ ಹೊರತಾಗಿ ಸಾಧಿಸಿದ್ದು ಅಂಥದ್ದೇನಿಲ್ಲ. ಕೆಲವು ಪುಸ್ತಕಗಳನ್ನು ಬರೆದಿದ್ದೂ, ಒಂದೆರಡು ಪ್ರಶಸ್ತಿಗಳು ಬಂದಿದ್ದೂ ನಿಜವೇ. ಅವನ್ನೆಲ್ಲ ಸಾಧನೆ ಎನ್ನುವುದರಲ್ಲಿ ಅರ್ಥವಿಲ್ಲ. ಸಾಧಿಸುವುದು ಎಂದರೆ ನನಗೆ ಖುಷಿಯಾಗುವುದಲ್ಲ; ಇನ್ನೊಬ್ಬರಿಗೆ ಸಮಾಧಾನ ಆಗುವುದು ಎಂಬ ನಂಬಿಕೆ ನನ್ನದು. ಹಾಗೆ ಮಾಡುವ ಹಲವು ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ವಿಶ್ವಾಸದಿಂದ ಹೇಳಬಲ್ಲೆ.

ನಾನು ಹುಟ್ಟಿ ಬೆಳೆದಿದ್ದು ಹವ್ಯಕ ಬ್ರಾಹ್ಮಣರ ಮನೆಯಲ್ಲಿ; ಆದರೆ ಈ ಮನೆಯು ಮಠದಿಂದ ಬಹಿಷ್ಕಾರಕ್ಕೆ ಒಳಪಟ್ಟಿದೆ ಎಂದು ನನಗೆ ಗೊತ್ತಾಗಿದ್ದೇ ತಡವಾಗಿ! ಆ ಕಾಲದಲ್ಲೇ ಪ್ರಗತಿಪರ ಚಿಂತನೆಗಳಿಂದ ಪ್ರಭಾವಿತನಾಗಿ ಅವನ್ನೆಲ್ಲ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದ ನನ್ನ ಅಜ್ಜ (ತಾಯಿಯ ತಂದೆ) ವೆಂಕಟರಮಣ ಭಟ್‌ ವಿಧುರರಾಗಿದ್ದವರು. ಬಾಲವಿಧವೆಯಾಗಿದ್ದ ನನ್ನ ಅಜ್ಜಿ ಪಾರ್ವತಿಯನ್ನು ಅವರು ಶಿರಸಿಯ ಅಕದಾಸ ಗಣಪತಿ ಭಟ್‌ ಮತ್ತು ಮಂಕಾಳಮ್ಮ ಎಂಬ ಕ್ರಾಂತಿಕಾರಿ ದಂಪತಿಯ ಸಮ್ಮುಖದಲ್ಲಿ ವಿವಾಹವಾದರು. ಬಾಲ ವಿಧವೆಯರಿಗೆ ಬಾಳು ಕೊಡುವ ಆ ಕಾಲದ ಅಗತ್ಯ ಈಗ ಇಲ್ಲದಿರಬಹುದು. ಆದ್ದರಿಂದಲೇ ವಿಧವಾ ವಿವಾಹಕ್ಕೆ ಈಗ ಹೆಚ್ಚು ಸಾಮಾಜಿಕ ಮಹತ್ವ ಕೊಡಬೇಕಿಲ್ಲ. ವಿಧವಾ ವಿವಾಹದಿಂದಾಗಿ ನನ್ನ ಅಜ್ಜ-ಅಜ್ಜಿಯರನ್ನು ಮಠದಿಂದ / ಬ್ರಾಹ್ಮಣ ಸಮುದಾಯದಿಂದ ಬಹಿಷ್ಕರಿಸಲಾಯಿತು. ಈಗಲೂ ಈ ಬಹಿಷ್ಕಾರ ಚಾಲ್ತಿಯಲ್ಲಿದೆ. ಅದರಿಂದ ನನಗೆ ಯಾವ ನಷ್ಟವೂ ಆಗಿಲ್ಲ. ಆದರೆ ನಮ್ಮ ಕುಟುಂಬದ ಹಾಗೆ ಸಾವಿರಾರು ಕುಟುಂಬಗಳು ಇಂಥ ಅವೈಜ್ಞಾನಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ ಎಂಬುದನ್ನು ಬಲ್ಲೆ. ನಾನಾದರೋ ನಗರದ ಬದುಕಿನಲ್ಲಿ ನನ್ನದೇ ಐಡೆಂಟಿಟಿ ಹೊಂದಿದ್ದೇನೆ. ಆದರೆ ಹವ್ಯಕ ಸಮಾಜದ ನಡುವೆಯೇ ಬದುಕಬೇಕಿರುವ ಈ ಬಹಿಷ್ಕೃತ ಹವ್ಯಕರ ಯಾತನೆ ಹೇಳತೀರದು.

ಇಂಥ ಬಹಿಷ್ಕೃತ ಕುಟುಂಬದ ಮಗಳನ್ನು ಮದುವೆಯಾದ ನನ್ನ ತಂದೆ ಮಂಜಪ್ಪನವರನ್ನೂ ನಾನು ಅಭಿನಂದಿಸಲೇಬೇಕು. ಆ ಕಾಲದಲ್ಲಿ ಊರಿನ ಪಟೇಲರಾಗಿದ್ದ ಅವರು ಇಂಥ ಮದುವೆಗೆ ಮುಂದಾಗಿದ್ದು ತುಂಬಾ ಧೈರ್ಯದ ನಡೆಯೇ.

ಕಾಲಪ್ರವಾಹದಲ್ಲಿ ಊರು ಬಿಡಬೇಕಾಗಿ ಬಂದ ನನ್ನ ಅಪ್ಪ ಕರ್ನಾಟಕದ ಹಲವೆಡೆ ನೆಲೆನಿಲ್ಲಲು ಯತ್ನಿಸಿದರು. ಅದರಿಂದಾಗಿ ನಾವೆಲ್ಲರೂ ಮಕ್ಕಳು ಊರೂರು ತಿರುಗುವ, ವರ್ಷಕ್ಕೊಂದು ಎರಡು ಶಾಲೆ / ಮನೆಗಳಲ್ಲಿ ಓದುವ ಸುವರ್ಣಾವಕಾಶ ಒದಗಿತು. ಕಡು ಬಡತನವು ದಟ್ಟ ಅನುಭವಗಳನ್ನು ಒದಗಿಸುತ್ತದೆ!

