Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»A request to mainstream papers
ಲೇಖನಗಳು

A request to mainstream papers

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 15, 2006Updated:May 19, 2025No Comments7 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಮುಖ್ಯವಾಹಿನಿ ಪತ್ರಿಕೆಗಳಿಗೆ ಸವಿನಯ ವಿನಂತಿ !


ಮುಖ್ಯವಾಹಿನಿ ಪತ್ರಿಕೆಗಳಿಗೆ ಸವಿನಯ ವಿನಂತಿ !
ಇತ್ತೀಚೆಗೆ ಗೆಳೆಯನೊಬ್ಬನಿಗೆ ಇಂಗ್ಲಿಶಿನಿಂದ ಮಲಯಾಳಂ ಭಾಷೆಗೆ ಅನುವಾದ ಮಾಡಬೇಕಿದೆ ಎಂದು ಕೇಳಿಕೊಂಡೆ. ಆತ ಹೇಳಿ ಕೇಳಿ ಕೇರಳದಲ್ಲಿ ಹುಟ್ಟಿ ಬೆಳೆದವ. ಕನ್ನಡ, ಇಂಗ್ಲಿಶ್, ಮಲೆಯಾಳಂ ಭಾಷೆಗಳಲ್ಲಿ ಬರೆಯಬಲ್ಲ, ಮಾತನಾಡಬಲ್ಲ, ಓದಬಲ್ಲ. ಆದರೆ ನನ್ನ ಕೋರಿಕೆಯನ್ನು ಆತ ತೀರಾ ಸ್ಪಷ್ಟವಾಗೇ ನಿರಾಕರಿಸಿದ.
`ಇಲ್ಲ. ಈಗ ಮಲಯಾಳಂ ಟಚ್ ಬಿಟ್ಟುಹೋಗಿದೆ. ಅಲ್ಲದೆ ಮಲಯಾಳ ಭಾಷಿಗರು ತುಂಬಾ ಜಾಣರು. ನಾನೇನಾದರೂ ಹಳೆ ಶೈಲಿಯಲ್ಲಿ ಅನುವಾದ ಮಾಡಿದರೆ ಚೆನ್ನಾಗಿ ವಿಚಾರಿಸ್ಕೋತಾರೆ' ಎಂದ.
ನಾನೇನೂ ಇಲ್ಲಿ ಮಲಯಾಳಂ ಭಾಷಿಗರ ಭಾಷಾಪ್ರೇಮವನ್ನು ವಿವರಿಸುವ ಉಸಾಬರಿಗೆ ಹೋಗುತ್ತಿಲ್ಲ.  ಹಾಗೆ ಹೇಳುವುದೂ ಅನಗತ್ಯ.
ಕನ್ನಡದಲ್ಲೀಗ ಮುಖ್ಯವಾಹಿನಿ ಪತ್ರಿಕೆಗಳದ್ದೇ ದೊಡ್ಡ ಸುದ್ದಿ. ಅವುಗಳ ಬೆಲೆ ಸಮರ, ಅವು ನೀಡುವ ಪುರವಣಿಗಳು, ಅವುಗಳಲ್ಲಿ ಇರಬಹುದಾದ ಉದ್ಯೋಗಾವಕಾಶ – ಈ ಬಗ್ಗೆ ಸಾಮಾನ್ಯವಾಗಿ ಚರ್ಚೆ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ ಮಾಧ್ಯಮ ಬಳಗದಲ್ಲಿ ಇದ್ದುಬಿಟ್ಟರಂತೂ ಬರೀ ಇದೇ ಮಾತು.   ಹಾಗಾದರೆ ನಮ್ಮ ಈ ಮುಖ್ಯವಾಹಿನಿ ಪತ್ರಿಕೆಗಳು ಹೇಗೆ ಕನ್ನಡದ ಕೆಲಸವನ್ನು ಮಾಡುತ್ತಿವೆ? ಅವುಗಳು ಈಗ ನಾಡಿಗೆ ನೀಡುತ್ತಿರುವ ಕೊಡುಗೆಯೇನು ಎಂಬ ಪುಟ್ಟ ಚರ್ಚೆಯನ್ನು ಮಾಡಿದರೆ ತಪ್ಪಿಲ್ಲ ತಾನೆ?
ಕನ್ನಡದ ಮುಖ್ಯವಾಹಿನಿ ಪತ್ರಿಕೆಗಳಿಗೆ ಒಂದು ಸ್ಪರ್ಧಾತ್ಮಕ ಮಾರುಕಟ್ಟೆ ಆರಂಭವಾಗಿದ್ದೇ ಎಂಬತ್ತರ ದಶಕದ ಆರಂಭದಲ್ಲಿ ಎನ್ನಬಹುದು. `ಉದಯವಾಣಿ'ಯೇ ಎಲ್ಲೆಲ್ಲೂ ಸಿಗುತ್ತಿದ್ದ ಕರಾವಳಿಯಲ್ಲಿ `ಮುಂಗಾರು' ಆರಂಭವಾದಾಗ ಒಂದು ಬಗೆಯ ಸ್ಪರ್ಧೆ ಕಾಣಿಸಿಕೊಂಡಿತು. ಈ ಸ್ಪರ್ಧೆಯ ವಾತಾವರಣವು `ಹೊಸದಿಗಂತ'ದ ವಿಸ್ತೃತ ಆವೃತ್ತಿಯಿಂದಾಗಿ ಕರಾವಳಿಯಲ್ಲಿ ಇನ್ನಷ್ಟು ಸ್ಫುಟವಾಯಿತು.
