Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»Anubhavave nudichitra
ಲೇಖನಗಳು

Anubhavave nudichitra

ಬೇಳೂರು ಸುದರ್ಶನBy ಬೇಳೂರು ಸುದರ್ಶನNovember 27, 2006Updated:May 19, 20251 Comment9 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಅನುಭವವೇ ನುಡಿಚಿತ್ರ

ಅನುಭವವೇ ನುಡಿಚಿತ್ರ

ಫೆಬ್ರುವರಿ ತಿಂಗಳ ಒಂದು ದಿನ. ಹಂಪಿಯಿಂದ ನನ್ನ ಮೊಬೈಲ್‌ಗೆ ಫೋನ್ ಬಂದಿದೆ. ಡೇವಿಡ್ ನೆಲ್ಸನ್ ಗಿಂಬೆಲ್ ಕರೆದಿದ್ದಾನೆ. ಮುಂದಿನ ತಿಂಗಳಿನ ಯಾವುದಾದರೂ ದಿನ ನಾನು ಹಂಪಿಗೆ ಹೋಗಬಹುದು. ಅವನ ಜೊತೆ ಹಂಪಿಯಲ್ಲಿ ತಿರುಗಬಹುದು. ನಾನು ಬಳ್ಳಾರಿಗೆ ಹೋಗಿ ಗೆಳೆಯ ಮಾಲತೀಶನನ್ನು ಕರೆದುಕೊಂಡು ಕಾರಿನಲ್ಲಿ ಹೊರಟಿದ್ದೇನೆ. ದಾರಿಯಲ್ಲಿ ಕಾರ್ಟೂನಿಸ್ಟ್ ಸೃಜನ್‌ನನ್ನೂ ಹತ್ತಿಸಿಕೊಂಡು ಭರ್ರೆಂದು ಸಾಗಿದ್ದೇವೆ. ಸಾಹಿತ್ಯ, ಕಥೆ, ಕವನ ಹೀಗೇ ಮಾತು ಸಾಗಿದೆ.
ಹಂಪಿಯಲ್ಲಿ ಗಿಂಬೆಲ್ ಡೇರೆ ಹಾಕಿದ್ದಾನೆ. ಅವನ ಫಿಯಾನ್ಸಿ , ಸಹಾಯಕಿ ಜೆಸಿಕಾ ಗ್ಲಾಸ್ ಕೈ ಕುಲುಕುತ್ತಾಳೆ. ಅವನ ಹಿರಿಯ ಸಹೋದ್ಯೋಗಿ ಗಂಭೀರವಾಗಿ ಕಂಪ್ಯೂಟರಿನಲ್ಲಿ ಟಕಾಯಿಸುತ್ತಿದ್ದಾನೆ. ನಾವು ಅಲ್ಲಿ ಫೋಲ್ಡಿಂಗ್ ಕುರ್ಚಿಗಳನ್ನು ಹಾಕಿ ಕುಳಿತಿದ್ದೇವೆ. ಗಿಂಬೆಲ್‌ಗೆ ಎಲ್ಲಿಲ್ಲದ ಉತ್ಸಾಹ. ಮಾತು ಹರಿಯುತ್ತಿದೆ. ಕೊನೆಗೆ ಸೀದಾ ಹಂಪಿಯ ನಾರ್ಥ್ ರಿಜ್ ಎಂದು ಕರೆವ ಗುಡ್ಡಸಾಲಿಗೆ ನಮ್ಮನ್ನು ಕರೆಯುತ್ತಾನೆ ಗಿಂಬೆಲ್. ಅಲ್ಲಿನ ಪ್ರತಿಯೊಂದೂ ಕಲ್ಲನ್ನೂ ಇದು ಹೀಗೆಯೇ ಬದುಕಿತ್ತು ಎಂದು ಕಥೆ ಹೇಳುತ್ತಾನೆ. ಜೆಸಿಕಾ ದೂರದಲ್ಲಿ ನಮ್ಮ ಓಡಾಟವನ್ನೇ ವಿಡಿಯೋಗ್ರಾಫ್ ಮಾಡುತ್ತಿದ್ದಾಳೆ.
ಗಿಂಬೆಲ್ ನಮಗೆ ನಾವು ಕಾಣದ ಹಂಪಿಯನ್ನು ತೋರಿಸಿದ್ದಾನೆ. ವರ್ಷಕ್ಕೆ ನಾಲ್ಕೈದು ಸಲ ಹಂಪಿಗೆ ಬಂದು ಉಳಿಯುವ, ಹಂಪಿಯ ವಿಚಿತ್ರಗಳನ್ನೆಲ್ಲ ಅನುಭವಿಸುವ ಮಾಲತೀಶನೂ ಕಾಣದ ಹಲವು ಸತ್ಯಗಳನ್ನು ಗಿಂಬೆಲ್ ಬಿಸಿಲಿನಲ್ಲಿ ತೋರಿಸಿದ್ದಾನೆ.
ನಮಗೆ ಹಂಪಿಯ ಕುರಿತು ಹೊಸ ಅನುಭವ ಆಗುತ್ತಿದೆ.
ಆಮೇಲೆ ನಾನು ಗಿಂಬೆಲ್ ಬಗ್ಗೆ ಲೇಖನ ಬರೆದಿದ್ದೇನೆ.
ಗಿಂಬೆಲ್ ಬಗ್ಗೆ ನಾನು ಇಂಟರ್‌ನೆಟ್‌ನಲ್ಲೇ ತಿಳಿದಿದ್ದೆ. ವಿಜಯನಗರ ಸಾಮ್ರಾಜ್ಯದ ಬಗ್ಗೆ ಅವ ಮಾಡುತ್ತಿರೋ ಕೆಲಸಗಳನ್ನು ತಿಳಿದಿದ್ದೆ. ಜೆಸಿಕಾ ಗ್ಲಾಸ್ ಒಂದು ವಿಡಿಯೋ ಟೇಪನ್ನು ನನಗೆ ಕಳಿಸಿ ಒಂದು ವರ್ಷವೇ ಆಗಿತ್ತು. ನನ್ನಲ್ಲಿ ಗಿಂಬೆಲ್ ಸ&#3202
;&
#3254;ೋಧನೆಯ ಹಲವು ಚಿತ್ರಗಳಿದ್ದವು.
ಆದರೂ, ಹಂಪಿಯಲ್ಲಿ ಗಿಂಬೆಲ್ ಜತೆ ನಡೆದಾಗಲೇ ನನಗೆ `ಅವನ' ಅನುಭವ ಆಯಿತು.
ನುಡಿಚಿತ್ರ ಬರೆದದ್ದು ಆಮೇಲೆ. ಅದೇ `ಗಿಂಬೆಲ್ ಕಂಡ ಬಾಳು ಹಂಪಿ'.
ನೆನಪಿಡಿ, ಹಾಳು ಹಂಪಿಯಲ್ಲ, ಬಾಳು ಹಂಪಿ.

