Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಬರಲಿವೆ ಕೀಟಖಾದ್ಯ!
ಲೇಖನಗಳು

ಬರಲಿವೆ ಕೀಟಖಾದ್ಯ!

ಬೇಳೂರು ಸುದರ್ಶನBy ಬೇಳೂರು ಸುದರ್ಶನAugust 22, 2016Updated:May 19, 2025No Comments7 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನೀವು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರಸಿದ್ಧ ಹೋಟೆಲಿಗೆ ನುಗ್ಗಿದ್ದೀರಿ. ಮೂಗಿನೊಳಗೆ ಎಂಥದ್ದೋ ವಾಸನೆ. ಅದು ಯಾವುದೋ ವಿಶೇಷ ಆಹಾರದ ಘಮವೇ ಇರಬೇಕು ಎಂದು ನಿರ್ಣಯಿಸುತ್ತೀರಿ. ಹೊರಗೆ ಮಳೆ. ಒಳಗೆ ಹಸಿವಿನ ದಾಂದಲೆ. ಖಾಲಿಯಿದ್ದ ಖುರ್ಚಿಯಲ್ಲಿ ಆಸೀನರಾಗುತ್ತೀರಿ. ಹೋಟೆಲಿನ ನಗುಮುಖದ ಸಿಬ್ಬಂದಿ ಬಂದು ಮೆನ್ಯು ಕೊಡುತ್ತಾನೆ. ಆತುರಾತುರದಿಂದ ಅದನ್ನು ತೆರೆದರೆ….

ಇಡೀ ಮೆನ್ಯು ತುಂಬಾ ಹುಳಗಳ ಚಿತ್ರಗಳಿವೆ! ಪಿಂಗಾಣಿ ತಟ್ಟೆಗಳಲ್ಲಿ, ಬೋಗುಣಿಗಳಲ್ಲಿ ಎಲ್ಲೆಲ್ಲೂ ತರಾವರಿ ಹುಳ – ಹುಪ್ಪಟೆಗಳ ವರ್ಣಮಯ ನೋಟಗಳಿವೆ. ಬೆಲೆಯೂ ಅಂಥ ದುಬಾರಿಯಾಗಿ ಕಾಣಿಸುವುದಿಲ್ಲ. ಕೋಲಿಯೋಪ್ಟೆರಾ ಕುಟುಂಬದ ಜೀರುಂಡೆಗಳು, ಆರ್ಥೋಪ್ಟೆರಾ ಕುಟುಂಬದ ಮಿಡತೆಗಳು, ಹೆಮಿಪ್ಟೆರಾ ಕುಟುಂಬದ ಟ್ರೂ ಬಗ್‌ಗಳು, ಹೈಮೆನೋಪ್ಟೆರಾ ಕುಟುಂಬದ ಜೇನು, ಇರುವೆಗಳು, ಒಡೊಂಟಾ ಕುಟುಂಬದ ಪೀಟಗಳು, – ಅಥವಾ ವಿದೇಶಿ ಹುಳಗಳ ವಿಶೇಷ ಪದಾರ್ಥಗಳು… ಒಂದೆ, ಎರಡೆ,

ಇದೇನು `ದಿ ಮ್ಯಾಟ್ರಿಕ್ಸ್’ ಸಿನೆಮಾದಲ್ಲಿ ನಾಯಕ ಕಾನು ರೀವ್ಸ್‌ನ ಹೊಟ್ಟೆಯೊಳಗೆ ಕನಸಿನಲ್ಲಿ ಹೊಕ್ಕರೂ ನಿಜವಾದ ಎಲೆಕ್ಟ್ರಾನಿಕ್ ಹುಳದ ಕಥೆಯಲ್ಲ. ಕೆಲವೇ ದಶಕಗಳ ನಂತರದ ನೀವು ಹೋಟೆಲಿಗೆ ಹೋದರೆ ಈ ದೃಶ್ಯವಂತೂ ಖಂಡಿತ ವಾಸ್ತವವೇ!

ಈಗಾಗಲೇ ೨೦೦ ಕೋಟಿ ಜನ ತಿಂತಿದಾರೆ!

