Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»ಬ್ಯಾಲಾಳು ಮತ್ತು ಬಿಳಲು
ಕಲಿ ಯುಗ

ಬ್ಯಾಲಾಳು ಮತ್ತು ಬಿಳಲು

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 1, 2008Updated:May 19, 20251 Comment3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
 

ಎಲ್ಲದಕ್ಕೂ ಒಂದು ಕೊನೆ ಇರಲೇಬೇಕು ಅಲ್ವೆ? ಕಲಿ-ಯುಗ ಅಂಕಣಕ್ಕೂ ಇಂದೇ ಕೊನೆ! ’ಉದಯವಾಣಿ’ಯಲ್ಲಿ ಕಳೆದ ಒಂದೂಕಾಲು ವರ್ಷದಿಂದ ಮೂಡಿದ ಕಲಿ-ಯುಗ ಅಂಕಣವನ್ನು ಖುಷಿಯಿಂದಲೇ ನಿಲ್ಲಿಸುತ್ತಿದ್ದೇನೆ. ಕೆಲಸ ಬಿಡುವಾಗ ಖುಷಿಪಡಿ ಎಂದ ನಾನು ನನ್ನ ಅಂಕಣ ನಿಲ್ಲಿಸುವಾಗ ಬೇಜಾರಾಗೋದು ಪಾಸಿಟಿವ್ ಬದುಕಿನ ಲಕ್ಷಣವಲ್ಲ ಅಲ್ವೆ? 

ಉದಯವಾಣಿಯಲ್ಲಿ ಬಂದ ನನ್ನ ಲೇಖನಗಳನ್ನು ಓದಿದ ಹಲವರು ನನ್ನನ್ನು ಈಗಲೂ ಬೇರೆ ಬೇರೆ ಸಂದರ್ಭಗಳಲ್ಲಿ ಸಂಪರ್ಕಿಸುತ್ತಿದ್ದಾರೆ; ಮಾಹಿತಿ ಕೇಳುತ್ತಿದ್ದಾರೆ. ಎರಡು ವಾರದ ಹಿಂದೆ ಬಂದ ನಡಹಳ್ಳಿ ಅನಂತಜ್ಜನ ಬಹುಮುಖ ಪ್ರತಿಭೆಯ ಲೇಖನವನ್ನು ಓದಿದ ಅವರ ಮಗನೇ ನನಗೆ ಫೋನ್ ಮಾಡಿ ಖುಷಿಪಟ್ಟಿದ್ದಾರೆ (ಸದ್ಯ ತಪ್ಪೇನೂ ಬರೆದಿಲ್ಲವಲ್ಲ ಎಂದು ನನಗೂ ಸಮಾಧಾನವಾಯ್ತು!). ನನ್ನ ಕಂಪ್ಯೂಟರ್ ಕಡತ ಹಂಚಿಕೆ (ಪಿ೨ಪಿ) ಲೇಖನವಂತೂ ಹಲವರಿಗೆ ಮಾಹಿತಿಯ ಹೆದ್ದಾರಿಯನ್ನೇ ತೋರಿಸಿದೆ. ತದಡಿ ಯೋಜನೆ ವಿರುದ್ಧ ಬರೆದ ಎರಡೂ ಲೇಖನಗಳನ್ನು ಹಲವು ಪತ್ರಕರ್ತರಿಗೆ, ಮಿತ್ರರಿಗೆ ಕಳಿಸಿಕೊಟ್ಟಾಗ ಎಲ್ಲರೂ ಯೋಜನೆಯನ್ನು ವಿರೋಧಿಸುವ ಹೋರಾಟ ಸರಿ ಎಂದು ತಮ್ಮ ಬೆಂಬಲ ಘೋಷಿಸಿದ್ದಾರೆ. ಈ ತಿಂಗಳಷ್ಟೇ ಬೆಂಗಳೂರಿಗೆ ಬಂದು ಕೆಲಸ ಸೇರಿದ ನನ್ನ ಫ್ಯಾನ್ ಈಗಷ್ಟೇ ಈ ಮೈಲ್ ಕಳಿಸಿ ಇಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಅದಿರಲಿ, ನನ್ನ ಕೆಲಸ ಬಿಡುವ ಲೇಖನವನ್ನು ಓದಿದ ಒಬ್ಬ ಯುವಕ ’ನನ್ನ ಜೀವ ಉಳಿಸಿದ್ರಿ ಸಾರ್’ ಎಂದು ಥ್ಯಾಂಕ್ಸ್ ಹೇಳಿದ್ದನ್ನು ನಾನು ಮರೆಯೋದು ಸಾಧ್ಯವೆ? 