ನುಡಿಚಿತ್ರ ಎಂದರೆ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದೆ? ಯಾರಿಗೂ ಸಿಗದ ವಿಷಯ ಸಿಕ್ಕಿದ ಕೂಡಲೇ ರೋಚಕವಾಗಿ ಬರೆಯುವುದೆ? `ನಾವು ಕಂಡ' ಅಚ್ಚರಿಯನ್ನು ಭರ್ಜರಿ ಇಂಟ್ರೋದೊಂದಿಗೆ ಓದುಗರ ಎದೆಗೆ  ತೂರಿಬಿಡುವುದೆ? ಒಳ್ಳೇ ಚಿತ್ರಗಳು ಸಿಕ್ಕಿದ ಕೂಡಲೇ ಒಳ್ಳೆಯ ಶೀರ್ಷಿಕೆ ಹೊಳೆದ ಕೂಡಲೇ ಅದಕ್ಕೆ ತಕ್ಕಂತೆ ನಮ್ಮ ಮಾಹಿತಿಯನ್ನು ಪೋಣಿಸುವುದೆ?
ಎಲ್ಲವೂ ಇರಬಹುದು. ಅಥವಾ ಯಾವುದೋ ಒಂದೂ ಇರಬಹುದು. ಆದರೆ ಅನುಭವಕ್ಕೆ ದಕ್ಕಿದ ನುಡಿಚಿತ್ರದ ಹೊಳಹುಗಳೇ ಬೇರೆ. ಅದರ ಸುಖವೇ ಬೇರೆ. ಅದರ ಮಜವೇ ಬೇರೆ.
ಮಾಧ್ಯಮ ಕೇಂದ್ರದ ಕೆಲಸದಲ್ಲಿ ತೊಡಗಿರುವ ಪತ್ರಕರ್ತರ ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ನರೇಂದ್ರ ರೈ ದೇರ್ಲ ಈಗ ಬರೆಯುತ್ತಿರುವುದು ಅಚ್ಚ ನೀರಿನ ಕಥೆಗಳನ್ನು. ಶಾಲೆಯೊಂದರಲ್ಲಿ ಕಂಡ ನೀರಿಂಗಿಸುವ ಪರಿಯನ್ನು ಅವರು ಅನುಭವಿಸಿ ಮಳೆಗಾಲದ ದಿನದಲ್ಲಿ ಅವರು ಬರೆವ ನುಡಿಚಿತ್ರದ ಬಿಸಿ ಎಲ್ಲ ಶಾಲೆಗಳನ್ನೂ ತಟ್ಟುತ್ತದೆ. ನದಿಜೋಡಣೆಯ ಬಗ್ಗೆ ಅವರು ಬರೆದ ಲೇಖನವೂ ಅಷ್ಟೆ. ಅವರು ಕಂಡ ನದಿಗಳ ಬಗ್ಗೆ ಮಾತ್ರವೇ ಬರೆದಿದ್ದಾರೆ. ದೇಶದ ನದಿಜೋಡಣೆಯ ಅಂಕಿಅಂಶಗಳನ್ನು `ತುರುಕುವ' ಕೆಲಸ ಮಾಡಿಲ್ಲ.
ಶಿವಾನಂದ ಕಳವೆಯವರೂ ಅಷ್ಟೆ. ಅವರಿಗೂ ನೀರೇ ಅನುಭವ. ಹಾಗೇ ಕಾಡಿನ ಝೇಂಕಾರಗಳನ್ನೆಲ್ಲ ಮೊದಲು ಅನುಭವಿಸುತ್ತಾರೆ. ಆಮೇಲೆ ಅವನ್ನೆಲ್ಲ ವರ್ಗೀಕರಿಸಿ ಬರೆಯುತ್ತಾರೆ. ಅವರ ಅನುಭವವೇ ಮುದ್ರಿತ ಹಾಳೆಗಳಿಂದ ಎದ್ದುಬಂದು ನಮ್ಮನ್ನು ತಟ್ಟುತ್ತದೆ.
`ಶ್ರೀ` ಪಡ್ರೆಯವರಂತೂ ನೀರಿನಲ್ಲೇ ಮುಳುಗಿಹೋಗಿದ್ದಾರೆ. ಅಲ್ಲಿ ಅವರು ಅನುಭವದ ಹವಳಗಳನ್ನೇ ಎತ್ತಿ ತರುತ್ತಿದ್ದಾರೆ.ಅವರ ಅನುಭವದ ಹನಿಗಳು ನಮಗೆ. ಅವನ್ನು ಸಂಗ್ರಹಿಸಲು ಅವರು ಅನುಭವಿಸಿದ ಪಾಡು ಮಾತ್ರ ಅವರಿಗೇ!
ಯಾಕೆ ನೀರು ಈಗ

`ಅನುಭವ'ವಾಗಿದೆ? ಸರಳ. ಇವರೆಲ್ಲರಿಗೂ ನೀರಿನ ಬಿಸಿ ತಟ್ಟಿದೆ. ಮುಂದಿನ ದಿನಗಳ ಸಂಭಾವ್ಯ ಅನುಭವ ಅವರ ಕಣ್ಣ ಮುಂದಿದೆ. ಅನುಭವವೇ ನುಡಿಚಿತ್ರ ಅಲ್ಲವೇ ಎಂದು ಅವರನ್ನೇ ಕೇಳಿನೋಡಿ.

