Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
ಲೇಖನಗಳು

ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 20, 2007Updated:May 19, 20251 Comment5 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಕನ್ನಡದ ಅತ್ಯುತ್ತಮ ಕಾದಂಬರಿಯನ್ನು ಆಧರಿಸಿದ ಸಿನೆಮಾ ತಯಾರಾಗುತ್ತದೆ ಎಂದುಕೊಳ್ಳಿ. ಅದನ್ನು ನೋಡುವವರಾರು?
ಕನ್ನಡದ ಒಂದು ಒಳ್ಳೆಯ ಪುಸ್ತಕವೊಂದು ಕಾಂಪಾಕ್ಟ್ ಡಿಸ್ಕ್‌ನಲ್ಲೋ, ಕ್ಯಾಸೆಟ್ಟಿನಲ್ಲೋ ಬಂತು ; ಅಥವಾ ಯಾರೋ ಕನ್ನಡದ ಆಡಿಯೋ ಕವನಸಂಕಲನವನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಿ. ಎಷ್ಟು ಜನ ಅದನ್ನು ಓದುತ್ತಾರೆ ಮತ್ತು ವಿಮರ್ಶಿಸುತ್ತಾರೆ?
ಕನ್ನಡದಲ್ಲಿ ಬಿಡುಗಡೆಯಾಗುವ ಯುವಪೀಳಿಗೆಯ ಲೇಖಕರ ಕಾದಂಬರಿಗಳ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ವಿಮರ್ಶೆ ಪ್ರಕಟವಾಗಲು ಎಷ್ಟು ವಾರ ಬೇಕು?
ಸಂಬಂಧವಿಲ್ಲದ ಪ್ರಶ್ನೆಗಳು ಎನ್ನಿಸಬಹುದು. ಸಿನೆಮಾ ಕೂಡಾ ತಂತ್ರeನವೇ. ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿ. ಕಾಗದದಲ್ಲಿ ಅಕ್ಷರಗಳನ್ನು ಮೂಡಿಸಲು ಬಾರದವರೂ ಸಿನೆಮಾ ನೋಡುತ್ತಾರೆ. ಕನ್ನಡದ ಸಾಹಿತ್ಯವನ್ನು ಸಿನೆಮಾ ಮಾಡಿದರೆ ಅದು ಅವರಿಗೆ ತಲುಪುತ್ತದೆ. ವಿಚಿತ್ರ ಎಂದರೆ ಈ ಬಗೆಯ ಸಾಹಿತ್ಯ ಆಧಾರಿತ ಸಿನೆಮಾಗಳು ಪ್ರಶಸ್ತಿಗಳನ್ನು ಪಡೆಯುತ್ತವೆಯೇ ಹೊರತು ಜನಪ್ರಿಯವಾಗುವುದಿಲ್ಲ. ಯಾವ ಥಿಯೇಟರಿನಲ್ಲಿ ಈ ಸಿನೆಮಾ ಬಂದಿದೆ ಎಂದು ಹುಡುಕುವ ಹೊತ್ತಿಗೆ ಸುಸ್ತಾಗುತ್ತದೆ !
ಇನ್ನು ಕಾಂಪಾಕ್ಟ್ ಡಿಸ್ಕ್‌ಗಳಲ್ಲಿ ಪ್ರಕಟವಾಗುವ ಪುಸ್ತಕಗಳು (ಬೆರಳೆಣಿಕೆಯಷ್ಟು ಮಾತ್ರವೇ ಬಂದಿವೆ) ಕಂಪ್ಯೂಟರ್ ಉಳ್ಳವರನ್ನು ತಲುಪುತ್ತವೆ. ಅವರಲ್ಲಿ ಕನ್ನಡ ಸಾಹಿತ್ಯವನ್ನು ಪ್ರೀತಿಸುವವರೆಷ್ಟು ಎಂದು ಲೆಕ್ಕ ಹಾಕಬೇಕಾಗುತ್ತದೆ.
