Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»Three Cups of Tea : ಮನ ತಟ್ಟುವ ಸೇವಾ ಕಥನ
ಲೇಖನಗಳು

Three Cups of Tea : ಮನ ತಟ್ಟುವ ಸೇವಾ ಕಥನ

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 19, 2009Updated:May 19, 20251 Comment8 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಆತ ಒಬ್ಬ ಪರ್ವತಾರೋಹಿಯೂ ಅಲ್ಲ. ಪರ್ವತಾರೋಹಿಗಳಿಗೆ ವೈದ್ಯಕೀಯ ನೆರವು ನೀಡುವ ಸಹಾಯಕ. ಆದರೂ ಕೆ೨ ಪರ್ವತದ ತುತ್ತ ತುದಿ ತಲುಪಲು ಯತ್ನಿಸಿದ. ಪ್ರೀತಿಯ ತಂಗಿಯ ಕೊರಳಹಾರವನ್ನು ಆ ಶಿಖರಾಗ್ರದಲ್ಲಿ ಹುಗಿದು ಅವಳ ನೆನಪನ್ನು ಆಗಸದೆತ್ತರದಲ್ಲಿ ನೆಡುವ ಭಾವುಕ ಅಣ್ಣನೂ ಆಗಿದ್ದ ಆತ ೨೮೨೬೭ ಅಡಿ ಎತ್ತರದ, ಜಗತ್ತಿನ ಎರಡನೇ ಅತಿ ಎತ್ತರದ ಶಿಖರವನ್ನು ಹತ್ತಲು ಯತ್ನಿಸಿದ. ಆಗಲಿಲ್ಲ. ದಾರಿಯಲ್ಲಿ ಜೊತೆಗಾರರಿಂದ ತಪ್ಪಿಸಿಕೊಂಡ. ಹೇಗೋ ದಿನರಾತ್ರಿಗಳನ್ನು ಕಳೆದ. ಹಿಮಪಾತದ ಭೀಕರತೆಯಿಂದ, ಸಾವಿನ ಹೊರಳಿನಿಂದ ತಪ್ಪಿಸಿಕೊಂಡ. ಕೆಳಗಿಳಿದು ಬಂದ. ಸಹಾಯಕ ಮುಝಾಫಿರ್ ಆಲಿಯನ್ನು ಕಂಡು ಕೈ ಬೀಸಿದ. 

3CTpaperback

 

 ಮೂರು ತಿಂಗಳುಗಳ ನಂತರ ಗ್ರೆಗ್ ಮಾರ್ಟೆನ್‌ಸನ್ ಮತ್ತೆ ಹಸಿರು ನೋಡಿದ. ಮುಝಾಫಿರ್ ಕರೆದುಕೊಂಡ ಹಾದಿಯಲ್ಲೇ ನಡೆದ. ಆದರೂ ಮತ್ತೆ ದಾರಿ ತಪ್ಪಿದ. ಅಸ್ಕೊಲೆಗೆ ಹಓಗುವ ಬದಲು ಕೋರ್ಫೆ ಎಂಬ ಕುಗ್ರಾಮ ತಲುಪಿದ. ಕಾರಕೋರಮ್ ಕಣಿವೆಯಲ್ಲಿ ಇಂಥ ಹಳ್ಳಿಯೊಂದು ಇದೆ ಎಂದು ಗ್ರೆಗ್‌ಗೆ ಗೊತ್ತೇ ಇರಲಿಲ್ಲ. ಹಳ್ಳಿಯ ಮುಖ್ಯಸ್ಥ, ‘ನುರ್ಮಧಾರ್’ ಹಾಝಿ ಆಲಿ ಅವನನ್ನು ತನ್ನ ಮುಗ್ಧ ನಗುವಿನೊಂದಿಗೆ ಸ್ವಾಗತಿಸಿದ. ಮನೆಯಲ್ಲಿ ಹಾಸಿಗೆ ಹೊದಿಕೆ ಕೊಟ್ಟು ಉಪಚರಿಸಿದ. ಇಲ್ಲೇ ಇದ್ದು ಆರಾಮಾಗಿ ಹೋಗು ಎಂದು ಗದರಿಸಿದ. ಹಳ್ಳಿಯನ್ನು ಸುತ್ತಿದ ಗ್ರೆಗ್‌ಗೆ ಎಲ್ಲೆಲ್ಲೂ ತನ್ನ ಅಪಸ್ಮಾರ ಯಾತನೆ ಅನುಭವಿಸಿದ ತಂಗಿ ಕ್ರಿಸ್ತಾಳೇ ನೆನಪಾದಳು. ಇವರೆಲ್ಲ ಈ ಕುಗ್ರಾಮದಲ್ಲಿ ಹ್ಯಾಗೆ ಜೀವನ ನಡೆಸಿದ್ದಾರಲ್ಲಾ ಎಂದು ಗ್ರೆಗ್ ಅಚ್ಚರಿಪಟ್ಟ.

