Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
ಲೇಖನಗಳು

ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ

ಬೇಳೂರು ಸುದರ್ಶನBy ಬೇಳೂರು ಸುದರ್ಶನJune 16, 2020Updated:May 19, 2025No Comments8 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಕ್ರಿಸ್ತಶಕ ೭೯ರಲ್ಲಿ ವೆಸೂವಿಯೆಸ್ ಅಗ್ನಿಪರ್ವತದ ಲಾವಾರಸದಲ್ಲಿ ಹೂತುಹೋದ ಪಾಂಪೇ ನಗರ ಗೊತ್ತಲ್ಲ? ಕ್ರಿಸ್ತಶಕ ೧೭೫೦ರಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಈ ನಗರದ ಕೆಲವು ಮನೆಗಳಲ್ಲಿ ಸುರುಳಿಯಾಗಿ ಸುತ್ತಿಕೊಂಡ ಹಲವು ವಸ್ತುಗಳು ದೊರೆತವು. ಅವೆಲ್ಲವೂ ಸುಟ್ಟುಹೋದ ಬಟ್ಟೆಗಳಿರಬಹುದು ಎಂದೇ ಊಹಿಸಿದ್ದರು. ಅಕಸ್ಮಾತ್ತಾಗಿ ಅಂಥ ಒಂದು ಸುರುಳಿ ಕೆಳಗೆ ಬಿದ್ದು ಒಡೆದುಹೋದಾಗ ಪುಸ್ತಕವೊಂದು  ಹೊರಬಿತ್ತು! ಇಂಥ ನೂರಾರು ಪುಸ್ತಕಗಳನ್ನು ಅಲ್ಲಿ ಪತ್ತೆ ಹಚ್ಚಲಾಯಿತು. ಅವುಗಳಲ್ಲಿ ಲೂಕ್ರಿಶಿಯಸ್‌ನ ಸಮಕಾಲೀನ ಗ್ರೀಕ್ ತತ್ವಶಾಸ್ತ್ರಜ್ಞ ಫಿಲೋಡೆಮಸ್‌ನ ಕೃತಿಗಳೂ ಇದ್ದವು. ಮುಂದೆ ೧೯೮೭ರಲ್ಲಿ ಹೊಸ ತಂತ್ರಜ್ಞಾನದ ನೆರವಿನ ಮೂಲಕ ಈ ಸುರುಳಿಗಳಲ್ಲಿ ಏನಿದೆ ಎಂಬ ಬಗ್ಗೆ ಮತ್ತೊಂದು ಸಂಶೋಧನಾ ಅಭಿಯಾನ ನಡೆಯಿತು. ತೊಮಾಸೋ ಸ್ಟಾರೇಸ್ ಎಂಬಾತ ಒಂದು ಸುರುಳಿಯ ಮೈಕ್ರೋ ಛಾಯಾಗ್ರಹಣ ಮಾಡಿದ. ಲೂಕ್ರಿಶಿಯಸ್‌ ಬಗ್ಗೆ ಸ್ಟೀಫನ್‌ ಗ್ರೀನ್‌ಬ್ಲಾಟ್‌ ಬರೆದ ‘ದ ಸ್ವರ್ವ್‌’ ಪುಸ್ತಕವನ್ನು ನಾನು ಓದಿದ ಮೇಲೆ ಇವೆಲ್ಲ ಸಂಗತಿಗಳೂ ತಿಳಿದವು. ಕ್ರಿಸ್ತಪೂರ್ವದ ವೈಜ್ಞಾನಿಕ ಚಿಂತಕನ ಗ್ರಂಥವು ಅತ್ಯುತ್ತಮ ದಾಖಲೀಕರಣದ ತಂತ್ರಗಳಿಂದಾಗಿ ಸಂಪೂರ್ಣವಾಗಿ ದೊರೆಯಿತು; ಅವನ ಚಿಂತನೆಗಳ ಬಗ್ಗೆ ಹೊಸ ಚರ್ಚೆ ಶುರುವಾಯಿತು. 

ಕಳೆದೇಹೋಗಿದೆ ಎಂದು ನಂಬಲಾದ ಒಂದೇ ಒಂದು ಪುಸ್ತಕವನ್ನು ನಾವು ಮರಳಿ ಪಡೆದರೆ ಎಂತಹ ತಿರುವು ಸಿಗುತ್ತದೆ ನೋಡಿ!

ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ ಎಂಬುದು ಹೊಸ ವಿಷಯವೇನಲ್ಲ; ಆದರೆ ಈಗಿನ್ನೂ ಪ್ರೌಢಹಂತ ತಲುಪುತ್ತಿರುವ ವಿಷಯ. ಇಲ್ಲಿ ಗ್ರಂಥಗಳನ್ನು ಮಾಹಿತಿ / ಆಕರಗಳು ಎಂದೇ ಪರಿಗಣಿಸಿದರೆ ತಂತ್ರಜ್ಞಾನದ ಬಳಕೆಯ ಹಲವು ಆಯಾಮಗಳನ್ನು ವಿವರಿಸಬಹುದು. ಗ್ರಂಥ ಎಂದರೆ ಸಾಮಾನ್ಯವಾಗಿ ಹಸ್ತಪ್ರತಿ, ಪುಸ್ತಕ ಎಂದೇ ಪರಿಗಣಿಸುತ್ತೇವೆ. ಆದ್ದರಿಂದ ಹಸ್ತಪ್ರತಿಗಳನ್ನೂ ಒಳಗೊಂಡಂತೆ ಹಳೆಯ ಮತ್ತು ಪ್ರಾಚೀನ ಶಾಸನಗಳ, ಕೃತಿಗಳ ಸಂಪಾದನೆಯ ತಂತ್ರಜ್ಞಾನದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ.

