Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
ಲೇಖನಗಳು

ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ

ಬೇಳೂರು ಸುದರ್ಶನBy ಬೇಳೂರು ಸುದರ್ಶನFebruary 26, 2017Updated:May 19, 2025No Comments8 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

೧೯೮೭ರಿಂದ ೨೦೦೭ರವರೆಗೆ ಹತ್ತಿರವಿದ್ದೂ ದೂರ ನಿಂತ ಕಟು ಅನುಭವ. ೨೦೦೭ರಿಂದ ನಿನ್ನೆವರೆಗೆ ಮಧುರ ನೆನಪುಗಳ ಸಾಲು. ಇಂಥ ಕಟುಮಧುರ ಸಹವಾಸದ ಭಾಗ್ಯವನ್ನು ಕೊಟ್ಟ ಶ್ರೀ ಮೈ ಚ ಜಯದೇವರು ಇನ್ನಿಲ್ಲ.

ಮೂವತ್ತು ವರ್ಷಗಳ ಹಿಂದೆ (೧೯೮೭ ಜುಲೈ) ಒಂದು ದಿನ ರಾಷ್ಟ್ರೋತ್ಥಾನ ಸಂಶೋಧನಾ ವೇದಿಯಲ್ಲಿ ಪತ್ರಿಕಾ ತುಣುಕುಗಳನ್ನು ಕತ್ತರಿಸಿ ವರ್ಗೀಕರಿಸಿ ಇಡುವ, ಗ್ರಂಥಾಲಯವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಿ ಕೆಲಸ ಕೊಟ್ಟವರು ಜಯದೇವ್‌. ಬದುಕು ಮೂರಾಬಟ್ಟೆಯಾಗಿ, ಉಣ್ಣಲು ಮೂರು ಕಾಸೂ ಇರದಿದ್ದ ಆ ದಿನಗಳಲ್ಲಿ ತಿಂಗಳಿಗೆ ೫೦೦ ರೂ. ಸಂಬಳ; ಓಡಾಡಲು ಬೈಸಿಕಲ್; ಮೂರು ಹೊತ್ತು ಊಟ, ತಿಂಡಿ; ಮಲಗಲು ಜಾಗ – ಇದೆಲ್ಲ ಸಿಕ್ಕಿದ್ದೇ ದೊಡ್ಡ ಭಾಗ್ಯ ಅನ್ನಿಸಿಬಿಟ್ಟಿತ್ತು. ಐದನೆಯ ಮಹಡಿಯಲ್ಲಿ ಒಬ್ಬನೇ ಕೂತು ಸಾವಿರಾರು ಪತ್ರಿಕಾ ತುಣುಕುಗಳನ್ನು ನನ್ನ ಮನಸ್ಸಿಗೆ ಬಂದಂತೆ ಆಯ್ದು ಕತ್ತರಿಸಿ, ಖಾಕಿ ಕಾಗದಕ್ಕೆ ಅಂಟಿಸಿ ವರ್ಗೀಕರಿಸಿ ಇಡತೊಡಗಿದೆ. ಜೊತೆಗೇ ಉತ್ಥಾನದ ಸಂಪಾದಕರು ವಹಿಸಿಕೊಟ್ಟ ವಿಜ್ಞಾನ ಲೇಖನಗಳನ್ನು ಬರೆಯತೊಡಗಿದೆ.

ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ದಿನಾಲೂ ಐದೂವರೆಗೆ ಪ್ರಾತಸ್ಮರಣೆಗೆ ಸಿದ್ಧವಾಗಬೇಕು ಎಂಬ ಕಠೋರ ನಿಯಮವನ್ನು ಪಾಲಿಸುವುದು ಕಷ್ಟವಾಗತೊಡಗಿತು. ಸೈಕಲ್‌ ಇದ್ದರೂ ಸಿನೆಮಾ ನೋಡಲು ಬಿಡದಿರುವುದು ಅಸಹನೆ ಹುಟ್ಟಿಸತೊಡಗಿತು. ೨೨ರ ಹರೆಯದ ಎಲ್ಲ ಸಿಟ್ಟು ಸೆಡವುಗಳು ನನ್ನೊಳಗೆ ಹೆಡೆಯಾಡುತ್ತಿದ್ದವು. ಸರಿ, ನೇರವಾಗಿ ಕೇಳಿಯೇ ಬಿಡೋಣ ಎಂದು ಅವರಲ್ಲಿಗೆ ಹೋದೆ. `ಪ್ರೆಸ್‌ ಕ್ಲಿಪಿಂಗ್‌ ಮಾಡೋದು ಮುಗಿದಿದೆಯಾ? ಅದನ್ನು ಮುಗಿಸದೇ ಸಿನೆಮಾಗೆ ಹೋದರೆ ಹೇಗೆ?’ ಎಂದು ಜಯದೇವ್‌ ಪ್ರಶ್ನಿಸಿದರು. `ಈ ಪ್ರೆಸ್‌ ಕ್ಲಿಪಿಂಗ್‌ ಮುಗಿಯೋದೇ ಇಲ್ಲ. ಹಾಗಂತ ನಾನು ಸಿನೆಮಾ ನೋಡದೇ ಇರಕ್ಕಾಗಲ್ಲ’ ಎಂದು ವಾದಿಸಿದೆ. ಬೆಳಗ್ಗೆ ಎದ್ದು ಬರಲಾಗುವುದಿಲ್ಲ ಎಂದು ಅವರಿಗೆ ಶಾಕ್‌ ಆಗುವಂತೆಯೇ ಘೋಷಿಸಿದೆ. ಅವರು ಮತ್ತೇನೂ ಹೇಳಲಿಲ್ಲ.

ನಾನು ರೆಬೆಲ್‌ ಮಾದರಿಯಲ್ಲಿ ಇರತೊಡಗಿದೆ. ಬೆಳಗ್ಗೆ ಏಳು ಗಂಟೆಗೆ ಎದ್ದು ಆರಾಮಾಗಿ ಬಿಸಿನೀರು ಸ್ನಾನ ಮಾಡಿ ನಂಜುಂಡಯ್ಯ ಮಾಡಿದ ತಿಂಡಿ ಕತ್ತರಿಸುವುದು. ಎಂಟೂವರೆಗೆಲ್ಲ ಕೆಲಸಕ್ಕೆ ಹಾಜರು. ಸಂಜೆ ಹಾಗೇ ಸೈಕಲ್ಲಿನಲ್ಲಿ ಎಬಿವಿಪಿ ಆಫೀಸಿಗೋ, ಸಿನೆಮಾಗೋ ( ನನಗಿದ್ದಿದ್ದು ಅವೆರಡೇ ಆಯ್ಕೆಗಳು!) ಹೊರಡುವುದು. ರಾತ್ರಿ ಎಲ್ಲಾದರೂ ಚಿತ್ರಾನ್ನ ತಿಂದು ಬಂದು ಮಲಗುವುದು..