 
32 m diameter antenna in its final stages of fabrication for IDSN
32 m diameter antenna in its final stages of fabrication for IDSN

ಈಗ ಅಂಕಣವಷ್ಟೇ ನಿಂತಿದೆಯೇ ಹೊರತು ಕಲಿಯುವ ತವಕಕ್ಕೆ ಕೊನೆಯಾಗಿಲ್ಲ! ನಾನಾಗಲೀ, ನೀವಾಗಲೀ, ಕಲಿಯುವುದನ್ನು ನಿಲ್ಲಿಸಿದ ಕ್ಷಣದಲ್ಲಿ ಎಲ್ಲೋ ಏಕತಾನತೆ ಇದೆಯಲ್ಲ ಎಂಬ ಬೇಜಾರಿಗೆ ಸಿಲುಕುತ್ತೇವೆ. ನೋಡಿ, ಕಲಿಯುಗ ಅಂಕಣ ಚಿರಂತನವಾಗಿ ಬರುವುದೂ ಏಕತಾನತೆಯೇ! ಎಂಥ ಪ್ಯಾರಾಡಾಕ್ಸ್ ಅಲ್ಲವೆ?

ಇಷ್ಟು ದಿನ ಈ ಅಂಕಣ ಓದಿದ ನೀವು ಕೆಲವೊಮ್ಮೆ ಮೌನವಾಗಿಯೋ, ಕೆಲವೊಮ್ಮೆ ಈ ಮೈಲ್ ಮೂಲಕವೋ ಮಾತಾಡಿದ್ದೀರಿ. ನಾನು ಸಾಮಾನ್ಯವಾಗಿ ಬಂದೆಲ್ಲ ಪತ್ರಗಳಿಗೂ ಉತ್ತರಿಸಿದ್ದೇನೆ. ಒಬ್ಬರಿಗೆ ಒಂದಷ್ಟು ಮಕ್ಕಳ ಸಿನೆಮಾ ಕಳಿಸ್ತೀನಿ ಎಂದಿದ್ದೆ. ಖಂಡಿತ ಅವರು ಕಾಯಬಹುದು! 

ಸಂಗೀತದಿಂದ ಹಿಡಿದು ವಿಜ್ಞಾನದವರೆಗೆ, ಸಾಹಿತ್ಯದಿಂದ ಹಿಡಿದು ಬದುಕಿನ ಕಲಿಕೆಯ ಸಾಧನಗಳವರೆಗೆ, ಮಾಹಿತಿಯಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ ಒಂದಷ್ಟು ಬರೆದು ನಿಮ್ಮ ಬದುಕಿನಲ್ಲಿ ಕೊಂಚ ಬದಲಾವಣೆ ಮಾಡಲು ಯತ್ನಿಸಿದ್ದೇನೆ. ಈ ಬದಲಾವಣೆಯ ಯತ್ನದಲ್ಲಿ ನಾನೂ ನಿಮ್ಮಂತೆಯೇ ಬದಲಾಗಿದ್ದೇನೆ. ಕಲಿ-ಯುಗದಲ್ಲಿ ಬದಲಾವಣೆ ನಿರಂತರ; ಚಿರಂತನ. 

