Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
ಲೇಖನಗಳು

ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?

ಬೇಳೂರು ಸುದರ್ಶನBy ಬೇಳೂರು ಸುದರ್ಶನJanuary 8, 2010Updated:May 19, 20251 Comment7 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

(ಬಿಟಿ ಬದನೆ ಬಗ್ಗೆ ಡಾ. ಎಸ್. ಶಾಂತಾರಾಂ ವಿಜಯಕರ್ನಾಟಕದಲ್ಲಿ ಕೊಟ್ಟ ಸಂದರ್ಶನ ಮತ್ತು ಅದಕ್ಕೆ ನಾನು ನೀಡಿದ ಪ್ರತಿಕ್ರಿಯೆಯನ್ನು ಮಿತ್ರಮಾಧ್ಯಮದಲ್ಲಿ ಓದಿದ್ದೀರಷ್ಟೆ? ಸದರಿ ಸಂದರ್ಶನಕ್ಕೆ ಪ್ರತಿಕ್ರಿಯೆಯಾಗಿ ಕಳಿಸಿದ್ದ, ಆದರೆ ಪ್ರಕಟವಾಗದೇ ಹೋದ ಇನ್ನೆರಡು ಪ್ರತಿಕ್ರಿಯೆಗಳನ್ನು ಆಯಾ ಲೇಖಕರು ನನಗೆ ಕಳಿಸಿಕೊಟ್ಟಿದ್ದಾರೆ. ಅವನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಲೇಖನ  ಶ್ರೀ ಸಂತೋಷ ಕೌಲಗಿಯವರದು . ಇನ್ನೊಂದು ಲೇಖನ ಶ್ರೀ ಆನೆಕಟ್ಟೆ ವಿಶ್ವನಾಥರದು. ಓದಿ ಪ್ರತಿಕ್ರಿಯಿಸಿ. )

ಶಾಂತಾರಾಂ ಯಾರು?

ಶಾಂತಾರಾಂ ಅವರೊಂದಿಗಿನ ಸಂದರ್ಶನವನ್ನು ವಿಜಯಕರ್ನಾಟಕದ ಕೆಲವು ಓದುಗರಾದರೂ ಮೆಚ್ಚಿದ್ದರೆ ಅಂತಹವರು ಶಾಂತಾರಾಂ ಅವರ ಜಾತಕವನ್ನು ಒಂದಿಷ್ಟು ಪರಿಚಯ ಮಾಡಿಕೊಳ್ಳುವುದು ಒಳ್ಳೆಯದು. ಸಂದರ್ಶಕರೇ ಹೇಳಿರುವಂತೆ ಕಳೆದ ಮೂವತ್ತೈದು ವರ್ಷಗಳಿಂದ ಶಂತನು ಶಾಂತಾರಾಂ ಅವರು ಅಮೇರಿಕೆಯಲ್ಲಿರುತ್ತಾರೆ. ಅವರು ಸೇವೆ ಸಲ್ಲಿಸಿದ್ದು ಯು.ಎಸ್.ಡಿ.ಎ. ಅಂದರೆ ಅಮೇರಿಕೆಯ ಕೃಷಿ ಇಲಾಖೆ. ಇದು ಅಮೇರಿಕಾ ಸರ್ಕಾರದ ದೊಡ್ಡ ಇಲಾಖೆಯಾಗಿದ್ದು ಅದು ಯು.ಎಸ್. ಏಡ್ ಮೂಲಕ ಕುಲಾಂತರ ತಳಿ ಆಹಾರವನ್ನು ಬಲಾತ್ಕಾರವಾಗಿ ಇತರ ದೇಶಗಳಿಗೆ ದಬ್ಬುವ ಕೆಲಸ ಮಾಡುತ್ತಾಬಂದಿದೆ. ನಿವೃತ್ತರಾದ ಮೇಲೆ ಶಾಂತಾರಾಂ ಅವರು ಕೆಲಸಮಾಡಿದ / ಮಾಡುತ್ತಿರುವ ಸೆಂಜೆಂಟಾ ಬಹುರಾಷ್ಟ್ರೀಯ ಕಂಪನಿ ಪ್ರಪಂಚದಲ್ಲೇ ಬಹುದೊಡ್ಡ ಕುಲಾಂತರಿ ಬೀಜ ಹಾಗೂ ರಾಸಾಯನಿಕಗಳ ಉತ್ಪತ್ತಿಯಲ್ಲಿ ತೊಡಗಿಕೊಂಡಿರುವ ಕಂಪನಿ. ಹಾಗಾಗಿ ಶಾಂತಾರಾಂ ಅವರದು ಒಬ್ಬ ಸೇಲ್ಸ್‌ಮನ್ ಕೆಲಸ. ಹಣ ಪಡಿಯುತ್ತಿರುವ ಕಂಪನಿಗಳಿಗೆ ಇರುವ ಅವರ ನಿಷ್ಠೆ ಪ್ರಶ್ನಾತೀತ. ಯುಸ್.ಡಿ.ಎ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಅವರ ಸೇವೆಯನ್ನು ಪಡೆಯುತ್ತಿರುವುದು ಅವರಿಗಿರುವ ಬಿ.ಟಿ.ಜ್ಞಾನಕ್ಕಿಂತ ಹೆಚ್ಚಾಗಿ ಅವರಿಗಿರುವ ಬಾಯಿಬಡಕುತನಕ್ಕಾಗಿ. ಆ ಕಂಪನಿಗಳು ಅವರನ್ನು ಕೆಲಸಕ್ಕೆ ಇಟ್ಟುಕೊಂಡಿರುವುದೇ ಬೆರ್ಚಪ್ಪನ ಕೆಲಸಮಾಡುವುದಕ್ಕಾಗಿ. ಬಿ.ಟಿ.ತಂತ್ರಜ್ಞಾನದ ಮೇಲೆ ಮಾಡಿರುವ ಅವರ ಸಂಶೋಧನೆ ಅತ್ಯಲ್ಪ, ತುತ್ತೂರಿ ಊದುವ ಕೆಲಸವೆ ಹೆಚ್ಚು. ಬಿ.ಟಿ. ವಲಯದಲ್ಲಿ ಅವರ ಬಾಯಿಬಡುಕತನ ಸುಪರಿಚಿತ.
 
ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?

ಶಾಂತಾರಾಂ ಅವರು ಬಿ.ಟಿ.ವಿರೋಧಿಗಳ ಬಾಯಿ ಮುಚ್ಚಿಸಲು ಮಾಡಿರುವ ಹೊಸ ಉಪಾಯವೆಂದರೆ ವಿಜ್ಞಾನಿಗಳಲ್ಲದವರು ಸಂಶೋಧನೆಗಳ ಬಗ್ಗೆ ಮಾತನಾಡಬಾರದು ಎಂಬ ಬಹುದೊಡ್ಡ ತಾತ್ವಿಕ ನೆಲೆಗಟ್ಟನ್ನು! ಅಂದರೆ ಚಪ್ಪಲಿ ಹೊಲೆದುಕೊಟ್ಟವನು ಹೇಗೇ ಹೊಲಿದಿದ್ದರೂ ಅದು ಎಲ್ಲಿ ಚುಚ್ಚುತ್ತಿದ್ದರೂ ಧರಿಸುವವನು ಅದರ ಬಗ್ಗೆ ಚಕಾರವೆತ್ತಬಾರದು. ಸಮಾಜದ ಹಿತಕ್ಕೆ ಧಕ್ಕೆ ತರುವಂಥಹ ಯಾವುದೇ ವಿಚಾರ ಬಂದರೂ ಅದರ ಬಗ್ಗೆ ಮಾತನಾಡುವ ಹಕ್ಕು ಸಮಾಜದ ಎಲ್ಲ ಜನರಿಗೂ ಇದೆ. ಬೆರಳೆಣಿಕೆಯಷ್ಟು ವಿಜ್ಞಾನಿಗಳು ತಮ್ಮ ಸೀಮಿತ ದೃಷ್ಟಿಕೋನದಿಂದ ಬಹುರಾಷ್ಟ್ರೀಯ ಕಂಪನಿಗಳ ಆಮಿಷಕ್ಕೆ ಒಳಗಾಗಿ ಮಾಡಿದ ಸಂಶೋಧನೆಗಳನ್ನು ಕೋಟ್ಯಾಂತರ ರೈತರು ಒಪ್ಪಿಕೊಂಡು ಬಿಡಬೇಕು ಎಂಬುದು ಶಾಂತಾರಾಂ ಅವರ ವಾದ. ವಿಜ್ಞಾನಿಗಳು ಎಂಬ ಸಮಗ್ರ ದೃಷ್ಟಿಯಿಲ್ಲದ ಒಂದು ವರ್ಗ ಹೇಳಿದ್ದೇ ಸರಿ, ಮಿಕ್ಕವರೆಲ್ಲರೂ ದಡ್ಡರು ಎಂಬ ಶಾಂತಾರಾಂ ಅವರ ಮಾತು ಅವರ ದುರಹಂಕಾರಕ್ಕೆ ಒಂದು ಉದಾಹರಣೆ.

ತಪ್ಪಿಸಿಕೊಂಡು ಓಡಾಡುತ್ತಿರುವವರು ಯಾರು?

ಬಿ.ಟಿ.ಯ ಬಗ್ಗೆ ವಿಷಯಾಧಾರಿತ ಚರ್ಚೆಯಾಗಬೇಕು ಎನ್ನುವ ಶಾಂತಾರಾಂ ಅವರ ಮಾತನ್ನು ನಾನು ಒಪ್ಪುತ್ತೇನೆ. ಕಳೆದ ಆರೇಳು ವರ್ಷಗಳಲ್ಲಿ ಬಿ.ಟಿ.ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ತುಂಬ ಅನೇಕ ಸಾರ್ವಜನಿಕ ಚರ್ಚೆಗಳಾಗಿವೆ. ಸಾರ್ವಜನಿಕರ ಮುಂದೆ ಪರವಿರೋಧಗಳ ಚರ್ಚೆಗಳನ್ನು ಏರ್ಪಡಿಸಲು ಪ್ರಯತ್ನಮಾಡಲಾಗಿದೆ. ಎಲ್ಲ ಸಭೆಗಳಲ್ಲೂ ಬಿ.ಟಿ.ವಿರೋಧಿಗಳು ಧೈರ್ಯವಾಗಿ ಭಾಗವಹಿಸಿ ತಮ್ಮ ವಿಚಾರವನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ. ಆದರೆ ಪ್ರತಿಸಭೆಯ ಸಂದಂರ್ಭದಲ್ಲೂ ಬಿ.ಟಿ. ಪರ ಇರುವವರು ವಿಜ್ಞಾನಿಗಳು ಏನೋ ಕಾರಣ ಹೇಳಿ ತಪ್ಪಸಿಕೊಂಡಿದ್ದಾರೆ. ಅದರಲ್ಲೂ ಕಂಪನಿಗಳ ವಿಜ್ಞಾನಿಗಳು ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಕಣ್ಣಿಗೇ ಕಾಣಿಸುವುದಿಲ್ಲ. ಅವರಿಗೆ ನಿಜಕ್ಕೂ ತಮ್ಮ ಲಾಭಕ್ಕಿಂತ ರೈತಹಿತ, ಜನಹಿತ, ದೇಶಹಿತ ಮುಖ್ಯವಾಗಿದ್ದರೆ ಸಾರ್ವಜನಿಕರ ಮುಂದೆ ತಮ್ಮ ವಿಚಾರ ಮಂಡಿಸಿ ಸಮಾಜದ ಒಪ್ಪಿಗೆ ಪಡೆಯಬೇಕಿತ್ತು. ಅಷ್ಟೊಂದು ಕಷ್ಟವನ್ನು ಅವರೇಕೆ ಅನುಭವಿಸಬೇಕು ಹೇಳಿ. ಅವರಿಗೆ ಬಿ.ಟಿ.ತಂತ್ರಜ್ಞಾನವನ್ನು ದೇಶದೊಳಗೆ ತಳ್ಳಲು ಎಲ್ಲಿ ವಶೀಲಿ ಹಚ್ಚಬೇಕು, ಎಲ್ಲಿ ಹಣ ಚೆಲ್ಲಬೇಕು, ಯಾರನ್ನು ಹಿಡಿಯಬೇಕು ಎಂಬುದು ಚೆನ್ನಾಗಿಗೊತ್ತಿದೆ.