`ಪ್ರಜಾವಾಣಿ' ಪತ್ರಿಕೆಯು ತನ್ನ ಉತ್ತರ ಕರ್ನಾಟಕ ಆವೃತ್ತಿಯನ್ನು ಆರಂಭಿಸಿದಾಗ ಈ ಸ್ಪರ್ಧೆಯ ಬಿಸಿ ಇಡೀ ರಾ&#322
8;
್ಯಕ್ಕೆ ಹಬ್ಬಿತು. ಆಮೇಲೆ ಕೆಲಕಾಲ ತಣ್ಣಗಿದ್ದ ಈ ರಂಗದಲ್ಲಿ ಬಿರುಗಾಳಿ ಎದ್ದಿದ್ದು `ವಿಜಯ ಕರ್ನಾಟಕ'ದಿಂದ. ಎರಡು ವರ್ಷಗಳ ಹಿಂದೆ ಒಂದೂವರೆ ರೂಪಾಯಿ ಸಂಚಿಕೆಯ ಸ್ಪರ್ಧೆ ಶುರುವಾಗಿ ಈಗ, `ಕನ್ನಡಪ್ರಭ'ದ ಒಂದು ರೂಪಾಯಿ ಕೊಡುಗೆಯವರೆಗೆ ಈ ಸ್ಪರ್ಧೆ ಬೆಳೆದು ಬಂದಿದೆ.
ನಮ್ಮ ಮುಖ್ಯ ವಾಹಿನಿ ಪತ್ರಿಕೆಗಳ ಪ್ರಮುಖ ಸ್ವರೂಪ ಇತ್ತೀಚೆಗಿನ ವರ್ಷಗಳವರೆಗೂ ಹೀಗಿತ್ತು: ದಿನವಹಿ ಒಂದು ಮುಖ್ಯಪುಟಗಳ ಕಟ್ಟು ; ಭಾನುವಾರ ಸಾಹಿತ್ಯ – ಸಂಸ್ಕೃತಿ ಕುರಿತ ಸಾಪ್ತಾಹಿಕ ; ಶುಕ್ರವಾರ  ಸಿನಿಮಾ ಪುರವಣಿ. ಈ ಸಿನಿಮಾ ಪುರವಣಿಯೂ ಕೊಂಚ ಹೊಸದೇ.
ಈಗ ? ಮುಖ್ಯವಾಹಿನಿ ಪತ್ರಿಕೆಗಳು ದಿನವೂ ಜಿಲ್ಲಾಶಃ ಸುದ್ದಿಪುಟಗಳನ್ನು ಪ್ರಕಟಿಸುತ್ತವೆ. ಪ್ರತಿದಿನ ಅಲ್ಲದಿದ್ದರೂ ದಿನ ಬಿಟ್ಟು ದಿನ ಪ್ರಾದೇಶಿಕ ಸುದ್ದಿ ಸೊಬಗಿನ ಪುರವಣಿಗಳು ಬರುತ್ತವೆ. ಉಳಿದ ದಿನಗಳಲ್ಲಿ ಫೀಚರ್ ಲೇಖನಗಳನ್ನು ಹೊತ್ತ ಪುರವಣಿಗಳು. ಸಾಮಾನ್ಯವಾಗಿ ಸುದ್ದಿಪುಟದ ರಕ್ಷಾಪುಟಗಳು ಹಾಗೂ ಪುರವಣಿಗಳು ಬಹುವರ್ಣದಲ್ಲಿ ಮುದ್ರಿತವಾಗುತ್ತಿವೆ. 
ನಮ್ಮ ದಿನಪತ್ರಿಕೆಗಳು ನಿಜಕ್ಕೂ ನಾಡಿನ ವಿದ್ಯಮಾನಗಳನ್ನು ಮರುದಿನ ಬೆಳಗ್ಗೆ ಜನರಿಗೆ ತಲುಪಿಸುವಲ್ಲಿ ಸಮರ್ಥವಾಗಿವೆ. ಆದರೆ ಈ ಸಾಮರ್ಥ್ಯವನ್ನು ಇನ್ನಷ್ಟು ಹಿಗ್ಗಿಸಬಹುದಿತ್ತೇನೋ ಎನ್ನುವುದು ನನ್ನ ಈ ದಿನಗಳ ಅನಿಸಿಕೆ. ಈ ಚರ್ಚೆಯನ್ನು ವಿನ್ಯಾಸ, ವಸ್ತುವಿಷಯ, ಹೊಸತನ, ವೈವಿಧ್ಯ – ಈ ಮುಂತಾದ ವಿಭಾಗಗಳಲ್ಲಿ ಚರ್ಚಿಸಬಹುದು.
