Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
ಲೇಖನಗಳು

ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 9, 2008Updated:May 19, 2025No Comments8 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

೨೦೦೮ರ ಈ ವರ್ಷಕ್ಕೆ ಟಿಬೆಟಿನಿಂದ ಒಂದು ಲಕ್ಷ ಟಿಬೆಟನ್ ಸಮುದಾಯವು ದೇಶಭ್ರಷ್ಟವಾಗಿ ಭಾರತಕ್ಕೆ ಬಂದು ೪೯ ಸುದೀರ್ಘ ವರ್ಷಗಳಾಗುತ್ತಿದೆ. ಗೌರವ ಮತ್ತು ಘನತೆಯೊಂದಿಗೆ ತಮ್ಮ ತಾಯ್ನಾಡಿಗೆ ಮರಳುವ ದಿನಕ್ಕಾಗಿ ಇವರೆಲ್ಲ ದೃಢನಿಶ್ಚಿತರಾಗಿ ಕಾಯುತ್ತಿದ್ದಾರೆ. ಕಮ್ಯುನಿಸ್ಟ್  ಚೀನಾದ ಟಿಬೆಟ್ ಆಕ್ರಮಣದಿಂದ ಟಿಬೆಟನ್ನರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ; ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಈವರೆಗೆ ೧೨ ಲಕ್ಷ ಟಿಬೆಟನ್ನರು ಜೀವ ತೆತ್ತಿದ್ದಾರೆ. ೬೦೦ಕ್ಕೂ ಹೆಚ್ಚು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು, ಸ್ಮಾರಕಗಳು, ರಾಷ್ಟ್ರೀಯ ಪರಂಪರೆಯ ದ್ಯೋತಕಗಳು ನೆಲಸಮವಾಗಿವೆ. ವಿಶ್ವಸಂಸ್ಥೆಯ ೨೦ನೇ ಅಧಿವೇಶನದಲ್ಲಿ ಭಾರತದ ನಿಯೋಗದ ನಾಯಕರಾಗಿದ್ದ ಶ್ರೀ ಝಕಾರಿಯಾರವರೇ ‘ಟಿಬೆಟನ್ನರನ್ನು ಹೀಗೆಹೇಯವಾಗಿ ನಡೆಸಿಕೊಂಡ ಕೃತ್ಯವು ಜಗತ್ತಿನ ಇತಿಹಾಸದ ಪುಟಗಳಲ್ಲಿ ಅತ್ಯಂತ ವಿರಳವಾಗಿ ದಾಖಲಾಗಿರುವ ನಡೆ’ ಎಂದಿದ್ದಾರೆ. 

 

ದೇಶಭ್ರಷ್ಟರಾದ ಮೇಲೂ ಟಿಬೆಟನ್ನರು ಮಹಾಮಹಿಮ ದಲಾಯಿ ಲಾಮಾರ ನೇತೃತ್ವದಲ್ಲಿ ತಮ್ಮ ವಿಶಿಷ್ಟ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸಿಕೊಳ್ಳುವಲ್ಲಿ ಅಪಾರವಾದ ದೂರದೃಷ್ಟಿ, ತ್ಯಾಗ, ಧೈರ್ಯ ಮತ್ತು ಸಹನೆಯನ್ನು ತೋರಿದ್ದಾರೆ ; ತಮ್ಮ ನ್ಯಾಯಯುತ ಬೇಡಿಕೆಯನ್ನು ಜೀವಂತವಾಗಿ ಇಟ್ಟುಕೊಂಡು ಬಂದಿದ್ದಾರೆ. ಭಾರತು ನಮಗೆ ಉದಾರವಾದ ಆತಿಥ್ಯ, ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಿದೆ ; ಇದಿಲ್ಲದೆ ಹೋಗಿದ್ದರೆ ಈ ಪುಟ್ಟ ದೇಶಭ್ರಷ್ಟ ಸಮುದಾಯಕ್ಕೆ ತನ್ನ ಚಹರೆ ಮತ್ತು ಬೇಡಿಕೆಯನ್ನು ಮುನ್ನಡೆಸಿಕೊಳ್ಳುವುದಕ್ಕೆ ಅತ್ಯಂತ ಕಷ್ಟವಾಗುತ್ತಿತ್ತು. 

ಪ್ರತಿಯೊಬ್ಬ ದೇಶಭಕ್ತ ಭಾರತೀಯನಿಗೂ ಟಿಬೆಟಿನ ಪ್ರಶ್ನೆಯು ಕೇವಲ ಟಿಬೆಟನ್ ಜನರ ಬದುಕಿನ ದುಃಸ್ಥಿತಿಯ ಬಗೆಗಿನ ಕೇವಲ ಕಾಳಜಿ ಮಾತ್ರವಲ್ಲ ; ಭಾರತದ ಜೊತೆಗೆ ಟಿಬೆಟ್ ಹೊಂದಿರುವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಬಂಧದ ಹೊರತಾಗಿ ಭಾರತದ ಭದ್ರತೆ ಮತ್ತು ಇತರೆ ಸೂಕ್ಷ್ಮ ಸಂಗತಿಗಳ ಮೇಲೂ ಈ ವಿದ್ಯಮಾನವು ನೇರ ಪರಿಣಾಮವನ್ನು ಹೊಂದಿದೆ. 