ನಾನು ಓದಿದ ಶಾಲೆಗಳ, ಬೆಳೆದ ಊರುಗಳ ಪಟ್ಟಿ ನೋಡಿ: ಪ್ರಿನರ್ಸರಿ – ಹೊರನಾಡು; ನರ್ಸರಿ – ಕಳಸ; ಒಂದು-ಹೊರಬೈಲು ಪ್ರಾಥಮಿಕ ಶಾಲೆ; ಎರಡು: ಸಿದ್ಧೇಶ್ವರ ಶಾಲೆ, ವಿನೋಬ ನಗರ, ಸಾಗರ; ಮೂರು – ನಗರ (ಬಿದನೂರು); ನಾಲ್ಕು – ತೀರ್ಥಹಳ್ಳಿ; ಐದು- ಸುಬ್ರಹ್ಮಣ್ಯ; ಆರು,ಆರೂವರೆ- ಸಾಗರ ವಿನೋಬನಗರ ಶಾಲೆ; ಏಳರ ಇನ್ನರ್ಧ- ಕೆ ಬಿ ಬಡಾವಣೆ ಶಾಲೆ, ದಾವಣಗೆರೆ; ಎಂಟು,ಎಂಟೂವರೆ – ಪ್ರೌಢಶಾಲೆ, ದಾವಣಗೆರೆ; ಒಂಬತ್ತರ ಇನ್ನರ್ಧ – ಸಾಗರ; ಹತ್ತು (ಎಸೆಸೆಲ್ಸಿ) – ಪೊನ್ನಂಪೇಟೆ ಜ್ಯೂನಿಯರ್‌ ಕಾಲೇಜು; ಹನ್ನೊಂದು- ಹೂವಿನ ಹಡಗಲಿ (ಜಿಬಿಆರ್‌); ಹನ್ನೆರಡು – ಎಸ್‌ಡಿಎಂ, ಉಜಿರೆ (ಮನೆ ಇದ್ದಿದ್ದು ಹರಪನಹಳ್ಳಿಯಲ್ಲಿ); ಬಿಎಸ್ಸಿ ಮೂರು ತಿಂಗಳು – ಡಿ ಆರ್‌ ಎಂ, ದಾವಣಗೆರೆ; ಇಂಜಿನಿಯರಿಂಗ್‌ ಮೂರು ಸೆಮಿಸ್ಟರ್‌ – ಬಿಐಇಟಿ, ದಾವಣಗೆರೆ. ದೂರಶಿಕ್ಷಣದಲ್ಲಿ ಗಣಿತ ಬಿಎಸ್‌ಸಿ – ಮದ್ರಾಸು ವಿಶ್ವವಿದ್ಯಾಲಯ..

ಅಲ್ಲಿಗೆ ಮುಕ್ತಾಯ! ಎಲ್ಲೂ ಫೇಲ್‌ ಆಗಲಿಲ್ಲ ಅನ್ನೋದೊಂದೇ ಸಮಾಧಾನ.

ಇದಿಷ್ಟಾದ ಮೇಲೆ ವಿದ್ಯಾರ್ಥಿ ಪರಿಷತ್ತಿನಲ್ಲಿ ಎರಡು ವರ್ಷ ವಿಸ್ತಾರಕನಾಗಿ ವಿದ್ಯಾರ್ಥಿ ಪಥ ಎಂಬ ಮಾಸಪತ್ರಿಕೆಯನ್ನು ಅಂತೂ ಇಂತೂ ನಡೆಸಿದೆ. ಅದಕ್ಕಾಗಿ ಜೆ ಪಿನಗರಕ್ಕೆ ಬೈಸಿಕಲ್‌ನಲ್ಲಿ ಹೋಗಿ ಬರುತ್ತಿದ್ದ ನೆನಪು ಗಾಢವಾಗಿದೆ. ಈ ಎರಡು ವರ್ಷಗಳಲ್ಲೇ ನಾನು ಬರೆದೂ ಬದುಕಬಹುದು ಎಂಬ ವಿಶ್ವಾಸ ಮೂಡಿತು. ನನ್ನ ಮೊದಲ ನುಡಿಚಿತ್ರ `ಪಾಲಿಟೆಕ್ನಿಕ್‌ಗಳ ಕಥೆ – ವ್ಯಥೆ’ ಮುಖುಪುಟದಲ್ಲಿ ಸುಧಾ ಪತ್ರಿಕೆಯಲ್ಲಿ ಪ್ರಕಟವಾಯಿತು. ಆಗ ಸಂಪಾದಕರಾಗಿದ್ದ ಶ್ರೀ ಎಂ ಬಿ ಸಿಂಗ್‌, ಇನ್ನಾವುದೋ ಕವರ್‌ಪೇಜ್‌ನ್ನು ಬದಿಗೆ ಸರಿಸಿ ಇದನ್ನು ತೆಗೆದುಕೊಂಡರು ಎಂದು ಅಲ್ಲಿದ್ದವರು ನನಗೆ ತಿಳಿಸಿದ್ದರು.

ಕಾಟನ್‌ಪೇಟೆಯ ಎಬಿವಿಪಿ ಕಚೇರಿಯಲ್ಲಿ ಇರುವಾಗಲೇ ದೊಡ್ಡಬಳ್ಳಾಪುರದ ಆಸ್ಪಿರಿನ್‌ ಘಟಕದಲ್ಲಿ, ಬೆಂಗಳೂರಿನ ಬಿನ್ನಿ ಮಿಲ್‌ನಲ್ಲಿ ಎಫ್ಲುಯೆಂಟ್‌ ಟ್ರೀಟ್‌ಮೆಂಟ್‌ ಆಪರೇಟರ್‌ ಆಗಿ (ಅಂದರೆ ಕಾರ್ಖಾನೆಯಿಂದ ಹೊರಬರುವ ಕೊಳೆ ನೀರನ್ನು ವಿವಿಧ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳ ಮೂಲಕ ಶುದ್ಧೀಕರಿಸುವ ಕೆಲಸ) ಕೆಲಸ ಮಾಡಿದೆ. ಗಾಂಧಿ ಬಜಾರಿನಲ್ಲಿ ಟಿ ವಿ ಸೇಲ್ಸ್‌ಬಾಯ್‌ ಆದೆ. ಆ ಕಾಲದ ಎಲ್ಲ ಟಿವಿ ಮಾಡೆಲ್‌ಗಳ ಸ್ಪೆಸಿಫಿಕೇಶನ್‌ಗಳು ನನಗೆ ಬಾಯಿಪಾಠವಾಗಿದ್ದವು.