‘ಈ ಊರಿನ ಶಾಲೆ ಎಲ್ಲಿದೆ?’ ಗ್ರೆಗ್ ಬಲವಂತ ಮಾಡಿ ಹಾಝಿ ಆಲಿಯನ್ನು ಕರೆದುಕೊಂಡು ಊರಿನ ಶಾಲೆಗೆ ಹೋದ. ಅಲ್ಲೇನಿದೆ? ಬ್ರಾಲ್ದು ಗ್ರಾಮದಿಂದ ಎಂಟುನೂರು ಅಡಿ ಎತ್ತದ ಜಾಗ. ಮೇಲೆ ನೀಲಾಕಾಶ. ಕೆಳಗೆ ಕೊರೆವ ನೆಲ. ಅದರ ಮೇಲೆ ಎಂಬತ್ತೆರಡು ಮಕ್ಕಳು ಕೂತಿದ್ದಾರೆ. ಆ ತೆರೆದ ಶಾಲೆಗೆ ಶಿಕ್ಷಕ ಬರೋದೇ ವಾರಕ್ಕೆ ಮೂರು ದಿನ. ಉಳಿದಂತೆ ಮಕ್ಕಳೇ ಅಭ್ಯಾಸ ಮಾಡಬೇಕು. ಆದರೆ ಮಕ್ಕಳು ಛಲವಂತರು. ಅಲ್ಲೇ ಕೂತು ಸ್ಲೇಟಿನ ಮೇಲೆ ಮಣ್ಣನ್ನೇ ಶಾಯಿ ಮಾಡಿಕೊಂಡು ಕಡ್ಡಿಯಿಂದ ಲೆಕ್ಕ ಬರೆಯುತ್ತಿದ್ದಾರೆ.

ಗ್ರೆಗ್ ಕಣ್ಣಂಚಿನಲ್ಲಿ ನೀರಾಡಿತು. ಕೆ೨ದಿಂದ ಕೆಳಗಿಳಿಯುವಾಗ ದಾರಿ ತಪ್ಪಿದ ಗ್ರೆಗ್ ಇಲ್ಲೀಗ ಹಾಝಿ ಆಲಿಗೆ ಮಾತು ಕೊಟ್ಟ: ನಾನು ಇಲ್ಲಿ ಒಂದು ಶಾಲೆ ಕಟ್ತೇನೆ. ಪ್ರಾಮಿಸ್.

handshake

 

 ೧೯೯೩ರಲ್ಲಿ ನಡೆದ ಈ ಘಟನೆ ಗ್ರೆಗ್ ಮಾರ್ಟೆನ್‌ಸನ್‌ನ ಬದುಕನ್ನೇ ಬದಲಿಸಿತು. ಅವನ ಬದುಕು ಪಾಕಿಸ್ತಾನ, ಅಫಘಾನಿಸ್ತಾನದ ಸಾವಿರಾರು ಮಕ್ಕಳ ಬದುಕನ್ನೂ ಬದಲಿಸಿತು. ಭಯೋತ್ಪಾದನೆ, ಮತಾಂಧತೆಯ ಅಂಧಕಾರದ ನಡುವೆ ಗ್ರೆಗ್ ಹೊತ್ತಿಸಿದ ಈ ದೀಪಗಳು ಇಂದು ನಿಧಾನವಾಗಿ ಆ ಪ್ರದೇಶದ ಪ್ರಣತಿಗಳಾಗುತ್ತಿವೆ.

ಗ್ರೆಗ್ ಮಾರ್ಟೆನ್‌ಸನ್‌ನ ಈ ಯಶೋಗಾಥೆಯನ್ನು ವಿವರಿಸುವ ಪುಸ್ತಕ ‘ಥ್ರೀ ಕಪ್ಸ್ ಆಫ್ ಟೀ’ (ಮೂರು ಲೋಟ ಚಹಾ). ಡೇವಿಡ್ ಆಲಿವರ್ ರೆಲಿನ್ ಜೊತೆಗೂಡಿ ಗ್ರೆಗ್ ಬರೆದ ಈ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಸತತ ೧೨೮ ವಾರ ಅಮೆರಿಕಾದ ಬೆಸ್ಟ್‌ಸೆಲ್ಲರ್ ಆಗಿದ್ದ ಪುಸ್ತಕವನ್ನು ವಾರವಿಡೀ ಓದಿ ಸಮಾಧಾನದ ಮನಸ್ಸಿನಿಂದ ಬರೆಯುತ್ತಿದ್ದೇನೆ. ಗ್ರೆಗ್ ಎಂಥ ಹುಚ್ಚುಮನಸ್ಸಿನ ವ್ಯಕ್ತಿತ್ವದವ….. ಏನೆಲ್ಲ ತಡವರಿಸಿದ, ಎಷ್ಟೆಲ್ಲ ಕನವರಿಸಿದ, ಹ್ಯಾಗೆಲ್ಲ ತತ್ತರಿಸಿದ, ಬಿಕ್ಕಳಿಸಿದ, ಏನೆಲ್ಲ ಎದುರಿಸಿದ……… ಎಲ್ಲವನ್ನೂ ಮತ್ತೆ ಮತ್ತೆ ಓದಿ ಈ ಪರಿಚಯ ಲೇಖನ ಬರೆಯುತ್ತಿದ್ದೇನೆ. ಈ ಪುಸ್ತಕವನ್ನು ನಿಮಗೆ ಪರಿಚಯಿಸೋದಕ್ಕೆ ನನಗೆ ಹೆಮ್ಮೆಯಾಗುತ್ತದೆ; ಏನೋ, ಒಳ್ಳೆಯ ಸಂಗತಿಯೊಂದನ್ನು ನಿಮ್ಮ ಜೊತೆ ಹಂಚಿಕೊಂಡ ಸಮಾಧಾನ.

