Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
ಲೇಖನಗಳು

ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ

ಬೇಳೂರು ಸುದರ್ಶನBy ಬೇಳೂರು ಸುದರ್ಶನMarch 17, 2007Updated:May 19, 2025No Comments5 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಸಂಕ್ರಾಂತಿಯ ಹಬ್ಬ  ಬಂತೆಂದರೆ, ಹಿಂದಿನ ತಲೆಮಾರಿನ ಹಳ್ಳಿಗರ ಸಂಭ್ರಮವೋ ಸಂಭ್ರಮ. ಆ ಸಂಜೆ, ರೈತರು ತಮ್ಮ ತಮ್ಮ ಹಳ್ಳಿಗಳಿಂದ ಗೋ ಕರುಗಳನ್ನು ಕರೆತಂದು, ಈ ಬಂಡೆಯ ಕೆಳಬದಿಯಲ್ಲಿದ್ದ ದೇವರಕೆರೆಯಲ್ಲಿ ಅವುಗಳ ಮೈ ತೊಳೆದು, ಹಣೆ-ಕೊಂಬು-ಬೆನ್ನು-ಮುಂಗಾಲು-ಕಾಲ್ಗೊರಸುಗಳಿಗೆ ಕುಂಕುಮ ಹಚ್ಚಿ, ಕೊಂಬುಗಳಿಗೆ ವಿವಿಧ ಬಣ್ಣಗಳನ್ನು ಲೇಪಿಸುತ್ತಿದ್ದರು. ಕೊಂಬುಗಳ ತುದಿಗಳಿಗೆ ಹಿತ್ತಾಳೆ ಕಳಶ, ಗೆಜ್ಜೆ ಕುಚ್ಚುಗಳನ್ನು ಕಟ್ಟಿ, ಕತ್ತಿಗೆ ಕರೀಕಂಬಳಿ ಹಗ್ಗಗಳಿಂದ ಗಂಟೆ ಕಟ್ಟಿ, ಬೆನ್ನ ಮೇಲೆ ಬಣ್ಣಬಣ್ಣದ ಕಿಂಕಾಪಿನ  ಮೇಲುದಗಳನ್ನು ಹೊದ್ದಿಸಿ, ಹೂ ಹಾರಗಳಿಂದ ಅಲಂಕರಿಸುತ್ತಿದ್ದರು.

ಕೊನೆಗೆ ತಾವೂ ಈ ಕೆರೆಯಲ್ಲೇ ಮಿಂದು ಶುಚಿರ್ಭೂತರಾಗಿ, ಹೊಸ ಉಡುಗೆ ತೊಟ್ಟು ಸಿಂಗರಿಸಿಕೊಂಡು ವಿಜೃಂಭಣೆಯಿಂದ ತಮ್ಮಟೆ – ಮಂಗಳವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಊರ ಬದಿಯ ಆ ಬಂಡೆಯ ಕೆಳಬದಿಯಲ್ಲಿದ್ದ ಶ್ರೀ ಮುತ್ತರಾಯನಿಗೆ  ಪೂಜೆ ಸಲ್ಲಿಸುತ್ತಿದ್ದರು. ಹೆಂಗಳೇಯರೂ ವಿವಿಧ ಹೂಗಳಿಂದ ತಮ್ಮನ್ನು ಸಿಂಗರಿಸಿಕೊಂಡು, ಕಳಶದೊಂದಿಗೆ ತಂಬಿಟ್ಟಿನ ದೀಪಾರತಿಗಳನ್ನು ತಲೆಯ ಮೇಲೆ ಹೊತ್ತುಕೊಂಡು, ಗೋವೃಂದವನ್ನು  ನಡೆಸಿಕೊಂಡು ಬರುತ್ತಿದ್ದರು. ಆಮೇಲೆ ಎಲ್ಲರೂ ಹಿಂದಿನ ದಿನವೇ ಮಣ್ಣಿನಲ್ಲಿ ಆರಡಿ ಎತ್ತರದ ಹುತ್ತದಾಕಾರದ ಆಕೃತಿಯನ್ನು ನಿರ್ಮಿಸಿ, ಅಲಂಕರಿಸಿ ಸಿದ್ಧಪಡಿಸಿರುತ್ತಿದ್ದ ಶ್ರೀ ಕಾಟಮರಾಯಸ್ವಾಮಿ, ಶ್ರೀ ಮುನೇಶ್ವರ ಸ್ವಾಮಿಗಳಿಗೆ ಪೂಜೆ  ಸಲ್ಲಿಸುತ್ತಿದ್ದರು.