ಈ ಮಧ್ಯೆ ಎರಡು ತಿಂಗಳುಗಳ ಕಾಲ ಶ್ರೀ ಹೊ ವೆ ಶೇಷಾದ್ರಿಯವರೂ ಐದನೇ ಮಹಡಿಯ ಒಂದು ವಿಶಾಲ ಕೊಠಡಿಗೆ ಬಂದು ಇರಬೇಕೆ? `ಎ ವಿಜನ್‌ ಇನ್‌ ಆಕ್ಷನ್‌’ ಪುಸ್ತಕವನ್ನು ಬರೆಯಲು ಅವರು ಅಲ್ಲಿಗೆ ಬಂದಿದ್ದರು. ಮೊದಲೇನೋ ನಾನೇ ಅವರನ್ನು ನೋಡಿಕೊಳ್ಳಬೇಕೆಂದು ಹೇಳಲಾಗಿತ್ತು. ಆದರೆ ಒಂದು ವಾರದ ನಂತರ ಶೇಷಾದ್ರಿಯವರೇ ನನ್ನನ್ನು ನೋಡಿಕೊಳ್ಳತೊಡಗಿದರು. ನನಗೆ ಎಚ್ಚರವಾಗದಂತೆ ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ಸ್ನಾನ ಮುಗಿಸಿ, ಶಾಲು ಹೊದ್ದು ಶಾಖೆಗೆ ಸಿದ್ಧರಾಗಿ , ಹಾದಿಗೆ ಅಡ್ಡಲಾಗಿ ಹಾಯಾಗಿ ಮಲಗಿದ್ದ ನನ್ನನ್ನು ಹಾರಿಕೊಂಡು ಹೋಗುತ್ತಿದ್ದರು. ಎಂದೂ ಅವರು ನನ್ನನ್ನು ಎಬ್ಬಿಸಲಿಲ್ಲ. ನಾನೇ ಅವರ ಸೇವೆಗೆ ಮುಂದಾದರೆ ಬೇಡ ಎನ್ನಲೂ ಇಲ್ಲ. (ಅದಾಗಿ ಎಷ್ಟೋ ವರ್ಷಗಳ ನಂತರ ಅವರು ಕೇಶವಕೃಪಾ ಬಾಗಿಲಿನಲ್ಲಿ ನಿಂತು ಯಾದವರಾವ್‌ಜಿ ಮತ್ತು ವಿ ಸತೀಶ್‌ ಜೊತೆಗೆ ನಿಂತಿದ್ದ ನನ್ನನ್ನು ನೋಡಿ `ಸುದರ್ಶನ! ಚೌಕಟ್ಟಿಲ್ಲದ ಮನುಷ್ಯ’ ಎಂದು ಉದ್ಗರಿಸಿದ್ದು ಇನ್ನೂ ನೆನಪಿದೆ.)

ಅದೇ ದಿನಗಳಲ್ಲಿ ನನ್ನ ಮಿತ್ರ, ಈಗಿನ ಖ್ಯಾತ ಕಲಾವಿದ ಬಿ ದೇವರಾಜ್‌ ಆರ್ಟೆಕ್‌ ಸ್ಕ್ರೀನ್‌ ಪ್ರಿಂಟಿಂಗ್‌ (ಈಗಿನ ಗಾಯತ್ರಿ ಟಿಫಿನ್‌ ರೂಮಿನ ಪಕ್ಕದಲ್ಲಿ) ಕಚೇರಿಯಲ್ಲಿದ್ದ. ಮಧ್ಯಾಹ್ನವಾದ ಕೂಡಲೇ ಅವನೊಂದಿಗೆ ಟೀ ಕುಡಿಯುವುದೂ  ದಿನಚರಿಯ ಭಾಗವಾಗಿತ್ತು. ಜಯದೇವ್‌ ಎಂಥ ಕಠೋರ ಬಾಸ್‌ ಎಂದು ಅವನಿಗೆ ವಿವರಿಸುವುದೇ  ನನ್ನ ಮುಖ್ಯ ಕಾರ್ಯಸೂಚಿಯಾಗಿತ್ತು.

ಕೊನೆಗೂ ನಾನು ನನ್ನ ಹಟ ಸಾಧನೆಯನ್ನು ಹೆಚ್ಚಿಸುತ್ತಲೇ ಹೋದೆ. ಕೆಲವೊಮ್ಮೆ ದಿನವಿಡೀ ಮಲಗಿರುತ್ತಿದ್ದೆ. ಮೊದಲ ಸಲ ಭಗ್ನಪ್ರೇಮಿಯಾಗಿದ್ದೂ ಅಲ್ಲೇ. ಆಗ ಐದನೇ ಮಹಡಿಯಲ್ಲಿ ಒಂದು ಭರ್ಜರಿ ಶ್ಯಾಂಡೆಲಿಯೇ ಇತ್ತು. ಪ್ರಜ್ವಲಿಸುತ್ತಿದ್ದ ಆ ದೀಪಸಾಲಿನ  ಕೆಳಗೇ ಹಾಸಿಗೆ ಹಾಸಿ ಮಲಗಿ ನನ್ನ ದುಃಖವನ್ನು ಮರೆಯಲು ಯತ್ನಿಸಿದ್ದೆ! ಅದಾಗಿ ಕೆಲ ದಿನಗಳ ನಂತರ ನನಗೆ ಇನ್ನು ಇರಲಾಗುವುದಿಲ್ಲ ಅನ್ನಿಸಿತು. ಜಯದೇವರಿಗೆ ಒಂದು ಖಾರವಾದ ಪತ್ರವನ್ನು ಬರೆದು ಲೆಕ್ಕದ ಪ್ರಕಾರ `ಬಾಕಿ ಇರುವ ೫೦೦ ರೂ.ಗಳನ್ನು ಮರಳಿಸುವೆ’  ಎಂದು ತಿಳಿಸಿದೆ. ಅದಕ್ಕೆ ಅವರೂ ಒಂದು ಪತ್ರ ಬರೆದು ಶುಭಾಶಯ ತಿಳಿಸಿ, ಹಣ ಕೊಡುವುದು ಬೇಡ ಎಂದು ತಿಳಿಸಿದರು. ಅಲ್ಲಿಗೆ ನನ್ನ – ಜಯದೇವರ ಸಖ್ಯ ಮುಗಿದುಹೋಯಿತು.

