Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
ಲೇಖನಗಳು

ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’

ಬೇಳೂರು ಸುದರ್ಶನBy ಬೇಳೂರು ಸುದರ್ಶನJanuary 18, 2009Updated:May 19, 20252 Comments5 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾ ಒಳ್ಳೆಯದೋ, ಕೆಟ್ಟದ್ದೋ? 

 

ಎ ಆರ್ ರಹಮಾನ್‌ಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದ್ದಕ್ಕೆ ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ? 

 

ದಿ ವೈಟ್ ಟೈಗರ್ ಕಾದಂಬರಿಯನ್ನು ಹೊಗಳಬೇಕೋ, ತೆಗಳಬೇಕೋ? 

 

ಭಾರತ ಬರೀ ದರಿದ್ರರ ದೇಶ ಎಂದೇ ಚಿತ್ರಿತವಾಗಿರೋ ಸಾಹಿತ್ಯ, ಸಿನೆಮಾ, ನಾಟಕ ಎಲ್ಲವನ್ನೂ ನಾವು ವಿರೋಧಿಸಬೇಕು ಎಂದು ನಮ್ಮ ಹಲವು ಲೇಖಕರು ಹೇಳುತ್ತಾರೆ.

 

ಹಾಗಾದರೆ ವಾಸ್ತವ ಏನು? ಭಾರತದಲ್ಲಿ ದಾರಿದ್ರ್ಯ ಇಲ್ಲವೆ? ಭ್ರಷ್ಟಾಚಾರ ಇಲ್ಲವೆ? ಅದನ್ನೆಲ್ಲ ಒಪ್ಪಿಕೊಳ್ಳಲೇಬೇಕಲ್ಲವೆ? – ಹಾಗಂತ ಇನ್ನೊಂದು ಬಣ ವಾದಿಸುತ್ತದೆ. 

 

ಎಲ್ಲಕ್ಕಿಂತ ಮುಖ್ಯ ವಾದ ಎಂದರೆ ವಿದೇಶಗಳಲ್ಲಿ ಭಾರತವನ್ನು ಕೆಟ್ಟ ದೇಶ ಎಂದು ಚಿತ್ರಿಸಬಾರದು ಎನ್ನುವುದು. ಇದನ್ನು ಅಪ್ಪಟ ಭಾರತೀಯತೆ ಎಂದೇ ಒಪ್ಪೋಣ. 

 

ಭಾರತೀಯರ ಸಾಧನೆಗಳನ್ನು ಮಾತ್ರ ಹೊರಗಡೆ ಬಿಂಬಿಸಬೇಕು ಎಂಬುದು ಮೂಲಭೂತವಾದ ಎಂದೇ ನನ್ನ ಅನಿಸಿಕೆ. ಭಾರತದ ಭದ್ರತಾ ವ್ಯವಸ್ಥೆಯ ಬಗ್ಗೆಯೋ, ಆಂತರಿಕ ಸುರಕ್ಷತೆ ವಿಷಯಗಳ ಬಗ್ಗೆಯೋ ಬಹಿರಂಗವಾಗಿ ಚರ್ಚೆಯಾಗಬಾರದು ಎಂಬುದಷ್ಟೇ ನನ್ನ ಕಾಳಜಿ. 

 