ಕನ್ನಡದ ಶಾಸನಗಳು

ಶಾಸ್ತ್ರೀಯ ಕನ್ನಡದ ಹಿನ್ನೆಲೆಯಲ್ಲಿ ನೋಡುವುದಾದರೆ ಕನ್ನಡದ ಶಾಸನಗಳಲ್ಲಿ ಇರುವ ಪಠ್ಯಗಳನ್ನು ಸಂಗ್ರಹಿಸುವುದು ಮೊದಲ ಕೆಲಸ. ಎಪಿಗ್ರಾಫಿಯ ಕರ್ನಾಟಕದಿಂದ ಆರಂಭಿಸಿ ನಮ್ಮಲ್ಲೀಗ ಶಾಸನಗಳ ದೊಡ್ಡ ಸಂಗ್ರಹವೇ ಇದೆ. ಆದರೆ ಆಗಿನ ಕಾಲದಲ್ಲಿ ಶಾಸನಗಳ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರು ; ಸ್ವತಃ ಪ್ರತಿ ಮಾಡಿಕೊಳ್ಳುತ್ತಿದ್ದರು. ಆದಾಗ್ಯೂ ಇವುಗಳನ್ನು ನಾವು ಒಂದೇ ಸ್ಥಳದಲ್ಲಿ ನೋಡಲು ಸಾಧ್ಯವಿಲ್ಲ. ಮೊದಲಿನಿಂದಲೂ ಇಂಥ ಏಕೀಕೃತ ಶಾಸನ ಪಠ್ಯ ಭಂಡಾರ ನಮ್ಮಲ್ಲಿ ಇದ್ದಿದ್ದರೆ ನಾವು ಈಗ ಅವುಗಳನ್ನು ಡಿಜಿಟಲೀಕರಿಸಲು ಸುಲಭವಾಗುತ್ತಿತ್ತು. ಈಗ ನಮ್ಮ ಸರ್ಕಾರಗಳು, ಶಾಸ್ತ್ರೀಯ ಕನ್ನಡದಂತಹ ಕೇಂದ್ರಗಳು ಇಂತಹ ದಾಖಲೀಕರಣಕ್ಕೆ ಮುಂದಾಗಬೇಕಿದೆ. ಇರುವ ಶಾಸನಗಳನ್ನು ವೈಜ್ಞಾನಿಕವಾಗಿ ಪಟ್ಟಿ ಮಾಡಿ, ಅತ್ಯುಚ್ಚ ಗುಣಮಟ್ಟದ ಕ್ಯಾಮೆರಾಗಳು, ಕ್ರೌಡ್‌ಸೋರ್ಸಿಂಗ್‌ ಮತ್ತು ಸ್ಮಾರ್ಟ್‌‌ಫೋನ್‌ ಬಳಕೆಯ ಮೂಲಕ ಒಂದೇ ಕಡೆಗೆ ಸಂಗ್ರಹಿಸಬೇಕಿದೆ.

ಇನ್ನು ಶಾಸನಗಳಲ್ಲಿ ಇರುವ ಲಿಪಿಗಳು ವಿವಿಧ ಕಾಲಘಟ್ಟಕ್ಕೆ ಸೇರಿವೆ. ಆದ್ದರಿಂದ ಕಾಲಾನುಕ್ರಮದಲ್ಲಿ ಲಿಪಿಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಇಂತಹ ಲಿಪಿಗಳಲ್ಲಿ ಇರುವ ಅಕ್ಷರಭಾಗಗಳನ್ನು ಮತ್ತು ಅವುಗಳ ವಿವಿಧ ಸ್ವರೂಪಗಳನ್ನು ಡಿಜಿಟಲೀಕರಿಸುವ ಮಹತ್ವದ ಕೆಲಸ ಆಗಬೇಕಿದೆ. ಹೀಗೆ ಅಕ್ಷರಭಾಗಗಳ ಮ್ಯಾಟ್ರಿಕ್ಸ್‌ ಒಂದನ್ನು ರೂಪಿಸಿದ ಮೇಲೆ ಇವುಗಳೆಲ್ಲವಕ್ಕೂ ಹೊಂದುವ ಒಂದು ಆಪ್ಟಿಕಲ್‌ ಕ್ಯಾರಕ್ಟೆರ್‌ ರೆಕಗ್ನಿಶನ್‌  ತಂತ್ರಾಂಶವನ್ನು (ಓಸಿಆರ್‌)  ತಯಾರಿಸಬಹುದಾಗಿದೆ. ಈ ದಿಕ್ಕಿನಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. ಇದಕ್ಕೂ ಹಲವು ವಿಶ್ವವಿದ್ಯಾಲಯಗಳು, ಪುರಾತತ್ವ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಶಾಸ್ತ್ರೀಯ ಕನ್ನಡ ಕೇಂದ್ರ – ಎಲ್ಲವೂ ಸೇರಿ ಒಂದು ಏಕೀಕೃತ ಯತ್ನವನ್ನು ಕೈಗೊಂಡರೆ ಕೆಲವೇ ವರ್ಷಗಳಲ್ಲಿ ನಮ್ಮ ಎಲ್ಲ (ಓದಿರದ) ಶಾಸನಗಳನ್ನೂ ಒಂದೇ ದತ್ತಸಂಚಯಕ್ಕೆ ಸೇರಿಸಬಹುದು.

ಸಂಚಯ ಎಂಬ ಸಮುದಾಯವೊಂದು ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸವನ್ನು ಮಾಡಿರುವುದನ್ನು ಇಲ್ಲಿ ಗಮನಕ್ಕೆ ತರಬೇಕಿದೆ. ಡಾ| ಓ ಎಲ್‌ ನಾಗಭೂಷಣ ಸ್ವಾಮಿಯವರಂತಹ ಹಿರಿಯರು ಇರುವ ಈ ಸಮುದಾಯವು ಈಗಾಗಲೇ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಸಂಚಯವನ್ನು (www.sanchaya.org) ಆನ್‌ಲೈನ್‌ನಲ್ಲಿ ತಂದಿದೆ. ಒಂದು ಸರ್ಕಾರವು ಮಾಡಬೇಕಾಗಿದ್ದ ಕೆಲಸವನ್ನು ಈ ಸಮುದಾಯವು ಸದ್ದಿಲ್ಲದೆ ಮಾಡಿದೆ ಎಂಬುದು ತುಂಬಾ ಶ್ಲಾಘನೀಯ ಸಂಗತಿ. ಇದೇ ರೀತಿಯಲ್ಲಿ ಶಾಸನಗಳ ಪಠ್ಯಗಳನ್ನೂ ಒಂದೆಡೆಗೆ ತಂದರೆ ಸಾರ್ವಜನಿಕರಿಗೂ ಉಪಯೋಗ. ಇತಿಹಾಸದ, ಭಾಷೆಯ ಮತ್ತು ಸಾಮಾಜಿಕ ಸಂಗತಿಗಳ ಸಂಶೋಧಕರಿಗೆ  ಇದು ತುಂಬಾ ಉಪಯುಕ್ತ. ಒಂದು ಪದದ ಬಳಕೆ ಯಾವ ಯಾವ ಕಾಲದಲ್ಲಿ ಹೇಗೆ ಆಗಿದೆ ಎಂಬುದನ್ನೆಲ್ಲ ಒಂದೇ ಕೀಲಿಯನ್ನು ಒತ್ತುವುದರ ಮೂಲಕ ತಿಳಿಯಬಹುದು.