ಆ ಪತ್ರ ನನ್ನ ಅಟ್ಟದಲ್ಲಿ ಈಗಲೂ ಭದ್ರವಾಗಿದೆ:

—————————————————–

೧೬ ಜೂನ್‌ ೧೯೮೮

ಆತ್ಮೀಯರಾದ ಶ್ರೀ ಸುದರ್ಶನ್‌ ಅವರಿಗೆ

ಆದರದ ವಂದನೆಗಳು.

ಇಲ್ಲಿನ ವಿದ್ಯಮಾನಗಳಿಂದ ನಿಮಗೆ ಬೇಸರ ಆಗಿರುವ ವಿಷಯ ತಿಳಿದು ವಿಷಾದ ಎನಿಸಿತು.

ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳು ನಿರಾತಂಕವಾಗಿ ಅರಳುತ್ತಿರಲಿ ಎಂಬುದೇ ಪರಮಾತ್ಮನಲ್ಲಿ ನನ್ನ ಪ್ರಾರ್ಥನೆ.

ನಿಮ್ಮ ಲೆಕ್ಕದಲ್ಲಿ ಇರುವ ರೂ. ೫೦೦/-ಅನ್ನು ಕಳೆದ ವರ್ಷ ಮತ್ತು ಈ ವರ್ಷ ನೀವು ನಮ್ಮಲ್ಲಿದ್ದ ಅವಧಿಯ `ಬೋನಸ್‌ ಕೊಡುಗೆ’ಯಾಗಿ ಜಮಾ ಮಾಡಿಕೊಳ್ಳುತ್ತೇವೆ.  ಅದರ ಚಿಂತೆ ನಿಮಗೆ ಬೇಡ.

ನೀವೊಮ್ಮೆ ಇಲ್ಲಿಗೆ ಬಂದು ನಿಮ್ಮ ಅಂಕೆಯಲ್ಲಿರುವ ಎಲ್ಲವನ್ನೂ ಯಾರಾದರೊಬ್ಬರಿಗೆ ತಿಳಿಸಿ, ವಹಿಸಿಕೊಟ್ಟು ಹೋಗಬೇಕಾಗಿ ವಿನಂತಿ. ಎಂದು ಬರುವಿರೆಂಬುದನ್ನು ತಿಳಿಸಿ ಬನ್ನಿ.

ಪರಸ್ಪರ ಸ್ನೇಹ ವಿಶ್ವಾಸ ವೃದ್ಧಿಗತವಾಗಲೆಂದು ಆಶಿಸುತ್ತೇನೆ. ದೇವರು ನಿಮಗೆ ಸಕಲ ಸನ್ಮಂಗಳವನ್ನುಂಟು ಮಾಡಲಿ.

ಇತಿ ನಿಮ್ಮ ವಿಶ್ವಾಸಿ

ಮೈ ಚ ಜಯದೇವ್‌

—————————————————–

ಅನಂತರದ ಇಪ್ಪತ್ತು ವರ್ಷಗಳ ಕಾಲ ನನ್ನ – ಅವರ ನಡುವೆ ಅಂಥ ಸಂವಹನ ಇರಲಿಲ್ಲ. ಮತ್ತೆ ನಾನು ಅವರನ್ನು ಸಹಜವಾಗಿ ಭೇಟಿ ಮಾಡಿದ್ದು – ೨೦೦೮ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ. ಚುನಾವಣೆಯ ನಂತರ ನಾನು ಮತ್ತೆ ನಿರುದ್ಯೋಗಿಯಾದೆ.  ಆಗ ಸಾವಯವ ಕೃಷಿ, ಇಂಧನ ನೀತಿ ಇತ್ಯಾದಿ ವಿಷಯಗಳನ್ನು ಅರಿಯಬೇಕು ಎಂಬ ಉಮೇದಿಗೆ ಬಿದ್ದು ಕೆಲಸ ಮಾಡದಿರಲು ನಿರ್ಧರಿಸಿದೆ. ಸುಮಾರು ಒಂದೂವರೆ ವರ್ಷ ನಾನು ಬೆಂಗಳೂರಿನಲ್ಲಿ ಯಾವುದೇ ಉಳಿತಾಯವೂ ಇಲ್ಲದೆ, ನಿರುದ್ಯೋಗಿಯಾಗಿ ಕಾಲ ಕಳೆದೆ! ಆಗ ನನ್ನ ಮತ್ತು ಜಯದೇವರ ನಡುವಣ ಸಂಬಂಧ ನಿಕಟವಾಯಿತು.