ಇವತ್ತು ನಮ್ಮ ಬಾಲಿವುಡ್, ಹಾಲಿವುಡ್ ಕಲ್ಪನೆಗಳೇ ಜುಜುಬಿ ಎನ್ನುಂತೆ ವಾಸ್ತವ ಘಟನೆಗಳು (ನವೆಂಬರಿನ್ ಮುಂಬಯಿ ಭಯೋತ್ಪಾದನೆ ಘಟನೆ, ೯/೧೧ ವಿಶ್ವ ಟ್ರೇಡ್ ಸೆಂಟರ್‌ಗೆ ವಿಮಾನಗಳ ಡಿಕ್ಕಿ) ನಡೆದಿರುವಾಗ, ಈ ಸಿನೆಮಾಗಳಲ್ಲಿ ದಾರಿದ್ರ್ಯವನ್ನು ವೈಭವೀಕರಿಸಲಾಗಿದೆ ಎಂದೋ, ಪುಸ್ತಕದಲ್ಲಿ ಭಾರತೀಯರನ್ನು ಹೀಗಳೆಯಲಾಗಿದೆ ಎಂದೋ ವಾದಿಸುವುದು ಮೂರ್ಖತನ. ಭ್ರಷ್ಟಾಚಾರದಲ್ಲಿ ಭಾರತ ಎಷ್ಟು ಮುಂದಿದೆ ಎಂದೋ, ಕರ್ನಾಟಕದಲ್ಲಿ ಭ್ರಷ್ಟಾಚಾರ ಎಷ್ಟು ನಡೆದಿದೆ ಎಂದೋ ವರದಿಗಳು ವಿಶ್ವಸಂಸ್ಥೆಯಿಂದ ಹಿಡಿದು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಕಟವಾಗುತ್ತವೆ. ಅವನ್ನೆಲ್ಲ ನಾವು ಬಹಿಷ್ಕರಿಸಲಾದೀತೆ? ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಈ ವರದಿಗಳನ್ನು (ಅವುಗಳಲ್ಲಿ ಹಲವು ಖಾಸಗಿ ಅಂತಾರಾಷ್ಟ್ರೀಯ ಸಂಸ್ಥೆಗಳು) ಬಾಯಿ ಚಪ್ಪರಿಸಿಕೊಂಡು ಬರೆಯುತ್ತವೆ. ಭ್ರಷ್ಟಾಚಾರ: ಭಾರತಕ್ಕೆ ಇಷ್ಟನೇ ಸ್ಥಾನ ಎಂದು ಹೆಡಿಂಗ್ ನೀಡುತ್ತವೆ. ಆಗ ಮಾತ್ರ ನಮ್ಮ ಭಾರತೀಯತೆಯ ಭ್ರಷ್ಟತೆಯ ಬಗ್ಗೆ ನಮಗೆ ಹೆಮ್ಮೆಯಾಗುತ್ತದೆ!

 

ಇಷ್ಟಕ್ಕೂ ಸ್ಲಮ್‌ಡಾಗ್ ಮಿಲಿಯನೇರ್ ಸಿನೆಮಾವನ್ನು ನಾನೂ ನೋಡಿದೆ. ಮೊದಲು ನನಗೆ ಇದೊಂದು ಬಾಲಿವುಡ್ ನಿರ್ಮಾಣ ಎಂದೇ ಅನ್ನಿಸಿತ್ತು. ಆದರೆ ಬ್ರಾಂಡ್ ಮಾತ್ರ ಅಂತಾರಾಷ್ಟ್ರೀಯ. ಹಾಗೆ ನೋಡಿದರೆ ಈ ಸಿನೆಮಾದಲ್ಲಿ ಭಾರತದ ಮುಂಬಯಿಯ ದೃಶ್ಯಾವಳಿಗಳನ್ನು ಕಟ್ಟಿಕೊಡಲಾಗಿದೆ ಎನ್ನುವುದು ವಾಸ್ತವ. ಪ್ರಮೋದ್ ಮಹಾಜನ್‌ನಂಥ ರಾಜಕಾರಣಿಯ ದುರಂತ ಕಥೆಯೇನೂ ಅಲ್ಲಿಲ್ಲ; ನತದೃಷ್ಟ ಹುಡುಗರ ಅನಿವಾರ್ಯ ಕ್ರೌರ್ಯದ ಕಥೆಯಿದೆ. ಅದಕ್ಕಿಂತ ಹೆಚ್ಚಾಗಿ ಮಿಲಿಯನೇರ್ ಆದ ಹುಡುಗ ಹೇಗೆ ಉತ್ತರಗಳನ್ನು ಮೊದಲೇ ಕಂಡುಕೊಂಡಿದ್ದ ಎಂಬ ಸಸ್ಪೆನ್ಸ್ ಕೂಡಾ ಹಾಲಿವುಡ್ ಶೈಲಿಯಲ್ಲಿ ಚಿತ್ರಣಗೊಂಡಿದೆ. ರಹಮಾನ್ ಸಂಗೀತ ನನಗಂತೂ ‘ಎಂದಿನಂತೆ’ ಅನಿಸಿತ್ತು. ಆದರೆ ಸಿನೆಮಾ ನೋಡಿದ ಮರುದಿನವೇ ಪತ್ರಿಕೆಯಲ್ಲಿ ಅವರು ಗೋಲ್ಡನ್ ಗ್ಲೋಬ್ ಪಡೆದ ಸುದ್ದಿಯಿತ್ತು! ಇರಲಿ ಬಿಡಿ, ಹೇಗೂ ರಹಮಾನ್ ಅಂಥ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹವಾಗಿದ್ದರು ತಾನೆ?