ಸಮಗ್ರತೆಯ ಕೊರತೆ

ಶಾಂತಾರಾಂ ಅಂತಹ ಅಲ್ಪಜ್ಞಾನದ ವಿಜ್ಞಾನಿಗಳಿಗೆ ಒಂದು ಸಮಗ್ರವಾದ ದೃಷ್ಟಿಕೋನವಿಲ್ಲವೆಂಬುದು ಅವರ ಸಂದರ್ಶನವನ್ನು ನೋಡಿದರೆ ಸಾಮಾನ್ಯ ತಿಳುವಳಿಕೆಯುಳ್ಳ ಯಾರಿಗಾದರೂ ಅರ್ಥವಾಗುತ್ತದೆ. ಇಂದಿನ ಆಧುನಿಕತೆಯ ಎಲ್ಲ ಅವಘಡಗಳಿಗೂ ಸೀಮಿತ ದೃಷ್ಟಿಕೋನದ, ಸಮೀಪದೃಷ್ಟಿಯ ವಿಜ್ಞಾನಿಗಳು, ತಂತ್ರಜ್ಞರುಗಳೇ ಕಾರಣ. ಸಮಸ್ಯೆಯನ್ನು ಉಂಟುಮಾಡುವವರೂ ಅವರೇ, ಅದಕ್ಕೆ ಉತ್ತರ ಹುಡುಕುವವರೂ ಅವರೇ, ಅವರ ಬೆನ್ನುತಟ್ಟಿಕೊಳ್ಳುವವರೂ ಅವರೇ. ಬಿ.ಟಿ.ಸೇರಿಸಿ ಕೀಟಗಳನ್ನು ಎದುರಿಸಿಬಿಡುವ ಶಕ್ತಿಯನ್ನು ಸಸ್ಯಗಳಿಗೆ ಕೊಟ್ಟುಬಿಟ್ಟರೆ ಎಲ್ಲ ಸಮಸ್ಯೆಗಳೂ ಬಗೆಹರಿದು ಹೋಗುತ್ತವೆ ಎಂದು ಕೊಂಡಿರುವ ಶಾಂತಾರಾಂ ಅಂತಹವರಿಗೆ ಏನು ಹೇಳೋಣ? ಪ್ರತಿಯೊಂದು ಸಸ್ಯಕ್ಕೂ, ಬೀಜಕ್ಕೂ ಇಳುವರಿಯೊಂದಿಗೆ ಪರಿಸರ, ಸಮಾಜಿಕ, ಆರ್ಥಿಕ ಆಯಾಮಗಳು ಇವೆ ಎಂಬ ವಿಚಾರವನ್ನು ಇವರ ತಲೆಗೆ ಸೇರಿಸುವುದು ಹೇಗೆ?

ಬಿ.ಟಿ.ತಂತ್ರಜ್ಞಾನವನ್ನು ವಿರೋಧಿಸುತ್ತಿರುವ ಜನರಿಗೆ ತಂತ್ರಜ್ಞಾನದ ಬಗೆಗಿನ ಆತಂಕದೊಂದಿಗೆ ಈ ತಂತ್ರಜ್ಞಾನ ದೇಶದ ಮೇಲೆ, ದೇಶದ ಬಡರೈತರ ಮೇಲೆ, ದೇಶದ ಪ್ರಕೃತಿ ಸಂಪತ್ತಿನ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಆತಂಕವಿದೆ. ಆದರೆ ಬಿ.ಟಿ.ಜನರಿಗೆ ಬೀಜ ಹಂಚಿ ದುಡ್ಡು ಮಾಡುವ ಹವಣಿಕೆ ಮಾತ್ರವಿದೆ.

ಬಾಣಲೆಯಿಂದ ಬೆಂಕಿಗೆ

ಶಾಂತಾರಾಂ ಅವರೇ ಹೇಳಿರುವಂತೆ ಹತ್ತು ಸಾವಿರ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಆಗದಿದ್ದ ಬದಲಾವಣೆ ಕಳೆದ ಐವತ್ತು ವರ್ಷಗಳಲ್ಲಿ ಆಗಿದೆ. ಕೃಷಿಕ್ಷೇತ್ರ ಸದಾಕಾಲ ಪ್ರಕೃತಿಹಾಕಿಕೊಟ್ಟಿರುವ ಚೌಕಟ್ಟಿನಲ್ಲಿ ಕೆಲಸಮಾಡುವಂತಹದು. ಪ್ರಕೃತಿಗೆ ಮನುಷ್ಯ ಬಯಸುವಷ್ಟು ವೇಗವಿಲ್ಲ. ಅದಕ್ಕೆ ತನ್ನದೇ ಆದ ವೇಗವಿದೆ. ಪ್ರಕೃತಿ ತನ್ನಲ್ಲಿ ಸಣ್ಣದೊಂದು ಬದಲಾವಣೆ ಮಾಡಿಕೊಳ್ಳಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇಪ್ಪತ್ತನೇ ಶತಮಾನದ ಆಧುನಿಕ ಮನುಷ್ಯನ ಹುಟ್ಟುಗುಣ ಆತುರ ಮತ್ತು ವೇಗ. ಆತುರದ ಮನುಷ್ಯನ ಕೈಗೆ ಇಪ್ಪತ್ತನೇ ಶತಮಾನದ ಕೃಷಿ ಸಿಕ್ಕಿಬಿದ್ದಿತು. ಹತ್ತು ಸಾವಿರ ವರ್ಷಗಳಲ್ಲಿ ಆಗದಿದ್ದ ಅನಾಹುತಗಳು ಐವತ್ತು ವರ್ಷಗಳಲ್ಲಿ ಆಯಿತು. ಆಧುನಿಕ ಮನುಷ್ಯ ಪ್ರಕೃತಿಯನ್ನು ನಾಶಮಾಡಿದ, ಮೇಲ್ಮಣ್ಣನ್ನು ತೂರಿಬಿಟ್ಟ, ಇತರೆ ಜೀವಜಂತುಗಳು ಭೂಮಿಯ ಮೇಲೆ ಉಳಿಯದಂತೆ ಮಾಡಿಬಿಟ್ಟ. ಕಡೆಗೆ ಕೃಷಿಯಲ್ಲಿ ಸೋತು ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯನ್ನೂ ನಿರ್ಮಾಣ ಮಾಡಿದ. ಇಷ್ಟು ಸಾಲದೇ ನಮ್ಮ ಸಾಧನೆಗೆ?