ಕನ್ನಡದ ದಿನಪತ್ರಿಕೆಗಳು ಈಗ ಹೊಸ ವಿನ್ಯಾಸದಿಂದ ಕಂಗೊಳಿಸುತ್ತಿವೆ ಎನ್ನಬಹುದು. ಈ ಟ್ರೆಂಡ್ ಆರಂಭವಾಗಿದ್ದೇ `ವಿಜಯ ಕರ್ನಾಟಕ'ದಿಂದ. ಈಗ ಕನ್ನಡಪ್ರಭ, ಸೂರ್ಯೋದಯ, ಹೊಸದಿಗಂತ – ಎಲ್ಲವೂ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗೊಂಡಿವೆ. ಪ್ರಜಾವಾಣಿಯು ತನ್ನ ಮುಖ್ಯಪುಟಗಳ ವಿನ್ಯಾಸವನ್ನು ಹಿಂದಿನಂತೆ ಉಳಿಸಿಕೊಂಡಿದ್ದರೂ ಪುರವಣಿಗಳನ್ನು ಸಾಕಷ್ಟು ಸುಧಾರಿಸಿಕೊಂಡಿದೆ. ಈ ಪತ್ರಿಕೆಯ `ಕರ್ನಾಟಕ ದರ್ಶನ' ಪುರವಣಿಯಂತೂ ನಾಡಿನ ಸಂಸ್ಕೃತಿ, ಬದುಕಿನ ಕನ್ನಡಿ ಎಂದರ&#
3270
; ತಪ್ಪಿಲ್ಲ. ಬಹುಶಃ ಕನ್ನಡದ ನಂ.೧ ಪುರವಣಿ ಇದು. ಹಿರಿಯ ಫೀಚರ್ ಪತ್ರಕರ್ತ ನಾಗೇಶ ಹೆಗಡೆಯವರಿಗೆ ಈ ಅಭಿನಂದನೆ ಸಲ್ಲುತ್ತದೆ. ಅದೇ ರೀತಿ ಉದಯವಾಣಿಯೂ ತನ್ನ ಪುರವಣಿಗಳನ್ನು (ಈ ಪುರವಣಿಗಳು ಕೇವಲ ಬೆಂಗಳೂರು ಆವೃತ್ತಿಯಲ್ಲಿ ಮಾತ್ರ ಸಿಗುತ್ತವೆ) ಅಚ್ಚುಕಟ್ಟಾಗಿ ಮುದ್ರಿಸುತ್ತಿದೆ.
ಮುಖಪುಟ ವಿನ್ಯಾಸದಲ್ಲೇ ಸುದ್ದಿಗಳ ಅಂದಂದಿನ ಸೊಬಗನ್ನು ಹಿಡಿದಿಡುವ ಕೆಲಸವೂ ಆಗಬೇಕಿದೆ. ಈ ದೃಷ್ಟಿಯಲ್ಲಿ ನೋಡಿದರೆ ನಮ್ಮ ಮುಖ್ಯವಾಹಿನಿ ಪತ್ರಿಕೆಗಳು ಇನ್ನಷ್ಟು ಸಮೃದ್ಧವಾಗಬೇಕಿದೆ. ಪತ್ರಿಕೆಗಳು `ಸ್ಲಿಮ್' ಆಗಿದ್ದರೆ ಚೆಂದ ಎಂಬ ವಾದ ಮುಂದಿಟ್ಟು ಅಗಲ ಕಡಿಮೆಯಾದ ಈ ಮುಖ್ಯವಾಹಿನಿ ಪತ್ರಿಕೆಗಳು ಮುಖಪುಟದಲ್ಲಿ ಹೆಚ್ಚೆಚ್ಚು ಸುದ್ದಿಗಳನ್ನು ಕೊಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿವೆ. ಪ್ರಜಾವಾಣಿ ಮಾತ್ರ ಹಿಂದಿನ ಆಕಾರದಲ್ಲೇ ಇದ್ದರೂ ಸುದ್ದಿಗಳನ್ನು ಅಗತ್ಯಕ್ಕಿಂತ ಕೊಂಚ ಹೆಚ್ಚಾಗಿ ಮುಖಪುಟದಲ್ಲಿ ನೀಡಿ ಸಮೃದ್ಧಿಗೆ ಕೊರತೆ ತಂದುಕೊಂಡಿದೆ.
ಮುಖ್ಯವಾಹಿನಿ ಪತ್ರಿಕೆಗಳ ಈಗಿನ ಮುಖ್ಯ ಸಮಸ್ಯೆ ಸ್ವಂತ ತನಿಖಾ ವರದಿಗಳದ್ದು. ಹ್ಯುಮನ್ ಇಂಟರೆಸ್ಟ್ ಸ್ಟೋರಿಗಳೇನೋ (ಮಾನವೀಯ  ಆಸಕ್ತಿಯ ಸುದ್ದಿಕಥೆಗಳು)  ಸಿಕ್ಕಿಬಿಡುತ್ತವೆ. ಆದರೆ ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರುವ ಸುದ್ದಿಗಳ ವಾಸನೆಯನ್ನು ಮೊದಲೇ ಗ್ರಹಿಸುವಲ್ಲಿ ಇವು ಸರಿಸುಮಾರಾಗಿ ಸೋತಿವೆ ಎಂದೇ ಹೇಳಬೇಕಿದೆ. ನನ್ನ ಈ ಮಾತಿಗೆ ಎರಡು ನಿದರ್ಶನಗಳನ್ನು ನೀಡುವೆ:
ಮಧ್ಯಾಹ್ನದ ಬಿಸಿಯೂಟದ ಹಗರಣಗಳು ನಡೆದವಷ್ಟೆ? ಅವೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಸರ್ಕಾರವು ಈ ಯೋಜನೆಯನ್ನು ಆರಂಭಿಸಿದ ಮೇಲೆಯೇ. ಅಲ್ಲಿಯವರೆಗೆ ಯಾವೊಂದು ಪತ್ರಿಕೆಯೂ ಮುಖ್ಯ ವರದಿಯಾಗಿ, ತನಿಖಾ ವರದಿಯಾಗಿ ಈ ಕುರಿತ ಸುದ್ದಿಗಳನ್ನು ಪ್ರಕಟಿಸಿರಲಿಲ್ಲ.