 

ನಮ್ಮಲ್ಲಿ ಈಗ ರಾಷ್ಟ್ರೀಯತೆ ಕೂಡಾ ಒಂದು ಸರಕು. ಅದನ್ನು ಮಾರುವವರ ದೊಡ್ಡ ಪಡೆಯೇ ಇದೆ. ನೈಜ ರಾಷ್ಟ್ರೀಯ ವಿಚಾರ ಮಾಡುವರೇ ಬೇರೆ; ಸಮಾಜದಲ್ಲಿ ಇಂಥ ದಾರಿದ್ರ್ಯವನ್ನು ಹೋಗಲಾಡಿಸಲು ಯತ್ನಿಸುವವರೂ ಬೇರೆ; ಆದರೆ ರಾಷ್ಟ್ರೀಯತೆಯನ್ನು ಹೇಗೆ ಬಿಂಬಿಸಬೇಕು ಎಂದು ನಮಗೆ ಪಾಠ ಹೇಳಿಕೊಡುವವರ ಒಂದು ದೊಡ್ಡ ಸ್ವಯಂಘೋಷಿತ ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜ್‌ಮೆಂಟ್ ಮಾಡೋವಂಥಾ ಗುರುಗಳು ನಮ್ಮಲ್ಲಿ, ಅದರಲ್ಲೂ ವಿಶೇಷವಾಗಿ ಮಾಧ್ಯಮದಲ್ಲಿ ಹುಟ್ಟಿಕೊಂಡಿದ್ದಾರೆ. 

 

ಉದಾಹರಣೆಗೆ ನೋಡಿ: ‘ಕನ್ನಡಪ್ರಭ’ ಪತ್ರಿಕೆಯು ಪ್ರತೀ ವರ್ಷ ಆರಿಸುವ ವರ್ಷದ ವ್ಯಕ್ತಿಗಳನ್ನೇ ಗಮನಿಸಿ: ಹಾಜಬ್ಬ, ಕೊಂಬಳಿ, ಪಾರ್ವತಮ್ಮ, ಭೀಮರಾವ್ ಗಸ್ತಿ, ರಾಮು ಮಾಸ್ತರ – ಎಲ್ಲರೂ ಸಮಾಜದಲ್ಲಿ ಸಾಮಾನ್ಯರಾಗೇ ಇದ್ದುಕೊಂಡು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದಾರೆ. ವರ್ಷದ ವ್ಯಕ್ತಿ ಆದ ಮಾತ್ರಕ್ಕೆ ಅವರೆಂದೂ, ಈಗಲೂ ಜನಪ್ರಿಯ ವ್ಯಕ್ತಿಗಳಾಗೇನೂ ಮೆರೆಯುತ್ತಿಲ್ಲ. ತಮ್ಮ ಕೆಲಸವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಇವರೆಲ್ಲರೂ ರಾಷ್ಟ್ರೀಯತೆಯ ಪದ ಹೇಳದೇ ಇರಬಹುದು; ಆದರೆ ಸಮಾಜದಲ್ಲಿ ಅಭ್ಯುಯವಾಗಬೇಕು ಅನ್ನೋ ಆಶಯವಿಟ್ಟುಕೊಂಡೇ ಕೆಲಸ ಮಾಡಿದವರಲ್ಲವೆ? ಗಸ್ತಿಯವರ ಆತ್ಮಕತೆಯನ್ನು ನೀವು ಓದಬೇಕು; ಕಣ್ಣಲ್ಲಿ ಎರಡು ಹನಿ ಮೂಡದೇ ಇದ್ದರೆ ಕೇಳಿ…… ಆದರೆ ಇವರೆಲ್ಲ ಒಂದು ಪತ್ರಿಕೆ ಆರಿಸಿದ ವ್ಯಕ್ತಿಗಳು. ಉಳಿದ ಪತ್ರಿಕೆಗಳಿಗೆ ಈ ವ್ಯಕ್ತಿಗಳನ್ನು ಸಂದರ್ಶಿಸುವ ಸೌಜನ್ಯವೂ ಇಲ್ಲ! (ಹೊಸದಿಗಂತ ದಿನಪತ್ರಿಕೆಯೇ ಹಾಜಬ್ಬನವರನ್ನು ಕನ್ನಡಪ್ರಭಕ್ಕಿಂತ ಮೊದಲು ಗುರುತಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ).

