Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
ಲೇಖನಗಳು

ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?

ಬೇಳೂರು ಸುದರ್ಶನBy ಬೇಳೂರು ಸುದರ್ಶನOctober 10, 2011Updated:May 19, 20254 Comments8 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

“ಮೂರ್ಖರನ್ನು ಅವರಿಗಿದ್ದ ಸ್ವಾತಂತ್ರ್ಯದಿಂದ ಬೇರ್ಪಡಿಸಿದ ,  ಕಂಪ್ಯೂಟರನ್ನು ತಣ್ಣನೆಯ ಬಂದೀಖಾನೆಯಾಗಿ ಮಾಡಿದ,  ಮುಂಚೂಣಿ ನಾಯಕ ಸ್ಟೀವ್‌ ಜಾಬ್ಸ್‌ ತೀರಿಕೊಂಡಿದ್ದಾರೆ. ಭ್ರಷ್ಟ ಮೇಯರ್‌ ಡೇಲಿ ತೀರಿಕೊಂಡಾಗ, ಶಿಕಾಗೋದ ಮೇಯರ್‌ ಹೆರಾಲ್ಡ್‌ ವಾಶಿಂಗ್ಟನ್‌ `ಅವರು ತೀರಿಕೊಂಡಿದ್ದಾರೆ ಎಂದು ನನಗೆ ಸಂತಸವಾಗಿಲ್ಲ; ಆದರೆ ಆತ ಇಲ್ಲ ಎಂಬ ಸುದ್ದಿಯಿಂದ ಸಂತಸವಾಗಿದೆ’ ಎಂದಿದ್ದರು. ನಿಜ ಸಾವು ಯಾರಿಗೂ ಬರಬಾರದು. ಅದರಲ್ಲೂ ಸ್ಟೀವ್‌ ಜಾಬ್ಸ್‌ಗೆ, ಅಥವಾ ಬಿಲ್ ಗೇಟ್ಸ್‌ಗೆ…. ಅವರಿರಲಿ, ಅವರಿಗಿಂತ ದೊಡ್ಡ ದುಷ್ಟಶಕ್ತಿಗಳಿಗೂ ಸಾವು ಬರಬಾರದು. ಆದರೆ ಜಾಬ್ಸ್‌ ಜನರ ಕಂಪ್ಯೂಟಿಂಗ್‌ ಕಾರ್ಯದ ಮೇಲೆ ಹೊಂದಿದ್ದ ಅಪಾಯಕಾರಿ ಪ್ರಭಾವವು ಕೊನೆಗೊಳ್ಳಬೇಕು; ಅಂಥ ಕಾಲಕ್ಕೆ ನಾವೆಲ್ಲ ಅರ್ಹರು.

“ದುರದೃಷ್ಟವಶಾತ್‌, ಈ ಪ್ರಭಾವವು ಅವರ ಗೈರಿನಲ್ಲಿಯೂ ಮುಂದುವರೆಯಲಿದೆ. ಅವರ ವಾರಸುದಾರರು, ಅವರ ಲೆಗಸಿಯನ್ನು ಮುಂದುವರೆಸುವುದಕ್ಕೆ ಯತ್ನಿಸುತ್ತಿರುವಂತೆಯೂ, ಅವರ ಪ್ರಭಾವ ಕಡಿಮೆಯಾಗಲಿ ಎಂದು ನಾವು ನಿರೀಕ್ಷೆ ಇಟ್ಟುಕೊಳ್ಳಬಹುದು.”

ಸ್ಟೀವ್‌ ಜಾಬ್ಸ್‌ ನಿಧನದ ಬಗ್ಗೆ ಇದು ಫ್ರೀ ಸಾಫ್ಟ್‌ವೇರ್‌ ಚಳವಳಿಯ ಸ್ಥಾಪಕ ರಿಚರ್ಡ್‌ ಸ್ಟಾಲ್‌ಮನ್‌ ನೀಡಿದ ಪ್ರತಿಕ್ರಿಯೆ ಇದು.

ಸ್ಟೀವ್‌ ಜಾಬ್ಸ್‌ ನಿಧನದ ಬಗ್ಗೆ ಇದಕ್ಕಿಂತ ಕಟುವಾದ ಪ್ರತಿಕ್ರಿಯೆ ಬೇಕೆ?

ಸ್ಟೀವ್‌ ಜಾಬ್ಸ್‌. ಕಂಪ್ಯೂಟರ್‌ ಕ್ರಾಂತಿಯುಗದ ಪ್ರಮುಖ ರೂವಾರಿ. ಆಪಲ್ ಸಂಸ್ಥೆಯ ಸ್ಥಾಪಕರು. ಸದ್ಯ ಜಗತ್ತಿನ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾದ ಕಣ್ಮಣಿ. ಅವರ ಸಾಧನೆಗಳನ್ನು ಕೊಂಡಾಡದೆ ಇರುವವರಾರು? ಅವರು  ಕಂಪ್ಯೂಟರ್‌ ಯುಗದ  ಥಾಮಸ್‌ ಆಲ್ವ ಎಡಿಸನ್‌ ಎಂದ ಪತ್ರಕರ್ತರೂ ಇದ್ದಾರೆ. ಕನ್ನಡ ಪತ್ರಿಕೆಗಳಿಂದ ಹಿಡಿದು ವಿಶ್ವದ ಎಲ್ಲ ಪತ್ರಿಕೆಗಳಲ್ಲೂ ಸ್ಟೀವ್‌ ಜಾಬ್ಸ್‌ ನಿಧನಕ್ಕಾಗಿ ಕಂಬನಿ ಮಿಡಿಯಲಾಗಿದೆ. ನಾನೂ ಆ ದಿನ ಅವರ ಭಾಷಣವೊಂದನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಕ್ಯಾನ್ಸರಿಗೆ ಬಲಿಯಾದ ಹಲವು ಪ್ರತಿಭಾವಂತ ಜೀವಿಗಳಲ್ಲಿ ಅವರೂ ಒಬ್ಬರಾಗಿಬಿಟ್ಟರು. ಅದೆಲ್ಲ ಸರಿ. ಆದರೆ ಸ್ಟೀವ್‌ ಜಾಬ್ಸ್‌ ಮನುಕುಲಕ್ಕೆ ಬಿಟ್ಟುಹೋಗಿದ್ದೇನು? ಒಂದು ಜಗದ್ವಿಖ್ಯಾತ ಕಂಪೆನಿಯೆ? ಅಥವಾ  ರೆವಿನ್ಯೂ ಮಾಡೆಲಿಗಾಗಿ ಇಡೀ ಜಗತ್ತನ್ನೇ ಮುಷ್ಟಿಯಲ್ಲಿ ಇಟ್ಟುಕೊಳ್ಳಬಯಸುವ  ಪ್ರೊಪ್ರೈಟರಿ ತಂತ್ರಾಂಶ ಮತ್ತು ಯಂತ್ರಾಂಶದ ಬಿಗಿಬಂಧವೆ? ಸ್ಟೀವ್‌ ಜಾಬ್ಸ್‌ ಕುರಿತ ಹೊಗಳಿಕೆಗಳನ್ನೂ ಅಲ್ಲಗಳೆಯದೆ ಅವರು ಬಿಟ್ಟುಹೋದ ಈ ‘ಲೆಗಸಿ’ಯ ಚರ್ಚೆ ಆಗದೆ ಇದ್ದರೆ ವಸ್ತುನಿಷ್ಠತೆಗೆ ಧಕ್ಕೆ ಒದಗದೆ?