ಕೋರ್ಫೆ ಗ್ರಾಮಕ್ಕೆ ಶಾಲೆ ಕಟ್ಟುವ ಭರವಸೆ ನೀಡಿ ಅಮೆರಿಕಾಗೆ ಮರಳಿದ ಗ್ರೆಗ್ ಹುಚ್ಚನ ಥರ ದಾನಕ್ಕಾಗಿ ಅಲೆಯುತ್ತಾನೆ. ೫೮೦ ಪತ್ರಗಳನ್ನು ಅಮೆರಿಕಾದ ಗಣ್ಯರಿಗೆ ಕಳಿಸಿಕೊಡುತ್ತಾನೆ. ಅದಕ್ಕಾಗಿ ಟೈಪ್‌ರೈಟರ್ ಬಾಡಿಗೆ ಪಡೆಯುತ್ತಾನೆ. ಒಂದೇ ಒಂದು ದೇಣಿಗೆ ಬರುತ್ತದೆ. ಗ್ರೆಗ್‌ನ ತಾಯಿ ಶಿಕ್ಷಕಿಯಾಗಿದ್ದ ಶಾಲೆಯ ಮಕ್ಕಳು ಪೆನ್ನೀಸ್ ಫಾರ್ ಪಾಕಿಸ್ತಾನ್’ ಎಂದು ಅಭಿಯಾನ ಮಾಡಿ ೬೨೩೪೫ ಪೆನ್ನಿಗಳನ್ನು ಸಂಗ್ರಹಿಸುತ್ತಾರೆ. ಗ್ರೆಗ್‌ನ ಸುದ್ದಿ ಕೊನೆಗೆ ಹೇಗೋ ವಿಜ್ಞಾನಿ, ಉದ್ಯಮಿ, ಪರ್ವತಾರೋಹಿ ಜೀನ್ ಹೋಯೆರ್ನಿ ಎಂಬಾತನಿಗೆ ತಲುಪುತ್ತದೆ. ಈತ ದೇಣಿಗೆ ನೀಡಬಲ್ಲ ಎಂದು ಗ್ರೆಗ್‌ಗೆ ಗೆಳೆಯ, ಉದ್ಯೋಗದಾತ ಟಾಮ್ ವಾಘನ್ ಹೇಳುತ್ತಾನೆ.  ಗ್ರೆಗ್ ಹೋಯೆರ್ನಿಗೆ ಫೋನ್ ಮಾಡಿ ತನ್ನ ಯೋಜನೆಯನ್ನು ವಿವರಿಸುತ್ತಾನೆ. ‘ಅಲ್ಲಯ್ಯ, ನಿನ್ನ ಶಾಲೆ ಕಟ್ಟೋದಕ್ಕೆ ಎಷ್ಟು ಹಣ ಬೇಕು ಅಂತ ಖಚಿತವಾಗಿ ಹೆಳು’ ಎಂದು ಹೋಯೆರ್ನಿ ಗದರುತ್ತಾನೆ. ‘೧೨ ಸಾವಿರ ಡಾಲರ್’ ಎಂದು ಗ್ರೆಗ್ ಮೆತ್ತಗೆ ಉಸುರುತ್ತಾನೆ. ಹೌದ! ಅಷ್ಟರಲ್ಲೇ ಶಾಲೆ ಕಟ್ತೀಯ? ತಮಾಶೆ ಮಾಡ್ತಾ ಇಲ್ಲ ತಾನೆ?’ ಎಂದು ಹೋಯೆರ್ನಿ ಕೆಣಕುತ್ತಾನೆ. ಕೊನೆಗೆ ಗ್ರೆಗ್‌ನ ಅಂಚೆ ವಿಳಾಸ ಕೇಳಿ ಹನ್ನೆರಡು ಸಾವಿರ ಡಾಲರ್ ಕಳಿಸಿಕೊಡುತ್ತಾನೆ.

ಇಲ್ಲಿಂದ ಶುರುವಾದ ಗ್ರೆಗ್‌ನ ಶಾಲೆ ಕಟ್ಟುವ ಗಾಥೆ ೩೩೮ ಪುಟಗಳ ತುಂಬ ಹರಿದಿದೆ. ಶಾಲೆಗಾಗಿ ಹಣ ಸಂಗ್ರಹಿಸುವ ಹಾದಿಯಲ್ಲಿ ತನ್ನ ಕಾರನ್ನೇ ಗ್ರೆಗ್ ಮಾರಿ ೫೦೦ ಡಾಲರ್ ಗಿಟ್ಟಿಸಿದ್ದು, ಅವನ ಈ ಹುಚ್ಚಿಗೆ ಬೇಸತ್ತು ಅವನ ಪ್ರೇಯಸಿ ಮರೀನಾ ದೂರವಾಗಿದ್ದು, ರಾವಲ್ಪಿಂಡಿಯಲ್ಲಿ ಶಾಲಾ ಕಟ್ಟಡದ ವಸ್ತುಗಳಿಗಾಗಿ ಚೌಕಾಶಿ ಮಾಡಿದ್ದು, ಎರಡು ಡಾಲರ್ ದಿನಬಾಡಿಗೆಯ ಯಾವುದೋ ಲಾಡ್ಜಿನಲ್ಲಿ ಉಳಿದಿದ್ದು, ಸಲ್ವಾರ್ ಕಮೀಜ್ ಹರಿದುಹೋಗಿ ಅದನ್ನೇ ಹೊಲೆದುಕೊಂಡು ದಿನ ಕಳೆದಿದ್ದು…..  ಗ್ರೆಗ್‌ನ ಕಥೆಯನ್ನು ಓದುತ್ತಿದ್ದರೆ ನಿಲ್ಲಿಸುವ ಮನಸ್ಸಾಗಲೇ ಇಲ್ಲ.