ನಂತರ ಕೆಳಬದಿಯಲ್ಲಿ ಕೆರೆಕಟ್ಟೆ ಮೇಲೆ ನೆಲ್ಲುಹುಲ್ಲು, ರಾಗಿ ಹುಲ್ಲುಗಳನ್ನು ಹಾಸಿ ಅರ್ಧ ಫರ್ಲಾಂಗ್ ಉದ್ದ ಕಿಚ್ಚನ್ನು ಹೊತ್ತಿಸಿ  ಗೋವುಗಳನ್ನು ಈ ಬೆಂಕಿಯ ಮೇಲೆ ನಡೆಸಿಕೊಂಡು, ಓಡಿಸಿಕೊಂಡು ಕೇಕೆ ಹಾಕುತ್ತ ದನಗಾಹಿಗಳು ತಾವೂ ಅದರ ಮೇಲೆ ಓಡುತ್ತ ಕಿಚ್ಚು ಹಾಯಬೇಕು! ಕುಣಿಯಬೇಕು! ಕುಪ್ಪಳಿಸಬೇಕು! ಆನಂದಿಸಬೇಕು!

ಹಳ್ಳಿಯ ಹೆಂಗಳೆಯರು ಈ ಬಂಡೆಯ ಬೆನ್ನಮೇಲೆಯೇ ಅಡುಗೆ ಮಾಡಿ, ನೈವೇದ್ಯ ಕೊಟ್ಟು (ಅಲ್ಲಿಯೇ ಭತ್ತ ಕುಟ್ಟಿಕೊಂಡು ಅಕ್ಕಿ ಮಾಡಿ, ಆ ಅಕ್ಕಿಯಿಂದಲೇ ಅನ್ನ, ಪರಮಾನ್ನ, ಚಿತ್ರಾನ್ನಗಳನ್ನು ಮಾಡಬೇಕು) ಹಳ್ಳಿಗರೆಲ್ಲ ಇಲ್ಲೇ, ಬೆಳದಿಂಗಳಲ್ಲಿ ಉಂಡು ತಣಿಯುತ್ತಿದ್ದರು. ಬಾಣ ಬಿರುಸುಗಳನ್ನು ಬಿಟ್ಟು ಕೋಲಾಟ ಆಡುತ್ತಿದ್ದರು. ಹೀಗೆ ಊರಿಗೆ ಊರೇ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಒಟ್ಟಾಗಿ ಸೇರಿ ನಲಿಯುತ್ತಿತ್ತು.

ಕೇತಮಾರನಹಳ್ಳಿ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಈಗಲೂ ಅದೇ ಮಧುರ ಸ್ಮರಣೆಯಲ್ಲಿ ಬದುಕುತ್ತಿರುವ ಕೆ.ಎನ್. ಶ್ರೀಹರಿಯವರು ಎಪ್ಪತ್ತು ವರ್ಷಗಳ ಹಿಂದೆ ಕಾಣುತ್ತಿದ್ದ ಸುಂದರ ದೃಶ್ಯವಿದು. ಈ ದೃಶ್ಯವನ್ನು ಸವಿದು ಸವಿದು ಇಂದಿಗೂ ಇದೇ ಬೀದಿಯಲ್ಲಿ ವಾಸಿಸುತ್ತಿರುವ ಕೇತಮಾರನಹಳ್ಳಿಯ ನರಹರಯ್ಯ  ಶ್ರೀಹರಿಯವರನ್ನು ನೀವು ಈಗಲೂ ಭೇಟಿಯಾಗಬಹುದು.  ನರಹರಯ್ಯನವರು ಕೇತಮಾರನಹಳ್ಳಿಯ ಶ್ಯಾನುಭೋಗರಾಗಿದ್ದವರು. ಅವರ ತಂದೆ , ಅಂದರೆ ಶ್ರೀಹರಿಯವರ ತಾತ ಪುಟ್ಟನರಸಯ್ಯನವರೂ ಯವರೂ ಶ್ಯಾನುಭೋಗರೇ.