ಕಳೆದ ಆಗಸ್ಟಿನಲ್ಲಿ ಸ್ಟೀವ್‌ ಜಾಬ್ಸ್‌ ಆಪಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ನೀಡಿದಾಗಲೇ ಮಾಧ್ಯಮಗಳು ಭಾರೀ ಗಾತ್ರದ ಲೇಖನಗಳನ್ನು ಪ್ರಕಟಿಸಿದವು. ಮುಕ್ತ ತಂತ್ರಾಂಶದ ಬಗ್ಗೆ ಕೆಲ ವರ್ಷಗಳಿಂದ ತಲೆ ಕೆಡಿಸಿಕೊಂಡು ಓದುತ್ತಿದ್ದ ನಾನು ಬಿಲ್‌ ಗೇಟ್ಸ್‌, ಸ್ಟೀವ್‌ ಜಾಬ್ಸ್‌ರಂಥವರು  ತಮ್ಮ ಘನ ಸಂಸ್ಥೆಗಳಿಂದ ಮುಕ್ತ ತಂತ್ರಾಂಶದ ಚಳವಳಿಗೆ ಹೇಗೆ ಕೊಡುಗೆ ಕೊಡುತ್ತಾರೆ ಎಂದೆಲ್ಲ ಗಮನಿಸುತ್ತ ಬಂದಿದ್ದೆ. ಫ್ರೀ ಸಾಫ್ಟ್‌ವೇರ್‌ ಚಳವಳಿಯ ಜನಕ ರಿಚರ್ಡ್‌ ಸ್ಟಾಲ್‌ಮನ್‌ರನ್ನು ಒಂಬತ್ತು ವರ್ಷದ ಹಿಂದೆಯೇ (ಈ ಮೈಲ್‌) ಸಂದರ್ಶಿಸಿದ್ದೆ. ಕೊನೆಗೆ ಜಿಪಿಎಲ್‌ ೩ರ ಸಮಾವೇಶಕ್ಕೆ ಸ್ಟಾಲ್‌ಮನ್‌ ಬಂದಾಗ ಅವರ ಕಾರ್ಯಾಗಾರದಲ್ಲಿ ಎರಡು ದಿನ ಕಳೆದೆ. ಅವರು ಯಾರ ಜೊತೆಗಾದರೂ ಮಾತನಾಡುತ್ತಿದ್ದರೆ ಅದನ್ನೆಲ್ಲ ಕೇಳಿಸಿಕೊಂಡೆ. ಅರ್ಥ ಆಗಲಿ, ಬಿಡಲಿ, ಈ ಮುಕ್ತ ಮತ್ತು ಫ್ರೀ ತಂತ್ರಾಂಶ ಚಳವಳಿಯು ಜನರ ಒಳಿತಿಗಾಗೇ ಇದೆ ಎಂಬುದನ್ನು ಅರಿತು ಕೊನೆಗೆ ‘ಸುಧಾ’ದಲ್ಲಿ ಫ್ರಿ ಸಾಫ್ಟ್‌ವೇರ್‌ ಚಳವಳಿ ಬಗ್ಗೆ ಲೇಖನವನ್ನೂ ಬರೆದೆ. ಇದೆಲ್ಲ ಹಿನ್ನೆಲೆಯಲ್ಲಿ  ಮುಕ್ತ ತಂತ್ರಾಂಶ ಹಾಗೂ ಸ್ಟೀವ್‌ ಜಾಬ್ಸ್‌ ಕುರಿತ ನನ್ನದೇ ವಿಶ್ಲೇಷಣೆಯನ್ನು ಮಾಡುತ್ತಿದ್ದ ಹೊತ್ತಿಗೇ ಜಾಬ್ಸ್‌ ಅಕಾಲಿಕವಾಗಿ ತೀರಿಕೊಂಡರು. ಅವರ ಸೃಜನಶೀಲ ಮನಸ್ಸಿಗೆ, ಕ್ರಿಯಾಶಕ್ತಿಗೆ ನಮಿಸುತ್ತಲೇ ಅವರು ಬಿಟ್ಟುಹೋದ ಪ್ರೊಪ್ರೈಟರಿ ಲೆಗಸಿಯನ್ನು ಪ್ರಶ್ನಿಸುವ ಅಧಿಕಪ್ರಸಂಗಿತನ ತೋರುತ್ತಿರುವೆ, ಮನ್ನಿಸಿ. ಅದಕ್ಕೇ ನಾನು ಸ್ಟಾಲ್‌ಮನ್‌ರವರು ಜಾಬ್ಸ್‌ ಬಗ್ಗೆ ಏನು ಹೇಳುತ್ತಾರೆ ಎಂದು ಕಾಯುತ್ತಿದ್ದೆ. ಅವರ ಹೇಳಿಕೆಯನ್ನೇ ಮೊದಲು ಕೊಟ್ಟಿರುವುದು ಈ ಕಾರಣಕ್ಕೇ.

