Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
ಲೇಖನಗಳು

ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 30, 2011Updated:May 19, 20251 Comment6 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಈಗ ನೀವು ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ಪ್ರಾಂತದ ಪಾರ್ಕಿಸ್‌ ನಗರದ ಹೊರವಲಯದ ವಿಶಾಲ ಹಸಿರು ಹಾಸಿನ ನಡುವೆ ಎದ್ದಿರುವ ದೈತ್ಯಾಕಾರದ ರೇಡಿಯೋ ಟೆಲಿಸ್ಕೋಪನ್ನು ಗೂಗಲ್‌ ನಕಾಶೆಯಲ್ಲಿ ಆಕಾಶದ ಕೋನದಿಂದ ನಿಂತಂತೆ ನೋಡುತ್ತಿದ್ದೀರಿ. ವಾಸ್ತವವಾಗಿ ಈ ಟೆಲಿಸ್ಕೋಪೇ ಸ್ವತಃ  ಆಕಾಶವನ್ನು ನೋಡುತ್ತ ಅದೆಷ್ಟೋ ಸಾವಿರ  ಗಂಟೆಗಳನ್ನು ಕಳೆದಿದೆ. ನಮಗೆ ರಾತ್ರಿ ಹಗಲು ಇದ್ದರೂ, ಈ ಟೆಲಿಸ್ಕೋಪಿಗೆ ಅಂಥ ಲೆಕ್ಕವಿಲ್ಲ. ಯಾಕೆಂದರೆ ಅದಕ್ಕೆ ನಮ್ಮ ಸೂರ್ಯ ಯಾವ ಲೆಕ್ಕವೂ ಅಲ್ಲ! ನಾವೂ (ಏನಿದು ನಾವು? ಸೂರ್ಯನೇ ಈ ಆಕಾಶಗಂಗೆಯ ಒಂದು ಚಿಕ್ಕ ನಗಣ್ಯ ಬಿಂದು; ಅದರೊಳಗೆ ನಾವು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಸದ್ಯಕ್ಕೆ ನಮ್ಮ ಜಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳೋಣ). ಒಳಗೊಂಡ ಈ ಬ್ರಹ್ಮಾಂಡದಲ್ಲಿ ಇರುವ ವ್ಯೋಮಕಾಯಗಳನ್ನು ನಿರುಕಿಸುತ್ತ ಅವುಗಳ ಒಳಹೊರಗನ್ನು ವಿಶ್ಲೇಷಿಸುತ್ತ, ಅವುಗಳಿಂದ ಬಂದ ರೇಡಿಯೋ ಸಂಕೇತಗಳನ್ನು ದಾಖಲಿಸುವುದಕ್ಕೇ ಈ ಪಾರ್ಕಿಸ್‌ ಟೆಲಿಸ್ಕೋಪ್‌ ತನ್ನೆಲ್ಲ ಶ್ರಮವನ್ನು ಹಾಕಿದೆ.

ಹೀಗೆ ನೋಡುತ್ತಲೇ ಈವರೆಗೆ ಮನುಕುಲವು ಹುಡುಕಿದ ೧೭೦೦ ಪಲ್ಸಾರುಗಳ ಪೈಕಿ ಸಾವಿರಕ್ಕೂ ಹೆಚ್ಚು ಪಲ್ಸಾರುಗಳನ್ನು ಹುಡುಕಿದ ಕೀರ್ತಿ ಈ ಪಾರ್ಕಿಸ್‌ ಟೆಲಿಸ್ಕೋಪಿಗೆ ಸಲ್ಲುತ್ತದೆ. ಹದಿನೆಂಟು ತಿಂಗಳುಗಳ ಹಿಂದೆ ಕಂಡ ಪಲ್ಸಾರ್‌ ಮತ್ತು ಅದರ ಸುತ್ತ ಗಿರಕಿ ಹೊಡೆಯುತ್ತಿದ್ದ  ಅತಿತೂಕದ ಗ್ರಹದ ಬಗ್ಗೆ ಮೊದಲ ಮಾಹಿತಿ ದಾಖಲಿಸಿದ ಸಾಧನೆಯೂ ಈ ಟೆಲಿಸ್ಕೋಪಿನದೇ. ಹೀಗೆ ಕಂಡು ಬಂದ ಅತಿತೂಕದ ಗ್ರಹವು ವಜ್ರಕಾಯದ್ದು ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ವಜ್ರಕಾಯದ ಗ್ರಹ

The pulsar at the centre of the below image is orbited by an object that is about the mass of Jupiter and composed primarily of carbon; effectively a massive diamond. The orbit, represented by the dashed line, would easily fit inside our Sun, represented by the yellow surface. The blue lines represent the radio signal from the pulsar, which spins around 175 times every second.

