Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಮಾಹಿತಿ / ಲೇಖನ»ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
ಮಾಹಿತಿ / ಲೇಖನ

ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?

ಬೇಳೂರು ಸುದರ್ಶನBy ಬೇಳೂರು ಸುದರ್ಶನApril 25, 2012Updated:May 19, 20253 Comments6 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ ಇಲ್ಲಿದೆ. ಸ್ಥಾವರಗಳ ಕುರಿತ ಈ ಸಂಚಿಕೆ ನಿಮಗೆ ಇಷ್ಟವಾಗಬಹುದು ಎಂದು ನಂಬಿರುವೆ. ಪ್ರತಿಕ್ರಿಯೆಗೆ ಸ್ವಾಗತ. ಇಶ್ಯೂ ಸಂಚಿಕೆಯು ನೋಡಲು ಮುದ್ದಾಗಿ ಕಾಣಿಸುತ್ತದೆಯಾದರೂ, ದೃಷ್ಟಿಸವಾಲಿನವರು ಓದಲಾಗದು. ಆದ್ದರಿಂದ  ಇಶ್ಯೂ ಸಂಚಿಕೆಯ ಕೊಂಡಿಯ ಕೆಳಗೆ ಸಂಚಿಕೆಯ ಲೇಖನಗಳನ್ನು (ಮಿತ್ರಮಾಧ್ಯಮದಲ್ಲಿ ಈ ಮೊದಲೇ ಪ್ರಕಟವಾಗದಂಥವು; ಏಕೆಂದರೆ ಕೆಲವೊಮ್ಮೆ ಇತ್ತೀಚೆಗೆ ಪ್ರಕಟವಾದ ಲೇಖನಗಳನ್ನೂ ಸೇರಿಸಿರುತ್ತೇನೆ) ಓದಬಹುದು. ಈ ಅನುಕೂಲವನ್ನು ಮೊದಲೇ ಒದಗಿಸದಿದ್ದುದಕ್ಕೆ ವಿಷಾದಿಸುತ್ತೇನೆ.
[issuu width=420 height=316 backgroundColor=%23222222 documentId=120425172245-78eb39f83bf14373bd487ba150b47e88 name=jantar_mantar_issue_2 username=beluru tag=beluru unit=px v=2]

ಸಂಚಿಕೆಯ ಮುನ್ನುಡಿ 

ನೀವೇ ಹೇಳಿ… ಸ್ಥಾವರಕ್ಕಳಿವುಂಟೆ?