ತಾಳೆ ಗ್ರಂಥಗಳು

ಇನ್ನು ತಾಳೆಯೋಲೆಗಳ ವಿಷಯಕ್ಕೆ ಬರುವುದಾದರೆ, ಶಾಸನಗಳ ಕುರಿತು ಆಗಿರುವಷ್ಟು ಕೆಲಸ ಆಗಿಲ್ಲ ಎಂದು ಹೇಳಬೇಕಾಗುತ್ತದೆ. ಬಹುಶಃ ಜಗತ್ತಿನಲ್ಲೇ ಭಾರತವನ್ನು ಬಿಟ್ಟರೆ ಇಂತಹ ಪ್ರಾಚೀನ ಗ್ರಂಥಭಂಡಾರ ಇಲ್ಲ. ಮೈಸೂರಿನ ಓರಿಯೆಂಟಲ್‌ ರಿಸರ್ಚ್‌ ಲೈಬ್ರರಿಯಿಂದ ಹಿಡಿದು, ದೇಶದ ೯೦ಕ್ಕೂ ಹೆಚ್ಚು ತಾಳೆಯೋಲೆ ಸಂಪನ್ಮೂಲ ಅಥವಾ ಭಾಗೀದಾರಿ ಕೇಂದ್ರಗಳಲ್ಲಿ, ಹಲವು ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಇರುವ ೪೨ ಲಕ್ಷಕ್ಕೂ ಹೆಚ್ಚಿನ  ತಾಳೆಯೋಲೆ ಗ್ರಂಥಗಳ ಡಿಜಿಟಲೀಕರಣ ಮಂದಗತಿಯಲ್ಲಿದೆ. ಈಗ ಕೆಲವೆಡೆ ದಾಖಲೀಕರಣ ಆರಂಭವಾಗಿದ್ದರೂ, ಕಾಲಮಿತಿಯ ಅಭಿಯಾನದ (ಮಿಶನ್‌ ಮೋಡ್‌) ರೀತಿಯಲ್ಲಿ ಕೆಲಸ ನಡೆಯುತ್ತಿಲ್ಲ. ಈವರೆಗೆ ೨.೯೬ ಲಕ್ಷ ತಾಳೆಗ್ರಂಥಗಳನ್ನು ಮಾತ್ರ ಡಿಜಿಟಲೀಕರಿಸಲಾಗಿದೆ (ಮಾಹಿತಿ:https://www.namami.gov.in/)

ತಾಳೆಯೋಲೆಗಳೂ ಶಿಲಾಶಾಸನಗಳೊಂದಿಗೇ ರೂಪುಗೊಂಡಿವೆ. ಆದ್ದರಿಂದ ಶಿಲಾಶಾಸನಗಳನ್ನು ಓದುವುದಕ್ಕೆ ರೂಪಿಸುವ ತಂತ್ರಜ್ಞಾನವನ್ನೇ ಇಲ್ಲೂ ಬಳಸಬೇಕಿದೆ. ಗೂಗಲ್‌ ಸಂಸ್ಥೆಯು ಕೈಬರಹ ಮಾಡುತ್ತಿರುವಂತೆಯೇ ಅದನ್ನು ಗುರುತಿಸಿ ಪಠ್ಯವನ್ನಾಗಿ ಪರಿವರ್ತಿಸುತ್ತಿದೆ ಎಂಬುದನ್ನು ನೀವು ಗಮನಿಸಿರಬಹುದು. ಇಲ್ಲಿರುವ ತಂತ್ರಜ್ಞಾನವು ಕೈಬರಹದ ಚಲನವಲನಗಳನ್ನು (ಡೈನಮಿಕ್‌ ಮೂವ್‌ಮೆಂಟ್‌) ಅವಲಂಬಿಸಿದೆ. ಆದರೆ ಶಾಸನ ಮತ್ತು ತಾಳೆಯೋಲೆಗಳದ್ದು ಸ್ಥಿರ  (ಸ್ಟಾಟಿಕ್) ರೂಪ. ಆದ್ದರಿಂದ ಈ ತಂತ್ರಜ್ಞಾನವನ್ನು ರೂಪಿಸುವುದಕ್ಕೆ ಇನ್ನೊಂದಷ್ಟು ಹೆಚ್ಚಿನ ಪ್ರಮಾಣದ ಮಾಹಿತಿ ಊಡಿಸುವಿಕೆ ಬೇಕಾಗುತ್ತದೆ. ತಾಳೆಯೋಲೆಗಳನ್ನು ಓದಿ ಡಿಜಿಟಲೀಕರಿಸುವ ಕೆಲಸ ತುಂಬಾ ಮಹತ್ವದ್ದು. ಇದನ್ನೂ ಮಿಶನ್‌ ಮೋಡ್‌ ರೀತಿಯಲ್ಲೇ ಮಾಡದಿದ್ದರೆ ನಾವು ಲಭ್ಯ ಗ್ರಂಥಗಳ ಚೌಕಟ್ಟಿನಲ್ಲೇ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಕೌಟಿಲೀಯ ಅರ್ಥಶಾಸ್ತ್ರವು ಮೈಸೂರಿನಲ್ಲಿ ಸಿಗದಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿ. ಅಥವಾ ಅಂತಹ ಮಹತ್ವದ  ಕೃತಿಗಳು ಈಗಲೂ ಎಲ್ಲೋ ಒಂದು ಕೇಂದ್ರದಲ್ಲಿ ಅಡಗಿರಬಹುದಲ್ಲವೆ?

