Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»A slow Tsunami called civilization
ಕಲಿ ಯುಗ

A slow Tsunami called civilization

ಬೇಳೂರು ಸುದರ್ಶನBy ಬೇಳೂರು ಸುದರ್ಶನFebruary 16, 2008Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನಾಗರಿಕತೆಯೆಂಬ ನಿಧಾನ ಸುನಾಮಿ

ಸುನಾಮಿ ಎಂಥ ದುರಂತ ಎಂದು ಈಗಲೂ ನಾವೆಲ್ಲ ನೆನಪಿಸಿಕೊಳ್ಳುತ್ತಿರುತ್ತೇವೆ. ಆದರೆ ಅಂಡಮಾನಿನ ಒಂಗೆ ಬುಡಕಟ್ಟು ಜನರಿಗೆ ಸುನಾಮಿಯ ಅರಿವು ಮುಂಚಿತವಾಗಿಯೇ ಆಗಿತ್ತೆಂದೂ, ಅವರೆಲ್ಲ ಎತ್ತರದ ನೆಲೆಗೆ ಹೋಗಿ ರಕ್ಷಿಸಿಕೊಂಡರೆಂದೂ ನಾವು ಸುದ್ದಿ ಕೇಳಿದ್ದೇವೆ. ಆದರೆ ಅವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದೂ ನಮಗೆ ಗೊತ್ತಿರಬೇಕು. ಹತ್ತಾರು ಸಾವಿರ ವರ್ಷಗಳಿಂದ ಈ ಬುಡಕಟ್ಟಿನ ಜನ ಇಲ್ಲಿಯೇ ವಾಸವಾಗಿದ್ದರು. ಬ್ರಿಟಿಶರು ಈ ದ್ವೀಪಸಮೂಹವನ್ನು ಆಕ್ರಮಿಸಿಕೊಂಡು ವಸಾಹತು ಸ್ಥಾಪಿಸಿದ ನಂತರ ಕೇಳಬೇಕೆ? ಕಾಯಿಲೆ ಕಸಾಲೆಗಳು ಮುತ್ತಿಕೊಂಡು ಜನ ಸಾಯತೊಡಗಿದರು. ಸೆಂಟಿನೆಲೀಯರು ಮಾತ್ರ ಹೆಚ್ಚಾಗಿ ಬದುಕುಳಿದಿದ್ದಾರೆ. ಗ್ರೇಟ್ ಅಂಡಮಾನೀಸ್ ಜನಸಂಖ್ಯೆ ೫೩ ದಾಟುತ್ತಿಲ್ಲ. ಒಂಗೆ ಜನಸಂಖ್ಯೆ ೧೯೦೦ರಲ್ಲಿ ೬೭೦ ಇದ್ದಿದ್ದು ೧೯೯೧ರಲ್ಲಿ ೭೬ಕ್ಕೆ ಇಳಿದಿತ್ತು. ಇಲ್ಲಿಯೇ ಇರುವ ಜರಾವಾ ಬುಡಕಟ್ಟಿನ ಕಥೆಯೂ ಇಂಥದ್ದೇ.
ಇಂಥ ಹತ್ತಾರು ಕಥೆಗಳನ್ನು ಸರ್ವೈವಲ್ ಇಂಟರ್‌ನ್ಯಾಶನಲ್ ಎಮಬ ಸಂಘಟನೆ ತನ್ನ ಇತ್ತೀಚೆಗಿನ ವರದಿ – “ ಪ್ರೋಗ್ರೆಸ್ ಕೆನ್ ಕಿಲ್" ಯಲ್ಲಿ ಸಚಿತ್ರವಾಗಿ ವರದಿ ಮಾಡಿದೆ. ಈ ವರದಿಯನ್ನು ನೀವು ಯಾವುದೋ ಹಿಡನ್ ಅಜೆಂಡಾ ಎಂದು ಅಕಸ್ಮಾತ್ ಪರಿಗಣಿಸಿದರೂ ಪರವಾಗಿಲ್ಲ; ಒಮ್ಮೆ ಓದಿ. ಈ ವರದಿಯ ಕೆಲವು ಆರಿಸಿದ ಮಾಹಿತಿಗಳು ಇಲ್ಲಿವೆ:
ಆಸ್ಟ್ರೇಲಿಯಾದಲ್ಲಿ ಅಲ್ಲಿನ `ನಾಗರಿಕ'ರಿಗಿಂತ ಮೂಲನಿವಾಸಿಗಳಲ್ಲಿ ಮಧುಮೇಹದಿಂದ ಸಾಯುವ ಸಾಧ್ಯತೆ ೨೨ ಪಟ್ಟು ಹೆಚ್ಚು.
ನ್ಯೂಝೀಲ್ಯಾಂಡಿನಲ್ಲಿ ಮಾವೋರಿ ನಿವಾಸಿಗಳು ತಮ್ಮ ನೆರೆಹೊರೆಯವರಿಗಿಂತ ಸರಾಸರಿ ೯-೧೦ ವರ್ಷ ಮುಂಚಿತವಾಗಿಯೇ ಸಾಯುತ್ತಾರೆ. ಆದರೆ ಮೂಲಸ್ಥಾನದಲ್ಲಿಯೇ ವಾಸಿಸುತ್ತಿರುವವರು ಉಳಿದವರಿಗಿಂತ ೧೦ ವರ್ಷ ಕಳೆದೇ ಸಾಯುತ್ತಾರೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಹ್ಯೂಮನ್ ಡೆವೆಲಪ್‌ಮೆಂಟ್ ಇಂಡೆಕ್ಸ್) ಆಸ್ಟ್ರೇಲಿಯಾಗೆ ಪ್ರಥಮ ಸ್ಥಾನವಿದೆ. ಆದರೆ ಅಲ್ಲಿನ ಮೂಲನಿವಾಸಿಗಳು ನಾ&#322
3;
ರಿಕರಿಗಿಂತ ೮ ಪಟ್ಟು ಹೆಚ್ಚು ಪ್ರಮಾಣದಲ್ಲಿ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆರು ಪಟ್ಟು ಹೆಚ್ಚು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ೨೩ ಪಟ್ಟು ಹೆಚ್ಚು ಪ್ರಮಾಣದಲ್ಲಿ ಮೂತ್ರಪಿಂಡ ಸಮಸ್ಯೆಯನ್ನು ಅನುಭವಿಸುತ್ತಾರೆ.
ಅಂಡಮಾನಿನಲ್ಲಿ ಹುಟ್ಟುವ ೧೫೦ ಮೂಲನಿವಾಸಿ ಮಕ್ಕಳಲ್ಲಿ ಇಬ್ಬರು ಉಳಿದುಕೊಂಡರೆ ಹೆಚ್ಚು.
ದಕ್ಷಿಣ ಅಮೆರಿಕಾದ ಬೇಟೆಗಾರ ಮೂಲನಿವಾಸಿಗಳ ಆಹಾರದಲ್ಲಿ ಪಿಷ್ಟ, ನಾರು, ಜೀವಸತ್ವ, ಖನಿಜ ಪದಾರ್ಥಗಳು ಹೆಚ್ಚಾಗಿರುತ್ತವೆ. ಇದೀಗ ಪರಿಸರ ಮಾಲಿನ್ಯದಿಂದ ಇಂಥ ಪೌಷ್ಟಿಕ ಆಹಾರಕ್ಕೆ ಧಕ್ಕೆ ಒದಗಿದೆ.
ಬಹುಬಗೆಯ ಮೆಕ್ಕೆಜೋಳವನ್ನು ಬೆಳೆಯುತ್ತಿದ್ದ ಬ್ರೆಝಿಲಿನ ಕ್ರಾಹೋ ಮೂಲನಿವಾಸಿಗಳು ಈಗ ಜೋಳವನ್ನೇ ಬಹುತೇಕ ಮರೆತಿದ್ದಾರೆ.