ಬಿಜಾಪುರದ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿಲ್ಲ. ರೈತರಿಗೆ ಹೊಲಕ್ಕೆ ಬಿಡಿ, ಜೀವ ಉಳಿಸಿಕೊಳ್ಳಲೂ ನೀರಿಲ್ಲ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲು ಕರ್ನಾಟಕದ ಮುಖ್ಯಮಂತ್ರಿಯವರು ವಿನಂತಿ ಮಾಡಿಕೊಂಡಿದ್ದಾರೆ.
ರಾಯಚೂರಿನ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಡೆಸಲು ನೀರಿಲ್ಲ. ಈ ಸಂಚಿಕೆ ಪ್ರಕಟವಾಗುವ ಹೊತ್ತಿಗೆ ಇಡೀ ಸ್ಥಾವರವೇ ತನ್ನ ಕೆಲಸವನ್ನು ನಿಲ್ಲಿಸಬಹುದು. ಏಕೆಂದರೆ ಕೃಷ್ಣಾ ನದಿಯಲ್ಲಿ ನೀರಿಲ್ಲ. ಮೊದಲೇ ಈ ಸ್ಥಾವರವು ತ್ರಿಶಂಕು ನರಕ. ಕಲ್ಲಿದ್ದಲು ಎಲ್ಲಿಂದಲೋ ರೈಲಿನಲ್ಲಿ ಬರಬೇಕು. ಅದೂ ದಾಸ್ತಾನಿಲ್ಲ. ಸ್ಥಾವರವು ಉಗುಳುವ ಹಾರುಬೂದಿಯ ನಿರ್ವಹಣೆ ? ಕೃಷ್ಣಾರ್ಪಣ (ಕೃಷ್ಣಾ ನದಿಗೆ ತೇಲಿಬಿಡುವುದು) ಮಾಡುವುದಷ್ಟೆ ಹೊರತು ವೈಜ್ಞಾನಿಕ ನಿಯಂತ್ರಣವೇ ಇಲ್ಲ.
ಇಷ್ಟಾಗಿಯೂ ನಮಗೆ ಕೂಡಿಗಿಯಲ್ಲಿ ಇನ್ನೊಂದು ವಿದ್ಯುತ್ ಸ್ಥಾವರ ಬೇಕು. ಅದಕ್ಕೂ ಛತ್ತೀಸ್‌ಗಢದಿಂದಲೋ, ಇನ್ನೆಲ್ಲಿಂದಲೋ ಕಲ್ಲಿದ್ದಲನ್ನು ರೇಕುಗಳಲ್ಲು ತರಬೇಕು. ನೀರು? ಇದೆಯಲ್ಲ ಆಲಮಟ್ಟಿ ಅಣೆಕಟ್ಟು ಎನ್ನುತ್ತದೆ ಸರ್ಕಾರ.
ನೋಡಿ: ಕುಡಿಯಲು, ರೈತರ ಹೊಲಗಳಿಗೆ ಹನಿಸಲು ಅಣೆಕಟ್ಟುಗಳಲ್ಲಿ ನೀರಿಲ್ಲ.  ಆದರೆ ರಕ್ಕಸಗಾತ್ರದ ಕಲ್ಲಿದ್ದಲು ಸ್ಥಾವರಗಳಿಗೆ ಈ ಅಣೆಕಟ್ಟುಗಳಿಂದಲೇ ನೀರು ಕೊಡಬೇಕಂತೆ. ಅಣೆಕಟ್ಟುಗಳನ್ನು ಕಟ್ಟಿದ ಮೂಲ ಮತ್ತು ಅಧಿಕೃತ ಉದ್ದೇಶವೇ ರೈತರಿಗೆ ಕೃಷಿಭೂಮಿಗೆ ಕನಿಷ್ಠ ನೀರು ಒದಗಿಸಲು. ನೆನಪಿಡಿ: ಅಣೆಕಟ್ಟುಗಳನ್ನು  ಕಟ್ಟುವುದು ಐಷಾರಾಮಿ ನೀರಾವರಿಗಲ್ಲ; ಎಲ್ಲರಿಗೂ ಕನಿಷ್ಠ ನೀರು ಒದಗಿಸಿ ಹೆಚ್ಚು ಬೆಳೆ ತೆಗೆಯುವುದು.
ಹಾಗಾದರೆ ಕಲ್ಲಿದ್ದಲು ಸ್ಥಾವರಗಳಿಗೆ ನೀರು ಕೊಡಬೇಕೆ? ಖಂಡಿತ ಕೂಡದು. ನಮ್ಮ ರೈತರ ಭೂಮಿಯನ್ನು ವಶಪಡಿಸಿಕೊಂಡು ಸ್ಥಾವರ ಕಟ್ಟಿ, ಅಲ್ಲಿಗೆ ನೀರು ಕೊಡಲು ಇನ್ನಷ್ಟು ಸಾವಿರ ರೈತರ ಹೊಲಗಳನ್ನು ಒಣಗಿಸುವುದು ಪ್ರಜಾತಂತ್ರವೆ? ಇನ್ನು ಪರಿಹಾರ ಪಡೆದ ರೈತರು ಹಣ ಉಳಿಸಲು, ಬೆಳೆಸಲು ಹೋಗಿ ಏನೇನೋ ಸಾಮಾಜಿಕ ಪರಿಣಾಮಗಳಾಗುವುದನ್ನು ತಪ್ಪಿಸಲಾದೀತೆ?
ರಾಷ್ಟ್ರೀಯ ಹೆದ್ದಾರಿ ೫೦ ಒಂದು ಬದಿಯಲ್ಲಿರುವ ಆಲಮಟ್ಟಿ ಅಣೆಕಟ್ಟು ಅಭಿವೃದ್ಧಿಯ ಸ್ಥಾವರಕ್ಕೆ ಸಾಕ್ಷಿಯಾದರೆ, ಇನ್ನೊಂದು ಬದಿಯಲ್ಲಿರುವ ಕೂಡಲ ಸಂಗಮವು ಬಸವಣ್ಣನವರ ಐಕ್ಯತಾಣ. ಯಾವುದು ಬೇಕು? ಅಮವಾಸ್ಯೆಯ ದಿನದಂದು ಕೂಡಲಸಂಗಮಕ್ಕೆ ಭಕ್ತಿ ಪರವಶತೆಯಿಂದ ಬರುವ ಜನರು ಮುಂದಿನ ದಿನಗಳಲ್ಲಿ ಕಲ್ಲಿದ್ದಲಿನ ರಾಡಿಯನ್ನೇ ಬಳಿದುಕೊಂಡು ಬದುಕಬೇಕಾದೀತು. ನಿತ್ಯವೂ ನೀರಿಲ್ಲದ, ಕಾಳಿಲ್ಲದ, ಕೆಲಸವಿಲ್ಲದ ಅಮವಾಸ್ಯೆಯಾದೀತು.
ನಮ್ಮ ಸ್ಥಾವರಗಳು ಯಾವುದಿರಬೇಕು ಎಂದು ತೀರ್ಮಾನಿಸುವುದು ಅಂತಿಮವಾಗಿ ಜನರಿಗೆ ಬಿಟ್ಟ ವಿಚಾರ. ಆದರೆ ನಮ್ಮ ವಿಜ್ಞಾನದ ಅರಿವು ನಮ್ಮ ಬದುಕನ್ನು ಹಸನುಗೊಳಿಸುವ ಬದಲಿಗೆ ರಣಬದುಕಿಗೆ ತಳ್ಳುವುದನ್ನು ಸಹಿಸಿಕೊಳ್ಳಬೇಕೆ? ಯೋಚಿಸಿ. ಈ ಹಿನ್ನೆಲೆಯಲ್ಲೇ ಮಿತ್ರಮಾಧ್ಯಮದ `ಜಜಂತರ್ ಮಮಂತರ್ ನ ಎರಡನೇ ಸಂಚಿಕೆ ರೂಪುಗೊಂಡಿದೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಬೇಳೂರು ಸುದರ್ಶನ
೨೬ ಏಪ್ರಿಲ್ ೨೦೧೨
 