 

ಇನ್ನೊಂದು ಬಣ ಇದೆ. ಇವರಿಗೆ ನಮ್ಮ ಸಮಾಜದಲ್ಲಿ ಎಂಥ ವ್ಯಕ್ತಿಗಳು ಹೇಗೆ ಭ್ರಷ್ಟರು, ನೈತಿಕತೆಯನ್ನೆಲ್ಲ ಕಳೆದುಕೊಂಡು ಮಾನವನ್ನೆಲ್ಲ ಹರಾಜು ಹಾಕಿಕೊಂಡು ಇರುವ ದುಷ್ಟರು ಎಂದು ಹೆಸರು ಹೇಳಿ ಜರೆಯುವ ಧೈರ್ಯ ಮತ್ತು ಈ ಧೈರ್ಯವನ್ನು ಪ್ರಕಟಿಸುವ ಮಾಧ್ಯಮ ವೇದಿಕೆಯೂ ಇದೆ. ಇಂಥ ಹಲವರಿಗೆ ರಾಷ್ಟ್ರೀಯತೆ ಒಂದು ಕಮಾಡಿಟಿ; ಓದುಗರಿಗೆ ಬಿಕರಿ ಮಾಡುವ ವಾರದ ಸರಕು. ಯಾಕೆಂದರೆ ಇದನ್ನೇ ಬರೆದರೆ ಜನ ಓದುತ್ತಾರೆ; ಶಭಾಷ್, ಎಷ್ಟು ಚೆನ್ನಾಗಿ ಝಾಡಿಸಿದ್ದಾರೆ ಎಂದು ಹೊಗಳುತ್ತಾರೆ. 

 

ಬೈಯ್ಯುವುದು ಸುಲಭ; ಹಾಜಬ್ಬನ ಥರ ಶಾಲೆ ಕಟ್ಟುವುದು ಇದೆಯಲ್ಲ, ರಾಮು ಮಾಸ್ತರನ ಥರ ಶಾಲೆಗೆ ಮಕ್ಕಳನ್ನು ತರೋದಿದೆಯಲ್ಲ, ಪಾರ್ವತಮ್ಮನ ಥರ ಧೈರ್ಯವಾಗಿ ಮಹಿಳೆಯನ್ನು ಸಂಘಟಿಸೋದು ಇದೆಯಲ್ಲ, ಗಸ್ತಿ ಥರ ದಲಿತರಲ್ಲಿ ಬದಲಾವಣೆಯ ಕಿಡಿ ಹತ್ತಿಸೋದಿದೆಯಲ್ಲ…… ಕೊಂಚ ಕಷ್ಟ! 

 

ಝಾಡಿಸಿ ಬೈಯ್ಯುವುದು ಮತ್ತು ಈ ವ್ಯಕ್ತಿಗಳ ಥರ ಕೆಲಸ ಮಾಡುವುದು – ಎರಡೂ ದೇಶ ಕಟ್ಟುವ ಕೆಲಸವೇ ಎಂದು ನೀವು ಭಾವಿಸಿದರೆ ನನಗೇನೂ ಅಡ್ಡಿಯಿಲ್ಲ. ಆದರೆ  ನಾನು ಹೇಳಬೇಕಾದ್ದು ಇನ್ನೂ ಇದೆ. 

