Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»ವರ್ತಮಾನದ ಹೊಸ ವಾರ್ತೆಗಳು
ಕಲಿ ಯುಗ

ವರ್ತಮಾನದ ಹೊಸ ವಾರ್ತೆಗಳು

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 1, 2008Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಕಲಿಯುಗ ಅಂಕಣ ಶುರುವಾಗಿ ಒಂದು ವರ್ಷ ಕಳೆದೇ ಹೋಗಿದೆ! ನನ್ನ ಅಂಕಣದ ನೀತಿಯನ್ನೇ ಮೊದಲ ಲೇಖನವಾಗಿ ಬರೆದಿದ್ದೆ. ಬಹುಶಃ ಅವೆಲ್ಲವನ್ನೂ ಪೂರೈಸಲು ಸಾಧ್ಯವಾಗಿಲ್ಲದಿರಬಹುದು; ಆದರೆ ಹಲವು ಬಾರಿ ರಾಜಕೀಯ ಮತ್ತು ವಿವಾದಾಸ್ಪದ ವಿಷಯಗಳ ಬಗ್ಗೆ ಬರೆಯುವ ಒತ್ತಡ ಒಳಗೊಳಗೇ ಮೂಡಿದ್ದರೂ, ಅವುಗಳನ್ನು ಮೀರಿ ನನ್ನ ಅಂಕಣದ ನೀತಿಯನ್ನು ಪಾಲಿಸಿದ್ದೇನೆ ಎಂಬ ಸಮಾಧಾನ ನನಗಿದೆ. ಈ ವರ್ಷ ಬರೆದ ಹಲವು ಲೇಖನಗಳು ಸಾಧಾರಣ ಮಟ್ಟದವು, ಕೆಲವು ಮಾತ್ರ ಹೆಚ್ಚು ಮಾಹಿತಿಪೂರ್ಣವಾಗಿದ್ದವು ಎಂಬ ಅರಿವೂ ನನಗಿದೆ. ಏನೇ ಇರಲಿ, ಓದುಗರಿಗೆ, ನನ್ನ ಅಂಕಣದ ಮೊದಲ ವರ್ಷದ ಶುಭಾಶಯಗಳು.
ಇನ್ನೊಂದು ಸಂತಸದ ವಿಷಯ: ಈಗ `ಕಲಿಯುಗ’ ಓದಿ ಈ ಮೈಲ್ ಮೂಲಕ ಪ್ರತಿಕ್ರಿಯೆ ಕಳಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಸಹಾಯ ಕೇಳಿ ಬಂದ

ಪತ್ರಗಳೇ ಹೆಚ್ಚು. ಪಿ೨ಪಿ ಲೇಖನ (ಕಡತ ಹಂಚಿಕೆ) ಹೆಚ್ಚು ಜನಪ್ರಿಯವಾಗಿದೆ ಎಂದೆನಿಸುತ್ತಿದೆ. ಈ ಬಾರಿ ನನ್ನ ಅಂಚೆ ವಿಳಾಸವನ್ನೂ ಇಲ್ಲಿ ಕೊಡುತ್ತಿದ್ದೇನೆ. ನೀವು ಪತ್ರ ಬರೆದೂ ಮಾಹಿತಿ ಕೇಳಬಹುದು; ಪ್ರತಿಕ್ರಿಯೆ ನೀಡಬಹುದು; ಟೀಕಿಸಬಹುದು.

ಎಷ್ಟೋ ಸಲ ಜಗತ್ತಿನಲ್ಲಿ ಮುಂದೇನಾಗುತ್ತದೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಅದಕ್ಕೆ ಭವಿಷ್ಯವಾಣಿಯನ್ನು ಅವಲಂಬಿಸಬೇಕಿಲ್ಲ. ವಿಶ್ವದ ಹ