ವಿದ್ಯಾರ್ಥಿ ಪರಿಷತ್ತಿನಲ್ಲಿ ಇರುವಾಗಲೇ, ಈಗಿನ ‘ಉತ್ಥಾನ’ದ ಉಸ್ತುವಾರಿ ಹೊಂದಿದ್ದ, (ಈಗ ಅದರ ಸಂಪಾದಕರು) ಶ್ರೀ ಕೇಶವ ಭಟ್‌ ಜೊತೆಗೆ `ಪೆನ್‌ಫ್ರೆಂಡ್‌’ ಎಂಬ ಯುವ ಪತ್ರಕರ್ತರ ವೇದಿಕೆ ರಚಿಸಿದೆ. ಅದರಲ್ಲಿ ಇದ್ದ ಹಲವು ಈಗ ಉನ್ನತ ಹುದ್ದೆಗಳಲ್ಲಿದ್ದಾರೆ. ದಿಲ್ಲಿಯಿಂದ ಅದಕ್ಕೆ ಬೆಂಬಲ ನೀಡುತ್ತಿದ್ದ ಶ್ರೀ ಬದರಿನಾಥ್‌ ಈಗ ದೇಶದ ಮುಂಚೂಣಿ ಪತ್ರಕರ್ತರು, ಯೂರಿಯಾ ಹಗರಣವನ್ನು ಬಯಲಿಗೆಳೆದ ಸಾಹಸಿ.

ಅಲ್ಲಿಂದ ಶಿರಸಿ; ಮದುವೆ; ಗ್ರಾಮೀಣ ಪತ್ರಿಕೋದ್ಯಮ; ಒಂದೂವರೆ ವರ್ಷ ಗಾಣದ ಎತ್ತಿನಂತೆ ದುಡಿದು ಮಂಗಳೂರಿಗೆ – ಹೊಸದಿಗಂತದ ಸುದ್ದಿ ಸಂಪಾದಕನಾದೆ. ದೊಡ್ಡಪುಟಗಳ ಪತ್ರಿಕೆ ಸೇರಿದಾಗ ಮಗನಿಗೆ ಒಂದೂಕಾಲು ವರ್ಷ. ಅವನನ್ನು ಆಡಿಸಬೇಕು, ಮಲಗಿಸಬೇಕು; ರಾತ್ರಿ ಪಾಳಿಯಲ್ಲಿ ದುಡಿಯಬೇಕು. ಎರಡು ವರ್ಷ ಹೊರಜಗತ್ತಿನ ಸಂಪರ್ಕವೇ ಇಲ್ಲದೆ ಜಗತ್ತಿನ ಎಲ್ಲ ಸುದ್ದಿಗಳನ್ನೂ ಮುಖಪುಟದಲ್ಲಿ ರೂಪಿಸುವ ಕೆಲಸ ಮಾಡಿದೆ. ಆ ಕಾಲದಲ್ಲಿ ನನಗಿಂತ ಮುಂಚೆಯೇ ಇದ್ದ ಶ್ರೀ ದಿನಕರ ಇಂದಾಜೆ (ಈಗ ಪತ್ರಿಕೆಯ ಸಂಪಾದಕರು) ಡೆಸ್ಕಿನಲ್ಲಿ ನನಗೆ ತುಂಬಾ ನೆರವಾದರು. ಪಿಟಿಐ ಅನುವಾದದ ಸೂತ್ರಗಳನ್ನು ತಿಳಿಸಿದರು. ಅಲ್ಲೇ ನಾನು ಪಿಟಿಐ ಕರಕರ ಕೇಳುತ್ತ, ಬಳ್ಳಕ್ಕ (ಪ್ರಜಾವಾಣಿಯಲ್ಲಿ ಎಂ ಜಿ ಬಾಲಕೃಷ್ಣ ಆಗಿದ್ದಾರೆ!)ನ ನಗೆಯ ಮೇಲೆ ಹಾಯಿಕುಗಳನ್ನು ಎಸೆಯುತ್ತ, ಕದ್ರಿ ಪಾರ್ಕಿನಲ್ಲಿ ಮಗನೊಂದಿಗೆ ಭೇಲ್‌ಪುರಿ ಸವಿಯುತ್ತ ಕಾಲ ಕಳೆದೆ! ಆ ಕಾಲದಲ್ಲಿ ಮಂಗಳೂರಿನ ಸಿಟಿ ಬಸ್‌ನಲ್ಲಿ ಸ್ಟೇಟ್‌ ಬ್ಯಾಂಕಿಗೆ ಹೋಗಿ ಮಗನಿಗೆ ಐಡಿಯಲ್‌ ಐಸ್‌ ಕ್ರೀಮ್‌ ಕೊಡಿಸಿದ್ದೇ ದೊಡ್ಡ ಸಾಧನೆ.

ಅದಾಗಿ, ೧೯೯೫ರ ಏಪ್ರಿಲ್‌ಗೆ ಬೆಂಗಳೂರಿಗೆ, ಹೊಸದಿಗಂತದಿಂದಲೇ ವರ್ಗವಾಗಿ ಬಂದವನು ಇಂದಿನವರೆಗೂ ಇಲ್ಲೇ ವಕ್ಕರಿಸಿದ್ದೇನೆ. ಈ ಇಪ್ಪತ್ತು ವರ್ಷಗಳಲ್ಲಿ ಮಾಡಿದ ಕೆಲಸಗಳ ಪಟ್ಟಿ ಮತ್ತು ಕೆಲಸ ಬಿಟ್ಟ ಕಾರಣಗಳು ಇಲ್ಲಿವೆ:


ಹೀಗೆ, ಕೊಳೆನೀರನ್ನು ಸಂಸ್ಕರಿಸುವ ಶಿಫ್ಟ್‌ ಕೆಲಸದಿಂದ ಹಿಡಿದು ಕೊಳನೀರಿನ ಬಗ್ಗೆ ಜನಜಾಗೃತಿ ಮೂಡಿಸುವವರೆಗೆ ನನ್ನ ಕೆಲಸದ ಹರವು ಇದೆ! ಅಂದು ಬಿನ್ನಿಮಿಲ್‌ನ ಸೆಲ್ಲಾರ್‌ ನಲ್ಲಿ ಹೈಡ್ರೋಕ್ಲೋರಿಕ್‌ ಆಸಿಡ್‌ ಅಳೆದಿದ್ದೆಲ್ಲಿ, ಇಲ್ಲಿ ಈಗ ನನ್ನದೇ ಒಂದು ಪುಟ್ಟ ಕಚೇರಿಯಲ್ಲಿ ಸಂಗೀತ ಕೇಳುತ್ತ ಮನಸ್ಸಿಗೆ ಬಂದಿದ್ದನ್ನೆಲ್ಲ ಬರೆಯುವ ಕ್ಷಣವೆಲ್ಲಿ?