ಈ ಮೈಲ್ ವ್ಯವಸ್ಥೆಯು ಬಲವಾಗಿ ಬೇರೂರಿರುವಾಗ ನಮ್ಮಲ್ಲಿ ವಿಮರ್ಶೆಗಳು ತಡವಾಗುತ್ತಿರುವುದಕ್ಕೆ ವಿಮರ್ಶಕರು ಈ ಮೈಲ್ ಬಳಸದಿರುವುದೇ ಮುಖ್ಯ ಕಾರಣ ಎಂಬುದು ನನ್ನ ಗುಮಾನಿ. ‘ಒಂದು ಬದಿ ಕಡಲು’ ಪುಸ್ತಕವನ್ನು ನಾನು ವಿಮರ್ಶೆ ಮಾಡಿದ ಮತ್ತು ನನ್ನ ಜಾಲತಾಣದಲ್ಲಿ ಪ್ರಕಟಿಸಿದ ಎಷ್ಟೋ ವಾರಗಳ ತರುವಾಯ ಈಗ ಆ ಪುಸ್ತಕದ ವಿಮರ್ಶೆಗಳು ಮುದ್ರಿತ ದಿನಪತ್ರಿಕೆಗಳಲ್ಲಿ ಬರತೊಡಗಿವೆ.
ಅಂದರೆ ಕನ್ನಡ ಸಾಹಿತ್ಯವನ್ನು ತಂತ್ರeನದ, ಆಧುನಿಕತೆಯ ಹಿನ್ನೆಲೆಯಲ್ಲಿ ನೋಡಿದರೆ ನಮಗೆ ಕಾಣಿಸುವುದು ಒಂದಷ್ಟು ನವೀನ ಪ್ರಯೋಗಗಳ ತುಣುಕುಗಳು. ಅವುಗಳನ್ನು ಅಚ್ಚರಿಯಿಂದ ಮತ್ತು ಉತ್ಸಾಹದಿಂದ ಸ್ವಾಗತಿಸಬಹುದಷ್ಟೇ ವಿನಃ ಕನ್ನಡದಲ್ಲಿ ಆಮೂಲಾಗ್ರ ಬದಲಾವಣೆ ಕಾಣುತ್ತಿದೆ ಎಂದು ಭಾವಿಸಲಾಗದು. ಮುಖ್ಯವಾಗಿ ಈ ರೀತಿ ತಂತ್ರeನದ ಬಳಕೆಯಾಗುತ್ತಿರುವುದು ಕಂಪ್ಯೂಟರ್ ಬಲ್ಲ ಹೊಸಪೀಳಿಗೆಯ ಲೇಖಕರಿಂದ ಮತ್ತು ಪತ್ರಕರ್ತರಿಂದ; ಮತ್ತು ಕಂಪ್ಯೂಟರ್ ಬಲ್ಲ ಕನ್ನಡಿಗರಿಂದ. ಬರೆಯವುದನ್ನು ಮೊದಲು ಕಲಿತು ಲೇಖಕರಾಗಿ ಈಗ ಕಂಪ್ಯೂಟರ್ ಕಲಿಯುತ್ತಿರುವವ ಸಂಖ್ಯೆ ಕಡಿಮೆ. ಹೆಚ್ಚಿನವರು ಕನ್ನಡದಲ್ಲಿ ಬೆಳರಚ್ಚು ಮಾಡುತ್ತಾರೆ; ಅವರಲ್ಲಿ ಕೆಲವರು ತಾವೇ ಸ್ವತಃ ಈ ಮೈಲ್ ಮಾಡುತ್ತಾರೆ. ಇನ್ನೂ ಕೆಲವರು ತಾವೇ ಪುಸ್ತಕವಿನ್ಯಾಸ ಮಾಡುತ್ತಾರೆ. ಮತ್ತೂ ಕೆಲವರು ತಾವೇ ಚಿತ್ರವನ್ನೂ ಹುಡುಕಿ ಹಾಕುತ್ತಾರೆ. ಬೆರಳೆಣಿಕೆಯವರು ಇಂಟರ್‌ನೆಟ್‌ನ ಹೊಸ ಅವತಾರವಾದ ಬ್ಲಾಗನ್ನು ಬಳಸುತ್ತಾರೆ. ಅವರಲ್ಲೇ ಇನ್ನೂ ವಿರಳ ಮಂದಿ ತಮ್ಮ ಜಾಲತಾಣವನ್ನು ತಾವೇ ರೂಪಿಸಿಕೊಳ್ಳುತ್ತಾರೆ.