ಗೋಕುಲ ಎಂಬ ತಮ್ಮ ಮನೆಗೆ ಗೋಧೂಳಿ ಎಂದು ಶ್ರೀಹರಿ ಮರುನಾಮಕರಣ ಮಾಡಿದ್ದರೆ ಅವರಿಗೆ ಸದಾ ಕಣ್ಣಮುಂದೆ ಕನಸಿನಂತೆ ಹಾಯುವ ಈ ದನಕರುಗಳ ಕಿಣಿಕಿಣಿಯೇ ಕಾರಣ. ಅವರ ಮನೆಯಲ್ಲಿ ಇರುವ ಗೋಧೂಳಿಯ ದೃಶ್ಯದ ಗಾಜಿನ ಕಲಾಕೃತಿಗೂ ಅವರ ಈ ಕನಸೇ ಕಾರಣ.

ಶ್ರೀ ಹರಿಯವರ ಮನೆಗೆ ಹೋಗಬೇಕೆಂದರೆ ನೀವು ಬೆಂಗಳೂರಿನ ಮೆಜೆಸ್ಟಿಕ್‌ನಿಂದ ನವರಂಗ್ ಥಿಯೇಟರನ್ನು ದಾಟಿ ಬಲಕ್ಕೆ ತಿರುಗಿ ಎರಡು ಫರ್ಲಾಂಗ್ ಹೋಗಬೇಕು. ಅಲ್ಲಿ ನೀವುದಾರಿ ತಪ್ಪಿದರೆ ರಾಜಾಜಿನಗರ ಕೆ ಬ್ಲಾಕ್‌ನ ವರದರಾಯಸ್ವಾಮಿ ದೇವಸ್ಥಾನವನ್ನು ಹುಡುಕಿ. ಇತಿಹಾಸಪ್ರಸಿದ್ಧ ಈ ದೇಗುಲದ ಬಳಿಯೇ ಗೋಧೂಳಿ ಇದೆ.

ಕೆ ಬ್ಲಾಕ್ ಎಂದರೆ ಮತ್ತೆನಲ್ಲ, ಕೇತಮಾರನಹಳ್ಳಿ ಬ್ಲಾಕ್. ಊರೇನೋ ಕಳೆದುಹೋಯಿತು.  ದೇವರಕೆರೆಯೂ ಉದ್ಯಾನವಾಯಿತು. ಇದ್ದ ೭೦-೮೦ ಮನೆಗಳ ಕುಟುಂಬಗಳು ಎಲ್ಲೆಲ್ಲಿಗೋ ಹೋದವು. ಕೊನೇ ಪಕ್ಷ ಈ ಹಳ್ಳಿಯ ಕೇಂದ್ರಬಿಂದುವಿಗಾದರೂ ಅದೇ ಹೆಸರು ಇರಲಿ ಎಂದು ಶ್ರೀಹರಿ ಮತ್ತಿತರರು ಒತ್ತಡ ಹೇರಿದ ಮೇಲೆ ಕೇತಮಾರನಹಳ್ಳಿ ಒಂದ ಬ್ಲಾಕ್ ಆಗಿ ಉಳಿದುಕೊಂಡಿದೆ. ಗೋಧೂಳಿಯಿಂದ ಪಾವನವಾದ, ಹಳ್ಳಿ ತಳಿಯ ಹಸುಗಳಿಂದಲೇ ಹಾಲುಣ್ಣುತ್ತಿದ್ದ ಈ ಊರಿನಲ್ಲಿ ಪ್ಯಾಕೆಟ್ ಹಾಲಿನ ದಿನಚರಿ ಬಂದು ದಶಕಗಳಾದವು.

ಬೇಂದ್ರೆ ಅಭ್ಯಂಜನ, ಮಾತಿನ ಹೊಳೆ

ಹಳೆ ವಿನ್ಯಾಸ, ಹೊಸ ನೆಲಹಾಸಿನ ಮಧುರ ಮಿಶ್ರಣದ ಶ್ರೀಹರಿ ಮನೆಯಲ್ಲಿ ಏನುಂಟು ಏನಿಲ್ಲ… ಕನ್ನಡ ಸಾರಸ್ವತ ಲೋಕದ ಹಿರಿಯರೆಲ್ಲ ಈ ಮನೆಯ ಮೆತ್ತಿನ ಹಜಾರದಲ್ಲಿ ಸಭೆ ನಡೆಸಿದ್ದಾರೆ. ಸಾಹಿತ್ಯ – ಸಂಸ್ಕೃತಿ  ಚರ್ಚಿಸಿದ್ದಾರೆ. ಇದೇ ಮನೆಯಲ್ಲಿ ಎಂಟು ದಿನ ಉಳಿದುಕೊಂಡಿದ್ದ ವರಕವಿ ಬೇಂದ್ರೆ ಅಭ್ಯಂಜನ ಮಾಡಿಸಿಕೊಳ್ಳುತ್ತ ಗಂಟೆಗಟ್ಟಳೆ ಹರಟಿದ್ದಾರೆ.