ಹಾಗೆ ನೋಡಿದರೆ ಕಪ್ಪೆಗಳೂ ನಾಗರಿಕತೆಯ ದಟ್ಟ ಬದುಕು ಆವರಿಸಿಕೊಂಡು ಮರಗಳು ಕಡಿಮೆಯಾದಂತೆ ತಮ್ಮ ಕೈಗವಚಗಳನ್ನೇ ಬದಲಾಯಿಸಿಕೊಂಡ ಉದಾಹರಣೆಯನ್ನು ನಮ್ಮ ಜೀವವಿಜ್ಞಾನಿಗಳು ಕೊಡುತ್ತಾರೆ. ನಾವೇನು ಮಹಾ… 

ನಾನು ಈ ಅಂಕಣದಿಂದ ಹೀಗೆ ವಿರಮಿಸಿದ ಮೇಲೆ ಸುಮ್ಮನೆ ಕೂಡುವ ಪೈಕಿ ಅಲ್ಲ! ನನ್ನ ಜಾಲತಾಣ ಈಗ ಸಜ್ಜಾಗ್ತಾ ಇದೆ. ಅದನ್ನು ನಾನು ಇನ್ನಷ್ಟು ಸುಂದರಗೊಳಿಸುವ, ಸಮೃದ್ಧಗೊಳಿಸುವ ಯತ್ನದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವೆ. ಯಾಕೆಂದರೆ ನಾನು ಅಲ್ಲಿ ಬೇಕೆಂದಾಗ ಬರೆಯಬಹುದು; ಬರೆದ ಕ್ಷಣವೇ ಪ್ರಕಟಿಸಿಬಹುದು! ಮುದ್ರಣ ಮಾಧ್ಯಮದಲ್ಲಿ ಸಿಗುವ ಶ್ರೀಸಾಮಾನ್ಯರು ಅಲ್ಲಿ ಹೆಚ್ಚಾಗಿ ಸಿಗುವುದಿಲ್ಲ ಎಂಬುದೇನೋ ನಿಜ. 

 

Doda Alada Mara (Giant Banyan Tree) in Ramohalli near Bangalore, Karnataka, India taken by User:BostonMA in August 2003
Doda Alada Mara (Giant Banyan Tree) in Ramohalli near Bangalore, Karnataka, India taken by User:BostonMA in August 2003
 
 

ಬದುಕಿನಲ್ಲಿ ಕಲ್ಪನೆಗಿಂತ ವಾಸ್ತವವೇ ಭೀಕರ ಎಂಬ ಮಾತು ನನ್ನದು. ಮುಂಬಯಿಯಲ್ಲಿ ಉಗ್ರರ ಅಟ್ಟಹಾಸ ಇದಕ್ಕೊಂದು ತಾಜಾ ನಿದರ್ಶನ. ನನ್ನ ಭ್ರಮಾಧೀನ ಜಗತ್ತಿನ ಅನುಭವವೂ ಇದನ್ನೇ ಹೇಳುತ್ತದೆ. ಭೌತಿಕ ಬದುಕಿನಲ್ಲಿ ಎದುರಾಗುವ ಆತಂಕಗಳನ್ನು ನೀವು ಕಲ್ಪನೆ ಮಾಡುವುದಕ್ಕೂ ಸಾಧ್ಯವಿಲ್ಲ. ಕ್ಯಾಂಬೋಡಿಯಾದಲ್ಲಿ ಕ್ಮೆರೂ ನಡೆಸಿದ ನರಮೇಧವನ್ನು, ಚೀನಾದಲ್ಲಿ ಮಾವೋ ಏಳು ಕೋಟಿ ಜನರನ್ನು ಐದಾರು ದಶಕಗಳ ಕಾಲ ನಿರಂತರವಾಗಿ ಕೊಂದಿದ್ದನ್ನು, ಸುಡಾನಿನಲ್ಲಿ ಈಗಲೂ ನಡೆಯುತ್ತಿರೋ ಮಾರಣಹೋಮವನ್ನು, ಗ್ವಾಂಟೆನಾಮೋ ಬಂದೀಖಾನೆಯಲ್ಲಿ ಈಗಲೂ ಹೂತುಹೋಗಿರುವ ಮಾನವ ಹಕ್ಕುಗಳನ್ನು ನಾವು ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ. ಮನುಷ್ಯನೇ ಇಷ್ಟೆಲ್ಲ ಭೀಕರತೆಗೆ ತುತ್ತಾಗಿರುವಾಗ ವಸುಂಧರೆಯ ಜಲಚರಗಳ ಬಗ್ಗೆ ಮಾತನಾಡುವುದಕ್ಕೇ ಭಯವಾಗುತ್ತದೆ! 