ಹೀಗೆ ತಂತ್ರeನದ ಆಳ ಹೆಚ್ಚಾದಷ್ಟೂ ಇವರಲ್ಲಿ ಕನ್ನಡ ಸಾಹಿತ್ಯದ ಅರಿವಿದ್ದವರ ಸಂಖ್ಯೆ ಕಡಿಮೆಯಾಗುತ್ತದೆ. ಮಾಹಿತಿ ತಂತ್ರeನದ ಬಗ್ಗೆ ಈಗ ಹೆಚ್ಚು ಮಾತನಾಡುವ ಚಂದ್ರಶೇಖರ ಕಂಬಾರರಂಥವರು ಮಾಹಿತಿ ತಂತ್ರeನದ ಥಿಯರಿಸ್ಟ್ ಎನ್ನಬಹುದಾದರೆ, ಯು. ಆರ್. ಅನಂತಮೂರ್ತಿಯವರನ್ನು ಜಾಗೃತ ಈ ಮೈಲ್ ಬಳಕೆದಾರ ಎನ್ನಬಹುದು. ಓ. ಎಲ್. ನಾಗಭೂಷಣಸ್ವಾಮಿಯವರು ಒಳ್ಳೆಯ ಬ್ಲಾಗಿಗಳು. ಇಂಟರ್‌ನೆಟ್ ಜಗತ್ತಿನಲ್ಲಿ ಅವರ ಅಸ್ತಿತ್ವ ಗಮನಾರ್ಹವಾಗಿದೆ. ಎಂ. ಎಸ್. ಶ್ರೀರಾಂರವರ ಬ್ಲಾಗಿನಲ್ಲಿ ಆಧುನಿಕತೆಯ ದಟ್ಟ ವಾಸನೆಯನ್ನು ಕಾಣಬಹುದು. ಅಬ್ದುಲ್ ರಶೀದ್ ಬ್ಲಾಗಿನಲ್ಲಿ ನಿಜಕ್ಕೂ ಭಾವುಕತೆಯ ಕಣಗಳಿವೆ. ಯು.ಬಿ. ಪವನಜರ ಜಾಲತಾಣದಲ್ಲಿ ಕನ್ನಡದ ತಂತ್ರeನ ಬಳಕೆಯ ಕುರುಹುಗಳನ್ನೂ ಕಾಣಬಹುದು. ಕನ್ನಡದ ಯುವ ಪೀಳಿಗೆಯ ಎಲ್ಲ ಪತ್ರಕರ್ತರೂ ಬ್ಲಾಗ್‌ನ ಹುಚ್ಚಿಗೆ ಮರುಳಾಗುತ್ತಿದ್ದಾರೆ.
ಏನಾದರೂ ಹೊಳೆಯಿತೆ? ನಮ್ಮಲ್ಲಿ ದಿನವೂ ಕಂಪ್ಯೂಟರನ್ನು ಬಳಸುವವರು ಮಾತ್ರವೇ ಈ ಬಗೆಯ ತಂತ್ರeನದ ಬಳಕೆಗೆ ಮುಂದಾಗಿದ್ದಾರೆ.
ನಮ್ಮ ರಂಗನಟರು, ಸಾಮಾಜಿಕ ಕಾರ್ಯಕರ್ತರು, ವೇಶ್ಯೆಯರು, ಕಳ್ಳರು, ದುಃಖಿಗಳು, ವಿರಹಿಗಳು, ಮಾದಕವ್ಯಸನಿಗಳು, – ಇವರಲ್ಲಿ ಯಾರಾದರೂ ಬ್ಲಾಗ್‌ಮಾಡಿದ್ದನ್ನು ನಾನಂತೂ ಗಮನಿಸಿಲ್ಲ. ನಮ್ಮ ಪಂಚಾಯತಿ ಸದಸ್ಯರು, ರಾಜಕಾರಣಿಗಳು, ಮಾಹಿತಿ ತಂತ್ರeನದ ಕಚೇರಿಗಳಲ್ಲಿ ಇರುವ ಹಿರಿಯ ತಂತ್ರಜ್ಞರು, – ಯಾರೂ ಬ್ಲಾಗ್‌ಮಾಡುತ್ತಿಲ್ಲ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿಲ್ಲ. ಎಲ್ಲರಿಗೂ ಅವರ ಕೆಲಸವೇ ಮುಖ್ಯ, ಬ್ಲಾಗ್ ಮಾಡುವುದು ಸಮಾಜದ ಅಭಿವ್ಯಕ್ತಿ ಎಂದು ಅವರಿಗೆ ಅನ್ನಿಸಿಯೇ ಇಲ್ಲ. ಪತ್ರಿಕಾ ಹೇಳಿಕೆಗಳೇ ಈಗಲೂ ಹಲವರ ಬಂಡವಾಳ; ಮುದ್ರಣದಲ್ಲಿ ಎಷ್ಟಂತ ಈ ಹೇಳಿಕೆಗಳನ್ನು ಮುದ್ರಿಸಬಹುದು ಎಂಬ ಮಿತಿಯೇ ಇವರಿಗೆ ಗೊತ್ತಿಲ್ಲ. ಹಾಗಂತ ಜಾಲತಾಣದಲ್ಲೋ, ಕಂಪ್ಯೂಟರಿನಲ್ಲೋ ಬರೆದದ್ದು ಸಾಮಾನ್ಯರಿಗೆ ತಲುಪುವುದೂ ಇಲ್ಲ.