ಹೌದು, ವಜ್ರಕಾಯದ ಗ್ರಹ! ಗ್ರಹವಿಡೀ ವಜ್ರ! ನಮ್ಮ ಗುರುಗ್ರಹದಷ್ಟೇ ಭಾರವಾದ ಈ ಗ್ರಹ ನಮ್ಮ ಭೂಮಿಗಿಂತ ತ್ರಿಜ್ಯದಲ್ಲಿ ಐದು ಪಟ್ಟು  ದೊಡ್ಡದು. ನಮ್ಮಿಂದ ಕೇವಲ ನಾಲ್ಕು ಸಾವಿರ ಜ್ಯೋತಿರ್ವರ್ಷಗಳ ದೂರದಲ್ಲಿರುವ ಜೆ೧೭೧೯-೧೪೩೮ ಎಂಬ ಪಲ್ಸಾರ್‌ ಸುತ್ತ ಈ ವಜ್ರಕಾಯದ ಗ್ರಹವು ತಿರುಗುತ್ತಿದೆ. ಸರ್ಪೆನ್ಸ್‌ ನಕ್ಷತ್ರಪುಂಜದಲ್ಲಿ ಕಾಣುವ ಈ ಪಲ್ಸಾರ್‌ ಎಷ್ಟು ದೊಡ್ಡದು ಎಂದುಕೊಂಡಿದ್ದೀರಿ? ಬರೀ ೨೦ ಕಿಲೋಮೀಟರ್‌ ವ್ಯಾಸದ್ದು! ಹೌದೆ? ಹಾಗಾದರೆ ಅದರ ಸುತ್ತ ಗುರುಗ್ರಹದಷ್ಟು ಭಾರವಿರುವ ಗ್ರಹ ತಿರುಗಲು ಹೇಗೆ ಸಾಧ್ಯ ಎಂದು ನೀವು ಪ್ರಶ್ನಿಸುತ್ತೀರಿ ಅಲ್ಲವೆ?

ಇಲ್ಲಿ ಈ ಪುಟಾಣಿ ಕಾಯವನ್ನು ಪಲ್ಸಾರ್‍ ಎಂದೆನೇ ಹೊರತು ನಕ್ಷತ್ರ ಎನ್ನಲಿಲ್ಲ. ಈ ಪಲ್ಸಾರ್‌ನ ತೂಕ ಗೊತ್ತೆ? ನಮ್ಮ ಸೂರ್ಯನಿಗಿಂತ ೧.೪ರಷ್ಟು ಭಾರ! ೨೦ ಕಿಮೀ ಗಾತ್ರದ, ಸೂರ್ಯನಿಗಿಂತ ಒಂದೂವರೆ ಪಟ್ಟು ಭಾರದ… ಅಬ್ಬಬ್ಬ…. ಇದೇನು ವಿಚಿತ್ರ ಎಂದು ಹುಬ್ಬೇರಿಸಬೇಡಿ. ಈ ಪುಟಾಣಿ ಕಾಯದ ಬಗ್ಗೆ ಹೇಳಬೇಕಾದ್ದು ಇನ್ನೂ  ಇದೆ. ಇದು ಸೆಕೆಂಡಿಗೆ ೧೭೫ ಸಲ ತನ್ನ   ಸುತ್ತಲೇ ತಿರುಗುತ್ತದೆ. ನಿಮಿಷಕ್ಕೆ ೧೦ ಸಾವಿರ ಸಲ ಅನ್ನಿ. ಅಥವಾ ವರ್ಷಕ್ಕೆ…. ಲೆಕ್ಕ ಹಾಕಿ.

ಹೌದು, ಪಲ್ಸಾರುಗಳೇ ಹೀಗೆ. ಇವನ್ನು ಕನ್ನಡದಲ್ಲಿ ಕುಬ್ಜ ನಕ್ಷತ್ರಗಳು ಎಂದು ಕರೆಯುತ್ತಾರೆ. ನಕ್ಷತ್ರಗಳು ಒಮ್ಮೆ ಸೂಪರ್‌ನೋವಾ ಆಗಿ ವಿಸ್ತಾರವಾಗಿ ಛಿದ್ರಗೊಂಡು ಚದುರಿದ ಮೇಲೆ ಮತ್ತೆ ಒಳಗೊಳಗೇ, ಒಂದು ಕೇಂದ್ರಬಿಂದುವಿನತ್ತ  ಕುಸಿದು ಕುಬ್ಜವಾಗತೊಡಗುತ್ತವೆ. ಮುಂದೊಮ್ಮೆ ಕಪ್ಪುರಂಧ್ರವಾಗುವ (ಬ್ಲಾಕ್‌ಹೋಲ್‌) ಈ ಕುಬ್ಜ ನಕ್ಷತ್ರಗಳು ತಮ್ಮ ಗಿರಿಗಿಟ್ಟೆತನದಿಂದಲೇ ವಿಜ್ಞಾನಿಗಳನ್ನು ತಬ್ಬಿಬ್ಬುಗೊಳಿಸಿದ್ದವು. ಕಾಲಕ್ರಮೇಣ ಸುಧಾರಿಸಿಕೊಂಡ ವಿಜ್ಞಾನಿಗಳು `ಇವು ಪಲ್ಸಾರುಗಳು’ ಎಂದು ನಿರ್ಣಯಿಸಿ ಸಮಾಧಾನ ಮಾಡಿಕೊಂಡರು.

ಸಾಮಾನ್ಯವಾಗಿ ಪಲ್ಸಾರುಗಳ ಸುತ್ತ ಗ್ರಹಗಳು ಇರುತ್ತವೆ ಎಂವ ಪುರಾವೆ ಇದುವರೆಗೂ ಸಿಕ್ಕಿಲ್ಲ. ಈ ಪಲ್ಸಾರಿನಿಂದಾಗಿ ಅವುಗಳಿಗೂ ಇಂಥ ಗ್ರಹಗಳು ಇರಬಹುದು ಎಂಬುದು ಗೊತ್ತಾಗಿದೆ.