ನಾವು ಎಲ್ಲರಿಗೂ ತಾಳೆಯೋಲೆ – ಶಾಸನಗಳನ್ನು, ಮೋಡಿ  ಲಿಪಿಗಳನ್ನು ಕಲಿಸುವ ಬದಲು, ಎಲ್ಲವನ್ನೂ ಡಿಜಿಟಲೀಕರಿಸಿದರೆ ಓದುವಿಕೆ ಸರಳವಾಗುತ್ತದೆ. ಅಂತರ್‌ ಶಾಸ್ತ್ರೀಯ ಸಂಶೋಧನೆಗಳು ವೇಗ ಪಡೆಯುತ್ತವೆ.  ಆದ್ದರಿಂದ ಮಾಹಿತಿ ತಂತ್ರಜ್ಞಾನದ ಈ ಯುಗವನ್ನು ನಮ್ಮ ಪರಂಪರೆಯ ಕೊಂಡಿಗಳ ರಕ್ಷಣೆಗೆ ಬಳಸುವುದು ಅತ್ಯಂತ ಜರೂರಿನ ಕೆಲಸವಾಗಿದೆ.

ತಾಳೆಯೋಲೆಗಳನ್ನು ಡಿಜಿಟಲೀಕರಿಸುವ ಬಗ್ಗೆ ಕೆಲವು ಸಂಶೋಧನೆಗಳು ನಡೆದಿವೆ ಎಂಬುದು ಸಂತೋಷದ ವಿಷಯ. ಈ ಸಂಶೋಧನೆಗಳು ಕಾರ್ಯರೂಪಕ್ಕೆ ಬಂದರೆ ತಾಳೆಯೋಲೆಗಳ ದತ್ತಸಂಚಯವನ್ನು ರೂಪಿಸುವ ಕೆಲಸ ವೇಗ ಪಡೆಯುತ್ತದೆ.

ಆರ್ಕೈವ್‌ ಆರ್ಗ್‌ ಅಭಿಯಾನ ಮತ್ತು ಹಕ್ಕುಸ್ವಾಮ್ಯದ ಸಮಸ್ಯೆಗಳು

ಈ ಮೊದಲೇ ಉಲ್ಲೇಖಿಸಿದ ಸಂಚಯ ಸಮುದಾಯ ವೇದಿಕೆಯು ಕಳೆದ ಮೂರು ತಿಂಗಳುಗಳಲ್ಲಿ ೮೫೦ ಪುಸ್ತಕಗಳನ್ನು ಆರ್ಕೈವ್ಸ್‌ನ ಸ್ಕ್ರೈಬ್‌ ಯಂತ್ರದ ಮೂಲಕ ಓಸಿಆರ್‌ ಮಾಡಿದೆ ಎಂದು ಮೊನ್ನೆಯಷ್ಟೇ ಪ್ರಕಟಿಸಿದೆ. ಒಟ್ಟು ೨.೪೦ ಲಕ್ಷ ಪುಟಗಳನ್ನು ಈ ಸಮುದಾಯವು ಪಿಡಿಎಫ್‌ ಮತ್ತು ಇತರೆ ಫಾರ್ಮಾಟ್‌ಗಳಿಗೆ (ಡಿಜೆವಿಯು, ಟಿಫ್‌ ಇತ್ಯಾದಿ) ಪರಿವರ್ತಿಸಿದೆ. ಭಾರತದ ಮಟ್ಟಿಗೆ ಇದೂ ಕೂಡ ಪುಸ್ತಕ ಸಂಗ್ರಹದ ನೂತನ ವಿಧಾನ. ಆದರೆ ಈ ಎಲ್ಲ ಹಕ್ಕುಸ್ವಾಮ್ಯ ಮುಕ್ತ ಪುಸ್ತಕಗಳೂ ಆರ್ಕೈವ್‌ ಜಾಲತಾಣಕ್ಕೆ  (www.archive.org) ಸೇರ್ಪಡೆಯಾಗುತ್ತಿವೆ ಎಂಬುದನ್ನು ಗಮನಿಸಬೇಕಿದೆ. ಇಂತಹ ಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಮಾಡಿ ಸರ್ಕಾರದ ತಾಣಗಳಲ್ಲೇ ಪ್ರಕಟಿಸುವುದು ಅತ್ಯಂತ ಸೂಕ್ತ. ಇಂತಹ ವೇದಿಕೆಗಳಿಂದ ಆರ್ಕೈವ್ ಸಂಸ್ಥೆಯು ಅಧಿಕೃತವಾಗಿ ತನ್ನ ವೇದಿಕೆಯಲ್ಲಿ, ಸೂಕ್ತ ಹಕ್ಕುಸ್ವಾಮ್ಯಗಳ ಮುಕ್ತತೆ ವಿವರಗಳೊಂದಿಗೆ ಪ್ರಕಟಿಸಬಹುದಾಗಿದೆ. ಆರ್ಕೈವ್‌ ಜಾಲತಾಣದಲ್ಲಿ ಹಕ್ಕುಸ್ವಾಮ್ಯ ಇರುವ ಪುಸ್ತಕಗಳನ್ನೂ ಯಾವುದೇ ಅನುಮತಿ ಇಲ್ಲದೆ ಪ್ರಕಟಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಸ್ವಯಂಸೇವಾ ಕಾರ್ಯಕರ್ತರ ಅತ್ಯುತ್ಸಾಹ ಮತ್ತು ಅತಿರೇಕದ ಉದಾಹರಣೆಗಳು. ಸ್ವಯಂ ನಿಯಂತ್ರಣ, ಸ್ವಯಂ ಪ್ರಜ್ಞೆ ಇಲ್ಲದ ಇಂತಹ ವ್ಯಕ್ತಿಗಳಿಂದ ಆರ್ಕೈವ್‌ನ ಮೂಲ ಆಶಯಕ್ಕೇ ಧಕ್ಕೆ ಆಗುವುದರಲ್ಲಿ ಸಂಶಯವಿಲ್ಲ.

ಓಸಿಆರ್‌ ತಂತ್ರಜ್ಞಾನದ ಓಟ

ಆಪ್ಟಿಕಲ್‌ ಕ್ಯಾರಕ್ಟರ್‌ ರೆಕಗ್ನಿಶನ್‌ ತಂತ್ರಜ್ಞಾನದಲ್ಲಿ ಮುಖ್ಯವಾಗಿ ಅಕ್ಷರಭಾಗಗಳನ್ನು ತಂತ್ರಾಂಶಕ್ಕೆ ಊಡಿಸಿ ಗುರುತಿಸುವುದಕ್ಕೆ ತರಬೇತಿ ನೀಡುತ್ತಾರೆ. ಒಂದು ಅಕ್ಷರಭಾಗ, ಅಕ್ಷರ, ಸಂಯುಕ್ತಾಕ್ಷರ ಎಲ್ಲವೂ ಏನೇನೆಲ್ಲ ಸಾಧ್ಯತೆಗಳೊಂದಿಗೆ ಕಾಣಸಿಗಬಹುದು ಎಂಬುದನ್ನು ಗರಿಷ್ಠ ಪ್ರಮಾಣದಲ್ಲಿ ತಂತ್ರಾಂಶಕ್ಕೆ ಊಡಿಸಬೇಕಾಗುತ್ತದೆ. ಇದಕ್ಕಾಗಿ ಅಪಾರ ಪ್ರಮಾಣದಲ್ಲಿ ವಿವಿಧ ಕಾಲಘಟ್ಟಗಳ ವಿವಿಧ ಅಕ್ಷರಭಾಗಗಳ ಬಹುದೊಡ್ಡ ಕಣಜವನ್ನೇ ನಿರ್ಮಿಸಬೇಕಿದೆ.