ಲವು ಸಂಶೋಧನಾ ಸಂಸ್ಥೆಗಳು ವಿವಿಧ ವಿಷಯಗಳಲ್ಲಿ, ರಂಗಗಳಲ್ಲಿ ಮುಂದೇನಾಗುತ್ತದೆ ಎಂಬ ವರದಿಗಳನ್ನು ತಯಾರಿಸುತ್ತಲೇ ಇರುತ್ತವೆ. ಈ ವರದಿಗಳನ್ನು ಎಲ್ಲಾ ಸಲವೂ ನಂಬುವಂತಿಲ್ಲ; ಹಾಗಂತ ಬಿಟ್ಟರೂ ಕೆಟ್ಟೆವು! ಉದಾಹರಣೆಗೆ ಮುಂದಿನ ಕೆಲವೇ ತಿಂಗಳುಗಳಲ್ಲಿ ರಸಗೊಬ್ಬರದ ಬೆಲೆಯು ವಿಪರೀತವಾಗಿ ಹೆಚ್ಚಲಿದೆ ಎಂದು ವಿಶ್ವಸಂಸ್ಥೆಯ ವರದಿ ಎಚ್ಚರಿಸಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದ್ದನ್ನು ಹಲವು ದಿನಪತ್ರಿಕೆಗಳು ಮರುವರದಿ ಮಾಡಿವೆ. ಈ ಮೂಲ ವರದಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇನ್ನೂ ಎರಡು ವರದಿಗಳನ್ನು ನಾನು ಸಂಗ್ರಹಿಸಿದ್ದೇನೆ. ನನ್ನ ಗೂಗಲ್‌ಪೇಜಸ್ ಪುಟಗಳಲ್ಲಿ ಈ ವರದಿಯನ್ನು ನೀವು ಕಾಣಬಹುದು; ಸಾಧ್ಯವಾದರೆ ಡೌನ್‌ಲೋಡ್ ಮಾಡಿಕೊಂಡು ಓದಿ.
ಲಿಂಕ್:

http://beluru.googlepages.com/mitramaadhyama

ಶಿಕ್ಷಣ ರಂಗದಲ್ಲಿ ಇರುವ ಸಮಸ್ಯೆಗಳೇನು? ಮುಂದಿನ ದಿನಗಳಲ್ಲಿ ಶಿಕ್ಷರಂಗದಲ್ಲಿ ಏನೇನಾಗಬೇಕು? ಈ ಬಗ್ಗೆ ಪಾರ್ಕರ್ ರಾಸ್‌ಮನ್ ಎಂಬ ಪತ್ರಕರ್ತ, ಲೇಖಕ ಚಿಂತನೆ ನಡೆಸಿ ತನ್ನ ಜಾಲತಾಣದಲ್ಲಿ ಹಲವು ಚಿಂತನಯೋಗ್ಯ ಲೇಖನಗಳನ್ನು ಪ್ರಕಟಿಸಿದ್ದಾನೆ. ಶಿಕ್ಷಣರಂಗದ ಬಗ್ಗೆ ಯೋಚಿಸುತ್ತಿರುವವರು ಈ ಲೇಖನಗಳತ್ತ ಒಮ್ಮೆ ಗಮನ ಹರಿಸಬಹುದು.
ಲಿಂಕ್: http://ecolecon.missouri.edu/globalresearch