ನನ್ನ ಅನುಭವವೂ ಇದೇ. ಸಿಂಧನೂರಿನ ನೀರಿನ ಸಮಸ್ಯೆಯ ನುಡಿಚಿತ್ರ (ಸುಧಾ) ಬರೆಯುವ ಮುನ್ನ, ಆರು ತಿಂಗಳುಗಳಿಂದ ನಾನು ಸಿಂಧನೂರಿಗೆ ಹೋಗಿ ಗಾಡಿ, ಬಂಡಿ, ಸೈಕಲ್ಲು, ಲೂನಾ, ಟ್ರಾಕ್ಟರ್, ಲಾರಿ,  – ಹೀಗೆ ಕಂಡ ಕಂಡ ವಾಹನಗಳಲ್ಲಿ ಕೊಡಗಳ ಜಾತ್ರೆಯ ದೃಶ್ಯಗಳನ್ನೇ ಹೀರುತ್ತ ಹೀರುತ್ತ ನಡೆಯುತ್ತಿದ್ದೆ. ಮಾಹಿತಿ ಮೂಲ ಮನೋಹರ ಮಸ್ಕಿಯವರ ಜೊತೆ ಹರಟುತ್ತಿದ್ದೆ. ಅವರ ಗೆಳೆಯರ ಜೊತೆಗೆ ಚಾ ಕುಡಿಯುತ್ತ ಚರ್ಚಿಸುತ್ತಿದ್ದೆ. ಆಮೇಲೆ ಒಂದು ದಿನ ಫೋಟೋಗ್ರಾಫರ್ ಜತೆ ಅಡ್ಡಾಡಿ ಚಿತ್ರ ತೆಗೆದಾಗ…. ಅಚ್ಚರಿ! ಅವೆಲ್ಲ ನನ್ನ ಅನುಭವಗಳನ್ನೇ ಬಿಂಬಿಸುತ್ತಿದ್ದವು. ಕ್ಯಾಮೆರಾ ಯಾರದ್ದೂ ಆಗಿರಬಹುದು. ಆದರೆ ನಮ್ಮ ಅನುಭವವನ್ನೇ ಅದರಲ್ಲೂ ಮೂಡಿಸಬಹುದು ಅನ್ನೋದಕ್ಕೆ ಇದು ಉದಾಹರಣೆ.
ರಾಜ್ಯದ ಪಾಲಿಟೆಕ್ನಿಕ್‌ಗಳ ಕಥೆ, ವ್ಯಥೆ ಬರೆಯುವಾಗ (ಸುಧಾ) ನಾನು ಹಿಂದಿನ ಮೂರು ವರ್ಷಗಳಿಂದ ಅನುಭವಿಸಿದ ಶಿಕ್ಷಣ ರಂಗದ ಬದಲಾವಣೆಗಳ ತಿಳಿವಳಿಕೆಯೇ ಪ್ರಯೋಜನಕ್ಕೆ ಬಂತು. ನನ್ನ ಮೊಟ್ಟ ಮೊದಲ ನುಡಿಚಿತ್ರ ಅದು. ಸುಧಾದಲ್ಲಿ ಮುಖಪುಟ ಲೇಖನವಾಯಿತು. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅನುಭವಿಸುವ ನೋವು ನನ್ನ ಅನುಭವಕ್ಕೆ ದಕ್ಕಿತ್ತು. ನಾನೇ ಒಂದು ದರಿದ್ರ ವ್ಯವಸ್ಥೆಗಳ ಪಾಲಿಟೆಕ್ನಿಕ್‌ನನ್ನು ಮುಚ್ಚಿಸುವ ಸೆಕ್‌ನಲ್ಲಿ ಪಾಲ್ಗೊಂಡಿದ್ದೆ. ದೂರದ ನಾಗಾಲ್ಯಾಂಡ್‌ನಿಂದ ಬಂದ ಹುಡುಗರು ಅಳುತ್ತಿದ್ದರು. ಅವರಲ್ಲಿ ಒಬ್ಬ ದಿಮಾಪುರದವನು.
೧೯೮೯ರಲ್ಲಿ ನಾನು ಪೂರ್ವಾಂಚಲ ರಾಜ್ಯವಾದ ಮಣಿಪುರಕ್ಕೆ ಅಧ್ಯಯನ ಪ್ರವಾಸಕ್ಕೆ ಹೋಗಿ ಹಿಂದಿರುಗುವಾಗ ಮಧ್ಯರಾತ್ರಿ ದಿಮಾಪುರದಲ್ಲಿ ಎರಡು ತಾಸು ರೈಲಿಗೆ ಕಾಯಬೇಕಿತ್ತು. ಸೀದಾ ಈ ಹುಡುಗನ ಮನೆ ಹುಡುಕಿಕೊಂಡು ಹೋದೆ. ನಡುರಾತ್ರಿ ನನ್ನನ್ನು ಕಂಡು ಬೆಚ್ಚಿಬಿದ್ದ ಆತ ಕೊನೆಗೆ ಬೈಕಿನಲ್ಲಿ ದಿಮಾಪುರವನ್ನು ಸುತ್&
amp;
#3236;ಿಸಿದ. ಮತ್ತೆ ಮತ್ತೆ ನನ್ನ ಕೈ ಹಿಡಿದು ಪ್ರೀತಿಯ ಬುಗ್ಗೆ ಚಿಮ್ಮಿಸಿದ. ಇರು, ನಾಗಾಲ್ಯಾಂಡ್ ಸುತ್ತೋಣ ಎಂದ.
ಇದು ಅನುಭವ. ಇದು ನುಡಿಚಿತ್ರ.
ಮಣಿಪುರಕ್ಕೆ ಹೋಗಿ ಬಂದಮೇಲೆ ಅದೇ ಅನುಭವಗಳನ್ನೇನೂ ಬರೆಯಲಿಲ್ಲ. ಅಲ್ಲಿ ಹೆರಾಯಿನ್ ಕಳ್ಳಸಾಗಾಣಿಕೆದಾರರನ್ನೇ ಭೇಟಿಯಾಗಿ ಬಂದರೂ ಈವರೆಗೂ ಆ ಬಗ್ಗೆ ಬರೆದಿಲ್ಲ. ಯಾಕೋ ಇನ್ನೂ ಅನುಭವ ಆಗಬೇಕು ಅನ್ನಿಸಿದೆ.
ಹದಿನಾಲ್ಕು ವರ್ಷಗಳಿಂದ ಆ ನುಡಿಚಿತ್ರ ಅನುಭವಕ್ಕಾಗಿ ಕಾಯುತ್ತಿದೆ. ಬಂದಕೂಡಲೇ ಬರೆದ ನುಡಿಚಿತ್ರ ಈಗಲೂ ನನ್ನ ಕಡತದಲ್ಲಿದೆ.
ನನ್ನ ಗೆಳೆಯ ದೇವಯ್ಯ (ಕರ್ಮವೀರ) ಕಲಾವಿದ. ನನಗೆ ಸುಮಾರು ೧೯೮೫ರಿಂದ ಪರಿಚಯ. ಅವನ ವ್ಯಕ್ತಿಚಿತ್ರ ಬರೆದದ್ದು ೧೯೯೩ರಲ್ಲಿ. ಪುಟ್ಟ ಲೇಖನ. ಅವನ ಬಗ್ಗೆ ಪತ್ರಿಕೆಯಲ್ಲಿ ಬಂದ ಮೊದಲನೇ ನುಡಿಚಿತ್ರ. ದೇವಯ್ಯ ಹೇಗೆ ಸ್ಕ್ರೀನ್‌ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದವ ಹೇಗೆ ಚಿತ್ರಕಲಾ ಪರಿಷತ್ತು ಸೇರಿ ಕಲಾವಿದನಾಗಿ ರಾಜ್ಯಪ್ರಶಸ್ತಿ ಪಡೆದ ಎಂದೆಲ್ಲ ನಾನು ಬರೆದದ್ದು ಅನುಭವಿಸಿಯೇ.
`ಸಂಕಲ್ಪವಿರೆ ಬೇಕೆ ಬೇರೆ ಕಾಲು?' (ಕರ್ಮವೀರ) ನುಡಿಚಿತ್ರದ ಹೀರೋ ಎಂ.ಕೆ.ಶ್ರೀಧರ್‌ರನ್ನು ನಾನು  ಪರಿಚಯ ಮಾಡಿಕೊಂಡ ೧೨ ವರ್ಷಗಳ ನಂತರ ಬರೆದೆ. ಎಷ್ಟೋ ಸಲ ಅನ್ನಿಸಿತ್ತು, ತೀರಾ ತಡವಾಯಿತು ಎಂದು. ಆದರೆ ಲೇಖನ ಪ್ರಕಟವಾದಾಗ ನನಗಂತೂ ಅನ್ನಿಸಿತು: ಇಲ್ಲ, ಈ ಅನುಭವ ಇಲ್ಲದೇ ಇದ್ದಿದ್ದರೆ ಲೇಖನ ಚೆನ್ನಾಗಿ ಬರುತ್ತಿರಲಿಲ್ಲ.
`ಬಸ್ತಾರ್ ಮಕ್ಕಳಿಗೆ ಬೆಂಗಳೂರಿನ ಸಿಂಪ್ಯೂಟರ್' (ವಿಜಯ ಕರ್ನಾಟಕ) ಕೇವಲ ಒಂದು ಆಧುನಿಕ, ಕೈಬಳಕೆಯ ಕಂಪ್ಯೂಟರ್ ಬಗೆಗಿನ ನುಡಿಚಿತ್ರವಷ್ಟೇ ಅಲ್ಲ. ಅದನ್ನು ನಾನು ಮೊದಲಿನಿಂದಲೂ ಗಮನಿಸಿದ್ದೆ. ಅದರ ಸಂಶೋಧಕ ವಿಜ್ಞಾನಿಗಳನ್ನು ಭೇಟಿಯಾಗಿದ್ದೆ. ಸಿಂಪ್ಯೂಟರ್ ಮಾರುಕಟ್ಟೆಗೆ ಬರಲು ನಾನೂ ಕೈಗೂಡಿಸಬೇಕು ಎಂದು ಓಡಾಡಿದ್ದು ನನ್ನ ಅನುಭವ. ಈಗ ಸಿಂಪ್ಯೂಟರ್ ಉಳ್ಳದವರ ಕೈಗೆಟುಕದ ಬೆಲೆಗೆ ತಯಾರಾಗುತ್ತಿದೆ ಎಂಬ ಲೇಖನವನ್ನು ಓದಿ ಸಂಕಟಪಡುತ್ತಿದ್ದೇನೆ. ತಂತ್ರಜ್ಞಾನಗಳು ಚೆನ್ನಾಗಿದ್ದರೂ ಯಾಕೆ ವಿಫಲವಾಗುತ್&
amp;
#3236;ವೆ ಎಂದು ಹತಾಶೆಯಿಂದ ಕೈ ಚೆಲ್ಲುತ್ತೇನೆ.
ಐ – ಸ್ಟೇಶನ್ ಎಂಬ ಈಮೇಲ್ ಕಳಿಸುವ `ಪುಟ್ಟ, ಅಗ್ಗದ' ಸಾಧನವನ್ನು ನನ್ನ ಗೆಳೆಯರೇ ತಯಾರಿಸಿದ್ದರು. ಅದನ್ನು ನಾನೂ ಮಾರುಕಟ್ಟೆಗೆ ಬರುವುದಕ್ಕಿಂತ ಮೊದಲು ಹಲವು ತಿಂಗಳುಗಳ ಕಾಲ ಪರೀಕ್ಷಾರ್ಥ ಬಳಸಿದೆ.  ಅಷ್ಟುಹೊತ್ತಿಗೆ ನಾನು ಟೆಲಿವಿಜನ್ ಚಾನೆಲ್ ಸೇರಿದ್ದೆ. ಅಲ್ಲೂ ಒಂದು ಸುದ್ದಿ ಮಾಡಿದೆ. ಅದನ್ನು ಬ್ಯಾಂಕಿಂಗ್‌ಗೆ ಬಳಸಬಹುದು ಎಂದು ತಜ್ಞರೊಬ್ಬರನ್ನು ಕರೆದುಕೊಂಡು ಹೋಗಿ ತೋರಿಸಿ ಬೈಸಿಕೊಂಡೆ. ಕೊನೆಗೆ ಅದು ಮಾರುಕಟ್ಟೆಗೆ ಬಂತು. ವಿಫಲವಾಯಿತು. ಇಡೀ ಸಂಸ್ಥೆಯೇ ಮುಚ್ಚಿಹೋಯಿತು. ನಿಶ್ಚಿತಾರ್ಥದ ಮರುದಿನವೇ  ಅದರಲ್ಲಿದ್ದ ನನ್ನ ಗೆಳೆಯನೊಬ್ಬ ಕೆಲಸ ಕಳೆದುಕೊಂಡ. ಈ ಅನುಭವ ನನ್ನನ್ನು ತಂತ್ರಜ್ಞಾನಗಳ ಬಗ್ಗೆ ಬೆಚ್ಚಿಬೀಳುವಂತೆ ಮಾಡಿದೆ. ನುಡಿಚಿತ್ರಗಳು ಈ ಅನುಭವಗಳನ್ನು ಹೇಗೆ ಹೇಳಬಹುದು ಎಂದು ನಾನು ಯೋಚಿಸುತ್ತಿದ್ದೇನೆ.
ಕ್ಲೋನಿಂಗ್, ಪ್ರತಿಮಾನವನ ಸೃಷ್ಟಿ ಈಗ ಸುದ್ದಿ ತಾನೆ? ಅದರಲ್ಲೂ ರೇಲಿಯನ್ ಎಂಬ ಮತಪಂಥಕ್ಕೆ ಸೇರಿದವರು ಕ್ಲೋನಾಯ್ಡ್ ಎಂಬ ಸಂಸ್ಥೆ ತೆರೆದು ಐವರು ಶಿಶುಗಳು ಕ್ಲೋನಿಂಗ್ ಮೂಲಕ ಹುಟ್ಟಿವೆ ಎಂದರು. ಎಲ್ಲ ಪ್ರಮುಖ ಪತ್ರಿಕೆ,ಮ್ಯಾಗಜಿನ್‌ಗಳಲ್ಲಿ ಸುದ್ದಿ, ನುಡಿಚಿತ್ರಗಳು ಬಂದವು. ಅವೆಲ್ಲ ಸುದ್ದಿಯಾಗುವ ಒಂದು ವರ್ಷ ಮುಂಚೆಯೇ ನಾನು ಆ ಸಂಸ್ಥೆಯ ಜೊತೆ ಸಂಪರ್ಕ ಸಾಧಿಸಿದ್ದೆ. ಸಂದರ್ಶನಕ್ಕೂ ಸಜ್ಜಾಗಿದ್ದೆ. ಯಾಕೋ ಇಲ್ಲಿ ಅನುಭವ ಸಾಲದು ಎನ್ನಿಸಿತು. ಈಗ ನನಗೆ ಈ ಸಂಸ್ಥೆಯ ದಿಲ್ಲಿ ಕಚೇರಿಯ ವಿಳಾಸ ಸಿಕ್ಕಿದೆ. ಬಹುಶಃ ಆ ವ್ಯಕ್ತಿ ಬೋಗಸ್ ಎಂದು ನನ್ನ ಸುದ್ದಿಮೂಗಿಗೆ ವಾಸನೆ ಬಂದಿದೆ. ಅನುಭವ ಇನ್ನುಮುಂದಷ್ಟೇ ಅಗಬೇಕು.