ಕೋರ್ಫೆಗೆ ಹೋಗುವ ಹಾದಿಯಲ್ಲಿ ಸ್ಕಾರ್ದುನಲ್ಲೇ ಎಲ್ಲ ಸಾಮಾನು ಇಳಿಸುವ ಅನಿವಾರ್ಯತೆಗೆ ಸಿಲುಕಿದ ಗ್ರೆಗ್ ಕೊನೆಗೆ ಹಾಝಿ ಆಲಿ ಮನೆಗೆ ಹೋಗಿ ಉದ್ವೇಗದಿಂದ ಉಸುರುತ್ತಾನೆ. ‘ ನಾನು ಶಾಲೆ ಕಟ್ಟಲು ಬಂದಿದೇನೆ.’

ಆದರೆ ಹಾಝಿ ಆಲಿಯ ಉತ್ತರ ಸಿದ್ಧವಾಗಿರುತ್ತೆ. ಅದೆಲ್ಲ ಸರಿ, ಈ ಸಾಮಾನನ್ನೆಲ್ಲ ಹ್ಯಾಗೆ ಈ ನದಿ ದಾಟಿಸಬೆಕು ಅಂತಿದೀಯ? ಮೊದಲು ಇಲ್ಲಿಗೆ ಒಂದು ಸೇತುವೆ ಆಗಬೇಕು. ಅದಾದ ಮೇಲೆ ಶಾಲೆ! ಸೇತುವೆಯ ಮಾತು ಕೇಳಿ ಗ್ರೆಗ್ ಹೌಹಾರುತ್ತಾನೆ. ಮತ್ತೆ ಸೇತುವೆಯ ಲೆಕ್ಕಾಚಾರ ಶುರುವಾಗುತ್ತೆ. ಮತ್ತೆ ಅಮೆರಿಕಾಗೆ ಮರಳಿದ ಗ್ರೆಗ್‌ಗೆ ಹೋಯೆರ್ನಿಯನ್ನು ಕೇಳದೆ ದಾರಿಯಿಲ್ಲ. ‘ಎಷ್ಟು ಬಜೆಟ್?’ ಎಂದು ಹೋಯೆರ್ನಿ ಪ್ರಶ್ನೆ. ಸುಮಾರು ೧೦ ಸಾವಿರ ಡಾಲರ್. ‘ಅರೆ, ನನ್ನ ಮಾಜಿ ಪತ್ನಿಯರ ವೀಕೆಂಡ್ ಖರ್ಚಿಗಿಂತ ಕಡಿಮೆ’ ಎಂದು ಹೋಯೆರ್ನಿ ತಮಾಶೆ ಮಾಡುತ್ತಾನೆ. ಸೇತುವೆಯ,ಶಾಳೆಯ ಫೋಟೋಗ್ರಾಫ್ ಬೇಕು ಎಂದು ಷರತ್ತು ಹಾಕಲು ಮರೆಯುವುದಿಲ್ಲ.

ಕೋರ್ಫೆಯ ಶಾಲೆ ಕಟ್ಟುವಾಗ ಎದುರಾದ ತಾಪತ್ರಯಗಳನ್ನು ನೀವು ಓದಬೇಕು. ಪಕ್ಕದ ಹಳ್ಳಿಯ ಮೌಲ್ವಿಯೊಬ್ಬ ಗ್ರೆಗ್ ವಿರುದ್ಧ ಫತ್ವಾ ಹೊರಡಿಸುವ ಘಟನೆಯೂ ನಡೆಯುತ್ತದೆ. ಆದರೆ ಹಾಝಿ ಆಲಿ ಎಂಬ ನುರ್ಮಧಾರ್‌ನ ಗಟ್ಟಿ ಬೆಂಬಲ ಮತ್ತು ಸಾಂತ್ವನ, ಅನುಭವದ ಮಾತುಗಳು ಗ್ರೆಗ್‌ನಿಗೆ ಶಕ್ತಿ ತುಂಬುತ್ತವೆ. ಇನ್ನೊಬ್ಬ ಮತಾಂಧನಿಗೆ ಊರಿನ ಒಂದು ಡಜನ್ ಕೋಣಗಳನ್ನು ಲಂಚ ಕೊಡುವಾಗ ಹಾಝಿ ಆಲಿ ನಗುತ್ತಾನೆ:’ಅವರಿಗೆ ಕೋಣಗಳು ಒಂದಷ್ಟು ದಿನದ ಆಹಾರ. ನಮಗೋ ಶಾಲೆ ಸಿಕ್ಕಿತಲ್ಲ, ಅದರಿಂದ ನಮ್ಮ ಮಕ್ಕಳಿಗೆ ಚಿರಂತನ ಶಿಕ್ಷಣ ಸಿಗುತ್ತಲ್ಲ… ಸಾಕು ಬಿಡು’ ಎನ್ನುತ್ತಾನೆ. ಈ ಅಜ್ಜನ ಅಪಾರ ಅನುಭವದ ಮುಂದೆ ಗ್ರೆಗ್ ತಲೆಬಾಗುತ್ತಾನೆ.