ಅಂದರೆ, ಮುದ್ರಣಮಾಧ್ಯಮದಷ್ಟು ಪ್ರಭಾವಿಯಾಗಿ ಇಂಟರ್‌ನೆಟ್‌ಮಾಧ್ಯಮವು ಬೆಳೆದಿಲ್ಲ. ಕೆಲವೇ ಆಪ್ತರ ನಡುವೆ, ಹೆಚ್ಚೆಂದರೆ ವಿದೇಶದಲ್ಲಿ ಇರುವ ಕನ್ನಡಪ್ರಿಯರಿಗಾಗಿ ಬರೆಯುವ ಕನ್ನಡ ಸಾಹಿತ್ಯವು ಸೀಮಿತ ಓದುಗವರ್ಗವನ್ನಷ್ಟೇ ಬೆಳೆಸಿದೆ.
ಇದು ಇಂಟರ್‌ನೆಟ್‌ನ ಅರೆಬರೆ ಬೆಳವಣಿಗೆಯ ಕಥೆಯಾದರೆ, ಸಿನೆಮಾದ್ದು ಇನ್ನೂ ವಿಚಿತ್ರ. ಸಿನೆಮಾದಂಥ ಪ್ರಭಾವಿ ಮಾಧ್ಯಮವು ಜನರನ್ನು ತಟ್ಟುವುದೇ ಮಚ್ಚು ಲಾಂಗುಗಳಿಂದ ಎನ್ನುವ ಹಾಗೆ ಸಿನೆಮಾಗಳು ಬರುತ್ತಿವೆ. ಕಾವ್ಯಾತ್ಮಕವಾದ, ಸತ್ಯದ ತಲೆಯ ಮೇಲೆ ಮೊಟೆಯುವಂಥ ವೈeನಿಕ ಕಥೆಯನ್ನು ಹಾಲಿವುಡ್ ಮಾದರಿಯಲ್ಲಿ ಕಾಣುವುದಕ್ಕೆ ನಾವು ಇನ್ನೆಷ್ಟು ದಶಕಗಳ ಕಾಲ ಕಾಯಬೇಕೋ ಗೊತ್ತಿಲ್ಲ. ಎಲ್ಲ ಸ್ಪೆಶಿಯಲ್ ಎಫೆಕ್ಟ್‌ಗಳೂ ದೇವಾನುದೇವತೆಗಳ ಪಾಲಾಗಿವೆ.
‘ನೆಕ್ಸ್ಟ್’ ಸಿನೆಮಾದಲ್ಲಿ ಭವಿಷ್ಯವನ್ನು ಕಾಣುವ ಜಾನ್‌ಸನ್ ಪಾತ್ರವನ್ನು ನಿಕೋಲಾಸ್ ಕೇಜ್ ಹ್ಯಾಗೆ ನಿಭಾಯಿಸಿದ್ದಾನೆ ಎಂದರೆ ನೀವು ಅವನು ನಿಜಕ್ಕೂ ಭವಿಷ್ಯಕಾರ ಎಂದು ನಂಬಲೇಬೇಕು. ಸಿನೆಮಾದಲ್ಲಿ ನಡೆಯುವ ಘಟನೆಗಳೆಲ್ಲವನ್ನೂ ನಿಜ ಎಂದೇ ಭಾವಿಸಬೇಕು. ಕೊನೆಗೆ ಕಥೆಯೂ ಕಾವ್ಯಾತ್ಮಕವಾಗಿ ಕೊನೆಗೊಳ್ಳುತ್ತದೆ. ಎಲ್ಲೋ ಸಾಹಿತ್ಯವೂ ಈ ಸಿನೆಮಾದ ಮೇಲೆ ಪರಿಣಾಮ ಮಾಡಿದೆ ಎಂದೆನಿಸುತ್ತದೆ. ಸಾಹಿತ್ಯ, ಸಂಗೀತ, ನಟನೆ, ತಂತ್ರeನ, ಕಲ್ಪನೆ ಎಲ್ಲವೂ ಮಿಳಿತಗೊಂಡ ಹದವಾದ ಕನ್ನಡ ಸಿನೆಮಾವನ್ನು ಕಾಣಬೇಕೆಂದು ನಾನು ಬಯಸುವುದೇ ಆದರೆ ಪುನರ್ಜನ್ಮದಲ್ಲಿ ನಂಬಿಕೆ ಇಡಲೇಬೇಕು!