ನಾನು ಅನುಭವವೇ ನುಡಿಚಿತ್ರ ಎನ್ನಲು ಇನ್ನೂ ಕಾರಣಗಳಿವೆ. ನೀವು ಒಂದು  ನುಡಿಚಿತ್ರಕ್ಕೆ ಬೇಕಾದ ಎಲ್ಲವನ್ನೂ ಸಂಗ್ರಹಿಸಿದ್ದೀರಿ. ಮಾಹಿತಿ ಇದೆ. ಚಿತ್ರಗಳಿವೆ. ಸಂದರ್ಶನಗಳನ್ನು ಮಾಡಿ ಆಗಿದೆ. ಯಾವ ಪತ್ರಿಕೆಗೆ ಕಳಿಸಬೇಕು ಎಂದೂ ನಿರ್ಧರಿಸಿ ಆಗಿದೆ. ಶೀರ್ಷಿಕೆ ಸಿಕ್ಕಿದೆ. ಇಂಟ್ರೋ ತುಂಬಾ ಚ&#
3270
;ನ್ನಾಗಿ ಮೂಡಿದೆ. ನುಡಿಚಿತ್ರದ ಥೀಮ್ ಕೂಡಾ ನಿಮಗೆ ಗೊತ್ತು. ಅಂದರೆ ಈ ನುಡಿಚಿತ್ರದ ಉದ್ದಿಶ್ಯ ಏನು ಎಂಬುದನ್ನು ನೀವು ನಿರೂಪಿಸಲು ಬಲ್ಲವರು. ಇಷ್ಟಾಗಿಯೂ ಅನುಭವದ ದ್ರವ್ಯವನ್ನು ಅದರಲ್ಲಿ ತುಂಬದಿದ್ದರೆ ಅದರ ಜೀವಂತಿಕೆ ಅಷ್ಟು ಕಡಿಮೆಯಾಗುತ್ತದೆ ಅನ್ನೋದು ನನ್ನ ಅನುಭವ! ಈ ನುಡಿಚಿತ್ರದ ಮಟ್ಟಿಗೆ ನಿಮ್ಮ `ಅನುಭವ' ಏನು? ನಿಮ್ಮನ್ನು ಈ ನುಡಿಚಿತ್ರ ಭಾವುಕವಾಗಿಸಿದ ಸಂದರ್ಭ ಯಾವುದಾದರೂ ಇದೆಯೆ?
ಒಂದು ಸಿನಿಮಾ ನೋಡಿದಾಗ ಯಾವುದೋ ಭಾವ  ನಮ್ಮನ್ನು ಆವರಿಸಿಕೊಳ್ಳುತ್ತೆ. ಯಾವುದೋ ದೃಶ್ಯವನ್ನು ನೋಡಿ ನಾವು ಆರ್ದ್ರರಾಗಿರುತ್ತೇವೆ. ಮನಕಲಕುವ ಭಾವಗಳೇ ಮುಂದೆ ಯಾವುದೋ ಹೊತ್ತು ಮತ್ತೆ ಮರುಕಳಿಸಿ ನಾವು ಭಾವುಕವಾಗುತ್ತೇವೆ. ಪುಟ್ಟಣ್ಣ ಕಣಗಾಲ್ ಸಿನಿಮಾ ನೋಡಿದವರಿಗೆ ಈ ಭಾವುಕತೆ ಹೆಚ್ಚು ಅರಿವಾಗುತ್ತೆ. ಅವರು ಪ್ರೇಕ್ಷಕರಲ್ಲಿ ಮೂಡಿಸುವ ಭಾವ ಎಲ್ಲಿತ್ತು? ಖಂಡಿತ ಅವರಲ್ಲಿತ್ತು. ಅದನ್ನೇ ಅವರು ನಮಗೂ ದಾಟಿಸಿದರು.
ರಜತ ಪರದೆಯ ಮೇಲೆ ಚಲಿಸುವ ದೃಶ್ಯಗಳು ಉಂಟುಮಾಡುವ ಪ್ರಭಾವವನ್ನೇ ನುಡಿಚಿತ್ರಗಳು ಉಂಟುಮಾಡಬೇಕು ಎಂದು ನಾನು ಅಪೇಕ್ಷಿಸುವುದು ಮಹತ್ತ್ವಾಕಾಂಕ್ಷೆಯ ಮಾತಿರಬಹುದು. ಆದರೆ ಅದು ಸಾಧ್ಯವೂ ಹೌದು.