ಹಾಗೇ ಭಾರತದ ರಾಷ್ಟ್ರೀಯ ಜ್ಞಾನ ಆಯೋಗ ಗೊತ್ತಿರಬೇಕಲ್ಲ? ಸ್ಯಾಮ್ ಪಿತ್ರೋಡಾ ನೇತೃತ್ವದ ಈ ಸಂಸ್ಥೆ ನಿಜಕ್ಕೂ  ಮುಂದಿನ ಪೀಳಿಗೆಗಾಗಿ ಶಿಕ್ಷಣ ಮತ್ತು ಜ್ಞಾನ ಪ್ರಸರಣ ಮಾಡುವ ಕ್ರಮಗಳ ಬಗ್ಗೆ ಗಂಭೀರವಾಗಿ ತಲೆ ಕೆಡಿಸಿಕೊಂಡಿದೆ. ಮಕ್ಕಳನ್ನು ಗಣಿತ ಮತ್ತು ವಿಜ್ಞಾನದ ವಿಷಯಗಳಿಗೆ ಹೇಗೆ ಸೆಳೆಯಬೇಕು, ಸಾಂಪ್ರದಾಯಿಕ ವೈದ್ಯಪದ್ಧತಿಯನ್ನು ರಕ್ಷಿಸಲು ಏನು ಮಾಡಬೇಕು, ಮುಕ್ತ ಮತ್ತು ದೂರಶಿಕ್ಷಣದ ನೀತಿ ಏನಾಗಿರಬೇಕು, ಗ್ರಂಥಾಲಯಗಳನ್ನು ಹೇಗೆ ಸುಧಾರಿಸಬೇಕು?- ಇವೇ ಮುಂತಾದ ಸಂಗತಿಗಳ ಬಗ್ಗೆ ಚರ್ಚಾಟಿಪ್ಪಣಿಗಳನ್ನು ಈ ಆಯೋಗವು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ನೀವು ಖಂಡಿತವಾಗಿಯೂ ಓದಲೇಬೇಕಾದ ದಾಖಲೆಗಳಿವು. ಉದಾಹರಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಈ-ಗವರ್ನೆನ್ಸ್ ವಿಷಯದಲ್ಲಿ ಓಪನ್‌ಸೋರ್ಸ್ ತಂತ್ರಾಂಶಗಳನ್ನೇ ಬಳಸಬೇಕು ಎಂದು ಸ್ಯಾಮ್ ಪಿತ್ರೋಡಾ ಈ-ಗವರ್ನೆನ್ಸ್ ಸಂಬಂಧಿತ ನಿರೂಪಣೆಯಲ್ಲಿ ಪ್ರತಿಪಾದಿಸಿದ್ದಾರೆ. ಈ-ಗವರ್ನೆನ್ಸ್ ಬಗ್ಗೆ ವೃಥಾ ಪುಂಖಾನುಪುಂಖ ಬೊಗಳೆ ಬಿಡುತ್ತಿರುವ ಸರ್ಕಾರಗಳು ಈ ಬಗ್ಗೆ ಹೆಚ್ಚು ಗಮನ ನೀಡಬಹುದು. ಇದರಿಂದ ಮೈಕ್ರೋಸಾಫ್ಟ್ ಸಂಸ್ಥೆಗೆ ಈಗಲೂ ನೀಡುತ್ತಿರುವ ಕೋಟಿಗಟ್ಟಳೆ ರೂಪಾಯಿಯನ್ನು ಉಳಿಸಬಹುದು. (ಈ ಜಾಲತಾಣದಲ್ಲಿ ಕನ್ನಡದಲ್ಲೂ ಮಾಹಿತಿ ಇದೆ ಎನ್ನುವುದು ನಿಮಗೆ ಇನ್ನಷ್ಟು ಆಸಕ್ತಿ ಹುಟ್ಟಿಸಬಹುದೆ?)
ಲಿಂಕ್ : http://knowledgecommission.gov.in

೨೦೦೯ನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ವರ್ಷ ಎಂದು ಘೋಷಿಸಿದೆ ಎಂಬುದು ನಇಮಗೆ ಗೊತ್ತೆ? ಈ ವರ್ಷ ವಿಶ್ವದೆಲ್ಲೆಡೆ ಹಲವು ಬಗೆಯ ಕಾರ್ಯಕ್ರಮಗಳು, ಕಾರ್ಯಾಗಾರಗಳು ನಡೆಯಲಿವೆ. ಭಾರತದಲ್ಲೂ ಈ ವರ್ಷವನ್ನು ಸಡಗರದಿಂದ ಆಚರಿಸಲು ಸಿದ್ಧತೆಗಳು ನಡೆದಿವೆ. ಬೆಂಗಳೂರೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಈ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್‌ಗೆ ಭೇಟಿ ನೀಡಿ:
ಲಿಂಕ್ : http://www.iucaa.ernet.in/~iya09ind

ಕನ್ನಡಭಾಷೆಯ ರಕ್ಷಣೆಯ ಬಗ್ಗೆ ನಾವೆಲ್ಲ ಮಾತನಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಭಾಷೆಗಳು ಹೇಗಿರುತ್ತವೆ? ಬದಲಾಗುತ್ತವೆಯೆ? ಯಾವುದೋ ಒಂದು ಭಾಷೆಯು ಪ್ರಭುತ್ವ ಸಾಧಿಸುತ್ತದೆಯೆ? ಶಿಕಾಗೋ ವಿಶ್ವವಿದ್ಯಾಲಯದ ಸಲಿಕೋಕೋ ಎಂ. ಮುಫ್‌ವೀನ್ ೨೦೦೨ರಲ್ಲೇ ಬರೆದ ೪೮ ಪುಟಗಳ ಪ್ರಬಂಧವನ್ನು ಆಸಕ್ತರು ಓದಬಹುದು. ಅದೂ ನನ್ನ ಗೂಗಲ್ ಪುಟಗಳಲ್ಲಿ ಇದೆ.
ಲಿಂಕ್: http://beluru.googlepages.com/vl4n2COLONIZATION-GLOBALIZATION.pdf