ಹೀಗಿದ್ದೂ, ಇದೇನೂ ದೊಡ್ಡದಲ್ಲ. ನನಗಿಂತ ಹೀನ ಸ್ಥಿತಿಯಲ್ಲಿ ಇದ್ದ ಹಲವರು ಅತ್ಯಂತ ಶ್ರಮವಹಿಸಿ ನನಗಿಂತ ಎಷ್ಟೋ ದೊಡ್ಡ ಸಾಧನೆ ಮಾಡಿದ್ದಾರೆ. ರಸ್ತೆಯ ಹಳದಿ ಕಪ್ಪು ಗುರುತು ಬಣ್ಣ ಬಳಿಯುವ ಕೆಲಸ ಮಾಡಿದವ ಈಗ ತನ್ನದೇ ವಿಲ್ಲಾ ಕಟ್ಟಿಕೊಂಡಿದ್ದಾನೆ; ಉಚಿತ ಹಾಸ್ಟೆಲಿನಲ್ಲಿ ಹೇಗೋ ಬದುಕಿದ್ದ ಕಲಾವಿದ ಈಗ ಇಂಜಿನಿಯರಿಂಗ್‌ ಕಾಲೇಜಿನ ವಿಭಾಗ ಮುಖ್ಯಸ್ಥ; ಶುಲ್ಕ ಕಟ್ಟಲೂ ಹಣವಿಲ್ಲದೆ ಪರದಾಡಿದ್ದ ಗೆಳೆಯನೀಗ ಪ್ರತಿಷ್ಠಿತ ಇಂಜನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕ. ನನ್ನ ಬದುಕಿನ ಸುತ್ತಮುತ್ತಲೇ ಇಂಥ ಶ್ರಮಜೀವಿಗಳು ಇರಬೇಕಾದರೆ ದೂರದ ಉದಾಹರಣೆಯೇ ಬೇಕಿಲ್ಲ! (ರಾಮೇಶ್ವರದ ರೈಲಿನಲ್ಲಿ ಪೇಪರ್‌ ಹಂಚಿದ ಕಲಾಂ ರಾಷ್ಟ್ರಪತಿಯೂ ಆದರು!)

`ಸುದರ್ಶನ ಚಲೋ ಕೆಲಸ ಮಾಡುತ್ತಾನೆ; ಆದರೆ ಬೇಗ ಕೆಲಸ ಬಿಡುತ್ತಾನೆ’ ಎಂದು ಹಲವರು ಎದುರಾ ಎದುರು, ಬೆನ್ನಹಿಂದೆ ಹೇಳಿದ್ದಾರೆ. ಆದ್ದರಿಂದ ಇಷ್ಟು ಬರೆಯಬೇಕಾಯಿತು. ಪ್ರತಿಯೊಂದೂ ಕೆಲಸ ಬಿಡಲು ನಿರ್ದಿಷ್ಟವಾದ, ಲಿಖಿತವಾದ ಕಾರಣ ಇರುವುದರಿಂದ ಮತ್ತು ಈ ಕಾರಣಗಳನ್ನು ಕೆಲಸ ಕೊಟ್ಟವರು ಅಲ್ಲಗಳೆದಿಲ್ಲವಾದ್ದರಿಂದ ಹೆಚ್ಚು ಸಮರ್ಥನೆ ಬೇಕಿಲ್ಲ. ನಾನು ಕೆಲಸ ಬಿಟ್ಟ ಹಲವು ಸಂಸ್ಥೆಗಳು ನನಗೆ ಮತ್ತೆ ಕೆಲಸ ಕೊಟ್ಟಿವೆ; ಆಫರ್‌ ಕೊಟ್ಟಿವೆ. ನನ್ನ ವೃತ್ತಿಪರತೆಗೆ ಅದೇ ಸಾಕ್ಷಿ ಎಂಬ ಹುಂಬ ಸಮರ್ಥನೆ ನನ್ನದು!

ನಾನು ಆರೆಸೆಸ್‌ ಪ್ರಭಾವದಲ್ಲೇ ಬೆಳೆದವನು; ಎಬಿವಿಪಿಯಲ್ಲಿ ಕೆಲಸ ಮಾಡಿದವನು. ಆದರೆ ಈಗಲೂ ನನ್ನ ನೇರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್‍ಯವನ್ನು ಉಳಿಸಿಕೊಂಡಿದ್ದೇನೆ; ಇದಕ್ಕೆ ಸಂಘಟನೆಯಲ್ಲಿ ಇರುವ ಹಿರಿಯರೂ ಕಾರಣ! ಇಂಥ ಅಭಿವ್ಯಕ್ತಿ ಸ್ವಾತಂತ್ರ್‍ಯವು ಇದೆ ಎಂಬುದು ನಾನು ಸಂಘ ಪರಿವಾರವನ್ನು ಮೆಚ್ಚಲು ಇರುವ ಒಂದು ಪ್ರಮುಖ ಕಾರಣ. ಇನ್ನೊಂದು ಕಾರಣ: ಈ ದೇಶವನ್ನು ಸರ್ವಾಂಗೀಣವಾಗಿ ಬೆಳೆಸಬೇಕೆಂದು ಸಾವಿರಾರು ಜನ ಸಂಘ ಪರಿವಾರದಲ್ಲಿ ಕೆಲಸ ಮಾಡುತ್ತಿದ್ದಾರೆ; ಅವರ ಪ್ರಾಮಾಣಿಕತೆ ಪ್ರಶ್ನಾತೀತ.

ಇಷ್ಟಾಗಿ ನಾನು ಹಾದಿ ತಪ್ಪಲಿಲ್ಲವೇ ಎಂದು ಕೇಳಿದವರಿಗೆ: ನಾನು ಸಿಗರೇಟ್‌ ಸೇದಿ ಬಿಟ್ಟಿದ್ದೇನೆ; ಗುಂಡು ಹಾಕಿ ಮರೆತಿದ್ದೇನೆ. ನನ್ನ ವೈಯಕ್ತಿಕ ಮಟ್ಟದಲ್ಲಿ ಸಂಯಮ ಕಳೆದುಕೊಂಡ ಕ್ಷಣಗಳೂ ಇವೆ. ಅವನ್ನೆಲ್ಲ ಇಲ್ಲಿ ಕಾರಿಕೊಂಡು ವಿಷಾದ ವ್ಯಕ್ತಪಡಿಸುವುದಕ್ಕಿಂತ, ಅವುಗಳನ್ನು ಮೀರಿ ಬೆಳೆಯುವ ನಿರ್ಧಾರ ಮಾಡಿದ್ದೇನೆ. ಆಫ್‌ ಕೋರ್ಸ್‌, ಕಳೆದ ಮೂರು ವರ್ಷಗಳಿಂದ ನನ್ನ ಈ ಬದಲಾವಣೆಯ ಪರ್ವ ಆರಂಭವಾಗಿದೆ (೪೭ರ ಪ್ರೈಮ್‌ ವಯಸ್ಸಿನಿಂದ ಎನ್ನಿ!).