 

ದೇಶದ ಬಗ್ಗೆ ಹೊರಗೆ ಒಳ್ಳೆಯ ಚಿತ್ರಣ ಕೊಡಬೇಕು ಎಂದು ಹೇಳುವ ವರ್ಗವೊಂದಿದೆಯಲ್ಲ, ಈ ಬಗ್ಗೆ ನನ್ನ ಕೆಲವು ಪ್ರಶ್ನೆಗಳಿವೆ: ದೇಶದಲ್ಲಿ ಎಲ್ಲವೂ ಸುರಳೀತವಾಗಿದೆ ಎಂದು ಹೇಳಿದ ಮಾತ್ರಕ್ಕೆ ವಿಶ್ವಬ್ಯಾಂಕ್, ವಿಶ್ವಸಂಸ್ಥೆ ವರದಿಗಳಲ್ಲಿ ಬದಲಾವಣೆ ಆಗುವುದಿಲ್ಲ; ಅಥವಾ ಸಮಸ್ಯೆ ಬಗೆಹರಿಯುವುದೂ ಇಲ್ಲ. ಹಾಗೆ ಹೊರದೇಶಗಳಲ್ಲಿ ಒಳ್ಳೆಯ ಚಿತ್ರಣವನ್ನು ಕೊಡುವುದರಿಂದ ಯಾವ ರಹಸ್ಯ ರಕ್ಷಣೆಯೂ  ಆಗುವುದಿಲ್ಲ; ಇವತ್ತು ಭಾರತ ಹೇಗಿದೆ ಎಂದು ತಿಳಿಯುವುದಕ್ಕೆ, ಒಳ್ಳೆಯ ಚಿತ್ರಣವನ್ನೇ ಕೊಡಬೇಕು ಎಂದು ಬರೆಯುವವರ ಬಚ್ಚಲುಮನೆಯನ್ನೂ ಗುರುತಿಸುವುದಕ್ಕೆ ಉಪಗ್ರಹಗಳು ಗರಗರ ತಿರುಗುತ್ತಲೇ ಇವೆ. ಮಾಹಿತಿಸ್ಫೋಟದ ದಶಕವೇ ಕಳೆದುಹೋಗಿದೆ. ದಿನಕ್ಕೆ ನೂರು ಎಸ್ ಎಂ ಎಸ್‌ಗಳನ್ನು ಕಳಿಸುವ ಸ್ಕೀಮ್‌ಗಳು ಬಂದು ವರ್ಷಗಳಾಗಿವೆ. ನಿಮ್ಮ ಕೈಯಲ್ಲಿ ಇರುವ ಮೊಬೈಲ್‌ನಿಂದಲೇ ನಿಮ್ಮ ಸಂಪೂರ್ಣ ಜಾತಕ ಪರರ ಪಾಲಾಗುತ್ತಿದೆ. ಪಾಲಾಗಿದೆ. ಇವತ್ತು ನಮ್ಮವರು ಬರೆದಿರೋ ಬ್ಲಾಗ್‌ಗಳಲ್ಲಿ ಇರುವ ಮಾಹಿತಿಯೇ ಸಾಕು, ವೈಟ್ ಟೈಗರ್‌ನಂಥ ಕಾದಂಬರಿ ಯಾಕೆ ಬೇಕು? ಸ್ಲಮ್‌ಡಾಗ್ ಸಿನೆಮಾದಿಂದಲೇ ಮಾನ ಹರಾಜಾಯಿತು ಎಂದು ಅಳುತ್ತ ಕೂತರೆ ನನಗೆ ನಗು ಬರುತ್ತದೆ! 

 

ಇಷ್ಟಕ್ಕೂ ಹೀಗೆ ಒಳ್ಳೆಯ ಚಿತ್ರಣ ಕೊಡುವುದಾಗಲೀ, ಕೆಟ್ಟ ಚಿತ್ರಣವನ್ನು ತಡೆಯುವುದಾಗಲೀ, ಪ್ರಜಾತಂತ್ರದಲ್ಲಿ ಎಳ್ಳಷ್ಟೂ ಸರಿಯಲ್ಲ; ಇದ್ದದ್ದನ್ನು ಇದ್ದ ಹಾಗೆ  ಒಪ್ಪಿಕೊಳ್ಳುವುದೇ ಪ್ರಜಾತಂತ್ರ ಸ್ವಾಮಿ; ಕೇವಲ ಕಮ್ಯುನಿಸಂನಲ್ಲಿ ಮಾತ್ರ ಅಳುವಿಗೆ, ನಗುವಿಗೆ ರೇಶನ್ ಇರುತ್ತೆ! ಭಾರತದಲ್ಲಿ ಹೀಗೇ ಬರೆಯಬೇಕು, ಹೀಗೇ ಹೇಳಬೇಕು ಎಂದು ಕರಾರು ಹಾಕುವುದು ಕಮ್ಯುನಿಸಂ ಆಯಿತು ಮಾರಾಯ್ರೆ…