ಇಂಧನ ನೀತಿ ಕುರಿತು ಏನಾದರೂ ಮಾಡಬೇಕೆಂದು ವಿದ್ಯುತ್‌ ರಂಗದ ವಿಶ್ಲೇಷಕ ಶ್ರೀ ಶಂಕರ ಶರ್ಮ ನನ್ನನ್ನು ಬಹುವಾಗಿ ಕಾಡುತ್ತಿದ್ದರು. ಅವರ ಕಾಟ ತಡೆಯಲಾರದೆ ನಾನು ಜಯದೇವರಲ್ಲಿ ವಿಷಯ ತಿಳಿಸಿದೆ. ಅವರಿಗೂ ಆಸಕ್ತಿ ಬೆಳೆಯಿತು. ಮೊದಲು ಅವರು ಶಂಕರ ಶರ್ಮರನ್ನು ಕೇಶವಕೃಪಾಗೇ ಕರೆದು ಉಳಿಸಿಕೊಂಡರು; ಸುಮಾರು ಮೂರು ಗಂಟೆಗಳ ಕಾಲ ವಿದ್ಯುತ್‌ ರಂಗದಲ್ಲಿ ಆಗಬೇಕಾದ ಸಂಗತಿಗಳ ಬಗ್ಗೆ ಮಾಹಿತಿ ಪಡೆದರು.  ಅನಂತರದ ಮೂರು ತಿಂಗಳುಗಳಲ್ಲಿ ಎರಡು ಸಭೆಗಳನ್ನು ನಡೆಸಿ ಇಂಧನ ನೀತಿಯ ಬಗ್ಗೆ ಆಮೂಲಾಗ್ರ ಪರಾಮರ್ಶೆ ನಡೆಸಿದರು. ಅದಾದ ಮೇಲೆ ನಾವು ಆಗಿನ ಮುಖ್ಯಮಂತ್ರಿ ಶ್ರೀ ಯೆಡ್ಯೂರಪ್ಪನವರಿಗೆ ಬಹಿರಂಗ ಪತ್ರ ಬರೆದು ಇಂಧನ ನೀತಿಗಾಗಿ ಆಗ್ರಹಿಸಿದೆವು. ಈ ಪತ್ರಕ್ಕೆ ಡಾ|| ಜಿ ಎಸ್‌ ಎಸ್‌, ಪಂಡಿತ ರಾಜೀವ ತಾರಾನಾಥ, ಟಿ ಯೆಲ್ಲಪ್ಪ ರೆಡ್ಡಿ, ಚಂದ್ರಶೇಖರ ಕಂಬಾರ ಮುಂತಾದವರು ಸಹಿ ಹಾಕಿದ್ದರು. ಈ ಪತ್ರದ ಪ್ರತಿಗಳನ್ನು ಜಯದೇವರು ತರಿಸಿ ಇಟ್ಟುಕೊಂಡಿದ್ದರು.

ಅದೇ ಸಂದರ್ಭದಲ್ಲಿ  ತದಡಿಯಲ್ಲಿ ಕಟ್ಟಲು ಹೊರಟಿದ್ದ ಬೃಹತ್‌ ಕಲ್ಲಿದ್ದಲು ಶಾಖೋತ್ಪನ್ನ  ವಿದ್ಯುತ್‌ ಸ್ಥಾವರವನ್ನು ವಿರೋಧಿಸಿ ನಾನು ಒಂದು ಚಿಕ್ಕ ಪುಸ್ತಕವನ್ನು ಸಿದ್ಧಪಡಿಸಿ ಕೆಲವರಿಗೆ ಹಂಚಿದ್ದೆ. ಅದನ್ನು ಓದಿದ ಜಯದೇವರು ನನ್ನಲ್ಲಿ ಒಂದು ಪ್ರಸ್ತಾಪವನ್ನು ಮುಂದಿಟ್ಟರು. `ನೀನು ಹಲವು ವಿಷಯಗಳ ಬಗ್ಗೆ ಅಧ್ಯಯನ ಮಾಡ್ತೀಯ. ಅವುಗಳನ್ನೆಲ್ಲ ಹಾಗೇ ಕಂಪ್ಯೂಟರಿನಲ್ಲಿ ಇಟ್ಟುಕೊಳ್ಳೋ ಬದಲಿಗೆ ಚಿಕ್ಕ ಚಿಕ್ಕ ಪುಸ್ತಿಕೆಗಳನ್ನು ಯಾಕೆ ಪ್ರಕಟಿಸಬಾರ್ದು? ಅದಕ್ಕೆ ನಾನು ಹಣಕಾಸು ವ್ಯವಸ್ಥೆ ಮಾಡ್ತೇನೆ’ ಎಂದು ತಿಳಿಸಿದರು. ಬರೆಯುವ ವಿಷಯದಲ್ಲಿ ನನ್ನಂಥ ಸೋಮಾರಿ ಇನ್ನೊಬ್ಬನಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಇನ್ನು ಇವರ ಹತ್ರ ಸಿಕ್ಕಿಕೊಂಡರೆ ತಡಮಾಡಿ ಬೈಸಿಕೊಳ್ಳಬೇಕು ಎಂಬ ಎಚ್ಚರಿಕೆ ಮನಸ್ಸಿನೊಳಗೆ ಮೂಡಿ, ಹಾಗೇ ಜಾರಿಕೊಂಡೆ!