ಇಷ್ಟಾಗಿಯೂ ಮೊನ್ನೆ ಅಚಾನಕ್ಕಾಗಿ ಬಂದ  ವಿಚಿತ್ರ ಹುಳವೊಂದನ್ನು ಮೆತ್ತಗೆ ಕಿಟಕಿಯಿಂದ ತಳ್ಳಿ ಸಮಾಧಾನಪಟ್ಟೆ. ಅದರ ಚಿತ್ರಗಳನ್ನು ತೆಗೆಯಲು ಮರೆಯಲಿಲ್ಲ. ಮನೆಯೊಳಗೆ ಬಂದ ಮಂಗಕ್ಕೆ ಕೇವಲ ಬಾಳೆಹಣ್ಣು, ಶೇಂಗಾ ಬೀಜವೇ ಸಿಗುತ್ತದೆ ಎಂದು ಈಗಲೂ ಅಚ್ಚರಿಯಿಂದ ನೋಡುತ್ತೇನೆ. ನಕ್ಷತ್ರದ ಹಾಗೋ, ಜ್ಯಾಮಿತಿಯ ಕರಾರುವಾಕ್ಕಾದ ಗೆರೆಗಳನ್ನು ಯಾರೋ ಕಂಪ್ಯೂಟರಿನಲ್ಲಿ ಬರೆದ ಹಾಗೋ ಅರಳಿದ ಹೂವುಗಳನ್ನು, ಮೇಲೆದ್ದ ಎಲೆಗಳನ್ನು ನೋಡುತ್ತ ಬೆರಗಾಗುತ್ತೇನೆ. ಹಾಗಾದರೆ ಜೇಡ ಕಟ್ಟುವ ಬಲೆಗೆ ಅಳತೆ ಹೇಳಿಕೊಟ್ಟವರಾರು ಎಂದು ನನಗೆ ಈಗಲೂ ಗೊತ್ತಾಗಿಲ್ಲ. ಅನಾನಸಿನ ಮೇಲೆ ಗಣಿತದ ಕ್ಲಿಷ್ಟ ಫಿಬೋನಾಚಿ ಸರಣಿಯಂತೆ ಎಳೆದೆಳೆದ ಚೌಕಗಳು ಕಾಣಿಸಿಕೊಳ್ಳುತ್ತವೆ! ಮಜಾ ಅಂದ್ರೆ ಇಷ್ಟೆಲ್ಲ ಮುಂದುವರಿದ ನಮ್ಮ ಮನುಕುಲಕ್ಕೆ ರಾತ್ರೋರಾತ್ರಿ ಒಂದು ಮೊಳಕೆ ಒಡೆಯುವ ಗುಟ್ಟಿನ ಅನುಕರಣೆಯೂ ಸಾಧ್ಯವಾಗಿಲ್ಲ; ದೊಡ್ಡ ಮರವನ್ನು ನಾವಾಗೇ ಬೆಳೆಸುವುದಂತೂ ದೂರದ ಮಾತು. ಅವೆಲ್ಲ ಅದಾಗೇ ಆಗಬೇಕು. 

