Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»New dimensions of the media
ಕಲಿ ಯುಗ

New dimensions of the media

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 26, 2008Updated:May 19, 2025No Comments5 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಮಾಧ್ಯಮದ ಹೊಸ ಆಯಾಮಗಳು

ಮಕರ ಸಂಕ್ರಮಣದ ದಿನದಂದು ನಿಮ್ಮೆದುರು ಒಂದಷ್ಟು ಸಾಲುಗಳನ್ನು ಬರೆದಿದ್ದ ನಾನು ಮತ್ತೆ ಯುಗಾದಿ ಹಬ್ಬದ ಸಡಗರದಲ್ಲೂ ನಿಮ್ಮೆದುರು ಈ ಸಾಲುಗಳನ್ನು ಬರೆದಿಡುವ ಅವಕಾಶ ಬಂದಿದೆ. ಹೊಸ ಸಂವತ್ಸರದ ಸಂದರ್ಭದಲ್ಲಿ ನಿಮಗೆಲ್ಲ ಶುಭಾಶಯಗಳನ್ನು ಹೇಳುತ್ತ, ಮಾಧ್ಯಮದ ಹೊಸ ಆಯಾಮಗಳ ಬಗ್ಗೆ ಒಂದಷ್ಟು ಕಲಿಯುವ ಮಾತುಗಳನ್ನು ಬರೆಯುತ್ತೇನೆ.

ಫೋನ್ ಇನ್ ಕಾರ್ಯಕ್ರಮ

ಫೋನ್ ಇನ್ ಕಾರ್ಯಕ್ರಮವನ್ನು ಆರಂಭಿಸಿದ್ದು ರೇಡಿಯೋ ಕೇಂದ್ರಗಳೇ. ಸಾಮಾನ್ಯವಾಗಿ ಎಫ್ ಎಂ ಕೇಂದ್ರಗಳು ನಡೆಸುವ ಫೋನ್ ಇನ್ ಕಾರ್ಯಕ್ರಮಗಳು ಕೇಳುಗರೊಂದಿಗೆ ನಡೆಸುವ ಆತ್ಮೀಯ ಸಂವಾದವಾಗಿ ಶ್ರವ್ಯ ಮಾಧ್ಯಮದ ಆಸಕ್ತಿ ಬೆಳೆದಿದೆ. ಕೇವಲ ಮಾಹಿತಿಗಳನ್ನು ಕೇಳಲು ಮಾತ್ರವೇ ಬಳಕೆಯಾಗುತ್ತಿದ್ದ ಈ ವಿಧಾನ ಈಗ ಪ್ರವಾಚಕರ ಮತ್ತು ಕೇಳುಗರ ನಡುವೆ ಹೃತ್ಪೂರ್ವಕ ವಾರ್ತಾಲಾಪವಾಗಿ ಮಾರ್ಪಡಲು ಕಾರಣವೇನು? ಮಾಧ್ಯಮಗಳು ತಮ್ಮ ಹಾಗೂ ಶ್ರೋತೃಗಳ ನಡುವೆ ಇದ್ದ ಸಂವಹನದ ಕಂದರವನ್ನು ಮುಚ್ಚಿಹಾಕಲು ನಡೆಸಿದ ಪ್ರಾಮಾಣಿಕ ಪ್ರಯತ್ನ ಇಲ್ಲಿ ಫಲ ಕಾಣುತ್ತಿದೆ.  ಟೆಲಿವಿಜನ್ ಕಾರ್ಯಕ್ರಮಗಳಲ್ಲೂ ಫೋನ್ ಇನ್ ಕಾರ್ಯಕ್ರಮಗಳು ಹೆಚ್ಚಿವೆ. ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಕೇಳುಗರ ಮೆಚ್ಚಿನ ಹಾಡುಗಳನ್ನು ಪ್ರಸಾರ ಮಾಡುವ ಜೂಕ್ ಬಾಕ್ಸ್ ಯತ್ನಗಳೂ ಯಶ ಪಡೆದಿವೆ. ಸ್ಥಳೀಯ ಕಾರ್ಯಕ್ರಮ ನಿರೂಪಕರೂ ಕಿರುತೆರೆ ತಾರೆಗಳಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಈಗ ಕೇಳುವವರೂ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಮೊದಲು ಒಂದೇ ದಿಕ್ಕಿನಿಂದ ಹರಿಯುತ್ತಿದ್ದ ಕಾರ್ಯಕ್ರಮ ನಿರೂಪಣೆ ಈಗ ವೈವಿಧ್ಯಮಯವಾಗಿದೆ. ಕೇಳುಗರ ದನಿಗೂ ಮೈಕ್ ಸಿಕ್ಕಿದೆ.