ಇಷ್ಟಾಗಿಯೂ ನೀವು ಈ ಆಹಾರಕ್ಕೆ ಹೊಸಬರು ಎಂಬುದನ್ನು ನೆನಪಿಡಿ! ಈಗಾಗಲೇ ಜಗತ್ತಿನ ೨೦೦ ಕೋಟಿ ಜನರು ಒಂದಲ್ಲ ಒಂದು ಬಗೆಯ ಕೀಟ, ಹುಳ, ಹುಪ್ಪಟೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡೇ ಇದ್ದಾರೆ. ಅವರ ಈ ಆಹಾರ ವ್ಯವಸ್ಥೆಯು `ಯೋಚಿಸಿ, ಸೇವಿಸಿ, ಉಳಿಸಿ’ ಎಂಬ ಈ ವರ್ಷದ ವಿಶ್ವ ಪರಿಸರ ದಿನದ ಘೋಷಣೆಗೆ ಅನುಗುಣವಾಗಿಯೇ ಇದೆ. ಏಕೆಂದರೆ `ಹುಳಾಹಾರ’ವು ಪೌಷ್ಟಿಕ, ಪರ್ಯಾಯ ಮತ್ತು ಪರಿಸರ ಸ್ನೇಹಿ. ಜೀರುಂಡೆ (ಕ್ಯಾಟರ್‌ಪಿಲ್ಲರ್), ದುಂಬಿ(ಬೀಟಲ್), ಕಣಜ(ವಾಸ್ಪ್), ಇರುವೆ, ಮಿಡತೆ (ಗ್ರಾಸ್‌ಹಾಪರ್), ಶಲಭ (ಲೊಕಸ್ಟ್), ಚಿಮ್ಮಂಡೆ(ಕ್ರಿಕೆಟ್), ಗೆದ್ದಲು ಹುಳ, ಕೊಡತಿ ಹುಳು (ಡ್ರಾಗನ್‌ಫ್ಲೈ) – ಇವು ಈ ಹೊತ್ತಿನಲ್ಲಿ ವಿಶ್ವದ ಹಲವು ಭಾಗಗಳಲ್ಲಿ ಆಹಾರದಲ್ಲಿ ಸೇರಿಹೋಗಿವೆ; ಕಣ್ತಪ್ಪಿ ಅಲ್ಲ, ನಿಜವಾಗಿ. ಮಾಂಸಾಹಾರದ ಹಾಗೆಯೇ ಕೀಟಗಳು ಪ್ರೋಟೀನ್ ಸತ್ವದ ಪ್ರಮುಖ ಮೂಲ ಎಂಬುದೀಗ ಸಂಶೋಧನೆಗಳಿಂದ ಖಚಿತವಾಗಿದೆ. ಡಚ್ ಸರ್ಕಾರವು ಈ ಕುರಿತು ಸಂಶೋಧನೆ ಮಾಡಲು ಎಂಟು ಕೋಟಿ ರೂ.ಗಳನ್ನು ನೀಡಿದೆ. `ಕೀಟತೋಟ’ಗಳ ನಿರ್ಮಾಣದ ಕುರಿತಂತೆ ಕಾನೂನು ರಚಿಸಲು ಮುಂದಾಗಿದೆ.

keeta 1

ವಿಶ್ವಸಂಸ್ಥೆ ವರದಿ ಹೇಳಿದ್ದೇನು?

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು (ಎಫ್‌ಎಓ) ಈಗಷ್ಟೇ ಒಂದು ಸುದೀರ್ಘ ವರದಿಯನ್ನು ಪ್ರಕಟಿಸಿದೆ. ೨೦೦ ಪುಟಗಳ ಈ ವರದಿಯಲ್ಲಿ ಜನರಿಗೆ, ರಾಸುಗಳಿಗೆ ಮತ್ತು ಸಾಕುಪ್ರಾಣಿಗಳಿಗೆ ಹಲವು ಬಗೆಯ ಹುಳಹುಪ್ಪಟೆಗಳನ್ನು ಶಿಫಾರಸು ಮಾಡಲಾಗಿದೆ. ಕೋಳಿ, ಹಂದಿ, ಎಮ್ಮೆ-ಕೋಣ-ಹಸು, ಮೀನು, ಮಾಂಸಕ್ಕೆ ಹೋಲಿಸಿದರೆ ಈ ಹುಳಾಹಾರವು ಹೆಚ್ಚು ಪುಷ್ಟಿದಾಯಕ; ಅದರಲ್ಲೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಲಕ್ಷಗಟ್ಟಳೆ ಮಕ್ಕಳಿಗೆ ಇದು ಅತ್ಯುತ್ತಮ ಆಹಾರವಾಗಬಲ್ಲದು ಎಂಬುದು ವಿಶ್ವಸಂಸ್ಥೆಯ ದೃಢ ನಂಬಿಕೆ. ಆಹಾರದ ಸಮಸ್ಯೆಯನ್ನು ನೀಗಲು ಜನರು ಹೆಚ್ಚು ಹೆಚ್ಚು ಕೀಟಗಳನ್ನೇ ತಿನ್ನಬೇಕು ಎಂಬುದು ವಿಶ್ವಸಂಸ್ಥೆಯ ಖಚಿತ ಅಭಿಮತ.

ಈ ಕೀಟಗಳು ಸುಣ್ಣ, ತಾಮ್ರ, ಕಬ್ಬಿಣ, ಮ್ಯಾಗ್ನೀಶಿಯಂ, ಮ್ಯಾಂಗನೀಸ್, ರಂಜಕ, ಸೆಲೆನಿಯಂ ಮತ್ತು ಝಿಂಕ್ ಖನಿಜಗಳನ್ನು ಹೊಂದಿದೆ. ಇವೆಲ್ಲವೂ ಶೀತರಕ್ತದ ಕೀಟಗಳಾದ್ದರಿಂದ ಇವುಗಳನ್ನು ಖಾದ್ಯ ಮಾಂಸವಾಗಿ ಪರಿವರ್ತಿಸುವುದು ತುಂಬಾ ಸುಲಭ ಎನ್ನುವುದು ಈ ವರದಿಯು ಪ್ರತಿಪಾದಿಸುವ ಇನ್ನೊಂದು ಅಂಶ. ಇನ್ನು ಈ ಕೀಟಗಳಿಂದ ಹಸಿರುಮನೆ ಅನಿಲ ಉತ್ಪಾದನೆಯೂ ತೀರಾ ಕಡಿಮೆ. ಇವುಗಳು ತ್ಯಾಜ್ಯ, ಕಾಂಪೋಸ್ಟ್‌ಗಳನ್ನು ತಿಂದೇ ಬೆಳೆಯುತ್ತವೆ. ಆದ್ದರಿಂದ ಪರಿಸರಕ್ಕೆ ಈ ಕೀಟಗಳಿಂದ ಅನುಕೂಲವೇ ಹೆಚ್ಚು. ಹಾನಿ ಕಡಿಮೆ ಎಂಬುದು ವರದಿಯ ಅಂದಾಜು.

