Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
ಲೇಖನಗಳು

ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ

ಬೇಳೂರು ಸುದರ್ಶನBy ಬೇಳೂರು ಸುದರ್ಶನOctober 19, 2010Updated:May 19, 2025No Comments10 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

೧೯೮೭ರಲ್ಲಿ ನಾನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆಗ ಅಲ್ಲಿಗೆ ಬಂದವರು ಧರಂಪಾಲ್. ಸದಾ ಯಾವುದೋ ಗಂಭೀರ ಚಿಂತನೆಯಲ್ಲಿದ್ದ ಮುಖ. ಕೊಂಚ ದಪ್ಪ ಶರೀರ. ಮೃದು ಶಾರೀರ. ಬಿಳಿ ಉಡುಗೆ. ಅಪ್ಪಟ ಸರಳ ದಿನಚರಿಯ ವ್ಯಕ್ತಿತ್ವ. ಅವರು ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಿ ಬಂದವರು ಎಂದು ಕೇಳಿದ್ದೆ. ಅವರ ಅತಿಥಿ ಸತ್ಕಾರದ ಹೊಣೆಯನ್ನು ನನಗೆ ವಹಿಸಿದ್ದರು. ಸಂಶೋಧನಾ ವೇದಿಯ ಯಾವುದೋ ಪುಸ್ತಕವನ್ನು ಅವರು ಗಂಭೀರವಾಗಿ ಓದುತ್ತಿದ್ದರು. ಅವರ ಕೋಣೆಗೆ ಹೋದರೆ ಮೇಜಿನ ಮೇಲೆ ಬರೀ ಕೋಷ್ಟಕಗಳೇ ಕಾಣುತ್ತಿದ್ದವು. ಯಾವುದೋ ಶತಮಾನದ ದಾಖಲೆಗಳನ್ನು ಅವರು ತಾಳೆ ಹಾಕಿ ನೋಡುತ್ತಿದ್ದರು. ಬಿಟ್ಟರೆ ಅವರಿಗೆ ಬೇರೇನೂ ಬದುಕೇ ಇರಲಿಲ್ಲ ಅನ್ನಿಸಿತ್ತು. ನನ್ನ ಒತ್ತಾಯಕ್ಕೆ ಕಟ್ಟುಬಿದ್ದು ಅವರು ನನ್ನೊಂದಿಗೆ ಒಂದು ಫೋಟೋಗೆ ಜೊತೆಗೆ ನಿಂತಿದ್ದರು (ಅವರಿಗೆ ನೋಬೆಲ್ ಪ್ರಶಸ್ತಿ ಬಂದರೆ ಈ ಫೋಟೋಗೆ ವ್ಯಾಲ್ಯೂ ಇರುತ್ತೆ ಎಂಬ ದೂರಾಲೋಚನೆ ನನ್ನದಾಗಿತ್ತು). ಫೋಟೋ ಕ್ಲಿಕ್ ಆದಕೂಡಲೇ ಮರುಮಾತಾಡದೆ ಹೊರಟಿದ್ದರು. ಅಂಥ ಪರಮ ಲೌಕಿಕ ವಿಷಯಗಳಲ್ಲಿ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ.