ಟಿಬೆಟಿನ ಈ ಸುದೀರ್ಘಕಾಲೀನ ಸಮಸ್ಯೆಗೆ ಪರಿಹಾರವನ್ನು ಹುಡುಕುವುದು ಚೀನಾ, ಭಾರತ ಮತ್ತು ಟಿಬೆಟ್ ದೇಶಗಳಿಗೇ ಒಳಿತು. ಅಲ್ಲದೆ ಈ ಪರಿಹಾರವು ಉಪಖಂಡದಲ್ಲಿ ಶಾಂತಿ ಮತ್ತು ಸ್ನೇಹದ ಸ್ಥಾಪನೆಗೂ ಹಿತ. ಮಹಾಮಹಿಮ ದಲಾಯಿ ಲಾಮಾರವರು ಮುಂದಿಟ್ಟ ಶಾಂತಿ ಪ್ರಸ್ತಾಪವು ಎಲ್ಲರ ಒಳಿತನ್ನು ಬಯಸುವ ಎಲ್ಲಾ ಸಂಗತಿಗಳಿಗೂ ಪರಿಹಾರ ಒದಗಿಸಿದೆ.  ಅವರಿಗೆ ಕೇವಲ ಅಹಿಂಸೆಯ ಪ್ರಚಾರಕ್ಕೆ ನೋಬೆಲ್ ಪ್ರಶಸ್ತಿ ಸಿಕ್ಕಿದ್ದಷ್ಟೇ ಅಲ್ಲ ; ವಿಶ್ವನಾಯಕರು, ಸರ್ಕಾರಗಳು ಮತ್ತು  ಸಂಸದರು ಈ ಪ್ರಸ್ತಾಪವು ಎಲ್ಲರಿಗೂ ಲಾಭದಾಯಕವಾಗುಇವ ಅತ್ಯಂತ ರಚನಾತ್ಮಕ ಪ್ರಸ್ತಾಪ ಎಂದು ಬೆಂಬಿಲಿಸಿದರು. ಸಿ ಪಿ ಐ ಸೇರಿದಂತೆ ಸರ್ವಪಕ್ಷಗಳನ್ನು ಪ್ರತಿನಿಧಿಸಿದ ಭಾರತದ ೨೧೨ ಸಂಸದರು ಈ ಉಪಕ್ರಮಗಳನ್ನು ‘ ನಾವು ಮಹಾಮಹಿಮ ದಲಾಯಿ ಲಾಮಾರ ಐದಂಶಗಳ ಶಾಂತಿಯೋಜನೆಯು ಟಿಬೆಟಿನ ಬಹುಮುಖ್ಯ ಪ್ರಶ್ನೆಯನ್ನು ಪರಿಹರಿಸುವಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪರಿಗಣಿಸಿ, ಅದು ಟಿಬೆಟನ್ನರ ಯಾತನೆಯನ್ನು ನಿವಾರಿಸಿ ಪ್ರಾದೇಶಿಕ ಉದ್ವಿಗ್ನತೆಯನ್ನು ಶಮನಗೊಳಿಸುತ್ತದೆ ಎಂದು ಭಾವಿಸಿ, ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದು ಹೇಳಿದ್ದಾರೆ. 

ಭಾರತಕ್ಕೆ ಕಳವಳಕಾರಿಯಾದ ಅಂಶಗಳು 

ಟಿಬೆಟಿನ  ಜೊತೆಗೆ ಭಾರತದ ಸಂಬಂಧವು ಇತಿಹಾಸದ ಉದ್ದಕ್ಕೂ ಅತ್ಯಂತ ನಿಕಟವಾಗಿದೆ; ಸ್ನೇಹಯುತವಾಗಿದೆ. ಅದರಲ್ಲೂ ಭಾರತದಿಂದ ಏಳನೇ ಶತಮಾನದಲ್ಲಿ ಬೌದ್ಧ ದರ್ಮವು ಟಿಬೆಟಿಗೆ ಬಂದಾಗಿನಿಂದ ವಿಶೇಷವಾಗಿ ಹೆಚ್ಚಿದೆ. 

ಟಿಬೆಟನ್ನು ಚೀನಾವು ಆಕ್ರಮಣ ಮಾಡಿದ ಮೇಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಚೀನಾ ಮತ್ತು ಭಾರತದ ಸೇನೆಗಳು ಹಿಮಾಲಯದ ಗಡಿಯಲ್ಲಿ ಮೊಟ್ಟಮೊದಲ ಬಾರಿಗೆ ಮುಖಾಮುಖಿಯಾದವು. ಡಾ|| ರಾಜೇಂದ್ರ ಪ್ರಸಾದ್, ಡಾ|| ರಾಮ್ ಮನೋಹರ್ ಲೋಹಿಯಾ, ಲೋಕನಾಯಕ ಜಯಪ್ರಕಾಶ ನಾರಾಯಣ, ಡಾ|| ಬಿ.ಆರ್. ಆಂಬೇಡ್ಕರ್, ಸರ್ದಾರ್ ಪಟೇಲ್, ಪಂಡಿತ್ ದೀನದಯಾಳ ಉಪಾಧ್ಯಾಯ ಮತ್ತು ಹಲವು ಭಾರತೀಯ ಗಣ್ಯ ನಾಯಕರು ಟಿಬೆಟ್ ಬಗ್ಗೆ ಮತ್ತು ಭಾರತದ ಭದ್ರತೆಯ ಬಗ್ಗೆ ಅದು ಹೊಂದಿರುವ ಸಂಬಂಧದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಹೊತ್ತಿನ ಹೊಸ ಭೂ-ರಾಜನೈತಿಕ ಹಾಗೂ ಭೂ-ವಐತ್ಮಕ ಸಂದರ್ಭದಲ್ಲಿ ಈ ಕೆಳಗಿನ ಸಂಗತಿಗಳು ಭಾರತದ ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನೇರವಾದ ಪರಿಣಾಮವನ್ನು ಉಂಟುಮಾಡಲಿವೆ. 

ಟಿಬೆಟನ್ ಪ್ರಸ್ಥಭೂಮಿಯ ಮಿಲಿಟರೀಕರಣ 

ಚೀನಾವು ಭಾರತ ಹಾಗೂ ಚೀನಾದ ನಡುವಣ ಶಾಂತ – ಸಮರರಹಿತ ವಲಯವಾಗಿದ್ದ ಟಿಬೆಟನ್ನು ಒಂದು ಬೃಹತ್ ಮಿಲಿಟರಿ ವಲಯವನ್ನಾಗಿ ಪರಿವರ್ತಿಸಿದೆ. ಟಿಬೆಟನ್ ಪ್ರಸ್ಥಭೂಮಿಯ ಮಿಲಿಟರೀಕರಣವು ಈ ಪ್ರದೇಶದ ಭೂ-ರಾಜನೈತಿಕ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರಿಂದ ಅಂತಾರಾಷ್ಟ್ರೀಯ ಉದ್ವಿಗ್ನತೆ ಉಂಟಾಗಲಿದೆ. ಅದರಲ್ಲೂ ವಿಶೇಷವಾಗಿ ಭಾರತ ಉಪಖಂಡದಲ್ಲಿ ಇದರ ಪರಿಣಾಮ ಗೋಚರಿಸಲಿದೆ. 