`ಕೀಟಗಳನ್ನು ಮನುಕುಲದ ಹಲವು ಸಮುದಾಯಗಳು ಬಳಸುತ್ತಲೇ ಬಂದಿವೆ. ಆದರೆ ಕೆಲವೆಡೆ ಕೀಟಗಳ ಬಳಕೆಯ ಬಗ್ಗೆ ಅಸಹ್ಯ ಭಾವನೆ ಇದೆ. ಇದು ತಪ್ಪಬೇಕು’ ಎನ್ನುತ್ತಾರೆ ಈ ವರದಿಯನ್ನು ರೂಪಿಸಿದ ಎಡ್ವರ್ಡೋ ರೋಜಾಸ್ – ಬ್ರಿಯಾಲೆಸ್ ಮತ್ತು ಅರ್ನ್ಸ್ಟ್ ವಾನ್ ಡೆನ್ ಎಂಡ್. `ಈ ಕೀಟಗಳು ಸಾಮಾನ್ಯವಾಗಿ ಕಾಡುಗಳಲ್ಲೇ ಬೆಳೆಯುತ್ತವೆ; ಆದರೆ ಇವುಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸುವ ಕುರಿತು ಸಂಶೋಧನೆಗಳು ಹಲವೆಡೆ ಆರಂಭವಾಗಿವೆ’ ಎಂದು ಇವರು ತಿಳಿಸುತ್ತಾರೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನದ ನೆರವಿನೊಂದಿಗೆ ಹುಳಾಹಾರವನ್ನು ವಾಸ್ತವವಾಗಿಸಬಹುದು ಎಂಬುದು ಈ ಲೇಖಕರ ವಿಶ್ವಾಸ.

keeta 3

೨೦೫೦ರ ಹೊತ್ತಿಗೆ ನಮ್ಮ ಆಹಾರದ ಉತ್ಪಾದನೆಯು ಇಮ್ಮಡಿಯಾಗಲೇಬೇಕಿದೆ. ಆದರೆ ಇರುವ ಭೂಮಿಯ ಪ್ರಮಾಣ, ಕೃಷಿಗೆ ಬಳಸಬಹುದಾದ ಪ್ರದೇಶದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೇ ಕ್ಷೀಣ. ಸಮುದ್ರ ಮೀನುಗಾರಿಕೆಯೂ ಅತಿಯಾಗಿದ್ದು ಮೀನು ಬೆಳೆಯ ಗತಿ ಕುಗ್ಗಿದೆ. ಈಗಲೇ ಜಗತ್ತಿನಲ್ಲಿ ಒಂದು ಕೋಟಿ ಜನ ತೀವ್ರ ಹಸಿವೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಇವತ್ತು ನಾವು ತಿನ್ನುತ್ತಿರುವುದೇನು, ನಾಳೆ ನಾವು ತಿನ್ನಬೇಕಾಗಿರುವುದೇನು – ಎಲ್ಲವನ್ನೂ ಮರುವಿಮರ್ಶೆ ಮಾಡಲೇಬೇಕಿದೆ ಎನ್ನುತ್ತದೆ ಈ ವರದಿ.

ಈ ವರದಿಯ ಲೇಖಕರಿಬ್ಬರೂ ನೆದರ್‌ಲ್ಯಾಂಡ್ ದೇಶದ ವ್ಯಾಜಿಂಜೆನ್ ವಿಶ್ವವಿದ್ಯಾನಿಲಯದ ಸಂಶೋಧಕರು. ಆಹಾರ – ಕೃಷಿ ಸಂಘಟನೆಯ ಅರಣ್ಯ ವಿಭಾಗದ ಕೋರಿಕೆಯ ಮೇರೆಗೆ ಸಂಶೋಧನೆ ಕೈಗೊಂಡ ಇವರು ಈ ವಿಶಿಷ್ಟ ವರದಿಯನ್ನು ಸಿದ್ಧಪಡಿಸಿದ್ದಾರೆ. ಕೃಷಿಕರು, ಮಾಧ್ಯಮಗಳು, ಸಾರ್ವಜನಿಕರು – ಎಲ್ಲರೂ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಆದ್ಯತೆ ನೀಡಬೇಕು ಎಂದು ಈ ಲೇಖಕರು ತಮ್ಮ ಮುನ್ನುಡಿಯಲ್ಲಿ ವಿನಂತಿಸಿಕೊಂಡಿದ್ದಾರೆ. `ಕರ್ನಾಟಕ ಪರಿಸರ ವಾಹಿನಿ’ಯಲ್ಲಿ ಪ್ರಕಟವಾಗಿರುವ ಈ ಲೇಖನವು ಕನ್ನಡದಲ್ಲೇ ಈ ಕುರಿತ ವಿಶೇಷ ನುಡಿಚಿತ್ರ ಎಂಬುದು ಉಲ್ಲೇಖನೀಯ.

keeta 2

keeta 4

ಈ ಲೇಖಕರಿಗಿಂತ ಮುನ್ನ ಜೀನ್ ಆರ್ ಡಿಫೋಲಿಯಾರ್ಟ್ ಎಂಬ ವಿಜ್ಞಾನಿ ಹುಳಾಹಾರದ ಬಗ್ಗೆ ವಿಶೇಷ ಸಂಶೋಧನೆ ನಡೆಸಿದ್ದರು. ಆಹಾರ ಕೀಟಗಳ ಬಗ್ಗೆ ಅವರು ಒಂದು ವಾರ್ತಾಪತ್ರವನ್ನೂ ಪ್ರಕಟಿಸುತ್ತಿದ್ದರು. ಅವರ ನೆನಪಿಗೆ ಈ ಹೊಸ ವರದಿಯನ್ನು ಅರ್ಪಿಸಲಾಗಿದೆ.