`ಕೇತಮಾರನಹಳ್ಳಿ.. ಇದರ ಇತಿಹಾಸವನ್ನು ನೀವು ಲಿಪಿಬದ್ಧಗೊಳಿಸಬೇಕಲ್ರೀ’ ಎಂದು ಬೇಂದ್ರೆ ಅಂದೇ ಹೇಳಿದ್ದರು. ಕೇತಮಾರನಹಳ್ಳಿಯ ಸೊಗಡು, ಹಂಡೆಯಲ್ಲಿ ಕೊತ ಕೊತ ನೀರು, ಹೆಂಚಿನ ಮನೆಯ, ರೆಡ್ ಆಕ್ಸೈಡ್ ಹಾಸಿನ ಆ ಮನೆಯ ಸುಮಧುರ ಆತಿಥ್ಯದಲ್ಲಿ ಬೇಂದ್ರೆ ಕೇತಮಾರನಹಳ್ಳಿಯನ್ನು ಪ್ರೀತಿಸಿದರು.

ಬೇಂದ್ರೆಯವರ ಕಣ್ಣಿಗೂ ಹಿತ ತಂದ ಕೇತಮಾರನಹಳ್ಳಿ ಬೆಂಗಳೂರಿನ ಪ್ರಮುಖ ಮೂಲಸ್ಥಳ. ಈ ಹಳ್ಳಿಯ ಸರಹದ್ದು ಪೀಣ್ಯ – ಯಶವಂತಪುರ.ಲಗ್ಗೆರೆ, ಈಗಿನ ಕೇಂದ್ರ ರೈಲು ನಿಲ್ದಾಣ. ನವರಂಗ್ ರಸ್ತೆಯಾಗಲೀ, ಡಾ|| ರಾಜ ರಸ್ತೆಯಾಗಲೀ ಅಂದು ಬರೀ ಬಂಡಿಜಾಡುಗಳಾಗಿದ್ದವು. ಮಲ್ಲೇಶ್ವರಕ್ಕೆ ಬರಬೇಕೆಂದರೆ ಮೂರು ಹಳ್ಳಗಳನ್ನು ದಾಟಬೇಕಾದ ಸ್ಥಿತಿ.  ನವರಂಗ್‌ಪಾರ್ಕ್ ಇದ್ದಲ್ಲಿ  ಜೂಗನಹಳ್ಳಿ ಕೆರೆ. ಆಮೇಲೆ ಎಲ್ಲ ಗದ್ದೆ ಬಯಲು. ಮಳೆಗಾಲದಲ್ಲಿ ಶಾಲೆ ಮುಗಿದ ಮೇಲೆ ಅಪ್ಪಂದಿರ ಹೆಗಲ ಮೇಲೆಯೇ ಮನೆಗೆ ಪಯಣ. ಈಗಿನ ಸುಜಾತಾ ಥಿಯೇಟರಿನ ಆಸುಪಾಸಿನಲ್ಲಿ ಬರೀ ಹೂವಿನ ತೋಟಗಳು. ಸುಗಂಧರಾಜ, ಸೇವಂತಿಗೆ, ಮಲ್ಲಿಗೆ. ತೆಂಗಿನ ಸಾಲು ಮರಗಳು. ಬಸವೇಶ್ವರ ನಗರ ಅಂದು ದೊಡ್ಡ ಕಾಡುಪ್ರದೇಶ. ಕೆಲವರಿಗೆ ಮೊಲ ಬೇಟೆಯ ತಾಣ; ಹುಡುಗರಿಗೆ ಸುಮ್ಮನೆ ಕೂತು ಪಾಠ ಓದಿಕೊಳ್ಳಲು ಅರಸಿಕೊಂಡ ಜಾಗ. ಅಲ್ಲೇ ವೃಷಭಾವತಿ ನದಿ. ೨೪ ಕಣ್ಣಿನ ಸೇತುವೆ.
ಈಗ ಜೂಗನಹಳ್ಳಿ ಕೆರೆಯೂ ಇಲ್ಲ, ಸುಗಂಧರಾಜನೂ ಇಲ್ಲ. ಸುಜಾತಾ ಥಿಯೇಟರ್ ಬಳಿ ಹೋದರೆ ದುರ್ನಾತ ಬೀರುವ ಕೊಚ್ಚೆ ಹರಿಯುತ್ತದೆ. ಪಕ್ಕದಲ್ಲೇ ಮಹಿಳಾ ಕಾಲೇಜೂ ಹುಟ್ಟಿಕೊಂಡಿದೆ. ನವರಂಗ್ ಸುತ್ತಮುತ್ತ ಬಸ್ಸುಗಳ ಭರಾಟೆ. ಎಲ್ಲೆಲ್ಲೂ ಜಂಕ್ ಫುಡ್ ಜಂಕ್ಷನ್‌ಗಳು. ಪಕ್ಕದಲ್ಲೇ ಗ್ರಿಡ್ ಸೆಪರೇಟರ್ ಬಂದಿದೆ.