ಇನ್ನೊಂದು ನಿದರ್ಶನ: ಬೆಂಗಳೂರಿಗೆ `ಮೆಟ್ರೋ' ಬಹುರಾಷ್ಟ್ರೀಯ ಕಂಪೆನಿ ಬಂತಲ್ಲ? ಈ ಮಳಿಗೆಗಳು ಆರಂಭವಾದ ಮೇಲೆಯೇ ಪತ್ರಿಕೆಗಳಲ್ಲಿ ಮೆಟ್ರೋ ಕುರಿತು ತನಿಖಾ ವರದಿಗಳು ಬಂದವು. ಅವೂ ಅಷ್ಟೇನ&
#326
6; ಮಾಹಿತಿಪೂರ್ಣವಾಗಿರಲಿಲ್ಲ. ಕೆಲವು ಪತ್ರಿಕೆಗಳಂತೂ `ಮೆಟ್ರೋ' ನೀಡಿದ ಮಾಹಿತಿಗಳನ್ನೇ ತಮ್ಮ ತನಿಖಾ ವರದಿಯೆಂದು ಪ್ರಕಟಿಸಿದ್ದು ತುಂಬಾ ತಮಾಷೆಯಾಗಿತ್ತು.
ಹೊಸದಿಗಂತವು ಇತ್ತೀಚೆಗೆ ಹುಲಿ ಯೋಜನೆ, ಕೊರಗರ ಅಭಿವೃದ್ಧಿ ಮುಂತಾದ ಸುದ್ದಿಗಳಲ್ಲಿ ಸ್ವಂತ ಮಾಹಿತಿಗಳನ್ನು ಕಲೆಹಾಕಿ ತನಿಖಾ ವರದಿಗಳನ್ನು ಪ್ರಕಟಿಸಿದೆ. ಅಭ್ಯುದಯ ಪತ್ರಿಕೋದ್ಯಮದಲ್ಲಿ ಈ ಬೆಳವಣಿಗೆ ಸ್ವಾಗತಾರ್ಹ. ಅಭ್ಯುದಯದ ಸುದ್ದಿಗಳು ರೋಚಕವಷ್ಟೇ ಅಲ್ಲ, ವಿಧಾಯಕವೂ ಆಗಿರಬಹುದು ಎನ್ನುವುದಕ್ಕೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ `ಶ್ರೀ' ಪಡ್ರೆಯವರ `ಹನಿಗೂಡಿಸೋಣ' ಅಂಕಣವು ನಿದರ್ಶನ.
ಮುಖ್ಯವಾಹಿನಿ ಪತ್ರಿಕೆಗಳಿಗೆ ಈಗ ಎದುರಾಗಿರುವ ಇನ್ನೊಂದು ಸವಾಲು – ಸ್ಪರ್ಧೆಯ ರಭಸದಲ್ಲಿ ಜಿಲ್ಲಾಶಃ ಆವೃತ್ತಿಗಳನ್ನು ತಂದಮೇಲೆಯೂ ಪ್ರಾದೇಶಿಕ ಚಹರೆಯನ್ನು ಪತ್ರಿಕೆಯ ಸುದ್ದಿಪುಟಗಳಲ್ಲಿ ಬಿಂಬಿಸುವುದು ಹೇಗೆ ಎಂಬುದು. ಈಗಿರುವ ಸಾಮಾನ್ಯ ಪದ್ಧತಿಯಲ್ಲಿ ಅತಿಮುಖ್ಯ ಸುದ್ದಿಗಳು ಪತ್ರಿಕೆಯ ಎಲ್ಲಾ ಆವೃತ್ತಿಗಳಲ್ಲಿ ಪ್ರಕಟವಾಗುತ್ತವೆ. ಆದರೆ ಒಂದು ಭಾಗದಲ್ಲಿ ನಡೆಯುವ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಇನ್ನೊಂದು ಭಾಗದ ಓದುಗರಿಗೆ ಸಿಗುವುದೇ ಇಲ್ಲ. ಪತ್ರಿಕೆಗಳು ಸಾಂಸ್ಕೃತಿಕ ರಾಂiiಭಾರಿಗಳೂ ಹೌದು ಎಂದು ಒಪ್ಪಿಕೊಂಡರೆ, ಈ ಬೆಳವಣಿಗೆ ತೀರಾ ವಿಷಾದನೀಯ. ನಮ್ಮ ನಾಗರಿಕತೆಗೆ ವೇಗ ಸಿಕ್ಕಂತೆಲ್ಲ ನಾವೂ ಹೀಗೆ ಬದಲಾಗುತ್ತ ಹೋಗಬೇಕು ಎಂದು ನಂಬುವುದೇ ತಪ್ಪು ಎನಿಸುತ್ತದೆ. ಅಥವಾ ಆರ್ಥಿಕ ಬೆಳವಣಿಗೆಗಳಿಗೆ ತಕ್ಕಂತೆ ಪತ್ರಿಕೆಯ ಪುಟಗಳಾಗಲೀ, ಓದುಗರ ಖರೀದಿ ಸಾಮರ್ಥ್ಯವಾಗಲೀ ಬೆಳೆದಿಲ್ಲ ಎನ್ನಬಹುದೆ? ಯಾಕೆಂದರೆ ಇಂದು ಯಾವ ಪತ್ರಿಕೆಯೂ ೩೨ ಪುಟಗಳ ಮುಖ್ಯಪತ್ರಿಕೆಯನ್ನು ವಿತರಿಸಿದ ನಿದರ್ಶನ ಇನ್ನೂವರಗೆ ಸಿಕ್ಕಿಲ್ಲ. ಹಾಗೆ ಓದುವವರೂ ಇದ್ದಾರೆಯೆ?