ಬಾಲ್ಟಿಸ್ತಾನದ ಈ ಜನ ಎಷ್ಟು ನಂಬುಗಸ್ತರು  ಎನ್ನುವುದಕ್ಕೆ ಹಾಝಿ ಆಲಿ ಒಂದು ಸಲ ಗ್ರೆಗ್‌ಗೆ ಬಣ್ಣಿಸುವುದು ಹೀಗೆ.

“The first time you share with a Balti, you are a stranger. The second time you share a cup of tea, you are an honoured guest. The third time you share a cup of tea, you become family, and for our family, we are prepared to do anything, even die,” he said, laying his hand warmly on Mortenson’s own. “Doctor Greg, you must make time to shae three cups of tea. We may be uneducated. But we are not stupid. We have lived and survived here for a long time.”

 

ಅವನ ಈ ಮಾತೇ ಪುಸ್ತಕದ ಶೀರ್ಷಿಕೆಯಾಗಿದೆ.

ಶಾಲೆ ಕಟ್ಟೊಣ ವಿಳಂಬವಾದಾಗ ಗ್ರೆಗ್‌ಗೆ ಗಾಬರಿಯಾಗುತ್ತೆ. ಆಗ ಹಾಝಿ ಆಲಿ ಹೇಳುವುದಿಷ್ಟೆ:

“I Thank all-merciful Allah for all you have done. But the people of Korphe have been here without a school for six hundred years,’’ he said, smiling. “What is one winter more?”

ಖುರಾನ್  ಓದಲೂ ಬರದ ಹಾಝಿ ಆಲಿ ಒಮ್ಮೆ ಗ್ರೆಗ್‌ನಿಗೆ ಖುರಾನ್ ಪುಟಗಳನ್ನು ತಿರುವಿ ಹೇಳುವ ಮಾತಿದು:

“I can’t read it,” he said. “I can’t read anything. This is the great sadness in my life. I’ll do anything so the children of my village never have to know this feeling. I’ll pay any price so they have education they deserve.”

ಶಾಲೆಯನ್ನು ಕಟ್ಟಿದ ಮೇಲೆ ಹಾಝಿ ಆಲಿ ಮನೆಗೆ ಕರೆದುಕೊಂಡು ಹೋಗಿ ನಿರ್ಮಾಣದ ಖರ್ಚುವೆಚ್ಚಗಳ ಪುಸ್ತಕವನ್ನು ಗ್ರೆಗ್‌ಗೆ ತೋರಿಸುತ್ತಾನೆ. ಅದನ್ನು ನೋಡಿ ಗ್ರೆಗ್ ಹೃದಯ ತುಂಬಿ ಬರುತ್ತದೆ.

“The village had accounted for every rupee spent on the school, adding up the cost of every brick, nail, and board, and the wages paid to put t hem together. They used the old British colonial accounting method. And they did a much better job of it than I ever could have.”

ಇದು ಕೋರ್ಫೆ ಶಾಲೆಯ ಕಥೆ. ಈ ಶಾಲೆಯನ್ನು ಕಟ್ಟುವ ಶ್ರಮದ ದಿನಗಳಲ್ಲೇ ಗ್ರೆಗ್ ಮತ್ತೆ ಮತ್ತೆ ಅಮೆರಿಕಾಗೆ ಬರುತ್ತಾನೆ. ದೇಣಿಗೆಗಾಗಿ ಉಪನ್ಯಾಸ ನೀಡುತ್ತಾನೆ…. ಹೋಯೆರ್ನಿಯ ಆರೋಗ್ಯ ಕೆಡುತ್ತದೆ. ಆತನ ಕೊನೆಯ ದಿನಗಳಲ್ಲಿ ಗ್ರೆಗ್ ಹೋಯೆರ್ನಿಯ ದಾದಿಯಾಗಿ ದಿನ ಕಳೆಯುತ್ತಾನೆ. ಆಸ್ಪತ್ರೆಯ ರೂಮಿನಲ್ಲಿ ಹಾಸಿಗೆ ಎದುರೇ ಕೋರ್ಫೆ ಶಾಲೆಯ ಫೋಟೋ ನೇತುಹಾಕುವ ಹಟ ಹೋಯೆರ್ನಿಯದು. ಆಸ್ಪತ್ರೆ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಆದರೆ ಹೋಯೆರ್ನಿ ಬಿಡಬೇಕಲ್ಲ….. ಇಡೀ ಆಸ್ಪತ್ರೆಯನ್ನೇ ನಾನು ಕೊಳ್ಳಬಲ್ಲೆ ಹುಷಾರ್….. ಈ ಚಿತ್ರ ಮಾತ್ರ ನನ್ನ ಎದುರಿಗೆ ಇರ್‍ಲೇಬೇಕು ಎಂದು ಅಬ್ಬರಿಸುತ್ತಾನೆ.

