Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
ಲೇಖನಗಳು

ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ

ಬೇಳೂರು ಸುದರ್ಶನBy ಬೇಳೂರು ಸುದರ್ಶನOctober 27, 2010Updated:May 19, 20251 Comment7 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಒಂದು ಕಥೆಯನ್ನು ಹುಡುಕುತ್ತ ಇನ್ನೊಂದು ಅಂತಃಕರಣ ಕಲಕುವ ಇನ್ನೊಂದು ಕಥೆ ಸಿಕ್ಕಿದ ಬ್ಲಾಗ್ ಇದು.

ಇತ್ತೀಚೆಗೆ ಯಾವುದೋ ಪುಸ್ತಕ ವಿನ್ಯಾಸದಲ್ಲಿ ತೊಡಗಿದ್ದಾಗ ಮೆಟಾ ಎಂಬ ಹೆಸರಿನ ಫಾಂಟ್ ಹುಡುಕಲು ಹೋಗಿ ಮೆಟಾಫಾಂಟ್ ಎಂಬ ಸಿದ್ಧಾಂತ ಮತ್ತು ಸಾಫ್ಟ್‌ವೇರನ್ನೇ ಎಡವಿ ಬಿದ್ದೆ! ಮೆಟಾಫಾಂಟ್ ಎಂಬ ಪರಿಕಲ್ಪನೆಯನ್ನು ರೂಪಿಸಿ ಅದಕ್ಕೆ ಶಾಸ್ತ್ರೀಯವಾದ ವಿವರಣೆ, ಸಾಧನಗಳನ್ನು ನೀಡಿದ ಡೊನಾಲ್ಡ್ ಕನೂಥ್ ಎಂಬ ವಿಚಿತ್ರ ವ್ಯಕ್ತಿತ್ವ ನನ್ನನ್ನು ಸೆಳೆಯಿತು. ಈತ ಮಹಾನ್ ವಿಜ್ಞಾನಿಯಾದರೂ, ಅಷ್ಟೇ ಹಾಸ್ಯಪ್ರಜ್ಞೆ ಉಳ್ಳವ. ಇವನ ಮೆಟಾಫಾಂಟ್ ಪುಸ್ತಕಗಳ ಪ್ರತೀ ಪುಟದಲ್ಲೂ ಒಂದೊಂದು ತಮಾಶೆಯ ವಾಕ್ಯವನ್ನು ನೀವು ಹುಡುಕಬಹುದು! ಅವನ ವೆಬ್‌ಸೈಟಿನಲ್ಲೂ ತಮಾಶೆ ಉಕ್ಕಿ ಹರಿದಿದೆ. ಪ್ರಪಂಚದಲ್ಲಿ ಇಂಥವರೂ ಇದ್ದಾರಾ ಎಂದು ಅಚ್ಚರಿಯಾಗುವಂಥ ಸ್ವಭಾವದ ಡೊನಾಲ್ಡ್ ನುಥ್ ನನ್ನ ಕಣ್ಣಿಗೆ ಬಿದ್ದ ಮೇಲೆ ಕೇಳಬೇಕೆ? ಅವರು ಬರೆದ ಪುಸ್ತಕಗಳನ್ನೆಲ್ಲ ಇಂಟರ್‌ನೆಟ್‌ನಿಂದಲೇ ಕದ್ದು ಹಾಳೆ ತಿರುಗಿಸಿದೆ. ಇಂಥ ವ್ಯಕ್ತಿಯ ಬಗ್ಗೆ ಬರೆಯುವುದೇ ಒಂದು ಹೆಮ್ಮೆ ಅನ್ನಿಸಿಬಿಟ್ಟಿತು. ಹಾಗೇ ಹುಡುಕುತ್ತ ಹೋದಾಗ ಡೊನಾಲ್ಡ್ ಕನೂಥ್‌ನ ಸಂಶೋಧನೆಯಿಂದ ತನ್ನ ಜೀವನವನ್ನೇ ಬದಲಿಸಿಕೊಂಡು, ಸಾವನ್ನು ದೂರದೂರಕ್ಕೆ ಅಟ್ಟಿ, ಇನ್ನೂ ನೂರಾರು ಜನರ ಬಾಳಿಗೆ ಬೆಳಕಾದ ರಾಧಾಕೃಷ್ಣನ್ ಕಥೆಯೂ ಸಿಕ್ಕಿತು. ಇಬ್ಬರ ಕಥೆಯೂ ಹೇಗೆ ಪರಸ್ಪರ ಹೆಣೆದುಕೊಂಡಿದೆ ಎಂದು ನೋಡುತ್ತ ಅಚ್ಚರಿಗೆ ಬಿದ್ದೆ. ಬದುಕಿನಲ್ಲಿ ಎಡಬಿಡದೆ ಕೆಲಸ ಮಾಡಿ ಸಾಧಿಸುವುದು ಇಬ್ಬರ ಪ್ರಿಯ ಹವ್ಯಾಸ. ಹಾಗೇ ಬದುಕನ್ನು ತಮಗೆ ಬೇಕಾದ ಹಾಗೆ ಕಟ್ಟಿಕೊಳ್ಳುವುದು ಇಬ್ಬರಿಗೂ ಇಷ್ಟದ ವಿಚಾರ. ಮೊದಲು ಡೊನಾಲ್ಡ್ ಕನೂಥ್ ಕಥೆ. ಆಮೇಲೆ ರಾಧಾಕೃಷ್ಣನ್.