ಇನ್ನು ಪುರವಣಿಗಳ ವಿಷಯಕ್ಕೆ ಬಂದರೆ ಚರ್ಚೆ ನಡೆಸುವುದೇ ದುಸ್ತರವಾಗುತ್ತದೆ! ಯಾಕೆಂದರೆ ನಮ್ಮ ಪುರವಣಿಗಳು ಈಗಲೂ ಅದೇ ಹಳೆಯ ಫಾರ್ಮುಲಾಗಳ&
#326
3;ಗೆ ಅಂಟಿಕೊಂಡಿವೆ. ಭಾನುವಾರದ ಮುಖಪುಟಲ್ಲಿ ಒಂದೆರಡು ಫೀಚರ್ ಲೇಖನಗಳು, ಒಳಗೆ ಕಥೆ, ಕವನ, ವಿಮರ್ಶೆ, ಪುಟ್ಟ ಮಕ್ಕಳಿಗೆ, ಮಹಿಳೆಯರಿಗೆ ಪುಟಗಳು – ಇವು ಈಗ ಬರುತ್ತಿರುವ ಸಾಪ್ತಾಹಿಕಗಳ ಸಾಮಾನ್ಯ ಫಾರ್ಮುಲಾ ಆಗಿದೆ. ಈಗಷ್ಟೆ ವಿಜಯ ಕರ್ನಾಟಕವು ಸಾಪ್ತಾಹಿಕದಲ್ಲಿ ಕಥೆ, ಕವನ, ವಿಮರ್ಶೆಗಳ ವಿಭಾಗವನ್ನೇ ಕತ್ತರಿಸಿದೆ.
ಸಾಮಾನ್ಯವಾಗಿ ಮ್ಯಾಗಜಿನ್ ಎಂದೇ ಕರೆಯುವ ಈ ಸಾಪ್ತಾಹಿಕಗಳಲ್ಲಿ ಸಾಮಯಿಕ ಚರ್ಚೆಗಳು ನಡೆಯುವುದೇನೋ ನಿಜ. ಆದರೆ ಸಾಪ್ತಾಹಿಕಗಳೂ ಭಾನುವಾರದ ಪ್ರಮುಖ ಸುದ್ದಿಗಳಾಗಿ ವಿಜೃಂಭಿಸಬಹುದು ಎಂಬ ಅಂಶವನ್ನು ಗಮನಿಸಿಲ್ಲ. ಸಾಮಯಿಕ ವಿಷಯಗಳನ್ನು ಬರೆಯುವಾಗ ಹೆಚ್ಚಾಗಿ ಈಗಾಗಲೇ ಪ್ರಕಟವಾಗಿರುವ ಮಾಹಿತಿಗಳ ಆಧಾರದಲ್ಲೇ ತಾರ್ಕಿಕ ಚರ್ಚೆಗಳು ನಡೆಯುವುದು ಹೆಚ್ಚು. ಇವುಗಳು ಆಸಕ್ತಿ ಮೂಡಿಸುವುದು ಕಷ್ಟ. ಬದಲಿಗೆ ಹೊಸ ವಿಷಯಗಳನ್ನು, ಮಾಹಿತಿಗಳನ್ನು ಹುಡುಕಿ ತೆಗೆದು, ಮಥಿಸುವ ಕೆಲಸ ನಡೆದರೆ ಎಷ್ಟು ಚೆನ್ನು ಅನಿಸುತ್ತದೆ. ಅದಿಲ್ಲದೆ ಹೋದರೆ ಈ ಮ್ಯಾಗಜಿನ್‌ಗಳಲ್ಲಿ ಸಾಮಾನ್ಯವಾಗಿ ಕಾಣುವ ಸಂಗತಿಗಳು ಇವು: ವ್ಯಕ್ತಿ ಪರಿಚಯ, ಸಂದರ್ಶನ, ಫೋಟೋ ಫೀಚರ್, ಹಬ್ಬಗಳ, ಇತರೆ ಸಾಂದರ್ಭಿಕ ಲೇಖನಗಳು.
ಮುಖ್ಯ ವಾಹಿನಿಗಳ ಕೃಷಿಪುರವಣಿಗಳು ಮಾತ್ರ ನಾವೆಲ್ಲರೂ ಅತ್ಯಂತ ಕಟುವಾಗಿ ಖಂಡಿಸಲೇಬೇಕಾದ ಪುರವಣಿಗಳಾಗಿವೆ. ಬೆರಳೆಣಿಕೆಯ ಅಂಕಣಗಳನ್ನು ಬಿಟ್ಟರೆ, ಈ ಪುರವಣಿಗಳಲ್ಲಿ ಪ್ರಕಟವಾಗುವ ಸಾಕಷ್ಟು ಲೇಖನಗಳು ಯಾವುದೇ ಹೆಚ್ಚಿನ ಕಸರತ್ತಿಲ್ಲದೆ ಬರೆದ ಲೇಖನಗಳು. ಇಂಥ ಲೇಖನಗಳಲ್ಲಿ `ಲಾಭದಾಯಕತೆ', `ಹೆಚ್ಚಿನ ಇಳುವರಿ', `ಚಿನ್ನದ ಬೆಳೆ', `ಅಧಿಕ ಫಸಲು' – ಮುಂತಾದ ಪದಗುಚ್ಛಗಳನ್ನು ಬೇಕಾಬಿಟ್ಟಿಯಾಗಿ ಬಳಸುವುದನ್ನು ಕಾಣಬಹುದು. ಕೇರಳದಲ್ಲಿ ಇರುವ ಪತ್ರಿಕೆಗಳಲ್ಲಿ ಕೃಷಿಮಾಹಿತಿಯು ಹೆಚ್ಚು ನಿಖರವಾಗಿರುತ್ತದೆ ಎಂದು ಮಲಯಾಳಂ ಬಲ್ಲ ನನ್ನ ಮಿತ್ರರು ಹೇಳುತ್ತಾರೆ. ನಮ್ಮಲ್ಲಿ ಗಂಭೀರ ಕೃಷಿ ಪತ್ರಿಕಾ ಕೃಷಿಗೆ ಇನ್ನೂ ಮುಖ್ಯವಾಹಿನಿ ಪತ್ರಿಕೆಗಳು ಮನಸ್ಸು ಮಾಡಿಲ್ಲ. `ಅಡಿಕೆ ಪತ್ರಿಕೆ'ಯಂಥ ಪುಟ&#
3277
;ಟ ಮ್ಯಾಗಜಿನ್ ಮಾಡಿರುವ ಕೃಷಿ ಪತ್ರಿಕೋದ್ಯಮದ ಪ್ರಯೋಗವನ್ನು ಮುಖ್ಯವಾಹಿನಿ ಪತ್ರಿಕೆಗಳು ಅನುಸರಿಸಿದರೆ ತಪ್ಪೇನೂ ಇಲ್ಲ.