ಸೌಂಡ್ ಆಫ್ : ನಿಮ್ಮದೇ ಧ್ವನಿ !

ಮುದ್ರಣ ಮಾಧ್ಯಮದಲ್ಲಿ ಕೇವಲ ವಾಚಕರ ಪತ್ರಗಳು ಮಾತ್ರವೇ ಓದುಗರ ದನಿ ಎಂಬ ಸ್ಥಿತಿ ಈಗಿಲ್ಲ. ಆಂಗ್ಲ ದಿನಪತ್ರಿಕೆಯೊಂದು ಈಗ ತನ್ನ ನಗರ ಪುರವಣಿಯಲ್ಲಿ ಓದುಗರ ಲೇಖನವನ್ನು ಅವರ ದೊಡ್ಡ ಭಾವಚಿತ್ರದೊಂದಿಗೆ ಮುಖಪುಟದಲ್ಲಿ ಪ್ರಕಟಿಸುತ್&a
mp;#32
36;ಿದೆ. ಸಂಪಾದಕೀಯ ವಿಭಾಗದಲ್ಲಿ ಬರೆಯುವವರಷ್ಟೇ ಹೊಸ ವಿಷಯಗಳು ಈ ಓದುಗರ ಬರೆಹದಲ್ಲಿ ಇರುತ್ತವೆ. ಹೊಸ ವಿದ್ಯಮಾನಗಳು, ಬೆಲೆ ಏರಿಕೆ ಮುಂತಾದ ವಿಷಯಗಳ ಬಗ್ಗೆ ಮಾತ್ರವೇ ಮೀಸಲಾಗಿದ್ದ ಓದುಗರ ಕಿರು ಸಂದರ್ಶನ ಈಗ ಸಾಮಾನ್ಯವಾಗಿ ಪ್ರತಿದಿನವೂ, ಪ್ರತೀ ವಿಷಯದ ಮೇಲೂ ನಡೆಯುತ್ತಿದೆ. ಟೆಲಿವಿಜನ್ ಚೌಕಟ್ಟಿನಲ್ಲಿ ಶ್ರೀಸಾಮಾನ್ಯರೂ ರಾಜಕಾರಣಿಗಳಂತೇ ಹೇಳಿಕೆ ಕೊಡಲು ಆರಂಭಿಸಿದ್ದಾರೆ !

ಅಂದರೆ ಓದುಗರನ್ನು ಅರ್ಥಾತ್ ಟಾರ್ಗೆಟ್ ಆಡಿಯೆನ್ಸ್, ಅಂದ್ರೆ ಒಂದು ಮಾಧ್ಯಮವು ತನ್ನ  ಗುರಿಯಾಗಿ ಇಟ್ಟುಕೊಂಡ ಶ್ರೋತೃಗಳನ್ನು ಗಮನದಲ್ಲಿ ಇಟ್ಟುಕೊಂಡು, ಅವರ ಭಾವ, ಭೇದ, ಅಭಿಮತ ಎಲ್ಲವನ್ನೂ  ಕೇಳಿ ಕಾರ್ಯಕ್ರಮಗಳನ್ನು ನಿರೂಪಿಸೋದು ಇಂದಿನ ಹೊಸ ವಿದ್ಯಮಾನ. ಇದನ್ನು ಭಾಗೇದಾರಿ ಪತ್ರಿಕೋದ್ಯಮ ಎಂದು ಕರೆಯುತ್ತೇವೆ. ಖಾಸಗಿ ಯಜಮಾನಿಕೆ ಪತ್ರಿಕೋದ್ಯಮವೂ ಇದಕ್ಕೆ ಹೊರತಾಗಿಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಅಂದ್ರೆ ಪತ್ರಿಕೆ ಮತ್ತು ಮ್ಯಾಗಜಿನ್‌ಗಳಲ್ಲಿ ಈ ಬಗೆಯ ಭಾಗೇದಾರಿ ಪತ್ರಿಕೋದ್ಯಮ ಇನ್ನೂ ಹೆಜ್ಜೆ ಊರಿಲ್ಲ. ಏಕಮುಖಿ ಸುದ್ದಿ ಸಂವಹನವೇ ಇಲ್ಲಿ ಮುಖ್ಯವಾಗಿದೆ.  ಇದು ತಪ್ಪಬೇಕು. ರೇಡಿಯೋ, ಟೆಲಿವಿಜನ್ ವಾಹಿನಿಗಳಲ್ಲಿ ಕಾಣಿಸಿಕೊಂಡ ಭಾಗೇದಾರಿ ಪತ್ರಿಕೋದ್ಯಮ ಮುದ್ರಣ ಮಾಧ್ಯಮದಲ್ಲೂ ಕಾಲೂರಬೇಕು. ಆಗಲೇ ಮುದ್ರಣ ಮಾಧ್ಯಮವೂ ಸುದ್ದಿಯನ್ನು ವಸ್ತುನಿಷ್ಠವಾಗಿ ನೋಡುವ ಹೊಸ ಆಯಾಮ ಕಾಣಲು ಸಾಧ್ಯ.