ಐ ಫೋನ್‌ ಇರಲಿ, ಐ ಪ್ಯಾಡ್‌ ಇರಲಿ, – ಸ್ಟೀವ್‌ ಜಾಬ್ಸ್‌ ಎಲ್ಲ ಸಾಧನಗಳಲ್ಲೂ ತಂತ್ರಾಂಶ (ಸಾಫ್ಟ್‌ವೇರ್‌) ಮತ್ತು ಯಂತ್ರಾಂಶ (ಹಾರ್ಡ್‌ವೇರ್‌)  – ಎರಡರಲ್ಲೂ ತನ್ನ / ಸಂಸ್ಥೆಯ ಖಾಸಗಿ ಒಡೆತನದ ಪೇಟೆಂಟ್‌ಗಳ ಬಿಗಿಹಿಡಿತ ಸಾಧಿಸಿದ ಸ್ಟೀವ್‌ ಜಾಬ್ಸ್‌ ಒಮ್ಮೆ (ವಿಶೇಷವಾಗಿ ಮ್ಯಾಕ್‌ ಓ ಎಸ್‌ ಎಕ್ಸ್‌) ಮುಕ್ತ ತಂತ್ರಾಂಶವನ್ನೂ ಬಳಸಲು ಯತ್ನಿಸಿದ್ದರು ಎನ್ನುವುದು ವಾಸ್ತವ. ಒಮ್ಮೆ ಅವರ ತಂತ್ರಾಂಶವು ತನ್ನದೇ ನಿಯಂತ್ರಣದ ಸಮುದಾಯ ಬೆಂಬಲಿತ ಮುಕ್ತ ತಂತ್ರಾಂಶದ ಥರ ಕಾಣಿಸಿದ್ದೂ ಇದೆ.

ನಿದರ್ಶನ ೧

ತನ್ನ ಸಾಧನಗಳನ್ನು ಅನಧಿಕೃತ ಬಳಕೆದಾರನು ಬಳಸುತ್ತಿದ್ದರೆ, ಅದನ್ನು ಪತ್ತೆ ಹಚ್ಚಲೆಂದು ಆಪಲ್‌ ಸಂಸ್ಥೆಯು ಒಂದು ಪೇಟೆಂಟ್‌ ಪಡೆದಿದೆ. ಆ ಪ್ರಕಾರ, ಅನಧಿಕೃತ ಬಳಕೆದಾರ ಎಂದು ಅನುಮಾನ ಬಂದಕೂಡಲೆ (ಈ ಅನುಮಾನ ಹೇಗೆ ಬರುತ್ತದೆ? ಇಂಟರ್‌ನೆಟ್‌ ಮೂಲಕ ಆಪಲ್‌ ಸಂಸ್ಥೆಯು ಮೂಲ ಬಳಕೆದಾರನ ಹೆಸರನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಿ, ಬೇರೆ ಹೆಸರುಗಳ ಬಳಕೆ ಆದರೆ ಅನಧಿಕೃತ ಬಳಕೆದಾರ ಎಂದು ಶಂಕಿಸಲು ಆರಂಭಿಸುತ್ತದೆ!) ಬಳಕೆದಾರನ/ಳ ಚಿತ್ರವನ್ನು ಮತ್ತು ಸುತ್ತಮುತ್ತಲ ದೃಶ್ಯಗಳನ್ನು ಆ ಸಾಧನವು ಕ್ಲಿಕ್‌ ಎಂದ ಸದ್ದೂ ಬರದೆ ತೆಗೆದುಕೊಳ್ಳುತ್ತದೆ. ಅಂಥ ಬಳಕೆದಾರನ/ಳ  ಧ್ವನಿಯನ್ನೂ ಸಂಗ್ರಹಿಸಿ, ಅವನ / ಳ ನಾಡಿಬಡಿತವನ್ನೂ ದಾಖಲಿಸಿಕೊಳ್ಳುತ್ತದೆ. ಅಲ್ಲದೆ ಈ ಶಂಕಾಸ್ಪದ ಬಳಕೆದಾರನ/ಳ ಇಂಟರ್‌ನೆಟ್‌ ಚಟುವಟಿಕೆಗಳೆಲ್ಲವನ್ನೂ ದಾಖಲಿಸಿಕೊಳ್ಳುತ್ತದೆ.

ಅಂದರೆ ಅನಧಿಕೃತ ಬಳಕೆದಾರ ಎಂಬುದಾಗಿ ಶಂಕಿಸಿದಾಗ ನಿಮ್ಮ ಹೃದಯಡ ಬಡಿತದಿಂದ ಹಿಡಿದು ನಿಮ್ಮ ಎಲ್ಲ ಜಾತಕವನ್ನೂ ಅದು ದಾಖಲಿಸಿಕೊಳ್ಳುವಂಥ ಹಕ್ಕನ್ನು ಈ ಪೇಟೆಂಟಿನಿಂದ ಪಡೆದಿದೆ.

ಈ ಪೇಟೆಂಟ್‌ `ಟ್ರೈಟರ್‌ವೇರ್‌’ ಎಂದು ಯೂರೋಪಿನ ಎಲೆಕ್ಟ್ರಾನಿಕ್‌ ಫ್ರಾಂಟೈರ್‌ ಸಂಘಟನೆ ಕರೆದಿದೆ.