ಕೇತಮಾರನಹಳ್ಳಿ ಈಗ ಕೆ ಬ್ಲಾಕ್ ಆಗಿ ರಾಜಾಜಿನಗರದ ಹೊಟ್ಟೆಯಲ್ಲಿ ಅಡಗಿಹೋಗಿದೆ. ಅಲ್ಲೀಗ ಒಂದೇ ಒಂದು ಮನೆ ನೂರು ವರ್ಷಗಳ ನಂತರವೂ ಕಾಲನ ಹೆಜ್ಜೆಗೆ ಬಗ್ಗದೆ ನಿಂತಿದೆ. ಮುನಿಸುಬ್ಬಯ್ಯನವರಿಗೆ ತಮ್ಮ ಮನೆಯ ಮೇಲೆ ತುಂಬಾ ಪ್ರೀತಿ.
ನೋಡಿ ಮಗಳೊಂದಿಗೆ ಎಷ್ಟು ಆರಾಮಾಗಿ ಕಟ್ಟೆಯ ಮೇಲೆ ಕೂತಿದ್ದಾರೆ. ಪಕ್ಕದಲ್ಲೇ ವರದರಾಜಸ್ವಾಮಿ ದೇವಾಲಯ. ಶತಮಾನಗಳ ಇತಿಹಾಸ ಅದಕ್ಕಿದೆ. ಈಗ ರಾಜಾಜಿನಗರದ ಗಿಜಿಗಿಜಿಯ ನಡುವೆಯೂ ಈ ದೇಗುಲದ ಪ್ರಾಂಗಣದಲ್ಲಿ ಶಾಂತ ಸ್ಥಿತಿಯಿದೆ. ಘಂಟಾನಾದ ಅನುರಣಿಸುತ್ತದೆ. ದೇಗುಲದ ಆವರಣಗೋಡೆಯಿಂದ ಇಣುಕಿದರೆ ಕಾಲದ ಗರ್ಭದಿಂದ ಎದ್ದು ಬಂದಂತೆ ಕೇತಮಾರನಹಳ್ಳಿಯ ಮಿನಿಯೇಚರ್  ದೃಶ್ಯ ಕಾಣುತ್ತದೆ. ಹುಡುಗನೊಬ್ಬ ಅಲ್ಲಿ ಸೈಕಲ್ ಓಡಿಸುತ್ತಿದ್ದಾನೆ. ಪಡ್ಡ ಹಡುಗರು ಮಾತುಕತೆಯಲ್ಲಿ ತೊಡಗಿದ್ದಾರೆ.
`ಮೊದಲು ಇಲ್ಲಿ ಇದ್ದಿದ್ದೇ ಒಂದೇ ರೇಡಿಯೋ. ಈ ಊರಿಗೆ ಕರೆಂಟು ಬಂದಿದ್ದೇ ೧೯೫೮ರಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿ ಡಿ ಎ)  ಕೇತಮಾರನಹಳ್ಳಿಯನ್ನು ವಶಪಡಿಸಿಕೊಂಡ ಹತ್ತು ವರ್ಷಗಳ ನಂತರ. ತಾರಸಿ ಮನೆ ಕಂಡಿದ್ದೇ ೧೯೫೬ರಲ್ಲಿ.ನಲ್ಲಿ ನೀರನ್ನು ನಾವು ನೋಡಿದ್ದೇ ೧೯೬೬ರಲ್ಲಿ’ ಶ್ರೀಹರಿ ನೆನಪಿನ ಬುತ್ತಿ ಬಿಚ್ಚುತ್ತಾರೆ.