೨೦೦೬ರಲ್ಲಿ, ತಮ್ಮ ೮೪ರ ವಯಸ್ಸಿನಲ್ಲಿ ವಾರ್ಧಾದ ಸೇವಾಗ್ರಾಮದಲ್ಲಿ ಕೊನೆಯುಸಿರೆಳೆದ ಧರಂಪಾಲ್ ಇಪ್ಪತ್ತನೇ ಶತಮಾನದ ಮಹಾನ್ ಸಂಶೋಧಕರಲ್ಲಿ ಒಬ್ಬರು ಎಂದೇ ನನಗನ್ನಿಸಿದೆ. ಅವರ ಜೊತೆಗಿದ್ದಾಗ ನಾನಿನ್ನೂ ೨೨ರ ವಯಸ್ಸಿನವನು; ಸಂಶೋಧನೆ ಎಂದರೇನು, ಸಂಶೋಧಕರ ಸಾಧನಗಳೇನು ಎಂಬ ಯಾವ ವಿಚಾರವೂ ಗೊತ್ತಿರಲಿಲ್ಲ. ಈಗ ನೋಡಿದರೆ, ಧರಂಪಾಲ್ ಸಂವಹನ ಕ್ರಾಂತಿಯ ಮುನ್ನಾ ದಿನಗಳಲ್ಲಿ ಎಷ್ಟೆಲ್ಲ ಶ್ರಮ ಹಾಕಿ ಸಂಶೋಧನೆ ಮಾಡಿದರು; ಭಾರತವು ನಿಜಕ್ಕೂ ಹಲವು ಜ್ಞಾನವಾಹಿನಿಗಳಲ್ಲಿ ಮಹತ್ತರ ಸಾಧನೆ ಮಾಡಿತ್ತು; ಈ ಜ್ಞಾನದ ನಾಯಕತ್ವವು ಹೇಗೆ ತೀರ ಇತ್ತೀಚಿನವರೆಗೂ, ಅಂದರೆ ೧೮ನೇ ಶತಮಾನದವರೆಗೂ ಅವಿಚ್ಛಿನ್ನವಾಗಿ ಮುಂದುವರಿದಿತ್ತು ಎಂಬುದನ್ನು ಧರಂಪಾಲ್ ಬ್ರಿಟಿಶರು ಸಂಗ್ರಹಿಸಿಟ್ಟಿದ್ದ ದಾಖಲೆಗಳಿಂದಲೇ ನಿರೂಪಿಸಿದರು. ಅವರ ಮಾಹಿತಿಗಳನ್ನು ಈವರೆಗೂ ಯಾರೂ ಅಲ್ಲಗಳೆದಿಲ್ಲ.