ಸಾವಿನ ಮನೆಗೆ ಹತ್ತಿರವಾದ ಬಗ್ಗೆ ಹೋಯೆರ್ನಿಗೆ ಸುಳಿವು ಸಿಕ್ಕಿರುತ್ತೆ.

ಅಷ್ಟು ಹೊತ್ತಿಗೆ ಸೆಂಟ್ರಲ್ ಏಶಿಯನ್ ಇನ್‌ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಕಟ್ಟು ಎಂದು ಹೋಯೆರ್ನಿಯೇ ಗ್ರೆಗ್‌ಗೆ ಹೇಳಿದ್ದ. ಈ ಸಂಸ್ಥೆಗೆ ಹೋಯೆರ್ನಿ ತನ್ನ ಮರಣಪತ್ರದಲ್ಲಿ ಒಂದು ಮಿಲಯ ಡಾಲರ್ ಹಣವನ್ನು ದತ್ತಿಯಾಗಿ ನೀಡುತ್ತಾನೆ. ಸೆಮಿಕಂಡಕ್ಟರ್ ಕ್ರಾಂತಿಯ ಪ್ರಮುಖ ಹರಿಕಾರ, ಇಂಟೆಗ್ರೇಟೆಡ್ ಸರ್ಕೂಟ್‌ನ ಸಿದ್ಧಾಂತವನ್ನು ಮಂಡಿಸಿ ಇಂದಿನ ಐಟಿ ಯುಗಕ್ಕೆ ನಾಂದಿ ಹಾಡಿದ ಹೋಯೆರ್ನಿಗೆ ಸಮಾಧಾನ ಸಿಕ್ಕಿದ್ದು ಕೋರ್ಫೆ ಶಾಲೆ ಕಟ್ಟಿದಾಗಲೇ. ಕೊನೆಗಾಲದಲ್ಲಿ ಸ್ವೀಡನ್ನಿನ ಗೆಳೆಯನಿಗೆ ಫೋನ್ ಮಾಡಿದ ಹೋಯೆರ್ನಿ ಅವನನ್ನು ಕೆಣಕುತ್ತಾನೆ: ನೋಡು, ಕಾರಕೋರಮ್ ಕಣಿವೆಯಲ್ಲಿ ನಾನು ಒಂದು ಶಾಲೆ ಕಟ್ಟಿಸಿದ್ದೇನೆ ಕಣೋ…. ಈ ಐವತ್ತು ವರ್ಷ ನೀನು ಏನು ಮಾಡಿದೀಯ?

ಕೋರ್ಫೆ ಶಾಲೆಯೊಂದಿಗೆ ಇನ್ನೂ ಹಲವು ಶಾಲೆಗಳು ತಲೆಯೆತ್ತುತ್ತವೆ. ಹಳ್ಳಿಗಳಲ್ಲಿ ವೈದ್ಯಕೀಯ ನೆರವಿಗೂ ಗ್ರೆಗ್ ಮುಂದಾಗುತ್ತಾನೆ. ಈ ಮಧ್ಯೆ ಗ್ರೆಗ್‌ಗೆ ತಾರಾ ಬಿಶಪ್ ಎಂಬ ಸಂಗಾತಿ ಸಿಗುತ್ತಾಳೆ. ಆರೇ ದಿನಗಳ ಪರಿಚಯದಲ್ಲಿ ಅವರ ಮದುವೆ.

ಪರಿಚಯವಿಲ್ಲದ ಪಾಕಿಸ್ತಾನಿ ಗುಡ್ಡಗಾಡು ಪ್ರದೇಶಕ್ಕೆ ಹೋದ ಗ್ರೆಗ್ ಅಪಹರಣಕ್ಕೊಳಗಾಗಿದ್ದು, ಶಾಲೆ ಕಟ್ಟುವ ಅಭಿಯಾನಕ್ಕೆ ಉತ್ತರ ಪಾಕಿಸ್ತಾನದ ಶಿಯಾ ಮುಸ್ಲಿಮ್ ಸಮುದಾಯದ ನಾಯಕ ಸೈಯದ್ ಅಬ್ಬಾಸ್‌ನ ಭದ್ರ ಬೆಂಬಲ ಸಿಕ್ಕಿದ್ದು, 9/೧೧ರ ನ್ಯೂಯಾರ್ಕ್ ಅವಳಿ ಕಟ್ಟಡ ಧ್ವಂಸ, ಪಾಕಿಸ್ತಾನದ – ಅಫಘಾನಿಸ್ತಾನದ ರಾಜಕೀಯ ಅಲ್ಲೋಲಕಲ್ಲೋಲಗಳು, – ಎಲ್ಲದರ ನಡುವೆಯೂ ಗ್ರೆಗ್ ತನ್ನ ಯೋಜನೆಯನ್ನು ಮುಂದುವರೆಸುತ್ತಾನೆ. ಈಗಲೂ ಗ್ರೆಗ್ ಈ ಕೆಲಸದಲ್ಲೇ ಮಗ್ನ.