ನೀವು ಬರೆದ ನುಡಿಚಿತ್ರದ ಬಗ್ಗೆ ನಿಮ್ಮದೊಂದು `ನಿಲುವು' ಇದೆಯೆ?
ಪತ್ರಕರ್ತನಿಗೆ ನಿಲುವು ಇರಬಾರದು ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ನಮಗೆ ದಕ್ಕಿದ ಮಾಹಿತಿಗಳ ಆಧಾರದಲ್ಲಿ ನಾವೊಂದು ನಿಲುವು ಹೊಂದಿದರೆ ತಪ್ಪಿಲ್ಲ. ಆದರೆ ಹೊಸ ಮಾಹಿತಿ ಸಿಕ್ಕಿದಾಗ ಅದನ್ನೂ ಒಪ್ಪಿಕೊಳ್ಳುವ ಮನಸ್ಸು ನಮಗೆ ಬೇಕು ಅಷ್ಟೆ.
ಇಲ್ಲಿ ನನ್ನ ಇನ್ನೊಂದು ಅನುಭವವನ್ನೇ ಹೇಳುತ್ತೇನೆ.
ಸಿಂಧೂ ಕಣಿವೆ ನಾಗರಿಕತೆ ಗೊತ್ತಲ್ಲ, ಅಲ್ಲಿ ಸಾವಿರಾರು ಮುದ್ರಿಕೆಗಳು ಸಿಕ್ಕಿವೆ. ಅವುಗಳಲ್ಲಿ ಇರುವ ಸಂಕೇತಗಳು ಏನು? ಭಾಷೆಯೆ? ಗಣಿತವೆ? ಯಾವ ಭಾಷೆ? – ಪ್ರಶ್ನೆಗಳು ಇತಿಹಾಸಕಾರರಲ್ಲಿ ಬಿಸಿ ಬಿಸಿ ಚರ್ಚೆಯನ್ನೇ ಹುಟ್ಟಿಸಿ ದಶಕಗಳಾಗಿವೆ.
ನನಗೆ ಒಬ್ಬ ಇತಿಹಾಸಕಾರರು `ಇದು ಗಣಿತ ಶಾಸ್ತ್ರದ, ವ್ಯ&amp
;#32
62;ಪಾರದ, ಬೆಳೆಗಳ ಚಿಹ್ನೆಗಳು' ಎಂದರು. ಸರಿ, ನನ್ನ ಅನುಭವವೇ ಇಲ್ಲದ, ನಿಲುವೂ ಇಲ್ಲದ ನುಡಿಚಿತ್ರಕ್ಕಾಗಿ ಮಾಹಿತಿ ಸಂಗ್ರಹಿಸಿ ಗೆಳೆಯರೊಬ್ಬರಿಂದ ಲೇಖನ ಬರೆಸಿದೆ (ಸುಧಾ).
ಆದರೆ ೧೯೯೬ರಲ್ಲಿ ನನಗೆ ದಕ್ಕಿದ ಮಾಹಿತಿಗಳು ಬೇರೆ ಸಂಗತಿಗಳನ್ನೇ ಹೇಳಿದವು. ಸಿಂಧೂ ಮುದ್ರಿಕೆಗಳು ಸಂಸ್ಕೃತ ಭಾಷೆಯವು ಎಂದು ಪಶ್ಚಿಮ ಬಂಗಾಳದ ಪಂಡಿತ ನಟವರ್ ಝಾ  ಸಂಪೂರ್ಣ ಅಕ್ಷರ ಪಟ್ಟಿಯೊಂದಿಗೆ ಸಾಬೀತುಪಡಿಸಿದ್ದನ್ನು  ಬೆಂಗಳೂರಿನಲ್ಲಿರುವ ನವರತ್ನ ರಾಜಾರಾಮ್ ವಿವರಿಸಿದರು. ನಾನು ಈಗ ಮಾಹಿತಿಯ ಜೊತೆಗೆ ನಿಲುವನ್ನೂ ಹೊಂದಿದ್ದೆ. ಸಿಂಧೂ ನಾಗರಿಕತೆ ಬಗ್ಗೆ ಇನ್ನಷ್ಟು ಓದಿದ್ದೆ. ಹಲವು ಸಂಶೋಧನ ಲೇಖನಗಳನ್ನು ಸಂಗ್ರಹಿಸಿದ್ದೆ. ನನ್ನದೇ ಅಧ್ಯಯನದ ಅನುಭವ ಮತ್ತು ನಿಲುವುಗಳಿಂದ ನಾನು ಬದಲಾದೆ. ಮತ್ತೊಂದು ಲೇಖನ ಬರೆದೆ (ಸುಧಾ). ಒಂದು ಪುಸ್ತಕವನ್ನೂ ಬರೆದೆ.
ಇತ್ತೀಚೆಗೆ ನಾನು `ಹುಲ್ಲಿನ ಸಾರು' ಅನ್ನೋ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದೆ. ಅದರ ಲೇಖಕನನ್ನು ನಾನು ಎರಡು ವರ್ಷಗಳ ಕಾಲ ಹುಡುಕಿದ್ದು ನಿಜಕ್ಕೂ ಅನುಭವವಷ್ಟೇ ಅಲ್ಲ, ಒಂದು ನುಡಿಚಿತ್ರ. ಅದರ ಕೊನೆಯ ಭಾಗವಾಗಿ ಅವನನ್ನು ಸಂದರ್ಶಿಸುವ ಕಾಲ ಒದಗುತ್ತಿದೆ. ಖಂಡಿತ ಅವನ ಬಗ್ಗೆಯೇ ಒಂದು ನುಡಿಚಿತ್ರಬರೆಯುವ ಉತ್ಸಾಹ ನನ್ನನ್ನು ಕಾಡುತ್ತಿದೆ.