ಆಗ ಕೇತಮಾರನಹಳ್ಳಿ ಇಂಡಸ್ಟ್ರಿಯಲ್ ಸಬರ್ಬ್ ಆಗಿತ್ತು. ಅದಕ್ಕಾಗೇ ಲೇಬರ್ ಕ್ವಾರ್ಟರ್‍ಸ್ ಕಟ್ಟಿದ್ದರು. ಆದರೆ ೧೯೫೭ರ ಏಕೀಕರಣದ ನಂತರ ಬೆಂಗಳೂರಿಗೆ ಅಧಿಕಾರಿ, ಸಿಬ್ಬಂದಿಗಳ ದೊಡ್ಡ ದಂಡೇ ಬಂತು. ಸಚಿವಾಲಯದಲ್ಲೆ ಕೆಲಸಕ್ಕೆಸೇರಿಕೊಂಡ ಇವರಿಗೆಲ್ಲ ಈ ಕ್ವಾರ್ಟರ್‍ಸ್‌ಗಳನ್ನೇ ವಿತರಿಸಲಾಯಿತು. ಆಗ ಎರಡು ಸಾವಿರ ಇದ್ದ ನಿವೇಶನಗಳಿಗೆ ಈಗ ಏನಿಲ್ಲೆಂದರೂ ಹಲವು ಲಕ್ಷಗಳ ಬೆಲೆಯಿದೆ.
ಬಿ ಡಿ ಎ ಯು ಈ ಹಳ್ಳಿಯ ಕೃಷಿಭೂಮಿಯನ್ನು ವಶಪಡಿಸಿಕೊಂಡು ಎಕರೆಗೆ ೬೦೦ ರೂ.ಗಳ ಪರಿಹಾರವನ್ನು ಕೊಟ್ಟಿದ್ದೇ ಕೇತಮಾರನಹಳ್ಳಿಯ ಪತನಕ್ಕೆ ಕಾರಣವಾಯ್ತು ಎಂದು ಶ್ರೀಹರಿ ಹಳಹಳಿಸುತ್ತಾರೆ. `ಆ ಕಾಲದಲ್ಲಿ ಅದು ಭಾರೀ ಮೊತ್ತ. ಜನ ಹಣದಾಸೆಗೆ ಮಾರುಹೋದರು. ಬಂದ ಹಣವನ್ನು ಎಲ್ಲೆಲ್ಲೋ ಚೆಲ್ಲಿದರು. ಕೇತಮಾರನಹಳ್ಳಿಯಲ್ಲಿ ಸ್ಥಳೀಕರು ಕಾಣೆಯಾಗೋದಕ್ಕೆ ಇದೇ ಕಾರಣ. ಈಗ ಬಹುಶಃ ನನ್ನಂಥ ಮೂಲನಿವಾಸಿಗಳು ಕೆಲವರು ಮಾತ್ರ’ ಎಂದು ಶ್ರೀಹರಿ ಮೆದುವಾಗಿ ನುಡಿಯುತ್ತಾರೆ. ಕೊನೆಗೆ ದೇವರಕೆರೆಯ ಕಟ್ಟೆಯನ್ನೂ ಒಡೆದಾಗ ಶ್ರೀಹರಿ ಕಣ್ಣೀರಿಟ್ಟರು. ಕೆರೆಯೇನೂ ಉಳಿಯಲಿಲ್ಲ.
ಕೇತಮಾರನಹಳ್ಳಿಯಲ್ಲೂ ಗಾಂಧಿಯುಗ
ಕೇತಮಾರನಹಳ್ಳಿಯಲ್ಲಿ ಗಾಂಧಿಯುಗವೂ ಅಡಗಿದೆ. ಅದಕ್ಕೆ ಶ್ರೀಹರಿಯವರೇ ಮುಖ್ಯ ಕಾರಣ. ಅಜ್ಜನ ವಿರೋಧ ಕಟ್ಟಿಕೊಂಡು ವರದರಾಜಸ್ವಾಮಿ ದೇಗುಲಕ್ಕೆ ಹರಿಜನ ಪ್ರವೇಶ ಮಾಡಿಸಿದವರೂ ಶ್ರೀಹರಿಯವರೇ. ಹತ್ತಿರದ ಬೋವಿಪಾಳ್ಯದಲ್ಲಿ ಖಾನೇಶುಮಾರಿಗೆ (ಸಮೀಕ್ಷೆ ಮಾಡುವುದಕ್ಕೆ) ಹೋದ ಶ್ರೀಹರಿ ಕಂಡಿದ್ದು ಬಡತನ; ದಾರಿದ್ರ್ಯ.  ಅವರೇಕೆ ಹಾಗೆ, ನಾನೇಕೆ ಹೀಗೆ ಎಂದು ಶ್ರೀಹರಿ ಪ್ರಶ್ನಿಸಿಕೊಂಡರು. ಮೊದಲಿನಿಂದಲೂ ಗಾಂಧಿ, ವಿನೋಬಾ ಭಾವೆ ಪ್ರಭಾವದಲ್ಲಿದ್ದ ಶ್ರೀಹರಿ ನಿಧಾನವಾಗಿ ಹರಿಜನ ಸೇವೆಗೆ ನಿಂತರು.