ವಜ್ರಕಾಯ ಗ್ರಹದ ಬಗ್ಗೆ ಹೇಳುತ್ತ ವಿಷಯಾಂತರ ಆಯಿತು ಎನ್ನುತ್ತೀರ? ಖಗೋಳ ಸಂಬಂಧಿ ಲೇಖನ ಬರೆಯುವಾಗೆಲ್ಲ ವಿವರಣೆ ಕೊಡುತ್ತ ಹೋಗದಿದ್ದರೆ ಕಷ್ಟ. ಹೋದರೂ ಕಷ್ಟ!

ವಜ್ರಕಾಯ ಗ್ರಹ ಮತ್ತು ಪುಟಾಣಿ-ದೈತ್ಯಭಾರದ ಪಲ್ಸಾರ್‌ – ಎರಡೂ ಸೇರಿದರೆ ಕಾಣುವ ವ್ಯಾಸವು ನಮ್ಮ ಸೂರ್ಯನಿಗಿಂತಲೂ ಕಡಿಮೆ ಎಂಬ ಮಾಹಿತಿ ನಿಮಗೆ ಹೇಗನ್ನಿಸುತ್ತದೆ? ಸಾಸಿವೆಯ ಕಾಳೊಂದು ಹೇಗ್‌ನಲ್ಲಿರುವ ಆಮ್ನಿವರ್ಸಮ್‌ ಎಂಬ ೩೦ ಮೀಟರ್‌ ಗೋಳಾಕಾರದ ವೀಕ್ಷಣಾಲಯವನ್ನು, ಅದರೊಳಗಿನ ಪ್ರಾಜೆಕ್ಟರ್‌, ವೀಕ್ಷಕರು – ಎಲ್ಲರನ್ನೂ ಸೇರಿಸಿಕೊಂಡು ಗಿರಿಗಿರಿ ತಿರುಗಿಸಿದ ಹಾಗೆ ಎಂದೂ ಊಹಿಸಿಕೊಳ್ಳಿ. ಈ ಸಾಸಿವೆ ಕಾಳು ಮತ್ತು ವೀಕ್ಷಣಾಲಯ ಎರಡೂ ಅಕ್ಕಪಕ್ಕದಲ್ಲಿದ್ದರೆ ಎಂದೂ ಊಹಿಸಿಕೊಳ್ಳಿ. ಇನ್ನೇನು ಸಾಸಿವೆ ಕಾಳಿಗೆ ಈ ವೀಕ್ಷಣಾಲಯ ಡಿಕ್ಕಿ ಹೊಡೆಯುತ್ತದೆ ಎಂಬಷ್ಟು ನಿಕಟ. ಸೂರ್ಯನ ಹೊಟ್ಟೆಯಲ್ಲೇ ಈ ಪಲ್ಸಾರ್‌ ಮತ್ತು ಈ ವಜ್ರಕಾಯದ ಗ್ರಹ ಎರಡೂ ಇದ್ದ ಹಾಗೆ…. (ಚಿತ್ರ ನೋಡಿ).

ಪತ್ತೆಯಾಗಿದ್ದಾದರೂ ಹ್ಯಾಗೆ?

ಅದಿರಲಿ, ಈ ಗ್ರಹವು ವಜ್ರದಿಂದಲೇ ತುಂಬಿದೆ ಎಂದು ಹೇಗೆ ಪತ್ತೆ ಹಚ್ಚಿದರು?

`ಹದಿನೆಂಟು ತಿಂಗಳುಗಳ ಹಿಂದೆ ನಮ್ಮ ಪಾರ್ಕಿಸ್‌ ಟೆಲಿಸ್ಕೋಪಿನ ಮೂಲಕ ಈ ಪಲ್ಸಾರಿನ ತರಂಗಗಳಲ್ಲಿ ನಿಯಮಿತವಾಗಿ ಏರಿಳಿತ ಆಗುತ್ತಿದೆ ಎಂಬ ಮಾಹಿತಿ ಸಿಕ್ಕಿತು. ಇದನ್ನು ನಾವು ಇಂಗ್ಲೆಂಡಿನ ಲೋವೆಲ್‌ ಟೆಲಿಸ್ಕೋಪಿನ ನೆರವು ಪಡೆದು ಖಚಿತಪಡಿಸಿಕೊಂಡೆವು. ಹಾಗಾದರೆ ಈ ಪಲ್ಸಾರಿಗೆ ಒಂದು ಗ್ರಹ ಇದ್ದಿರಬಹುದು ಎಂದು ಲೆಕ್ಕಾಚಾರಗಳ ಮೂಲಕ ನಿರ್ಣಯಿಸಿದೆವು. ಹಲವು ತಿಂಗಳುಗಳ ತನಿಖೆ ಮತ್ತು ವಿಶ್ಲೇಷಣೆಗಳ ತರುವಾಯ ಈ ಗ್ರಹದಲ್ಲಿ ಇರುವುದೆಲ್ಲ ಬರೀ ಇಂಗಾಲ ಎಂಬ ನಿರ್ಧಾರ ತಳೆದೆವು’ ಎಂದು ಈ ಲೇಖನಕ್ಕಾಗಿಯೇ ಈ ಮೈಲಿನಲ್ಲಿ ಮಿತ್ರಮಾಧ್ಯಮಕ್ಕೆ ಸಂದರ್ಶನ ನೀಡಿದ ವಜ್ರಕಾಯ ಗ್ರಹಶೋಧ ತಂಡದ ಸದಸ್ಯ ಡಾ| ರಮೇಶ್‌ ಭಟ್‌ ಹೇಳುತ್ತಾರೆ. ಈ ಬೃಹತ್‌ ಅಂಕಿ-ಅಂಶ ಸಂಗ್ರಹ ಮತ್ತು ವಿಶ್ಲೇಷಣೆಯಲ್ಲಿ ಇಟೆಲಿ, ಜರ್ಮನಿ, ಅಮೆರಿಕಾದ ವಿಜ್ಞಾನಿಗಳೂ ಸೇರಿದ್ದಾರೆ.