ನನ್ನ ಕಲಿಕೆ

ಈ ದಿನಗಳಲ್ಲಿ ನಾನು ಏನೇನು ಕೆಲಸ/ಕಸುಬು ಕಲಿತಿದ್ದೇನೆ ಎಂದು ಲೆಕ್ಕ ಹಾಕಿದರೆ

  1. ಡಿಟಿಪಿ ; ಆಗಿನ ಕಾಲದ ಆಫ್‌ಸೆಟ್‌ ಪ್ರಿಂಟಿಂಗ್‌ನ ಪ್ಲೇಟ್‌ಮೇಕಿಂಗ್‌; ನೆಗಟಿವ್‌ ಪಾಸಿಟಿವ್‌ ಫಿಲ್ಮ್‌ ತಯಾರಿ; ೪ ಬಣ್ಣಗಳ ಪೇಸ್ಟಪ್‌; ಪೇಜಿನೇಶನ್‌
  2. ಪತ್ರಿಕೋದ್ಯಮದಲ್ಲಿ ಗೊತ್ತೇ ಇರುವಂತೆ ಬರವಣಿಗೆಯ ವಿವಿಧ ಶೈಲಿಗಳು: ಕಥೆ, ಕವನ, ಫೀಚರ್‌, ಸುದ್ದಿ, ಸಂದರ್ಶನ, ಅನುವಾದ, ಪುಸ್ತಕ ಪ್ರಕಾಶನ, ಪತ್ರಿಕೋದ್ಯಮ ತರಬೇತಿ
  3. ಪುಟವಿನ್ಯಾಸ: ಮೊದಲು ಪೇಜ್‌ಮೇಕರ್‌, ಈಗ ಇನ್‌ಡಿಸೈನ್‌ನಲ್ಲಿ ಪುಟವಿನ್ಯಾಸ
  4. ಮಾಹಿತಿ ತಂತ್ರಜ್ಞಾನ: ಕಂಪ್ಯೂಟರ್‌, ವೈರಸ್‌ ನಿರ್ವಹಣೆ, ಎಲ್ಲಾ ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳ ಮಾಹಿತಿ; ಕನ್ನಡ ತಂತ್ರಾಂಶ ಅಭಿವೃದ್ಧಿಯಿಂದ ಹಿಡಿದು ಹಲವು ತಾಂತ್ರಿಕ ವಿಷಯಗಳ ಬಗ್ಗೆ ಅಧ್ಯಯನ ಮತ್ತು ಮಾಹಿತಿ ಸಂಗ್ರಹ (ನನ್ನ ಡಿಜಿಟಲ್‌ ದಿನಚರಿಯ ಬಗ್ಗೆ ಪ್ರತ್ಯೇಕ ಬ್ಲಾಗ್‌ ಬರೆಯುವೆ. ಅದು ನಿಮಗೆ ಹೆಚ್ಚು ಉಪಯೋಗ ಆಗಬಹುದು.)
  5. ಸಾಮಾಜಿಕ ಚಟುವಟಿಕೆ: ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಹಲವು ಬಗೆಯ ಚಟುವಟಿಕೆಗಳು; ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ; ಎಂಡೋಸಲ್ಫಾನ್‌, ಅಕ್ಕು – ಲೀಲಾ ಪ್ರಸಂಗದಿಂದ ಹಿಡಿದು ಬಿಟಿ ಬದನೆವರೆಗೆ, ಇಂಧನ ನೀತಿವರೆಗೆ ಹಲವು ಹೋರಾಟಗಳಿಗೆ ಬೆಂಬಲ, ಭಾಗಿತ್ವ ಮತ್ತು ಸರ್ಕಾರದೊಂದಿಗೆ ಸಮನ್ವಯದ ಪ್ರಯತ್ನ.
  6. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ (ಕೊಳಲು) ಕಲಿಕೆ (ಇದು ಕೇವಲ ಕಲಿಕೆಗಾಗಿ ಹೊರತು ಇನ್ನೇನೂ ಕಾರಣವಿಲ್ಲ). ರಾಗ, ಶ್ರುತಿಯ ಗಂಧ ಗಾಳಿಯಿಲ್ಲದ ನನಗೆ ಹೇಗೋ ಮಾಡಿ ಸಂಗೀತದ ಸೂತ್ರಗಳನ್ನು ಕಲಿಸುತ್ತಿರುವ ನನ್ನ ಗುರುಗಳಾದ ಶ್ರೀ ಪ್ರಕಾಶ್‌ ಚಕ್ರವರ್ತಿಯವರನ್ನು ಎಷ್ಟು ವಂದಿಸಿದರೂ ಕಡಿಮೆಯೇ. ಅವರ ಅಕಾಲಿಕ ನಿಧನ (೨೦೧೬) ನನ್ನನ್ನು ಇನ್ನಿಲ್ಲದಂತೆ ಗಾಸಿಗೊಳಿಸಿದೆ.

ನನ್ನ ಈ ಎಲ್ಲ ಸಾಹಸಗಳನ್ನು, ತಪ್ಪು-ಒಪ್ಪುಗಳನ್ನು ಹತ್ತಿರದಿಂದ ಗಮನಿಸಿದವರು ಇಬ್ಬರೇ: ನನ್ನ ಹೆಂಡತಿ ಮತ್ತು ನನ್ನ ಮಗ. ಹುಟ್ಟಾ ಶ್ರವಣಶಕ್ತಿ ಕಳೆದುಕೊಂಡಿದ್ದರೂ ಬದುಕಿನ ಬಗ್ಗೆ ಅಪಾರ ಉತ್ಸಾಹ ಹೊಂದಿರುವ ನನ್ನ ಹೆಂಡತಿ ವಿಮಲಾ ನನ್ನೆಲ್ಲ ಭಾನಗಡಿಗಳನ್ನು ಸಹಿಸಿಕೊಂಡಿದ್ದಾಳೆ. ನನ್ನ ಅತಿ ಸರಳ ಆರ್ಥಿಕ ನೀತಿಯನ್ನು (ನಾನೆಂದೂ ಭ್ರಷ್ಟತೆಯಿಂದ ಹಣ ಗಳಿಸಿಲ್ಲ)  ನನ್ನ ಮಗನೂ ಗಮನಿಸಿ ಹೊಂದಿಕೊಡಿದ್ದಾನೆ. ದಿನೇ ದಿನೇ ಸಂಬಂಧಗಳ ಘೋಟಾಳೆಗಳಲ್ಲಿ ಕಳೆದೇ ಹೋಗುತ್ತಿರುವ ಬೆಂಗಳೂರಿನಲ್ಲಿ ಇದಕ್ಕಿಂತ ಹೆಚ್ಚು ಬೇಕೆ?!