ಕನ್ನಡದಲ್ಲಿ ಈಗ ಕಂಡು ಬಂದಿರುವ ಹೊಸ ಟ್ರೆಂಡ್ ಎಂದರ ನಗರ ಉದ್ದೇಶಿತ ಪುರವಣಿಗಳು. ನಮ್ಮ ಬೆಂಗಳೂರು, ಬೆಂಗಳೂರು ವಿಜಯ, ಮೆಟ್ರೋ ಹೀಗೆ ಈ ಪಟ್ಟಿ ಬೆಳೆಯುತ್ತದೆ. ರಾಜ್ಯದ ಇತರೆ ಮಹಾನಗರಗಳಿಗೂ ಇಂಥ ಪುರವಣಿಗಳಿವೆ. ಸಾಮಾನ್ಯವಾಗಿ ಈ ಮಹಾನಗರಗಳ ಸುದ್ದಿಗಳನ್ನು ಇಲ್ಲಿ ಪ್ರಕಟಿಸುತ್ತಾರೆ. ಹೆಚ್ಚು ಮಸಾಲೆ ತುಂಬಿಸುವ ಇಲ್ಲಿ ನಡೆದಿದೆ. ಈ ಪುರವಣಿಗಳು ಹೆಚ್ಚು ಹೆಚ್ಚು ಆಕರ್ಷಕವಾಗಿರಬೇಕು ಎಂಬ ಸ್ಪರ್ಧೆಯೂ ನಡೆದಿದೆ. ಸ್ಥಳೀಯ ಜಾಹೀರಾತುಗಳನ್ನು ಪಡೆಯುವಲ್ಲಿ ಈ ಪುರವಣಿಗಳು ನೆರವಾಗಬಹುದು ಎಂಬ ನಂಬಿಕೆ ಈ ಪತ್ರಿಕೆಗಳದ್ದು. ಮೆಟ್ರೋ ಪುರವಣಿಯು (ಪ್ರಜಾವಾಣಿ) ಈ ನಿಟ್ಟಿನಲ್ಲಿ ವಿಶಿಷ್ಟವಾಗಿದೆ. ಇಲ್ಲಿ ನಗರದ ಬದುಕಿನ ಮಗ್ಗುಲುಗಳು ಬಿಚ್ಚಿಕೊಳ್ಳುವ ರೀತಿ ಕುತೂಹಲ ಹುಟ್ಟಿಸುತ್ತದೆ. ಕೆಲವು ಲೇಖನಗಳು ಇಂದಿನ ಅರ್ಬನ್ ಕಲ್ಚರ್‌ನ ಅಪ್ಪಟ ಉದಾಹರಣೆಗಳಾಗಿವೆ. ಕೃಷಿ ಪತ್ರಿಕೋದ್ಯಮದಲ್ಲಿ ಅಡಿಕೆ ಪತ್ರಿಕೆ ಮಾಡುತ್ತಿರುವ ಕೆಲಸವನ್ನು ನಗರಗಳ ಮಟ್ಟಿಗೆ ಮೆಟ್ರೋ ಮಾಡುತ್ತಿದೆ ಎನ್ನಬಹುದು.
ಇಲ್ಲಿ ಒಂದು ಪುಟ್ಟ ಟೀಕೆ ಮಾಡಬೇಕಿದೆ. ಕೆಲವು ಪತ್ರಿಕೆಗಳು ಪುರವಣಿಗಳ ನಿಭಾವಣೆಯ ಹಾದಿಯಲ್ಲಿ ಸೊರಗುತ್ತ ಮೇಜು ಪತ್ರಿಕೋದ್ಯಮಕ್ಕೆ ಅಂಟಿಕೊಂಡಿವೆ. ಅಂದರೆ ಫ್ಯಾನಿನ ಕೆಳಗೆಕೂತು, ಮೇಜಿನ ಮೇಲೆ ಹಾಸಿದ ಹಾಳೆಗಳ ಮೇಲೆ ಕಲ್ಪನೆಗಳನ್ನು ಹಾರಿಬಿಡುವುದು. ಹಾಗೇ ಹಾಗೇ ಯೋಚಿಸುತ್ತ, ಹೀಗಿರಬಹುದು ಎಂದುಕೊಂಡು ಒಂದಷ್ಟನ್ನು ಬರೆಯುವುದು ; ಅಥವಾ ಇವೇ ವಾಸ್ತವ ಎಂಬ ಭ್ರಮೆಯನ್ನು ಹುಟ್ಟಿಸುವುದು. ಬೆಂಗಳೂರು ವಿಜಯ (ವಿಜಯ ಕರ್ನಾಟಕ)ದ ಸಿಂಪ್ಲಿಸಿಟಿ ಪುಟವನ್ನು ಇಲ್ಲಿ ಉದಾಹರಿಸಬಹುದು. ವೃತ್ತಪತ್ರಿಕೆಯ ಕೆಲಸ ಭ್ರಮೆಗಳನ್ನು ಹುಟ್ಟಿಸುವುದಲ್ಲ, ಅಳಿಸುವುದು ಎಂಬುದು ನನ್ನ ವಿನಮ್ರ ಅನಿಸಿಕೆ.