ಯಾಕೆಂದರೆ  ತಮ್ಮ ತಾತನ ಖುರ್ಚಿಯ ಮೇಲೆ ಅಕಸ್ಮಾತ್ತಾಗಿ ಹರಿಜನನೊಬ್ಬ ಕುಳಿತಿದ್ದೇ ಮಹಾಪರಾಧ ಎನ್ನುವಂತೆ ಮರುದಿನ ಬೆಳಗ್ಗೆ  ತಾತ ಖುರ್ಚಿಯನ್ನೇ  ಸೀಳಿಸಿ ಒಗಾಯಿಸಿದ್ದನ್ನು ಕಂಡವರೂ ಶ್ರೀಹರಿಯವರೇ.
ಆಮೇಲೆ ಹರಿಜನರು, ದುರ್ಬಲರು ಮನೆಗೆ ಬಂದಾಗ ತಮ್ಮ ದುಪ್ಪಡಿಗೇ ಅನ್ನ, ಹುಳಿ, ಸಾರನ್ನು ಹಾಕಿಸಿಕೊಂಡ ದೈನ್ಯದ ಸ್ಥಿತಿಯನ್ನು ಕಂಡವರೂ ಶ್ರೀಹರಿಯವರೇ.
ಶ್ರೀಹರಿ ಕೇವಲ ಸಮಾಜಸೇವೆ ಅಂತ ಕೂರಲಿಲ್ಲ. ಸಿದ್ಧವನಹಳ್ಳಿ ಕೃಷ್ಣಶರ್ಮರ ಗರಡಿಯಲ್ಲಿ ಪಳಗಿ ಅಧ್ಯಯನಶೀಲರಾದರು. `ಊರು ನ್ಯಾಯ’ ಎಂಬ ರೇಡಿಯೋ ನಾಟಕ ಬರೆದರು.  ಅದರಲ್ಲಿ ಕದರಗ ಹಾರ್ಮೋನಿಯಂ ನುಡಿಸಿದ್ದಕ್ಕೆ ಕಲ್ಲು ತೂರಾಟವೂ ಆಯ್ತಂತೆ. ಅಜ್ಜನಂತೂ ಕಿಡಿ ಕಾರಿದರು. `ಅರೆ, ಕದರಗ ಬಾರಿಸಿದರೇನಂತೆ, ಹಾರ್ಮೋನಿಯಂ ಸುಶ್ರಾವ್ಯವಾಗಿತ್ತಲ್ವೆ?’ ಎಂದು ಶ್ರೀಹರಿ ಪ್ರಶ್ನಿಸಿದ್ದೂ ಈಗ ಬರೀ ನೆನಪು.
ಈಗ ಶ್ರೀಹರಿಯವರು ಸುಪ್ರಸಿದ್ಧ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿಯಾಗಿದ್ದಾರೆ. ಅಚ್ಚುಕಟ್ಟಾದ, ಶಿಸ್ತಿನ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ತಂಡದಲ್ಲಿ ಪ್ರಮುಖರಾಗಿದ್ದಾರೆ. ಈ ವಿದ್ಯಾವರ್ಧಕ ಸಂಘವೂ ಕೇತಮಾರನಹಳ್ಳಿಯ ನವ ಸಾಕ್ಷಿಯಾಗಿದೆ. ಈ ಲೇಖನದ ಮೊದಲ ಪ್ಯಾರಾದಲ್ಲಿ ಉಲ್ಲೇಖಿಸಿದ  ಗುಡ್ಡವಾದರೂ ಸಾರ್ವಜನಿಕ ಶಾಂತಿ ಸ್ಥಳವಾಗಲಿ ಎಂದುದೇಗುಲ ಕಟ್ಟಿದ ತಂಡದಲ್ಲೂ ಶ್ರೀಹರಿ ಇದ್ದಾರೆ.
`ಕಳ್ಳರನ್ನು ಈ ತೆಂಗಿನ ಮರಕ್ಕೆ ಕಟ್ಟಿ ಹೊಡೀತಿದ್ರು, ಇದಕ್ಕೆ ನೂರು ವರ್ಷ ದಾಟಿದೆ’ ಎಂದು ಶ್ರೀಹರಿ ತೋರಿಸುತ್ತಿದ್ದರೆ…. ಅರೆ, ನಿಮಗೆ ಕೇತಮಾರನಹಳ್ಳಿಯ ದೃಶ್ಯ ಕಾಣಿಸ್ತೀನಿ ಎಂದು ಹಳೆ ಬಾಗಿಲುಗಳನ್ನು ದಾಟುತ್ತ ನಡೆದವರು ಅವರ ಪತ್ನಿ ಪರಿಮಳ…