ಕೆನಡಾದ ಇನ್ನು ಮೂಲನಿವಾಸಿಗಳು ತಮ್ಮ ಬದುಕಿಗಾಗಿ ಸದಾ ಪ್ರಯಾಣಿಸುತ್ತಲೇ ಇದ್ದವರು. ಅವರೆಲ್ಲ ಇನ್ನುಮುಂದೆ ನಿಶ್ಚಿತ ಸ್ಥಳದಲ್ಲೇ ಬದುಕಬೇಕು ಎಂದು ಕೆನಡಾ ಸರ್ಕಾರವು ಆದೇಶಿಸಿದ ಪರಿಣಾಮವಾಗಿ ಅಂಗಡಿ ಆಹಾರಕ್ಕೇ ಮೊರೆ ಹೋಗಬೇಕಾಯಿತು. ಪ್ರತಿವರ್ಷ ಸರಕು ಹೊತ್ತುಕೊಂಡು ಸರಾಸರಿ ೨೦೦೦ ಕಿಲೋಮೀಟರ್ ನಡೆಯುತ್ತಿದ್ದ ಇವರೆಲ್ಲ ವ್ಯಾಯಾಮ ಕಡಿಮೆಯಾಗಿ ಬೊಜ್ಜಿನಿಂದ ಬಳಲುತ್ತಿದ್ದಾರೆ.
ಅರ್ಜೆಂಟೈನಾ ಮತ್ತು ಬ್ರೆಝಿಲ್ ದೇಶಗಳಲ್ಲಿ ಇರುವ ಗುವಾರಾನಿ ಮೂಲನಿವಾಸಿಗಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ೨೦೦೫ರ ಹೊತ್ತಿಗೆ ಇಗುವಾಕು ಪ್ರದೇಶದ ಗುವಾರಾನಿ ನಿವಾಸಿಗಳ ಶೇ. ೬೦ರಷ್ಟು ಮಕ್ಕಳು ಆಹಾರದ ಕೊರತೆಗೆ ತುತ್ತಾಗಿದ್ದರು.
೧೯೮೫ರಿಂದ ೨೦೦೦ದ ಅವಧಿಯಲ್ಲಿ ೩೦೦ಕ್ಕೂ ಹೆಚ್ಚು ಗುವಾರಾನಿ – ಕಾಯಿಯೋವಾ ಮೂಲನಿವಾಸಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಒಂಬತ್ತರ ಹರೆಯದ ಲೂಸಿಯಾನಾ ಓರ್ಟಿಜ್ ಕೂಡಾ ಒಬ್ಬಳು. ಕಾಡಿನ ಕನಸಿನಲ್ಲೇ ಮೈಮರೆತು ಕಾಡಿಲ್ಲದೆ ಬದುಕಲಾಗದೆ ಇವರೆಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ. ಕಾಡಿನಲ್ಲಿ ಅಲೆದಾಡಿ, ಅಲ್ಲಿರುವ ಹ&amp
;#32
35;್ಣುಗಳನ್ನು ತಿಂದು, ಜೇನು ಕುಡಿಯುವ ಸವಿನೆನಪಿನಲ್ಲೇ ಈ ಜನ ಸತ್ತುಹೋಗುತ್ತಿದ್ದಾರೆ.
ಪಾಪುವಾ ದ್ವೀಪದಲ್ಲಿ ೨೦೦೪ರ ಹೊತ್ತಿಗೆ ೬೦ ಸಾವಿರ ಜನರಿಗೆ ಏಡ್ಸ್ ರೋಗ ತಗುಲಿತ್ತು.
ಬೋಟ್ಸ್‌ವಾನಾದಲ್ಲಿರುವ ಬುಡಕಟ್ಟು ಜನರಿಗೆ ಏಡ್ಸ್ ಬರುವುದೇ ಇಲ್ಲ ಎಂಬ ಮಾತೂ ಸುಳ್ಳಾಗಿ ಅವರೂ ಈಗ ಈ ರೋಗಕ್ಕೆ ತುತ್ತಾಗಿದ್ದಾರೆ.