ನೀವು ಗೂಗಲ್‌ ಡ್ರೈವ್‌ ಮೂಲಕ ಸೀಮಿತ ಚಿತ್ರ / ಪಿಡಿಎಫ್‌ ಕಡತವನ್ನು ಏರಿಸಿ, ನಿಮ್ಮ ಭಾಷೆಯಲ್ಲೇ ಪಠ್ಯವನ್ನಾಗಿ ಪರಿವರ್ತಿಸಬಹುದು.

ಟೆಸೆರಾಕ್ಟ್‌ : ಯಶಸ್ವೀ ಪ್ರಯೋಗ 

ಗೂಗಲ್‌ ಸಂಸ್ಥೆಯು ೨೦೧೮ರ ನವೆಂಬರಿನಲ್ಲಿ ಬಿಡುಗಡೆ ಮಾಡಿದ ಟೆಸೆರಾಕ್ಟ್‌ ೪.೦ ಆವೃತ್ತಿಯ ಮುಕ್ತತಂತ್ರಾಂಶವನ್ನು ಬಳಸಿ (https://github.com/tesseract-ocr/tesseract)  ಭಾರತವಾಣಿಯಲ್ಲಿ ಸಂಗ್ರಹವಾದ ಇರುವ ೧೦೦೦ಕ್ಕೂ ಹೆಚ್ಚು ಕೃತಿಗಳನ್ನು ಪಠ್ಯರೂಪಕ್ಕೆ ತರಲಾಗಿದೆ. ಕರಡು ಸ್ಥಿತಿಯಲ್ಲಿ ಇರುವ ಈ ಪುಸ್ತಕಗಳಲ್ಲಿ ಒಟ್ಟು ೩.೫೦ ಕೋಟಿ ಪದಗಳಿವೆ. ಸಾಮಾನ್ಯ ಡಿಟಿಪಿ ಮಾಡಿಸಿದ್ದರೆ ಈ ಕೆಲಸಕ್ಕೆ ಹಲವು ತಿಂಗಳುಗಳ ಕಾಲ ಶ್ರಮಿಸಿ ೫೦ ಲಕ್ಷ ರೂ. ಖರ್ಚು ಮಾಡಬೇಕಿತ್ತು. ಮೂರು ತಿಂಗಳುಗಳಲ್ಲಿ ಈ ಕರಡು ಸಿದ್ಧವಾಯಿತೆಂದರೆ ನಮ್ಮ ಮುಂದಿನ ಡಿಜಿಟಲೀಕರಣದ ವೇಗ ಎಷ್ಟೆಂದು ಊಹಿಸಬಹುದು. ಹೀಗೆ ಕೋಟಿಗಟ್ಟಲೆ ಪದಗಳ ಕರಡು ತಿದ್ದಿದರೆ ಯಂತ್ರಾನುವಾದದಿಂದ ಹಿಡಿದು ಎಲ್ಲ ತಾಂತ್ರಿಕ ಸಾಧನಗಳನ್ನೂ ಸಲೀಸಾಗಿ, ಹೆಚ್ಚು ನಿಖರ ಫಲಿತಾಂಶ ಸಿಗುವಂತೆ ರೂಪಿಸಬಹುದು.

ಪಿಡಿಎಫ್ ಮತ್ತು ಪಠ್ಯದ ಪುಸ್ತಕಗಳು : ಅನುಕೂಲ ಮತ್ತು ಅನಾನುಕೂಲ

ಡಿಜಿಟಲ್‌ ಸ್ವರೂಪದಲ್ಲಿ ಗ್ರಂಥ ಸಂಪಾದನೆ ಎಂದ ಕೂಡಲೇ ಎಲ್ಲರಿಗೂ ಮೊದಲು ನೆನಪಾಗುವುದು ಮತ್ತು ಸುಲಭವಾಗಿ ಬಳಕೆಗೆ ಸಿಗುವುದು ಪಿಡಿಎಫ್‌ (ಪೋರ್ಟಬಲ್‌ ಡಾಕ್ಯುಮೆಂಟ್‌ ಫಾರ್ಮಾಟ್‌) ಮಾತ್ರ. ಭಾರತೀಯ ಭಾಷೆಗಳಿಗೆ ಅತ್ಯಂತ ನಿಖರವಾದ ಓಸಿಆರ್‌ ಸಿಗುವವರೆಗೂ ಪಿಡಿಎಫ್‌ ಒಂದು ರೀತಿಯಲ್ಲಿ ಅಪಾಯಕಾರಿಯೇ ಆಗುತ್ತದೆ. ಏಕೆಂದರೆ ಇವುಗಳಲ್ಲಿ ಭಾರತೀಯ ಪಠ್ಯಗಳನ್ನು ಹುಡುಕಲು ಬರುವುದಿಲ್ಲ.  ಇತ್ತೀಚೆಗಷ್ಟೆ ಆರ್ಕೈವ್‌ ಅಭಿಯಾನಿ ಕಾರ್ಲ್‌ ಮಲಮುಡ್‌ ಕನ್ನಡ ಪುಸ್ತಕದ ಪುಟದ ಮೇಲೆ ಕನ್ನಡ ಓಸಿಆರ್‌ ಪದರವನ್ನು ಹಾಸುವ ಮೂಲಕ ಹೊಸ ಯತ್ನ ಮಾಡಿದ್ದಾರೆ. ಹೀಗೆ ಮಾಡಿರುವುದರಿಂದ ಪಿಡಿಎಫ್‌ ಪುಸ್ತಕಗಳ ಒಳಗೆ ಇರುವ ಕನ್ನಡ ಪದಗಳನ್ನು ಹುಡುಕಬಹುದು ಎಂಬ ಆಶಯ ಹೊಂದಲಾಗಿದೆ. ಇದು ಈಗಿನ್ನೂ ಆರಂಭವಾದ ಯತ್ನ.  ಯಶಸ್ಸಿನ ದಾರಿ ಇನ್ನೂ ದೂರ ಇದೆ.