ನಿದರ್ಶನ ೨

ತನ್ನ ಹಲವು ಪ್ರೊಪ್ರೈಟರಿ ತಂತ್ರಾಂಶಗಳಲ್ಲಿ ಮುಕ್ತ ತಂತ್ರಾಂಶಗಳನ್ನು ಯಾವ  ನಾಚಿಕೆಯೂ ಇಲ್ಲದೆ ಬಳಸಿಕೊಂಡ ಆಪಲ್‌ ಸಂಸ್ಥೆಗೆ ಥ್ಯಾಂಕ್ಸ್‌ ಹೇಳಬೇಕೆ? – ಹೀಗೆಂದು ಲೇಖಕ ಅಲೆನ್‌ ಶಿಮೆಲ್‌ ಪ್ರಶ್ನಿಸುತ್ತಾರೆ. ಅವರ ಪ್ರಕಾರ ಮಾರಿಯೋ ಪೂಜೋನ ಗಾಡ್‌ಫಾದರ್‌ ಮತ್ತು ಐಪಾಡ್‌ಫಾದರ್‌ ಒಬ್ಬರೇ. ಅವರ ವಿನಂತಿಯನ್ನು ನೀವು ತಿರಸ್ಕರಿಸಲಾರಿರಿ!!

`ಆಪಲ್‌ನ ಈ ತಂತ್ರದಿಂದ ಮುಕ್ತ ತಂತ್ರಾಂಶದ ಸ್ಪರ್ಧೆಯ ಮಟ್ಟ ಹೆಚ್ಚಾಯಿತು’ ಆಪಲ್‌ಗೇ ಮುಕ್ತ ತಂತ್ರಾಂಶವಾದಿಗಳು ಥ್ಯಾಂಕ್ಸ್‌ ಹೇಳಬೇಕು’ ಎಂಬ ಡಿ ಜೆ ವಾಕರ್‌ ಮೋರ್ಗನ್‌ ವಾದವನ್ನು ಖಂಡಿಸುವ ಅಲೆನ್‌ `ಹಾಗೆ ಮಾಡಿದರೆ ಪೊಲೀಸರು ಮಾಫಿಯಾಗೆ ಥ್ಯಾಂಕ್ಸ್‌ ಹೇಳಿದಂತೆ’ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

ನಿದರ್ಶನ ೩

ತೀರಾ ಇತ್ತೀಚೆಗೆ, ಸ್ಲೇಟ್‌ ಗಣಕದ ಕಾಲ ಆರಂಭವಾದಾಗ, ಸ್ಟೀವ್‌ ಜಾಬ್ಸ್‌ರವರು ಗೂಗಲ್‌ನ ಆಂಡ್ರಾಯ್ಡ್‌ ಮುಕ್ತ ಆಪರೇಟಿಂಗ್‌ ತಂತ್ರಾಂಶವನ್ನು ಕಟುವಾಗಿ ಟೀಕಿಸಿದ್ದರು. ಅದು ಕೇವಲ ಸ್ಪರ್ಧೆಯ ವಿಷಯ ಎಂಬಂತೆ ಸ್ಟೀವ್‌ ಭಾವಿಸಿದ್ದು ಸರಿ ಅನ್ನಿಸುವುದಿಲ್ಲ. ಮುಕ್ತ ಫ್ಲಾಟ್‌ಫಾರಂಗಳು ಯಾವಾಗಲೂ ಗೆದ್ದೇಬಿಡುತ್ತವೆ ಎಂದೇನಿಲ್ಲ ಎಂದ ಸ್ಟೀವ್‌ ಜಾಬ್ಸ್‌ ಮುಕ್ತ ತಂತ್ರಾಂಶಕ್ಕಾಗಿ ಬೇರೆ ತಂತ್ರಾಂಶಗಳನ್ನು ರೂಪಿಸುವುದು ಕಷ್ಟ ಕೆಲಸ ಎಂದು ಟೀಕಿಸಿದರು.

ನಿಜ. ಮುಕ್ತ ತಂತ್ರಾಂಶವೆಂದರೆ ಸಾಮೂಹಿಕ ಹೊಣೆಗಾರಿಕೆ. ಆದ್ದರಿಂದ ಎಷ್ಟೋ ಸಲ ಈ ಸಾಮೂಹಿಕ ಹೊಣೆಗಾರಿಕೆಯಿಂದ ಕಾಲಬದ್ಧ ಹಾಗೂ ಗ್ರಾಹಕಸ್ನೇಹಿ ಉತ್ಪನ್ನ ಸಿಗಲಾರದು. ಆದರೆ ಅದಕ್ಕಾಗಿ ಸಾಮೂಹಿಕ ಹೊಣೆಗಾರಿಕೆಯನ್ನೇ ಜರೆಯುವುದು ಸರಿಯಲ್ಲ. ಆಪಲ್‌ನದು ಚಕ್ರಾಧಿಪತ್ಯದ ಆಡಳಿತ; ಸಾಮೂಹಿಕ ಹೊಣೆಗಾರಿಕೆ ಅದಕ್ಕೆ ಹೇಳಿ ಮಾಡಿದಸಿದ್ದಲ್ಲ.  ಆಂಡ್ರಾಯ್ಡ್ ಯಶಸ್ಸನ್ನು ಟೀಕಿಸುವ ಭರದಲ್ಲಿ ಮುಕ್ತ ತಂತ್ರಾಂಶಗಳೇ ಕೆಟ್ಟವು ಎಂದು ಸ್ಟೀವ್‌ ಜಾಬ್ಸ್‌ ಟೀಕಿಸುವುದು ಸಮುದಾಯ ಚಳವಳಿಗೆ ತೋರುವ ಅಗೌರವ.