 

ನಮಗೆ ಇಂಥ ಗೊಂದಲ ಯಾಕೆ ಮೂಡುತ್ತೆ ಅಂದ್ರೆ ಇನ್ನೂ ನಮ್ಮ ಮಾಧ್ಯಮಗಳು ಬುದ್ಧಿಜೀವಿಗಳ ಥರ ಪೋಸ್ ಕೊಡುತ್ತ ನಗರಕೇಂದ್ರಿತ ಚರ್ಚೆಗಳನ್ನೇ ಮಾಡ್ತಾ ಕೂತಿವೆ. ಒಂದು ಸಿನೆಮಾದಿಂದ, ಒಂದು ಪುಸ್ತಕದಿಂದ  ನಮ್ಮ ದೇಶದ ಮಾನ ಮೂರಾಬಟ್ಟೆ ಆಯ್ತು ಅಂತ ಅಳೋದಕ್ಕಿಂತ ನೂರು ಹಳ್ಳಿಗಳ ಸಮಸ್ಯೆಯ ಬಗ್ಗೆ ಗಮನ ಸೆಳೆದು ಕೆಲಸ ಆಗೋ ಹಾಗೆ ನೋಡಿಕೊಳ್ಳೋದು ವಾಸಿ ಅಲ್ವೆ? ಆದ್ರೆ ಪ್ರಜಾತಂತ್ರ ನೋಡಿ, ಈ ಸಮಸ್ಯೆಗಳೆಲ್ಲ ಎಷ್ಟು ರೊಟೀನ್ ಆಗಿಹೋಗಿವೆ ಅಂದ್ರೆ ಇವತ್ತು ಲೋಡ್‌ಶೆಡಿಂಗ್ ಬಗ್ಗೆ ಯಾರಿಗೂ ಬೇಜಾರಾಗೋದೇ ಇಲ್ಲ. 

 

ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾದ ಜೊತೆಗೇ ಈಗ ಭಾರತಕ್ಕೆ ‘ಚೇಂಜ್‌ಲಿಂಗ್’ ಅನ್ನೋ ಸಿನೆಮಾ ಬಂದಿದೆ. ಅದರಲ್ಲಿ ಇರೋ ಕಥೆ ಕೇಳಿ: ಈ ಸಿನೆಮಾದಲ್ಲಿ ಅಮೆರಿಕಾದಲ್ಲಿ ೧೯೨೮ರ ದಿನಗಳಲ್ಲಿ ನಡೆದ ವ್ಯವಸ್ಥೆಯ ಘೋರ ಚಿತ್ರಣದ ಅಮಾನುಷ ವಾಸ್ತವದ ದೃಶ್ಯಗಳಿವೆ. ಲಾಸ್‌ಏಂಜಲಿಸ್ ಪೊಲೀಸರ ಬೇಜವಾಬ್ದಾರಿಯ ದೃಶ್ಯಗಳಿವೆ. ಒಂದು ವ್ಯವಸ್ಥೆ ಎಷ್ಟು ಕ್ರೂರವಾಗಿರಬಹುದು ಎಂಬ ಹೃದಯಂಗಮ ನೋಟವಿದೆ. ನಿಜಕ್ಕೂ ಈ ಚಿತ್ರದ ಪ್ರಮುಖ ಪಾತ್ರಧಾರಿ ಏಂಜೆಲಿನಾ ಜೂಲೀ ತನ್ನ ಜೀವಿತದ ಅತ್ಯುತ್ತಮ ನಟನೆ ನೀಡಿದ್ದಾಳೆ. ಖಂಡಿತಾ ಈ ಚಿತ್ರ ನೋಡಿ. ಇಂದಷ್ಟೇ ಈ ಸಿನೆಮಾ ನೋಡಿದ ನನ್ನ ಮನಸ್ಸಿನಲ್ಲಿ ಇನ್ನೂ ಆ ಚಿಗುರುಗಣ್ಣಿನ ಹುಡುಗ ವಾಲ್ಟರ್ ಎಲ್ಲಿ ಹೋದ ಎಂಬ ಪ್ರಶ್ನೆ ಶತಪಥ ಹಾಕುತ್ತಿದೆ. 