ಟಿಬೆಟಿನಲ್ಲಿ ಚೀನಾದ ಮಿಲಿಟರಿ ಬಲವು ಹೀಗಿದೆ(2004): 

 

  • ೩ ಲಕ್ಷದಿಂದ ೫ಕ್ಷದವರೆಗೆ ಸೇನಾಬಲ; ಇವರಲ್ಲಿ ಬಹುತೇಕ ಸೈನಿಕರನ್ನು   ಭಾರತದ ಗಡಿಯಲ್ಲಿ ನಿಯೋಜಿಸಲಾಗಿದೆ. 
  • ೧೭ ರಹಸ್ಯ ರಾಡಾರ್ ಕೇಂದ್ರಗಳು 
  • ೧೪ ಮಿಲಿಟರಿ ವಿಮಾನ ನೆಲೆಗಳು 
  • ೮ ಕ್ಷಿಪಣಿ ನೆಲೆಗಳು. ಇವುಗಳಲ್ಲಿ 
  • ೮ ಐ ಬಿ ಸಿ ಎಂಗಳು (ಅಂತಾರಾಷ್ಟ್ರೀಯ ಚಿಮ್ಮು ಕ್ಷಿಪಣಿಗಳು)
  • ೭೦ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು
  • ೫೦ ಅಂತರ್ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು ಸೇರಿವೆ.

 

ಇದಲ್ಲದೆ ಚೀನಾವು ಟಿಬೆಟನ್ನು ತನ್ನ ರಾಸಾಯನಿಕ ಸಮರ ಅಭ್ಯಾಸಗಳಿಗೆ ಮತ್ತು ಇತರೆ ದೇಶಗಳಿಂದ ಭಾರೀ ಪ್ರಮಾಣದ ಹಣವನ್ನು ಪಡೆದು ಸ್ವೀಕರಿಸಿದ ಪರಮಾಣು ತ್ಯಾಜ್ಯವನ್ನು ಹುಗಿಯಲು ಬಳಸುತ್ತಿದೆ. 

ಇಷ್ಟೇ ಅಲ್ಲ, ೧೯೫೯ರಿಂದ ಈಚೆಗೆ ಭಾರತ-ಟಿಬೆಟ್ ಗಡಿಯ ಉಸ್ತುವಾರಿಗಾಗಿ ಭಾರತವು ಪ್ರತಿವರ್ಷವೂ ಬಳಸುತ್ತಿರುವ ರಾಷ್ಟ್ರೀಯ ಸಂಪನ್ಮೂಲವು ಹೆಚ್ಚುತ್ತಲೇ ಹೋಗಿದೆ. ಪರಿಸ್ಥಿತಿ ಹೀಗಿಲ್ಲದಿದ್ದರೆ ಈ ಸಂಪನ್ಮೂಲವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತು. 

ರೈಲು ಯೋಜನೆ ಮತ್ತು ಅದರಿಂದ ಭಾರತದ ಮೇಲಾಗುವ ಪರಿಣಾಮ 

೨೦೦೧ರ ಜೂನ್ ೨೯ರಂದು ಚೀನಾವು ಗೊರ್ಮೊದಿಂದ ಟಿಬೆಟಿನ ಲ್ಹಾಸಾಗೆ ಸಂಪರ್ಕ ಕಲ್ಪಿಸುವ ೧೧೧೮ ಕಿಲೋಮೀಟರುಗಳಷ್ಟು ಉದ್ದದ ರೈಲುಹಳಿ ಯೋಜನೆಯನ್ನು ಆರಂಭಿಸಿದೆ. ಇಷ್ಟಲ್ಲದೆ ೨೦೦೧ರ ಆಗಸ್ಟ್ ೧೦ರಂದು ಆಗಿನ ಚೀನಾ ಅಧ್ಯಕ್ಷ ಜಿಯಾಂಗ್ ಜೆಮಿನ್ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಿಂದಾಗಿ ಚೀನಾವು ಈ ರೈಲು ಸಂಪರ್ಕವನ್ನು ನಿರ್ಮಿಸುವ ಪಣ ತೊಟ್ಟಿರುವುದು ಕೇವಲ ರಾಜಕೀಯ ಹಾಗೂ ಮಿಲಿಟರಿ ಅಗತ್ಯಗಳಿಗೆ ಎನ್ನುವುದು ಸ್ಪಷ್ಟವಾಗಿದೆ. 

ಈ ಯೋಜನೆಯು ಟಿಬೆಟನ್ ಪ್ರಸ್ಥಭೂಮಿಯನ್ನು ಮಿಲಿಟರೀಕರಣಗೊಳಿಸುವ ಚೀನಾದ ಕ್ರಮವನ್ನು ಇನ್ನಷ್ಟು ವಿಸ್ತರಿಸಲಿದೆ. ಇದರಿಂದ ಭಾರತ ಮತ್ತು ಚೀನಾದ ನಡುವೆ ಶಸ್ತ್ರಸ್ಪರ್ಧೆ ಉಲ್ಬಣಗೊಳ್ಳಲಿದೆ ; ಇದರಿಂದಾಗಿ ದಕ್ಷಿಣ ಮತ್ತು ಆಗ್ನೇಯ ಏಶಿಯಾದ ಶಕ್ತಿಸಮತೋಲನವು ಸಂಪೂರ್ಣವಾಗಿ ಬದಲಾಗಲಿದೆ. 

ಒಮ್ಮೆ ಗೊರ್ಮೊವನ್ನು ಲ್ಹಾಸಾದ ರೈಲುಮಾರ್ಗದ ಮೂಲಕ ಜೋಡಿಸಿದ ಮೇಲೆ ಗೊರ್ಮೊದಲ್ಲಿನ ಮಿಲಿಟರಿ ನೆಲೆಯನ್ನು ಹಲವು ಪಟ್ಟು ಹೆಚ್ಚಿಸಬಹುದು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.  ಇದರಿಂದಾಗಿ ಕೊಂಗ್‌ಪೋ ಮತ್ತು ಭಾರತದ ಗಡಿಯಲ್ಲಿರುವ ಟಿಬೆಟಿನ ನೈಋತ್ಯ ಪ್ರದೇಶಗಳಲ್ಲಿ ಪಿ ಎಲ್ ಎ ನೆಲೆಗಳು ಹರಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. 