ನನ್ನ ರಾಜಕೀಯ ನಿಲುವು

ದಕ್ಷ ಆಡಳಿತ ಕೊಡುವ ಯಾವುದೇ ರಾಜಕಾರಣಿ, ಪ್ರಾಮಾಣಿಕವಾಗಿ ಅಧಿಕಾರ ಚಲಾಯಿಸುವ ಯಾವುದೇ ಅಧಿಕಾರಿ – ಇವರನ್ನು ಗೌರವಿಸಬೇಕು ಮತ್ತು ಅವರೊಂದಿಗೆ ಸಾರ್ವಜನಿಕ ಕೆಲಸಗಳಿಗಾಗಿ ಸಹಕರಿಸಬೇಕು ಎಂಬುದು ನನ್ನ ನಿಲುವು. ಇದಕ್ಕೆ ಯಾವುದೇ ಪಕ್ಷ-ಜಾತಿಯ ಚೌಕಟ್ಟು ಇಲ್ಲ. ನಾನು ಜಾತಿ ಆಧಾರದಲ್ಲಿ  ಯಾರನ್ನೂ ನಿರ್ಲಕ್ಷಿಸಿಲ್ಲ.

ಐವತ್ತು ವರ್ಷಕ್ಕೊಮ್ಮೆ ಬರೆಯಬಹುದಾದ ಅಂಕಣ ಇದು. ಇದರ ಮುಂದಿನ ಕಂತನ್ನು ಇನ್ನು ಕೇವಲ ಐವತ್ತು ವರ್ಷಗಳಲ್ಲಿ ಪ್ರಕಟಿಸಲಾಗುವುದು.

ನಾನು ಈಗ ಹೇಳುವ ಬದುಕಿನ ಸೂತ್ರಗಳು ಇಲ್ಲಿವೆ:

  1. ದುಡ್ಡು  ಸ್ಥಾನಮಾನ ಕೊಡುತ್ತದೆ ;  ಘನತೆಯನ್ನು ನಾವೇ ಸಂಪಾದಿಸಬೇಕು; ಅದಕ್ಕಾಗಿ ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. 
  2. ಕಲಿವ ತವಕ ಇಲ್ಲದಿದ್ದರೆ ನೀವು ಎಂಥ ದೊಡ್ಡ ಕೆಲಸ ಮಾಡುತ್ತಿದ್ದರೂ ನಿಷ್ಪ್ರಯೋಜಕ.
  3. ಬದುಕಿನಲ್ಲಿ ವರಮಾನದ ಹೊರತಾಗಿ ಸಮಾಜಕ್ಕಾಗಿ ಮಾಡುವ ಕೆಲಸ ಏನು, ಬರೆಯುವ ವಿಷಯ ಏನು (ವಿಶೇಷವಾಗಿ ಲೇಖಕ / ಪತ್ರಕರ್ತರಿಗೆ) ಎಂಬುದನ್ನು ಪಟ್ಟಿ ಮಾಡಲು ನಮಗೆ ಸಾಧ್ಯವಿಲ್ಲದಿದ್ದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ.
  4. ನಿಮಗೆ ಯಾರದೋ ಮಿತ್ರತ್ವ ಬೇಡವೆಂದರೆ ಕೂಡಲೇ ನಿರ್ಧರಿಸಿ; ಕೃತ್ರಿಮ ಸಂಬಂಧಗಳನ್ನು ಮುಂದುವರಿಸಬೇಡಿ. ನಾನು ಬದುಕಿನಲ್ಲಿ ಹಲವರನ್ನು ಹೀಗೆ ಡಿಲೀಟ್‌ ಮಾಡಿದ್ದೇನೆ; ಹಾಗೇ ಸೇರಿಸಿಕೊಂಡಿದ್ದೇನೆ. ಸ್ನೇಹ ಸಂಬಂಧಗಳಲ್ಲಿ ವ್ಯಾವಹಾರಿಕತೆ ಎಷ್ಟು, ನೈಜ ಕಾಳಜಿ ಎಷ್ಟು ಎಂಬುದನ್ನು ಗಮನಿಸುತ್ತಿರಿ.
  5. ಬೆನ್ನ ಹಿಂದೆ ಮಾತನಾಡುವ, ಗೇಲಿ ಮಾಡುವಂಥ ರಣಹೇಡಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತಾರ್ಕಿಕವಾಗಿ ಹೇಳುವುದಾದರೆ, ಅವರು ಹೇಳಿದ್ದೆಲ್ಲ ನಿಮಗೆ ಕೇಳಿಸಿಯೇ ಇರುವುದಿಲ್ಲ! 
  6. ನಿಮ್ಮ ನೀತಿ ನಿಲುವಿಗೆ, ಸಿದ್ಧಾಂತಕ್ಕೆ ಅಂಟಿಕೊಂಡು ಅರ್ಧ ಬದುಕು ದಾಟಿದ ಮೇಲೆ  ಕಾಂಪ್ರಮೈಸ್‌ ಆಗುವುದರಲ್ಲಿ ಅರ್ಥವಿಲ್ಲ. ಏಕೆಂದರೆ ನದಿಯನ್ನು ಅರ್ಧ ಈಜಿದ ಮೇಲೆ ವಾಪಸು ಬರುವುದಕ್ಕೂ, ಆಚೆ ದಡ ಸೇರುವುದಕ್ಕೂ ಒಂದೇ ಪ್ರಮಾಣದ ಶ್ರಮ ಬೇಕು; ವಾಪಸಾದರೆ ವಿಫಲತೆ; ದಡ ಸೇರಿದರೆ ಹೇಗೋ ಮುಗಿಸಿದೆವಲ್ಲ ಎಂಬ ಸಮಾಧಾನ! ಹಾಗಂತ ನೀವು ಮಾಹಿತಿಗಳ ಆಧಾರದಲ್ಲಿ ನಿಲುವುಗಳನ್ನು ಬದಲಿಸಿಕೊಳ್ಳಬಾರದು ಎಂದೇನಿಲ್ಲ. ಗಾಳಿ ಬಂದ ಕಡೆ ತೂರಿಕೊಳ್ಳಬೇಡಿ ಎಂಬುದೇ ನನ್ನ ಇರಾದೆ. 
  7. ಕೆಲಸ ಬಿಟ್ಟರೆ ವರಿ ಮಾಡ್ಕೋಬೇಡಿ; ಇನ್ನೊಂದು ಕೆಲಸ ಸಿಗೋವರೆಗೆ ಸಿನೆಮಾ-ಸಂಗೀತದಲ್ಲಿ ಮುಳುಗಿ. ಯಾಕಂದ್ರೆ ಕೆಲಸ ಮಾಡೋರಿಗೆ ಕೆಲಸ ಇದ್ದೇ ಇರುತ್ತೆ!
  8. ಭಯಂಕರ ಖುಷಿಯಿಂದ, ಕೊಂಚ ಹೊಣೆಗಾರಿಕೆಯಿಂದ, ಅಷ್ಟಿಷ್ಟು  ಉಡಾಫೆಯಿಂದ ಬದುಕುವುದೇ ಸೆಕ್ಯುರಿಟಿ. ಬಿಟ್ಟರೆ ಬದುಕಿನಲ್ಲಿ ಭದ್ರತೆ ಎನ್ನುವುದು ದಾಸರು ಹೇಳಿದಂತೆ ಲೊಳಲೊಟ್ಟೆ. 
  9. ವರ್ತಮಾನದ ಬಿಸಿಲಿನಲ್ಲೇ ಮೈಯನ್ನು ಬೆಚ್ಚಗಿಟ್ಟುಕೊಳ್ಳಿ. ಭೂತಕಾಲದ ಸಂಗತಿಗಳನ್ನು ಕುತೂಹಲದಿಂದ  ನಿರುಕಿಸಿ; ಭವಿಷ್ಯದ ಆತಂಕಗಳನ್ನು ಭಾವತೀವ್ರತೆಯಿಂದ ಎದುರಿಸಿ.
  10. ಬದುಕು ಟ್ಯಾಬ್ಲೆಟ್‌ನ ಮಾಯಾಪರದೆ ಇದ್ದಂತೆ. ನಾಜೂಕಿನಿಂದ, ಮೆದುವಾಗಿ ತೀಡಿದರೆ ಬೇಕಾದ ಆಪ್‌ಗಳು ತೆರೆದುಕೊಳ್ಳುತ್ತವೆ. ಇಲ್ಲವಾದರೆ ಹ್ಯಾಂಗ್‌!