ಅಂಡಮಾನಿನಲ್ಲಿ ಹೆದ್ದಾರಿಯೊಂದು ಬಂದು ಮೂಲನಾಡನ್ನೆಲ್ಲ ನಾಶ ಮಾಡಿದೆ. ಈ ರಸ್ತೆಯ ಬಗ್ಗೆಯೇ ಭಾರೀ ಚರ್ಚೆ ನಡೆದದ್ದು ಈಗ ಇತಿಹಾಸ. ಇಂಥ ಅಭಿವೃದ್ಧಿ ಕಾರ್ಯಗಳು ನಮ್ಮ ಮೂಲನಿವಾಸಿಗಳನ್ನು ದರದರ ಎಳೆದು ಹೆದ್ದಾರಿಗೋ, ಭಾರೀ ಸಾಧನ ಸಲಕರಣೆಗಳಿರುವ ಆಸ್ಪತ್ರೆಗೋ, ಸರಕಾರಿ ಕಛೇರಿಗೋ, – ಎಲ್ಲೆಲ್ಲಿಗೋ ತಂದಿವೆ. ನಮ್ಮ ರಾಜ್ಯದ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಇರುವ ಹತ್ತಾರು ಮೂಲನಿವಾಸಿಗಳ ಕುಟುಂಬಗಳು ಇಂದು ಬದಲಾವಣೆಯ ಕವಲುದಾರಿಯಲ್ಲಿ ಕ್ಷಮಿಸಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ. ಪ್ರಗತಿ ಕೊಲ್ಲುತ್ತದೆ ಎಂದು ಸರ್ವೈವಲ್ ಇಂಟರ್‌ನ್ಯಾಶನಲ್‌ನ ವರದಿ ಹೇಳಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ.
ನಾಗರಿಕತೆಯ ಹೆಸರಿನಲ್ಲಿ ಇವರನ್ನೆಲ್ಲ ಬದಲಾವಣೆ – ತಂತ್ರeನ ಮುಂತಾದ ಭೂತಗಾತ್ರದ ಒರೆಸುಯಂತ್ರಗಳಿಂದ ಸಂಪೂರ್ಣ ಒರೆಸಬೇಕೆ? ಪ್ರಜಾಪ್ರಭುತ್ವದ ಹೆಸರಿನಲ್ಲೋ, ಬಂಡವಾಳದ ನೆಪದಲ್ಲೋ ಬಯಲಿಗೆ ತಂದು ಅವರ ಮುಜುಗರವನ್ನು ನೋಡಿ ಮಹಾನ್ ಸಮಾಜಸೇವಕರಂತೆ ಕನಿಕರ ಪಡಬೇಕೆ?
ಅರೆ, ಅವರಿಗೂ ರಸ್ತೆ, ದೀಪ, ಮನೆ, ಔಷಧ ಕೊಟ್ಟರೆ ತಪ್ಪೇನು? ಅವರೂ ಈ ಜಗತ್ತಿನಲ್ಲಿ ಖುಷಿಯಿಂದ ಇರಕೂಡದೆ? – ಈ ಪ್ರಶ್ನೆಯೂ ಸಹಜ.
ಹಣಕಾಸಿನ ವಿಷಯದಲ್ಲಿ ಇಂಥ ಮೂಲನಿವಾಸಿಗಳು ನಮಗಿಂತ ಎಷ್ಟೋಪಟ್ಟು ದುರ್ಬಲರು ಎಂಬುದೇನೋ ನಿಜ. ಆದರೆ ಸುಖದ ವಿಷಯಕ್ಕೆ ಬಂದರೆ ಅವರಿಗಿಂತ ಸುಖಜೀವಿಗಳು ಸಿಗುವುದೇ ಇಲ್ಲ. ಫೋರ್ಬಿಸ್ ಮ್ಯಾಗಜಿನ್ ಪಟ್ಟೀಕರಿಸಿದ ೪೦೦ ಜನ ಅತಿ ಶ್ರೀಮಂತರು ಈಗ ಅನುಭವಿಸುತ್ತಿರುವ ಹಿತ, ಸಮಾಧಾನ, ಸಂತೃಪ್ತಿಯನ್ನೇ ಸಾಂಪ್ರದಾಯಿಕ ಮಾಸಾ