ತಿನ್ನಲು ಯೋಗ್ಯ: ೧೯೦೦ ಬಗೆಯ ಕೀಟ

ಸುಮಾರು ೧೯೦೦ಕ್ಕಿಂತ ಹೆಚ್ಚು ಬಗೆಯ ಕೀಟಗಳು ಆಹಾರವಾಗಿ ಬಳಕೆಯಾಗುತ್ತಿವೆ. ಹಾಗೆ ನೋಡಿದರೆ ಕೀಟಗಳು ಮನುಕುಲಕ್ಕೆ ಮಾಡುತ್ತಿರುವ ಉಪಕಾರವು ವರ್ಣಿಸಲು ಆಗದಷ್ಟು ವಿಸ್ತಾರವಾಗಿದೆ. ಭಾರತೀಯ ಸನ್ನಿವೇಶದಲ್ಲಿ ಜೇನುತುಪ್ಪ, ರೇಷ್ಮೆ ಸೀರೆ – ಎರಡೇ ಉದಾಹರಣೆಗಳು ಸಾಕಲ್ಲವೆ? ಆಯುರ್ವೇದದಲ್ಲಿ ಜೇನುತುಪ್ಪ, ಸಾಂಪ್ರದಾಯಿಕ ಆಚರಣೆಗಳನ್ನು ರೇಷ್ಮೆ ಸೀರೆಗಳು ಬಳಕೆಯಾಗುತ್ತಿವೆ ತಾನೆ? ಕೀಟಗಳಿರದಿದ್ದರೆ ಇವೆರಡೂ ಉತ್ಪನ್ನಗಳು ಇರುತ್ತಿರಲಿಲ್ಲ. ಇನ್ನು ಪರಾಗಸ್ಪರ್ಶ, ಜೈವಿಕ ಪರಿವರ್ತನೆ, ಹಾನಿಕಾರಕ ಕೀಟ ನಿಯಂತ್ರಣ, – ಹೀಗೆ ಹಲವು ಬಗೆಗಳಲ್ಲಿ ಕೀಟಗಳು ಮಾನವನಿಗೆ ಉಪಕಾರಿಯಾಗಿವೆ.

ಜಗತ್ತಿನಲ್ಲಿ ಈಗ ಆಹಾರವಾಗಿ ಬಳಕೆಯಾಗುತ್ತಿರುವ ಕೀಟಗಳಲ್ಲಿ ದುಂಬಿಗಳ ಪಾಲು ಹೆಚ್ಚು (ಶೇ.೩೧). ಅದಾದ ಮೇಲೆ ಜೀರುಂಡೆಗಳು ಶೇ. ೧೮ರಷ್ಟು ಬಳಕೆಯಲ್ಲಿವೆ. ಮೇಲೆ ಉಲ್ಲೇಖಿಸಿದ ಎಲ್ಲ ಬಗೆಯ ಕೀಟಗಳೂ ಆಹಾರವಾಗಿವೆ. ಹೀಗೆ ಹುಳಗಳನ್ನು ತಿನ್ನುವ ಸಂಸ್ಕೃತಿಗೆ ಎಂಟೋಮೋಫಾಗಿ ಎಂಬ ಹೆಸರೂ ಇದೆ. ಕೀಟಗಳನ್ನು ತಿನ್ನುವುದೆಂದರೆ ಅನಾಗರಿಕ ಮನುಷ್ಯರ ಪ್ರವೃತ್ತಿ ಎಂಬ ಭಾವವು ಹಲವರಲ್ಲಿದೆ. ಇದರಿಂದಾಗಿ ಕೃಷಿ ರಂಗದಲ್ಲಿ ಕೀಟಗಳ ಕುರಿತ ಸಂಶೋಧನೆಗಳೇ ಹೆಚ್ಚಾಗಿ ನಡೆಯಲಿಲ್ಲ. ಈಗ? ಹುಳಾಹಾರದ ವಿಷಯವನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ. ಕೀಟಕೃಷಿ, ಕೀಟತೋಟ – ಇವೆಲ್ಲ ಈಗಷ್ಟೇ ಮೂಡಿರುವ ಹೊಸ ಚಿಂತನೆಗಳು.

ಕೀಟಗಳೇ ಆಹಾರವಾದರೆ ಅವುಗಳ ಉತ್ಪಾದನೆಯ ಖರ್ಚುವೆಚ್ಚಗಳೇನು ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಹುಳಾಹಾರದ ಶಿಫಾರಸಿಗೆ ಇರುವ ಕಾರಣಗಳಲ್ಲಿ ಹುಳಗಳು ಬಳಸುವ ಕಚ್ಚಾ ಪದಾರ್ಥಗಳ ಅತಿಕಡಿಮೆ ಪ್ರಮಾಣ ಪ್ರಮುಖವಾಗಿದೆ. ಉದಾಹರಣೆಗೆ ಒಂದು ಕಿಲೋ ಪ್ರಮಾಣದ ಚಿಮ್ಮಂಡೆ ಹುಳಗಳು ಒಟ್ಟು ಬಳಸುವ ಆಹಾರದ ಪ್ರಮಾಣ ಕೇವಲ ೨ ಕಿಲೋ. ಅಂದರೆ ಚಿಮ್ಮಂಡೆಗಳು ತಿನ್ನುವ ಅರ್ಧಕ್ಕರ್ಧ ಆಹಾರವನ್ನು ದೇಹದ ತೂಕವಾಗಿ ಪರಿವರ್ತಿಸುತ್ತವೆ. ಕೇವಲ ಮನುಷ್ಯರಿಗಷ್ಟೇ ಅಲ್ಲ, ರಾಸುಗಳಿಗೆ ಮತ್ತು ಸಾಕುಪ್ರಾಣಿಗಳಿಗೂ ಕೀಟಗಳನ್ನು ಆಹಾರವಾಗಿ ನೀಡಬಹುದು ಎಂಬುದನ್ನು ಇಲ್ಲಿ ಗಮನಿಸಬೇಕು.