ಎಲ್ಲ ಮನರಂಜನೆಯ ಹಿಂದೆ, ಎಲ್ಲ ತಾಂತ್ರಿಕ ಬೆಳವಣಿಗೆಗಳ ಹಿಂದೆ ಸುಮಧುರ ಸಂಸ್ಕೃತಿಯೊಂದರ ಬೇರು ಇದ್ದೇ ಇರುತ್ತದೆ ಎಂಬುದು ಕನ್ನಡಿಗರಿಗೆ ಮಾತ್ರ ಗೊತ್ತಾಗುತ್ತಿಲ್ಲ! ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಗಣಕಗಳ ಬಳಕೆಯ ಬಗ್ಗೆ ಪುಸ್ತಕಗಳು ಬಂದು ವರ್ಷಗಳಾದವು. ನಾವು ಈಗಷ್ಟೇ ಕಣ್ಣು ಬಿಡುತ್ತಿದ್ದೇವೆ!
ಕನ್ನಡ ಸಾಹಿತ್ಯದ ಮುದ್ರಣದಲ್ಲಿ ತಂತ್ರeನದ ಪ್ರಭಾವ ಹೇಗಾಗಿದೆ ಎಂದು ನೋಡಬೇಕಾದರೆ ನೀವು ಕಂಬಾರರು ಬರೆದ, ಅಕ್ಷರ ಪ್ರಕಾಶನದ ‘ಶಿಖರ ಸೂರ್ಯ’ ಕಾದಂಬರಿಯನ್ನು ಓದಬೇಕು. ಗಣಕದ ಅವಾಂತರದಿಂದಾಗಿ ಪುಟಗಟ್ಟಳೆ ಮುದ್ರಣದೋಷವಿದ್ದರೂ ಕಣ್ಣೆತ್ತಿ ನೋಡದ ಪ್ರಕಾಶಕರೇ ದಶಕಗಳಿಂದ ಅತ್ಯುತ್ತಮ ಸಾಹಿತ್ಯವನ್ನು ನೀಡಿದವರೆ ಎಂದು ಬೆಚ್ಚಿಬೀಳುತ್ತೀರಿ. ಈ ಉದಾಹರಣೆಯ ಹೊರತಾಗಿಯೂ ಕನ್ನಡ ಪುಸ್ತಕಗಳು ಈಗ ಸಾಕಷ್ಟು ಚೆನ್ನಾಗಿ ಮುದ್ರಿತವಾಗುತ್ತಿವೆ ಎಂಬುದೊಂದೇ ಈಗ ನಾವು ಕಂಡುಕೊಳ್ಳಬಹುದಾದ ಸಮಾಧಾನ.
ಕನ್ನಡ ತಂತ್ರಾಂಶಗಳ ಬಗ್ಗೆ ನಾನು ಮಾತನಾಡಿದರೆ ಅದೇ ಹಳವಂಡವನ್ನೇ ಹೇಳಬೇಕು: ಕನ್ನಡ ತಂತ್ರಾಂಶದ ಬೆಳವಣಿಗೆ, ನಾವು ಕೆಲವರು ಮಿತ್ರರು ಅಂದುಕೊಂಡಂತೆ, ನಿಂತೇ ಹೋಗಿದೆ. ಕರ್ನಾಟಕ ಸರ್ಕಾರವು ಕನ್ನಡ ತಂತ್ರಾಂಶವನ್ನು ಬೆಳೆಸುವದರ ಬಗ್ಗೆ ನೂರು ಕನಸುಗಳನ್ನು ಹೆಣೆದು ನಿದ್ದೆ ಹೋಗಿದೆ. ಸಿಲಿಕಾನ್ ಸಿಟಿಯ ವಿಶ್ವಪ್ರಸಿದ್ಧ ಶ್ರೀಮಂತ ಸಾಫ್ಟ್‌ವೇರ್ ಸಂಸ್ಥೆಗಳ ಒಡೆಯರು ಜಮೀನು ಕೊಡಲಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆಯೇ ಹೊರತು ಕನ್ನಡ ತಂತ್ರಾಂಶ, ತಂತ್ರeನದ ಬಗ್ಗೆ ನಯಾಪೈಸೆ ಚಿಂತಿಸುವುದಕ್ಕೂ ಹೋಗಿಲ್ಲ. ಅವರ ರಫ್ತು ಉತ್ಪನ್ನಗಳ ಮೇಲೆ ತೆರಿಗೆ ವಿನಾಯ್ತಿ ಇದ್ದರೆ ಕನ್ನಡದ ನೆಲದಲ್ಲೇ ಮಾರಾಟವಾಗುವ ತಂತ್ರಾಂಶಗಳ ಮೇಲೆ ಇನ್ನಿಲ್ಲದ ತೆರಿಗೆಯನ್ನು ವಿಧಿಸಲಾಗಿದೆ. ತೇಜಸ್ವಿ ಹಂಬಲದಿಂದ ಹೊರಬಂದ ಕುವೆಂಪು ತಂತ್ರಾಂಶವನ್ನು ಯಾರು ಬಳಸುತ್ತಿದ್ದಾರೆ ಎಂದು ನಾನು ತನಿಖೆ ಮಾಡಬೇಕಿದೆ.