ರೈಲ್ವೆ ಮಾರ್ಗವು ಕೊನೆಗೊಂಡ ಮೇಲೆ ಭಾರತೀಯ ಮಾರುಕಟ್ಟೆಯು ಅಗ್ಗದ ಚೀನೀ ನಿರ್ಮಿತ ವಸ್ತುಗಳ ಭಾರೀ ಪ್ರವಾಹಕ್ಕೆ ತುತ್ತಾಗಲಿದೆ. ಇದರಿಂದ ಭಾರತದ ಗೃಹ ಉದ್ಯಮಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ನೆಲ ಕಚ್ಚಲಿವೆ. 

ಪರಿಸರ ನಾಶ 

ವಿಶ್ವದ ಛಾವಣಿ ಎಂದೇ ಹೆಸರಾದ ಟಿಬೆಟ್ ಏಶಿಯಾಖಂಡದ ಹೃದಯಭಾಗದಲ್ಲಿದೆ. ಅದು ಎಲ್ಲಾ ಪ್ರಮುಖ ನದಿಗಳಿಗೆ ಮೂಲವಾಗಿದೆ. ಈ ನದಿಗಳೇ ಭಾರತ, ಚೀನಾ, ನೇಪಾಳ, ಭೂತಾನ, ಬಾಂಗ್ಲಾದೇಶ, ಪಾಕಿಸ್ಥಾನ, ಮ್ಯನ್ಮಾನ್, ಥೈಲ್ಯಾಂಡ್, ಲಾವೋಸ್, ಕ್ಯಾಂಬೋಡಿಯಾ ಮತ್ತು ವಿಯೆಟ್ನಾಮ್ ದೇಶಗಳ, ಅಂದರೆ ಏಶಿಯಾ ಖಂಡದ ಅಧರದಷ್ಟು ಜನಸಂಖ್ಯೆಯ ಬದುಕಿಗೆ ಆಧಾರವಾಗಿವೆ. 

ಚೀನೀ ಆಡಳಿತದಲ್ಲಿ ಟಿಬೆಟಿನ ಪರಿಸರವನ್ನು ವ್ಯವಸ್ಥಿತವಾಗಿ, ಅಭೂತಪೂರ್ವವಾಗಿ ನಾಶ ಮಾಡಲಾಗುತ್ತಿದೆ. ಅಲ್ಲಿನ ಸಂಪದ್ಭರಿತ ವನ್ಯಜೀವಿ ಸಂಕುಲ, ಕಾಡುಗಳು, ಸಸ್ಯಗಳು, ಖನಿಜಗಳು, ಜಲಮೂಲಗಳು – ಎಲ್ಲವೂ ಇನ್ನಿಲ್ಲದಂತೆ ನಷ್ಟ ಮತ್ತು ಶೈಥಿಲ್ಯಕ್ಕೆ ಒಳಗಾಗಿವೆ. ಟಿಬೆಟಿನ ಸೂಕ್ಷ್ಮ ಜೈವಿಕ ಸಮತೋಲನವು ತೀವ್ರ ಆಘಾತಕ್ಕೆ ಒಳಗಾಗಿದೆ.

೧೯೮೫ರ ಹೊತ್ತಿಗೆ ಚೀನಾ ಆಡಳಿತವು ಟಿಬೆಟಿನ ಅರಣ್ಯ ಸಂಪತ್ತಿನಿಂದ ೫೪ ಬಿಲಿಯ ಡಾಲರ್‌ಗಳಷ್ಟು ಬೆಲೆಯ ಮರಮುಟ್ಟುಗಳನ್ನು ಕತ್ತರಿಸಿ ಸಾಗಿಸಿದೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಬರಿ ಅಮ್‌ದೋ ಪ್ರಾಂತವೊಂದರಲ್ಲೇ ೧೯೫೫ರಿಂದೀಚೆಗೆ ೫೦ ಮಿಲಿಯ ಮರಗಳನ್ನು ಕಡಿದು ಉರುಳಿಸಲಾಗಿದೆ.  ಟಿಬೆಟಿನ ಉಳಿದ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಇಂಥದೇ ಸ್ಥಿತಿ ಉಂಟಾಗಿದೆ. 

ಟಿಬೆಟಿನ ಅರಣ್ಯನಾಶವು ನದಿಗಳಲ್ಲಿ ಹೂಳಿಗೆ ಕಾರಣವಾಗಿದೆ ; ಚೀನಾವೂ ಸೇರಿದಂತೆ ನೆರೆದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.  ೧೯೮೭-೮೮ರಲ್ಲಿ ಬ್ರಹ್ಮಪುತ್ರ ನದಿಯು ಭಾರತದ ನೆರೆ ಪ್ರಮಾಣದಲ್ಲಿ ಶೇ. ೩೫ರಷ್ಟು  ಪಾಲು ಹೊಂದಿತ್ತು. ಟಿಬೆಟಿನ ಅರಣ್ಯನಾಶವು ಮುಂಗಾರಿನ ಅಸಮತೋಲನಕ್ಕೂ ಕಾರಣವಾಗುತ್ತದೆ. ಇದರಿಂದಾಗಿ ಭಾರತದ ಕೃಷಿಯ ಮೇಲೆ ದುರಂತದ ಛಾಯೆ ಮೂಡಬಹುದಾಗಿದೆ. 

ಚೀನಾವು ಈಗಾಗಲೇಬ್ರಹ್ಮಪುತ್ರ ನದಿಯ ಪಾತ್ರವನ್ನು ಬದಲಿಸುವ ತನ್ನ ಯೋಜನೆಯನ್ನು ಪ್ರಕಟಿಸಿದೆ. ಮುಂದಿನ ಪಾಳಿ ಸಿಂಧೂ ನದಿಯದಾಗಿರಬಹುದು. ಆಮೇಲೆ ಸಟ್ಲೆಜ್. ಭೌತಿಕವಾಗಿ ಅಸಾಧ್ಯ ಎನ್ನುವವರೆಗೆ ಚೀನಾವು ಭಾರತವನ್ನು ದುರ್ಬಲಗೊಳಿಸಲು ಮತ್ತು ನಿಯಂತ್ರಣದಲ್ಲಿ ಇಡುವ ಅಭಿಯಾನದಲ್ಲಿ ಯಾವುದೇ ಮಾರ್ಗವನ್ನೂ ಚೀನಾವು ಬಳಸದೆ ಬಿಡದು. 