keeta 6

ಇಲ್ಲೂ ಬೇಕು ನೀತಿ ನಿಯಮ !

ಕೀಟಗಳನ್ನು ಆಹಾರವಾಗಿ ಬಳಸುವ ಮುನ್ನ ಇತರೆ ಆಹಾರ ಪದಾರ್ಥಗಳ ಬಗ್ಗೆ ಪಾಲಿಸುವ ನೀತಿ ನಿಯಮಗಳನ್ನೇ ಇಲ್ಲಿಯೂ ಪಾಲಿಸಬೇಕು ಎಂದು ವರದಿಯು ಹೇಳಿದೆ. ಕೀಟಗಳಲ್ಲಿರುವ ಸೂಕ್ಷ್ಮಜೀವಿಗಳು, ಕೀಟಗಳ ವಿಷಪ್ರಮಾಣ, ಜೀರ್ಣ ಸಾಧ್ಯತೆ- ಎಲ್ಲವನ್ನೂ ಗಮನಿಸಬೇಕು.

ಕೀಟಗಳ ಬಳಕೆಯ ಇತಿಹಾಸ, ಕೀಟಗಳು ಮನುಕುಲಕ್ಕೆ ಹೇಗೆ ಉಪಕಾರಿಯಾಗಿವೆ, ಮತ ಸಂಪ್ರದಾಯಗಳು ಕೀಟ ಆಹಾರ ಪದ್ಧತಿಯ ಬಗ್ಗೆ ಏನು ಹೇಳಿವೆ, ಇತಿಹಾಸದಲ್ಲಿ ಏನೆಲ್ಲ ಘಟನೆಗಳು ದಾಖಲಾಗಿವೆ, ಕೀಟಗಳನ್ನು ವಿವಿಧ ಸಮುದಾಯಗಳು ಹೇಗೆ ಬಳಸುತ್ತಿವೆ ಎಂಬೆಲ್ಲ ವಿವರಗಳನ್ನು ಈ ವರದಿಯಲ್ಲಿ ಕಾಣಬಹುದು. ಉದಾಹರಣೆಗೆ ೧೮೭೩ ಮತ್ತು ೧೮೭೭ರಲ್ಲಿ ಅಮೆರಿಕಾದಲ್ಲಿ ಮಿಡತೆಗಳು ಕೋಟಿಗಟ್ಟಳೆ ಸಂಖ್ಯೆಯಲ್ಲಿ ಕೃಷಿಪ್ರದೇಶಗಳನ್ನೆಲ್ಲ ತಿಂದುಹಾಕಿದವು. ಆಗ ಭೀಕರ ಕ್ಷಾಮ ತಲೆದೋರಿತು. ಜನರು ಸಸ್ಯಜನ್ಯ ಆಹಾರದ ಬದಲು ಈ ಮಿಡತೆಗಳನ್ನೇ ತಿನ್ನಬಹುದಿತ್ತು; ಏಕೆಂದರೆ ಈ ಮಿಡತೆಗಳ ಒಟ್ಟು ತೂಕ ಸುಮಾರು ೨೭೫ ಕೋಟಿ ಟನ್ ಮೀರಿತ್ತು! ಅದೊಂದು ಗಿನ್ನೆಸ್ ದಾಖಲೆ.

ಕೀಟಗಳನ್ನೂ ಅತಿಯಾಗಿ ತಿನ್ನುವುದು, ಹಲವು ಕೀಟಗಳ ನಾಶದಿಂದ ಪಾರಿಸರಿಕ ಸಂತುಲನೆಗೆ ಧಕ್ಕೆ ಒದಗುವುದು, ಕಾಡುನಾಶ, – ಮುಂತಾದ ಸಮಸ್ಯೆಗಳೂ ಹುಟ್ಟಿಕೊಳ್ಳುವ ಸಾಧ್ಯತೆಯನ್ನು ಈ ವರದಿ ಅಲ್ಲಗಳೆದಿಲ್ಲ.

ಇದೇನು ಸಸ್ಯಾಹಾರವನ್ನು ಬಿಟ್ಟು ಎಲ್ಲರೂ ಹುಳ-ಹುಪ್ಪಟೆ ತಿನ್ನಿರಿ ಎಂದು ಸೂಚಿಸುವ ಲೇಖನವಲ್ಲ. ಆದರೆ ಮುಂದಿನ ದಿನಗಳಲ್ಲಿ ಮಾಂಸಾಹಾರಿಗಳು ಅನುಸರಿಸಲೇಬೇಕಾದ ಅನಿವಾರ್ಯ ಆಹಾರ ಪದ್ಧತಿಯ ಬಗ್ಗೆ ಬೆಳಕು ಚೆಲ್ಲುವ ಗಮನಾರ್ಹ ಮತ್ತು ವಾಸ್ತವಿಕ ವರದಿಯಷ್ಟೆ.