ಬಿಟಿ ಬದನೆಗೆ  ಸ್ವದೇಶಿ ಜಾಗರಣ ಮಂಚವೇನೋ ವಿರೋಧಿಸಿತ್ತು. ಆದರೆ ಕರ್ನಾಟಕ ಸರ್ಕಾರದ ನಿಲುವು ಇನ್ನೂ ಪ್ರಕಟವಾಗಿರಲಿಲ್ಲ. ಆಗತಾನೇ ಕೇಂದ್ರ ಪರಿಸರ ಸಚಿವ  ಜೈರಾಂ ರಮೇಶ್‌ ಸಾರ್ವಜನಿಕ ಚರ್ಚೆ ಆರಂಭಿಸಿದ್ದರು. ಅವರು ಬೆಂಗಳೂರಿನಲ್ಲಿ ಅಂಥದ್ದೊಂದು ಸಭೆಯನ್ನು ಕರೆದಿದ್ದರು. ಅದಕ್ಕಿಂತ ಮುನ್ನವೇ ಕರ್ನಾಟಕ ಸರ್ಕಾರದ ನಿಲುವು ಪ್ರಕಟವಾಗಬೇಕಾದ ಜರೂರು ಇತ್ತು. ಸ್ವದೇಶಿ ಜಾಗರಣ ಮಂಚ್‌, ಸಹಜ ಸಮೃದ್ಧ, ಕರ್ನಾಟಕ ರಾಜ್ಯ  ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ್‌), ಆಶಾ ಸ್ವಯಂಸೇವಾ ಸಂಸ್ಥೆ, ಇಎಸ್‌ಜಿ, ಮುಂತಾದ ಸಂಘಟನೆಗಳು ಎಡ – ಬಲವೆಂಬ ಗೋಜಿಗೆ ಹೋಗದೆ ಸಭೆ ಸೇರಿ ಕರ್ನಾಟಕ ಸರ್ಕಾರದ ನಿಲುವನ್ನು ಖಚಿತಪಡಿಸುವ ಬಗ್ಗೆ ಚರ್ಚೆ ನಡೆಸಿದವು. ಇಲ್ಲಿ ನಾನು ಯಾವ ಸಂಘಟನೆಗೂ ಸೇರಿರಲಿಲ್ಲ. ಒಬ್ಬ ನಾಗರಿಕ ಕಾರ್ಯಕರ್ತನಾಗಿ ಭಾಗವಹಿಸುತ್ತಿದ್ದೆ. ಆರೆಸೆಸ್‌, ಬಿಜೆಪಿಯಲ್ಲಿ ನನಗೆ ಹೆಚ್ಚಿನ ಅಧಿಕಾರಿಗಳು, ನಾಯಕರು ಪರಿಚಿತರು ಎಂಬುದೇ ನನ್ನ ಹೆಚ್ಚುಗಾರಿಕೆಯಾಗಿತ್ತು. ಬಿಟಿ ಬದನೆಯನ್ನು ವಿರೋಧಿಸುವ ನಿಲುವನ್ನು ರಾಜ್ಯ ಸರ್ಕಾರವು ತಳೆಯಬೇಕು ಎಂದು ನಾನು ಜಯದೇವರಲ್ಲಿ ಮನವಿ ಒಯ್ದೆ. `ಅದೆಲ್ಲ ಸರಿ, ನೀವೆಲ್ಲ ಯಾಕೆ ಒಂದು ನಿಯೋಗವಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಬಾರದು?’ ಎಂದು ಅವರು ಸೂಚಿಸಿದರು. ನಮಗೂ ಅದು ಸರಿ ಅನ್ನಿಸಿತ್ತು. ದಿಲ್ಲಿಯಿಂದ ಡಾ|| ಪುಷ್ಪ ಭಾರ್ಗವ ಬರುವ ದಿನದಂದೇ ನಿಯೋಗವನ್ನು ಮುಖ್ಯಮಂತ್ರಿಯವರ ಬಳಿಗೆ ಒಯ್ಯುವುದಕ್ಕೆ ನಿರ್ಧರಿಸಿ ಅದರಂತೆ ಮುಂಚಿತ ಸಮಯವನ್ನೂ ಮುಖ್ಯಮಂತ್ರಿಯವರ ಕಚೇರಿಯಿಂದ ಪಡೆದೆವು. ಆ ದಿನ ನಿಯೋಗವನ್ನು ಭೇಟಿ ಮಾಡಿ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಯೆಡ್ಯೂರಪ್ಪನವರು ಕರ್ನಾಟಕದಲ್ಲಿ ಬಿಟಿ ಬದನೆಗೆ ಪ್ರವೇಶವಿಲ್ಲ ಎಂದು ಮಾಧ್ಯಮಗಳ ಎದುರು ಘೋಷಿಸಿದರು. ಅದೇ ಮರುದಿನ ಮುಖ್ಯ ಸುದ್ದಿಯಾಗಿ ಪ್ರಕಟವಾಗಿ ಕರ್ನಾಟಕ ಸರ್ಕಾರವೂ ಬಿಟಿ ಬದನೆ ವಿರುದ್ಧದ ಹೋರಾಟದಲ್ಲಿ ಧ್ವನಿಯೆತ್ತಿದಂತಾಯಿತು. ಈ ನಿಲುವಿನ ಪ್ರಕಟಣೆಯಲ್ಲೂ ಜಯದೇವರ ಪಾತ್ರ ತುಂಬಾ ಇತ್ತು ಎಂದು ಹೇಳುವುದಕ್ಕೆ ಹಿಂಜರಿಕೆಯೇನೂ ಇಲ್ಲ.

ಜಯದೇವರದು ಸರಳ ದಿನಚರಿ. ೧೯೮೭ರ ದಿನಗಳಲ್ಲೇ ನಾನು ನೋಡಿದಂತೆ ರಾತ್ರಿ ಹೆಚ್ಚಾಗಿ ಸೌತೆಕಾಯಿಯನ್ನೇ ತಿಂದು ಚಾಪೆ-ತೆಳು ಹಾಸಿಗೆಯ ಮೇಲೆ ಮಲಗುತ್ತಿದ್ದರು. ಈಗ ಮುದ್ರಣಾಲಯವೇ ಆವರಿಸಿರುವ  ಜಾಗದಲ್ಲಿ ಒಂದು ಚಿಕ್ಕ ಮನೆ ಇತ್ತು. ಅದರಲ್ಲಿ ಅಡುಗೆ ಮನೆಯ ಪಕ್ಕದಲ್ಲೇ ಜಯದೇವರ ಪುಟ್ಟ ಕೊಠಡಿ. ಅಲ್ಲಿ ಒಂದು ಕುರ್ಚಿ – ಮೇಜು, ಕಪಾಟು. ಕೇಶವಕೃಪಾದ ಮೊದಲನೇ ಮಹಡಿಯಲ್ಲಿ ಅವರಿಗೆ ಇದಕ್ಕಿಂತ ದೊಡ್ಡ ಕೊಠಡಿ ಸಿಕ್ಕಿತ್ತು. ಹಿರಿಯ ರಾಜಕಾರಣಿಗಳು ಅವರನ್ನು ಮುಂಚಿತ ಸಮಯ ನಿಗದಿಪಡಿಸದೆ ಭೇಟಿಯಾಗುವುದೇ ಅಸಾಧ್ಯ. ಅಲ್ಲೂ ಅವರು ಭೇಟಿಗೆ  ಸಕಾರಣ  ವಿವರಿಸಬೇಕು. ೨೦೦೮ರ ನಂತರ ನಾನು ಬೆಂಗಳೂರು ಬಿಟ್ಟು ಮೈಸೂರಿಗೆ ಬರುವವರೆಗೂ ಅವರು ನನಗೆ ಎಂದೂ ಭೇಟಿ ನಿರಾಕರಿಸಲಿಲ್ಲ; ಬದಲಿಗೆ ಆದಷ್ಟೂ ಬೇಗ ಭೇಟಿ ನಿಗದಿಪಡಿಸಿಬಿಡುತ್ತಿದ್ದರು. ಎಂದಿನಂತೆ ನಾನು ಬೆಂಗಳೂರು ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡಾಗಲೇ ಅವರಿಂದ `ಎಲ್ಲಿದೀರ? ಇನ್ನೂ ಬರ್ಲಿಲ್ಲ?’ ಎಂಬ ಎಚ್ಚರಿಕೆಯ ಕರೆ ಬರುತ್ತಿತ್ತು. ಒಂದುವೇಳೆ ಅವರ ಸಂಘಟನೆಯ ಕೆಲಸಗಳೇ ತುರ್ತಾಗಿದ್ದರೆ, ಕರೆ ಮಾಡಿ ಭೇಟಿಯ ಸಮಯವನ್ನು ಬದಲಿಸುತ್ತಿದ್ದರು. ಒಮ್ಮೆಯಂತೂ ಕರ್ನಾಟಕ ರಾಜಕೀಯದ ವಿಪರೀತ ಘಟನಾವಳಿಗಳ ಕ್ಷಣದಲ್ಲಿ ನಾನು ಅವರನ್ನು ಭೇಟಿಯಾಗಬಯಸಿದೆ. ಅವರೂ ಕರೆಯದೆ ಬಿಡಲಿಲ್ಲ. ಟಿವಿ ನೋಡುತ್ತಲೇ, ಅವರಿವರಿಗೆ ಸೂಚನೆಗಳನ್ನು ನೀಡುತ್ತಲೇ ನನ್ನನ್ನೂ ಮಾತನಾಡಿಸಿದರು. ಭೇಟಿಗಾಗಿ ಕೋರಿದ ನನ್ನ ಯಾವುದೇ ಎಸ್‌ಎಂಎಸ್‌ಗಳನ್ನೂ ಅವರು ನಿರ್ಲಕ್ಷಿಸಲಿಲ್ಲ.