gultori-school-pak-1

 

 ಥ್ರೀ ಕಪ್ಸ್ ಆಫ್ ಟೀ’ – ತಾಲಿಬಾನ್, ಅಲ್ ಖೈದಾನಂಥ ಉಗ್ರಗಾಮಿ, ಹಿಂಸಾವಾದೀ  ಸಂಘಟನೆಗಳು ಬೆಳೆದ ಸಂದರ್ಭದಲ್ಲೇ ಚಿಗುರಿದ ಅಭಿಯಾನದ ಕಥೆ. ಅದರಲ್ಲೂ ಈ ಚಳವಳಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೇ ಹೆಚ್ಚು ಒತ್ತು. ಗಂಡುಮಕ್ಕಳು ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುತ್ತಾರೆ. ಹೆಣ್ಣುಮಕ್ಕಳು ಮಾತ್ರ ಹಳ್ಳಿಯಲ್ಲೇ ಇದ್ದು ಕುಟುಂಬಗಳ ಮೂಲಾಧಾರವಾಗುತ್ತಾರೆ ಎಂಬ ಸರಳ ವಾದವೇ ಈ ಆದ್ಯತೆಗೆ ಹಿನ್ನೆಲೆ. ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನೀ ಹಳ್ಳಿಗರು ಪಟ್ಟ ಪಾಡಿನ ವಿವರಣೆಯೂ ಪುಸ್ತಕದಲ್ಲಿದೆ. ಭಾರತವಿರಲಿ, ಪಾಕಿಸ್ತಾನವಿರಲಿ, ಯುದ್ಧವೆಂದೂ ಜನರ ಕಣ್ಣೀರು ಒರೆಸುವುದಿಲ್ಲ ಎಂಬ ಉದಾತ್ತ ಭಾವ ನಿಮ್ಮನ್ನು ಆವರಿಸಿದರೆ ಅಚ್ಚರಿಯಿಲ್ಲ.

ಪಾಕಿಸ್ತಾನದ ಆಂತರಿಕ ಸಮರದ ಬಗ್ಗೆ ವರದಿ ಬರೆಯಲು ಬಂದಿದ್ದ ಫೆಡಾರ್ಕೋ ಒಮ್ಮೆ ಗ್ರೆಗ್ ಜೊತೆಗೆ ಕೋರ್ಫೆಗೆ ಹೋಗುತ್ತಾನೆ. ಅಲ್ಲಿ ಎಲ್ಲ ಗಂಡಸರೇ ತುಂಬಿದ್ದ ಸಭೆಯಲ್ಲಿ ಜಹಾನ್ ಎಂಬ ಯುವತಿ (ಈಕೆ ಕೋರ್ಫೆ ಶಾಲೆಯಲ್ಲೇ ಓದಿ ಬೆಳೆದಿದ್ದು) ಮುಂದೆ ನುಗ್ಗಿ ಬಂದು ಗ್ರೆಗ್, ನೀವು ನನ್ನ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡ್ತೀನಿ ಅಂದಿದ್ರಿ. ಈ ವಾರಾನೇ ನಾನು ವೈದ್ಯಕೀಯ ಶಿಕ್ಷಣ ಕೋರ್ಸ್ ಸೇರ್‍ಕೋಬೇಕು… ನಂಗೆ ಈಗ್ಲೇ ೨೦ ಸಾವಿರ ರೂಪಾಯಿ ಬೇಕು ಎಂದು ಪಟ್ಟು ಹಿಡಿದದ್ದನ್ನು ನೋಡಿ ಫೆಡಾರ್ಕೋ ತಬ್ಬಿಬ್ಬಾಗುತ್ತಾನೆ. ಪರಂಪರೆಯ ಹದಿನಾರು ವೃತ್ತಗಳನ್ನು ದಾಟಿ ಬಂದ ಈ ಹದಿನಾರರ ಹುಡುಗಿ ಹೀಗೆ ದಿಟ್ಟೆಯಾಗಿ ಮಾತನಾಡಿದ್ದನ್ನು ನೋಡಿ ನನಗೆ ತುಂಬಾ ಅಚ್ಚರಿಯಾಯ್ತು. ಆಗಲೇ ನಾನು ಗ್ರೆಗ್‌ಗೆ ಹೇಳಿದೆ: ‘ನಾನು ವರದಿ ಮಾಡೋದಕ್ಕೆ ಬಂದಿದ್ದೇನೋ ಹಿಂಸೆಯ ಬಗ್ಗೆ. ಆದರೆ ಅದೆಲ್ಲ ಕ್ಷುಲ್ಲಕ ಅಂತನ್ನಿಸಿದೆ. ಈ ಘಟನೆಯೇ ನನಗೆ ಮುಖ್ಯ. ನಾನು ವರದಿ ಮಾಡೋದಿದ್ರೆ ಇದನ್ನೇ!’