ನಿದರ್ಶನ ೪

ಮುಕ್ತ ತಂತ್ರಾಂಶದ ಮಾತಿರಲಿ, ಇನ್ನೊಂದು ಪ್ರೊಪ್ರೈಟರಿ ತಂತ್ರಾಂಶದ ಬುಡಕ್ಕೇ ಕೊಡಲಿ ಏಟು ಬೀಸಲು ಯತ್ನಿಸಿದ ಅಪಖ್ಯಾತಿಯೂ ಸ್ಟೀವ್‌ರ ಮೇಲಿದೆ. ಕಳೆದ ವರ್ಷ ಐ ಪ್ಯಾಡ್‌ ಮತ್ತು ಐಫೋನ್‌ಗಳಲ್ಲಿ ಫ್ಲಾಶ್‌ ತಂತ್ರಾಂಶವನ್ನು ನೀಡುವುದಿಲ್ಲ ಎಂದು ಸ್ಟೀವ್‌ ನಿರ್ಧರಿಸಿದ ಬಗ್ಗೆ ಭಾರೀ ಕೋಲಾಹಲವೇ ಉಂಟಾಗಿತ್ತು. ಅಡೋಬೆ ಸಂಸ್ಥೆಯ ಈ ತಂತ್ರಾಂಶವನ್ನು ಬಳಸಲಾರೆ ಎಂದಿದ್ದಕ್ಕೆ ಹಲವು ಗ್ರಾಫಿಕ್‌ ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದರು.

ಈ ವಿಷಯಕ್ಕೆ ಬಂದಾಗ ಫ್ಲಾಶ್‌ ನೂರಕ್ಕೆ ನೂರು ಪ್ರತಿಶತ ಪ್ರೊಪ್ರೈಟರಿ ತಂತ್ರಾಂಶ ಎಂದು ಸ್ಟೀವ್‌ ಜಾಬ್ಸ್‌ ತನ್ನದೇ ಜಾಲತಾಣದಲ್ಲಿ ವಾದಿಸಿದ್ದು ಇನ್ನೂ ವಿಚಿತ್ರ ಮತ್ತು ವಿಪರ್‍ಯಾಸ. ಫ್ಲಾಶ್‌ನ್ನು ಯಾಕೆ ಬಳಸಲಾಗದು ಎಂದು ಅದು ತಾಂತ್ರಿಕವಾಗಿ ಕೊಟ್ಟ ವಿವರಣೆ ಏನೇ ಇರಲಿ, ಇಲ್ಲಿ ಮುಕ್ತ ತಂತ್ರಾಂಶವಲ್ಲ ಎಂದು ಫ್ಲಾಶ್‌ನ್ನು ಜರೆಯುವುದು, ಮತ್ತು ಅದರ ಬದಲಿಗೆ ತನ್ನದೇ ತಂತ್ರಾಂಶವನ್ನು ನೀಡುವುದು – ಇದೆಲ್ಲ ಸ್ಟೀವ್‌ ಜಾಬ್ಸ್‌ರ ಮಾರುಕಟ್ಟೆ ತಂತ್ರವಾಯಿತೇ ಹೊರತು ಸಮುದಾಯಕ್ಕೆ ಯಾವ ಗಮನಾರ್ಹ ಲಾಭವನ್ನೂ ತಂದುಕೊಡಲಿಲ್ಲ.

ಯಂತ್ರಾಂಶದ ವಿನ್ಯಾಸದಲ್ಲೇ ಗೆದ್ದ ಜಾಬ್ಸ್‌

ಹಾಗೆ ನೋಡಿದರೆ, ಸ್ಟೀವ್‌ ಜಾಬ್ಸ್‌ ಗೆದ್ದಿದ್ದು ತನ್ನ ಸಾಧನಗಳ ವಿನ್ಯಾಸದಲ್ಲಿ. ಅವರು ರೂಪಿಸಿದ ಎಲ್ಲ ಸಾಧನಗಳೂ ಒಂದಿಲ್ಲೊಂದು ಬಗೆಯಲ್ಲಿ ವಿಶಿಷ್ಟವಾದವೇ. ಅವರ ಸಾಧನಗಳ ಪವರ್‌ ಅಡಾಪ್ಟರಿನಿಂದ ಹಿಡಿದು ಎಲ್ಲವೂ ಆಪಲ್‌ಗಾಗಿಯೇ ರೂಪಿಸಿದ್ದು. ಅದಕ್ಕಾಗಿ ಸ್ಟೀವ್‌ ಹಲವು ಪೇಟೆಂಟ್‌ಗಳನ್ನು ಪಡೆದಿದ್ದಾರೆ.

ಪೇಟೆಂಟ್‌ ಬೇಕೆ?

ಹಾಗಾದರೆ ಸಂಶೋಧನೆಗಳಿಗೆ ಪೇಟೆಂಟ್‌ ಬೇಡವೆ? ವಿಶಿಷ್ಟ ಸಾಧನೆಗಳಿಗೆ ಪೇಟೆಂಟ್‌ ಬೇಡವೆ? ಯಾರೂ ಮಾಡದ ಚಿಂತನೆಗಳಿಗೆ ಹಕ್ಕುಸ್ವಾಮ್ಯ ಬೇಡವೆ? ಈ ಪ್ರಶ್ನೆಗಳು ಸಹಜ. ಇಂಥ ಹಕ್ಕುಸ್ವಾಮ್ಯದ ಪ್ರಶ್ನೆಗಳಿಗೆ ಉತ್ತರಿಸಲೆಂದೇ ಕಂಪ್ಯೂಟರ್‌ ಜಗತ್ತಿನಲ್ಲಿ ಜನರಲ್‌ ಪಬ್ಲಿಕ್‌ ಲೈಸೆನ್ಸ್‌, ಕ್ರಿಯೇಟಿವ್‌ ಕಾಮನ್‌ ಲೈಸೆನ್ಸ್‌ ಮುಂತಾದ ಪರಿಕಲ್ಪನೆಗಳು ಹುಟ್ಟಿ ಸಾಕಾರಗೊಂಡಿವೆ; ಬಹಳಷ್ಟು ಪ್ರಮಾಣಧಲ್ಲಿ ಬಳಕೆಯಾಗುತ್ತಿವೆ.  ಆದರೆ ಪೇಟೆಂಟ್‌ ವಿಚಾರದಲ್ಲಿ ಹಾಗಾಗಿಲ್ಲ. ಅದರಲ್ಲೂ ಯಂತ್ರಾಂಶಗಳ ವಿಚಾರದಲ್ಲಿ ಪೇಟೆಂಟ್‌ ಬಿಗಿಮುಷ್ಟಿ ಇದ್ದೇ ಇದೆ. ಮುಕ್ತ ಪೇಟೆಂಟ್‌ ಎಂಬುದು ಒಂದು ದೂರದ ಕನಸು.