ಡೋನಾಲ್ಡ್ ಕನೂಥ್‌ಗೆ ಬಹುಶಃ ನೋಬೆಲ್ ಪ್ರಶಸ್ತಿಯೊಂದು ಸಿಕ್ಕಿಲ್ಲ. ಸಮಕಾಲೀನ ಶೈಕ್ಷಣಿಕ – ಸಂಶೋಧನಾ ರಂಗದಲ್ಲಿ ಅವನಂಥ ಗಣಿತಜ್ಞ, ಕಂಪ್ಯೂಟರ್ ಪ್ರೋಗ್ರಾಮಿಂಗ್ ನಿಪುಣರು ತುಂಬಾ ಅಪರೂಪ ಎಂಬ ಮಾತಿದೆ. ಕಾಲೇಜು ಹುಡುಗನಾಗಿದ್ದಾಗಲೂ ಗಣಿತವೇ ಕನೂಥ್‌ನ ಉಸಿರು.

೧೯೫೯ರಲ್ಲಿ ತಾನು ಓದುತ್ತಿದ್ದ ಕಾಲೇಜಿನ ಬ್ಯಾಸ್ಕೆಟ್‌ಬಾಲ್ ತಂಡದ ದಕ್ಷತೆಯನ್ನು ಅಳೆಯಲು ಕನೂಥ್ ಆಗಿನ ಕಾಲದಲ್ಲಿ `ನಿಮಿಷಕ್ಕೆ ೫೦ ಸಾವಿರ ಲೆಕ್ಕಾಚಾರಗಳನ್ನು ಮಾಡುತ್ತಿದ್ದ’ ಐ ಬಿ ಎಂ ಕಂಪ್ಯೂಟರನ್ನು ಬಳಸಿದ. ಎಲ್ಲ ಆಟಗಾರರ ಆಟದ ಚಲನವಲನಗಳನ್ನು ಬರೆದುಕೊಂಡು, ಅದನ್ನು ಪಂಚ್ ಮಾಡಿ, ಗಣಕಕ್ಕೆ ತುಂಬಿ ಅದರಿಂದ ನಕಾಶೆಗಳನ್ನು ತೆಗೆದ. ಪ್ರತಿ ಆಟಗಾರನ ದಕ್ಷತೆಯನ್ನು ಪ್ರತ್ಯೇಕವಾದ ಸಮೀಕರಣದಿಂದ ಅಳೆದು ತೂಗಿದ ಡೊನಾಲ್ಡ್ ಕನೂಥ್, ಅದನ್ನೇ ಮುಂದೆ ನಡೆದ ಪಂದ್ಯಾವಳಿಯಲ್ಲಿ ತಂಡದ ಕೋಚ್‌ಗೆ ನೀಡಿದ. ಪರಿಣಾಮ: ಅವನ ಕಾಲೇಜಿನ ತಂಡ ೧೬ ಪಂದ್ಯಗಳನ್ನು ಗೆದ್ದು, ಒಂದೇ ಪಂದ್ಯವನ್ನು ಸೋತಿತ್ತು!

[youtube=http://www.youtube.com/watch?v=dhh8Ao4yweQ&w=368&h=272]

 

೧೯೬೦ರಲ್ಲಿ ಕನೂಥ್ ವಿಜ್ಞಾನದಲ್ಲಿ ಪದವಿ ಮತ್ತಿ ಸ್ನಾತಕೋತ್ತರ ಪದವಿ – ಎರಡನ್ನೂ ಒಟ್ಟಿಗೆ ಪಡೆದ ಜಾಣ. ಹೀಗೆ ಅಂದಿನಿಂದಲೂ ಗಣಿತವನ್ನು ಅರೆದು ಕುಡಿದ ಕನೂಥ್ ಈಗ ನಮ್ಮ ನಡುವೆ ಇರುವ ವಿಶ್ವದ ಅಗ್ರಮಾನ್ಯ ಕಂಪ್ಯೂಟರ್ ಪ್ರೋಗ್ರಾಮರ್.

ಅದಿರಲಿ, ಆತ ಹೈಸ್ಕೂಲಿನಲ್ಲಿದ್ದಾಗ ಒಂದು ಸ್ಪರ್ಧೆಯಲ್ಲಿ ` Ziegler’s Giant Bar ‘ ವಾಕ್ಯದ ಅಕ್ಷರಗಳನ್ನು ಬಳಸಿ ಎಷ್ಟೆಲ್ಲ ಪದಗಳನ್ನು ರಚಿಸಬಹುದೆಂಬ ಸ್ಪರ್ಧೆ ಏರ್ಪಡಿಸಿದ್ದರಂತೆ. ಅದರಲ್ಲಿ ಕನೂಥ್ ೪೫೦೦ಕ್ಕೂ ಹೆಚ್ಚು ಪದಗಳನ್ನು ಹುಡುಕಿ ತೆಗೆದ. ಮಜಾ ಎಂದರೆ ತೀರ್ಪುಗಾರರ ಉತ್ತರದಲ್ಲಿ ಬರೀ ೨೫೦೦ ಪದಗಳಿದ್ದವು! ಬಹುಮಾನವಾಗಿ ಒಂದು ಟೆಲಿವಿಜನ್ ಸೆಟ್ ಮತ್ತು ಕ್ಯಾಂಡಿ ಬಾರ್ ಪಡೆದ ಕನೂಥ್.