ಲೇಖನ ೧

ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ ಲಾಭವಿದೆಯೆ? ( ಈ ಲೇಖನವು ಈ ಹಿಂದೆ ಪ್ರಕಟವಾಗಿತ್ತು. ಕೊಂಡಿಯನ್ನು ಅನುಸರಿಸಿ)

ಲೇಖನ ೨

ಚೆರ್ನೋಬಿಲ್ : ಸ್ಥಾವರದ ಜೊತೆಗೇ ಮನುಕುಲಕ್ಕೂ ಅಳಿವು

ಸ್ಟಿಲಿಯಾನ್ ಪೆಟ್ರೋವ್‌ಗೆ ಈಗ ೩೨ ವರ್ಷ. ಅವರು ಆಸ್ಟನ್ ವಿಲ್ಲಾ ಫುಟ್‌ಬಾಲ್ ತಂಡದ ನಾಯಕ. ೧೪ ವರ್ಷಗಳಿಂದ ಕ್ಯಾನ್ಸರ್ ಪೀಡಿತ. ಅವರಿಗೆ ಚಿಕಿತ್ಸೆ ನೀಡುತ್ತ ಬಂದ ಡಾ. ಮಿಹೈಲ್ ಇಲೀವ್ ಹೇಳುವಂತೆ ೧೯೮೬ರ ಚೆರ್ನೋಬಿಲ್ ದುರಂತದಿಂದ ಹಬ್ಬಿದ ಪರಮಾಣು ವಿಕಿರಣವೇ ಕ್ಯಾನ್ಸರಿಗೆ ಕಾರಣ. ಆಗ ಪೆಟ್ರೋವ್ ಆಟವಾಡುತ್ತ ಇದ್ದದ್ದು ಸಾವಿರ ಕಿಲೋಮೀಟರ್‌ಗಳಾಚೆಯ ಬಲ್ಗೇರಿಯಾದ ಮೊಂಟಾನಾದಲ್ಲಿ. ದುರಂತ ಘಟಿಸಿದ ಬಗ್ಗೆ ಆಗ ಆಡಳಿತ ನಡೆಸುತ್ತಿದ್ದ ಕಮ್ಯುನಿಸ್ಟ್ ಸರ್ಕಾರವು ಸೂಕ್ತ ಪ್ರಚಾರ ನೀಡಲಿಲ್ಲ; ಎಲ್ಲವನ್ನೂ ಮುಚ್ಚಿಟ್ಟಿತು.  ನೂರಾರು ಮಕ್ಕಳಿಗೆ ವಿಕಿರಣದ ಮೋಡ ಕವಿಯಿತು. ವಿಕಿರಣಯುಕ್ತ ಹಣ್ಣುಗಳನ್ನು ತಿಂದ ಮಕ್ಕಳಿಗೆ ಇನ್ನೇನಾದೀತು?
ಈ `ಚೆರ್ನೋಬಿಲ್ ಮಕ್ಕಳು’ ಈಗ ಕ್ಯಾನ್ಸರಿನ ಕಟುಬದುಕಿಗೆ ಹೊಂದಿಕೊಳ್ಳಬೇಕಿದೆ. ಇವರೂ ಸೇರಿದಂತೆ ಚೆರ್ನೋಬಿಲ್ ಪರಮಾಣು ದುರಂತಕ್ಕೆ ಒಟ್ಟು ಎರಡು ಲಕ್ಷ ಜನರು ಬಲಿಯಾಗುವರು ಎಂದು ಗ್ರೀನ್‌ಪೀಸ್ ಸಂಸ್ಥೆ ಅಂದಾಜು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಕಿರಣಕ್ಕೆ ತುತ್ತಾದವರ ಸಂಖ್ಯೆ ಆರು ಲಕ್ಷ ದಾಟುತ್ತದೆ.
ಏಪ್ರಿಲ್ ೨೬ರ ಈ ದಿನ ೧೯೮೬ರ ವರ್ಷ ಘಟಿಸಿದ ಈ ದುರಂತವು ಮನುಕುಲದ ಆತ್ಮಸಾಕ್ಷಿಯನ್ನೇ ಕದಡಬೇಕಿತ್ತು. ಹಾಗಾಗಲಿಲ್ಲ. ಅದಾದ ಮೇಲೆ ಕಳೆದ ವರ್ಷವಷ್ಟೆ ಭೀಕರ ಸುನಾಮಿಯು ಫುಕುಶಿಮಾ ದುರಂತಕ್ಕೆ ಕಾರಣವಾಯಿತು. ಆದರೂ ನಮ್ಮ ಆತ್ಮಸಾಕ್ಷಿ ಅಷ್ಟೇನೂ ಕದಲಲಿಲ್ಲ. ತಮಿಳುನಾಡಿನ ಕೂಡಂಕುಳಂ ಪರಮಾಣು ಸ್ಥಾವರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಮತೀಯ ಬಣ್ಣ ಹಚ್ಚಿ ಪರಮಾಣು ಸ್ಥಾವರ ಸ್ಥಾಪನೆಂ    ಂಕೇತವಾಗಿ ಪರಿವರ್ತಿಸುವ ಹಂತದಲ್ಲಿರುವ ನಮಗೆ ಇನ್ನೇತರ ಆತ್ಮಸಾಕ್ಷಿ ಹೇಳಿ!
೬೪ರ ಹರೆಯದ ವ್ಲಾದಿಮಿರ್ ಕಿಶ್ಕೋ ಇತ್ತೀಚೆಗೆ ಸತ್ತರು. ಅವರು ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್‌ರಾದ ವ್ಲಾದಿಮಿರ್ ಮತ್ತು ವಿತಾಲಿ ಕಿಶ್ಕೋರ ತಂದೆ. ಅವರೂ ಚೆರ್ನೋಬಿಲ್ ವಿಕಿರಣದ ಬಲಿಯೇ. ಹೇಳಲು ಇಂಥ ಕಥೆಗಳು ಬೇಕಾದಷ್ಟಿವೆ.