ಕಾನ್ವರ್ಜೆನ್ : ಕೂಡಿ ಬಾಳೋಣ್ಸ

ಮುದ್ರಣ ಮಾಧ್ಯಮದಲ್ಲಿ ಇಲ್ಲದ ಬೆಳವಣಿಗೆ ಇದು. ಕಾನ್ವರ್ಜೆನ್ಸ್ ಎಂದರೆ ಒಂದು ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳು  ಇನ್ನೊದು ಮಾಧ್ಯಮದಲ್ಲಿ ಹೊಸ ರೂಪದೊಂದಿಗೆ ಬಂದು ನಿಲ್ಲುವುದು. ಅಂದ್ರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಮಾಧ್ಯಮಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳೋದು. ಒಂದು ವಿದ್ಯಮಾನವನ್ನು ರೇಡಿಯೋದಲ್ಲಿ ಮಾತ್ರ ಕೇಳ್ತೀರ ಅಂದುಕೊಳ್ಳಿ. ಅದನ್ನು ಮುದ್ರಣ ಮಾಧ್ಯಮವೂ ಪ್ರಕಟಿಸಬಹುದಲ್ವ? ಅಥವಾ ದಿನಪತ್ರಿಕೆಯಲ್ಲಿ
ಬಂದ ಸುದ್ದಿಯನ್ನು ಟೆಲಿವಿಜನ್ ವಾಹಿನಿಯು ಇನ್ನಷ್ಟು ದೃಶ್ಯಮಯವಾಗಿ ತೋರಿಸಬಹುದು. ಟೆಲಿವಿಜನ್‌ನಲ್ಲಿ ಬಂದ ನುಡಿಚಿತ್ರವು ಅದರ ಸ್ಥಿರಚಿತ್ರಗಳೊಂದಿಗೆ ಮ್ಯಾಗಜಿನ್‌ನಲ್ಲಿ ಪ್ರಕಟವಾಗಬಹುದು. ವಿದೇಶಗಳಲ್ಲಿ ಈ ಬಗೆಯ ಕಾನ್ವರ್ಜೆನ್ಸ್ ಸಾಮಾನ್ಯವಾಗಿದೆ. ಭಾರತದಲ್ಲಿ ಈ ಆಯಾಮಕ್ಕೆ ಇನ್ನೂ ಬೆಲೆ ಬಂದಿಲ್ಲ. 