ಆದರೆ ಯೋಚಿಸಿ, ಒಂದು ವೇಳೆ ರೇಡಿಯೋದ ಸಂಶೋಧಕ, ಭಾರತೀಯ ಜಗದೀಶ ಚಂದ್ರ ಬೋಸ್ ತಮ್ಮ ಸಂಶೋಧನೆಗಾಗಿ ಪೇಟೆಂಟ್‌ ಪಡೆದಿದ್ದರೆ? ಆಗ ಅವರು ಹೇಳಿದ್ದೇನು ಗೊತ್ತೆ?

ಬೋಸ್ ಎಂದೂ ಹಣಕ್ಕೆ ಆಸೆ ಪಡಲಿಲ್ಲ. ೧೯೦೧ರ ಮೇ ೧೭ರಂದು ಅವರು ತಮ್ಮನ್ನು ಮಾರ್ಕೋನಿಯ ಸಂಸ್ಥೆಯಾದ ವೈರ್ಲೆಸ್ ಎಂಡ್ ಟೆಲಿಗ್ರಾಫ್ ಕಂಪನಿಯ ಸಿರಿವಂತ ಮೇಜರ್ ಸ್ಟೀಫನ್ ಫ್ಲಡ್ಪೇಜ್ ತನಗೆ ಹಣದ ಆಮಿಷ ತೋರಿಸಿದ ಬಗ್ಗೆ ಕಾಗದ ಬರೆದರು:

A short time before my lecture, a multi-millionaire proprietor of a very famous telegraph company telegraphed me with an urgent request to meet me. I replied that I had no time. In response he said that he is coming to meet me in person and within a short time he himself arrived with patent forms in hand. He made an earnest request to me not to divulge all valuable research results in today’s lecture : “There is money in it — let me take out patent for you. You donot know what money you are throwing away” etc. Of course, ” I will only take half share in the profit — I will finance it” etc.

This multi-millionaire has come to me like a beggar for making some more profits. Friend, you would have seen the greed and hankering after money in this country, – money, money – what a terrible all pervasive greed ! If I once get sucked into this terrible trap, there wont’ be any escape ! See, the research that I have been dedicated to doing, is above commercial profits. I am getting older – I am not getting enough time to do what I had set out to do — I refused him.

ಇಷ್ಟೇ ಅಲ್ಲ, ಈಗ ಮೊಬೈಲಿನಲ್ಲಿ ಬಳಕೆಯಾಗುವ ಮೈಕ್ರೋವೇವ್‌ಗಳನ್ನು ೧೯೦೩ರಲ್ಲೇ ಗುರುತಿಸಿದವರೂ ಜಗದೀಶ ಚಂದ್ರ ಬೋಸರೇ. ಅಕಸ್ಮಾತ್‌ ಅದಕ್ಕೂ ಅವರು ಹಣ ಗಳಿಸುವ ಹಾದಿಗೆ ಬಿದ್ದಿದ್ದರೆ ಏನಾಗುತ್ತಿತ್ತು ಯೋಚಿಸಿ.

ಇಲ್ಲಿ ನಾನು ಹೇಳಬೇಕಿದ್ದ ವಿಷಯ ಇಷ್ಟೆ: ಮೂಲ ಸಂಶೋಧನೆಗೇ ಪೇಟೆಂಟ್‌ ಕೇಳದ ಮಹಾನ್‌ ಚೇತನಗಳೂ ಈ ಜಗತ್ತಿನಲ್ಲಿ ಇವೆ. ಅಂಥ ಮೂಲ ಸಂಶೋಧಕರ ಸಾಲಿಗೇನೂ ಸ್ಟೀವ್‌ ಸೇರುವುದಿಲ್ಲ. ಯಾಕೆಂದರೆ ಅವರು ಮಾಡಿದ ಬಹುತೇಕ ಸಾಧನೆಗಳು ಒಂದು ತಂಡದ, ಅಥವಾ ಸಮುದಾಯದ (ಮುಕ್ತ ತಂತ್ರಾಂಶ) ಆವಿಷ್ಕಾರಗಳನ್ನು ಅವಲಂಬಿಸಿಯೇ ಇದ್ದವು. ಹೆಚ್ಚೆಂದರೆ ವಿನ್ಯಾಸದಲ್ಲಿ ಮತ್ತು ನಿರೂಪಣೆಯಲ್ಲಿ ಅವರು ವಿಭಿನ್ನ ಮಾರ್ಗ ಹಿಡಿದಿದ್ದರು ಎನ್ನಬಹುದು. ಥಾಮಸ್‌ ಆಲ್ವ ಎಡಿಸನ್‌ಗೆ ಹೋಲಿಸುವುದು ಎಂದರೆ ಅಧಿಕ ಪ್ರಸಂಗಿತನವಲ್ಲವೆ? ನೂರಾರು ಪೇಟೆಂಟ್‌ಗಳನ್ನು  ಹೊಂದಿದ್ದ ಎಡಿಸನ್‌ನ ಹತ್ತು ಹಲವು ಸಂಶೋಧನೆಗಳು ಬದುಕಿಗೆ ಅತ್ಯಗತ್ಯವಾಗಿ ಬೇಕಾದವೇ ಹೊರತು ಐಷಾರಾಮಿ, ಲೋಲುಪ, ಕೊಳ್ಳುಬಾಕ ಸಂಸ್ಕೃತಿಯ ಅಗತ್ಯಗಳಾಗಿರಲಿಲ್ಲ.