ಅನಂತರ ಅವರು ರಾಷ್ಟ್ರೋತ್ಥಾನ ಪರಿಷತ್ತಿನ ಕೊಠಡಿಗೆ ಹೋದಾಗಲೂ ಅಷ್ಟೆ; ಅದೇ ಪ್ರೀತಿ. ಆಗ `ಉತ್ಥಾನ’ ಪತ್ರಿಕೆಯ ಮರುವಿನ್ಯಾಸ ಚರ್ಚೆ ನಡೆಯುತ್ತಿತ್ತು. ಮೊದಲ ಸಭೆಯಲ್ಲಿ ಅವರು ತಮಗೆ ಬೇಕಾದ ಹೆಚ್ಚುವರಿ ಮಾಹಿತಿಗಳ ಪಟ್ಟಿಯನ್ನು ಕೊಟ್ಟರು. ಉತ್ಥಾನದಂತೆಯೇ ಇರುವ ಇತರೆ ಮಾಸಪತ್ರಿಕೆಗಳ ಪ್ರಸರಣ, ವಿಷಯ ಹೂರಣದ ಬಗ್ಗೆ ಖಚಿತ ಮಾಹಿತಿಗಳನ್ನು ನೀಡಿದ ಮೇಲೆ ಹಲವು ಗಂಟೆಗಳ ಕಾಲ ಉತ್ಥಾನದ ಮರುವಿನ್ಯಾಸದ ಬಗ್ಗೆ ಚರ್ಚಿಸಿದರು. ನಮ್ಮ ಎಲ್ಲ ಟೀಕೆಗಳನ್ನೂ ಸಮಾಧಾನದಿಂದ ಕೇಳಿದರು. ತಮಗೆ ಬಂದ ಎಲ್ಲ ಅನುಮಾನಗಳನ್ನೂ ಅವರು ಪಟ್ಟಿ ಮಾಡಿಕೊಂಡೇ ಕೂತಿದ್ದರು. ಹೀಗಾಗಿ ಉತ್ಥಾನ ಪತ್ರಿಕೆಯ ಬಗ್ಗೆ ಸಾಕಷ್ಟು ಗಂಭೀರವಾದ ಮಥನ ನಡೆಯಿತು ಎನ್ನಬೇಕು. ಈಗ ಉತ್ಥಾನವು ಹೊಸ ರೂಪದಲ್ಲಿ ನಿಮ್ಮ ಮುಂದಿದ್ದರೆ, ಅದರಲ್ಲಿ ಜಯದೇವರ ಪಾತ್ರವೇ ಮುಖ್ಯ. ಉತ್ಥಾನದ ಮರುವಿನ್ಯಾಸದ ಮುನ್ನ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಅವರು ಉತ್ಥಾನದ ಬಗ್ಗೆ ಹಲವು ಮಾಹಿತಿಗಳನ್ನು ತಿಳಿಸಿ ಪ್ರಸರಣ ಹೆಚ್ಚಿಸಲು ಹುರಿದುಂಬಿಸಿದರು.

ಅವರೊಂದಿಗೆ ಈ ಆರೇಳು ವರ್ಷಗಳಲ್ಲಿ ಯಾವಾಗಲೂ ಸಾರ್ವಜನಿಕ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದ ನಾನು ಒಮ್ಮೆ ವೈಯಕ್ತಿಕ ಶಿಫಾರಸು ಮಾಡಲು ಹೋಗಿ ಚೆನ್ನಾಗಿ ಪಾಠ ಕಲಿತೆ. ಒಬ್ಬ ಭ್ರಷ್ಟ ಅಧಿಕಾರಿಯ ಬಗ್ಗೆ ನನ್ನ ಸ್ನೇಹಿತನೆಂದುಕೊಂಡಿದ್ದ ಒಬ್ಬಾತ ಒಳ್ಳೆಯ ವರದಿ ಕೊಟ್ಟು,  ಅವರ ವಿರುದ್ಧ ಸಂಚು ನಡೆಯುತ್ತಿದೆ ಎಂದು ಆರೋಪಿಸಿ, ಜಯದೇವರ ಮೂಲಕ ಆ ವ್ಯಕ್ತಿಯ ಶೋಷಣೆ ನಿಲ್ಲಿಸಬೇಕು ಎಂದು ವಿನಂತಿಸಿದ. ನಾನೂ ಕೂಡ ಜಯದೇವರ ಮೇಲೆ ಪ್ರಭಾವ ಬೀರಬಹುದು ಎಂದೆಣಿಸಿ ಅವರಿಗೆ ಮನವಿಯನ್ನು ವರ್ಗಾಯಿಸಿದೆ. ಒಂದೇ ದಿನದಲ್ಲಿ ಜಯದೇವರು ಕರೆ ಮಾಡಿ `ನೋಡು ಸುದರ್ಶನ, ಅವನೊಬ್ಬ ಮಹಾನ್‌ ಭ್ರಷ್ಟ. ಅವನ ಸ್ನೇಹಿತ ನಿನ್ನನ್ನು ಯಾಮಾರಿಸಿದ್ದಾನೆ. ಅವರಂಥವರ ಸುದ್ದಿಗೆ ಹೋಗಬೇಡ. ಇದರಲ್ಲಿ ನಿನ್ನ ತಪ್ಪಿಲ್ಲ. ಆದರೆ ವ್ಯಕ್ತಿಗಳ ಬಗ್ಗೆ ಶಿಫಾರಸು ಮಾಡುವಾಗ ಎಚ್ಚರಿಕೆ ಇರಲಿ. ಇಂಥ ನೂರಾರು ಪ್ರಕರಣಗಳನ್ನು ನಾನು ನೋಡಿದ್ದೇನೆ’ ಎಂದು ಕಿವಿಮಾತು ಹೇಳಿದರು. ನಾನು ಬೆವರಿದೆ ಎಂದು ಹೇಳಬೇಕಿಲ್ಲ ತಾನೆ!