೧೯೨೨ರಲ್ಲಿ ಉತ್ತರ ಪ್ರದೇಶದ ಖಂಡಾಲಾದಲ್ಲಿ ಹುಟ್ಟಿದ ಧರಂಪಾಲ್ ತನ್ನ ತಂದೆಯ ಜೊತೆಗೆ ೧೯೨೯ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದವರು. ೧೯೪೦ರಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಧರಂಪಾಲ್ ಬಿಎಸ್‌ಸಿ ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಅವರು ಸ್ವಾತಂತ್ರ್ಯ ಬಂದ ನಂತರ ಪಶ್ಚಿಮ ಪಾಕಿಸ್ತಾನದಲ್ಲಿ ನಿರಾಶ್ರಿತರ ಪುನರ್ವಸತಿ ಕಾರ್ಯದಲ್ಲಿ ಭಾಗಿಯಾದರು. ಕಮಲಾದೇವಿ ಚಟ್ಟೋಪಾಧ್ಯಾಯ, ರಾಮ್ ಮನೋಹರ್ ಲೋಹಿಯಾ , ಎಲ್ ಸಿ ಜೈನ್ ಮುಂತಾದವರ ಸಂಪರ್ಕ ಸಾಧಿಸಿದ ಅವರು ಇಸ್ರೇಲಿನ ಗ್ರಾಮೀಣ ಮತ್ತು ಸಮುದಾಯ ಪುನರ್ನಿರ್ಮಾಣದ ಯೋಜನೆಗಳನ್ನು ಅಭ್ಯಸಿಸಲು ಹೋದರು. ಅಲ್ಲಿಂತ ನೇರವಾಗಿ ಬರಲಾಗದೆ ಇಂಗ್ಲೆಂಡ್‌ಗೆ ಬಂದ ಧರಂಪಾಲ್‌ಗೆ ಫಿಲಿಸ್ ಎಂಬಾಕೆಯ ಪರಿಚಯವಾಗಿ ಅವರನ್ನು ಮದುವೆಯಾದರು. ೧೯೫೦ರಲ್ಲಿ ಮೀರಾಬೆನ್ ಜೊತೆಗೂಡಿ ಬಾಪುಗ್ರಾಮದ ಸ್ಥಾಪನೆಗೆ ಶ್ರಮಿಸಿದರು. ನಂತರ ಹೆಂಡತಿ ಮಕ್ಕಳೊಂದಿಗೆ ಲಂಡನ್ನಿಗೆ ಹೋಗಬೇಕಾಗಿ ಬಂತು. ಅಲ್ಲಿ ಅವರು ಮೂರು ವರ್ಷ ಇದ್ದರು; ಪತ್ರಿಕೆಗಳಿಗೆ ಶಾಂತಿ ಮತ್ತು ಅಹಿಂಸೆ ಕುರಿತ ಲೇಖನಗಳನ್ನು ಬರೆದರು. ೧೯೫೮ರಿಂದ ೧೯೬೪ರವರೆಗೆ ಅವಾರ್ಡ್ (ಅಸೋಸಿಯೇಶನ್ ಫಾರ್ ವಾಲಂಟರಿ ಏಜೆನ್ಸೀಸ್ ಫಾರ್ ರೂರಲ್ ಡೆವಲಪ್‌ಮೆಂಟ್) ಎಂಬ ಸಂಸ್ಥೆಯ ಪ್ರಧಾನಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಆನಂತರ ಲೋಕನಾಯಕ ಜಯಪ್ರಕಾಶ ನಾರಾಯಣ್ ಪ್ರಭಾವಕ್ಕೆ ಸಿಲುಕಿದ ಧರಂಪಾಲ್, ಜೆಪಿ ಜೊತೆಗೆ ನಿಕಟ ಸ್ನೇಹ ಸಂಪಾದಿಸಿದರು. ೧೯೬೨ರಲ್ಲಿ ನೆಹರೂ ವಿರುದ್ಧ ಬರೆದ ಬಹಿರಂಗ ಪತ್ರಕ್ಕಾಗಿ ತಿಹಾರ್ ಸೆರೆವಾಸ ಅನುಭವಿಸಿದ ಧರಂಪಾಲ್ ಮುಂದೆ ಅಖಿಲ ಭಾರತ ಪಂಚಾಯತ್ ಪರಿಷತ್ತಿನ ನಿರ್ದೇಶಕರಾಗಿ ಮದ್ರಾಸು ಪಂಚಾಯತ್ ವ್ಯವಸ್ಥೆಯನ್ನು ತಿಳಿದುಕೊಂಡರು.

೧೯೩೧ರಲ್ಲಿ ಗಾಂಧೀಜಿಯವರು ಒಂದು ವಾದವನ್ನು ಮಂಡಿಸಿದ್ದರು: ನೂರು ವರ್ಷಗಳ ಹಿಂದಿನ ಭಾರತೀಯ ಶಿಕ್ಷಣ ವ್ಯವಸ್ಥೆ ಇಂದಿನ (ಗಾಂಧೀಜಿ ಕಾಲದ) ಬ್ರಿಟಿಶ್ ಶಿಕ್ಷಣಕ್ಕಿಂತ ಉತ್ತಮವಾಗಿತ್ತು ಎನ್ನುವುದೇ ಈ ಪ್ರತಿಪಾದನೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈ ವಿಷಯವು ಧರಂಪಾಲರನ್ನು ತುಂಬಾ ಕಾಡಿತ್ತು. ೬೦ರ ದಶಕದಿಂದ ಅರಂಭಿಸಿ ಧರಂಪಾಲ್ ಭಾರತದ ಇತಿಹಾಸ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳನ್ನು, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಿಕ್ಕ ದಾಖಲೆಗಳನ್ನು ಆಳವಾಗಿ ಆಭ್ಯಸಿಸಿದರು. ಇದರ ಫಲವಾಗಿ ೧೯೭೧ರಲ್ಲಿ ಬಂದ ಪುಸ್ತಕವೇ:  ೧೮ನೇ ಶತಮಾನದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ. ಭಾರತೀಯ ಖಗೋಳಶಾಸ್ತ್ರ, ವೈದ್ಯಕೀಯ ವಿಜ್ಞಾನ, ಕಬ್ಬಿಣ ಮತ್ತು ಉಕ್ಕು ತಯಾರಿಕೆ, ಮಂಜುಗಡ್ಡೆ ತಯಾರಿಕೆ, ಕೃಷಿ ಸಲಕರಣೆಗಳು, – ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರ ಸಕ್ಷಮತೆ ಇತ್ತೆಂದು ಸಾಬೀತುಪಡಿಸಿದ ಈ ಪುಸ್ತಕವು ಆಗ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