ಕೈಲಾಸ – ಮಾನಸ ಸರೋವರ 

ಟಿಬೆಟಿನ ಇತರೆ ಭಾಗಗಳಂತೆ ಪವಿತ್ರ ಕೈಲಾಸ – ಮಾನಸ ಸರೋವರ ಪ್ರದೇಶವನ್ನೂ ಮಿಲಿಟರಿ ನೆಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಕೈಲಾಸ – ಮಾನಸ ಸರೋವರ ಪ್ರದೇಶವುಭಾರತದ ಹಲವು ಮಹಾನ್ ನದಿಗಳ ಉಗಮಪ್ರದೇಶವಾಗಿರುವುದರಿಂದ ಚೀನಾವು ಈ ಪ್ರದೇಶದ ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸಿ ಈ ಪವಿತ್ರ, ಪುಣ್ಯಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿದೆ. ಕೈಲಾಸ – ಮಾನಸ  ಸರೋವರಕ್ಕೆ ಭೇಟಿ ನೀಡಬಯಸುವ ಭಾರತೀಯ ತೀರ್ಥಯಾತ್ರಿಗಳಿಗೆ ಚೀನಾವು ಎಲ್ಲಾ ಬಗೆಯ ನಿರ್ಬಂಧಗಳನ್ನು ಹೇರಿ ಅವರಿಗೆ ಭೇಟಿ ನೀಡುವುದಕ್ಕೇ ಸಮಸ್ಯೆಗಳನ್ನು ಉಮಟುಮಾಡುತ್ತಿದೆ. 

ಚೀನೀ ಜನಸಂಖ್ಯೆಯ ವರ್ಗಾವಣೆ 

ಭಾರೀ ಪ್ರಮಾಣದಲ್ಲಿ ಚೀನೀಯರನ್ನು ಟಿಬೆಟಿಗೆ ವರ್ಗಾವಣೆ ಮಾಡುವ ಮತ್ತು ಟಿಬೆಟನ್ ಮಹಿಳೆಯರಿಗೆ ಬಲವಂತವಾಗಿ ಗರ್ಭಪಾತ ಮಾಡುವ ಮತ್ತು ಸಂತಾನಹರಣ ಶಸ್ತ್ರ ಚಿಕಿಸ್ತೆ ಮಾಡುವ ‘ಚೀನೀಕರಣ’ವು ಭಾರತದ ಮೇಲೆ ತೀವ್ರವಾದ ಋಣಾತ್ಮಕ  ಭೂರಾಜನೈತಿಕ ಪರಿಣಾಮ ಉಂಟು ಮಾಡಲಿದೆ ; ಭೂ-ವ್ಯೂಹಾತ್ಮಕ ಪರಿಣಾಮವೂ ಕಂಡುಬರಲಿದೆ. ಒಮ್ಮೆ ಟಿಬೆಟ್ ಚೀನೀಯರಿಂದ ತುಂಬಿಹೋದರೆ ಸಾಕು, ಅದು ಈ ಹಿಂದೆ ಶಾಂತಿವಲಯವಾಗಿತ್ತು ಎಂಬ ಐತಿಹಾಸಿಕ ಸ್ಥಾನಮಾನವೇ ಕಾಯಂ ಆಗಿ ಮರೆಯಾಗುತ್ತದೆ. 

ಇಂದು ಟಿಬೆಟಿನಲ್ಲಿ ಟಿಬೆಟನ್ನರ ಸಂಖ್ಯೆ ೬೦ ಲಕ್ಷ ; ಆದರೆ ಚೀನೀಯರ ಸಂಖ್ಯೆ ೭೫ ಲಕ್ಷ. ಲ್ಹಾಸದಲ್ಲಿ ೧೯೫೦ರಲ್ಲಿ ಚೀನೀಯರು ಇದ್ದಿದ್ದೇ   ತೀರಾ ಅಪರೂಪ. ಇಂದು ಅಲ್ಲಿ ಚೀನೀಯರು ಮತ್ತು ಟಿಬೆಟನ್ ಜನಸಂಖ್ಯೆ ಅನುಪಾತ ೩:೧. 

ಟಿಬೆಟನ್ನು ಅಹಿಂಸೆಯ ವಲಯವನ್ನಾಗಿ ಮಾಡುವ ಅನಿವಾರ್ಯತೆಯ ಬಗ್ಗೆ ಜಾಗೃತಿಯನ್ನು ಉಂಟುಮಾಡುವುದು, ಟಿಬೆಟಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ಟಿಬೆಟಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಪರಂಪರೆಯನ್ನು ವ್ಯವಸ್ಥಿತವಾಗಿ ಹರಣ ಮಾಡುತ್ತಿರುವುದು, ಟಿಬೆಟಿನ್ ಪ್ರಸ್ಥಬೂಮಿಯಲ್ಲಿ ಪರಿಸರದ ನಾಶಕ್ಕೆ, ಶೈಥಿಲ್ಯಕ್ಕೆ ಕಾರಣವಾಗಿ ಇಡೀ ಹಿಮಾಲಯ ಪ್ರದೇಶದ ಹಾಗೂ ದಕ್ಷಿಣ ಹಾಗೂ ಆಗ್ನೇಯ ಏಶಿಯಾದ ದೇಶಗಳ ಭವಿಷ್ಯಕ್ಕೆ ಬಾರೀ ಗಂಡಾಂತರವನ್ನು ತಂದಿರುವುದು, ಸಾಂಪ್ರದಾಯಿಕವಾಗಿ ಶಾಂತಿಯ ಪ್ರದೇಶವೇ ಆಗಿದ್ದ ಟಿಬೆಟಿನಲ್ಲಿ ಭಾರೀ ಪ್ರಮಾಣದಲ್ಲಿ ಪರಮಾಣು ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ಸ್ಥಾಪಿಸಿರುವುದು, – ಇವು ಈಗಿನ ಮುಖ್ಯ ಸಂಗತಿಗಳಾಗಿವೆ. 