ಹಸಿರುಕ್ರಾಂತಿ ಎಂಬ ಮಾಯೆ

ನಾರ್ಮನ್ ಬೋರ್ಲಾಗ್ ಅವರ ಸಂಶೋಧನೆಗಳನ್ನಾಧರಿಸಿ ಹಸಿರುಕ್ರಾಂತಿ ಮಾಡಿ ಒಂದೆರಡು ದಶಕಗಳ ಕಾಲ ಆಹಾರ ಉತ್ಪತ್ತಿ ಹೆಚ್ಚು ಮಾಡಿದ್ದು ನಿಜ. ಹಸಿರುಕ್ರಾಂತಿಯಿಂದ ಆಹಾರ ಉತ್ಪಾದನೆಯಲ್ಲಿ ಆದ ಹೆಚ್ಚಳ ನಾಲ್ಕು ಪಟ್ಟು; ಅದೇ ಸಮಯದಲ್ಲಿ ರಾಸಾಯನಿಕಗಳ ಮೇಲಿನ ನಮ್ಮ ಅವಲಂಬನೆ ಹೆಚ್ಚಿದ್ದು ಮುನ್ನೂರು ಪಟ್ಟು. ಆಹಾರ ಉತ್ಪಾದನೆಯನ್ನು ಹೆಚ್ಚಿಸಿದ್ದೇವೆ ಎನ್ನುವ ವಿಜ್ಞಾನಿಗಳು ಈ ಅಂಶವನ್ನೇಕೆ ಮುಚ್ಚಿಡುತ್ತಾರೆ. ಹಸಿರು ಕ್ರಾಂತಿಯನ್ನು ನಮಗೆ ತಗುಲಿಹಾಕಲು ಅಮೇರಿಕಾ ನಡೆಸಿದ ಹುನ್ನಾರದ್ದೇ ದೊಡ್ಡ ಕಥೆಯಿದೆ. ಸರ್ಕಾರ ಕಳೆದ ವರ್ಷ ರಾಸಾಯನಿಕ ಗೊಬ್ಬರಗಳ ಹೆಸರಿನಲ್ಲಿ ಗೊಬ್ಬರದ ಕಂಪನಿಗಳಿಗೆ ನೀಡಿದ ಸಬ್ಸಿಡಿ ಹಣ ೪೯ಸಾವಿರ ಕೋಟಿ. ಈ ವರ್ಷ ಅದು ೧ ಲಕ್ಷದ ೨೦ಸಾವಿರ ಕೋಟಿ ರುಪಾಯಿ. ಅಂದರೆ ದೇಶದ ಪ್ರತಿ ಹೆಕ್ಟೇರ್ ಕೃಷಿಭೂಮಿಗೆ ಕೊಟ್ಟ ಸಬ್ಸಿಡಿ ರೂ ೮೫೦೦. ಈಗಾಗಲೇ ಗೊಬ್ಬರ ಕೊಡಲಾಗದೆ ಪರದಾಡುತ್ತಿರುವ ಸರ್ಕಾರಗಳು ಇಡೀ ದೇಶ ರಾಸಾಯನಿಕ ಕೃಷಿಯನ್ನು ಅವಲಂಬಿಸಿದರೆ ಎಲ್ಲಿಗೆ ಹೋಗುತ್ತವೆ. ವಾಸ್ತವದಲ್ಲಿ ರಾಸಾಯನಿಕ ಕೃಷಿ ಕಿಚನ್‌ಗಾರ್ಡನ್ ಕೃಷಿ. ರಾಸಾಯನಿಕ ಮುಕ್ತ ಕೃಷಿಯೇ ದೇಶದ ಕೃಷಿ. ಹಸಿರುಕ್ರಾಂತಿ ಮಾಡಿದ್ದು ಇದನ್ನೇ. ಇಂದಿನ ರೈತರು ಕಳೆದ ಐವತ್ತು ವರ್ಷಗಳಲ್ಲಿ ತಮ್ಮ ಸ್ವತಂತ್ರವನ್ನು ಸಂಪೂರ್ಣವಾಗಿ ಕಳೆದುಕೊಂಡು ಮಳೆಬಂದಾಗ ಉಳುಮೆಮಾಡದೆ, ಟ್ರಾಕ್ಟರ್ ಮಾಲೀಕರ ಹಿಂದೆ, ಬೀಜ ಗೊಬ್ಬರಗಳ ಅಂಗಡಿಗಳ ಮುಂದೆ ನಾಯಿಗಳಂತೆ ಸುತ್ತುತ್ತಾ ಪೋಲೀಸರ ಗುಂಡಿಗೆ ಬಲಿಯಾಗುವಂತೆ ಮಾಡಿದರು ಯಾರು?