 

ದೊಡ್ಡ ಆಲದ ಮರಗಳ ಬಿಳಲುಗಳನ್ನು ದಾಟಿಯೇ ಚಂದ್ರಯಾನದ ನಿಯಂತ್ರಣ ಕೇಂದ್ರ ಬ್ಯಾಲಾಳುವಿಗೆ ಹೋಗಬೇಕು! ಆ ಆಲದ ಮರವನ್ನು ನೋಡಿದರೆ ನಿಮಗೆ ಜೀವಜಾಲದ ಒಂದು ಪುಟ್ಟ ವಿಶ್ವರೂಪ ಕಾಣುತ್ತದೆ. ಚಂದ್ರನನ್ನು ತಿಳಿಯುವ ದಾಪುಗಾಲಿನ ಕೆಳಗೆ ಎಷ್ಟೋ ಪುಟ್ಟ ಪುಟ್ಟ ಬದುಕುಗಳು ಅಡಗಿವೆ. ಮರೆತಿದ್ದೇ ಆದರೆ ನಾವು ಈ ವಸುಂಧರೆಯಿಂದ ಗಂಟು ಮೂಟೆ ಕಟ್ಟಬೇಕಾಗುತ್ತದೆ. ನಮ್ಮ ಬದುಕಿನ ಪರಂಪರೆ, ನಮ್ಮ ದೇಸಿ ಜೀವನಪದ್ಧತಿ, ನಮ್ಮ ಪಾರಂಪರಿಕ ಕಲಿಕೆಯ ಮನಸ್ಸು – ಎಲ್ಲ ಬಿಳಲುಗಳನ್ನೂ ಹರಡಿಕೊಂಡು ಬದುಕುವಲ್ಲಿ ಅರ್ಥವಿದೆ. 

ಕಲಿಯುವ ಹಾದಿಯಲ್ಲಿ ಏನೇನೋ ಇದೆ ಎಂದು ನನಗೆ ಅನ್ನಿಸುತ್ತಲೇ ಇರುತ್ತದೆ; ಅದಕ್ಕೇ ಇಷ್ಟೆಲ್ಲ ಬರೆದೆ. ಇಂಥ ಹಲವು ಅನುಭವಗಳನ್ನು ಹಂಚಿಕೊಳ್ಳಲು ಜೊತೆಗಿದ್ದ ನಿಮಗೆಲ್ಲ ನನ್ನ ವಂದನೆಗಳು. ’ಉದಯವಾಣಿ’ಯ ಸಂಪಾದಕೀಯ ಬಳಗಕ್ಕೆ ನನ್ನ ಅಭಿವಂದನೆಗಳು. 

ಗಮನಿಸಿ: ನೀವು ಮಾಹಿತಿ ಕೋರಿ ಕಾಗದ ಹಾಕಬಹುದು.

Share. Facebook Twitter Pinterest LinkedIn Tumblr Email
Previous ArticleDNA Bangalore : Double subscription attempts, no paper yet!!
Next Article ಶೂನ್ಯಗಳ ಕುರಿತು
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ

November 24, 2008

1 Comment

  1. Anonymous on January 5, 2010 8:52 pm

    Your articles were very impressive.we miss a lot in Udayavani.Is there any chance to download all the Kaliyuga articles? Please keep writing

ಕಲಿ ಯುಗ
  • Try these essential Desktop tools!
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ವರ್ತಮಾನದ ಹೊಸ ವಾರ್ತೆಗಳು
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • Ayahuasca: Your future was known much ealrier!
  • New dimensions of the media
  • This journalist disrespects even the Supreme Court
  • Blogging and hanging
  • Your PC and the virus that you let in
  • Sunday Supplements and development of Literature
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • A slow Tsunami called civilization
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
  • The policy of my column
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.