 

ರಾಷ್ಟ್ರೀಯತೆಯ ಚರ್ಚೆಯಲ್ಲಿ ಯಾಕೆ ಈ ಚಿತ್ರ ಬಂತು? ಅಮೆರಿಕಾದಲ್ಲಿ, ಯೂರೋಪಿನಲ್ಲಿ, ಅಥವಾ ಹಲವು ಪಾಶ್ಚಾತ್ಯ ದೇಶಗಳಲ್ಲಿ ತಮ್ಮ ದೇಶದ ಅವ್ಯವಸ್ಥೆಯನ್ನೇ ಚಿತ್ರಿಸಿರೋ ನೂರಾರು ಸಿನೆಮಾಗಳು ಬಂದಿವೆ. ನನಗಂತೂ ಈ ಚಿತ್ರಗಳ ಬಗ್ಗೆ ಅಮೆರಿಕನ್ನರೋ, ಆಯ ದೇಶದ ಪ್ರಜೆಗಳೋ ದಂಗೆಯೆದ್ದ ಸುದ್ದಿ ಸಿಕ್ಕಿಲ್ಲ. ಬದಲಿಗೆ ಇಂಥ ಚಿತ್ರಗಳು ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತವೆ. ಈ ಸಲ ಏಂಜೆಲಿನಾಗೂ ಪ್ರಶಸ್ತಿ ಬರೋ ಚಾನ್ಸ್ ಇದೆ.

 

ಅಮೆರಿಕಾದ ನೀತಿ ನಿಯಮಗಳನ್ನು ವಿರೋಧಿಸುವ ಹಲವು ಬುದ್ಧಿಜೀವಿ, ಸಾಮಾಜಿಕ ಸಂಘಟನೆಗಳನ್ನು ಭೇಟಿ ಮಾಡಲು ಅಮೆರಿಕಾ ಸರ್ಕಾರವೇ ಭಾರತೀಯ ಪತ್ರಕರ್ತರನ್ನು ಕಳಿಸಿಕೊಟ್ಟಾಗ, ಅಮೆರಿಕಾ – ಇಂಗ್ಲೆಂಡಿನ ಪರಿಸರ ವಿರೋಧಿ ಕೃತ್ಯಗಳನ್ನು ಗ್ರೀನ್‌ಪೀಸ್ ಕಾರ್ಯಕರ್ತರು ವಿರೋಧಿಸಿ ಹಡಗೇರಿದಾಗ ……  ನಮಗೆ ಏನೂ ಅನ್ನಿಸುವುದಿಲ್ಲವೆ? ರಾಷ್ಟ್ರೀಯತೆಯನ್ನು ಮೀರಿದ ಒಂದು ವಸ್ತುನಿಷ್ಠತೆ ಈ ಕ್ರಿಯೆಗಳಲ್ಲಿ ಇಲ್ಲವೆ? 

 

ಇಷ್ಟೆಲ್ಲ ಬರೆದ ಮೇಲೆ ಈ ಮನುಷ್ಯ ನಿಜಕ್ಕೂ ರಾಷ್ಟ್ರದ್ರೋಹಿಯೇ ಎಂದು ನಿಮ್ಮಲ್ಲಿ ಕೆಲಸವು ತೀರ್ಮಾನಿಸಿಬಿಡಬಹುದು; ಪರವಾಗಿಲ್ಲ. ಆದರೆ ನನ್ನ ಒಂದು ಮಾತು ಕೇಳಿಬಿಡಿ:

 