ಕುಲಾಂತರೀ ತಳಿ – ಪ್ರಕೃತಿ ವಿರೋಧಿ

ಕುಲಾಂತರೀ ತಳಿಗಳ ಬಗ್ಗೆ ಮಾತನಾಡುತ್ತಿರುವ ಜನ ತಾವೇ ಆಧುನಿಕ ಬ್ರಹ್ಮರಾಗಲು ಹೊರಟಿದ್ದಾರೆ. ಪ್ರಕೃತಿ ತಾನು ಹುಟ್ಟುಹಾಕಿದ ಬದನೆಗಿಡಕ್ಕೆ ರೋಗಬರಬಾರದು ಎಂದು ತೀರ್ಮಾನಿಸಿದ್ದರೆ ಬದನೆ ಗಿಡಕ್ಕೆ ಬಿ.ಟಿ.ಗುಣಗಳನ್ನು ಸೇರಿಸಿಬಿಡುವ ವಿವೇಕ ಅದಕ್ಕಿರುತ್ತಿರಲಿಲ್ಲವೇ? ಪ್ರಕೃತಿ ಬದನೆಗಿಡವನ್ನು ಇಟ್ಟಿದೆ, ಬಿ.ಟಿ.ಯನ್ನು ಇಟ್ಟಿದೆ, ಲೆಪಿಡೊಪ್ಟೆರಾ ಗುಂಪಿನ ಕೀಟಗಳನ್ನೂ ಇಟ್ಟಿದೆ. ದೀರ್ಘದೃಷ್ಟಿಕೋನದ ಪ್ರಕೃತಿಗೆ ಈ ಮೂರರ ಮಹತ್ವವೂ ಇತಿಮಿತಿಯ ಅರಿವೂ ಇದೆ. ಹಾಗಾಗಿ ಅದು ಎಲ್ಲವನ್ನೂ ಕಾಪಾಡಿಕೊಂಡು ಬಂದಿದೆ. ಇಷ್ಟು ವರ್ಷಗಳ ಕಾಲ ನಡೆದೆ ಕೃಷಿ ಸಂಶೋಧನೆಗೂ, ಬಿ.ಟಿ.ಸಂಶೋಧನೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಷ್ಟು ವರ್ಷಗಳಲ್ಲಿ ಯಾವುದೇ ಸಸ್ಯದ ವಂಶವಾಹಿನಿಯನ್ನು ಬದಲಾಯಿಸಿ ಅದು ರಕ್ತಗತವಾಗಿ ಪಡೆದ ಒಳ್ಳೆಯ ಮತ್ತು ಕೆಟ್ಟ (ಮನುಷ್ಯನ ದೃಷ್ಟಿಯಿಂದ) ಗುಣಗಳನ್ನು ತಿರುಚುವ ಕೆಲಸವನ್ನು ಇದುವರೆಗೆ ಮಾಡಿಲ್ಲ. ಆ ಕೆಲಸವನ್ನು ಪ್ರಕೃತಿಗೇ ಬಿಡಲಾಗಿತ್ತು. ಇಂದು ವಿಜ್ಞಾನಿಗಳು ಪ್ರಕೃತಿ ಮಾಡುವ ಕೆಲಸವನ್ನು ತಾವು ಮಾಡಲು ಹೊರಟಿದ್ದಾರೆ. ತಮಗೆ ಗೊತ್ತುಪಡಿಸಿದ ಗಡಿಯನ್ನು, ಕಟ್ಟುಪಾಡುಗಳನ್ನು ಮೀರಿ ಅಹಂಕಾರ ಮೆರೆಯುತ್ತಿದ್ದಾರೆ, ತಮ್ಮೆಲ್ಲ ನೈತಿಕತೆಯನ್ನು ತೂರಿಬಿಟ್ಟಿದ್ದಾರೆ. ಆ ಪಾಪದ ಶಿಶು ಬಿ.ಟಿ.ಬದನೆ.

ಬಿ.ಟಿ.ಬಗೆಗಿನ ಸತ್ಯಾಂಶ

ಬಿ.ಟಿ. ಇಂದ ನಾಟಿ ತಳಿಗಳು ನಶಿಸಿಹೋಗುವುದಿಲ್ಲ ಎಂಬ ಶಾಂತಾರಾಂ ಅವರ ಮಾತು ಸತ್ಯಕ್ಕೆ ದೂರವಾದುದು. ಮೆಕ್ಸಿಕೊ ದೇಶದಲ್ಲಿ ಅಮೇರಿಕಾ ನೀಡಿದ ಬಿ.ಟಿ.ಮುಸುಕಿನಜೋಳದೊಂದಿಗಿನ ಪರಾಗಸ್ಪರ್ಶದಿಂದಾಗಿ ನಾಟಿ ತಳಿಗಳು ತಮ್ಮ ನಿಜಗುಣಧರ್ಮಗಳಿಂದ ವಂಚಿತವಾಗುತ್ತಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಬಿ.ಟಿ.ತಳಿಯಿಂದ ಬೇರೆ ತಳಿಗಳು ಮಲಿನಗೊಂಡಿವೆ ಎಂದು ಪರೀಕ್ಷಿಸಲು ತಮ್ಮಲ್ಲಿ ತಂತ್ರಜ್ಞಾನವಿದೆಯೆಂದು ಹಾಗಾದಲ್ಲಿ ಅದನ್ನು ನಿಯಂತ್ರಿಸುವ ತಂತ್ರಜ್ಞಾನವೂ ತಮ್ಮಲ್ಲಿದೆಯೆಂದು ಸಿಂಜೆಂಟಾ ಕಂಪನಿ ಹೇಳಿದೆ. ಅಂದರೆ ಬಿ.ಟಿ.ತಳಿಯಿಂದ ನಾಟಿತಳಿಗಳಿಗೆ ಕುತ್ತುಯಿದೆ ಎಂದೇ ಅರ್ಥ. ಇನ್ನು ಆಹಾರ ಭದ್ರತೆಗೆ ಸಂಬಂಧಿಸಿದಂತೆ ಶೇ.೬೫ಭಾಗ ಕುಲಾಂತರೀ ಬೀಜಗಳನ್ನು ಬಳಸುವ ಅರ್ಜೈಂಟೈನಾ ಮತ್ತು ಪೆರುಗ್ವೆ ದೇಶಗಳಲ್ಲಿ ಆಹಾರ ಉತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ಇಳಿಮುಖಗೊಳ್ಳುತ್ತಿರುವುದು ಗಮನಿಸಬೇಕಾದ ಅಂಶ. ಇನ್ನು ನಮ್ಮ ದೇಶದಲ್ಲಿ ಹತ್ತಿ ಬೆಳೆಗಾರರು ಬಿ.ಟಿ.ಯನ್ನು ಬೆಳೆದು ಸಂತೋಷದಿಂದ ಇದ್ದಾರೆ ಎಂಬ ಶಾಂತಾರಾಂ ಅವರ ಮಾತು ಅಪ್ಪಟ ಸುಳ್ಳು. ಹತ್ತಿ ಬಿತ್ತನೆ ಬೀಜ ತಯಾರಿಸುವ ಕಂಪನಿಗಳು ಇಡೀ ಮಾರುಕಟ್ಟೆಯಲ್ಲಿ ಬಿ.ಟಿ.ಹತ್ತಿಬೀಜ ಬಿಟ್ಟು ಬೇರೆ ಬೀಜ ಸಿಗದಂತೆ ಮಾಡಿ ರೈತರ ಮೂಗು ಹಿಡಿದು ಬಾಯಿ ತೆಗೆಸಿ ಎಲ್ಲರೂ ಬಿ.ಟಿ.ಬೀಜ ಬಳಸುತ್ತಿದ್ದಾರೆ ಎಂದರೆ ಏನು ಮಾಡೋಣ? ಸಾಮಾನ್ಯ ತಳಿಗಳ ಹತ್ತಿಬೀಜಗಳು ಸಿಗದಂತೆ ಮಾಡಿದ್ದು ಕಂಪನಿಗಳು ಸಂಘಟಿತರಾಗಿ ಮಾಡಿದ ಒಂದು ಹುನ್ನಾರ.