ಇಂದಿಗೂ ಕನ್ನಡದಲ್ಲಿ ಮುಕ್ತ ತಂತ್ರಾಂಶವೇ ಮೂಡಿಲ್ಲ! ಮುಕ್ತ ತಂತ್ರಾಂಶದ ಲೋಕಲೈಸೇಶನ್ ಬಗ್ಗೆ (ತಂತ್ರeನವನ್ನು ಸ್ಥಳೀಯ ಬದುಕಿನ ಅಗತ್ಯಕ್ಕೆ ತಕ್ಕಂತೆ, ಸ್ಥಳೀಯ ಭಾಷೆಯಲ್ಲಿ ರೂಪಿಸುವುದು) ಅವುಗಳಿಂದಾಗುವ ಲಾಭದ ಬಗ್ಗೆ ವಿಶ್ವಸಂಸ್ಥೆಯೇ ಮುಂದಾಗಿ ಹಲವು ಪುಸ್ತಕಗಳನ್ನು ಪ್ರಕಟಿಸಿ ವರ್ಷಗಳಾದವು. ಆಫ್ರಿಕಾದಂಥ ಕಗ್ಗತ್ತಲ ನಾಡಿನಲ್ಲೇ ಮುಕ್ತ ತಂತ್ರಾಂಶದಕ್ರಾಂತಿ ನಡೆಯುತ್ತಿರುವಾಗ, ಕರ್ನಾಟಕದಲ್ಲಿ ಯಾಕೆ ನಮ್ಮ ತಂತ್ರಜ್ಞರು ತೆಪ್ಪಗೆ ಕೂತಿದ್ದಾರೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಕೇವಲ ಸಾಮಾನ್ಯ ಗಣಕ ಬಳಕೆದಾರನಾದ, ತಂತ್ರeನದ ಬಗ್ಗೆ ಅಧಿಕೃತಕವಾಗಿ ಮಾತಾಡುವ ಯಾವುದೇ ಗುಣಗಳನ್ನೂ ಹೊಂದಿಲ್ಲದ ನಾನು ಈ ಲೇಖನವನ್ನು ಬರೆಯಬೇಕಾದ ಪ್ರಸಂಗವೇ ವಿಚಿತ್ರ ಎನಿಸುತ್ತದೆ. ಬಿಡಿ ಬಿಡಿ ಬೆಳವಣಿಗೆಗಳನ್ನೇ ಮಹಾನ್ ಎಂದು ಚಿತ್ರಿಸಿ ವೈಭವೀಕರಿಸುವುದನ್ನು ಮೊದಲು ನಿಲ್ಲಿಸಬೇಕಲ್ಲವೆ?