ರಾಷ್ಟ್ರೀಯತೆ, ದೇಶಭಕ್ತಿ – ನಿಮ್ಮಂತೆ, ನನ್ನ ಆಸ್ತಿಯೂ ಹೌದು. ವಿಶ್ವದಲ್ಲೇ ಅತ್ಯಂತ ಉತ್ಕೃಷ್ಟ ನಾಗರಿಕತೆಗೆ ತೊಟ್ಟಿಲಾದ ಈ ಭಾರತದ ಮಡಿಲಿನಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆಯಿದೆ. ಕೇವಲ ಧ್ಯಾನಮಾತ್ರದಿಂದಲೇ ಶ್ರುತಿಯ ತರಂಗಾಂತರಗಳನ್ನು ಹುಡುಕಿ ತೆಗೆದ ಯೋಗಿಗಳ ಬಗ್ಗೆ ನನಗೆ ಇನ್ನಿಲ್ಲದ ಗೌರವವಿದೆ. ಮೌಖಿಕವಾಗಿಯೇ ವೇದ ಉಪನಿಷತ್ತುಗಳನ್ನು ಈ ಕ್ಷಣದವರೆಗೆ ಹರಿಸಿದ ವಿಶಿಷ್ಟ ಸಂಸ್ಕೃತಿಶೈಲಿಯ ಬಗ್ಗೆ ನನಗೆ ಅಚ್ಚರಿಯಿದೆ. ಚಂಡಾಲನ ಬಗ್ಗೆ ಗೌರವ ತಳೆದ ಶಂಕರ, ಸಮಾಜದಲ್ಲಿ ಇಂದಿಗೂ ತರಲಾಗದ ಬದಲಾವಣೆಯನ್ನು ತನ್ನ ಮಿತಿಯಲ್ಲಿ ತಂದು, ಇಂದಿಗೂ ಕನ್ನಡ ಸಾಹಿತ್ಯದಲ್ಲೇ ಆತ್ಯುತ್ಕೃಷ್ಟವಾದ ಸಾಹಿತ್ಯ ರಚಿಸಿದ ಬಸವಣ್ಣ, – ಎಂಥ ಕ್ರಾಂತಿವಂತ ದೇಶ ನನ್ನದು ಎಂಬ ರೋಚಕ ಭಾವ ನನ್ನೊಳಗಿದೆ. 

 

ಆದರೆ ರಾಷ್ಟ್ರೀಯತೆಯನ್ನು ಕೇವಲ ಮಾರುಕಟ್ಟೆ ಸರಕಿನ ಹಾಗೆ ಪ್ಯಾಕೇಜ್ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ. 

 

ಧಾರಾವಿಯ ಬಗ್ಗೆ ಕಾಮೆಂಟ್ ಮಾಡುವುದು ಸುಲಭ; ಧಾರಾವಿಯಲ್ಲಿ ಬದುಕುವುದು ಕಷ್ಟ ಎಂಬ ಭಯ ನನಗಿದೆ ಎಂದಷ್ಟೆ ಇಲ್ಲಿ ಹೇಳಬಲ್ಲೆ. ಧಾರಾವಿ ವಾಸ್ತವ; ಧಾರಾವಿಯ ಬಗ್ಗೆ ಹೇಳಬಾರದು, ಚಿತ್ರಿಸಬಾರದು ಎಂಬುದೆಲ್ಲ ಬರಿಯ ಒಣನಂಬಿಕೆಗಳು, ಅವಾಸ್ತವ ತರ್ಕ ಎಂದಷ್ಟೆ ಇಲ್ಲಿ ಬರೆಯಬಲ್ಲೆ. 

 

 

 

 

 

changeling india nationalism poverty slumdog
Share. Facebook Twitter Pinterest LinkedIn Tumblr Email
Previous Articleಸಾಜ್ ಮತ್ತು ಏಕ್ ನಯಾ ಸಾಜ್
Next Article ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

2 Comments

  1. Pradeep Pai H on January 18, 2009 10:22 pm

    A good piece of article. “White Tiger” or “Slumdog Millionaire” both would be manifesting India’s unfortunate reality. Both were (written) produced keeping in mind the huge market for them inside and outside India. These market driven “creations” might hurt the sensitivities more, than, if they were written or produced for understanding the issues. The issue of Nationalism enters here. Show India’s hard realities and win awards. I feel this would lead to the unrest among nationalists.

  2. Anoop on January 19, 2009 2:05 am

    ಲೇಖನ ತುಂಬಾ ಚೆನ್ನಾಗಿದೆ. ಚಿಂತನೆಗೆ ಹೊಸ ಆಯಾಮವನ್ನು ನೀಡುತ್ತದೆ.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.