೧೯೮೩ರಲ್ಲಿ ವರು ಬರೆದ ಗ್ರಂಥ: `ದಿ ಬ್ಯೂಟಿಫುಲ್ ಟ್ರೀ’ ಅವರ ಅತ್ಯಂತ ಆಳ ಅಧ್ಯಯನದ ಫಲ. ೪೩೬ ಪುಟಗಳ ಈ ಪುಸ್ತಕದಲ್ಲಿ ಅವರು ೧೮ನೇ ಶತಮಾನದ ಭಾರತದ ಶಿಕ್ಷಣ ವ್ಯವಸ್ಥೆ ಎಷ್ಟು ಗಟ್ಟಿಯಾಗಿತ್ತು, ಆಮೇಲೆ ಬ್ರಿಟಿಶರು ಹೇಗೆ ಅದನ್ನು ಶಿಥಿಲಗೊಳಿಸಿದರು ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ. ಕಾರ್ಲ್ ಮಾರ್ಕ್ಸ್‌ನಿಂದ ಹಿಡಿದು ಅಂದಿನ ಪ್ರಮುಖ ಚಿಂತಕರು ಭಾರತವನ್ನು ಪಾಶ್ಚಾತ್ಯೀಕರಣಗೊಳಿಸಲು ಹೊರಟ ಸಂಗತಿಯೇ ಹೇಗೆ ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿತು ಎಂದು ಅವರು ವಿವರಿಸಿದ್ದಾರೆ. ಅದನ್ನೆಲ್ಲ ಅವರು ಬ್ರಿಟಿಶ್ ದಾಖಲೆಗಳನ್ನು ಬಳಸಿಯೇ ನಿರೂಪಿಸಿದ್ದಾರೆ ಎಂಬುದು ಗಮನಾರ್ಹ.

ಅವರು ಹೇಳುವ ಮಾತಿನ ಝಲಕ್ ಇಲ್ಲಿದೆ:

The First Report: A Survey of Post-1800 Material

Adam’s first report is a general statement of the situation and a presentation of the data which he could derive from post-1800 official and other sources. His conclusions: first, every village  had at least one school and in all probability in Bengal and Bihar with 1,50,748 villages, ‘there will still be 1,00,000’ villages that have these schools.59 Second, on the basis of personal observation and what he had learnt from other evidence, he inferred that on an average there were around 100 institutions of higher learning in each district of Bengal. Consequently, he concluded that the 18 districts of Bengal had about 1,800 such institutions. Computing the number studying in these latter at the lowest figure of six scholars in each, he also computed that some 10,800 scholars should be studying in them.

School attendance, especially in the districts of the Madras Presidency, even in the decayed state of the period 1822-25, was proportionately far higher than the numbers in all variety of schools in England in 1800. The conditions under which teaching took place in the Indian schools were less dingy and more natural;37 and, it was observed, the teachers in the Indian schools were generally more dedicated and sober than in the English versions. The only aspect, and certainly a very important one, where Indian institutional education seems to have lagged behind was with regard to the education of girls.

——————————

The following indicative list of the crafts listed in some of the districts of the Madras Presidency (collected in the early 19th  century records for levying tax on them) may give, however, some idea of their variety.

TANKS, BUILDINGS, ETC.