ಎಲ್ಲ ಸಲವೂ ಅನುಭವವೇ ನುಡಿಚಿತ್ರ ಆಗುವುದಿಲ್ಲ ಎಂಬುದು ನನಗೂ ಗೊತ್ತು. ಆದರೆ ಅನುಭವ ಎಂದರೆ ನನ್ನ ಹಾಗೆ ವರ್ಷಗಟ್ಟಳೆ  ಅನುಭವವೇ ಆಗಬೇಕಿಲ್ಲ. ವಾರದ ಅನುಭವವೂ ನುಡಿಚಿತ್ರವಾಗಬಹುದು. ಒಂದು ಕ್ಷಣದ ಅನುಭವವೂ ನುಡಿಚಿತ್ರವಾಗಬಹುದು.
ಈ ಅನುಭವ ನೋಡಲಿಕ್ಕೆ ಹ್ಯಾಗಿರುತ್ತೆ? ಯೋಚಿಸಿ. ನಾನೂ ನನ್ನ ಲೇಖನಗಳನ್ನು ಓದುಗರು ಹ್ಯಾಗೆ ಅನುಭವಿಸುತ್ತಾರೆ ಎಂಬ ಕಾತರದಲ್ಲಿರುತ್ತೇನೆ. ನನಗೆ ನುಡಿಚಿತ್ರದಲ್ಲಿ ಮಾಹಿತಿಗಳನ್ನು ತಿಳಿಸಿದ್ದಕ್ಕಿಂತ ನನ್ನೊಳಗಿನ ಅಭಿಮತ, ಅಭಿಪ್ರಾಯಗಳ ಒಳಗುದಿಯನ್ನು ಓದುಗರೆದುರು ಮಂಡಿಸಿದ ಸಮಾಧಾನ. 
ಹಾಗಾದರೆ ಅನುಭವ ಇಲ್ಲದೆ ನುಡಿಚಿತ್ರ ಪೂರ್ಣವಾಗುವುದಲ್ಲವ&amp
;#32
70;? ಖಂಡಿತ ಇಲ್ಲ. ಹಾಗೆ ಬರೆದ ನುಡಿಚಿತ್ರಗಳು ಸಾಮಾನ್ಯವಾಗಿ ಚರ್ವಿತಚರ್ವಣ ವ್ಯಕ್ತಿಚಿತ್ರಗಳಂತೆ (ಬಹುಮುಖ ಪ್ರತಿಭೆಯ….., ಎಲ್ಲರಂತಲ್ಲ ಇವರು, ಅಪರೂಪದ ಕಲಾವಿದ, ಎಲೆಮರೆಯ ಕಾಯಿ), ನೀರಸ ಲೇಖನಗಳಂತೆ (ಅಪರೂಪದ ಪ್ರವಾಸಿ ತಾಣ…….. , ಸುಂದರ ಪ್ರವರ್ಧಮಾನ ರಾಷ್ಟ್ರ……., ) ಕಾಣಿಸುತ್ತವೆ.
ಹಾಗಂತ ಸದರಿ ನುಡಿಚಿತ್ರದಲ್ಲಿ `ನಾನು' ಎಂದೆಲ್ಲ ಬರೆಯಬೇಕೆಂದಿಲ್ಲ. ಇಲ್ಲಿ `ನಾನು' ಬದಲಿಗೆ ಅನುಭವವೇ ಚಿತ್ರವಾಗುತ್ತದೆ. ಮೈಸೂರಿನ ದಸರಾ ಬಗ್ಗೆ ಲೇಖನ ಬರೆಯುವುದಾದರೆ ನಿಮಗೆ ಅನುಭವ ಬೇಡವೆ? ಕನಿಷ್ಠಪಕ್ಷ ಅದರ ಈಗಿನ ವೈಭವವಾದರೂ ಗೊತ್ತಿರಬೇಕು. ಹಿಂದಿನ ವೈಭವ ಬಲ್ಲವರನ್ನು ನೀವು ಕಾಣಬೇಕು. ಛಾಯಾಚಿತ್ರಗಳನ್ನು ನೀವು ಸಂಗ್ರಹಿಸಬೇಕು. ಇಷ್ಟಾಗಿಯೂ…
ಮೈಸೂರಿನ ಬಗ್ಗೆ ನಿಮ್ಮದೇ ಆದ ಅನುಭವ ಇಲ್ಲದಿದ್ದರೆ ಅದು ಪೇಲವವಾಗುತ್ತದೆ.