ಯಿ ಮೂಲನಿವಾಸಿಗಳು ಅನುಭವಿಸುತ್ತಿದ್ದಾರೆ ಎಂಬುದನ್ನೂ ಸಮೀಕ್ಷೆಗಳು ಕಂಡುಕೊಂಡಿವೆ. ಸುಖದ ಮೂಲ ಹಣದಲ್ಲಿಲ್ಲ, ನಮ್ಮೊಳಗಿನ ಆನಂದದಲ್ಲಿದೆ ಎಂದು ಈ ಮೂಲನಿವಾಸಿಗಳೂ ನಮಗೆ ತಿಳಿಹೇಳುತ್ತಿದ್ದಾರೆ!
ಮೂಲನಿವಾಸಿಗಳು ಇದ್ದಲ್ಲಿ ಖನಿಜವಿದೆ, ಭಾರೀ ಮರಗಳಿವೆ; ವನ್ಯ ಸಂಪತ್ತಿದೆ…. ಅಂದಮೇಲೆ ಆಕ್ರಮಣಕ್ಕೆ, ಭೂಮಿಯ ಮೇಲೊಂದು ಅತ್ಯಾಚಾರ ಎಸಗಲು ನಾಗರಿಕರಿಗೆ ಎಲ್ಲ ಕಾರಣಗಳೂ ಇವೆ.
ನಮಗೆ ಸುನಾಮಿ ಒಂದು ಭೀಕರ ಸುದ್ದಿ; ಅವರಿಗೆ ಅದು ಜೀವನದ ಒಂದು ಸಹಜ ಅನುಭವ. ಅದಕ್ಕೇ ಅವರು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದರೂ ಸುನಾಮಿಗೆ ನಾಶವಾಗಲಿಲ್ಲ. ಅಂದು ನಾವು ಕೋಟಿಗಟ್ಟಳೆ ಸಂಖ್ಯೆಯಲ್ಲಿದ್ದವರು ಕೆಲವೇ ನಿಮಿಷಗಳಲ್ಲಿ ಒಂದಷ್ಟು ಲಕ್ಷ ಜೀವಗಳನ್ನು ಕಳೆದುಕೊಂಡು ದುಃಖಿಸಿದೆವು. ಹಠಾತ್ ಜೀವನಾಶವಾದರೆ ನಾವೆಲ್ಲ ಎಷ್ಟು ರೋದಿಸುತ್ತೇವೆ…. ಎಷ್ಟೆಲ್ಲ ಮೋಂಬತ್ತಿಗಳನ್ನು ಹಚ್ಚಿ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಮಾಡುತ್ತೇವೆ.
ನಾಗರಿಕತೆಯೆಂಬ ನಿಧಾನ ಸುನಾಮಿಗೆ ಸಿಲುಕಿ ಶತಮಾನಗಳಿಂದಲೂ ಬದುಕುಳಿದವರಿಗೆ ದೀಪವೂ ಬೇಡ; ಅಭಿವೃದ್ಧಿಯೆಂಬ ಹೊಟ್ಟೆ ಹೊಡೆಯುವ, ಕುತ್ತಿಗೆ ಬಿಗಿಯುವ ಸಂಕಟವೂ ಬೇಡ.
ಸರ್ವೈವಲ್ ಇಂಟರ್‌ನ್ಯಾಶನಲ್ ವರದಿಯನ್ನು ನೀವು ನನ್ನ beಟuಡಿu.googಟeಠಿಚಿges.ಛಿom/miಣಡಿಚಿmಚಿಚಿಜhಥಿಚಿmಚಿ ಈ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

Share. Facebook Twitter Pinterest LinkedIn Tumblr Email
Previous ArticleSankranti and the light
Next Article Three MUST READ Kannada Books
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ಬ್ಯಾಲಾಳು ಮತ್ತು ಬಿಳಲು

December 1, 2008

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

Comments are closed.

ಕಲಿ ಯುಗ
  • Try these essential Desktop tools!
  • ಬ್ಯಾಲಾಳು ಮತ್ತು ಬಿಳಲು
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ವರ್ತಮಾನದ ಹೊಸ ವಾರ್ತೆಗಳು
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • Ayahuasca: Your future was known much ealrier!
  • New dimensions of the media
  • This journalist disrespects even the Supreme Court
  • Blogging and hanging
  • Your PC and the virus that you let in
  • Sunday Supplements and development of Literature
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
  • The policy of my column
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.