  • Stone-cutters
  • Wood woopers (Wood cutters)
  • Marble mine workers
  • Bamboo cutters
  • Chunam makers
  • Wudders (Tank diggers)
  • Sawyers Brick-layers

METALLURGY

  • Iron ore collectors
  • Copper-smiths
  • Iron manufacturers
  • Lead washers
  • Iron forge operators
  • Gold dust collectors
  • Iron furnaces operators
  • Iron-smiths
  • Workers of smelted metal
  • Gold-smiths
  • Horse-shoe makers
  • Brass-smiths
  • TEXTILES
  • Cotton cleaners
  • Fine cloth weavers
  • Cotton beaters
  • Coarse cloth weavers
  • Cotton carders
  • Chintz weavers
  • Silk makers
  • Carpet weavers
  • Spinners
  • Sutrenze carpet weavers
  • Ladup, or Penyasees Cot tape weavers
  • Cotton spinners
  • Cumblee weavers
  • Chay thread makers
  • Thread purdah weavers
  • Chay root diggers (a dye)
  • Gunny weavers
  • Rungruaze, or dyers
  • Pariah weavers (a very large Mudda wada, or dyers in red  number)
  • Indigo maker
  • Mussalman weavers
  • Barber weavers
  • Dyers in indigo
  • Boyah weavers
  • Loom makers
  • Smooth and glaze cloth men
  • Silk weavers

OTHER CRAFTSMEN

  • Preparers of earth for bangles
  • Salt makers
  • Bangle makers
  • Earth salt manufacturers
  • Paper makers
  • Salt-petre makers
  • Fire-works makers
  • Arrack distillers
  • Oilmen Collectors of drugs and roots
  • Soap makers
  • Utar makers, druggists

MISCELLANEOUS

  • Boat-men
  • Sandal makers
  • Fishermen
  • Umbrella makers

ಪ್ರತಿಯೊಂದು ಹಳ್ಳಿಯಲ್ಲೂ ಒಂದು ಶಾಲೆ ಇತ್ತು; ೧೮೩೦ರ ಹೊತ್ತಿನಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಒಂದು ಲಕ್ಷ ಶಾಲೆಗಳಿದ್ದವು. ಮುಂಬಯಿ ಪ್ರೆಸಿಡಿನ್ಸಿಯಲ್ಲಿ ಶಾಲೆ ಇಲ್ಲದ ಒಂದು ಹಳ್ಳಿಯೂ ಇರಲಿಲ್ಲ; ಶಾಲೆಗಳಲ್ಲಿ ಬ್ರಾಹ್ಮಣೇತರರೂ ಶಿಕ್ಷಣ ಪಡೆಯುತ್ತಿದ್ದರು; ಉನ್ನತ ಶಿಕ್ಷಣದಲ್ಲಿ ಮಾತ್ರ ಬ್ರಾಹ್ಮಣರೇ ಹೆಚ್ಚಾಗಿದ್ದರು – ಇವೇ ಮುಂತಾದ ಅಂಶಗಳನ್ನು ಧರಂಪಾಲ್ ದಾಖಲಿಸಿದ್ದಾರೆ. ಇಂಥ ಸುಂದರ ವೃಕ್ಷ ಹೇಗೆ ಶಿಥಿಲವಾಯಿತು? ರಾಜಾರಾಮ್ ಮೋಹನ್‌ರಾಯ್ ಆಹ್ವಾನದ ಮೇರೆಗೆ ಬ್ರಿಟಿಶರು ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆದರು. ಇಂಥ ಶಾಲೆಗಳಿಗೆ ಸರ್ಕಾರದ ಮಾನ್ಯತೆ ನೀಡಲಾರಂಭಿಸಿದರು. ಆದ್ದರಿಂದ ದೇಶಿ ಶಿಕ್ಷಣ ವ್ಯವಸ್ಥೆಯು ಮಾನ್ಯತೆಯ ಕೊರತೆಯಿಂದ ತನ್ನಷ್ಟಕ್ಕೆ ತಾನೇ ಕುಸಿಯಿತು ಎಂಬ ವಾದವಿದೆ.