ಇವೆಲ್ಲವೂ ನನ್ನ ಬದುಕಿನಲ್ಲೇ ಕಂಡುಕೊಂಡ ಅಂಶಗಳಾದ್ದರಿಂದ ಉಪದೇಶದ ರೂಪದಲ್ಲಿ ಬರೆದಿದ್ದೇನೆ. ಈಗ್ಲಾದ್ರೂ ವಯಸ್ಸಾಯ್ತು ಅಂತ ಗೊತ್ತಾಯ್ತಲ್ಲ!

ನನ್ನ ಜೀವನದ ಮೇಲೆ ಒಳ್ಳೆಯ ಪರಿಣಾಮ ಬೀರಿದ ಕೆಲವು  ವ್ಯಕ್ತಿತ್ವಗಳು  / ಅಥವಾ ನನ್ನಲ್ಲಿ ಇದೆ ಎಂದು ನಂಬಿದ ಅಷ್ಟ್‌ಇಷ್ಟು ಒಳ್ಳೆಯ ಅಂಶಗಳಿಗೆ ಕಾರಣರಾಗಿರುವವರು!! (ಈ ಪಟ್ಟಿ ಅಪೂರ್ಣ) (ದುಷ್ಪರಿಣಾಮ ಬೀರಿದವರನ್ನು ಹೆಸರಿಸುವುದಿಲ್ಲ. ಅವರು ಆರಾಮಾಗಿರಲಿ!)

  1. ಶ್ರೀ ಬಾಬೂರಾವ್‌ ದೇಸಾಯಿ, ವಿಶ್ವ ಹಿಂದು ಪರಿಷತ್‌
  2. ಶ್ರೀ ನ ಕೃಷ್ಣಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘ
  3. ಶ್ರೀ ಮೈ ಚ ಜಯದೇವ,  ರಾಷ್ಟ್ರೀಯ ಸ್ವಯಂಸೇವಕ ಸಂಘ
  4. ಶ್ರೀ ದತ್ತಾತ್ರೇಯ ಹೊಸಬಾಳೆ, ರಾಷ್ಟ್ರೀಯ ಸ್ವಯಂಸೇವಕ ಸಂಘ
  5. ಶ್ರೀ ದಿನೇಶ್‌ ಕಾಮತ್‌, ಸಂಸ್ಕೃತ ಭಾರತಿ
  6. ಶ್ರೀ ಜಿ ಆರ್‌ ಜಗದೀಶ, ವಿದ್ಯಾಭಾರತಿ
  7. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಸ್ವರ್ಣವಲ್ಲೀ ಮಠ
  8. ಶ್ರೀ ಚಿ ಶ್ರೀನಿವಾಸರಾಜು, ಮೇಸ್ಟ್ರು
  9. ಶ್ರೀ ಜಾಣಗೆರೆ ವೆಂಕಟರಾಮಯ್ಯ, ಪತ್ರಕರ್ತರು
  10. ಶ್ರೀ ದ ಮ ರವೀಂದ್ರ, ರಾಸ್ವಸಂಘ
  11. ಶ್ರೀ ಎಂ ಪಿ ಕುಮಾರ್‌, ಗ್ಲೋಬಲ್‌ ಎಜ್‌ ಸಾಫ್ಟ್‌
  12. ಶ್ರೀ ಶಂಕರ ಶರ್ಮ, ಇಂಧನ/ವಿದ್ಯುತ್‌ ತಜ್ಞರು, ಮೈಸೂರು
  13. ಶ್ರೀ ಕೆವಿಆರ್‌ ಸೋಮಯಾಜಿ, ಗಣಿತ ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು
  14. ಶ್ರೀ ಕಣಜನಹಳ್ಳಿ ನಾಗರಾ‌ಜ್‌, ಕಣಜನಹಳ್ಳಿ, ಹಿರಿಯೂರು ತಾಲೂಕು
  15. ಶ್ರೀ ಕೆ ಎ ಬದರಿನಾಥ್‌, ಹಿರಿಯ ಪತ್ರಕರ್ತರು, ಹೊಸದಿಲ್ಲಿ
  16. ಶ್ರೀ ಕೆ ಎನ್‌ ಗೋವಿಂದಾಚಾರ್ಯ (ಮಾಜಿ ಬಿಜೆಪಿ)
  17. ಶ್ರೀ ಸತೀಶ್‌ಜಿ, (ಆಗ ಎಬಿವಿಪಿ, ಈಗ ಬಿಜೆಪಿ)
  18. ದಿ|| ಶ್ರೀ ಅರಾಸೇ, ಭರಮಸಾಗರ
  19. ದಿ|| ಶ್ರೀ ಶಿವರಾಮು `ಆತ್ಮಾಹುತಿ’ ಲೇಖಕರು
  20. ಸ್ವಾಮಿ ವಿಷ್ಣುಮಯಾನಂದಜಿ, ರಾಮಕೃಷ್ಣ ಆಶ್ರಮ, ಶಿವನಹಳ್ಳಿ.