ಕಂಪ್ಯೂಟರ್ ಬಳಕೆ ಹೆಚ್ಚಾಗ್ತಾ ಇರೋ ಈ ದಿನಗಳಲ್ಲಿ ಈ-ವೇಸ್ಟ್ ಅಂದರೆ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡೋ ಬಗೆ ಹೇಗೆ? ಈ ಬಗ್ಗೆ ಹೆಚ್ಚಿನ ನೀತಿ-ನಿಯಮಗಳನ್ನು ರೂಪಿಸಲು `ಸಾಲ್ವಿಂಗ್ ದಿ ಈ ವೇಸ್ಟ್ ಪ್ರಾಬ್ಲಮ್’ ಎಂಬ ವಿಶ್ವಸಂಸ್ಥೆ ಬೆಂಬಲಿತ ಸಂಸ್ಥೆಯು ಕೆಲಸ ಮಾಡುತ್ತಿದೆ. ಭಾರತವೂ ಪ್ರಮುಖ ಈ-ವೇಸ್ಟ್ ತಾಣವಾಗೋ ಅಪಾಯ ಇರೋದ್ರಿಂದ ಈ ಬಗ್ಗೆ ಹೆಚ್ಚು ತಿಳಿದುಕೊಂಡರೆ ತಪ್ಪಿಲ್ಲ.
ಲಿಂಕ್:  http://www.step-initiative.org/index.php

ಅದೆಲ್ಲ ಸರಿ, ಈ ವಿಶ್ವದ ಭವಿಷ್ಯವೇನು? ಕೊನೆಗೊಮ್ಮೆ ಈ ಜಗತ್ತು, ಬ್ರಹ್ಮಾಂಡ, ಎಲ್ಲವೂ ಏನಾಗುತ್ತದೆ? ಎಲ್ಲಿಗೆ ಈ ಕಥೆ ಕೊನೆಗೊಳ್ಳುತ್ತದೆ? ಇದನ್ನೂ ನೀವು ತಿಳಿದುಕೊಳ್ಳಬಹುದು! ವಿಕಿಪೀಡಿಯಾದಲ್ಲಿ ಇರುವ ಈ ಪುಟವನ್ನು ಒಮ್ಮೆ ಓದಿ. ಅದರಲ್ಲಿರುವ ಇತರೆ ಲಿಂಕ್‌ಗಳಿಗೂ ಭೇಟಿ ನೀಡಿ.
ಲಿಂಕ್ : http://en.wikipedia.org/wiki/Ultimate_fate_of_the_universe

ನೋಡಿ, ಕಲಿಯಲು ಎಷ್ಟೆಲ್ಲ ವಿಷಯಗಳಿವೆ… ನೀವು ನಿಮಗೆ ಆಸಕ್ತಿ ಇರುವ ವಿಷಯವನ್ನು ಓದಿ ತಿಳಿದುಕೊಳ್ಳಲೇ ಎಷ್ಟೋ ದಿನಗಳು, ವಾರಗಳು ಬೇಕು… ಕಲಿಯುಗದ ಅನಿವಾರ್ಯತೆ ಎನ್ನಿ!

Share. Facebook Twitter Pinterest LinkedIn Tumblr Email
Previous Articleರಿಸೆಶನ್ ಬಂದಿದೆ, ಎಚ್ಚರವಿರಲಿ!
Next Article ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ಬ್ಯಾಲಾಳು ಮತ್ತು ಬಿಳಲು

December 1, 2008

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

Comments are closed.

ಕಲಿ ಯುಗ
  • Try these essential Desktop tools!
  • ಬ್ಯಾಲಾಳು ಮತ್ತು ಬಿಳಲು
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • Ayahuasca: Your future was known much ealrier!
  • New dimensions of the media
  • This journalist disrespects even the Supreme Court
  • Blogging and hanging
  • Your PC and the virus that you let in
  • Sunday Supplements and development of Literature
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • A slow Tsunami called civilization
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
  • The policy of my column
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.