(ಪುಣೆಯ ರೇಡಿಯೋ ಖಗೋಳಶಾಸ್ತ್ರ ಕೇಂದ್ರದಲ್ಲಿ ಪದವಿ ಮಾಡಿ, ಭಾರತದಲ್ಲೇ ಪಿ ಎಚ್‌ ಡಿ ಮಾಡಿದ ರಮೇಶ್‌ ಭಟ್‌ ಊಟಿಯಲ್ಲಿರುವ ಖಗೋಳ ವೀಕ್ಷಣಾಲಯದಲ್ಲಿ ಮೂರು ವರ್ಷ ಕಳೆದಿದ್ದಾರೆ. ಅವರ ಅತ್ತೆ ಕನ್ನಡತಿಯಂತೆ!)

`ಈ ಗ್ರಹದ ಬಗ್ಗೆ ಸಂಶಯ ಬರುತ್ತಲೇ ನಾವು ಪಾರ್ಕಿಸ್‌ ವೀಕ್ಷಣಾಲಯದಲ್ಲಿ ಠಿಕಾಣಿ ಹೂಡಿದೆವು. ನಾನಂತೂ ಎಷ್ಟೋ ವಾರಗಳ ಕಾಲ ಇಲ್ಲಿ ಕೂತು ದತ್ತಾಂಶ ಸಂಗ್ರಹದಲ್ಲೇ ಮುಳುಗಿದೆ’ ಎಂದು ರಮೇಶ್‌ ಭಟ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Inside view of Parkes Telescope

ಹಾಗಾದರೆ ಈ ಪಲ್ಸಾರನ್ನು, ಅದನ್ನು ಸುತ್ತುತ್ತಿರುವ ಗ್ರಹವನ್ನು ಕಲ್ಪಿಸಿಕೊಂಡಿದ್ದಾದರೂ ಹೇಗೆ? `ನಾವು ರೇಡಿಯೋ ಸಂಕೇತಗಳನ್ನು ಆಧರಿಸಿಯೇ ಹೀಗಿರಬಹುದು ಎಂದು ಕಲ್ಪಿಸುತ್ತೇವೆ. ಇದಕ್ಕೆ ಬೃಹತ್‌ ಗಾತ್ರದ ಅಂಕಿ ಅಂಶಗಳನ್ನು ವಿಶ್ಲೇಷಿಸುವ ಸೂಪರ್‌ ಕಂಪ್ಯೂಟರುಗಳು ಬೇಕಾಗುತ್ತವೆ; ಎಲ್ಲಕ್ಕಿಂತ ಮುಖ್ಯ ನಮಗೆ ಪಾರ್ಕಿಸ್‌ನಲ್ಲಿ ಇರುವಂಥ ಪ್ರಬಲ ಟೆಲಿಸ್ಕೋಪ್‌ ಬೇಕು’ ಎಂದು ರಮೇಶ್‌ ಮಿತ್ರಮಾಧ್ಯಮಕ್ಕೆ ತಿಳಿಸಿದ್ದಾರೆ.  ಸುಮಾರು ಎರಡು ಲಕ್ಷ ಗಿಗಾಬೈಟ್‌ಗಳಷ್ಟು (೨೦೦೦೦೦ ಜಿಬಿ) ಗಾತ್ರದ ಈ ಮಾಹಿತಿ ಅದರ  ಮಾಹಿತಿಯನ್ನು ಸಂಸ್ಕರಿಸಿ ಈ ನಿರ್ಣಯಕ್ಕೆ ಬರಲಾಗಿದೆ ಎಂದರೆ, ಸಂಶೋಧನೆಯ ಕಷ್ಟವನ್ನು ನೀವೇ ಊಹಿಸಿ.

`ಹಾಗೆ ನೋಡಿದರೆ ಇಂಥ ಸೂಕ್ಷ್ಮ ಸಮೀಕ್ಷೆಯನ್ನು ನಾವು ಕೈಗೊಂಡಿದ್ದು ಇದೇ ಮೊದಲು’ ಎನ್ನುತ್ತಾರೆ ಜರ್ಮನಿಯ ಮ್ಯಾಕ್ಸ್‌-ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಫಾರ್‌ ರೇಡಿಯೋ ಆಸ್ಟ್ರಾನಮಿಯ ನಿರ್ದೇಶಕ ಪ್ರೊ| ಮೈಕೇಲ್‌ ಕ್ರೇಮರ್‌.