ಮುಕ್ತ ಜ್ಞಾನ ತಾಣಗಳು ಮತ್ತು ಪಾವತಿಸುವ ತಾಣಗಳು

ಗ್ರಂಥ ಸಂಪಾದನೆಯ ನಂತರದ ಹೆಜ್ಜೆಯೇ ಗ್ರಂಥಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಡುವುದು. ಇಲ್ಲಿ ೭೦ರ ದಶಕದಿಂದಲೇ ಆರಂಭವಾದ ಪ್ರಾಜೆಕ್ಟ್‌ ಗುಟೆನ್‌ಬರ್ಗ್‌ (https://www.gutenberg.org/) ಎಂಬ ಐತಿಹಾಸಿಕ ಯೋಜನೆಯನ್ನು ಸ್ಮರಿಸಿಕೊಳ್ಳಲೇಬೇಕಿದೆ. ಹದಿನೈದು ವರ್ಷಗಳ ಹಿಂದೆಯೇ ನಾನು ಅವರಿಗೆ ಒಂದು ಈ ಮೈಲ್‌ ಕಳಿಸಿದಾಗ, ಅವರ ಯೋಜನೆಯ ಸ್ವಯಂಸೇವಾ ಕಾರ್ಯಕರ್ತರೊಬ್ಬರು ಎರಡು ಸಿಡಿಗಳಲ್ಲಿ ಎಲ್ಲವನ್ನೂ ಅಡಕಗೊಳಿಸಿ ನನಗೆ ಅಂಚೆ ಮೂಲಕ ಕಳಿಸಿದ್ದರು. ಈಗ ಈ ಜಾಲತಾಣವು ೫೭ ಸಾವಿರ ಪಠ್ಯಗಳನ್ನು ಹೊಂದಿದೆ. ಈಗಲೂ ಈ ಸಂಸ್ಥೆಯು ಹಕ್ಕುಸ್ವಾಮ್ಯದ ಸಂಗತಿಗಳನ್ನು ಆದಷ್ಟೂ ಚೆನ್ನಾಗಿ ನಿರ್ವಹಿಸುತ್ತಿದೆ ಎಂಬುದು ಗಮನಾರ್ಹ.

ಗುಟೆನ್‌ಬರ್ಗ್‌ ಯೋಜನೆಯನ್ನು ರೂಪಿಸಿದ ಮೈಕೇಲ್‌ ಎಸ್‌ ಹಾರ್ಟ್‌ ೧೯೭೧ರಿಂದ ೧೯೮೭ರ ವರೆಗೆ ೩೧೩ ಗ್ರಂಥಗಳನ್ನು ಸ್ವತಃ ಅಕ್ಷರ ಜೋಡಿಸಿ ಸಾರ್ವಜನಿಕರಿಗೆ ನೀಡಿದರು ಎಂಬ ಇತಿಹಾಸವು ನಮಗೆಲ್ಲ ಪ್ರೇರಣೆ ನೀಡಬೇಕಿದೆ. ಆಮೇಲೆ ಸಮುದಾಯದ ಬೆಂಬಲದಿಂದ ಅವರು ತಮ್ಮ ಪಠ್ಯ ಸಂಪಾದನೆಯ ವೇಗ ಹೆಚ್ಚಿಸಿದರು. ಇತ್ತೀಚೆಗೆ ನಾನು ಜಾನಪದ ಸಾಹಿತ್ಯ ಸಂಗ್ರಹಕಾರ ದಿ. ಎಲ್‌ ಆರ್‌ ಹೆಗಡೆಯವರ ಅಪ್ರಕಟಿತ ಸಂಗ್ರಹದ ಅಕ್ಷರ ಜೋಡಣೆಗೆ ಸಮಾಜತಾಣದ ಮಿತ್ರರ ನೆರವು ಕೇಳಿದ್ದೂ ಇಂತಹ ಸಮುದಾಯ ಭಾಗಿತ್ವಕ್ಕಾಗಿಯೇ. ಪರಂಪರೆಯ ಜನಪದವನ್ನು ಉಳಿಸಲು ಡಿಜಿಟಲ್ ಜನಪದವು ಮುಂದಾಗಿ ಇದೀಗ ಹತ್ತು ಸಂಗ್ರಹಗಳು ಪ್ರಕಟಣೆಯ ವಿವಿಧ ಹಂತಗಳಲ್ಲಿವೆ. ಇವೆಲ್ಲವನ್ನೂ ಈ ವರ್ಷದೊಳಗೆ (೨೦೧೯) ಮುಕ್ತವಾಗಿ ನೀಡಲಾಗುವುದು.

ಭಾರತವಾಣಿಯ ಉಪಯುಕ್ತ ಜಾಲತಾಣಗಳು (http://bharatavani.in/useful-links/) ಎಂಬ ಪುಟದಲ್ಲಿ ಈ ಬಗೆಯ ಮುಕ್ತ ಜ್ಞಾನವನ್ನು ನೀಡುವ ಭಾರತೀಯ ಜಾಲತಾಣಗಳ ಪಟ್ಟಿಯನ್ನು ಸಂಗ್ರಹಿಸಿ ನೀಡಲಾಗುತ್ತಿದೆ.

ಮುಂದಿನ ಹಾದಿ?