ಭಾರತೀಯ ವಿಜ್ಞಾನದ ಗರಿಮೆ

ಧರಂಪಾಲ್ ನಮಗೆ ಬಿಟ್ಟುಹೋಗಿರುವ ಇನ್ನೊಂದು ಪ್ರಮುಖ ದಾಖಲೆ ಎಂದರೆ ಭಾರತೀಯ ವಿಜ್ಞಾನ, ತಂತ್ರಜ್ಞಾನವು ಹೇಗೆ ಪಾಶ್ಚಾತ್ಯರಿಗಿಂತ ಉನ್ನತ ಮಟ್ಟದ್ದಾಗಿತ್ತು; ಅದನ್ನು ಬ್ರಿಟಿಶರು ಹೇಗೆ ದಮನಿಸಿದರು ಎಂಬ ಮಾಹಿತಿಗಳ ಪ್ರಬಂಧಗಳು. ಈ ಪ್ರಬಂಧಗಳನ್ನು ಓದುವುದೇ ಒಂದು ಥ್ರಿಲ್ಲರ್ ಓದಿದ ಅನುಭವ ಕೊಡುತ್ತದೆ.

೧೬೭೮-೯೩ರ ಅವಧಿಯಲ್ಲಿ ಯೂರೋಪಿನಲ್ಲಿ ಹಾರ್ಟಸ್ ಮಲಬಾರಿಕಸ್ ಎಂಬ ೭೫೦ ಭಾರತೀಯ ಸಸ್ಯಪ್ರಬೇಧಗಳ ೧೨ ಸಂಪುಟಗಳ ಚಿತ್ರಸಹಿತ ಗ್ರಂಥ ಪ್ರಕಟವಾಗುತ್ತದೆ. ಇದರಲ್ಲಿ ಕೇರಳ ಮತ್ತು ಕೊಂಕಣ ಪ್ರದೇಶದ ಪಂಡಿತರು ಈ ಪುಸ್ತಕವು ಸರಿಯಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ! ಭಾರತೀಯ ಕೃಷಿ ಸಲಕರಣೆಗಳು ೧೮ನೇ ಶತಮಾನದ ಬ್ರಿಟಿಶ್ ಕೃಷಿಗೆ ಭಾರೀ ಪ್ರಮಾಣದಲ್ಲಿ ನೆರವಾದವು. ಸಿಡುಬಿಗೆ ಭಾರತದಲ್ಲಿ ನೀಡುತ್ತಿದ್ದ ಲಸಿಕೆಯ ವಿಧಾನ; ಅಲಾಹಾಬಾದ್ – ವಾರಾಣಸಿಯಲ್ಲಿ ಮಂಜುಗಡ್ಡೆ ಮಾಡುತ್ತಿದ್ದ ವಿಧಾನ, ಕಟ್ಟಡ ನಿರ್ಮಾಣದ ವಿವಿಧ ಯಾಂತ್ರಿಕ ಹಾಗೂ ರಾಸಾಯನಿಕ ಮಾಹಿತಿಗಳು, ಭಾರತೀಯ ಉಕ್ಕು – ಕಬ್ಬಿಣ ತಯಾರಿಕೆ ವಿಧಾನಗಳು, ಶಸ್ತ್ರಚಿಕಿತ್ಸೆ, ಶಾಲೆಗಳಲ್ಲಿನ ಬೋಧನಾ ಕ್ರಮಗಳು – ಇವೆಲ್ಲವನ್ನೂ ಬ್ರಿಟಿಶರು ತಿಳಿದುಕೊಂಡರು. ಅದಿರಲಿ, ೧೭೯೭ರಲ್ಲೇ ಬರ್ಮಾದಲ್ಲಿ ಸುಮಾರು ೫೨೦ ಪೆಟ್ರೋಲಿಯಂ ಬಾವಿಗಳಿದ್ದವು ಎಂಬುದನ್ನೂ ಧರಂಪಾಲ್ ದಾಖಲಿಸುತ್ತಾರೆ. ಆ ಕಾಲದಲ್ಲಿ ಅವುಗಳಿಂದ ಒಂದು ಲಕ್ಷ ಟನ್ ತೈಲವನ್ನು ಎತ್ತಿ ೧೦ ಲಕ್ಷ ಭಾರತೀಯ ರೂಪಾಯಿಯ ವರಮಾನ ಪಡೆಯಲಾಗುತ್ತಿತ್ತು! (ಈ ರೂಪಾಯಿ ಈಗಿನದಲ್ಲ, ಸುಮಾರು ೨೧೦ ವರ್ಷ ಹಳೆಯದು ಎಂಬುದನ್ನು ನೆನಪಿಡಿ). ಈ ತೈಲವನ್ನು ದೀಪ ಬೆಳಗಿಸಲು, ಮರಗಳಿಗೆ ಬಳಿಯಲು, ದೋಣಿ – ಹಡಗುಗಳ ಬುಡಕ್ಕೆ ಸವರಲು, ವೈದ್ಯಕೀಯ ಅಗತ್ಯಗಳಿಗಾಗಿ ಬಳಸಲಾಗುತ್ತಿತ್ತು.