ಸಂಶೋಧನಾ ನಾಯಕನ ನೇರ ನುಡಿ

ಈ ಸಂಶೋಧನೆಗೆ ಕಾರಣವಾದ ವಿಜ್ಞಾನಿಗಳ ತಂಡದ ಮುಖ್ಯಸ್ಥ ಮ್ಯಾಥ್ಯೂ ಬೇಲ್ಸ್‌ ಹೇಳುವಂತೆ ಇದೇನೂ ಅಚ್ಚರಿಗೆ ಕಾರಣವಾಗಬೇಕಾದ ಮಾಹಿತಿಯೇನಲ್ಲ. `ಇದು ಬ್ರಹ್ಮಾಂಡದ ಬಗ್ಗೆ ನಾವು ವಿಸ್ತರಿಸಿಕೊಂಡ ತಿಳಿವಳಿಕೆಯ ಭಾಗವಾಗಿದೆ, ಅಷ್ಟೆ. ಸಾಧನ – ಸಲಕರಣೆಗಳ ಭಾರೀ ಕ್ರಾಂತಿ ಮತ್ತು ಟೆಲಿಸ್ಕೋಪ್‌ ತಂತ್ರಜ್ಞಾನದಲ್ಲಿನ ದಾಪುಗಾಲು – ಇವುಗಳಿಂದ ಇದು ಸಾಧ್ಯವಾಯಿತು’ ಎಂದು ಬೇಲ್ಸ್‌ ತಮ್ಮ ಇತ್ತೀಚೆಗಿನ ಲೇಖನದಲ್ಲಿ ವಿನಮ್ರವಾಗಿ ಹೇಳಿದ್ದಾರೆ.

`ನಾವು ವೀಕ್ಷಣೆ ಮಾಡುತ್ತೇವೆ; ಅದನ್ನು ಪ್ರಯೋಗಕ್ಕೆ ಒಳಪಡಿಸುತ್ತೇವೆ; ಸೂತ್ರಗಳನ್ನು ಹೆಣೆಯುತ್ತೇವೆ; ತಜ್ಞರ ಪರಾಮರ್ಶೆಗೆ (ಪೀರ್‌ ರಿವ್ಯೂ) ಒಳಗಾಗುತ್ತೇವೆ’ ಎಂದು ಬೇಲ್ಸ್‌ ಸಂಶೋಧನೆಯ ವಿಧಿವಿಧಾನಗಳನ್ನು ಸರಳವಾಗಿ ತಿಳಿಸುತ್ತಾರೆ.

`ಆದರೆ ಈ ಸಂಶೋಧನೆಯ ಮಹತ್ವವೇನು ಎಂದು ಹಲವು ಪತ್ರಕರ್ತರು ಕೇಳುತ್ತಿದ್ದಾರೆ.  ನಿಜ, ಈ ಸಂಶೋಧನೆಯಿಂದ ನಿಜಕ್ಕೂ ರೋಮಾಂಚನಗೊಳ್ಳುವವರು ಈ ಜಗತ್ತಿನ ೬ರಿಂದ ೧೨ರಷ್ಟಿರುವ ಖಭೌತಶಾಸ್ತ್ರಜ್ಞರು ಮಾತ್ರ. ಅವರ ರೋಮಾಂಚನಕ್ಕೂ ಕಾರಣವಿದೆ: ವಜ್ರಕಾಯದ ಗ್ರಹದ ಸಿದ್ಧಾಂತವು ಬೈನರಿ ಪಲ್ಸಾರ್‌ ಸಿದ್ಧಾಂತದಲ್ಲಿರುವ ಮಾಹಿತಿ ಕಂದರವನ್ನು ತುಂಬುತ್ತದೆ. ಈ ದೃಷ್ಟಿಯಲ್ಲಿ ಇದು ನಮ್ಮ ತಂಡದ ಜೀವಿತದ ಮಹತ್ವದ ಸಂಶೋಧನೆ’ ಎಂದು ಬೇಲ್ಸ್‌ ಬರೆದಿದ್ದಾರೆ.