ಇನ್ನು ಕನ್ನಡ ಸಾಹಿತ್ಯದಲ್ಲಿ ತಂತ್ರeನ ಎಂಬ ಮಾತನ್ನು ಇನ್ನೂ ಆಳವಾಗಿ ನೋಡುವುದಾದರೆ, ಡಾಟಾಬೇಸ್ ನಿರ್ವಹಣೆಯನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು. ಕನ್ನಡದ ಡಾಟಾಬೇಸ್ ತಂತ್ರeನ ಬೆಳವಣಿಗೆಯಂತೂ ಶೈಶವಾವಸ್ಥೆಯಲ್ಲಿದ್ದೇ ಕೆಲವು ವರ್ಷಗಳಾದವು. ಕನ್ನಡದ ಲೇಖಕರು ತಮ್ಮ ಲೇಖನಗಳ ಡಾಟಾಬೇಸ್ ಮಾಡಿಕೊಂಡಿದ್ದರೆ ಎಷ್ಟು ಸಲ ತಮಗೆ ಗೊತ್ತಿಲ್ಲದೇ ಒಂದೇ ಬಗೆಯ ಕಲ್ಪನೆಗಳನ್ನು ಹರಿಬಿಡುತ್ತಿದ್ದೇವೆ ಎಂದು ತಿಳಿದುಕೊಂಡು ತಮ್ಮ ಶೈಲಿಯನ್ನು, ಪದನಳಕೆಯನ್ನು ಬದಲಿಸಿಕೊಳ್ಳುತ್ತಿದ್ದರು. ಗಣಕವೂ ಕನ್ನಡ ಸಾಹಿತ್ಯದ ಗುಣಮಟ್ಟವನ್ನು ಹೆಚ್ಚಿಸಬೇಕೆಂದರೆ ಡಾಟಾಬೇಸ್‌ನಲ್ಲೂ ಕನ್ನಡದ ದ್ರವ್ಯ ಹರಿಯಬೇಕು. ಅದಾಗುತ್ತಿಲ್ಲ. ಅದಿರಲಿ, ನಮ್ಮ ಸರ್ಕಾರಿ ಸಂಸ್ಥೆಗಳು ನಡೆಸುತ್ತಿರುವ ವಿವಿಧ ಜಾಲತಾಣಗಳಲ್ಲಿ ಕೂಡಾ ಇಂಗ್ಲಿಶಿನ ಡಾಟಾಬೇಸ್ ಇದೆ. ಇದನ್ನು ತಪ್ಪಿಸುವುದು ಹೇಗೆ?
ಮೊಬೈಲ್ ಫೋನ್‌ಗಳು, ಎ ಟಿ ಎಂಗಳು, ಹೋರ್ಡಿಂಗ್‌ಗಳು, ಟಿವಿ ಪರದೆಗಳು, ವಾಶಿಂಗ್ ಮೆಶಿನ್‌ಗಳು, ಮೈಕ್ರೋವೇವ್ ಓವೆನ್‌ಗಳು ಮಾತಾಡುತ್ತವೆ. ಅವಕ್ಕೆ ಕನ್ನಡ ಕಲಿಸುವುದು ಕಷ್ಟದ ಮಾತಾಗಿಹೋಗಿದೆ.
ತಮಾಷೆ ಎಂದರೆ ವಿವಿಧ ಸಂಸ್ಥೆಗಳು ರೂಪಿಸಿರುವ ಕನ್ನಡದ ಅಕ್ಷರಗಳಲ್ಲಿ ಸಮಾನತೆಯೇ ಇಲ್ಲ. ಯೂನಿಕೋಡ್‌ಎಂಬುದು ಇದಕ್ಕೆ ತಕ್ಕ ಪರಿಹಾರವೇನೋ ನಿಜ ; ಆದರೆ ಇದೆಲ್ಲವೂ ಭಾರೀ ಹೂಡಿಕೆದಾರರ ನಡುವಣ ಕಸರತ್ತಾಗಿದೆ; ಬಳಕೆದಾರ ಮಾತ್ರ ದುಡ್ಡು ಕಕ್ಕಿಯೇ ಕನ್ನಡಕ್ಕೆ ಕೈ ಎತ್ತುವ ಸ್ಥಿತಿ ಉಂಟಾಗಿದೆ. ಉಳ್ಳದವರು ಮತ್ತು ಉಳ್ಳವರ ನಡುವೆ ಇರುವ ಡಿಜಿಟಲ್ ಕಂದರವನ್ನು ಮುಚ್ಚುವುದು ಯಾವಾಗ? ಕನ್ನಡವನ್ನೂ ಹೊಂದಿದ ಸಿಂಪ್ಯೂಟರ್ ಎಂಬ ಅಂಗೈ ಗಣಕವೇ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾದ ಸ್ಥಿತಿ ಇರುವಾಗ ಅನಕ್ಷರತೆಯನ್ನು ಮೀರಿ ಕನ್ನಡದ ಕಂಪು ಬೆಳೆಯುವುದು ಯಾವಾಗ?