ಇನ್ನುಮುಂದೆ ಸಂಜೆಯ ನಿಮ್ಮ ಮನೆಯೊಳಗೆ ಯಾವುದಾದರೂ ಕೀಟ ಹಾರಾಡಿದರೆ, ಒಮ್ಮೆ ಈ ಲೇಖನ ನೆನಪು ಮಾಡಿಕೊಳ್ಳಿ!

keeta 5

ಆರೋಗ್ಯದ ಕಾರಣಗಳು

  • ಕೋಳಿ, ಹಂದಿ, ಎಮ್ಮೆ-ದನ ಮತ್ತು ಮೀನಿನ ಬದಲಿಗೆ ಕೀಟಗಳು ಆರೋಗ್ಯಕರ ಪೌಷ್ಟಿಕ ಪರ್ಯಾಯ ಆಹಾರವಾಗಿವೆ.
  • ಹಲವು ಕೀಟಗಳು ಗರಿಷ್ಠ ಪ್ರಮಾಣದ ಪ್ರೋಟೀನನ್ನು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಝಿಂಕ್ ಖನಿಜವನ್ನು ಹೊಂದಿವೆ.
  • ಈಗಾಗಲೇ ಕೀಟಾಹಾರವು ಹಲವೆಡೆ ಆಹಾರ ಸಂಪ್ರದಾಯದ ಭಾಗವಾಗಿದೆ.

ಪಾರಿಸರಿಕ ಕಾರಣಗಳು

  • ಹೆಚ್ಚಿನ ಕೀಟಗಳು ಉತ್ಪಾದಿಸುವ ಹಸಿರುಮನೆ ಅನಿಲದ ಪ್ರಮಾಣದ ತೀರಾ ಕಡಿಮೆ. ಗೆದ್ದಲು ಹುಳು ಮತ್ತು ಜಿರಲೆಗಳು ಮಾತ್ರವೇ ಮೀಥೇನ್ ಉತ್ಪಾದಿಸುತ್ತವೆ. ಅಮೋನಿಯಾ ವಿಸರ್ಜನೆಯೂ ಕಡಿಮೆ.
  • ಕೀಟಗಳನ್ನು ಬೆಳೆಯಲು ಭೂಪ್ರದೇಶ ಬೇಕಾಗಿಲ್ಲ. ಕೀಟಗಳಿಗೆ ಬೇಕಾದ ಆಹಾರವನ್ನು ಸಂಗ್ರಹಿಸಲು ಮತ್ತು ನೀಡಲು ಮಾತ್ರ ಜಾಗ ಬೇಕು.
  • ಕೀಟಗಳು ಶೀತರಕ್ತದ ಪ್ರಾಣಿಗಳಾದ್ದರಿಂದ ಅವುಗಳು ಅತಿ ಕಡಿಮೆ ಆಹಾರವನ್ನು ಬಳಸಿ ಹೆಚ್ಚಿನ ಪ್ರಮಾಣದ ಪ್ರೋಟೀನನ್ನು ಉತ್ಪಾದಿಸುತ್ತವೆ. ಪ್ರೋಟೀನ್ ಉತ್ಪಾದನೆಗಾಗಿ ಕೀಟಗಳು ಬಳಸುವ ಆಹಾರದ ಪ್ರಮಾಣವು ರಾಸುಗಳಿಗಿಂತ ೧೨ ಪಟ್ಟು ಕಡಿಮೆ, ಕುರಿಗಳಿಗಿಂತ ನಾಲ್ಕು ಪಟ್ಟು ಕಡಿಮೆ, ಹಂದಿಗಳಿಗಿಂತ ಆರ್ಧಕ್ಕರ್ಧ ಕಡಿಮೆ.
  • ಕೀಟಗಳನ್ನು ಸಾವಯವ ತ್ಯಾಜ್ಯಗಳ ಮೇಲೂ ಬೆಳೆಸಬಹುದು.

ಜೀವನ ನಿರ್ವಹಣೆಯ ಕಾರಣಗಳು

  • ಕೀಟಗಳನ್ನು ಬೆಳೆಯುವುದು / ಕೃಷಿ ಮಾಡುವುದು ಅತ್ಯಂತ ಕಡಿಮೆ ತಂತ್ರಜ್ಞಾನವನ್ನು ಬೇಡುವ ಕಡಿಮೆ ಹೂಡಿಕೆಯನ್ನು ಬಯಸುವ ವಿಧಾನ. ಇದರಿಂದ ಬಡ ವರ್ಗದವರು, ಮಹಿಳೆಯರು, ಭೂರಹಿತ ಕುಟುಂಬಗಳಿಗೆ ಅನುಕೂಲವಾಗಲಿದೆ.
  • ಕೀಟಕೃಷಿಯು ನಗರ ಮತ್ತು ಗ್ರಾಮೀಣ ಜನರಿಗೆ ಸಮಾನವಾದ ಅವಕಾಶಗಳನ್ನು ರೂಪಿಸುತ್ತದೆ.
  • ಕೀಟಕೃಷಿ ಉದ್ಯಮದ ಅನುಕೂಲಗಳು
  • ಕಡಿಮೆ ಜಾಗ ಸಾಕು
  • ಮಾನವನ ಆಹಾರ ಬಳಕೆಯ ಮೇಲೆ ಪರಿಣಾಮವಿಲ್ಲ
  • ಸಾಕಷ್ಟು ಬೇಡಿಕೆ ಇದೆ
  • ಗರಿಷ್ಠ ಸಂತಾನೋತ್ಪತ್ತಿ
  • ಕಡಿಮೆ ಅವಧಿಯಲ್ಲೇ ಹೆಚ್ಚು ವರಮಾನ
  • ಸಾಗಾಟ, ನಿರ್ವಹಣೆ ಸುಲಭ
  • ಬೆಳೆಸುವುದಕ್ಕೆ ಹೆಚ್ಚಿನ ತರಬೇತಿ ಬೇಕಾಗಿಲ್ಲ.