`ಇಷ್ಟಾಗಿಯೂ ಅಕಸ್ಮಾತ್‌ ನಾವೇನಾದರೂ ಹಸಿರುಮನೆ ಪರಿಣಾಮದ ಬಗ್ಗೆ ಸಂಶೋಧನೆ ಮಾಡಿ, ಪರಾಮರ್ಶೆಗೆ ಒಳಪಡಿಸಿ ಪ್ರಕಟಿಸಿದ್ದರೆ ಇದೇ ಪತ್ರಕರ್ತರು ಹತ್ತಾರು ಅನುಮಾನಗಳನ್ನು ವ್ಯಕ್ತಿಪಡಿಸುತ್ತಿದ್ದರು. ಅದೃಷ್ಟವಶಾತ್‌ ನಾವು ಹವಾಮಾನ ವಿಜ್ಞಾನಿಗಳಾಗಿಲ್ಲ’ ಎಂದು ಬೇಲ್ಸ್‌ ಮಾಧ್ಯಮಗಳನ್ನು ಮೆದುವಾಗಿ ಚುಚ್ಚಿದ್ದಾರೆ. ಅವರ ನೋವಿಗೆ ಕಾರಣವಿಷ್ಟೆ: ಸಾವಿರಾರು ಜ್ಯೋತಿರ್ವರ್ಷಗಳ ದೂರದಲ್ಲಿರುವ ಪಲ್ಸಾರ್‌, ಅದರ ಸುತ್ತ ಸುತ್ತುತ್ತಿರುವ ಗ್ರಹದ ಬಗ್ಗೆ ಹೇಳಿದರೆ ತುಟಿಪಿಟಕ್ಕೆನ್ನದೆ ಒಪ್ಪಿಕೊಳ್ಳುವ ಪತ್ರಕರ್ತರು, ಗಟ್ಟಿಯಾದ ಅಂಕಿ ಅಂಶಗಳಿರುವ ಪಾರಿಸರಿಕ ಪರಿಣಾಮ – ದುಷ್ಪರಿಣಾಮದ ಕುರಿತ ಸಂಶೋಧನೆಗಳನ್ನು ಯಾಕೆ ತೀವ್ರ ಅನುಮಾನದಿಂದ ಕಾಣುತ್ತಾರೆ? – ಬೇಲ್ಸ್‌ ಕೇಳುವ ಈ ಪ್ರಶ್ನೆ ಭಾರತೀಯ ಸನ್ನಿವೇಶಕ್ಕೂ ಅನ್ವಯವಾಗುತ್ತದೆ.

ಆಕಾಶದ ತುಂಬೆಲ್ಲ ವಜ್ರವೇ ಇದೆಯಂತೆ!

ಏನೇ ಇರಲಿ, ವ್ಯೋಮಾಕಾಶದಲ್ಲಿ ವಜ್ರಗಳಿವೆಯೇ ಎಂಬ ಹುಡುಕಾಟ ಶುರುವಾಗಿದ್ದೇ ೮೦ರ ದಶಕದಲ್ಲಿ. ಭೂಮಿಗೆ ಅಪ್ಪಳಿಸುತ್ತಿದ್ದ ಧೂಮಕೇತುಗಳಲ್ಲಿ ನ್ಯಾನೋಮೀಟರ್‌ ಗಾತ್ರದ ವಜ್ರದ ಕಣಗಳನ್ನು ಕಂಡ ವಿಜ್ಞಾನಿಗಳು ಬ್ರಹ್ಮಾಂಡದ ಎಲ್ಲೆಲ್ಲೂ ವಜ್ರವೇ ಇದೆಯೇನೋ ಎಂದು ಅನುಮಾನಿಸಿದರು. ಹಲವಾರು ನಕ್ಷತ್ರಗಳ ನಡುವೆ ಈ ವಜ್ರದ ಕಣಗಳು ಇವೆ ಎಂಬ ಅಂಶವನ್ನು ಅಮೆಸ್‌ ಸಂಶೋಧನಾ ಕೇಂದ್ರದ ಚಾರ್ಲ್ಸ್‌ ಬಾಶ್ಲಿಶರ್‌ ಕಂಡುಕೊಂಡರು.

೨೦೦೪ರಲ್ಲಿ ಕ್ಷುಲ್ಲಕ ೫೦ ಜ್ಯೋತಿರ್ವರ್ಷಗಳ ದೂರದಲ್ಲಿ ೧ರ ಮುಂದೆ ೩೪ ಸೊನ್ನೆಗಳನ್ನು ಹಾಕಿದಷ್ಟು ಕ್ಯಾರೆಟ್‌ ಭಾರದ ಇಂಗಾಲದ ಬಿಲ್ಲೆಯನ್ನು ವಿಜ್ಞಾನಿಗಳು ಕಂಡರು. ಬಿಪಿಎಂ ೩೭೦೯೩ ಎಂದು ಕರೆಯುವ ಈ ಕಾಯ ವಾಸ್ತವವಾಗಿ ಹರಳುಗಟ್ಟಿದ ಒಂದು ಬಿಳಿ ಕುಬ್ಜ ನಕ್ಷತ್ರವಂತೆ. ತೆಳುವಾದ ಜಲಜನಕ ಮತ್ತು ಹೀಲಿಯಂ ಅನಿಲದ ಪೊರೆ ಇರುವ ಈ ಕಾಯದ ಒಳಗೆಲ್ಲ ಬರೀ ಇಂಗಾಲ. ಮೆಟ್‌ಕಾಫ್‌, ಮಾಂಟ್‌ಗೊಮೆರಿ, ಆಂಟೋನಿಯೋ ಕನಾನ್‌ – ಈ ಸಂಶೋಧನಾ ಕೇಂದ್ರಗಳಲ್ಲಿ ಈ ಕಾಯದ ಬಗ್ಗೆ ಅಪಾರ ಶೋಧ ನಡೆಯಿತು. ಗಗನದಲ್ಲಿನ ದೊಡ್ಡ ಘಂಟೆಯಂತೆ ಇದು ತರಂಗ ನಿನಾದವನ್ನು ಹೊಮ್ಮಿಸುತ್ತದೆಯಂತೆ.