ಹಾಗಾದರೆ ಅನುಭವ ಹೊಂದಲಿಕ್ಕೆ ಸಮಯ ಬೇಕು. ಅದಕ್ಕಾಗಿ ಕಾಯುವವರು ಯಾರು? ಆಗ ನುಡಿಚಿತ್ರದ ಗತಿ ಏನು? ಬೇರೆಯವರು ಬರೆದುಬಿಟ್ಟರೆ?
ಹಾಗಾಗದು. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ನುಡಿಚಿತ್ರ ಮೂಡಿದಾಗ ಅದರ ಚಹರೆ ವಿಭಿನ್ನವಾಗಿರುತ್ತದೆ. `ಸಿರಿಭೂವಲಯ'ದ ಬಗ್ಗೆ ಲೇಖನ ಬರೆಯಬೇಕೆಂಬ ನನ್ನ ತುಡಿತಕ್ಕೆ ಈಗಾಗಲೇ ೫೦,೦೦೦ ರೂ. ಖರ್ಚು ಮಾಡಿದ್ದೇನೆ. ಆದರೆ ಈಗ ಪ್ರಜಾವಾಣಿಯಲ್ಲೇ ಅದರ ಬಗ್ಗೆ ಮುಖ್ಯ ಲೇಖನ ಬಂದಾಯಿತು. ನನಗೆ ಬೇಜಾರಿಲ್ಲ. ನನ್ನ ಅನುಭವದ ದ್ರವ್ಯ ಹರಳುಗಟ್ಟಿ ನುಡಿಚಿತ್ರವಾದಾಗ ಖಂಡಿತ ಅದಕ್ಕೆ ಓದುಗರು ಸಿಗುತ್ತಾರೆ. ಆದರೆ ಅದನ್ನು ದಶಕಗಳ ಕಾಲ ಮುಂದೂಡಬಾರದು, ಅಷ್ಟೆ!
ನೋಡಿ, ನನ್ನ ಈವರೆಗಿನ ಮಾತುಗಳಲ್ಲಿ ಈ ನಿಲುವುಗಳನ್ನು ನೀವು ಗುರುತಿಸಬಹುದು:
೧) ನುಡಿಚಿತ್ರವೆಂದರೆ ಅನುಭವದ ಬಿಂಬ.
೨) ನುಡಿಚಿತ್ರವೆಂದರೆ ಲೇಖಕನ ಬದ್ಧತೆಯ ನಿದರ್ಶನ.
ಈ ಮೂಲಕ ನಾವು ನುಡಿಚಿತ್ರವನ್ನು ಬರೆದಾಗ ಅದು ಖಂಡಿತವಾಗಿಯೂ ಓದುಗನಿಗೂ ಅನುಭವ ನೀಡುತ್ತದೆ. ಹಾಗೆಯೇ ಅವನಲ್ಲಿ ಇರಬಹುದಾದ ಬದ್ಧತೆಯ ಅಂಶಗಳಿಗೂ ಜೀವ ಬರುತ್ತದೆ.
ಕೇವಲ ಮಾಹಿತಿಯೇ ಹೂರಣವಾದ ನುಡಿಚಿತ್ರಗಳು ತಿಳಿಸುತ್&#
3236
;ವೆ. ಕಲಿಸುವುದಿಲ್ಲ. ಬದ್ಧ, ಅನುಭವಪೂರಿತ ನುಡಿಚಿತ್ರಗಳು ಕಲಿಸುತ್ತವೆ, ಪ್ರಚೋದಿಸುತ್ತವೆ. ಅವರ ದಿನಚರಿಯನ್ನು ಬದಲಿಸಲೂಬಹುದು. ಅವರು ಬೆಳಗಾಗೆದ್ದ ಕೂಡಲೇ ಕಣ್ಣುಗಳ ಮುಂದೆ ನಿಮ್ಮ ಲೇಖನವೇ ಮೂಡಿ ಅದೇ ಅವರ ನಿಲುವುಗಳನ್ನು ಪ್ರಶ್ನಿಸಬಹುದು. ಪ್ಲಾಸ್ಟಿಕ್ ಬಳಕೆ ಕುರಿತ ಪ್ರಭಾವಿ ಲೇಖನವನ್ನು ಓದಿದವರು ಖಂಡಿತ ಹಾಲಿನ ತೊಟ್ಟೆಯನ್ನು ನೋಡುವ ಬಗೆ ಬೇರೆಯಾಗಿರುತ್ತೆ. ಹಂದಿಗೋಡು ಖಾಯಿಲೆ ಬಗ್ಗೆ, ಬೆಂಗಳೂರಿನ ಕಸಾಯಿಖಾನೆಗಳ ಬಗ್ಗೆ ನಾಗೇಶ್ ಹೆಗಡೆಯವರು ನುಡಿಚಿತ್ರ ಬರೆದಾಗ ನಮ್ಮ ಅನುಭವಕ್ಕೆ ಎಲ್ಲ ಮಾಹಿತಿಗಳೂ ಹೇಗೆ ದಕ್ಕುತ್ತವೆ ಎಂಬುದನ್ನು ಗಮನಿಸಿ. ಆ ನುಡಿಚಿತ್ರಗಳನ್ನು ನಾಗೇಶ್ ಹೆಗಡೆಯವರು ಅನುಭವಿಸದಿದ್ದರೆ ಅವು ನಮ್ಮನ್ನೂ ಹಾಗೆ ತಟ್ಟುತ್ತಿರಲಿಲ್ಲ ಎಂದೇ ನನಗನ್ನಿಸುತ್ತೆ. ಅವು ಹೀಗೆ ನನಗೆ ಅಚಾನಕವಾಗಿ ನೆನಪಾಗಿದ್ದೂ ಈ ಅನುಭವದ ಕಾರಣದಿಂದಲೇ.
ನಾನು ಗಮನಿಸಿದ ಹಾಗೆ, ಕನ್ನಡದ ದಿನಪತ್ರಿಕೆಗಳಲ್ಲಿಅನುಭವದ ದರ್ಶನವನ್ನೇ ನೀಡುವ ಲೇಖನಗಳನ್ನು ರೂಪಿಸುವ ಲೇಖಕರು ಕಡಮೆ. ಪ್ರಜಾವಾಣಿಯ `ಕರ್ನಾಟಕ ದರ್ಶನ'ದಲ್ಲಿ ಬರುವ ಎಷ್ಟೋ ಲೇಖನಗಳು ನಾಗೇಶ್ ಹೆಗಡೆಯವರ ಅನುಭವದ ಹರಳುಗಳನ್ನು ಪೋಣಿಸಿಕೊಳ್ಳುತ್ತವೆ ಎಂಬುದು ರಹಸ್ಯವಾಗಿರಬೇಕಿಲ್ಲ. ಅವರ ನುಡಿಚಿತ್ರದ ಹಾದಿಯನ್ನು ಅನುಸರಿಸುವುದು ತಪ್ಪೂ ಅಲ್ಲ. ಆದರೆ ಕ್ರಮೇಣ ಸ್ವಂತಿಕೆಯನ್ನು ರೂಢಿಸಿಕೊಳ್ಳುವುದನ್ನು ಮರೆಯಬಾರದು. ಹಾಗೆ ಮರೆತರೆ ನಿಮ್ಮ ಅನುಭವಗಳು ಓದುಗರನ್ನು ತಲುಪುವುದಿಲ್ಲ.
ನುಡಿಚಿತ್ರ ಬರೆದಾಗ ಅದರ ತಕ್ಷಣದ ಪ್ರಕಟಣೆಯೇ ಪ್ರಧಾನ ಗುರಿಯಾಗಿದ್ದಾಗ ನಮಗೆ ಅನುಭವಗಳನ್ನು ದಾಖಲಿಸುವುದು ಮರೆತುಹೋಗುತ್ತದೆ. ನಾನೂ ಈ ಲೋಪಗಳಿಂದ ಹೊರತೇನೂ ಅಲ್ಲ. `ವಿಜಯ ಕರ್ನಾಟಕ'ದ ಮ್ಯಾಗಜಿನ್ ಸಂಪಾದಕನಾಗಿದ್ದಾಗ ಬರೆದ ಕೆಲವು ಲೇಖನಗಳು ಅವಸರದ್ದು ಎಂದು ನನಗೆ ಗೊತ್ತು. ಆದರೆ ಕೊನೇಪಕ್ಷ ನಮಗೆ ಈ ಅರಿವು ಇರಬೇಕು, ಅಲ್ಲವೆ? ಅಲ್ಲದೆ, ಹಾಗೆ ತುರ್ತು ಪ್ರಕಟಣೆಗೆ ಬರೆದ ಮೇಲೆ ಮತ್ತೆ ಅನುಭವದ ಮೊರೆ ಹೋಗದಿದ್ದರೆ… ನ&amp
;#32
65;ಡಿಚಿತ್ರದ ಹಾದಿ ತಪ್ಪುತ್ತದೆ.