ಡೊನಾಲ್ಟ್ ಕನೂಥ್ ಬರೆದ `ದಿ ಆರ್ಟ್ ಆಫ್ ಕಂಪ್ಯೂಟರ್ ಪ್ರೋಗ್ರಾಮಿಂಗ್’ ಎಂಬ ಪುಸ್ತಕ ಸರಣಿಯು ಬಹುಶಃ ಜಗತ್ತಿನಲ್ಲಿ ಈವರೆಗೂ ಕಂಪ್ಯೂಟರ್ ಪ್ರೋಗ್ರಾಮಿಂಗ್ ಪ್ರೇಮಿಗಳು ಆರಾಧಿಸುವ ಪುಸ್ತಕ ಎಂದು ಬಲ್ಲವರು ಹೇಳುತ್ತಾರೆ. ಕಂಪ್ಯೂಟರ್ ಜಗತ್ತಿನ ಅಲ್ಗಾರಿದಮ್‌ಗಳ ಪಿತಾಮಹ ಎಂದೇ ಕನೂಥ್‌ಗೆ ಹೆಸರಿದೆ. ಈಗ ಕನೂಥ್ ಅದೇ ಪುಸ್ತಕದ ಹೆಸರಿನಲ್ಲಿರುವ ವಿಶೇಷ ಗೌರವ ಪ್ರಾಧ್ಯಾಪಕರಾಗಿದ್ದಾರೆ.

ಕನೂಥ್‌ನ ಅಪ್ಪ ಒಬ್ಬ ಮುದ್ರಕನಾಗಿದ್ದ. ಹಾಗಾಗಿ ಪುಸ್ತಕಗಳು, ಫಾಂಟ್ ಬಗ್ಗೆ ಕನೂಥ್‌ಗೆ ಬಾಲ್ಯದಿಂದಲೇ ಪ್ರೀತಿ ಬೆಳೆದಿದ್ದು ಸಹಜವೇ. ಹೀಗೇ ಒಮ್ಮೆ ಕನೂಥ್ ತನ್ನ ಗಣಿತದ ಪ್ರಬಂಧವನ್ನು ಮುದ್ರಿಸುವ ಸಂದರ್ಭದಲ್ಲಿ ಗಣಿತದ ಚಿಹ್ನೆಗಳು ಎರ್ರಾಬಿರ್ರಿಯಾಗಿ ಕಾಣುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ. ಛೆ, ಪುಸ್ತಕ ಇಷ್ಟೆಲ್ಲ ಕೆಟ್ಟದಾಗಿ ಕಾಣಿಸ್ತಾ ಇದೆಯಲ್ಲ ಎಂದು ಬೇಜಾರಾಗಿ ಸುಮ್ಮನೆ ಕೂರುವ ಬದಲು, ಒಳ್ಳೆಯ ಪುಟವಿನ್ಯಾಸ ಮಾಡುವ ಒಂದು ಕಂಪ್ಯೂಟರ್ ಪ್ರೋಗ್ರಾಮನ್ನೇ ಬರೆದ! ಈ ಪ್ರೋಗ್ರಾಮಿಂಗ್‌ನ್ನು ಕನೂಥ್ ರೂಪಿಸಿದ್ದು ೧೯೭೮ರಲ್ಲಿ. ಇವತ್ತಿಗೂ ಅದು ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಈಗ, `ಭೂಮಿಯನ್ನೇ ನಡುಗಿಸುವ ಸುದ್ದಿಯಾಗಿ’ (ಇದೆಲ್ಲ ಕನೂಥ್‌ನ ತಮಾಶೆಯ ಪದಗುಚ್ಛಗಳು ಎಂಬುದನ್ನು ಗಮನಿಸಿ) ಐಟೆಕ್ಸ್ ಎಂಬ ಸುಧಾರಿತ, ಸಮಕಾಲೀನ ಪ್ರೋಗ್ರಾಮಿಂಗ್‌ನ್ನು ರೂಪಿಸುತ್ತಿರುವುದಾಗಿ ಕನೂಥ್ ಪ್ರಕಟಿಸಿದ್ದಾನೆ.

ಈ ಟೆಕ್ಸ್ ಮಾಡೋದಾದ್ರೂ ಏನು?

ಕಂಪ್ಯೂರಿನಲ್ಲಿ ಮಾರ್ಕಪ್ ಭಾಷೆ ಎಂದು ಕರೆಯುವ ವರ್ಗಕ್ಕೆ ಟೆಕ್ಸ್ ಕೂಡಾ ಸೇರುತ್ತದೆ. ಇಲ್ಲಿ ನೀವು ನಿಮ್ಮ ಗಣಿತದ ಅಥವಾ ಯಾವುದೇ ವೈಜ್ಞಾನಿಕ ಪ್ರಬಂಧದ ಪುಸ್ತಕವು ಯಾವ ರೀತಿ ಕಾಣಿಸಬೇಕು (ಫಾಂಟ್ ಶೈಲಿ, ಪ್ಯಾರಾಗ್ರಾಫ್ ಶೈಲಿ, ಮಾರ್ಜಿನ್‌ಗಳು, ಸಂಕೇತಗಳು, ಪುಟ ಸಂಖ್ಯೆ, ಕಾಲಂಗಳು, ಬುಲೆಟ್ ಪಾಯಿಂಟ್‌ಗಳು ಹೀಗೆ ಪುಸ್ತಕ ವಿನ್ಯಾಸದ ಎಲ್ಲ ರೂಪುರೇಷೆಗಳು) ಎಂದು ಆದೇಶಗಳನ್ನು ಊಡಿಸಿದರೆ ಸಾಕು; ಇಡೀ ಪುಸ್ತಕವು ನಿಮ್ಮ ಕನಸಿಗೆ ತಕ್ಕಂತೆ ರೂಪುಗೊಳ್ಳುತ್ತದೆ.

ಈ ತಂತ್ರಜ್ಞಾನವನ್ನು ಬಳಸಿ ವರ್ಷಕ್ಕೆ ಎರಡು ಲಕ್ಷ ಪುಟಗಳನ್ನು ವಿನ್ಯಾಸಗೊಳಿಸುವ ರಾಧಾಕೃಷ್ಣನ್‌ರ ಕಥೆಯನ್ನು ನೀವು ಈ ಲಿಂಕಿನಲ್ಲಿ ಓದಬಹುದು.