ಹಾಗಂತ ಅವರು ಅದೇ ವಿಷಯವನ್ನು ಮುಂದಿಟ್ಟುಕೊಂಡು ನನ್ನನ್ನು ದೂರ ಇಡಲೂ ಇಲ್ಲ. ನಾನು ಬಯಸಿದಾಗೆಲ್ಲ ಭೇಟಿಗೆ ಅವಕಾಶ ಕೊಟ್ಟು, ಹತ್ತಿರದಲ್ಲೇ ಕುರ್ಚಿ ಎಳೆದು ಕೂರುವಂತೆ ಹೇಳಿ ನನ್ನೆಲ್ಲ ಅಹವಾಲುಗಳನ್ನು ಕೇಳುತ್ತಿದ್ದರು. ನಾನು ಮೈಸೂರಿಗೆ ಬರುವಾಗಲೂ ಅವರ ಆಶೀರ್ವಾದವನ್ನು ಪಡೆಯಲು ಹೋಗಿದ್ದೆ. ಭಾರತವಾಣಿ ಯೋಜನೆಯ ಬಗ್ಗೆ ವಿವರವಾಗಿ ತಿಳಿದ ಅವರು ನನಗೆ ಶುಭ ಹಾರೈಸಿದ್ದರು.

ಮೈ ಚ ಜಯದೇವರ ಬಗ್ಗೆ ನಾನು ಟೀಕೆಯನ್ನೂ ಮಾಡಿದ್ದೇನೆ ಎಂಬುದನ್ನು ಅವರ ಗಮನಕ್ಕೂ ತಂದಿದ್ದೆ. ರಾಜಕೀಯ ನಾಯಕರು ಕೇಶವಕೃಪಾದ ಮುಖ್ಯ ಬಾಗಿಲಿನ ಹೊಸ್ತಿಲಿನಲ್ಲಿ ನಿಂತು ಬೈಟ್‌ ಕೊಡುವುದು ನನಗೆ ಸರಿ ಅನ್ನಿಸಿರಲಿಲ್ಲ. `ನೀವು ಬಿಜೆಪಿ ನಾಯಕರೊಂದಿಗೆ ಕೇಶವಕೃಪಾದಲ್ಲಿ ಚರ್ಚೆ ಮಾಡಿದರೆ ಅದನ್ನು ಸಾರ್ವಜನಿಕರಿಗೆ ತಿಳಿಸಿ; ಅದಿಲ್ಲವಾದರೆ ಗೌಪ್ಯವಾಗೇ ಭೇಟಿ ಮಾಡಿ’ ಎಂದು ಸಿಟ್ಟು ಮಾಡಿಕೊಂಡು ಬರೆದಿದ್ದೆ. ಅದನ್ನು ಅವರಿಗೆ ಕೊಟ್ಟಿದ್ದೆ ಕೂಡ. ಆದರೆ ನಾನೆಂದೂ ಅವರು ಭಾಗವಹಿಸಿದರು ಎನ್ನಲಾದ ರಾಜಕೀಯ ಚಟುವಟಿಕೆಗಳ ಬಗ್ಗೆ ಕೇಳಹೋಗಲಿಲ್ಲ. ಅದು ನನ್ನ ಮಿತಿಯ ವಿಷಯವೂ ಆಗಿರಲಿಲ್ಲ.

ಸಂಘಟನೆಯಲ್ಲಿ ಒಂದೂ ಜವಾಬ್ದಾರಿಯನ್ನು ಹೊಂದಿರದೆ, ಬೇಜವಾಬ್ದಾರಿ ಮನುಷ್ಯ (ನನ್ನ ಇನಿಶಿಯಲ್‌ ಬೇ.ಮ. ಅನ್ನು ಬೇಜವಾಬ್ದಾರಿ ಮನುಷ್ಯ ಎಂದು ಹಲವು ಎಬಿವಿಪಿ ಕಾರ್ಯಕರ್ತರು ತಮಾಶೆ ಮಾಡಿಕೊಳ್ಳುತ್ತಾರೆ, ಈಗಲೂ!)ನಾಗಿದ್ದರೂ, ನನಗೂ ಜಯದೇವರಂಥ ಅತಿಹಿರಿಯ ಪ್ರಚಾರಕರೆದುರು ಮಾತನಾಡಲು, ಟೀಕೆ ಮಾಡಲು, ಆಕ್ರೋಶ ವ್ಯಕ್ತಪಡಿಸಲು ಸಾಧ್ಯವಾಗಿದ್ದರೆ, ಅದಕ್ಕೆ ಅವರ ಪ್ರಚಾರಕ ಗುಣವೇ ಕಾರಣ. ಈ ಗುಣವನ್ನು ನಾನು ನ ಕೃಷ್ಣಪ್ಪನವರಲ್ಲೂ ಕಂಡಿದ್ದೇನೆ.