ಟಿಬೆಟ್ : ಒಂದು ಪಕ್ಷಿನೋಟ 

 

  • ವಿಸ್ತೀರ್ಣ: ೨.೫ ದಶಲಕ್ಷ ಚದರ ಕಿಮೀ; ಅಂದರೆ ಈಗಿನ ಚೀನಾದ ಶೇ. ೨೬.೦೪ರಷ್ಟು ಪ್ರದೇಶ. 
  • ರಾಜಧಾನಿ: ಲ್ಹಾಸಾ 
  • ಜನಸಂಖ್ಯೆ ೬೦ ಲಕ್ಷ ಟಿಬೆಟನ್ನರು ಮತ್ತು ಚೀನೀ ಆಕ್ರಮಣದಲ್ಲಿ ಲೆಕ್ಕಕ್ಕೆ ಸಿಗದ ಅಸಮಖ್ಯೆ ಜನರು. 
  • ಧರ್ಮ: ಬೌದ್ಧ, ಬಾನ್ ಮತ್ತು ಇಸ್ಲಾಮ್ 
  • ಭಾಷೆ: ಟಿಬೆಟನ್ (ಅಧಿಕೃತ ಭಾಷೆ) ; ಆಕ್ರಮಿತ ಟಿಬೆಟಿನಲ್ಲಿ ಈಗ ಚೀನೀ ಭಾಷೆ. 
  • ಪ್ರಮುಖ ಪಾರಿಸರಿಕ ಸಮಸ್ಯೆ : ಬೇಕಾಬಿಟ್ಟಿ ಅರಣ್ಯನಾಶ, ಬೃಹತ್ ಸಸ್ತನಿಗಳ ಬೇಟೆ 
  • ಸರಾಸರಿ ಎತ್ತರ: ೧೪,೦೦೦ ಅಡಿಗಳು 
  • ಉನ್ನತ ಶಿಖರ : ಚೋಮೋಲುಂಗ್‌ಮಾ / ಸಾಗರಮಾತಾ / ಮೌಂಟ್ ಎವರೆಸ್ಟ್, ೨೯,೦೨೪ ಅಡಿಗಳು 
  • ಸರಾಸರಿ ತಾಪಮಾನ: ಜುಲೈ: ೫೮ ಡಿಗ್ರಿ ಫ್ಯಾರನ್‌ಹೀಟ್, ಜನವರಿ : ೪ ಡಿಗ್ರಿ ಫ್ಯಾ. 
  • ಪ್ರಮುಖ ನದಿಗಳು: ತ್ಸಾಂಗ್‌ಪೋ (ಬ್ರಹ್ಮಪುತ್ರ) ಯಾಂಗ್‌ತ್ಸೆ, ಮಿಕಾಂಗ್, ಸಲ್ವೀನ್, ಹುವಾಂಗ್ ಹೊ ಮತ್ತು ಇಂಡಸ್ ಹಾಗೂ ಸಟ್ಲೆಜ್ 
  • ಪ್ರಾಂತಗಳು: ಯು-ತ್ಸಾಂಗ್, ಅಮ್ದೋ ಮತ್ತು ಖಾಮ್ 
  • ಗಡಿದೇಶಗಳು: ಒಳ ಮಂಗೋಲಿಯಾ, ಪೂರ್ವ ತುರ್ಕಮೆನಿಸಸ್ತಾನ್, ಭಾರತ, ನೇಪಾಳ, ಭೂತಾನ್, ಬರ್ಮಾ ಮತ್ತು ಚೀನಾ 
  • ಆಡಳಿತದ ಮುಖ್ಯಸ್ಥರು : ಮಹಾಮಹಿಮ ದಲಾಯಿಲಾಮಾ 
  • ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜೊತೆಗಿನ ಸಂಬಂಧ: ವಸಾಹತು 

 

ಟಿಬೆಟ್ ಸ್ವಾಯತ್ತ ಪ್ರಾಂತ ಎಂದರೇನು? ( ಟಿ ಎ ಆರ್) 

೧೯೬೫ರಲ್ಲಿ ರಚಿತವಾದ ತಥಾಕಥಿತ ಟಿಬೆಟ್ ಆಟೋನಾಮಸ್ ರೀಜನ್ ಎಂಬುದು ಟಿಬೆಟಿನ ಅರ್ಧದಷ್ಟು ಪ್ರದೇಶ ಹಾಗೂ ಟಿಬೆಟಿನ ಮೂರನೇ ಒಂದು ಭಾಗದಷ್ಟು ಜನರನ್ನು ಒಳಗೊಂಡ ಪ್ರಾಂತ. (ನಿಜ ಅರ್ಥದಲ್ಲಿ ಟಿಬೆಟ್ ಎಂದರೆ ಯು-ತ್ಸಾಂಗ್, ಆಮ್‌ದೋ ಹಾಗೂ ಖಾಮ್ ಪ್ರಾಂತಗಳನ್ನು ಒಳಗೊಂಡದ್ದು. ಟಿಬೆಟ್ ಎಂದರೆ ಕೇವಲ ಟಿಬೆಟ್ ಆಟೋನಾಮಸ್ ರೀಜನ್ ಎಂದು ತಪ್ಪು ತ ಇಳಿಯಬಾರದು)

ಭೂಪ್ರದೇಶ 

ಉ-ತ್ಸಾಂಗ್, ಖಾಮ್ ಹಾಗೂ ಆವ ಪ್ರಾಂತವನ್ನು ಒಳಗೊಂಡಂತೆ ಟಿಬೆಟಿನ ವಿಸ್ತೀರ್ಣ ೨.೫ ದಶಲಕ್ಷ ಚದರ ಕಿಮೀ. ಉ-ತ್ಸಾಂಗ್ ಹಾಗೂ ಖಾಮ್ ಪ್ರಾಂತದ ಒಂದಷ್ಟು ಭಾಗವನ್ನು ಒಳಗೊಂಡ ಟಿಬೆಟ್ ಆಟೋನಾಮಸ್ ರೀಜನ್ ಕೇವಲ ೧.೨ ಚದರ ಕಿಮೀ. ವಿಸ್ತೀರ್ಣವನ್ನು ಹೊಂದಿದೆ.  ಟಿಬೆಟಿನ ಬಹುಭಾಗವು ಈ ಟಿ ಎ ಆರ್‌ನ ಹೊರಗೆ ಇದೆ. 