  • ಡಿಜಿಟಲ್‌ ಜಗತ್ತು ಮತ್ತು ಸಂಶೋಧನೆ – ಇವುಗಳ ನಡುವೆ ಸಂಬಂಧ ಗಟ್ಟಿಯಾಗಬೇಕು.  ಡಿಜಿಟಲ್‌ ಜಗತ್ತಿನಲ್ಲಿ ಪ್ರಾಚೀನ ಗ್ರಂಥಗಳು ಪೂರ್ಣ ಪ್ರಮಾಣದಲ್ಲಿ  ದಕ್ಕಬೇಕು. ಶಾಸ್ತ್ರೀಯ ಭಾಷೆಗಳ ಅಧ್ಯಯನದಲ್ಲಿ ತೊಡಗಿರುವವರು ಪರಂಪರೆಯ ಮೇಲಿನ ಗೌರವವನ್ನು ಬೆಳೆಸಿಕೊಂಡು ಮತ್ತು ಅಧ್ಯಯನಶೀಲತೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಇಂತಹವರು   ಅಲ್ಪಸಂಖ್ಯಾತರಾಗುವ ಭಯ ಇದ್ದೇ ಇದೆ.
  • ಗ್ರಂಥ ಸಂಪಾದನೆಯ ಹೆಜ್ಜೆಗಳು: ಮೊದಲು ಪುಸ್ತಕಗಳನ್ನು, ಹಸ್ತಪ್ರತಿಗಳನ್ನು, ತಾಳೆಗರಿಗಳನ್ನು ಸಂಗ್ರಹಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವ ಅಂಶ. ಇವುಗಳು ಹಾಳಾಗದಂತೆ ಸಂರಕ್ಷಿಸಬೇಕಿದೆ. ಉಡುಪಿಯ ಪ್ರಾದೇಶಿಕ ಸಂಶೋಧನಾ ಕೇಂದ್ರವು ಕಳೆದ ೩೦ ವರ್ಷಗಳಿಂದ ತನ್ನ ಎಲ್ಲ ಆಡಿಯ ವಿಡಿಯೋ ಸಂಗ್ರಹಗಳನ್ನು ಸಂರಕ್ಷಿಸಿ ಇಟ್ಟುಕೊಂಡು ಬಂದ ಮಾದರಿಯನ್ನು ಈಗಿನ ದಾಖಲೀಕರಣ ಸಂಸ್ಥೆಗಳು ಅನುಸರಿಸಬೇಕಿದೆ. ಅದಿಲ್ಲವಾದರೆ ಲಭ್ಯ ಸಂಗ್ರಹಗಳೂ ನಾಶವಾಗುವ ಸಾಧ್ಯತೆ ಇದೆ.
  • ಇದಾದ ನಂತರ ಈ ಸಂಗ್ರಹಗಳನ್ನು  ಪಿಡಿಎಫ್‌ ಮತ್ತು ಬಹುಫಾರ್ಮಾಟ್‌ ರೂಪದಲ್ಲಿ ಸಂಗ್ರಹಿಸಬೇಕು. ಇದನ್ನು ಮೊದಲ ಹಂತದ ಡಿಜಿಟಲ್‌ ಗ್ರಂಥ ಸಂಪಾದನೆ ಎಂದು ಕರೆಯಬಹುದು.
  • ಎರಡನೆಯ ಹಂತದ ಡಿಜಿಟಲೀಕರಣವೇ ತುಂಬಾ ಮುಖ್ಯ. ಇದು ಚಿತ್ರದ ಪುಟಗಳನ್ನು ಪಠ್ಯವಾಗಿ ಪರಿವರ್ತಿಸುವ ಹಂತ. ಹೀಗೆ ಸಂಗ್ರಹಿತ ಗ್ರಂಥಗಳನ್ನು ಪಠ್ಯ ಡಿಜಿಟಲೀಕರಣ ಮಾಡುವ ಮೂಲಕ ಬಹುದೊಡ್ಡ ಗ್ರಂಥ ಸಂಚಯವನ್ನು ರೂಪಿಸಬಹುದು. ಇದು ಸಾರ್ವಜನಿಕವಾಗಿ ಜ್ಞಾನದ ರೂಪದಲ್ಲೂ, ಸಂಶೋಧಕರಿಗೆ ಆಕರ ದತ್ತ ಸಂಚಯ ರೂಪದಲ್ಲೂ (ಕಾರ್ಪಸ್‌) ದೊರಕಿದರೆ ಮುಂದಿನ ದಿನಗಳು ಆಶಾದಾಯಕವಾಗಲಿವೆ.  ಈ ಹಿನ್ನೆಲೆಯಲ್ಲಿ ಕಣಜ ಜಾಲತಾಣದ ಪಠ್ಯಗಳು, ಭಾರತವಾಣಿ, ಸಂಚಯ, ವಿಕಿಪೀಡಿಯ ಮುಂತಾದ ಜಾಲತಾಣಗಳು ರೂಪಿಸಿ ಪ್ರಕಟಿಸಿದ ಪಠ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುನಿಕೋಡ್‌ ಇಲ್ಲದ ದಿನಗಳಲ್ಲೇ ಗುಟೆನ್‌ಬರ್ಗ್‌ ಯೋಜನೆಯು ಪಠ್ಯರೂಪಕ್ಕೇ ಅಂಟಿಕೊಂಡಿದ್ದರ ಮಹತ್ವ ಈಗ, ೪೮ ವರ್ಷಗಳ ನಂತರ ಗೊತ್ತಾಗುತ್ತಿದೆ.
  • ಪದಗಳ ಅರ್ಥ ನೀಡುವ ಗ್ರಂಥಗಳನ್ನು ಪಠ್ಯರೂಪದಲ್ಲಿ ಪ್ರಕಟಿಸುವ ಭಾರತವಾಣಿ ಯೋಜನೆಯು ದೇಶದಲ್ಲೇ ವಿನೂತನವಾಗಿದೆ. ಈಗ ೧೫೧ಕ್ಕೂ ಹೆಚ್ಚು ನಿಘಂಟುಗಳು ಭಾರತವಾಣಿ ಆಪ್‌ನಲ್ಲಿ ಪಠ್ಯರೂಪದ ಹುಡುಕಾಟಕ್ಕೆ ಸಿಗುತ್ತಿವೆ. ಇಂತಹ ಕೃತಿಗಳಿಂದ ಪದಸಂಚಯವನ್ನು ರೂಪಿಸಿದಾಗ ಮುಂದಿನ ದಿನಗಳಲ್ಲಿ ಅನುವಾದ ತಂತ್ರಾಂಶ, ಬುಕ್‌ರೀಡರ್‌, ದೇಸೀಕರಣ ಮುಂತಾದ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದು.
  • ನಮ್ಮ ಪ್ರೌಢಶಾಲೆ, ಪದವಿ ಪಠ್ಯಕ್ರಮದಲ್ಲಿ ಕನ್ನಡ ಗ್ರಂಥಗಳ ಓದಿನ ಕುರಿತು ಜಾಗೃತಿ, ಅವುಗಳು ಆನ್‌ಲೈನ್‌ನಲ್ಲಿ ಸಿಗುತ್ತಿರುವ ಬಗ್ಗೆ ಮಾಹಿತಿ, ಅವುಗಳನ್ನು ಪ್ರಯೋಗಾತ್ಮಕವಾಗಿ ಬಳಸುವುದು – ಈ ಚಟುವಟಿಕೆಗಳ ಮೂಲಕ ಮೊದಲ ವರ್ಷಗಳಲ್ಲೇ ಮಕ್ಕಳು ಇಂತಹ ಓದಿನ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಬೇಕಾದ್ದು ಈಗಿನ ಜರೂರು. ಹಠಾತ್ತಾಗಿ ಯಾರೂ ಸಂಶೋಧನೆ ಮಾಡುವುದಿಲ್ಲ. ಸಂಶೋಧಕ ಪ್ರವೃತ್ತಿಯೇ ಕಡಿಮೆಯಾಗುತ್ತಿರುವಾಗ, ಮುಕ್ತ ವೇದಿಕೆಗಳಲ್ಲಿ ಅಪಾರ ಪ್ರಮಾಣದ ಜ್ಞಾನ ಇದೆ ಎಂಬ ಪ್ರಚಾರವನ್ನು ಕೈಗೊಂಡು ಸಂಶೋಧನಾ ಅಭಿಯಾನವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ.  ನಮ್ಮ ಪರಂಪರೆಯ ಅರಿವು ಮೂಡಿಸುವುದು; ತಾಳೆ ಓಲೆಗಳ ಮೇಲೆ ಅರಿವು ಮೂಡಬೇಕಾದುದು ಬಾಲ್ಯದಿಂದಲೇ ಹೊರತು ಕಾಲೇಜಿಗೆ ಹೋದಾಗ ಅಲ್ಲ ಎಂಬುದು ನನ್ನ ಸ್ಪಷ್ಟ ಅಭಿಮತ.
  • ಗ್ರಂಥ ಸಂಪಾದನೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೂಕ್ತ ಮಿಶನ್‌ ಮೋಡ್‌ ಕಾರ್ಯಾಚರಣೆ ಆಗಬೇಕಿದೆ. ಈಗಿರುವ ಎಲ್ಲಾ ಗ್ರಂಥ ಸಂಪಾದನಾ ಕಾರ್ಯಗಳೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿವೆ. ಇವನ್ನೆಲ್ಲ ಒಂದು ಕೇಂದ್ರೀಕೃತ ನಿರ್ವಹಣಾ ಜಾಲದೊಳಗೆ ತಂದು ಕಾಲಮಿತಿಯಲ್ಲಿ ಗ್ರಂಥ ಸಂಪಾದನೆ ಮಾಡಬೇಕಿದೆ. ಇದಕ್ಕೆ ಆಡಳಿತಾತ್ಮಕ ದೃಢನಿಶ್ಚಯವೊಂದೇ ಅಗತ್ಯವಾಗಿದೆ.
  • ಇನ್ನು ಸಾರ್ವಜನಿಕ ನಿಧಿಯಿಂದ, ಸರ್ಕಾರಗಳ ಬೆಂಬಲದಿಂದ ಪ್ರಕಟಣೆ ಮಾಡುವಾಗ ಅದರ ಲಾಭವನ್ನಷ್ಟೇ ನೋಡದೆ ಮುಕ್ತಜ್ಞಾನದ ಭಾಗವಾಗಿ ಪರಿಗಣಿಸುವ ವರ್ತನೆಯನ್ನು ಸರ್ಕಾರಗಳು  ತೋರಬೇಕಿದೆ. ಪ್ರಕಟಣೆಯ ಹಂತದಲ್ಲೇ ಅವುಗಳನ್ನು ಮುಕ್ತಜ್ಞಾನ ಎಂದು ಘೋಷಿಸಬೇಕು ಎಂಬುದು ನನ್ನ ಅಭಿಪ್ರಾಯ. ಸಾರ್ವಜನಿಕ ಹಣದ ನೆರವಿನಿಂದ ಪ್ರಕಟವಾದ ಗ್ರಂಥಗಳು ಸಾರ್ವಜನಿಕರಿಗೆ ಮುಕ್ತವಾಗಿ ಸಿಗಲೇಬೇಕಿದೆ. ಸಾರ್ವಜನಿಕ ಹಣದಿಂದ ಕಟ್ಟುವ ರಸ್ತೆ, ಸೇತುವೆಗಳ ರೀತಿಯಲ್ಲೇ ಗ್ರಂಥಗಳೂ ಎಲ್ಲ ಜನತೆಗೂ ಸಮಾನವಾಗಿ ಸಿಗಬೇಕಿದೆ ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ.

ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಗ್ರಂಥ ಸಂಪಾದನೆಯ ಸುಲಭ ತಂತ್ರಜ್ಞಾನವನ್ನು ರೂಪಿಸುವುದು ಒಂದು ಸಂಘಟಿತ ಕಾರ್ಯವಾಗಬೇಕಿದೆ. ಪಠ್ಯರೂಪದಲ್ಲಿ ಸಂಗ್ರಹವಾಗಿರುವುದನ್ನು ತಪ್ಪಿಲ್ಲದಂತೆ ನೋಡಿಕೊಂಡು ನಮ್ಮ ಭಾಷೆಯ ಪರಂಪರೆಯನ್ನು ಉಳಿಸಿಕೊಳ್ಳಬೇಕಿದೆ. ಗ್ರಂಥಗಳ ವಿಷಯಗಳಿಂದ ಹಿಡಿದು, ಗ್ರಂಥಸೂಚಿಯವರೆಗೆ ಎಲ್ಲ ಬಗೆಯ ಸಾಧನಗಳನ್ನು ತಂತ್ರಜ್ಞಾನದ ಮೂಲಕವೇ ನಿರ್ವಹಿಸಿದರೆ ಮಾತ್ರವೇ ನಮ್ಮ ಭಾಷಾ ರಕ್ಷಣೆಯ ಕೆಲಸವು ನೈಜವಾಗುತ್ತದೆ.

(ದಿನಾಂಕ ೭ ಆಗಸ್ಟ್‌ ೨೦೧೯ರಂದು ಮಂಗಳೂರಿನಲ್ಲಿ ನಡೆದ “ಕನ್ನಡ ಗ್ರಂಥ ಸಂಪಾದನೆ: ಹೊಸ ಚಿಂತನೆಗಳು” ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ)

Share. Facebook Twitter Pinterest LinkedIn Tumblr Email
Previous Articleಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
Next Article www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.