ಟೆಕ್ಸ್‌ನ ಸಂಗಾತಿ ಮೆಟಾಫಾಂಟ್

ಟೆಕ್ಸ್ ಜೊತೆಗೇ ಕನೂಥ್ ರೂಪಿಸಿದ ಇನ್ನೊಂದು ತಂತ್ರಜ್ಞಾನ ಎಂದರೆ ಫಾಂಟ್ ತಯಾರಿಸುವ ಗಣಕ ತಂತ್ರಾಂಶ ಮೆಟಾಫಾಂಟ್. ಇದನ್ನು ಬಳಸಿ ನೀವು ಎಂಥ ಬಗೆಯ ಫಾಂಟನ್ನಾದರೂ ರೂಪಿಸಬಹುದು. ಜ್ಯಾಮಿತಿಯ ಸೂತ್ರಗಳನ್ನು ಸೂಕ್ತವಾಗಿ ಈ ತಂತ್ರಾಂಶಕ್ಕೆ ಉಣಿಸಿದರೆ, ನಿಮಗೆ ಬೇಕಾದ ವಿನ್ಯಾಸದ ಫಾಂಟ್ ತಯಾರಾಗುತ್ತದೆ. ಬಿಟ್‌ಮ್ಯಾಪ್ ರೂಪದಲ್ಲಿ ತಯಾರಾದ ಇದನ್ನು ಪೋಸ್ಟ್‌ಸ್ಕ್ರಿಪ್ಟ್‌ನಲ್ಲೂ ಅಡಕ ಮಾಡಬಹುದು.

ಒಂದು ಫಾಂಟ್‌ನ್ನು ೬೦ ಮಾನದಂಡಗಳ ಬಳಕೆಯ ಮೂಲಕ ಹೇಗೆ ಬರೆಯಬಹುದು ಎಂಬ ಗಣಿತದ ತಿಳಿವಳಿಕೆಯನ್ನು ಕಲಾವಿದನೊಬ್ಬ ಹೊಂದಬೇಕೆಂದು ಬಯಸುವುದು ತೀರಾ ಅತಿಯಾದ ನಿರೀಕ್ಷೆ’ ಎಂದು ಕನೂಥ್ ಒಂದೆಡೆ ಹೇಳಿಕೊಂಡಿದ್ದಾರೆ. ಆದರೆ ಹೆರ್ಮನ್ ಝಾಫ್ (ಝಾಫ್ ಡಿಂಗ್‌ಬ್ಯಾಟ್‌ಗಳನ್ನು ಯಾರು ಕೇಳಿಲ್ಲ?) ಮತ್ತು ಕನೂಥ್ ಜೊತೆ ಸೇರಿ ಹಲವು ಫಾಂಟ್‌ಗಳನ್ನು ಮೆಟಾಫಾಂಟ್ ಬಳಸಿಯೇ ತಯಾರಿಸಿದ್ದಾರೆ.

ಈ ಪುಸ್ತಕದಲ್ಲಿ ಕನೂಥ್ ನೀಡಿರುವ ಒಂದು ಎಚ್ಚರಿಕೆ ಹೀಗಿದೆ:

ಡೊನಾಲ್ಡ್ ಕನೂಥ್ ೧೯೯೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಹೇಳಿರುವ ಅಂಶಗಳು ಸ್ವಾರಸ್ಯವಾಗಿವೆ:

  • When can we buy volume four of The Art of Computer Programming?

I’m going to be putting it out 128 pages at a time, about twice a year over the next eight years. I’m estimating it now at a little more than 2000 pages. There will be volume 4-a, volume 4-b, and volume 4-c. Volume 4 in general is combinatorial algorithms. Volume 4-a is about finding all possibilities: There’s a lot to be said about generating   them in good ways—problems where finding all reasonable solutions is not a trivial task. 4-b is going to be about graph and network algorithms, and 4-c is about combinatorial optimization. So 4-a is ‘find all arrangements,’ 4-b is ‘find arrangements that have to do with graphs and networks,’ and 4-c is ‘find the best arrangement.’ Into those 2000 pages, I have to compress about 200,000 pages of literature. I’ve been working on it a long time.

I had started volume 4 (The Art of Computer Programming)and then realized I had to work on typography. There was a revolution in the printing industry. The printing industry became computer science. It changed from metallurgy to bits, to 0s and 1s. There was no way to print my books with the quality they had before. I was going to take a year and give a computer scientist’s answer to how to print books, and that took ten years.

  • If you could climb in the pulpit and scold, exhort, and encourage every working programmer in the United States, what would you tell them?
  • Secondly, ideas that are mathematical in nature should be  the property of the world and not of the individual who thinks of the theorem. I’d prefer that all but the most sophisticated algorithms be made public and that everybody use them, and not that every time you use such-and-such a method you should pay a nano-penny to some fund.

    The first thing I would say is that when you write a program, think of it primarily as a work of literature. You’re trying to write something that human beings are going to read. Don’t think of it primarily as something a computer is going to follow. The more effective you are at making your program readable, the more effective it’s going to be: You’ll understand it today, you’ll understand it next week, and your successors who are going to maintain and modify it will understand it.