ಆಡಳಿತ 

ಚೀನೀ ಆಡಳಿತದಲ್ಲಿ ಟಿಬೆಟನ್ನು ಈ ಕೆಳಕಂಡಂತೆ ಆಡಳಿತಾತ್ಮಕ ಘಟಕಗಳನ್ನಾಗಿ ವಿಂಗಡಿಸಲಾಗಿದೆ: 

೧) ಟಿಬೆಟ್ ಆಟೋನಾಮಸ್ ರೀಜನ್ 

೨) ಖಿಂಗಾಯ್ ಪ್ರಾಂತ 

೩) ತಿಯಾನ್‌ಝು ಟಿಬೆಟನ್ ಆಟೋನಾಮಸ್ ಕೌಂಟಿ ಮತ್ತು ಗಾನ್‌ಸು ಪ್ರಾಂತದಲ್ಲಿ ಗನ್ನಾನ್ ಆಟೋನಾಮಸ್ ಪ್ರಿಫೆಕ್ಚರ್. 

೪) ಸಿಚುವಾನ್ ಪ್ರಾಂತದಲ್ಲಿ ಅಬಾ ಟಿಬೆಟನ್ – ಖಿಯಾಂಗ್ ಆಟೋನಾಮಸ್ ಪ್ರಿಫೆಕ್ಚರ್ ಮತ್ತು ಮಿಲಿ ಟಿಬೆಟನ್ ಆಟೋನಾಮಸ್ ಕೌಂಟಿ. 

೫) ಯುನ್ನಾನ್ ಪ್ರಾಂತದಲ್ಲಿ ಡೆಚೆನ್ ಟಿಬೆಟನ್ ಆಟೋನಾಮಸ್ ಪ್ರಿಫೆಕ್ಚರ್. 

ಜನಸಂಖ್ಯೆ: 

ಟಿಬೆಟಿನ ಒಟ್ಟು ಜನಸಂಖ್ಯೆ ೬೦ ಲಕ್ಷ. ಇವರಲ್ಲಿ ೨.೦೩ ದಶಲಕ್ಷ ಜನರು ಟಿ ಎ ಆರ್‌ನಲ್ಲಿದ್ದಾರೆ.ಉಳಿದವರು ಟಿ ಎ ಆರ್ ಹೊರಗಿನ ಪ್ರದೇಶಗಳಲ್ಲಿ ಇದ್ದಾರೆ. 

ದೇಶಭ್ರಷ್ಟ ಟಿಬೆಟನ್ನರು: 

ಜನಸಂಖ್ಯೆ: ಸುಮಾರು ೧೧೧,೧೭೦ (ಜಾಗತಿಕ ಹಂಚಿಕೆ: ಬಾರತದಲ್ಲಿ ಟಿಬೆಟನ್ನರ ಸಂಖ್ಯೆ: ೮೫,೦೦೦). ನೇಪಾಳ : ೧೪,೦೦೦, ಭೂತಾನ: ೧೬೦೦. ಸ್ವಿಜರ್‌ಲ್ಯಾಂಡ್: ೧೫೪೦, ಯೂರೋಪಿನ ಉಳಿದ ಭಾಗದಲ್ಲಿ: ೬೪೦, ಸ್ಕಾಂಡಿನೇವಿಯಾ: ೧೦೦೦, ಅಮೆರಿಕಾ ಮತ್ತು ಕೆನಡಾ: ೭೦೦೦, ಆಸ್ಟ್ರೇಲಿಯಾ ಮತ್ತು ನ್ಯೂಝೀಲ್ಯಾಂಡ್: ೨೨೦. (ಧರ್ಮಶಾಲೆಯು ಮಾಡಿದ ೧೯೯೮ರ ಟಿಬೆಟನ್ ಜನಸಂಖ್ಯಾ ಸಮೀಕ್ಷೆ ಆಧಾರಿತ) 

ದೇಶಭ್ರಷ್ಟ ಟಿಬೆಟನ್ ಸರ್ಕಾರ: ಟಿಬೆಟನ್ ಮೌಲ್ಯಗಳ ಆಧಾರಿತ ಪ್ರಜಾತಾಂತ್ರಿಕ ರಾಜಕೀಯದ ಆಡಳಿತ. ಇಲ್ಲಿ ಸ್ವತಂತ್ರ ನ್ಯಾಯಾಂಗವಿದೆ. ನೇರವಾಗಿ ಆಯ್ಕೆಯಾದ ಶಾಸಕಾಂಗವಿದೆ; ಸಂಸತ್ತಿಗೆ ನೇರವಾಗಿ ಹೊಣೆಗಾರಿಕೆ ಹೊಂದಿರುವ ಸಚಿವ ಸಂಪುಟವಿದೆ. 

ಸಂವಿಧಾನ: ಚಾರ್ಟರ್ ಆಫ್ ಟಿಬೆಟನ್ ಇನ್ ಎಕ್ಸೈಲ್. 

ಪ್ರಮುಖ ಸರ್ಕಾರೇತರ ಸಂಸ್ಥೆಗಳು: ಟಿಬೆಟನ್ ಯೂಥ್ ಕಾಂಗ್ರೆಸ್, ಟಿಬೆಟನ್ ವುಮೆನ್ಸ್ ಅಸೋಸಿಯೇಶನ್, ಟಿಬೆಟನ್ ಸೆಂಟರ್ ಫಾರ್ ಹ್ಯುಮನ್ ರೈಟ್ಸ್ ಎಂಡ್ ಡೆಮಾಕ್ರಸಿ, ಎನ್ ಡಿ ಪಿ ಟಿ, ಟಿಬೆಟನ್ ಯುನೈಟೆಡ್ ಅಸೋ, ಗು-ಚು-ಸುಮ್-ದೊ-ತೋ ಅಸೋ, ದೊ-ಮೇ ಅಸೋ, ಉ-ತ್ಸಾಂಗ್ ಅಸೋ, ಎನ್‌ಗಾರಿ ಅಸೋ 

ಟಿಬೆಟ್ ಕಚೇರಿಗಳು: ಟಿಬೆಟಿನ ರಾಯಭಾರ ಕಚೇರಿಗಳು ಹೊಸದಿಲ್ಲಿ, ಕಾಠ್ಮಂಡು, ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ಜಿನೀವಾ, ಬುಸೆಲ್ಸ್, ಬುಡಾಪೆಸ್ಟ್, ಮಾಸ್ಕೋ, ಕ್ಯಾನ್‌ಬೆರ್ರಾ, ಟೋಕಿಯೋ, ಪ್ರಿಟೋರಿಯಾ ಮತ್ತು ತಾಯ್‌ಪೀಗಳಲ್ಲಿ ಇವೆ. 