ನಮ್ಮ ಉಳಿದೆಲ್ಲ ಸಮಸ್ಯೆಗಳ ಹಾಗೆಯೇ ತಂತ್ರeನದಲ್ಲಿ ಕನ್ನಡದ ಸಾಂಸ್ಕೃತಿಕ ಬೆಳವಣಿಗೆಯೂ ಸಿರಿವಂತಿಕೆಗೆ ಸಾಪೇಕ್ಷವಾಗಿದೆ ಎಂಬುದು ಕಟು ವಾಸ್ತವ. ನಮ್ಮ ಸಮಾಜದಲ್ಲಿ ಮೊದಲು ಸಾಕ್ಷರತೆ, ಆಮೇಲೆ ಗಣಕ ಸಾಕ್ಷರತೆ ಮೂಡಿ, ಎಲ್ಲ ಕೈಗಳಿಗೂ ಕೀಲಿಮಣೆ ಸಿಕ್ಕಿದ ಮೇಲೆ ಕನ್ನಡ ಸಾಹಿತ್ಯದ ಬಗ್ಗೆ ಮಾತಾಡುವುದು ಸೂಕ್ತ. ಅಲ್ಲಿಯವರೆಗೆ ನೇಯ್ದ ಮೂರು ಮೊಳವನ್ನೇ ಹಿಗ್ಗಿಸಿ ಖುಷಿಪಡುವುದಾದರೆ ಪರವಾಗಿಲ್ಲ.
ಏನಾದರೂ ಸಲಹೆಯನ್ನೇ ಕೊಡಬೇಕೆಂದರೆ …. ಮೊದಲು ‘ಬೆಂಗಳೂರು ಸಿಲಿಕಾನ್ ಸಿಟಿ’ ಎಂಬ ಮರುಳು ಹೇಳಿಕೆಯನ್ನು ರದ್ದು ಮಾಡಿ. ಹಳ್ಳಿಗೊಂದು ಕಂಪ್ಯೂಟರ್ ಕೊಡಿ. ಅದರೊಳಗೆ ಕನ್ನಡ ಇಡಿ. ಕಂಪ್ಯೂಟರನ್ನು ಮೊದಲು ರೇಡಿಯೋ, ಟಿವಿ ಥರ ಬಳಸಿಯಾದರೂ ಜನಪ್ರಿಯಗೊಳಿಸಿ. ರಾಜಧಾನಿಯಲ್ಲೇ ಕೂತು ಕನ್ನಡದ ಬಾವುಟ ಹಾರಿಸುವ ತಂತ್ರಜ್ಞರು, ಭಾಷಾ ಪ್ರೇಮಿಗಳು ಕೊನೇ ಪಕ್ಷ ಜಿಲ್ಲಾ / ತಾಲೂಕು ಕೇಂದ್ರಗಳಿಗೆ ಹೋಗಿ ನಾಲ್ಕು ಜನರ ಜೊತೆ ಬೆರೆಯಲಿ. ಎಲ್ಲೆಲ್ಲೂ ಬ್ರಾಡ್‌ಬ್ಯಾಂಡ್ ಬಂದಿರುವ ಈ ಕಾಲದಲ್ಲೂ ಬೆಂಗಳೂರಿನಲ್ಲೇ ಕನ್ನಡಕ್ಕಾಗಿ ಹೋರಾಡುವ ಚಟವನ್ನು ಕೈ ಬಿಡಿ.
ವಿಶೇಷ ಸಂದರ್ಭಗಳಲ್ಲಿ ಇಂಥದೊಂದು ಲೇಖನವನ್ನು ನಾನು ಬರೆಯುವುದರ ಮತ್ತು ನೀವು ಓದುವುದರ ಹೊರತು ಈ ವಿಷಯದ ಬಗ್ಗೆ ಆಂಥ ಗುರುತರವಾಗಿ ತಲೆಕೆಡಿಸಿಕೊಳ್ಳುವುದೇನೂ ಬೇಕಾಗಿಲ್ಲ.
Article published in The Sunday Indian, Dec 10-16, 2007  issue

Share. Facebook Twitter Pinterest LinkedIn Tumblr Email
Previous ArticleTubular sunlights
Next Article Virgin comics : Sexually explicit content for children !
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

1 Comment

  1. dr.sadashiva.rao on November 24, 2008 10:33 am

    dear sir,
    I cannot read properly the kannada words in all above sites . please reply to my e mail.I read your likhana in udayavani on 24-11-08 about : SUMMSNE HUDUKONA,NERAVAGONA. i BOOKMARKED THE SITE CLICK NOW,MAGIC TAXI.
    YOURS,
    DR.SADASHIVA.RAO
    drsadashiva@yahoo.com
    24-11-08

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.