ಡಿಜಿಟಲ್ ಗುಣಮಟ್ಟದ ಕ್ರೇಝ್

ಟೆಲಿವಿಜನ್ ಹಾಗೂ ರೇಡಿಯೋಗಳಲ್ಲಿ ಈಗ ಡಿಜಿಟಲ್ ಗುಣಮಟ್ಟ ಬೆಳೆದಿದೆ. ಇನ್ನೂ ಬೆಳೆಯಬೇಕಿದೆ. ಹಲವು ಟೆಲಿವಿಜನ್ ವಾಹಿನಿಗಳು ಸ್ಟೀರಿಯೋ ಗುಣಮಟ್ಟದ ಧ್ವನಿಸೇವೆನೀಡುತ್ತಿವೆ. ಎಫ್ ಎಂ ಬ್ಯಾಂಡ್‌ಗಳ ಜನಪ್ರಿಯತೆ ಉತ್ತುಂಗಕ್ಕೇರಿದೆ. ದೇಶದಲ್ಲಿ ಇನ್ನೂ ಮುನ್ನೂರು ಚಿಲ್ಲರೆ ಎಫ್ ಎಂ ಕೇಂದ್ರಗಳಿಗೆ ಪರವಾನಗಿ ಸಿಕ್ಕಿದೆ. ಇದು ಮಾತ್ರ ರೇಡಿಯೋ ಕ್ರಾಂತಿಯ ನಿಜಕಾಲ ಎನ್ನಬಹುದು. ಸ್ಫಟಿಕ ಶುದ್ಧ ಎನ್ನಬಹುದಾದ ಡಿಜಿಟಲ್ ಗುಣ ಮಟ್ಟ ಮತ್ತು ಎಂ ಪಿ ೩ ವಿಧಾನದ ಕೃಪೆಯಿಂದಾಗಿ ಅಗ್ಗ ಶಾಸ್ತ್ರೀಯದಿಂದ ಹಿಡಿದು ಫ್ಯೂಶನ್‌ವರೆಗೆ ಸಂಗೀತವು ಮತ್ತೆ  ಕೇಳಿಬರುತ್ತಿದೆ. ಮಿಶ್ರಸಂಗೀತದಿಂದಾಗಿ ಶಾಸ್ತ್ರೀಯ ಸಂಗೀತವೂ ಮರುಹುಟ್ಟು ಪಡೆದಿದೆ. ಹೀಗೆ ಸಂಗೀತಪ್ರಿಯರಿಂದಾಗಿ ಮತ್ತೆ ಬೆಲೆ ಪಡೆದಿರುವ ರೇಡಿಯೋ ಕೇಂದ್ರಗಳು ಕೇಳಿದ್ದನ್ನೇ ಕೇಳಿಸುವ ಪುನರಾವರ್ತನೆಗೂ ಮುಂದಾಗುವಂತಿಲ್ಲ. ಇದು ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡಬಹುದೆ? ಡಿಜಿಟಲ್ ವರ್ಸೆಟೈಲ್ ಡಿಸ್ಕ್‌ಗಳು  ಅರ್ಥಾತ್ ಡಿವಿಡಿಗಳು ದೃಶ್ಯಮಾಧ್ಯಮದ ಹೊಸ ಸಾಧನವಾಗಿವೆ.  ಕಂಪ್ಯೂಟರ್ ಆಧಾರಿತ ಸಂಗೀತ ಕೇಳುವ, ಸಿನೆಮಾ ನೋಡುವ ಹವ್ಯಾಸವು ರಾಜಧಾನಿಯಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನು ತಲುಪಿದೆ.

ಬಳಕೆ – ಬದುಕು

ನಮ್ಮ ಮಾಧ್ಯಮಗಳು ಕಂಡುಕೊಂಡ ಇನ್ನೊಂದು ಬಹುಮುಖ್ಯ ಆಯಾಮ ಎಂದರೆ ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ನೀಡುವುದು. ದಿನಪತ್ರಿಕೆಯ ಪುರವಣಿಗಳಲ್ಲಿ, ರೇಡಿಯೋ ನಿರೂಪಣೆಯಲ್ಲಿ,  ಮಧ್ಯಾಹ್ನದ ಟೆಲಿವಿಜನ್ ಕಾರ್ಯಕ್ರಮಗಳಲ್ಲಿ  ಬಳಕೆದಾರರೇ ಪ್ರಭುಗಳಾಗಿದ&
amp;
#3277;ದಾರೆ. ಸದಾ ಅವರಿಗೆ ಬೇಕಾದ ಮಾಹಿತಿಯೇ ಸಿಗುತ್ತಿರುತ್ತದೆ. ಇಲ್ಲೂ ಪುನರಾವರ್ತನೆಯ ಅಪಾಯವನ್ನು ಕಾಣಬಹುದು. ಆದರೆ ಈ ಬಗೆಯ ಬಳಕೆ ಅಂದರೆ ಯುಟಿಲಿಟಿ ಲೇಖನಗಳಿಗೆ ಓದುಗರ ಕೊರತೆ ಇಲ್ಲ. ಇಂಥ ಬೆಳವಣಿಗೆಯಿಂದ ಸಾಮಾಜಿಕವಾಗಿ ಅಗತ್ಯವಾದ, ಸಮಾಜದ ವಿವಿಧ ರಂಗಗಳಲ್ಲಿ ನಡೆಯುವ ವಿದ್ಯಮಾನಗಳ ಕುರಿತ ವರದಿಗಾರಿಕೆಗೆ ಪೆಟ್ಟು ಬಿದ್ದಿರುವುದೂ ನಿಜ.