೧೮೧೬ರಲ್ಲಿ ಆಧುನಿಕ ಬ್ರಿಟಿಶ್ ಶಸ್ತ್ರಚಿಕಿತ್ಸೆಯ ಸ್ಥಾಪಕ ಎಂದೇ ಮಾನ್ಯರಾದ ಜೆ ಸಿ ಕಾರ್ಪ್  ದಾಖಲಿಸಿದ  ಭಾರತೀಯ ಪ್ಲಾಸ್ಟಿಕ್ ಸರ್ಜರಿಯ ವಿವರಗಳನ್ನು ಧರಂಪಾಲ್ ಕೊಡುತ್ತಾರೆ:

It was in this manner that the nasal operation had become forgotten or despised, in at least the west of Europe; when, at the close of the last century, it was once more heard of in England, from a quarter whence mankind will yet, perhaps, derive many lights, as well in science, as in learning and in arts. A periodical publication, for the year 1794, contains the following communication from a correspondent in India, which is accompanied by a portrait of the person mentioned, explanatory of the operation. ‘Cowasjee, a Mahratta, of the castle of husbandman, was a bullock-driver with the English army, in the war of 1792, and was made a prisoner by Tippoo, who cut off his nose, and one of his hands.

In this state, he joined the Bombay army near Seringapatam, and is now a pensioner of the Honourable East India Company. For above twelve months, he was wholly without a nose; when he had a new one put on, by a Mahratta surgeon, a Kumar, near Pune. This operation is not uncommon in India, and has been practised from time immemorial. Two of the medical gentlemen, Mr. Thomas Cruse and Mr. James Findlay, of Bombay, have been informed as follows: A thin plate of wax is fitted to the stump of the nose, so as to make a nose good appearance; it is then flattened, and laid on the forehead. A line is drawn round the wax, which is then of no further use; and the operator then dissects off as much skin as it covered, leaving undivided a small slip between the eyes. This slip preserves the circulation, till an union has taken place between the new and old parts. The cicatrix of the stump of the nose, is next pared off; and, immediately behind this raw part, an incision is made through the skin, which passes round both alae, and goes along the upper lip.

The skin is now brought down from the forehead; and, being that a nose is formed with a double hold, above, and with its alae and septum below, fixed in the incision; so that a nose is formed with a double hold, above, and with its alae and septum below, fixed in the incision. A little Terra Joponica is softened with water, and, being spread on slips of cloth, five or six of these are placed over each other, to secure the joining. No other dressing than this cement is used for four days; it is then removed, and cloths, dipped in ghee (a kind of butter), are applied. The connecting slip of skin is divided about the twenty-fifth day; when a little more dissecting is necessary to improve the appearance of the new nose. For five or six days after the operation, the patient is made to lie on his back; and, on the tenth day, bits of soft cloth are put in to the nostrils, to keep them sufficiently open.

This operation is always successful. The artificial nose is  secure, and looks nearly as well as the natural one; nor is the scar on the forehead very observable, after a length of time.