ಇಷ್ಟಕ್ಕೂ ಆಪಲ್‌ ಉತ್ಪನ್ನಗಳ ಗಿರಾಕಿಗಳು ಯಾರು? ಮೇಲ್ವರ್ಗದ, ಯಾವಾಗಲೂ ವಿಶೇಷವನ್ನೇ ಬಯಸುವ ಗ್ರಾಹಕರು. ಕೊಳ್ಳುವ ಸಾಮರ್ಥ್ಯ ಇರುವವರು. ನಮ್ಮ ಕರ್ನಾಟಕದಲ್ಲೇ, ಬೆಂಗಳೂರಿನ ಕೆಲವರನ್ನು ಬಿಟ್ಟರೆ ಆಪಲ್‌ನ ಗ್ರಾಹಕರು ಎಷ್ಟು ಜನ ಇದ್ದಾರೆ?

ಸ್ಟೀವ್‌ ಜಾಬ್ಸ್‌ ಹುಟ್ಟುಹಾಕಿದ್ದು ತನ್ನದೇ ಉತ್ಪನ್ನಗಳನ್ನು ಖರೀದಿಸಬೇಕೆನ್ನುವ ಗುಲಾಮೀ ಮಾನಸಿಕತೆಯ ಗ್ಯಾಜೆಟ್‌ ಪ್ರಿಯರನ್ನೇ ಹೊರತು, ರಾಜ್‌ಕುಮಾರ್‌ ಥರ ಸಮಸ್ತ ನಾಗರಿಕರ ಪ್ರೀತಿಯನ್ನಲ್ಲ. ನಿಜಕ್ಕೂ ಸ್ಟಾಲ್‌ಮನ್‌ ಹೇಳಿದಂತೆ ಆಪಲ್‌ ಸೃಷ್ಟಿಸಿದ್ದು ಹಂಗಿನ ಅರಮನೆ. ಅಥವಾ ಬಂಗಾರದ ಸೆರೆಮನೆ. ಅದರಲ್ಲೇ ಕೂತು ನೀವು ಮೃಷ್ಟಾನ್ನ ಉಣ್ಣಬಹುದು. ಆದರೆ ಹೊರಗೆ ಬಂದರೆ ಮತ್ತೆ ಅದೇ ಹರಕಲು ಸಮಾಜ; ಅದೇ ಸಮುದಾಯ.

ಸ್ಟೀವ್‌ ಜಾಬ್ಸ್‌ ಕಂಡುಹಿಡಿದದ್ದೆಲ್ಲ ಯುವ ಪೀಳಿಗೆಯವರು ಏಕಾಗ್ರತೆಯನ್ನು ಕಳೆದುಕೊಳ್ಳುವ ಸಾಧನಗಳು ಎಂಬ ಟೀಕೆಯೂ ಕೇಳಿಬಂದಿದೆ. ಸದ್ಯಕ್ಕೆ ಈ ಟೀಕೆಯನ್ನು ಬದಿಗಿಡೋಣ. ಯುವ ಪೀಳಿಗೆ ಹಾಳಾಗುತ್ತಿದೆ ಎಂದು ಹಿರಿಯರಾದ ಕೂಡಲೇ ಹೇಳುವ ಪರಿಪಾಠ ಹಲವು ಪೀಳಿಗೆಗಳಿಂದ ನಡೆದುಕೊಂಡು ಬಂದಿದೆ!

ಸ್ಟೀವ್‌ ಜಾಬ್ಸ್‌ ಮಾಡುತ್ತಿರೋದು ಬ್ಯುಸಿನೆಸ್‌; ಆದ್ದರಿಂದ ಅವರು ಮಾಡಿದ್ದನ್ನೆಲ್ಲ ಟೀಕಿಸಲಾಗುತ್ತದೆಯೆ ಎಂಬ ಪ್ರಶ್ನೆಯೂ ಬರುತ್ತದೆ. ವ್ಯವಹಾರ ಮಾಡಲಿ; ಯಾರೂ ಬೇಡ ಎನ್ನುವುದಿಲ್ಲ. ಆದರೆ ತನ್ನ ವ್ಯವಹಾರ ಕುದುರಿಸಲು ಇನ್ನೊಂದು ನ್ಯಾಯಯುತ ವ್ಯವಹಾರವನ್ನು ಹಂಗಿಸುವುದು ಸರಿಯಲ್ಲ. ಸ್ಟೀವ್‌ ಜಾಬ್ಸ್‌ ತಮ್ಮ ಬದುಕಿನುದ್ದಕ್ಕೂ ಮುಕ್ತ ತಂತ್ರಾಂಶವನ್ನು ಆಧರಿಸಿ ಬೆಳೆದರು; ದುಡ್ಡು ಮಾಡಿದರು. ಆದರೆ ತನ್ನ ನಿಯಂತ್ರಣದಲ್ಲಿ ಲಕ್ಷಗಟ್ಟಳೆ ಗ್ರಾಹಕರು ಬಂದಾಗ ಮುಕ್ತ ತಂತ್ರಾಂಶದಲ್ಲಿ ತೊಡಕುಗಳಿವೆ ಎಂದು ತರಲೆ ತೆಗೆದರು. ಇದು ಸಮುದಾಯದ ಒಳಿತಿನ ಚಿಂತನೆ ಆಗಲಾರದು.

ಮುಂದೆ?