ಇನ್ನು ಕೇವಲ ೫೦೦ ಕೋಟಿ ವರ್ಷಗಳಲ್ಲಿ ನಮ್ಮ ಸೂರ್ಯನೂ ಹೀಗೆಯೇ ಬಿಳಿ ಕುಬ್ಜ ನಕ್ಷತ್ರವಾಗುತ್ತಾನೆ; ಆಗ ಸೂರ್ಯನೂ ವಜ್ರಕಾಯವಾಗುತ್ತಾನೆ!

ಕಾರ್ಬನಾಡೋ ವಜ್ರಗಳು ಎಂದೇ ಖ್ಯಾತವಾದ ವಿಶಿಷ್ಟ ಕಪ್ಪು ವಜ್ರಗಳು ಆಕಾಶದಿಂದ ಬಿದ್ದ ಕಾಯಗಳಿಂದ ಆಗಿದ್ದು ಎಂದು ೨೦೦೬ರಲ್ಲಿ ಫ್ಲೋರಿಡಾ ಇಂಟರ್‌ನ್ಯಾಶನಲ್‌ ಯೂನಿವರ್ಸಿಟಿಯ ಜೋಸೆಫ್‌ ಗರಾಯ್‌ ಮತ್ತು ಸ್ಟೀಫನ್‌ ಹ್ಯಗಾರ್ಟಿ ಪ್ರಬಂಧ ಬರೆದಿದ್ದಾರೆ. ಬ್ರೆಝಿಲ್‌ ಮತ್ತು ಕೇಂದ್ರ ಆಫ್ರಿಕಾ ಗಣರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುವ ಈ ಕಪ್ಪು ವಜ್ರಗಳು ಭೂಮಿಗೆ ಅಪ್ಪಳಿಸಿದ ಧೂಮಕೇತುಗಳಿಂದಲೇ ಉಂಟಾಗಿದ್ದು ಎಂದು ಅವರು ಹೇಳುತ್ತಾರೆ.

ನಿರಭ್ರ, ನೀರವ ಆಕಾಶದಲ್ಲಿ (ಅದರಲ್ಲೂ ಹಳ್ಳಿಗಳ ಅಮವಾಸ್ಯೆ ರಾತ್ರಿಗಳಲ್ಲಿ ಕಾಣುವ ಆಕಾಶದಲ್ಲಿ) ವಜ್ರಗಳಂತೆ ಮಿನುಗುವ ನಕ್ಷತ್ರಗಳು ಕವಿಗಳಿಗೂ ವಜ್ರದ ಹಾಗೇ ಕಾಣಿಸಿರಬಹುದು. ಆದರೆ ಇವುಗಳಲ್ಲಿ ಖಚಿತವಾಗಿಯೂ ವಜ್ರಖಚಿತ ಗ್ರಹಗಳು, ವಿವಿಧಕಾಯಗಳು ಇವೆ ಎಂದು ವಿಜ್ಞಾನಿಗಳು ಕಂಡುಹಿಡಿಯಲು ಸಾಕಷ್ಟು ರಾತ್ರಿ ನಿದ್ದೆಗೆಟ್ಟಿದ್ದಾರೆ. ಕವಿಗಳ ಮಾತನ್ನು ನಂಬದೆ ಟೆಲಿಸ್ಕೋಪಿಗೆ ಕಣ್ಣುಹಚ್ಚಿ ಕೂತ ಈ ವಿಜ್ಞಾನಿಗಳ ಪ್ರಾಮಾಣಿಕ ಹಟಕ್ಕೆ ನಮಿಸೋಣ!

ರಕ್ಕಸತೂಕದ ಪಲ್ಸಾರಿನಿಂದ ಹಿಡಿದು, ವಜ್ರಕಾಯ ಗ್ರಹದವರೆಗೆ ಎಳೆತಂದ ಈ ಚರ್ಚೆಯನ್ನು ಸದ್ಯಕ್ಕೆ ಇಲ್ಲಿಗೇ ನಿಲ್ಲಿಸೋಣ. ನಕ್ಷತ್ರಗಳ ಮಿಲಿಯಗಟ್ಟಳೆ ವರ್ಷಗಳ ಲೆಕ್ಕವೆಲ್ಲಿ? ಹೆಚ್ಚೆಂದರೆ ನೂರು  ದಾಟಲಾಗದ ನಾವೆಲ್ಲಿ? ಚಿರಂತನವಾದ ಬ್ರಹ್ಮಾಂಡದ ಆದಿ ಅಂತ್ಯವೆಲ್ಲಿ?

ಈ ಬಗ್ಗೆ ನಾನು ಓದುತ್ತಿರುವ ಇನ್ನೊಂದು ಪುಸ್ತಕದ ಪರಿಚಯವನ್ನು ಮಾಡಿಕೊಡುವ ಹುರುಪು ಬಂದಿದೆ!