ಬಿ.ಟಿ.ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಬೇರೆ ರೀತಿಯ ಮಣ್ಣಿನ ಮೂಲಕ ಬರುವ ರೋಗಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಬಿ.ಟಿ.ಹತ್ತಿ ತಿಂದ ಕುರಿಗಳು ಸಾಯುವುದು ಸಾಮಾನ್ಯವಾಗಿದೆ. ಹತ್ತಿ ಬಿಡಿಸುವ ಕೃಷಿ ಕಾರ್ಮಿಕರಲ್ಲಿ ಚರ್ಮರೋಗ, ಉಬ್ಬಸ ಮುಂತಾದ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಬಿ.ಟಿ.ಬೀಜಗಳು ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಯ ಹಿಡಿತದಲ್ಲಿರುತ್ತದೆ. ಭಾರತದ ರೈತನ ಬತ್ತಳಿಕೆಯೊಳಗಿದ್ದ ಪ್ರಮುಖ ಅಸ್ತ್ರ ಬಿತ್ತನೆ ಬೀಜ. ಆ ಅಸ್ತ್ರವನ್ನು ಕಂಪನಿಗಳು ಕಿತ್ತುಕೊಂಡು ಬಿಟ್ಟರೆ ಇಡೀ ದೇಶದ ಕೃಷಿ ವ್ಯವಸ್ಥೆ, ಬೆಳೆ ಆದ್ಯತೆ ಎಲ್ಲವೂ ಅವರ ಪಾಲಾಗಿಹೋಗುತ್ತದೆ. ರೈತನ ಸಾರ್ವಭೌಮತ್ವ ನಾಶವಾಗುತ್ತದೆ. ಕಡೆಗೆ ದೇಶದ ಸಾರ್ವಭೌಮತ್ವವೇ ಕಂಪನಿಗಳ ಕೈಕೆಳಗೆ ಸಿಲುಕುತ್ತದೆ.

ಸಾವಯವ ಕೃಷಿ ಕಿಚನ್‌ಗಾರ್ಡನ್ ಕೃಷಿ ಅಲ್ಲ

ಶಾಂತಾರಾಂ ಅವರು ಸಾವಯವ ಕೃಷಿಯನ್ನು ಕೈತೊಟದ ಕೃಷಿ ಎಂದಿರುವುದು ಹಾಸ್ಯಾಸ್ಪದವಾಗಿದೆ. ಅವರಿಗೆ ಅದರ ಬಗೆಗಿನ ಜ್ಞಾನ ಎಷ್ಟೆಂಬುದು ತಿಳಿಯುತ್ತದೆ. ಅದಕ್ಕೆ ಕೆಳಗಿನ ಅಂಕಿಅಂಶಗಳೇ ಸಾಕ್ಷಿ.

೧. ೨೦೧೦ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಸಾವಯವ ಆಹಾರ ಮಾರುಕಟ್ಟೆ ೭೦.೨ ಬಿಲಿಯನ್ ಯು.ಎಸ್.ಡಾಲರ್

೨. ಕುಲಾಂತರೀ ತಳಿಗಳ ತವರಾದ ಅಮೇರಿಕಾದಲ್ಲಿ ಸಾವಯವ ಪದಾರ್ಥಗಳ ಮಾರುಕಟ್ಟೆ ಹತ್ತು ವರ್ಷಗಳಲ್ಲಿ ೧ ಬಿಲಿಯನ್ ಡಾಲರ್‌ನಿಂದ ೨೩ ಬಿಲಿಯನ್ ಡಾಲರ್‌ಗೆ ಏರಿದೆ. ೨೦೦೭ರಿಂದ ೨೦೧೦ರ ಹೊತ್ತಿಗೆ ಶೇ.೧೮ ಆರ್ಥಿಕ ಬೆಳವಣಿಗೆಯನ್ನು ಕಾಣಲಿದೆ.