ಮನುಷ್ಯರಷ್ಟೇ ಅಲ್ಲ, ಸಕಲ ಚರಾಚರಗಳನ್ನೂ ಆಕ್ರಮಿಸಿದ ಈ ವಿಕಿರಣವು ಹೊಸ ಹೊಸ ಭೀಕರ ಸತ್ಯಗಳನ್ನು ಹೊರಚೆಲ್ಲುತ್ತಿದೆ. ಉದಾಹರಣೆಗೆ ೨೦೦೬-೦೯ರ ಅವಧಿಯಲ್ಲಿ ಚೆರ್ನೋಬಿಲ್ ಪ್ರದೇಶದಲ್ಲಿ ಎಲ್ಲ ವಯಸ್ಕ ಹಕ್ಕಿಗಳೂ ಸಾಯುವ ಪ್ರಮಾಣ ಹೆಚ್ಚಾಗುತ್ತಿದೆ. ಅದರರ್ಥ ಇಷ್ಟೆ: ಈ ಪ್ರದೇಶದಲ್ಲಿ ಕಡಿಮೆ ವಯಸ್ಸಿನ ಹೊಸ ಹಕ್ಕಿಗಳು ಮಾತ್ರ ಇವೆ. ಚೆರ್ನೋಬಿಲ್ ಹೊಕ್ಕರೆ ಸಾವಿನ ಬಿಲವನ್ನೇ ಹೊಕ್ಕಂತೆ. ಅದರಲ್ಲೂ ಹೆಣ್ಣು ಹಕ್ಕಿಗಳ ಮರಣ  ಪ್ರಮಾಣ ಹೆಚ್ಚು.
ಜರ್ಮನಿಯಲ್ಲಿರುವ ಇಂಟರ್‌ನ್ಯಾಶನಲ್ ಫಿಜಿಶಿಯನ್ಸ್ ಫಾರ್ ದಿ ಪ್ರಿವೆನನ್‌ಶನ್ ಆಫ್ ನ್ಯೂಕ್ಲಿಯರ್ ವಾರ್ (ಐಪಿಪಿಎನ್‌ಡಬ್ಲ್ಯು) ಸಂಸ್ಥೆಯು ಕಳೆದ ವರ್ಷ ಪ್ರಕಟಿಸಿದ ಚೆರ್ನೋಬಿಲ್ ಕುರಿತ ವರದಿಯು ದುರಂತವು ಉಂಟುಮಾಡಿದ ಅನಾರೋಗ್ಯದ ಸಂಗತಿಗಳನ್ನು ಅಂಕಿ ಅಂಶಗಳೊಂದಿಗೆ ಚರ್ಚಿಸಿದೆ. ಅದರ ಮುಖ್ಯಾಂಶಗಳನ್ನು ಓದೋಣ ಬನ್ನಿ:
ವಿಕಿರಣಕ್ಕೆ ತುತ್ತಾದ ವಿಕಿರಣ ಶುದ್ಧೀಕರಣದ ಕಾರ್ಮಿಕರ ಸಂಖ್ಯೆ: ೮.೩೦ ಲಕ್ಷ. ೩೦ ಕಿಲೋಮೀಟರ್ ಫಾಸಲೆಯಲ್ಲಿ ಅತಿ ತೀವ್ರ ವಿಕಿರಣ ಪ್ರದೇಶದಿಂದ ಸ್ತಳಾಂತರಗೊಂಡವರ ಸಂಖ್ಯೆ: ೩.೫೦ ಲಕ್ಷ. ರಶ್ಯಾ, ಬೆಲಾರಸ್ ಮತ್ತು ಉಕ್ರೇನ್‌ನಲ್ಲಿ ತೀವ್ರ ವಿಕಿರಣಕ್ಕೆ ತುತ್ತಾದ ಜನರ ಸಂಖ್ಯೆ: ೮೩ ಲಕ್ಷ.
ವಿಕಿರಣದಿಂದ ಉಂಟಾಗುವ ಕಾಯಿಲೆಗಳು: ೧) ಕ್ಯಾನ್ಸರ್: ಈ ರೋಗವು ಪತ್ತೆಯಾಗಲು ೨೫-೩೦ ವರ್ಷಗಳೇ ಬೇಕು. ಸದ್ಯಕ್ಕೆ ಗಂಟಲಿನ, ಸ್ತನಗಳ ಮತ್ತು ಮೆದುಳಿನ ಗಡ್ಡೆಗಳ ಕ್ಯಾನ್ಸರ್ ಪ್ರಕರಣಗಳು ಕಾಣುತ್ತಿವೆ. ಅಲ್ಲದೆ ಮೂತ್ರಪಿಂಡ, ಹೊಟ್ಟೆ, ರಕ್ತ, ಥೈರಾಯ್ಡ್ ಕ್ಯಾನ್ಸರಿನ ಪ್ರಕರಣಗಳೂ ಈಗ ತಲೆದೋರುತ್ತಿವೆ. ೨) ವಿಕೃತ ದೇಹರಚನೆ, ಭ್ರೂಣಮರಣ, ಬಂಜೆತನ ೩) ಕ್ಯಾನ್ಸರೇತರ ಕಾಯಿಲೆಗಳು: ಮೆದುಳಿನ ವಿಕೃತಿ, ತೀವ್ರ ವಯಸ್ಕತನ,  ಮನೋದೈಹಿಕ ಮತ್ತು ಮಾನಸಿಕ ಕಾಯಿಲೆಗಳು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ನೀಡಿರುವ ಅಂಕಿ ಅಂಶಗಳೆಲ್ಲವೂ ತಪ್ಪುಗಳಿಂದ ಕೂಡಿವೆ. ಐಎಇಎ ಪ್ರಕಾರ ದುರಂತವಾದ ಕೂಡಲೇ ೪೦೦೦ ಜನ ಸತ್ತಿದ್ದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ೮೯೩೦ ಜನ ಸತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಆಧಾರಗಳನ್ನೇ ನೋಡಿದರೆ ೧೦ ಸಾವಿರದಿಂದ ೨೫ ಸಾವಿರ ಹೆಚ್ಚುವರಿ ಸಾವು ಸಂಭವಿಸಿದೆ ಎಂದೇ ಹೇಳಬೇಕಾಗುತ್ತದೆ.
ಈ ವರದಿಯ ೬೭ ಪುಟಗಳಲ್ಲಿ ಇರುವ ಎಲ್ಲ ಮಾಹಿತಿಯನ್ನೂ ಕೊಡಲಾಗುತ್ತಿಲ್ಲ. ಉದಾಹರಣೆಗೆ ಬೆಲಾರಸ್ ಪ್ರದೇಶದಲ್ಲಿ ದುರಂತಕ್ಕಿಂತ ೧೩ ವರ್ಷಗಳ ಮೊದಲು ಮತ್ತು ದುರಂತವಾದ ೧೩ ವರ್ಷಗಳ ನಂತರ ಕಂಡುಬಂದ ಥೈರಾಯ್ಡ್ ಕ್ಯಾನ್ಸರಿನ ಪ್ರಮಾಣದ ಈ ಕೋಷ್ಟಕವನ್ನಷ್ಟೆ ಗಮನಿಸಿ:

ವಯಸ್ಸು ೧೯೭೩- ೧೯೮೫ ೧೯೮೬- ೧೯೯೮ ಹೆಚ್ಚಳ
೦-೧೮ ೭ ೪೦೭ ೫೮-ಪಟ್ಟು
೧೯-೩೪ ೪೦ ೨೧೧ ೫.೩-ಪಟ್ಟು
೩೫-೪೯ ೫೪ ೩೨೬ ೬-ಪಟ್ಟು
೫೦-೬೪ ೬೩ ೩೧೪ ೫-ಪಟ್ಟು
>೬೪ ೫೬ ೧೪೬ ೨.೬-ಪಟ್ಟು

ಚೆರ್ನೋಬಿಲ್ ದುರಂತದ ಪರಿಣಾಮವು ಹಲವು ವರ್ಷಗಳ ನಂತರವೇ ಕಣ್ಣಿಗೆ ಕಾಣಿಸುತ್ತದೆ ಎಂಬುದಕ್ಕೆ ಈ ಕೋಷ್ಟಕವನ್ನು ಗಮನಿಸಿ: ದಿನ ಕಳೆದಂತೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ!

ಈ ವರದಿಯು ಮುಖ್ಯವಾಗಿ ಜರ್ಮನಿಯ ಎಲ್ಲ ಪರಮಾಣು ಸ್ಥಾವರಗಳನ್ನು ಮುಚ್ಚಬೇಕು ಎಂದು ಬೇಡಿಕೆಯಿಟ್ಟಿತ್ತು. ಜರ್ಮನಿ ಸರ್ಕಾರವೂ ಈ ಬೇಡಿಕೆಯನ್ನು ಮನ್ನಿಸಿ ೨೦೨೨ರ ಹೊತ್ತಿಗೆ ತನ್ನ ಎಲ್ಲ ಪರಮಾಣು ಸ್ಥಾವರಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ.

  • ಫುಕುಶಿಮಾ ದುರಂತಕ್ಕೆ ಒಂದು ವರ್ಷವಾದ ಬಗ್ಗೆ ಮುಂದಿನ ಪುಟದಲ್ಲಿ ಪ್ರತ್ಯೇಕ ಲೇಖನವಿದೆ. ಓದಿ.
  • ಚೆರ್ನೋಬಿಲ್ ದುರಂತದ ಮನಕಲಕುವ ಚಿತ್ರಗಳಿಗಾಗಿ ಇಲ್ಲಿಗೆ ಬನ್ನಿ:

http://www.boston.com/bigpicture/2012/02/gerd_ludwigs_long_shadow_of_ch.html

http://www.telegraph.co.uk/news/picturegalleries/worldnews/9128776/Photographs-of-Chernobyl-and-the-ghost-town-of-Pripyat-by-Michael-Day.html?frame=2161225