ಖಾದ್ಯ ಕೀಟದ ಕಿರುಸುದ್ದಿಗಳು

  • ಆಸ್ಟ್ರೇಲಿಯಾದ ಮೂಲನಿವಾಸಿಗಳು ಜೇನುತುಪ್ಪದಿಂದಲೇ ಸಕ್ಕರೆಯನ್ನು ಉತ್ಪಾದಿಸುತ್ತಾರೆ.
  • ಮೆಕ್ಸಿಕೋದ ಪೋಪೋಲೋಕಾ ಜನರು ಮಳೆಗಾಲದಲ್ಲಿ ಹಲವು ಬಗೆಯ ಕೀಟಗಳನ್ನು ಆಹಾರವಾಗಿ ಬಳಸುತ್ತಾರೆ.
  • ರೆಡ್ ಪಾಮ್ ವೀವಿಲ್ (ರಿಂಕೋಫೋರಸ್ ಫೆರ್ರುಜೀನಿಯಸ್) ಎಂಬ ಕೀಟವಂತೂ ಹಲವೊಮ್ಮೆ ವಿಪರೀತ ಪ್ರಮಾಣದಲ್ಲಿ ತೆಂಗಿನ ತೋಟಗಳನ್ನು ಆವರಿಸುತ್ತವೆ. ಇವುಗಳನ್ನು ತಿನ್ನುವುದೇ ಸೂಕ್ತವಾದ ಪರಿಹಾರ
  • ಕೀನ್ಯಾದಲ್ಲಿ ಸರಳ ದೀಪ ಹೊಂಚು ವಿಧಾನದ ಮೂಲಕ ಮಾಕ್ರೋಟರ್ಮಸ್ ಸುಭ್ಯಾಲೈನಸ್ ಎಂಬ ಗೆದ್ದಲನ್ನು ಸಂಗ್ರಹಿಸುವ ಪ್ರಯೋಗ ನಡೆದಿದೆ.
  • ಉಗಾಂಡದಲ್ಲಿ ಕೆಲವೊಮ್ಮೆ ಎರಡು ಮೂರು ದಿನಗಳ ಕಾಲ ವಿದ್ಯುತ್ ಸರಬರಾಜು ಇರುವುದಿಲ್ಲ. ಈ ಸಂದರ್ಭದಲ್ಲಿ ಅಲ್ಲಿ ಮಿಡತೆಗಳನ್ನು ಹಿಡಿಯುವುದೇ ಕಷ್ಟವಾಗಿದೆ. ಉಗಾಂಡದಲ್ಲಿ ಇಂಥ ಮಿಡತೆಗಳಿಗೆ ಭಾರೀ ಬೆಲೆ ಬಂದಿದೆ.
  • ಸ್ಟಾರ್‌ಬಕ್ಸ್ ಕಾಫಿ ಕಂಪನಿ ಗೊತ್ತಲ್ಲ? ಒಮ್ಮೆ ಅದು ತನ್ನ ಕಾಫಿಯ ನಸುಗೆಂಪು ಬಣ್ಣಕ್ಕೆ ಕಾಕ್‌ನೀಲ್ ದುಂಬಿಯ ರಸವೇ ಕಾರಣ ಎಂದು ಹೇಳಿ ವಿವಾದ ಎದ್ದಿತ್ತು.
  • ಮಾಲಿ ದೇಶದಲ್ಲಿ ಸಾಂಪ್ರದಾಯಿಕವಾಗಿ ಮಕ್ಕಳು ಮಿಡತೆಗಳನ್ನು ಹಿಡಿದು ತಿನ್ನುತ್ತಾರೆ. ಆದರೆ ಇಲ್ಲಿ ಕೀಟನಾಶಕ ಸಹಿತ ಕೃಷಿ ಮಾಡಬೇಕೆಂಬ ಸೂಚನೆ ಬಂದಮೇಲೆ ಶೇ. ೨೩ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದಿದೆ. ಈಗ ಕೀಟನಾಶಕಯುಕ್ತ ಮಿಡತೆಗಳನ್ನು ತಿನ್ನುವುದೂ ಕಷ್ಟವಾಗಿದೆ.
  • ಅರೇಬಿಯಾ ಮತ್ತು ಲಿಬ್ಯಾ ಪ್ರದೇಶದಲ್ಲಿ ವಾಸಿಸುವ ಅಲೆಮಾರಿಗಳು ಶತಮಾನಗಳ ಕಾಲದಿಂದ ಮಿಡತೆ ದಾಳಿಯಾದರೆ ಸಾಕು ಖುಷಿ ಪಡುತ್ತಾರೆ. ಆಗಲೇ ಬೇಯಿಸಿ ತಿನ್ನುವುದಲ್ಲದೆ ಅದನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳುತ್ತಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.
  • ಲಾವೋ ದೇಶದಲ್ಲಿ ೨೧ ಬಗೆಯ ಖಾದ್ಯ ಕೀಟಗಳನ್ನು ಸಂಗ್ರಹಿಸಿ ಸಂತೆಯಲ್ಲಿ ಮಾರುತ್ತಾರೆ. ಅದರಲ್ಲೂ ಇರುವೆ ಮೊಟ್ಟೆಗಳಿಗೆ ಭಾರೀ ಬೇಡಿಕೆ ಇದೆ.
  • ಬ್ರೆಝಿಲ್ ದೇಶವು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ೧೩೫ ಬಗೆಯ ಖಾದ್ಯ ಕೀಟಗಳನ್ನು ಹೊಂದಿದೆ.