೩. ೨೦೦೬ರ ಅಂಕಿಅಂಶಗಳ ಪ್ರಕಾರ ೧೩೮ ದೇಶಗಳಲ್ಲಿ ೭೦೦ ಸಾವಿರ ಕೃಷಿಕ್ಷೇತ್ರಗಳು ಒಟ್ಟು ೩೦.೪ ಮಿಲಿಯನ್ ಹೆಕ್ಟೇರ್ ಭೂಮಿಯಲ್ಲಿ ಹರಡಿಕೊಂಡಿದೆ.

೪. ಸಾವಯವ ಉತ್ಪನ್ನಗಳಿಗೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯೂರೋಪ್, ಅಮೇರಿಕಾ ಮತ್ತು ಜಪಾನ್ ಸಾವಯವ ಉತ್ಪನ್ನಗಳನ್ನು ಆಮದುಮಾಡಿಕೊಳ್ಳುತ್ತಿರುವ ಪ್ರಮುಖ ದೇಶಗಳು.

೫. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸೂಪರ್ ಮಾರ್ಕೆಟ್‌ಗಳಾದ ಸೈನ್‌ಬರಿ, ಐಲ್ಯಾಂಡ್ ಮತ್ತು ಟೆಸ್ಕೊ ನಂತಹ ಕಂಪನಿಗಳು ಹೆಮ್ಮೆಯಿಂದ “ನಾವು ಕುಲಾಂತರೀ ಉತ್ಪನ್ನಗಳನ್ನು ಮಾರುವುದಿಲ್ಲ” ಎಂಬ ಫಲಕಗಳನ್ನು ಹಾಕಿವೆ.

ಇನ್ನೊಂದು ವಿಷಯ ನೋಡಿ ವಿಶ್ವಬ್ಯಾಂಕ್ ವಿಶ್ವಸಂಸ್ಥೆ ಮತ್ತು ವಿಶ್ವ ಆಹಾರ ಸಂಸ್ಥೆಯ ಪ್ರಾಯೋಜಿತ ‘ಇಂಟರ್‌ನ್ಯಾಷನಲ್ ಅಸೆಸ್‌ಮೆಂಟ್ ಆಫ್ ಅಗ್ರಿಕಲ್ಚರ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರ್ ಡವೆಲಪ್‌ಮೆಂಟ್’ ಪ್ರಪಂಚದಾದ್ಯಂತ ವಿಶ್ವದರ್ಜೆಯ ನಾನೂರು ವಿಜ್ಞಾನಿಗಳನ್ನು ತೊಡಗಿಸಿಕೊಂಡು ನಾಲ್ಕುವರ್ಷಗಳ ಕಾಲ ನಡೆಸಿದ ಅಧ್ಯಯನದ ವರದಿಯಲ್ಲಿ ಹೀಗಿದೆ.

– ಕುಲಾಂತರೀ ತಳಿಯ ಮುಸುಕಿನ ಜೋಳ, ಹತ್ತಿ, ಸೊಯಾಬೀನ್, ಎಣ್ಣೆಕಾಳುಗಳ ಇಳುವರಿ ಸ್ಥಿರವಾಗಿಲ್ಲ, ಇಲ್ಲವೆ ಅವುಗಳ ಇಳುವರಿ ಸತತವಾಗಿ ಏರುಮುಖವಾಗಿರುವುದು ಅಧ್ಯಯನಗಳಿಂದ ಕಂಡುಬಂದಿಲ್ಲ. ಬದಲಿಗೆ ಕುಲಾಂತರೀ ತಳಿಗಳ ಇಳುವರಿ ಗರಿಷ್ಠಮಟ್ಟಕ್ಕೆ ತಲುಪಿ ಇಳಿಮುಖಗೊಳ್ಳುತ್ತಿರುವ ಚಿನ್ಹೆಗಳು ಗಾಢವಾಗಿ ಕಾಣುತ್ತಿವೆ.
– ಬದಲಿಗೆ ಸಾವಯವ ಕೃಷಿಹೊಲಗಳ ಇಳುವರಿ ಹೆಚ್ಚುವ ಸಾಧ್ಯತೆಗಳು ಕಂಡಿವೆ, ಹಲವು ಸಂದರ್ಭಗಳಲ್ಲಿ ಇಳುವರಿ ದುಪ್ಪಟ್ಟುಗೊಂಡಿರುವುದನ್ನು ಗಮನಿಸಿದ್ದೇವೆ, ಒಂದು ಪ್ರದೇಶದ ಆಹಾರದ ಪದ್ಧತಿಗೆ ಸಾವಯವ ಕೃಷಿಯ ಪಾತ್ರ ಮುಖ್ಯವಾದದ್ದು.

ಕಾಳು ಬದಲು ಹಿಟ್ಟು ಕೊಡಿ

ಶಾಂತಾರಾಂ ಅವರು ತಮ್ಮ ಸಂದರ್ಶನದಲ್ಲಿ ಜಾಂಬಿಯಾ ದೇಶವನ್ನು ಉಲ್ಲೇಖಿಸಿದ್ದಾರೆ. ಅದರ ನಿಜವಾದ ಕಥೆ ನಿಮಗೆ ತಿಳಿಯಬೇಕು.