ಲೇಖನ ೩ 

ಫುಕುಷಿಮಾ : ಒಂದೇ ವರ್ಷದ ಕಥೆ

ಮಾರ್ಚ್ ೧೧ರ ಆ ಶನಿವಾರದ ಕಥೆ ಯಾರಿಗೆ ಗೊತ್ತಿಲ್ಲ? ಜಪಾನಿಗೆ ಅಪ್ಪಳಿಸಿದ ಸುನಾಮಿಗೆ ಇಡೀ ದ್ವೀಪವೇ ನಡುಗಿತು. ಸಾವು, ನೋವು, ಯಾತನೆ – ಎಲ್ಲವೂ ವರದಿಯಾದವು. ಜೊತೆಗೆ ಅಲ್ಲಿನ ಫುಕುಷಿಮಾ ದಾಯ್‌ಚಿಯ ಪರಮಾಣು ವಿದ್ಯುತ್ ಸ್ಥಾವರವೂ ತತ್ತರಿಸಿ, ಒಡೆದು, ವಿಕಿರಣ ಸೋರಿಕೆಯಾಗಿ… ಅಬ್ಬಾ, ಒಂದು ವರ್ಷ ಕಳೆದಿದೆಯಲ್ಲ…
ಪರಮಾಣು ಸ್ಥಾವರಗಳು ನರಕದ ಟೈಂಬಾಂಬ್‌ಗಳು ಎಂಬುದು ಅಲ್ಲಿ ಖಚಿತವಾಯಿತು. ರಶ್ಯಾದ ಚೆರ್ನೋಬೈಲಿನಂಥ ದೊಡ್ಡ ಪ್ರದೇಶವೀಗ ವಸ್ತುಶಃ ವಿಷಪೂರಿತ ನಿರ್ಜೀವ ತಾಣ. ಅಲ್ಲೀಗ ರೌರವ ಮೌನ. ಇಪ್ಪತ್ತು ಕಿಲೋಮೀಟರ್ ಫಾಸಲೆಯಲ್ಲಿ ಯಾವ ಮನುಷ್ಯನೂ ಇರುವಂತಿಲ್ಲ. ೩೦ ಕಿಮೀವರೆಗಿನ ಜನರು ವಿಕಿರಣ ತಾಗದಂತೆ ಎಚ್ಚರಿಕೆಯಿಂದ ಬದುಕಬೇಕು.
ಪುಟ್ಟ ದೇಶಕ್ಕೆ ದೊಡ್ಡ ಪಾಠ
ವಿಶ್ವದಲ್ಲೇ ಅತ್ಯಂತ ಕ್ರಿಯಾಶೀಲ ದೇಶವಾದ ಜಪಾನ್‌ಗೆ ಫುಕುಷಿಮಾ ಒಂದು ದೊಡ್ಡ ಪಾಠ. ಅದಕ್ಕೇ ಅಲ್ಲಿನ ೫೨ ಪರಮಾಣು ಸ್ಥಾವರಗಳ ಪೈಕಿ ಈಗ ಕೇವಲ ಎರಡು ಸ್ಥಾವರಗಳು ವಿದ್ಯುತ್ ಉತ್ಪಾದಿಸುತ್ತಿವೆ. ಜಪಾನಿನ ಪ್ರಧಾನಿ ಯೊಶಿಹಿಕೋ ನೋಡಾ `ನಾವು ಈ ದುರಂತದಿಂದ ಹಲವು ಪಾಠಗಳನ್ನು ಕಲಿಯುತ್ತಿದ್ದೇವೆ ಎಂದು ಹೇಳುತ್ತಲೇ ನಾವು ಅನುಭವಿಸಿದ್ದನ್ನು ಜಗತ್ತಿಗೆ ತಿಳಿಸಿದರೇನೇ ನಾವು ಪರಮಾಣು ಸುರಕ್ಷತೆ ಬಗ್ಗೆ ನಮ್ಮದೂ ಕೊಡುಗೆ ನೀಡಿದಂತೆ ಎನ್ನುತ್ತಾರೆ.
ಆದರೆ `ಜಪಾನ್ ಸರ್ಕಾರವು ಈ ದುರಂತದ ಅತಿ ಗಂಭೀರ ವಿಶ್ಲೇಷಣೆಗಳನ್ನು ಮುಚ್ಚಿಟ್ಟಿದೆ ಎಂದು ರಿಬಿಲ್ಡ್ ಜಪಾನ್ ಇನಿಶಿಯೇಟಿವ್ ಫೌಂಡೇಶನ್ ಎಂಬ ಸ್ವತಂತ್ರ ಸಮಿತಿಯು ಸರ್ಕಾರವನ್ನು ಟೀಕಿಸಿದೆ. ಅದು ಮಾರ್ಚ್ ೧೧ರಂದು ತನ್ನದೇ ಸ್ವತಂತ್ರ ವರದಿಯನ್ನು ಬಿಡುಗಡೆ ಮಾಡಿದೆ. ಇಂಥ ದುರಂತ ಘಟಿಸಿದರೆ ಇಡೀ ಟೋಕಿಯೋದ ಜನರನ್ನೆಲ್ಲ ಸ್ಥಳಾಂತರ ಮಾಡಬೇಕು ಎಂಬುದೂ ಅಘೋಷಿತ ಪೂರ್ವಸಿದ್ಧತೆ ಆಗಿತ್ತಂತೆ.
ಮಾರ್ಚ್ ೧೧ರ ದಿನ ಜಗತ್ತಿನೆಲ್ಲೆಡೆಯ ಜನ ಫುಕುಷಿಮಾ ದುರಂತವನ್ನು ಸ್ಮರಿಸಿಕೊಂಡಿದ್ದಾರೆ. ಭಿಕ್ಷುಗಳು ಮೆರವಣಿಗೆ ನಡೆಸಿ ಶಾಂತಿಮಂತ್ರ ಜಪಿಸಿದ್ದಾರೆ. ಜಪಾನಿನಲ್ಲಿ ಅವತ್ತು ಮತ್ತೊಮ್ಮೆ ಜಪಾನೀಯರು ಅಭ್ಯುದಯದ ಪಣ ತೊಟ್ಟಿದ್ದಾರೆ.
ಅಮೆರಿಕನ್ ನ್ಯೂಕ್ಲಿಯರ್ ಸೊಸೈಟಿಯು ಮಾರ್ಚ್ ೮ರಂದೇ ವಿಶೇಷ ವರದಿಯೊಂದನ್ನು ಬಿಡುಗಡೆ ಮಾಡಿದೆ. ಪರಮಾಣು ಸ್ಥಾವರಗಳ ಸುರಕ್ಷತೆಗೆ ಇದರಲ್ಲಿ ಒತ್ತು.