     (ಸಂಪೂರ್ಣ ಸಂದರ್ಶನವನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ)

    ಡೊನಾಲ್ಡ್ ಕನೂಥ್ ಮಹಾ ಹಾಸ್ಯಚತುರ. ಮೊನಚು ಮಾತುಗಳಿಗೆ ಸುಪ್ರಸಿದ್ಧ. ಮಾತನಾಡುವಾಗ ಗಂಭೀರವಾಗಿದ್ದರೂ, ಮಾತಿನಲ್ಲಿ ಮಾತ್ರ ಹರಿತ ವ್ಯಂಗ್ಯವೋ, ತಮಾಶೆಯೋ ಇದ್ದೇ ಇರುತ್ತದೆ. ಈತ ಕಂಡುಹಿಡಿದ ಒಂದು ಹಣದ ಮಒತ್ತವೆಂದರೆ ಹೆಕ್ಸಾಡೆಸಿಮಲ್ ಡಾಲರ್ ಅರ್ಥಾತ್ ೨.೫೬ ಡಾಲರ್. ತನ್ನ ಪುಸ್ತಕಗಳಲ್ಲಿ ಇರುವ ತಪ್ಪುಗಳನ್ನು ಹುಡುಕಿಕೊಟ್ಟವರಿಗೆ ಒಂದು ತಪ್ಪಿಗೆ ೨.೫೬ ಡಾಲರ್ ಮೊತ್ತದ ಒಂದು ಹೆಕ್ಸಾಡೆಸಿಮಲ್ ಡಾಲರ್ ಚೆಕ್ಕನ್ನು ಕನೂಥ್ ತಪ್ಪಿಲ್ಲದೆ ಅಂಚೆಗೆ ಹಾಕುತ್ತಾನೆ. ಹೀಗೆ ಅವನಿಂದ ೧೦.೨೪ ಡಾಲರ್ ಚೆಕ್ ಪಡೆದ ಭಾರತೀಯನ ಚೆಕ್ ಒಂದು ಇಲ್ಲಿದೆ:

    ಕನೂಥ್‌ನ ಟೆಕ್ಸ್ ತಂತ್ರಾಂಶದ ವರ್ಶನ್‌ಗಳ ಸಂಖ್ಯೆ ವಿಭಿನ್ನ. ಇದು ೩ರಿಂದ ಆರಂಭವಾಗಿ `ಪೈ’ ()ನ ದಶಮಾಂಶ ಸ್ಥಾನಗಳಂತೆಯೇ ಬೆಳೆಯುತ್ತದೆ. ತನ್ನ ತಂತ್ರಾಂಶದ ವರ್ಶನ್‌ಗಳಿಗೆ ಕೊನೆಯೇ ಇಲ್ಲ ಎಂಬುದು ಕನೂಥ್‌ನ ರಹಸ್ಯ ಸಂದೇಶ ಇರಬಹುದೇನೋ!

    ` Beware of bugs in the above code; I have only proved it correct, not tried it ‘ (ನನ್ನ  ತಂತ್ರಾಂಶಗಳಲ್ಲಿ ಲೋಪಗಳಿರಬಹುದು ಎಚ್ಚರ! ನಾನು ಇವನ್ನೆಲ್ಲ ಸರಿ ಅಂತ ಸಿದ್ಧಮಾಡಿ ತೋರಿಸಿದ್ದೇನೆಯೇ ಹೊರತು ಅವುಗಳನ್ನು ಬಳಸಿಲ್ಲ) ಎಂಬ ಸುಪ್ರಸಿದ್ಧ ವಾಕ್ಯವು ಕನೂಥ್‌ನ ಬಾಯಿಯಿಂದಲೇ ಬಂದಿದ್ದು.

    ಸಂಗೀತದಲ್ಲೂ ಪಳಗಿರುವ ಕನೂಥ್ ಮನೆಯಲ್ಲಿ ಒಂದು ಪೈಪ್ ಆರ್ಗನ್ ಸ್ಥಾಪಿಸಿಕೊಂಡಿದ್ದಾನೆ. ಅವನ ಗಣಿತದ ನಿಪುಣತೆಯೂ ಇದಕ್ಕೆ ಸಹಾಯ ಮಾಡಿರಬಹುದು. ಇದರಲ್ಲಿ ಒಟ್ಟು ೮೧೨ ಧ್ವನಿ ಹೊರಡಿಸುವ ಕೊಳವೆಗಳಿವೆ. 

    ೧೯೭೫ರಿಂದಲೇ ಈ ಮೈಲ್ ಬಳಸುತ್ತಿದ್ದ ಕನೂಥ್ ೧೯೯೦ರ ಜನವರಿ ೧ರಿಂದ ಈಮೈಲ್ ಬಳಕೆಯನ್ನು ನಿಲ್ಲಿಸಿದ್ದಾನೆ. ೧೫ ವರ್ಷ ಈ ಮೈಲ್ ಬಳಸುವುದೆಂದರೆ ಬದುಕಿಗೆ ಬೇಕಾದಷ್ಟಾಯಿತು ಎನ್ನುವುದು ಕನೂಥ್‌ನ ವಾದ. ಜೀವನದಲ್ಲಿ ಯಾವಾಗಲೂ ಮೇಲೇ ಇರಬೇಕೆನ್ನುವವರಿಗೆ ಈ ಮೈಲ್ ಬೇಕು. ಆದರೆ ನಾನು ಯಾವಾಗಲೂ ತಳದಲ್ಲೇ ಪಾತ್ರ ನಿರ್ವಹಿಸಬಯಸುವ ವ್ಯಕ್ತಿ ಎಂದು ಕನೂಥ್ ಹೇಳುತ್ತಾರೆ. ಅವರ ಮಾತುಗಳಲ್ಲೇ  ಹೇಳುವುದಾದರೆ…