ಜೀವನಾಧಾರ: ಕೃಷಿ, ಕೃಷಿ ಸಂಬಂಧಿ ಉದ್ಯಮ, ಸ್ವೆಟರ್ ಮಾರಾಟ, ಕರಕುಶಲ ವಸ್ತುಗಳ ಮಾರಾಟ, ಸೇವಾ ರಂಗ. 

ಶಿಕ್ಷಣ: ಟಿಬೆಟಿನ ಶಾಲಾ ದಾಖಲಾತಿಯು ಶಾಲಾವಯಸ್ಕ ಮಕ್ಕಳ ಶೇ. ೮೦ರಿಂದ ೯೦ರಷ್ಟಿದೆ. ಈಗ ೧೦೬ ಶಿಶುವಿಹಾರಗಳು, ೮೭ ಪ್ರಾಥಮಿಕ ಶಾಲೆಗಳು, ೪೪ ಮಾಧ್ಯಮಿಕ ಶಾಲೆಗಳು, ೨೧ ಸೆಕಂಡರಿ ಮಟ್ಟದ ಶಾಲೆಗಳು, ೧೩ ಹಿರಿಯ ಸೆಕಂಡರಿ ಮಟ್ಟದ ಶಿಕ್ಷಣಸಂಸ್ಥೆಗಳು ಇವೆ. ಒಟ್ಟು ೨೫೦೦೦ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. 

ಟಿಬೆಟ್‌ನಲ್ಲಿ ಚೀನಾ ಆಡಳಿತ: ಒಂದು ಪಕ್ಷಿನೋಟ 

 

  • ೧೨ ಲಕ್ಷಕ್ಕೂ ಹೆಚ್ಚು ಟಿಬೆಟನ್ನರು ಸಾವಿಗೀಡಾಗಿದ್ದಾರೆ. 
  • ೬೦೦೦ಕ್ಕೂ ಹೆಚ್ಚು ಬೌದ್ಧಾಲಯಗಳನ್ನು ನಾಶಪಡಿಸಲಾಗಿದೆ. 
  • ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಸಾವಿರಾರು ಟಿಬೆಟನ್ನು ಇನ್ನೂ ಸೆರೆಮನೆಗಳಲ್ಲಿ ಇದ್ದಾರೆ. 
  • ಟಿಬೆಟಿನ ನೈಸರ್ಗಿಕ ಸಂಪನ್ಮೂಲ ಹಾಗೂ ಸೂಕ್ಷ್ಮ ಜೈವಿಕ ಪರಿಸರವನ್ನು ಇನ್ನೆಂದೂ ಸರಿಮಾಡಲಾಗದಂತೆ ಹಾಳುಗೆಡವಲಾಗಿದೆ. 
  • ಟಿಬೆಟನ್ನು ಪರಮಾಣು ತ್ಯಾಜ್ಯವನ್ನು ಎಸೆಯಲು ಬಳಸುತ್ತಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. 
  • ಟಿಬೆಟಿನಲ್ಲೇ ಟಿಬೆಟನ್ನೇ ( ೬೦ ಲಕ್ಷ) ಚೀನೀಯರಿಗಿಂತ (೭೫ ಲಕ್ಷ) ಕಡಿಮೆ ಸಂಖ್ಯೆಯಲ್ಲಿದ್ದಾರೆ. 
  • ಒಂದು ಕಾಲದಲ್ಲಿ ಶಾಂತಿ ಹಾಗೂ ಸಮರರಹಿತ ವಲಯವಾಗಿದ್ದ ಟಿಬೆಟ್ ಈಗ ಬೃಹತ್ ಸೇನಾನೆಲೆಯಾಗಿದೆ. 

ನೀವು ಇಂದು ಟಿಬೆಟಿಗಾಗಿ ಏನು ಮಾಡಬಹುದು? 

 

  • ನಿಮ್ಮ ಪ್ರದೇಶದಲ್ಲಿ ಟಿಬೆಟನ್ ಬೆಂಬಲ ಗುಂಪನ್ನು ಸ್ಥಾಪಿಸಿ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ಟಿಬೆಟ್ ಹಾಗೂ ಟಿಬೆಟನ್ ಜನತೆಯ ಬಗ್ಗೆ ಮಾಹಿತಿ ನೀಡಿ. 
  • ವೃತ್ತಪತ್ರಿಕೆ ಹಾಗೂ ಮ್ಯಾಗಜಿನ್‌ಗಳಲ್ಲಿ ಟಿಬೆಟನ್ ಜನರ ಸ್ವಾತಂತ್ರ್ಯದ ಹಾಗೂ ನ್ಯಾಯಯುತ ಹಕ್ಕುಗಳ ಬಗ್ಗೆ ಲೇಖನ ಬರೆದು ಈ ಸಂಗತಿಗಳನ್ನು ಬೆಂಬಲಿಸಿ. 
  • ನಿಮ್ಮ ಸಂಸತ್ಸದಸ್ಯರಿಗೆ  ಕಾಗದ ಬರೆದು ಸಂಸತ್ತಿನಲ್ಲಿ ಟಿಬೆಟ್ ವಿಷಯವನ್ನು ಎತ್ತುವಂತೆ ಕೇಳಿಕೊಳ್ಳಿ. 
  • ನಿಮ್ಮ ಸಂಸತ್ಸದಸ್ಯರನ್ನು ಹಾಗೂ ಸರ್ಕಾರವನ್ನು ಟಿಬೆಟ್ ಕುರಿತ ದಲಾಯಿಲಾಮಾರವರ ಶಾಂತಿ ಉಪಕ್ರಮಗಳನ್ನು ಬೆಂಬಲಿಸಲು ಕೇಳಿಕೊಳ್ಳಿ. 
  • ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಹಾಗೂ ಟಿಬೆಟ್ ದೇಶಭ್ರಷ್ಟ ಸರ್ಕಾರದ ನಡುವೆ ಅರ್ಥಪೂರ್ಣ ಮಾತುಕತೆ ನಡೆಸುವಂತೆ ಅನುವು ಮಾಡಿಕೊಡಲು ಯತ್ನಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿ. 
(ಟಿಬೆಟನ್ ಗೆಳೆಯರು ನೀಡಿದ್ದ ಸಾಹಿತ್ಯದ ಸಂಕ್ಷಿಪ್ತ ರೂಪವಿದು)

 

 

 

 

 

Share. Facebook Twitter Pinterest LinkedIn Tumblr Email
Previous Articleನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
Next Article DNA: Delayed , No Analysis?
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.