ಬಳಕೆದಾರರ ಜೊತೆಗೇ ಸಂಬಂಧ ಹೊಂದಿ ಕಂಡುಬಂದಿರುವ ಇನ್ನೊಂದು ಬೆಳವಣಿಗೆ ಎಂದರೆ ವಿಷಯಗಳ ವಾಣಿಜ್ಯೀಕರಣ. ಸುದ್ದಿ, ಕಾರ್ಯಕ್ರಮ ಯಾವುದೇ ಇರಲಿ, ಅದಕ್ಕೆ ಜಾಹೀರಾತು ಸಿಗುವ ಸಾಧ್ಯತೆ ಹೆಚ್ಚಿದ್ದರೆ ಅದರ ಪ್ರಕಟಣೆಯ ಸಾಧ್ಯತೆಯೂ ಹೆಚ್ಚು. ಹೀಗಾಗಿ ನಿಜವಾದ ಸುದ್ದಿಗಳ ನಡುವೆಯೇ ಜಾಹೀರಾತಿಗೆ ಸಂಬಂಧಿಸಿದ ಸುದ್ದಿಗಳು ಬೆರಕೆಯಾಗಿ ಓದುಗ ಕಕ್ಕಾಬಿಕ್ಕಿಯಾಗಿರುವುದಂತೂ ಹೌದು. ಈ ಜಾಹೀರಾತುಗಳ ಬಗ್ಗೆ ಯಾವುದೇ ನೈತಿಕ ನಿಗಾ ಇಲ್ಲ. ಕೊಳ್ಳುಬಾಕ ಸಂಸ್ಕೃತಿಯ ಓದುಗರೇ ಇದಕ್ಕೆ ಕಾರಣ ಎನ್ನಬಹುದೆ? ನನಗಂತೂ ಹಾಗೇ ಕಾಣಿಸುತ್ತದೆ. ಜನರ ಅಭಿರುಚಿಗಳಿಗೆ ತಕ್ಕಂತೆ ಮಾಧ್ಯಮಗಳು ಇರಬೇಕೆ ಅಥವಾ ಮಾಧ್ಯಮಗಳೇ ಸಮಾಜಕ್ಕೆ ಹಿತವಾಗುವ ಅಭಿರುಚಿಗಳನ್ನು ಬೆಳೆಸಲು ಮುಂದಾಗಬೇಕೆ ಎಂಬ ಚರ್ಚೆ ಈಗಲೂ ಪ್ರಸ್ತುತ.

ಇಂಟರ್‌ನೆಟ್ : ಇನ್ನೂ ಇದೆ !

ವಿಶ್ವದ ಯಾವುದೋ ಮೂಲೆಯಲ್ಲಿರುವ ಒಂದು ಕಂಪ್ಯೂಟರಿನಿಂದ  ಇನ್ನೊಂದು ಮೂಲೆಯಲ್ಲಿರುವ ನೀವು ಮಾಹಿತಿ, ಚಿತ್ರ, ಸಂಗೀತ, ಸಿನೆಮಾ, ದಾಖಲೆ, ಪುಸ್ತಕ ಹೀಗೆ ವಿವಿಧ ಮಾಧ್ಯಮಗಳ ಉತ್ಪನ್ನಗಳನ್ನು ಪಡೆಯಲು ಈ ವಿಶ್ವವ್ಯಾಪಿ ಕಂಪ್ಯೂಟರ್ ಜಾಲ ಅನುಕೂಲ ಮಾಡಿಕೊಟ್ಟಿದೆ. ಭಾರತದ ಜಿಲ್ಲಾ ಕೇಂದ್ರಗಳಲ್ಲಿ ಈಗಷ್ಟೇ ಕಾಲೂರಿರುವ ಇಂಟರ್‌ನೆಟ್‌ನ ಸಾಧ್ಯತೆಗಳು ಹಲವು.  ಇಂಟರ್‌ನೆಟ್‌ನ್ನು ಮಾಧ್ಯಮದ  ಪರಿಭಾಷೆಯಲ್ಲಿ ನವಮಾಧ್ಯಮ ಅಥವಾ ನ್ಯೂ ಮೀಡಿಯಾ ಎಂದು ಕರೆಯುತ್ತಾರೆ.