    ನನಗೆ ಬೇಕಾದದ್ದು ಅಧ್ಯಯನಕ್ಕೆ ಸೂಕ್ತವಾದ ಸುದೀರ್ಘ ಸಮಯಾವಕಾಶ; ಅಲ್ಲಿ ನನ್ನ ಗಮನವನ್ನು ಅತ್ತಿತ್ತ ಸೆಳೆಯುವ ಯಾವುದೇ ಅಡ್ಡಿಯೂ ಇರಕೂಡದು. ನಾನು ಗಣಕ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಅತಿ ಆಳವಾಗಿ ಅಭ್ಯಾಸ ಮಾಡುತ್ತೇನೆ. ಹೀಗೆ ಅಭ್ಯಾಸ ಮಾಡದವರಿಗೆ ಅರ್ಥವಾಗುವ ಹಾಗೆ ತಿಳಿವಳಿಕೆಯನ್ನು ಹೊಂದಲು ನಾನು ಬಯಸುತ್ತೇನೆ. ಆದರೆ ಹಲವು ಪುಸ್ತಕಗಳನ್ನು ಬರೆಯುವ ನನಗೆ ಸಾವಿರಾರು ಜನರ ಜೊತೆಗೆ ಸಂಪರ್ಕ ಸಾಧಿಸುವ ಅಗತ್ಯವಿದೆ. ಜನರ ಪ್ರಶ್ನೆಗಳಿಗೂ ನಾನು ಉತ್ತರಿಸಬೇಕಿದೆ. ಆದ್ದರಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಒಂದು ದಿನವಿಡೀ ಈ ಪ್ರತಿಕ್ರಿಯೆ ನೀಡುವುದಕ್ಕೇ ಸಮಯ ಮೀಸಲಿಟ್ಟಿದ್ದೇನೆ.  ನಿಮಗೇನಾದರೂ ಹೇಳಬೇಕೆಂದಿದ್ದರೆ ದಯಮಾಡಿ ಈ ಕೆಳಗಿನ ವಿಳಾಸಕ್ಕೆ ಕಾಗದದ ಪತ್ರ ಹಾಕಿ: (ಪ್ರೊ. ಡೊನಾಲ್ಡ್ ಕನೂಥ್, ಕಂಪ್ಯೂಟರ್ ಸೈನ್ಸ್ ಡಿಪಾರ್ಟ್‌ಮೆಂಟ್, ಗೇಟ್ಸ್ ಬಿಲ್ಟಿಂಗ್ ೪ಬಿ, ಸ್ಟಾನ್‌ಫರ್ಡ್ ಯೂನಿವರ್ಸಿಟಿ, ಸ್ಟಾನ್‌ಫರ್ಡ್, ಅಮೆರಿಕಾ).

    ನನಗೆ ಬಂದ ಪತ್ರಗಳನ್ನು ನನ್ನ ಅದ್ಭುತ ಕಾರ್ಯದರ್ಶಿಯು ಜೋಡಿಸಿಡುತ್ತಾಳೆ. ನಾನು ಅವುಗಳನ್ನು ನಿಯಮಿತವಾಗಿ ನೋಡುತ್ತೇನೆ. ಹಾಗೇ ನನ್ನ ಈ ಮೈಲ್‌ಗೂ ನೀವು ಪತ್ರ ಕಳಿಸಬಹುದು. ಅಕಸ್ಮಾತ್ ನೀವೇನಾದ್ರೂ ಫ್ಯಾಕ್ಸ್ ಕಳಿಸಿದರೆ ಅದನ್ನು ನಾನು ಮೂರು ತಿಂಗಳಲ್ಲ, ಆರು ತಿಂಗಳಿಗೆ ಒಮ್ಮೆ ನೋಡ್ತೇನೆ ಅಷ್ಟೆ!

    `ನಾನು ಈ ಮೈಲ್ ವಿಳಾಸವನ್ನೂ ಇಟ್ಟುಕೊಂಡಿಲ್ಲ. ನನ್ನ ಪರಮ ಉದ್ದೇಶವು ಸಂದೇಶಗಳನ್ನು ಸ್ವೀಕರಿಸುವ ಕಾಲ ಇದಲ್ಲ; ಈ ಕಾಲವನ್ನು ನನ್ನ ವಯಸ್ಸು ಮೀರಿದೆ’ ಎಂದು ಉಂಬರ್ಟೋ ಇಕೋ ಹೇಳಿದ್ದು ಕೇಳಿಲ್ಲವೆ?

    ನೋಡಿ, ನನ್ನ ಪುಸ್ತಕ `ದಿ ಆರ್ಟ್ ಆಫ್ ಕಂಪ್ಯೂಟರ್ ಪ್ರೋಗ್ರಾಮಿಂಗ್ ಇದೆಯಲ್ಲ, ಅದನ್ನು ೧೯೬೨ರಿಂದ ಬರೆಯೋದಕ್ಕೆ ಶುರು ಮಾಡಿದ್ದೇನೆ. ಅದನ್ನು ಮುಗಿಸೋದಕ್ಕೆ ನನಗೆ ಇನ್ನೂ ಹಲವು ವರ್ಷಗಳು ಬೇಕು. ಅದಕ್ಕಾಗಿ ಕೆಲವರಿಗೆ ಅನಿವಾರ್ಯವಾಗಿ ಈ ಮೈಲ್ ಹಾಕುತ್ತೇನೆ.