ನಮ್ಮ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ಈ&
#322
3; ಕೊಂಚ ಜಾಗ ಸಿಗುತ್ತಿದೆ. ಆದರೆ ಈ ಪ್ರಮಾಣದಲ್ಲಿ ಮಾಹಿತಿಗಳನ್ನು ಬಯಸುವವರೂ ಇದ್ದಾರೆಯೆ? ಬಹುಶಃ ಈ ಇಂಟರ್‌ನೆಟ್, ಮಾಹಿತಿ ತಂತ್ರಜ್ಞಾನ, ಆಧುನಿಕ ವಿಜ್ಞಾನ – ಇವೆಲ್ಲ ನಮ್ಮ ನಾಡಿನಲ್ಲಿ ಸಹಜ ಓದಿನ ಸಂಗತಿಗಳಾಗುವುದಕ್ಕೆ ಇನ್ನೂ ಸಾಕಷ್ಟು ಕಾಲ ಹಿಡಿಯಬಹುದು. ಆದರೂ ಈಗ ನೀಡುತ್ತಿರುವ ಸ್ಥಳಾವಕಾಶವನ್ನು ಕೊಂಚ ಹಿಗ್ಗಿಸಲು ಯತ್ನಿಸಿದರೆ ದೋಷವಿಲ್ಲ.
ಇಷ್ಟು ಹೇಳಿದ ಮೇಲೆ ಮುಂದಿನ ದಿನಗಳಲ್ಲಿ ನಾನು ಮುಖ್ಯವಾಹಿನಿ ಪತ್ರಿಕೆಗಳಿಂದ ನಿರೀಕ್ಷೆ ಮಾಡುವುದಾದರೂ ಏನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ.
  ಈ ಮುಖ್ಯವಾಹಿನಿ ಪತ್ರಿಕೆಗಳು ಮುಖ್ಯವಾಗಿ ಬೆಲೆಸಮರದ ಆರ್ಥಿಕ ಲೆಕ್ಕಾಚಾರದ ಜೊತೆಗೇ ಗುಣಮಟ್ಟ ಸಮರದ ಸಾಂಸ್ಕೃತಿಕ ಲೆಕ್ಕಾಚಾರಕ್ಕೂ ಮುಂದಾಗಬೇಕಿದೆ. ಬೆಲೆಸಮರದಲ್ಲಿ ಪತ್ರಿಕೆಗಳ ಆಡಳಿತ ಮಂಡಳಿಗಳಿಗೆ ಹೊಣೆಗಾರಿಕೆ ಇದೆ. ಆದರೆ ಸಾಂಸ್ಕೃತಿಕ ಗುಣಮಟ್ಟವನ್ನು ನಿಭಾಯಿಸುವ ಹೊಣೆ ಯಾರದ್ದು? ಸಂಪಾದಕೀಯ ಮಂಡಳಿಯದು ಎಂದು ಸುಲಭವಾಗಿ ಹೇಳಬಹುದು. ಆದರೆ ಆಡಳಿತ ಮಂಡಳಿಯ ಆರ್ಥಿಕ ಮಾದರಿಗೆ ತಕ್ಕಂತೆ ನಮ್ಮ ಪುಟಗಳನ್ನು  ರೂಪಿಸಬೇಕಿದೆ ಎಂದು ಸಂಪಾದಕೀಯ  ಸಿಬ್ಬಂದಿ ಹೇಳಿದರೆ ಓದುಗರ ಗತಿ?  ಓದುಗರೇ ಇವನ್ನೆಲ್ಲ  (ಹೊಸ ಮಾದರಿ ಪುಟಗಳು) ಇಷ್ಟಪಡುತ್ತಾರೆ ಎಂದು ಹೇಳುವ ಪತ್ರಕರ್ತ ವರ್ಗವೂ ಇದೆ. `ಜನ ಇಂಥ ಸಿನಿಮಾ ಇಷ್ಟ ಪಡುತ್ತಾರೆ ಅದಕ್ಕೇ ಹಾಗೆ ನಿರ್ಮಿಸುತ್ತೇವೆ' ಎಂದು ಸಿನಿಮಾ ನಿರ್ಮಾಪಕರು ಹೇಳುವ ಹಾಗೆ ಪತ್ರಿಕೆಗಳಲ್ಲೂ ಇಂಥ ಪ್ರವೃತ್ತಿ ಬೆಳೆದರೆ ಸಮಾಜದ ಒಟ್ಟಾರೆ ಸ್ವಾಸ್ಥ್ಯವನ್ನು ನೋಡುವರು ಯಾರು? ಸಿನಿಮಾದಿಂದ, ಪತ್ರಿಕೆಯಿಂದ ಜನ ಹಾಳಾಗುವುದು ಸಹಜ. ಆದರೆ ಜನರಿಂದ ಪತ್ರಿಕೆಗಳು ಹಾಳಾಗಬಾರದಲ್ಲ? ಈ ನಿಯಂತ್ರಣ ಸಾಧಿಸಲು ಇರುವ ಮಾಂತ್ರಿಕ ಕೋಲು ಯಾವುದು? ಪತ್ರಿಕೆಗಳು ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡಬೇಕಿದೆ.
  ಮುಖ್ಯವಾಹಿನಿ ಪತ್ರಿಕೆಗಳಲ್ಲಿ ತನಿಖಾವರದಿಗಳ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚಬೇಕು. ಬಹುಶಃ ಅವೇ ಈ ಪತ್ರಿಕೆಗಳ ವಿಶಿಷ್ಟ ಮಾರಾಟದ ಸರಕು (ಯೂನಿಖ್ ಸೆಲ&amp
;#32
77;ಲಿಂಗ್ ಪಾಯಿಂಟ್) ಆಗಬಹುದು. ಇದಕ್ಕೆ ಪಕ್ಷಾತೀತವಾಗಿ ಕರ್ತವ್ಯ ನಿಭಾಯಿಸುವ ಅಪಾರ ಕಾರ್ಯಶ್ರದ್ಧೆ ಬೇಕಾಗುತ್ತದೆ. ಇಂದಿನ ರಾಜಕೀಯವು ಎಲ್ಲ ಪತ್ರಕರ್ತರನ್ನು, ಪತ್ರಿಕೆಗಳ ಆಡಳಿತ ಮಂಡಳಿಗಳನ್ನು ವ್ಯಾಪಿಸುವ ಅಪಾಯವೇ ಇರುವಾಗ ಇಂಥ ವೃತ್ತಿಪರ ಪತ್ರಿಕೋದ್ಯಮವನ್ನು ನಿರೀಕ್ಷಿಸುವುದು ತೀರಾ ಅತಿ!
  ಮುಖ್ಯವಾಹಿನಿ ಪತ್ರಿಕೆಗಳ ಪತ್ರಿಕಾ ಸಿಬ್ಬಂದಿಗಳಿಗೆ ದಿನವೂ ಸುದ್ದಿ ಸಂಗ್ರಹಿಸುವುದೇ ದೊಡ್ಡ ಕೆಲಸವಾಗುತ್ತದೆ. ಈ ಕಾಯಕದಲ್ಲಿ ಅವರ ವೈಯಕ್ತಿಕ eನ, ತಿಳಿವಳಿಕೆ ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳಬಹುದಾದರೂ, ಅವರಿಗೆ ವೈಯಕ್ತಿಕ ಕಲಿಕೆ, ತನಿಖೆ,ಅಧ್ಯಯನ, ಸಾರ್ವಜನಿಕ ಸಂಪರ್ಕ – ಇವಕ್ಕೆಲ್ಲ ಆಡಳಿತ ಮಂಡಳಿಯೇ  ಅವಕಾಶ ಮಾಡಿಕೊಡಬೇಕು. ಅದಿಲ್ಲದೆ ಈ ಪತ್ರಕರ್ತರಿಂದ ಹೆಚ್ಚಿನ ಗುಣಮಟ್ಟವನ್ನಾಗಲೀ, ಆಧುನಿಕ ಸಂಗತಿಗಳ ಹೊಳಹಿನ ಸುದ್ದಿಗಳನ್ನಾಗಲೀ ನಿರೀಕ್ಷಿಸುವಂತಿಲ್ಲ. ಪತ್ರಕರ್ತರಿಗೆ ಕಾನೂನು ರೀತ್ಯಾ ವೇತನ ನೀಡುವಷ್ಟೇ ಮುಖ್ಯ ಹೀಗೆ ಅವರಿಗೆ ಕಾನೂನುಬಾಹಿರವಾಗಿ ಇತರೆ ಅವಕಾಶಗಳನ್ನೂ ಮಾಡಿಕೊಡುವುದು!
  ನಮ್ಮ ಪತ್ರಿಕೆಗಳಲ್ಲಿ ನವಸಾಕ್ಷರರಿಗೆ,ಮಕ್ಕಳಿಗೆ ಮುಖ್ಯಸುದ್ದಿಗಳನ್ನು ತಿಳಿಸುವ ವ್ಯವಸ್ಥೆ ಇಲ್ಲ. ಈ ವ್ಯವಸ್ಥೆಯನ್ನು ನಿಧಾನವಾಗಿಯಾದರೂ ತರುವುದು ಸಾಮಾಜಿಕ ಅಗತ್ಯ.
  ಇವಿಷ್ಟನ್ನು ಈ ಹೊತ್ತಿನ ತುರ್ತು ಎಂದು ಹೇಳಬಹುದಷ್ಟೆ. ಕನ್ನಡಿಗರು ಬಯಸುವ ಯಾವುದೇ ಒಳ್ಳೆ ಸಂಗತಿಗಳನ್ನು, ಪತ್ರಿಕೆಗಳಲ್ಲಿ ಇರುವ ಸಿಬ್ಬಂದಿಗಳು ಹುಡುಕುವ ಒಳ್ಳೆಯ ಐಡಿಯಾಗಳನ್ನು ಪ್ರಕಟಿಸಲು ಮುಖ್ಯವಾಹಿನಿ ಪತ್ರಿಕೆಗಳು ಆರಂಭಿಸಲು ಯಾವುದೇ ಅಡ್ಡಿಯೂ ಇಲ್ಲ.

Share. Facebook Twitter Pinterest LinkedIn Tumblr Email
Previous ArticleRaag Madhuvanti
Next Article Kannada DiMdiMa
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.