ಜಯದೇವರು ಕಟ್ಟಿದ ಸಂಸ್ಥೆಗಳು, ಆರಂಭಿಸಿದ ಕಾರ್ಯಕ್ರಮಗಳು, – ಇವೆಲ್ಲದರ ಬಗ್ಗೆ ನಿಮಗೆ ಎಲ್ಲಿಂದಲಾದರೂ ಮಾಹಿತಿ ಸಿಗುತ್ತದೆ. ಆದರೆ ಅವರು ನಮ್ಮಂಥ ಸಾವಿರಾರು ಜನರ ಅಂತರಂಗದಲ್ಲಿ `ಯಾವ ವಿಷಯವನ್ನಾದರೂ ಸಹನೆಯಿಂದ ಕೇಳುವ ವ್ಯಕ್ತಿಗಳೂ ಇದ್ದಾರೆ’ ಎಂಬ ಭಾವವನ್ನು ಕಡೆದಿದ್ದಾರೆ ಎಂಬುದು ಗೊತ್ತಾಗಲಿ ಎಂದು ಈ ಬ್ಲಾಗ್‌ ಬರೆದೆ.

ಇನ್ನೊಂದು ವಿಷಯ ನೆನಪಾಗುತ್ತಿದೆ:  ಮಾಧ್ಯಮದವರಿಗೆ, ಎಡಪಂಥೀಯರಿಗೆ ಹೇಗುಹೇಗೋ ಕಾಣಿಸುವ ಆರೆಸೆಸ್‌ನಲ್ಲಿ ಎಲ್ಲ ಪ್ರಚಾರಕರೂ ಹೆಚ್ಚಾಗಿ ಕನ್ನಡದ ಇನಿಶಿಯಲ್‌ಗಳನ್ನೇ ಹೊಂದಿದ್ದಾರೆ ಎಂಬುದನ್ನೂ ಗಮನಿಸಿ.  ಮೈ ಚ ಜ(ಯದೇವ), ನ ಕೃ(ಷ್ಣಪ್ಪ), ಸು  ರಾ(ಮಣ್ಣ), ಕೃ ಸೂ (ರ್ಯನಾರಾಯಣರಾವ್‌), ಕಾಶ್ರೀನಾ(ಗರಾಜ್‌), ಬೆಸುನಾ ಮ(ಲ್ಯ), ಬರಾಶಂ(ಕರಾನಂದ), ದಾ ಮ ರ(ವೀಂದ್ರ). ಈ ದೇಸಿತನವನ್ನು ಕನ್ನಡದ ಕೆಲವು ಸಾಹಿತಿಗಳಲ್ಲದೆ ಬೇರೆಡೆ ಕಾಣುವುದು ಕಷ್ಟ. `ಮೈಚಜ’ ಇಂಥ ಗಟ್ಟಿ, ದೇಸಿ ಇನಿಶಿಯಲ್‌.  ಸಂಘದ ಹಲವಾರು ಪ್ರಚಾರಕರ  ಕೈಬರಹವಂತೂ ಅಚ್ಚಗನ್ನಡದ ಸವಿಜೇನು.

ಸರಿಯಾಗಿ ಶಾಖೆಗೂ ಹೋಗದ, ಪರಿವಾರದ ಯಾವುದೇ ಸಂಘಟನೆಯಲ್ಲೂ ಜವಾಬ್ದಾರಿಯನ್ನು ವಹಿಸಿಕೊಳ್ಳದ, ಹಲವಾರು ಸಲ ಪರಿವಾರದ ವ್ಯಕ್ತಿಗಳ ನಡೆಯನ್ನೇ ಟೀಕಿಸಿದ, ವೈಯಕ್ತಿಕವಾಗಿ ಖುದ್ದು ಅವರನ್ನೇ ಬೈದ ನನ್ನಂಥ ಕಡುಸಾಮಾನ್ಯ ವ್ಯಕ್ತಿಯನ್ನೂ ಕರೆದು ಕೂರಿಸಿ ಆಪ್ತವಾಗಿ ನನ್ನೆಲ್ಲ ಮಾತುಗಳನ್ನು ಕೇಳಿ, ತನಗೆ – ಮುಖ್ಯವಾಗಿ ಸಂಘಟನೆಯ ದೃಷ್ಟಿಕೋನದಲ್ಲಿ –  ಸರಿ ಅನ್ನಿಸಿದ್ದನ್ನು ಮುಕ್ತವಾಗಿ ತಿಳಿಸಿ, ಎಲ್ಲ ನಿರ್ಣಯಗಳೂ ಸ್ವತಂತ್ರವಾಗಿ – ಸಂಘಟಿತವಾಗಿ ರೂಪುಗೊಳ್ಳುವಂತೆ ನೋಡಿಕೊಂಡ ಕಟುಮಧುರ – ವಜ್ರಕಾಯ ಇನ್ನಿಲ್ಲ. ಮೈಸೂರಿನಲ್ಲಿ ಅವರ ಕಾಯ ಮಣ್ಣಾಗುವವರೆಗೆ ಅವರನ್ನೇ ನೋಡುತ್ತ ನೋಡುತ್ತ ಅವರು ಅಂದ ಮಾತುಗಳೆಲ್ಲವೂ ನೆನಪಾದವು.

`ಮೈ ಚ ಜ ‘ ಹೆಸರಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಅವರು ಸಿಗುವುದಿಲ್ಲ. ನನಗಿರುವ ಕೆಲವು ಸಮಯದಲ್ಲಾದರೂ ಅವರಂತೆ ಒಂದಷ್ಟು ದಿನ ಶಿಸ್ತಿನ ಬದುಕು ರೂಢಿಸಿಕೊಳ್ಳಬಹುದೇ? ನನಗೆ ಗೊತ್ತಿಲ್ಲ.

ಜಯದೇವರೆ, ನಿಮಗೆ ನನ್ನ ನಮಸ್ಕಾರಗಳು. ನಮ್ಮೆಲ್ಲರೊಳಗೆ ನಿಮ್ಮ ನೆನಪು ಶಾಶ್ವತ.

(ಇದು ಕೇವಲ ನನ್ನ ವೈಯಕ್ತಿಕ ಬ್ಲಾಗ್‌ ಆಗಿದ್ದು ಇಲ್ಲಿರುವ ನನ್ನ ಅಭಿಪ್ರಾಯಗಳು ನನ್ನ ವೈಯಕ್ತಿಕದ್ದು) 

Share. Facebook Twitter Pinterest LinkedIn Tumblr Email
Previous Articleಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
Next Article ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.