    ಹೀಗೆ ಈ ಮೈಲ್ ಬಳಕೆಯ ಕುರಿತು ಬರೆಯೋದ್ರಲ್ಲೇ ತನ್ನ ಜೀವನದೃಷ್ಟಿಯನ್ನೂ  ದಾಖಲಿಸಿದ ಕನೂಥ್ ಟ್ಯೂರಿಂಗ್ ಪ್ರಶಸ್ತಿ, ನ್ಯಾಶನಲ್ ಮೆಡಲ್ ಫಾರ್ ಸೈನ್ಸ್, ಜಾನ್ ವಾನ್ ನ್ಯೂಮನ್ ಮೆಡಲ್, ಕ್ಯೋಟೊ ಪ್ರೈಜ್, ಮತ್ತು ಇತ್ತೀಚೆಗಷ್ಟೆ (೨೦೧೦) ಪ್ರತಿಷ್ಠಿತ ಕತಯಾನಗಿ ಬಹುಮಾನವನ್ನು ಪಡೆದಿದ್ದಾರೆ. ೨೦೦೬ರಲ್ಲಿ ಅವರಿಗೆ ಕ್ಯಾನ್ಸರ್ ಇದೆ ಎಂಬುದು ಗೊತ್ತಾಗಿದೆ. ಅದನ್ನೂ ಕ್ರೀಡಾಮನೋಭಾವದಿಂದಲೇ ಸ್ವೀಕರಿಸಿದ್ದಾರೆ ಕನೂಥ್.

    ತನ್ನ ವೆಬ್‌ಸೈಟಿನಲ್ಲಿ ಅತ್ಯಂತ ಮುಕ್ತವಾಗಿ ತನ್ನೆಲ್ಲ ವಿಚಾರಗಳನ್ನೂ ತೆರೆದಿಟ್ಟಿರುವ ಕನೂಥ್ ನಮ್ಮ ನಡುವೆ ಇರುವ ಒಬ್ಬ ಹೃದಯವಂತ ಗಣಿತಜ್ಞ.

    • ಡೊನಾಲ್ಡ್ ಕನೂಥ್‌ರವರ ವೆಬ್‌ಸೈಟ್ ಇಲ್ಲಿದೆ.
    • ಡೊನಾಲ್ಡ್ ಕನೂಥ್ ರೂಪಿಸಿದ ‘ಟೆಕ್ಸ್’ ನ ಬಳಕೆದಾರರ ವೆಬ್‌ಸೈಟ್ ಇಲ್ಲಿದೆ.
    beluru sudarshana donald knuth mitramaadhyama tex
    Share. Facebook Twitter Pinterest LinkedIn Tumblr Email
    Previous Articleಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
    Next Article ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
    ಬೇಳೂರು ಸುದರ್ಶನ
    • Website