ಗೋಧೂಳಿಯ ತಾರಸಿಯಿಂದ ಕೇತಮಾರನಹಳ್ಳಿಯ ಪುಟ್ಟ ದೃಶ್ಯ ಕಣ್ಣಿಗೆ ಎಟಕುತ್ತದೆ. ಅಲ್ಲಿರೋದೇ ಹಳೆ ಆಲದ ಮರ… ಅಲ್ಲಿ ಮಲ್ಲೇಶ್ವರ ಎಷ್ಟು ಸೊಗಸಾಗಿ ಕಾಣ್ತಾ ಇತ್ತು…. ಈಗ ನೋಡಿ ಎಲ್ಲೆಲ್ಲೂ ಕಾಂಕ್ರೀಟ್ ಕಟ್ಟಡಗಳು ಎದ್ದುಬಿಟ್ಟಿವೆ… ಈ ಮನೆ ಎದುರಿಗೆ ಇರೋದೆಲ್ಲಾ ರಾಗಿ, ಜೋಳದ ಹೊಲಗಳು….
ಎಲ್ಲಿದೆ ಎಂದು ಈ ಲೇಖಕ ನೋಡಲು ಯತ್ನಿಸಿದರೆ  ಮತ್ತೆ ಆದೆ ಕಾಂಪೌಂಡುಗಳು, ಮನೆಗಳು…..ಸೈಟುಗಳು…. ಕಾಂಪ್ಲೆಕ್ಸ್‌ಗಳು…. ಕೇತಮಾರನಹಳ್ಳಿಯ ಪುಟ್ಟ ಚೂರಿನಲ್ಲಿ ಅದೇ ಹಳೆಯ ಮನೆಯನ್ನೇ ಸಿಂಗರಿಸಿಕೊಂಡ ಶ್ರೀಹರಿ… ನೂರು ವರ್ಷಗಳ ಮನೆಯಲ್ಲೇ ಸೊಗಸಾಗಿ ಬದುಕುತ್ತಿರುವ ………….. ಪಕ್ಕದಲ್ಲೇ ಶಾಂತ ನಗು ಬೀರುತ್ತಿರುವ ವರದರಾಜಸ್ವಾಮಿ…
ಬೆಂಗಳೂರು ಈಗ ಬೃಹನ್ ಬೆಂಗಳೂರು ಆಗುತ್ತಿರೋ ಈ ಹೊತ್ತಿನಲ್ಲಿ, ಬೆಂಗಳೂರಿನಲ್ಲಿ ಮೆಟ್ರೋ ರೈಲಿಗಾಗಿ ಭೂಮಿ  ಅಗೆಯುತ್ತಿರೋ ಈ ಕ್ಷಣದಲ್ಲಿ, ದೇಶದ ಸಿಲಿಕಾನ್ ಕಣಿವೆಯಾಗಿ ಮೆರೆಯುತ್ತಿರೋ ಈ ಸಂದರ್ಭದಲ್ಲಿ ಕೇತಮಾರನಹಳ್ಳಿ ಕೊನೇಪಕ್ಷ ಒಂದುಬ್ಲಾಕ್ ಆಗಿದೆಯಲ್ಲ ಎಂದು ಖುಷಿಪಡಬೇಕು ಅಷ್ಟೆ!

Feature article published in Udayavani Yugadi Special Issue 2007

Share. Facebook Twitter Pinterest LinkedIn Tumblr Email
Previous Articleಶಂಕರನಾರಾಯಣನ ಸೈಕಲ್ಲು ಪುರಾಣ
Next Article ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.