  • ಮೆಕ್ಸಿಕೋದ ಮೊನಿಕಾ ಮಾರ್ಟಿನೆಜ್ ಎಂಬ ಕಲಾವಿದೆಯು ಕೀಟ ಖಾದ್ಯದ ಬಗ್ಗೆಯೇ ಕಲಾಕೃತಿಗಳನ್ನು ರಚಿಸಿ ಈ ಬಗ್ಗೆ ಜಾಗೃತಿ ಉಂಟುಮಾಡುತ್ತಿದ್ದಾರೆ. ಅವರಿಂದ ಪ್ರೇರಣೆ ಪಡೆದು ತಳ್ಳುಗಾಡಿಯಲ್ಲಿ ಬಗೆಬಗೆಯ ಕೀಟಗಳನ್ನು ಮಾರುವ ವ್ಯವಸ್ಥೆಯೂ ಆರಂಭವಾಗಿದೆ.
  • ವಿನ್‌ಫುಡ್ ಎಂಬ ಯೋಜನೆಯ ಮೂಲಕ ಕಾಂಬೋಡಿಯಾದಲ್ಲಿ ಅಕ್ಕಿ, ಮೀನು ಮತ್ತು ಜೇಡಗಳಿಂದ ಕೂಡಿದ ಶಿಶು ಆಹಾರವನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಕೀನ್ಯಾದಲ್ಲಿ ಜೋಳ, ಮೀನು ಮತ್ತು ಗೆದ್ದಲುಗಳಿರುವ ಆಹಾರ ಉತ್ಪಾದನೆಯಾಗುತ್ತಿದೆ. ಈ ಕುರಿತು ಇನ್ನೂ ಖಚಿತ ಮಾನದಂಡಗಳು ರೂಪುಗೊಳ್ಳಬೇಕಿದೆ.
  • ಕೀಟಗಳನ್ನು ಗಗನಯಾತ್ರಿಗಳ ಪ್ರಮುಖ ಪ್ರೋಟೀನ್ ಆಹಾರವಾಗಿ ಬಳಸಬಹುದಾಗಿದೆ.
  • ಪ್ರತಿ ವರ್ಷವೂ ನಿರ್ದಿಷ್ಟ ಕಾಲದಲ್ಲಿ ಸಾವಿರ ಕಿಮೀ ದೂರಕ್ಕೆ ವಲಸೆ ಹೋಗುವ ಬೊಗೊಂಗ್ ಪತಂಗಗಳು ಪೂರ್ವ ಆಸ್ಟ್ರೇಲಿಯಾದಲ್ಲಿ ಒಂದು ದೊಡ್ಡ ಸಮಸ್ಯೆ. ಆದರೆ ಈ ಹಿಂದೆ ದೇಸಿ ಆಸ್ಟ್ರೇಲಿಯನ್ನರು ಈ ಪತಂಗಗಳನ್ನು ಹಿಡಿದು ತಿನ್ನುತ್ತಿದ್ದರು. ಆದರೆ ಈ ಪತಂಗಗಳು ಅರ್ಸೆನಿಕ್ ವಿಷವನ್ನೂ ಸ್ವಲ್ಪ ಪ್ರಮಾಣದಲ್ಲಿ ಹೊಂದಿದ್ದವು ಎಂಬುದು ಈಗಿನ ಸಂಶೋಧನೆಗಳಿಂದ ತಿಳಿದಿದೆ.
  • ನ್ಯೂಗಿನಿಯಲ್ಲಿ ರೆಡ್ ಪಾಮ್ ವೀವಿಲ್ ಹುಳವು ಒಂದು ಪ್ರಮುಖ ಆಹಾರವಾಗಿದೆ.
  • ಕಾಂಬೋಡಿಯಾದಲ್ಲಿ ಹಲವರು ಜೇಡವನ್ನು ಮಾರಾಟ ಮಾಡಿ ದಿನಕ್ಕೆ ೧೦೦ ರೂ. ಸಂಪಾದಿಸುತ್ತಿದ್ದಾರೆ.
  • ಥಾಯ್‌ಲೆಂಡಿನಲ್ಲಿ ಖಾದ್ಯ ಕೀಟಗಳ ಸಗಟು ಮಾರುಕಟ್ಟೆಗಳೇ ಚಾಲ್ತಿಯಲ್ಲಿವೆ.

ಕೀಟಖಾದ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ

  • http://www.fao.org/forestry/edibleinsects/65425/en/
  • http://www.wageningenur.nl/en/Expertise-Services/Chair-groups/Plant-Sciences/Laboratory-of-Entomology/Edible-insects/Worldwide-species-list.htm

(ಕರ್ನಾಟಕ ಪರಿಸರ ವಾಹಿನಿಯ ೨೦೧೩ರ  ಜೂನ್‌ ಸಂಚಿಕೆಯಲ್ಲಿ ಬರೆದ ಈ ಲೇಖನ ಈಗಲೂ ಪ್ರಸ್ತುತ!)

Share. Facebook Twitter Pinterest LinkedIn Tumblr Email
Previous Articleಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
Next Article ಬನ್ನಿ, ಬದುಕೋಣ!
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.