ಇಂಟರ್‌ನೆಟ್ ತಂತ್ರeನವಲ್ಲ ; ಅದು ನಮ್ಮ ಈ ಶತಮಾನದ ಸುವರ್ಣ ಮಾಧ್ಯಮ ಎಂದೂ ಹೇಳಬಹುದು. ಇಂಟರ್‌ನೆಟ್ ಬಳಕೆಗೆ ಗ್ರಾಹಕರ ಖರೀದಿ ಸಾಮರ್ಥ್ಯ  ಕೊಂಚ ಹೆಚ್ಚಾ&amp
;#32
23;ಿರಬೇಕು ಎಂಬುದು ವಾಸ್ತವ. ಆದರೆ ಜಾಗತಿಕ ಬೆಳವಣಿಗೆಗಳನ್ನು ದಾಖಲೆಸಮೇತ ನಿಮ್ಮ ಕಂಪ್ಯೂಟರಿಗೆ ತಂದಿಡುವ ಇನ್ನೊಂದು ಮಾಧ್ಯಮ ಸದ್ಯಕ್ಕಂತೂ ಇಲ್ಲ.ಜಗತ್ತಿನ ಯಾವುದೇ ಗಣ್ಯರಿಗೆ ನೇರವಾಗಿ  ಪತ್ರ ಬರೆದು ಉತ್ತರ ಪಡೆಯುವ ಸಾಧ್ಯತೆ ಇರೋದು ಈ ಮಾಧ್ಯಮಕ್ಕೆ ಮಾತ್ರ.

ಇಂಟರ್‌ನೆಟ್‌ನಲ್ಲಿ  ಸಾಮಾನ್ಯವಾಗಿ ಕಾಣೋದು ನಿರ್ದಿಷ್ಟ ವಿಷಯವೊಂದರ ಮೇಲಿ ಜಾಲತಾಣಗಳು, ಅರ್ಥಾತ್ ವೆಬ್‌ಸೈಟುಗಳು. ಈಗ ಇಂಟರ್‌ನೆಟ್ ಬಳಕೆದಾರರೇ ತಮ್ಮ ಅಭಿಪ್ರಾಯಗಳನ್ನು ಜಗತ್ತಿಗೆ ಸಾರಲು ಖಾಸಗಿ ವೆಬ್‌ಸೈಟ್‌ಗಳನ್ನು ಹೊಂದಿದ್ದಾರೆ. ಓದುಗರೇ ಪ್ರಭುಗಳು ಎಂಬುದು ಈ ವ್ಯಕ್ತಿಗಳ ಅಭಿವ್ಯಕ್ತಿಯಿಂದ ಸಾಬೀತಾಗಿದೆ. ವಿದೇಶಗಳಲ್ಲಿ ಇಂಥ ಖಾಸಗಿ ಅಭಿಪ್ರಾಯಗಳೇ ಕೊನೆಗೆ  ಸಮಾಜದ ಅಭಿಪ್ರಾಯವೂ  ಆಗಿರುವ ಸಂದರ್ಭಗಳೇ ಹೆಚ್ಚಾಗಿವೆ. ದಿನಪತ್ರಿಕೆಗಳು ಮೂಡಿಸದ ಜನಾಭಿಪ್ರಾಯ ಇಲ್ಲಿ ಸ್ಫೋಟವಾಗುತ್ತದೆ. ಬ್ಲಾಗಿಂಗ್ ಎಂದು ಕರೆಯುವ ಇಂಥ ವೆಬ್‌ಸೈಟ್‌ಗಳು ದಿನಪತ್ರಿಕೆಗಳಿಗಿಂತ, ರೇಡಿಯೋ, ಟೆಲಿವಿಜನ್‌ಗಳಿಗಿಂತ ಪ್ರಭಾವಿಯಾಗಿವೆ.  ನ್ಯೂ ಮೀಡಿಯಾ ಆಗಿರೋ ಇಂಟರ್‌ನೆಟ್‌ನಲ್ಲಿ ಈ ಬಗೆಯ ಭಾಗೇದಾರಿ ಪತ್ರಿಕೋದ್ಯಮ ಹುಲುಸಾಗಿ ಬೆಳೆದಿದೆ. ಈ ಆಂದೋಳನವನ್ನು ವಿ ಮೀಡಿಯಾ ಅಂದರೆ ನಾವೇ ಮಾಧ್ಯಮ ಎಂದೂ ಕರೆಯುತ್ತಾರೆ. ಬಹುಶಃ ಮಾಧ್ಯಮದ ಅತಿ ಪ್ರಭಾವಿ ಆಯಾಮಗಳಲ್ಲಿ  ಬ್ಲಾಗಿಂಗ್ ಒಂದಾಗಿದೆ. (ಬ್ಲಾಗಿಂಗ್ ಬಗ್ಗೆ ಈ ಹಿಂದೆ ಬರೆದಿದ್ದ ಅಂಕಣವು ಅದರ ಅಪಾಯಗಳನ್ನು ತಿಳಿಸಿತ್ತು ಎಂಬುದು ನೆನಪಿದೆ ತಾನೆ?)