ಈ ಅವಘಡದಲ್ಲಿ ಸೋರಿಕೆಯಾದ ಅಣುವಿಕಿರಣವು ಅಲ್ಲಿನ ಗಾಳಿ, ನೀರು, ಬೆಳೆ, ಆಹಾರ ಎಲ್ಲೆಲ್ಲೂ ಸೇರಿಕೊಂಡಿದೆ. ೧೯೪೫ರ ಹಿರೋಶಿಮಾ ನಾಗಾಸಾಕಿಯ ಬಾಂಬ್ ದಾಳಿ ಗೊತ್ತಲ್ಲ, ಅದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಪ್ರಮಾಣದ ಜಲಜನಕವು ಈ ದುರಂತದಲ್ಲಿ ಬಿಡುಗಡೆಯಾಯಿತು.  ಈ ಅಣುಸ್ಥಾವರಗಳನ್ನು ಯಥಾಸ್ಥಿತಿಗೆ ತರಲು ಜಪಾನ್ ಸರಕಾರಕ್ಕೆ ಒಂಬತ್ತು ತಿಂಗಳುಗಳೇ ಬೇಕಾದವು. ನೂರು ಬಿಲಿಯ ಡಾಲರ್‌ಗಳನ್ನು (೫ ಲಕ್ಷ ಕೋಟಿ ರೂಪಾಯಿ) ಖರ್ಚು ಮಾಡಿ ಮುಂದಿನ ಮೂವತ್ತು ವರ್ಷಗಳ ಕಾಲ ಶ್ರಮಪಟ್ಟರಷ್ಟೇ ಇದನ್ನು ಸ್ವಚ್ಛಗೊಳಿಸಲು ಸಾಧ್ಯ.
ಅಣುಶಕ್ತಿಗೆ ಹಿನ್ನಡೆ
ಫುಕುಷಿಮಾ ದುರಂತದ ನಂತರ ಜರ್ಮನಿಯಂತೂ ಇನ್ನು ಹತ್ತು ವರ್ಷಗಳಲ್ಲಿ ತನ್ನೆಲ್ಲಾ ಪರಮಾಣು ಸ್ಥಾವರಗಳನ್ನು ಮುಚ್ಚಲು ನಿರ್ಧರಿಸಿದೆ. ಸ್ವಿಜರ್‌ಲ್ಯಾಂಡ್, ಸ್ಪೈನ್, ತೈವಾನ್, ಬೆಲ್ಜಿಯಂ, ಮೆಕ್ಸಿಕೋ ದೇಶಗಳು ತಮ್ಮ ಪರಮಾಣು ಶಕ್ತಿ ಯೋಜನೆಗಳನ್ನು ಮುಚ್ಚಲು ಅಥವಾ ಕ್ರಮೇಣವಾಗಿ ಕಡಿತಗೊಳಿಸಲು ನಿರ್ಧರಿಸಿವೆ.
ಭಾರತ?
ತಮಿಳುನಾಡಿನ ಕೂಡಂಕುಳಂನಲ್ಲಿ ಸ್ಥಾಪನೆಯಾಗುತ್ತಿರುವ ಪರಮಾಣು ಸ್ಥಾವರದ ಕೆಲಸವನ್ನು ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕೆಂದೇ ಅಲ್ಲಿ ಹೋರಾಟ ಮಾಡುತ್ತಿರುವ ಎಲ್ಲ ಸಂಸ್ಥೆಗಳೂ ವಿದೇಶಿ ಕುಮ್ಮಕ್ಕಿನಿಂದ ಕುತಂತ್ರ ನಡೆಸಿವೆ ಎಂದು ಪ್ರಧಾನಿ ಮನಮೋಹನ್ ಸಿಂಗ್‌ರವರೇ ಹೇಳಿದ್ದಾರೆ. ಈ ಸ್ಥಾವರವನ್ನು ರಶ್ಯಾ ದೇಶವೇ ತಂತ್ರಜ್ಞಾನ ಒದಗಿಸಿ ಸ್ಥಾಪಿಸುತ್ತಿದೆ.
ನಮ್ಮ ದೇಶದಲ್ಲಿ ಎಷ್ಟೇ ಹೆಣಗಾಡಿದರೂ ಪರಮಾಣು ಸ್ಥಾವರಗಳಿಂದ ೬೦ ಗಿಗಾವಾಟ್ ವಿದ್ಯುತ್ತನ್ನು ಮಾತ್ರ  ಉತ್ಪಾದಿಸಬಹುದು. ಆದರೆ ನವೀಕರಿಸಬಲ್ಲ ಗಾಳಿ ಗಿರಣಿಗಳು, ಜೈವಿಕ ಇಂಧನ, ಕಿರು ಜಲವಿದ್ಯುತ್ ಯೋಜನೆಗಳಿಂದಲೇ ೧೫೦ ಗಿಗಾವಾಟ್ ವಿದ್ಯುತ್ ಪಡೆಯಬಹುದು. ಸ್ವಲ್ಪ ಶ್ರಮಪಟ್ಟರೆ ಸೌರ ಶಕ್ತಿಯಿಂದಲೇ ೭೦೦ ಗಿಗಾವಾಟ್ ವಿದ್ಯುತ್ ಎತ್ತಬಹುದು. ವಿಷವೂ ಇಲ್ಲ, ಸಾವೂ ಇಲ್ಲ. ಇದು ಪರಿಸರ ವಾದಿಗಳ ಪ್ರತಿಪಾದನೆ. ಅದೆಲ್ಲ ಖರ್ಚು ವಿಪರೀತ, ಪರಮಾಣುವೇಪರಮ ಮಾರ್ಗ ಎಂದು ಸರ್ಕಾರ ಹೇಳುತ್ತದೆ.
ಫುಕುಷಿಮಾ ದುರಂತದ ಮೊದಲ ವರ್ಷದ ನೆನಪಿನಲ್ಲಾದರೂ ನಾವು ಒಂದು ಅಭಿಪ್ರಾಯ ತಾಳೋಣ. ಮನೆಯಲ್ಲಿ, ಕಚೇರಿಯಲ್ಲಿ ವಿದ್ಯುತ್ ಬಳಸುವ ಮುನ್ನ ಅದು ಬೇಕೆ ಎಂದು  ವಿವೇಚಿಸಿ ಬಳಸೋಣ.
ಅಷ್ಟರಮಟ್ಟಿಗೆ ನಾವು ದುರಂತಗಳನ್ನು ತಪ್ಪಿಸಬಹುದು.
——————