ಅದರ ಫಲವಾಗಿ ‘ಪೆರೇಡ್’ ಪತ್ರಿಕೆಯಲ್ಲಿ ಗ್ರೆಗ್ ಮಾರ್ಟೆನ್‌ಸನ್‌ನ ಶಾಲಾ ಅಭಿಯಾನದ ಬಗ್ಗೆ ಮುಖಪುಟ ವರದಿ ಪ್ರಕಟವಾಗುತ್ತೆ. ಇರಾಖಿನ ಬಾಗ್ದಾದ್ ಹೊರವಲಯದಲ್ಲಿ ಅಮೆರಿಕಾದ ಪಡೆಗಳು ಸದ್ದಾಮ್ ಹುಸೇನ್ ಮೇಲೆ ಆಕ್ರಮಣ ಮಾಡಲು ಕೊನೆಗಳಿಗೆಯ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಂದ ಈ ಮುಖಪುಟ ಲೇಖನದ ಶೀರ್ಷಿಕೆ : He fights terror with books. ಇನ್ನೇನು ಬೇಕು? ಗ್ರೆಗ್‌ಗೆ ಪೆರೇಡ್ ಪತ್ರಿಕೆಯ ಓದುಗರಿಂದ ದೇಣಿಗೆಯ ಸುರಿಮಳೆ.

 

map

 

ಈಗ? ಗ್ರೆಗ್‌ನ ಸೆಂಟ್ರಲ್ ಏಶ್ಯಾ ಇನ್‌ಸ್ಟಿಟ್ಯೂಟ್‌ನಿಂದ ಪಾಕಿಸ್ತಾನದಲ್ಲಿ ೧೦೩ ಮತ್ತು ಆಫಘಾನಿಸ್ತಾನದಲ್ಲಿ ೭೬ ಶಾಲೆಗಳು ತಲೆಯೆತ್ತಿವೆ. ಸೌದಿ ಹಣದ ಥೈಲಿಯಿಂದ ಸಾವಿರಾರು ಮದ್ರಸಾಗಳು ಕಣಿವೆಯ ತುಂಬ ತಲೆಯೆತ್ತಿ ಗ್ರೆಗ್‌ನ ಶಾಂತಿ ಯತ್ನಕ್ಕೆ ಸವಾಲಾಗಿವೆ. ಆದರೂ ಗ್ರೆಗ್ ತನ್ನ ಯತ್ನವನ್ನು ಬಿಟ್ಟಿಲ್ಲ.  ಸೆಲ್ವಾರ್ ತೊಟ್ಟು ಮಕ್ಕಳ ಜೊತೆ ಅಡ್ಡಾಡುತ್ತ, ತನ್ನ ನಿಷ್ಠ ಟೀಮ್ ಜೊತೆಗೆ ಚರ್ಚಿಸುತ್ತ ಇನ್ನೆಲ್ಲಿ ಶಾಲೆ ಕಟ್ಟೋಣ ಎಂದು ನಕಾಶೆ ಹಿಡಿದು ಕೂರುತ್ತಾನೆ.

ಕೆ೨ ಪರ್ವತದ ಶಿಖರಾಗ್ರವನ್ನೂ ಮೆಟ್ಟಿ ಮತ್ತೆಲ್ಲೋ ಉತ್ತುಂಗ ತಲುಪುತ್ತಿರುವ ಅನೂಹ್ಯ ಸುಖ ಗ್ರೆಗ್‌ನ ಎದೆಯಾಳದಲ್ಲಿ ಪಸರಿಸಿದೆ. ನಿಜಕ್ಕೂ ಆತ ದಾರಿ ತಪ್ಪಿದನೆ? ಅಥವಾ ಕೋರ್ಫೆ ಕುಗ್ರಾಮದ ಹಾಝಿ ಆಲಿಯೆಂಬ ಎನಿಗ್ಮಾ ಅವನನ್ನು ಸೆಳೆಯಿತೆ?

ಗ್ರೆಗ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆ ಇದ್ದರೆ ಇಲ್ಲಿ ಕೆಲವು ವೆಬ್ ಕೊಂಡಿಗಳಿವೆ. ಭೇಟಿ ಕೊಡಿ.

http://www.gregmortenson.com/

https://www.ikat.org

http://www.threecupsoftea.com

ಜೀನ್ ಹೋಯೆರ್ನಿಯ ಇಂಟೆಗ್ರೇಟೆಡ್ ಸರ್ಕೂಟ್ (ಐಸಿ) ಸಂಶೋಧನೆ ಕುರಿತ ವಿಜ್ಞಾನ ಲೇಖನಕ್ಕಾಗಿ ಇ-ಜ್ನಾನ ಬ್ಲಾಗ್‌ಸ್ಪಾಟ್‌ಗೆ ಭೇಟಿ ಕೊಡಿ.

ಚಿತ್ರಕೃಪೆ: ಗ್ರೆಗ್ ಮಾರ್ಟೆನ್‌ಸನ್ ಮತ್ತು ಅವರ ಸಂಸ್ಥೆಯ ವೆಬ್‌ಸೈಟ್

 

beluru sudarshana greg mortenson mitramaadhyama Three cups of tea
Share. Facebook Twitter Pinterest LinkedIn Tumblr Email
Previous ArticlePlease visit www.mitramaadhyama.co.in
Next Article ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

1 Comment

  1. Pingback: ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ! | ಬೇಳೂರು ಸುದರ್ಶನ

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.