ಇದಲ್ಲದೆ ಇಂಟರ್‌ನೆಟ್ ಬಳಕೆದಾರರು ವೆಬ್‌ಸೈಟ್‌ಗಳನ್ನೂಮೀರಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ಹಾದಿ ಹಿಡಿದಿದ್ದಾರೆ. ಇಲ್ಲಿ ಇವರು ತಮ್ಮ ಕಂಪ್ಯೂಟರಿನಲ್ಲಿ ಇರೋ ಮಾಹಿತಿಯನ್ನು, ಅದು ಚಿತ್ರ, ಸಿನೆಮಾ, ಸಂಗೀತ, ಸಾಫ್ಟ್‌ವೇರ್, ಪುಸ್ತಕ ಯಾವುದೇ ಆಗಿರಬಹುದು, ಇನ್ನೊಂದು ಕಂಪ್ಯೂಟರಿನ ಬಳಕೆದಾರ ಪಡೆಯೋದಕ್ಕೆ ಅನುಮತಿ ನೀಡುತ್ತಾರೆ. ಇದನ್ನು ಪೀರ್ ಟು ಪೀರ್ (ಪಿ೨ಪಿ) ನೆಟ್‌ವರ್ಕಿಂಗ್ ಎಂದು ಕರೆಯುತ್ತಾರೆ. ಒಂ&a
mp;#
3238;ು ರೀತಿಯಲ್ಲಿ ಇದು ವಿಶ್ವವ್ಯಾಪಿ ಕಂಪ್ಯೂಟರ್ – ಇಂಟರ್‌ನೆಟ್ ಬಳಕೆದಾರರು ರೂಪಿಸಿಕೊಂಡ ಮಾಹಿತಿ ಹಂಚಿಕೆಯ ಹೊಸ ಆಯಾಮದ ಮಾಧ್ಯಮ. ಇಂಟರ್‌ನೆಟ್ ಹೇಗೆ ಖಾಸಗಿ ಸಂಗತಿಯಾಗುತ್ತದೆ, ಜಗತ್ತಿನ ನಾಗರಿಕರನ್ನು ಒಗ್ಗೂಡಿಸುತ್ತದೆ ಎನ್ನುವುದಕ್ಕೆ ಇದೊಂದು ಮುನ್ಸೂಚನೆ.

ಬದಲಾವಣೆಯ ಗಾಳಿಗೆ ನಾವು ತೆರೆದುಕೊಳ್ಳುತ್ತಿದ್ದೇವೆ ಅಲ್ಲವೆ?

 

Share. Facebook Twitter Pinterest LinkedIn Tumblr Email
Previous ArticleThis journalist disrespects even the Supreme Court
Next Article Ayahuasca: Your future was known much ealrier!
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ಬ್ಯಾಲಾಳು ಮತ್ತು ಬಿಳಲು

December 1, 2008

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

Comments are closed.

ಕಲಿ ಯುಗ
  • Try these essential Desktop tools!
  • ಬ್ಯಾಲಾಳು ಮತ್ತು ಬಿಳಲು
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ವರ್ತಮಾನದ ಹೊಸ ವಾರ್ತೆಗಳು
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • Ayahuasca: Your future was known much ealrier!
  • This journalist disrespects even the Supreme Court
  • Blogging and hanging
  • Your PC and the virus that you let in
  • Sunday Supplements and development of Literature
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • A slow Tsunami called civilization
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
  • The policy of my column
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.