 
 
 
 

Share. Facebook Twitter Pinterest LinkedIn Tumblr Email
Previous Articleಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
Next Article ಒಳಗಣ್ಣು: ಮಿತ್ರಮಾಧ್ಯಮದಲ್ಲಿ ಟಿ ಎಸ್‌ ಶ್ರೀಧರ್‌ ಅಂಕಣ ಆರಂಭ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

3 Comments

  1. Venkatraman on April 26, 2012 10:42 am

    janatar mantar nanaguu ishtavaaytu.. chikkavaniddaga balavijnana odtidde.
    -Venkatraman Bhat

  2. RAMANATH GP MAIYA on May 6, 2012 8:16 pm

    Well, Japan has informally decided to move out of Nuclear Energy and the day marks a new beginning in its energy generation and consumption pattern. Though the last reactor has been temporarily offline, its policies require stringent steps to get back to the generation mode. I hope Japan does not come back and Germany has already decided to move out. The message is clear and many nations have decided enough is enough. But when would wisdom dawn upon us is a million dollar question?????

  3. Deepakraj Sharma on June 16, 2012 2:19 pm

    Bahala vicharayogya, anveshanatmaka baraha, very thoughtful, effective.

ಮಾಹಿತಿ / ಲೇಖನ, ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಆಪ್ ಅಂದ್ರೆ ಲೈಫಲ್ಲ, ಗ್ಯಾಜೆಟ್ ಅಂದ್ರೆ ಗುರು ಅಲ್ಲ; ಫೇಸ್ಬುಕ್ ಅಂದ್ರೆ ಕ್ರಾಂತಿ ಅಲ್ಲ!
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಒಳಗಣ್ಣು: ‘ವಿಕಲಚೇತನ’ ಪದದ ಬಳಕೆ ಎಷ್ಟು ಸರಿ…..
  • ಶುಕ್ರ ಸಂಕ್ರಮ: ಪುಸ್ತಕ ಓದಿ
  • Shankar Sharma: Feedback on National Electricity Plan on Generation – 12th & 13th Plan periods
  • Copyright Law Amendments: what it gives and what it does not give print impaired persons
  • ಒಳಗಣ್ಣು: ೨೦೧೧ ರ ನನ್ನ ಹಿನ್ನೋಟ
  • ಒಳಗಣ್ಣು: ಮಿತ್ರಮಾಧ್ಯಮದಲ್ಲಿ ಟಿ ಎಸ್‌ ಶ್ರೀಧರ್‌ ಅಂಕಣ ಆರಂಭ
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಿಂದ ಲಾಭವಿದೆಯೆ?
  • Where are farm hands when you need them?
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • An effective Climate Action Plan for Karnataka
  • Nothing Special about Special Economic Zones (SEZs)
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • SUPREME COURT BANS MINING IN BELLARY DISTRICT
  • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.