ಪ್ರಿಯರೆ, ಈ ಕೆಳಗಿನ ಚೆಕ್‌ಲಿಸ್ಟನ್ನು ನನ್ನ ಅನುಭವದಿಂದ ತಯಾರಿಸಿದ್ದೇನೆ. ನಿಮಗೆ ಅನುಕೂಲವಾಗಬಹುದು ಎಂದು ಭಾವಿಸಿದ್ದೇನೆ:
  ನೀವು ಯಾವ ನುಡಿಚಿತ್ರ ಬರೆಯಲು ಹೊರಟಿದ್ದೀರಿ?
  ವಿಷಯದ ಪ್ರಾಥಮಿಕ ಜ್ಞಾನ. ಮಾಹಿತಿ ನಿಮ್ಮಲ್ಲಿ ಇದೆಯೆ?
  ವಿಷಯದ ಕುರಿತು ಹೆಚ್ಚಿನ ಬೆಳಕು ಚೆಲ್ಲುವವರು ಗೊತ್ತಿದ್ದಾರೆಯೆ? ಅವರು ಕೂಡಲೇ ಸಿಗುತ್ತಾರೆಯೆ?
  ವಿಷಯ ನಿಜಕ್ಕೂ ಜನಸಮುದಾಯಕ್ಕೆ ಮಾಹಿತಿಯ ಜೊತೆಗೆ ಶಿಕ್ಷಣವನ್ನೂ ನೀಡುತ್ತದೆಯೆ? ಅಂದರೆ, ನುಡಿಚಿತ್ರವು ಜನಪರ ಕಾಳಜಿಯನ್ನು ಹೊಂದಿದೆಯೆ? ಈ ಕಾಳಜಿಯನ್ನು ನೀವು ಒಪ್ಪಿದ್ದೀರ / ಒಪ್ಪುತ್ತೀರ?
  ಈ ವಿಷಯದ ಬಗ್ಗೆ ಬರೆಯುವಾಗ ನಿಮ್ಮನ್ನು ಇತರೆ ಪ್ರಶ್ನೆಗಳು ಕಾಡಿವೆಯೆ? ಅವುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದೀರ?
  ನುಡಿಚಿತ್ರದ ವಿಷಯದ ಅನುಭವ ನಿಮಗೆಷ್ಟಾಗಿದೆ? ಅದು ಭೌತಿಕ ಅನುಭವ ಆಗಿರಬಹುದು, ಅಥವಾ ಮಾನಸಿಕ ನಿಲುವಿನ ಅನುಭವವೂ ಆಗಿರಬಹುದು (ಕಸಾಯಿ ಖಾನೆ ಬಗ್ಗೆ ಲೇಖನ ಬರೆಯುವಾಗ ನೀವು ಮಚ್ಚು ಹಿಡಿದೇ ಅನುಭ ಪಡೆಯಬೇಕೆಂದಿಲ್ಲ. ಅಲ್ಲಿಗೆ ಹೋದಾಗ ಆಗುವ ಅನುಭವವೇ ಸಾಕು. ಅಥವಾ ವಿದ್ಯುತ್ ಚಿತಾಗಾರದಲ್ಲಿ ನೀವೇನೂ ಶವ ದಹನದ ಸ್ವಿಚ್ ಅದುಮಬೇಕಿಲ್ಲ.).
  ನುಡಿಚಿತ್ರದ ಆಶಯವನ್ನು ಬಿಂಬಿಸುವ ಚಿತ್ರಗಳನ್ನು ಸಂಗ್ರಹಿಸಿದ್ದೀರ? ಅಥವಾ ನೀವೇ ಸ್ವತಃ ಕ್ಲಿಕ್ಕಿಸಿದ್ದೀರ?
  ನುಡಿಚಿತ್ರವು ಒಟ್ಟಾರೆಯಾಗಿ ಕಟ್ಟಿಕೊಡುವ ಅನುಭವ ಏನಾಗಿರಬೇಕು ಎಂದು ನಿಮಗನ್ನಿಸಿದೆ? ಅದನ್ನು ನಿರೂಪಿಸುವ ಬಗೆಯ ಬಗ್ಗೆ ನಿರ್ಧರಿಸಿದ್ದೀರ? ನೆನಪಿಡಿ: ಇದು ನಿಮ್ಮ ನುಡಿಚಿತ್ರದ ವಿಷಯದ ನಿರೂಪಣೆ ಮತ್ತು ನಿಲುವಿನ ಪ್ರತಿಪಾದನೆ ಮಾತ್ರವಲ್ಲ, ಓದುಗರ ಮನಸ್ಸಿನಲ್ಲಿ ಕೊಟ್ಟಕೊನೆಯದಾಗಿ ಉಳಿಯುವ ಅನುಭವ.
  ನುಡಿಚಿತ್ರ ಬರೆದ ನಂತರವೂ ಆ ಬಗ್ಗೆ ಅನುವರ್ತನೆ (ಪಾಲೋ ಅಪ್) ಮಾಡುತ್ತಿದ್ದೀರ? ನಿಮ್ಮ ಅನುಭವ ಬದಲಾಗುತ್ತಿದೆಯೆ?
  ನುಡಿಚಿತ್ರ ಬರೆಯಲು ತೆಗೆದುಕೊಂಡ ಕಾಲಾವಧಿ ಎಷ್ಟು ಎಂದು ಲೆಕ್ಕ ಇಟ್ಟಿದ್ದೀರ? ಹಾ&amp
;#32
23;ೆಯೇ ಅದಕ್ಕೆ ತಗುಲಿದ ವೆಚ್ಚದ ಲೆಕ್ಕ ಹಾಕಿದ್ದೀರ? ನೆನಪಿಡಿ: ನೀವು ಮಾಡಿದ ಖರ್ಚಿಗೂ, ನಿಮಗೆ ಅಕಸ್ಮಾತ್ ಬರಬಹುದಾದ ಸಂಭಾವನೆಗೂ ಸಂಬಂಧಕಲ್ಪಿಸುವುದು ಆರಂಭಿಕ ಹಂತದಲ್ಲಂತೂ ತುಂಬಾ ಕಷ್ಟ.
ಅನುಭವ, ಮಾಹಿತಿಯ ಆಧಾರದಲ್ಲಿ ನುಡಿಚಿತ್ರ ಬರೆದ ಹಾಗೆಲ್ಲ ನಮ್ಮ ಮಾಹಿತಿ ವಿಸ್ತಾರವಾಗುತ್ತದೆ. ನಾವು ಪಡೆಯಬೇಕಾದ ಮಾಹಿತಿಯ ಪ್ರಮಾಣ ಹೆಚ್ಚುತ್ತದೆ. ಹಾಗೆಯೇ ನಮ್ಮ ಸಮಯ ಸಂಕುಚಿತವಾಗುತ್ತದೆ. ಅವಸರದಲ್ಲಿ ಕೆಲಸ ಮಾಡಬೇಕಾದ ಒತ್ತಡ ಹುಟ್ಟುತ್ತದೆ. ಇಷ್ಟಾಗಿಯೂ ನೀವು ಅನುಭವವನ್ನು ಹಾಗೆಯೇ ಓದುಗರಿಗೆ ದಾಟಿಸಿದಿರಿ ಎಂದರೆ,
ಅಭಿನಂದನೆಗಳು!

(ಮುಗಿಯಿತು)

Share. Facebook Twitter Pinterest LinkedIn Tumblr Email
Previous Articleಸಾಮರಸ್ಯದ ನೇಕಾರ : ಸಂತ ಕಬೀರ
Next Article Battalike: A review
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

1 Comment

  1. Sudhindra Gargesa on August 13, 2012 9:29 pm

    ಶ್ರೀ ಸುದರ್ಶನ್ ಅವರೇ, ನನಗೆ ಈ ಸಿರಿಭೂವಲಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ತಮ್ಮ ಬಳಿ ಇರುವ ಮಾಹಿತಿಯನ್ನು ಷೇರ್ ಮಾಡಲು ಸಾಧ್ಯವೇ. ತಮ್ಮನ್ನು ಸಂಪರ್ಕಿಸುವುದು ಹೇಗೆ?
    ಗಾರ್ಗೇಶ, ಬೆಂಗಳೂರು

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.