ಧರಂಪಾಲ್‌ರ ಪ್ರಬಂಧಗಳಲ್ಲಿ ತಿಳಿಯಲೇಬೇಕಾದ ಇನ್ನೊಂದು ಸಂಗತಿ: ಭಾರತದ ಉಕ್ಕು ಕುಲುಮೆಯ ತಂತ್ರಜ್ಞಾನ. ಈ ಬಗ್ಗೆಯ ಅವರು ಬರೆದಿದ್ದನ್ನು ಓದಿ: (ಅನುವಾದಕ್ಕಿಂತ ಅವರ ಮೂಲ ಭಾಷೆಯೇ ಸಂವಹನ ಹೆಚ್ಚಿಸಬಹುದೆಂದು ಇಂಗ್ಲೀಶಿನಲ್ಲಿಯೇ ದಾಖಲಿಸಿದ್ದೇನೆ)

Around 1800, a movable furnace of that time could on an average produce about 20 tonnes of fine-grade steel, if worked for some 35-40 weeks in the year. I had roughly estimated on the basis of available data for various areas that the number of such furnaces around 1800 might have been approximately 10,000. it is quite possible that the number was far larger but that most of them only worked for 10-20 weeks in the year. It is probable that in today’s circumstances, these furnaces may be found highly wasteful of both ore and fuel; and to start with, the steel that they will produce may be of relatively poor quality. To some an attempt of this kind may seem a great waste. But to the same people, a loss of a few hundred crores here and there because of hasty decisions, or defective technology, etc., may look like the ordinary hazards of modern economy and industry; while a loss of 10 to 20 or 50 crores on a project of this seems unpardonable’.

ಹೀಗೆ ಧರಂಪಾಲ್ ಒಬ್ಬ ಗಾಂಧಿವಾದಿಯಾಗಿ ನೈಜ ಭಾರತದ ಚಿತ್ರಣವನ್ನು ದಾಖಲೆ ಸಮೇತ ಕಟ್ಟಿಕೊಟ್ಟಿದ್ದಾರೆ. ಇಂಥ ಸಂಶೋಧನಾ ಪ್ರವೃತ್ತಿ ನಮ್ಮ ಯುವಸಮುದಾಯಕ್ಕೂ ಬರಲಿ ಎಂದು ಆಶಿಸೋಣ.

ಧರಂಪಾಲ್ ಕೃತಿಗಳು: ನಿಮಗಾಗಿ!

(ಸೌಜನ್ಯ: ಸಮನ್ವಯ ಡಾಟ್‌ಕಾಮ್. ಈ ವೆಬ್‌ಸೈಟಿನಲ್ಲಿ ನೀವು ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು)

  • ನಮ್ಮ ದೇಶದ ಹಿರಿಮೆಯ ಬಗ್ಗೆ ಸುಮ್ಮನೆ ಹೊಗಳುವ ಬದಲು ಧರಂಪಾಲರ ಈ ಪುಸ್ತಕವನ್ನು ಓದಿ, ಅದನ್ನು ಮಕ್ಕಳಿಗೆ ತಿಳಿಹೇಳಿದರೆ ಅದಕ್ಕಿಂತ ಒಳ್ಳೆಯ ಕೆಲಸ ಬೇರೇನಿದೆ? ಈ ಪುಸ್ತಕವನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಂಡು ನೀವೂ ಓದಿ. ನಿಮ್ಮ ಮಕ್ಕಳಿಗೂ ಓದಲು ಕೊಡಿ. ಇಂಗ್ಲೀಶಿನಲ್ಲೇ ಇರುವುದರಿಂದ ಮಕ್ಕಳು ಓದುವುದಕ್ಕೆ ಶುರು ಮಾಡುತ್ತಾರೆ ಎಂಬ ವಿಶ್ವಾಸ ನನ್ನದು).
  • ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮುನ್ನುಡಿ ಬರೆದ ಪಂಚಾಯತ್ ರಾಜ್ ಕುರಿತ ಸಂಶೋಧನಾ ಗ್ರಂಥವನ್ನು ನೀವು ಇಲ್ಲಿ ಪಡೆಯಬಹುದು.
beluru sudarshana dharampal mitramaadhyama
Share. Facebook Twitter Pinterest LinkedIn Tumblr Email
Previous Articleಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?
Next Article ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.