೨೦೦೨ರಲ್ಲಿ ಜಾಂಬಿಯಾ ದೇಶದಲ್ಲಿ ದೊಡ್ಡ ಬರಗಾಲ. ಯಥಾಪ್ರಕಾರ ದೊಡ್ಡಣ್ಣ ಅಮೇರಿಕಾ ನೆರವಿಗೆ ಬಂತು. ಜೋಳ ಮತ್ತು ಗೋಧಿಯನ್ನು ಕೊಡುವುದಾಗಿ ಹೇಳಿತು. ಜಾಂಬಿಯಾ ಸರ್ಕಾರಕ್ಕೆ ಕುಲಾಂತರೀ ತಳಿಗಳ ಅಪಾಯ ಗೊತ್ತಿದ್ದರಿಂದ ಕಾಳುಗಳ ರೂಪದಲ್ಲಿ ಬಂದ ನೆರವು ದೇಸೀ ಬಿತ್ತನೆಯೊಂದಿಗೆ ಬೆರೆತುಹೋಗುವ ಅಪಾಯವಿರುವುದರಿಂದ, ದಯಮಾಡಿ ಕಾಳು ಬೇಡ, ಕಾಳನ್ನು ಹಿಟ್ಟು ಮಾಡಿಕೊಡಿ ಎಂದು ಅಮೇರಿಕಾವನ್ನು ಕೇಳಿಕೊಂಡಿತು. ಆದರೆ ಅಮೇರಿಕಾಕ್ಕೆ ಬರಗಾಲಕ್ಕೆ ನೆರವಾಗುವ ನೆಪದಲ್ಲಿ ಆಫ್ರಿಕಾದೇಶಗಳಿಗೆ ಕುಲಾಂತರೀ ತಳಿಗಳನ್ನು ತೂರಿಸುವ ಉದ್ದೇಶವಿತ್ತು. ಹಾಗಾಗಿ ಅಮೇರಿಕಾ ಕೊಟ್ಟರೆ ಕಾಳನ್ನೇ ಕೊಡುತ್ತೇವೆ ಹಿಟ್ಟನಲ್ಲ ಎಂದಿತು. ಕಡೆಗೂ ಜಾಂಬಿಯಾದ ಬರಗಾಲಕ್ಕೆ ಅಮೇರಿಕಾ ನೆರವಾಗಲಿಲ್ಲ. ಕಾಳುಕೊಡಲು ಸಿದ್ಧರಿರುವವರಿಗೆ ಹಿಟ್ಟುಕೊಡಲು ಏನು ಕಷ್ಟ? ಹಿಟ್ಟನ್ನು ಬಿತ್ತಲು ಸಾಧ್ಯವಿಲ್ಲ. ದೇಸೀ ತಳಿಗಳನ್ನು ಹಾಳುಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅಮೇರಿಕಾ ಹಿಟ್ಟನ್ನು ಕೊಡಲಿಲ್ಲ. ಈ ಬಿ.ಟಿ.ಯುದ್ಧದಲ್ಲಿ ಜಾಂಬಿಯಾ ದೇಶ ದೊಡ್ಡ ಹೀರೋ ಆಗಿ ಹೊರಹೊಮ್ಮಿತು. ಈ ಇಡೀ ರಾಜಕೀಯದಲ್ಲಿ ಜಾಂಬಿಯಾ ದೇಶದ ಪರವಾಗಿ ಯೂರೋಪಿಯನ್ ಯೂನಿಯನ್ ನಿಂತಿತು. ಯಾವುದೇ ಕಾರಣಕ್ಕೂ ಅಮೇರಿಕಾದಿಂದ ಕಾಳುಗಳನ್ನು ಜಾಂಬಿಯಾ ಪಡೆಯದಂತೆ ಧೈರ್ಯತುಂಬಿತು. ಈ ಕಥೆಗೆ ಶಾಂತಾರಾಂ ಬೇರೆ ಬಣ್ಣ ಕಟ್ಟಿದ್ದಾರಷ್ಟೆ.

ಕಡೆಯ ಮಾತು

ಶಾಂತಾರಾಂ ತಮ್ಮ ಲೇಖನದಲ್ಲಿ ಅನಂತಮೂರ್ತಿ, ಕೋಡಿಹಳ್ಳಿ ಚಂದ್ರಶೇಖರ್ ಅಂತಹವರನ್ನು ಎಳೆದುತಂದಿದ್ದಾರೆ. ಅನಂತಮೂರ್ತಿಯಂಥವರಿಗೆ ಬಿ.ಟಿ.ಬದನೆಗೂ, ಬಡರೈತನ ನೋವಿಗೂ ಇರುವ ಸಂಬಂಧದ ಅರಿವಿದೆ. ಬಿ.ಟಿ.-ಸಂಸ್ಕೃತಿ-ಜಾಗತೀಕರಣ-ಭಾಷೆ-ಶಿಕ್ಷಣ ಮಾಧ್ಯಮ-ಗಣಿಗಾರಿಕೆ ಎಲ್ಲದಕ್ಕು ಒಂದಕ್ಕೊಂದು ಬಿಡಿಸಲಾರದಷ್ಟು ಸಂಬಂಧವಿದೆ. ಇದು ಅರ್ಥವಾಗುತ್ತಿರುವವರಿಗೆ ಅನಂತಮೂರ್ತಿಯವರು ಹೇಳುತ್ತಿರುವುದು ಏನೆಂದು ಅರ್ಥವಾಗುತ್ತದೆ. ಕುದುರೆ ಕಣ್ಣಿನ ಪಟ್ಟಿಕಟ್ಟಿಕೊಂಡಿರುವ ಶಂತನು ಶಾಂತಾರಾಂ ಅಂತಹವರಿಗೆ ಬರೀ ಬಿ.ಟಿ.ಬದನೆ, ಬಿ.ಟಿ.ಹತ್ತಿ, ಬಿ.ಟಿ.ಜೋಳದ ಸಾಲುಗಳು ಕಾಣುತ್ತವೆ. ನಂತರ ಅದರ ಹಿಂದಿನ ಲಾಭ ಮತ್ತು ದುಡ್ಡಿನ ಚೀಲ ಕಾಣುತ್ತದೆ. ಏನು ಮಾಡೋಣ ಹೇಳಿ?

ಸಂತೋಷ್ ಕೌಲಗಿ, ಮೇಲುಕೋಟೆ

Share. Facebook Twitter Pinterest LinkedIn Tumblr Email
Previous ArticleJanuary 23: Participate in the Public Consultation (Bangalore) on Bt Brinjal
Next Article ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

1 Comment

  1. subrahmanya.c.horabailu on January 26, 2010 5:32 pm

    raitara baggeye 1 blog horabandirodu santasada sangati. idu nirantaravirali.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.