ಮುಕ್ತ ತಂತ್ರಾಂಶಗಳಲ್ಲೂ ಸಮಸ್ಯೆ ಆರಂಭವಾಗಿದೆ. ‘ತಂತ್ರಾಂಶ ಮುಕ್ತ, ಸೇವೆಗೆ ಕಾಸು’ ಎಂಬ ಸಿದ್ಧಾಂತಕ್ಕೆ ಬೆಲೆ ಬಂದಿದೆ. ರಿಚಡ್‌ ಸ್ಟಾಲ್‌ಮನ್‌ ಕೂಡಾ ತಮ್ಮ ಆಂದೋಳನವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತಿಲ್ಲ. ಇತ್ತ ಗೂಗಲ್‌ನಂಥ ಸಂಸ್ಥೆಗಳು ಮುಕ್ತ ತಂತ್ರಾಂಶವನ್ನೇ ಮುಂದೆ ಮಾಡಿಕೊಂಡು ಹೊಸ ಬಗೆಯ ರೆವಿನ್ಯೂ ಮಾಡೆಲ್‌ಗೆ ಕೈ ಹಾಕುತ್ತಿವೆ. ಈ ಸಂಕೀರ್ಣ ಪರಿಸ್ಥಿತಿಯಲ್ಲಿ ಏನೂ ಹೇಳಲಾಗದು. ಸ್ಟೀವ್‌ ಜಾಬ್ಸ್‌ ಒಬ್ಬರೇ ಹೀಗೆ ಪ್ರೊಪ್ರೈಟರಿ ಹಿಡಿತಕ್ಕೆ ಹೊರಟವರಲ್ಲ. ಅವರು ಕಂಪ್ಯೂಟರ್‌ ಯುಗದ ಮಹಾನ್‌ ಅವತಾರ ಎಂದು ಎಲ್ಲರೂ ಒಂದೇ ಧ್ವನಿಯಲ್ಲಿ ಬಣ್ಣಿಸಿದ್ದರಿಂದ ಇಷ್ಟೆಲ್ಲ ಹೇಳಬೇಕಾಯಿತು.

ಇದರ ಜೊತೆಗೆ ಮುಕ್ತ ತಂತ್ರಾಂಶ ಎಂದರೆ ಅದು ಎಡಪಂಥಕ್ಕೆ ಸೇರಿದ ಚಳವಳಿ ಎಂಬ ತಪ್ಪು ಕಲ್ಪನೆಯನ್ನು ಭಾರತದಲ್ಲಿ ಮೂಡಿಸಲಾಗುತ್ತಿದೆ. ಹೆಚ್ಚಾಗಿ ಕಮ್ಯುನಿಸ್ಟ್‌ ಚಿಂತನೆ ಇರುವವರೇ ಮುಕ್ತ ತಂತ್ರಾಂಶದ ಚಳವಳಿಗೆ ಸೇರಿಕೊಂಡಿದ್ದಾರೆ.  ಕಂಪ್ಯೂಟರ್‌ ರಂಗದಲ್ಲಿ ಇಸಂಗಳನ್ನು ತರುವುದೇ ಒಂದು ವಿಲಕ್ಷಣ ಸಂಗತಿ.

ಇತ್ತ ಕೇಂದ್ರ ಸಚಿವ ಕಪಿಲ್‌ ಸಿಬಲ್‌ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಅಗ್ಗದ ಸ್ಲೇಟ್‌ ಟ್ಯಾಬ್ಲೆಟ್‌ ಕೊಡಲು ಶುರು ಮಾಡಿದ್ದಾರೆ. ಅಗ್ಗದ ಬೆಲೆಯಲ್ಲಿ `ಆಕಾಶ’ ತೋರಿಸುತ್ತಿದ್ದಾರೆ.

ಆಂಡ್ರಾಯ್ಡ್‌ ಎಂಬುದು  ಗೂಗಲ್‌ ಸಂಸ್ಥೆಯ ಮುಕ್ತ ತಂತ್ರಾಂಶವಾದರೂ ಅದರ ಮೇಲೆ ಹಲವಾರು ಬಳಕೆಸ್ನೇಹಿ ಅಪ್ಲಿಕೇಶನ್‌ಗಳನ್ನು ಸಮುದಾಯದ ಸದಸ್ಯರು ಬರೆಯುತ್ತಿದ್ದಾರೆ.

ಮುಂದಿನ ನಾಲ್ಕು ಪೀಳಿಗೆಯ ಉತ್ಪನ್ನಗಳು ಹೇಗಿರಬೇಕು ಎಂದು ಸ್ಟೀವ್‌ ಜಾಬ್ಸ್‌ ಅದಾಗಲೇ ಯೋಚನೆ ಮಾಡಿ ಬರೆದಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಈ ಲೇಖನವನ್ನು ಮುಗಿಸುವ ಹೊತ್ತಿಗೆ ಬಂದಿದೆ.

ನಮ್ಮ ದೇಶದ ಸೇಬುಹಣ್ಣುಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳ ಪಸೆ ಇರುತ್ತದೆ ಎಂದು ಎಲ್ಲೋ ಓದಿದ ನೆನಪಾಗುತ್ತಿದೆ.

Share. Facebook Twitter Pinterest LinkedIn Tumblr Email
Previous Articleಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!
Next Article ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

4 Comments

  1. Pingback: ಸುದ್ದಿಮನೆ ಮುಖ್ಯಾಂಶಗಳು – 10 ಅ. « ಕಾಲಂ9 * column9 * Kannada media

  2. Murali on October 11, 2011 3:02 pm

    nice analysis, thanks!

  3. ಸತ್ಯನಾರಾಯಣ ಎ on October 12, 2011 11:19 am

    ಈ ಐಫೋನ್, ಈಪಾಡ್, ಇತ್ಯಾದಿ ಐ…ಗಳು ನಮ್ಮಂತಹವರಿಗೆ ಕೈಗೆಟುಕದ ಐಶಾರಾಮಿ ಗ್ಯಾಜೆಟ್ ಗಲೇ ಹೌದು. ಇರಲಿ, ಇವುಗಳ ಸೃಷ್ಟಿಕರ್ತನ ಅವಸಾನದ ಸಂದರ್ಭದಲ್ಲಿ ಆಗಿರುವ ಈ ವಿಶ್ಲೇಷಣೆಯು ಅಕಾರಣವೇನಲ್ಲ!!. ಎಲ್ಲರಿಗೂ ತಿಳಿದಿರದ ವಿಷಯಗಳನ್ನು ವಿಶ್ಲೇಷಣೆಯ ಮೂಲಕ ತಿಳಿಸಿದ್ದೀರಿ. ಧನ್ಯವಾದಗಳು.

  4. Ragu Kattinakere on October 19, 2011 6:44 am

    Thank you. Very well said. I was trying to save a document on iPad we can not! Such restrictions on devices we buy is no progress.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.