    Related Posts

    ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

    July 18, 2024

    ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

    July 18, 2024

    ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

    May 27, 2024

    1 Comment

    1. Pingback: ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ « ಬೇಳೂರು ಸುದರ್ಶನ

    ಲೇಖನಗಳು
    • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
    • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
    • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
    • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
    • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
    • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
    • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
    • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
    • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
    • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
    • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
    • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
    • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
    • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
    • ಅನಂತಕುಮಾರ್‌: ಒಂದು ಖಾಸಗಿ ನಮನ
    • Sardar Patel Memorial Speech by Beluru Sudarshana
    • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
    • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
    • Solar water pumps can help India surpass 100 GW target through Kisan Urja Suraksha Utthaan Maha Abhiyan
    • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
    • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
    • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
    • Attention NGOs: Transparency and probity begins from you!
    • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
    • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
    • Digital life : let us make it sustainable; minimise carbon footprints
    • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
    • Requiem for the desktop PC? Not yet!
    • The heaven created by trinity of Hindustani music turns 50!
    • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
    • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
    • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
    • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
    • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
    • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
    • The Lefts I respect in my life
    • ನವ ಲಿಬರಲ್‌ಗಳ ನಕಲಿ ಬದುಕು!
    • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
    • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
    • Are we above Supreme Court?
    • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
    • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
    • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
    • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
    • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
    • My Bansuri Guru, friend, guide and philosopher
    • Kick-starting the linguistic revolution
    • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
    • ಒಡೆದ ಗುಟ್ಟಿನ ಗೂಡು…..
    • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
    • ಬನ್ನಿ, ಬದುಕೋಣ!
    • ಬರಲಿವೆ ಕೀಟಖಾದ್ಯ!
    • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
    • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
    • Prashant Kishor : Disruptive, Harmful
    • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
    • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
    • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
    • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
    • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
    • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
    • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
    • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
    • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
    • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
    • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
    • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
    • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
    • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
    • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
    • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
    • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
    • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
    • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
    • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
    • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
    • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
    • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
    • 1987ರ ಲೇಖನ: ಚಿರಂತನ ಶಕ್ತಿ
    • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
    • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
    • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
    • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
    • IT revolution and Regional Newspapers: Let’s harness it!
    • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
    • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
    • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
    • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
    • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
    • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
    • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
    • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
    • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
    • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
    • Book Review: THE THIRD CURVE – The End of Growth as we know it: A Must Read for Energy Policy Makers
    • Dave’s Phone Blok – Invention takes digital world by storm
    • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
    • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
    • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
    • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
    • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
    • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
    • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
    • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
    • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
    • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
    • ರಂಗನಾಥಜ್ಜ ಮೈಸೂರಿಗೆ ಹೊರಟರು
    • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
    • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
    • ‘ಇಜ್ಞಾನ’ ಸಂಚಿಕೆ ಓದಿ
    • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
    • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
    • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
    • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
    • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
    • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
    • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
    • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
    • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
    • ಸಹಕಾರ ಚಳವಳಿ : ಒಂದು `ಹೊರ’ನೋಟ
    • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
    • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
    • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
    • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
    • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
    • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
    • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
    • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
    • Devinder Sharma: Gutter Science: Inter-Academy Report On GM Crops
    • Devinder Sharma: Punjab middlemen get Rs 7,830 million a year for practically doing nothing
    • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
    • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
    • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
    • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
    • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
    • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
    • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
    • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
    • ವೇದಾಂತ : ಅಗೆದಷ್ಟೂ ಅವಾಂತರ
    • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
    • ತುಂಟ ಸಿದ್ಧಾರ್ಥನ ಕಲಾಕೃತಿಗಳು
    • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
    • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
    • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
    • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
    • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
    • Shankar Sharma: Why Gundia Hydro Electric Project Is Not Needed
    • Impact of Electric Power Sector on Western Ghats : Issues and remedies
    • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
    • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
    • Media Fest Presentation by Beluru Sudarshana
    • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
    • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
    • ದೇವಿಂದರ್ ಶರ್ಮ : Call for a moratorium on GM Foods
    • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
    • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
    • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
    • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
    • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
    • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
    • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
    • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
    • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
    • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
    • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
    • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
    • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
    • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
    • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
    • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
    • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
    • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
    • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
    • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
    • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
    • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
    • Three Cups of Tea : ಮನ ತಟ್ಟುವ ಸೇವಾ ಕಥನ
    • Please visit www.mitramaadhyama.co.in
    • Shilpashree Investigative Report Award 2010
    • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
    • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
    • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
    • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
    • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
    • ಪಾಕಿಸ್ತಾನಿ ಗಝಲ್‌ಗಳ ಖಜಾನೆ
    • ನನ್ನ ಮೇಡಂ ಜಯಲಕ್ಷ್ಮಿ
    • ಹನುಮನಹಳ್ಳಿಯ ಸುಗಂಧ
    • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
    • ನನ್ನ ಪ್ರೀತಿಯ ದತ್ತಾಜಿ
    • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
    • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
    • ರಂಗನಾಥರ ಬಹುಮುಖೀ ಬದುಕು
    • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
    • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
    • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
    • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
    • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
    • ಸಾಜ್ ಮತ್ತು ಏಕ್ ನಯಾ ಸಾಜ್
    • Victory for hawkers, DNA bends its unique policy
    • DNA publishes a story against BENGALURU name
    • DNA says CM Yeddyurappa is a smoker and drinker
    • Double subscription: DNA executives go on record
    • DNA Bangalore Complaints – Subscribed news paper not delivered
    • Media support for fight against DNA
    • DNA executives cheat hawkers, try selling papers!!
    • An appeal from poor paper hawkers to the readers of DNA
    • DNA: Delayed , No Analysis?
    • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
    • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
    • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
    • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
    • DNA Bangalore : Double subscription attempts, no paper yet!!
    • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
    • China: Latest Military Report
    • My new service: Downloadable files and softwares
    • My new service: Downloadable files and softwares
    • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
    • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
    • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
    • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
    • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
    • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
    • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
    • Develop Technology, Kill language, Government Style
    • Energy alternative from America
    • Privacy of Britons in America’s hand
    • The pain & Agony of Tibet
    • Kannada DiMdiMa
    • A request to mainstream papers
    • Raag Madhuvanti
    • Artist B. Devaraj: Bangalore’s heart spot
    • Mayaloka 1: Instant view
    • How to get unconditional apology letters from prestigious Banks
    • Vikranta Karnataka, a curtain raiser
    • Sopan, a STEP in right direction
    • World Bank comment on India
    • Cosmetics for life: Venkatesh from Botswana
    • Narayana Hegde Arasikeri, 83 still young
    • Hampi University’s new ventures
    • America’s draconian Space Policy
    • Chapter 1: Under the rainbow
    • Women who changed lives
    • Chandrashekhar Kambara: an interview
    • Twin cities of Bay of Cambay
    • Sex: Common habba of internet
    • Gimbel’s Hampi
    • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
    • Our Justin is very fast
    • Bisilu Kolu: A review
    • Why Sahitya Sammelana?
    • Early stories of Raghavendra Patil : A review
    • Battalike: A review
    • Anubhavave nudichitra
    • ಸಾಮರಸ್ಯದ ನೇಕಾರ : ಸಂತ ಕಬೀರ
    • ಕಲಿವ ತವಕ
    • Basics of Brindavani Saarang
    • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
    • Free Software movement
    • Kannada SaapthahikagaLu: A speech text
    • Pluto OK, Bose illa yaake?
    • Booker and some sweat
    ಹುಡುಕಿ!
    ವಿಭಾಗಗಳು
    • Uncategorized (2)
    • ಉಚಿತ ಪುಸ್ತಕ ಸಂಸ್ಕೃತಿ (6)
    • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
    • ಕಲಿ ಯುಗ (62)
    • ಕವನಗಳು (131)
    • ನನ್ನ ಮಾಧ್ಯಮಯಾನ (3)
    • ಫ್ಲಿಪ್ ಪುಸ್ತಕಗಳು (1)
    • ಮಕ್ಕಳ ಪ್ರಬಂಧಗಳು (7)
    • ಮಾಹಿತಿ / ಲೇಖನ (22)
    • ಲೇಖನಗಳು (262)
    • ವಿಮರ್ಶೆ (49)
    • ಶಂಕರ್ ಶರ್ಮ (22)
    • ಸಣ್ಣ ಕಥೆಗಳು (20)
    • ಸುದ್ದಿ (152)
    • ಹಿಮದೊಡಲ ತಳಮಳ (1)
    • ಹುಲ್ಲಿನ ಸಾರು (1)
    Archives
    © 2025 ಬೇಳೂರುಸುದರ್ಶನ.

    Type above and press Enter to search. Press Esc to cancel.