  • ಪಾರ್ಕಿಸ್‌ ಟೆಲಿಸ್ಕೋಪ್‌ ಅರಿಯಲು ಇಲ್ಲಿಗೆ ಬನ್ನಿ. 
  • ಈ ಸಂಶೋಧನೆ (ಪಲ್ಸಾರ್‌ – ವಜ್ರಗ್ರಹ) ಕುರಿತ ತಾಂತ್ರಿಕ ಪ್ರಬಂಧವನ್ನು ಇಲ್ಲಿ ಪಡೆಯಿರಿ. 
  • ಈ ಕುರಿತ ಪುಟ್ಟ ವಿಡಿಯೋವನ್ನು ಇಲ್ಲಿ ನೋಡಿರಿ: 

A-planet-made-of-diamond-video.flv

(ವಜ್ರವೂ ಇಂಗಾಲ ಎಂಬ ಮಾಹಿತಿ ನಿಮಗೆ ಗೊತ್ತಿದೆ ಎಂದೇ ಹೆಚ್ಚು ವಿವರಿಸಿಲ್ಲ!)

Share. Facebook Twitter Pinterest LinkedIn Tumblr Email
Previous Articleಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
Next Article ಸಂಬಂಧ : ನನ್ನ ಬದುಕಿನ ಹೈಪರ್‌ಲಿಂಕ್‌ಗಳ ಮೊದಲ ಕಥೆ ಓದಿ!
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

1 Comment

  1. sampige thontadarya on October 1, 2011 7:09 pm

    ಲೇಖನ ಚೆನ್ನಾಗಿದೆ. ಕುತೂಹಲ, ಮಾಹಿತಿ ಎರಡನ್ನೂ ನೀಡುವ ನಿಮ್ಮ ಬರವಣಿಗೆ ಮೆಚ್ಚುವಂತದು. ಹೀಗೆ ಬರೆದರೆ ಕನ್ನಡದಲ್ಲಿ ವಿಜ್ಞಾನ ಖಂಡಿತ ಜನರನ್ನು ಮುಟ್ಟುತ್ತದೆ. ಈ ಮುಂಚೆ ಈ ಪುಟ ತರೆದುಕೊಳ್ಳದೆ ಹೋದುದರಿಂದ ಕಾಮೆಂಟು ಮಾಡಲಾಗಿರಲಿಲ್ಲ. ಧನ್ಯವಾದಗಳು.
    ನಕ್ಷತ್ರ ವಿಕಾಸದಲ್ಲಿ ಈ ಪಲ್ಸಾರ್ ಹಂತವೂ ಒಂದು. ನಕ್ಷತ್ರದ ದ್ರವ್ಯವೆಲ್ಲವೂ ಘನೀಕರಿಸತೊಡಗಿದಾಗ( ಗ್ರ್ಯಾವಿಟಿ ಪರಿಣಾಮ) ಪರಮಾಣುಗಳು ಕೂಡಿ ದೊಡ್ಡ ಪರಮಾಣು ಆಗುತ್ತದೆ. ಆಗ ಜಲಜನಕ, ಹೀಲಿಯಂ ಇತ್ಯಾದಿಗಳು ಇಂಗಾಲ,……. ಕಬ್ಬಿಣ, ….ಹೀಗೇ ಆಗಿ ಕೊನೆಗೆ ಎಲ್ಲಾ ಅರೆದುಕೊಂಡು ನ್ಯೂಟ್ರಾನುಗಳಾಗಿ ಬಿಡುತ್ತದೆ, ಅಂದರೆ ನ್ಯೂಟ್ರಾನು ನಕ್ಷತ್ರವಾಗುತ್ತದೆ. ಮುಂದೆ ಕಾಳರಂದ್ರ ವಾಗುತ್ತದೆ. ಆದರೆ ನಕ್ಷತ್ರದ ಭಾರ ಚಂದ್ರಶೇಖರ್ ಲಿಮಿಟ್ ದಾಟಿರಬೇಕು.
    ಇಂತಹ ಸಂಶೋಧನೆಗಳು ಖಂಡಿತವಾಗಿ ಖಭೌತ ವಿಜ್ಞಾನಿಗಳಿಗೆ ಮತ್ತು ಅದರ ಬಗ್ಗೆ ಒಲವಿರುವ ನಮ್ಮ ನಿಮ್ಮಂತಹವರಿಗೆ ಆನಂದ ತರುತ್ತದೆ. ಝಗತ್ತಿನಲ್ಲಿ ಕೇವಲ ಆರೆಂಟು ಖಭೌತ ವಿಜ್ಞಾನಿಗಳಲ್ಲ ಸಾವಿರಾರು ಇದ್ದಾರೆ! ಿಂತಹ ಸಂಶೋಧನೆಯಲ್ಲಿ ಭಾಗಿಯಾದ ರಮೇಶ್ ಭಟ್ ಅವರು ಭಾಗ್ಯಶಾಲಿಗಳು. ಅವರ ಻ತ್ತೆ ಕನ್ನಡಿಗರು ಎಂದಿದ್ದೀರಿ. ಭಟ್ ಅವರೂ ಕನ್ನಡಿಗರೇ ಅಲ್ಲವೇ?
    ಒಟ್ಟಾರೆ ನಿಮಗೆ ಈ ಲೇಖನ ಬರೆದು ನಮ್ಮೆಲ್ಲರ ಗಮನಕ್ಕೆ ತಂದುದಕ್ಕೆ ವಂದನೆಗಳು , ಅಭಿನಂದನೆಗಳು.
    ಸಂಪಿಗೆ ತೋಂಟದಾರ್ಯ

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.