ನಾನು ಮರೆಯಲಾಗದ ನನ್ನ ಕೆಲವು ಶಿಕ್ಷಕರು  (ಈ ಪಟ್ಟಿ ಅಪೂರ್ಣ)

  • ಶ್ರೀ ಹನುಮಯ್ಯ ಮಾಸ್ತರ್‌ (೩ನೇ ತರಗತಿ, ನಗರ)
  • ಶ್ರೀ ವೆಂಕಣ್ಣ ಮಾಸ್ತರ್‌, (ವಿನೋಬಾನಗರ ಶಾಲೆ ೧೯೭೭)
  • ಶ್ರೀ ಗುಡಿಗಾರ ಮಾಸ್ತರ್‌ (ವಿನೋಬಾನಗರ ಶಾಲೆ ೧೯೭೭)
  • ಶ್ರೀಮತಿ ಜಯಲಕ್ಷ್ಮಿ ಮೇಡಂ (ಗಣಿತ, ಪೊನ್ನಂಪೇಟೆ)
  • ಶ್ರೀ ಎಚ್‌ಆರ್‌ಆರ್‌ (ಹೈಸ್ಕೂಲು, ದಾವಣಗೆರೆ)
  • ಸಂಗೀತ ಗುರು ಶ್ರೀ ಪ್ರಕಾಶ್‌ ಚಕ್ರವರ್ತಿ

ನನ್ನ ಬದುಕಿನ ದುರ್ಭರ ಕ್ಷಣಗಳಲ್ಲಿ ನನ್ನನ್ನು ಎತ್ತಿಹಿಡಿದ ಮಿತ್ರರು, ಮಿತ್ರೆಯರನ್ನು ಹೇಗೆ ಮರೆಯಲಿ? ಅವರ ಪಟ್ಟಿಗೆ ಇಲ್ಲಿ ಜಾಗ ಸಾಕಾಗುವುದಿಲ್ಲ. ಹಾಗೆಯೇ ನನ್ನನ್ನು ಸಾಮಾಜಿಕ ಭ್ರಷ್ಟತೆಯಿಂದ ದೂರ ಇಡಲು ಕಾರಣರಾದ ನನ್ನ ಪ್ರಿಯ ಮಿತ್ರರೊಬ್ಬರನ್ನು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಭಾರತ ಕಂಡ ಅತ್ಯಂತ ವೃತ್ತಿನಿಷ್ಠ, ಪ್ರಾಮಾಣಿಕ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಅವರು ನನ್ನ ಆದರ್ಶ ಸಾರ್ವಜನಿಕ ಸೇವಾವ್ಯಕ್ತಿ.

ಪ್ರಿಯರೆ, ನನ್ನ ಈ ಬ್ಲಾಗನ್ನು ಇಲ್ಲೀವರೆಗೆ ಓದಿದ ನೀವು ನಿಜಕ್ಕೂ ಒಳ್ಳೆಯವರೇ! ನಿಮ್ಮಲ್ಲೂ ಹತ್ತು ಹಲವು ಒಳ್ಳೆಯ ಅಂಶಗಳಿರುತ್ತವೆ. ಅವನ್ನೆಲ್ಲ ನಾನು ಅತ್ಯಂತ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಅದಕ್ಕೇ ನಾನು ಮಾಹಿತಿ ಹಂಚಿಕೊಳ್ಳುವುದೇ ನನ್ನ ಘೋಷವಾಕ್ಯ ಮಾಡಿಕೊಂಡಿದ್ದೇನೆ. ನೀವೂ ಕೂಡಾ ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಲೆಂದು ಹಾರೈಸುತ್ತೇನೆ.

ಮುಂದೆ?

ನನ್ನ ಮುಂದಿನ ದಿನಗಳ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. 

ವಂದನೆಗಳು.

ಬೇಳೂರು ಸುದರ್ಶನ

೧೪ ಜುಲೈ ೨೦೧೫

Share. Facebook Twitter Pinterest LinkedIn Tumblr Email
Previous Articleಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
Next Article ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

2 Comments

  1. Manasa on July 15, 2021 9:15 am

    Amazing! Don’t have words to admire you! You are the best! A very open and an honest person! I appreciate that you have that identity which is difficult to have in this self centered world. Hats off. You remain as an inspiration to me always and ever!
    Manasa

  2. ಕುಮಾರ ರೈತ on July 16, 2022 1:40 pm

    ನಿಮ್ಮ ಜೀವನ ಪಯಣದ ಹಾದಿ ಆಸಕ್ತಿಕರ. ನಾನು ನಿಮ್ಮ ಸಹದ್ಯೋಗಿಯಾಗಿದ್ದೆ ಎಂಬುದು ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ ನಿಮ್ಮ ಪ್ರಾಮಾಣಿಕ ವ್ಯಕ್ತಿತ್ವ – ಸಿದ್ಧಾಂತಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ, ಸೂಕ್ತ ಅಭಿಪ್ರಾಯವನ್ನು ಹಿಂಜರಿಯದೇ ಹೇಳುವ ಮನೋಭಾವ ನನ್ನ ಅರಿವಿಗೆ ಬಂದಿದೆ. ನಿಮ್ಮ ಮುಂದಿನ ಬದುಕು ಸುಗಮವಾಗಿರಲಿ ಎಂದು ಹಾರೈಸುತ್ತೇನೆ.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.