Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»Sunday Supplements and development of Literature
ಕಲಿ ಯುಗ

Sunday Supplements and development of Literature

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 26, 2008Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಸಾಪ್ತಾಹಿಕ ಪುರವಣಿಗಳು ಮತ್ತು ಸಾಹಿತ್ಯದ ಕೆಲಸ

 

ಸಾಪ್ತಾಹಿಕ ಪುರವಣಿಗಳು ಅಂದಕೂಡ್ಲೇ ನಮಗೆ ಸಾಮಾನ್ಯವಾಗಿ ನೆನಪಾಗೋದು ಒಂದು ಒಳ್ಳೆ  ಮುಖಪುಟ ಲೇಖನ, ಒಂದು ದೊಡ್ಡ ಕಥೆ ಜೊತೆಗೆ  ಒಂದು ಕವನ. ಇದೊಂಥರ ಸಿದ್ಧ ಮಾದರಿ ಅನ್ನೋ ಭಾವನೆ ಬರುವಂತೆ ಈ ಸಾಪ್ತಾಹಿಕ ಪುರವಣಿಗಳನ್ನು ನಾವು ನೋಡ್ತಾ ಇದೇವೆ.

ಈ ಸಾಪ್ತಾಹಿಕ ಪುರವಣಿಗಳ ಅತ್ಯಂತ ಗಂಭೀರ ವಿಷಯ ಎಂದರೆ ಸಾಹಿತ್ಯಪುಟಗಳು. ಇಲ್ಲಿ ಸಾಮಾನ್ಯವಾಗಿ  ಸಾಹಿತ್ಯ ಚರ್ಚೆಯೋ, ಸಂವಾದವೋ, ಸಾಹಿತ್ಯ ಸಂದರ್ಭದ ಲೇಖನವೋ ಇರುತ್ತೆ. ಜೊತೆಗೆ ಪುಸ್ತಕ ವಿಮರ್ಶೆ. ಆ ವಾರ ಬಂದ ಹೊಸ ಪುಸ್ತಕಗಳ ಪಟ್ಟಿ. ಹಾಗಾದರೆ ಈ ಸಾಮಗ್ರಿಗಳಿಂದ ಸಾಹಿತ್ಯಕ್ಕೆ ನಿಜಕ್ಕೂ ಪ್ರಯೋಜನ ಆಗುತ್ತಿದೆಯೆ? ಯಾಕೆಂದರೆ ಈಗ ಸಾಹಿತ್ಯ ತುಂಬಾ ಅಕ್ಷರ ಸಿರಿವಂತರ ಪಾಲಾಗಿದೆ. ಸಾಮಾನ್ಯ ಅಕ್ಷರಸ್ಥರು ಈಗ ಸಾಹಿತ್ಯವನ್ನು ಅರಗಿಸಿಕೊಳ್ಳುವಷ್ಟು ಸಾಮರ್ಥ್ಯವನ್ನೂ ಹೊಂದಿಲ್ಲ. ಅವರಿಗೆ ಇಂಥ ಗಂಭೀರ ವಿಷಯಗಳಲ್ಲಿ ಆಸಕ್ತಿಯೂ ಇದ್ದಂತಿಲ್ಲ.

ಆದರೆ ಸಾಪ್ತಾಹಿಕಗಳಲ್ಲಿ ಬರುವ ಕಥೆ, ಕವನಗಳು ಮಾತ್ರ, ಆಯಾ ಪತ್ರಿಕೆಯಲ್ಲಿ ಇರುವ ಸಂಪಾದಕೀಯ ವರ್ಗವನ್ನು ಹೊಂದಿಕೊಂಡು ಸಾಹಿತ್ಯದ ವರ್ತಮಾನದ ಬೆಳವಣಿಗೆಗೆ ಅತ್ಯಂತ ಸಹಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ವಾರಕ್ಕೆ ಇಬ್ಬರಂತೆ  ವರ್ಷಕ್ಕೆ ಕನಿಷ್ಠ ೫೨ ಕಥೆಗಾರರು, ಕವಿಗಳು ಮುಂತಾದ ಹೊಸ ಪ್ರತಿಭೆಗಳನ್ನು  ಗುರುತಿಸಲು ಅವಕಾಶವಿದೆ. ಇಲ್ಲಿಂದಲೇ ಮೂಡಿಬಂದ ಹಲವು ಕವಿಗಳನ್ನು ನೋಡಿದಾಗ, ಕಥೆಗಾರರನ್ನು ಕಂಡಾಗ ನನಗೆ ಈ ಒಂದೇ ಪುಟವೇ ಕನ್ನಡ ಸಾಹಿತ್ಯದ ಮಟ್ಟಿಗೆ ಚಲನಶೀಲ ಪುಟದ ಹಾಗೆ ಕಾಣುತ್ತದೆ.

ಕನ್ನಡದ ಪ್ರಮುಖ ದಿನಪತ್ರಿಕೆಗಳೆಲ್ಲವೂ ವಾರಕ್ಕೆ ಒಂದು ಕಥೆ, ಒಂದು ಕವನ ಪ್ರಕಟಿಸಲೇಬೇಕಾದ ಚೌಕಟ್ಟನ್ನು ಹಾಕಿಕೊಂಡಿವೆ. ನಾಲ್ಕು ಕೋಟಿ ಚಿಲ್ಲರೆ ಜನಕ್ಕೆ ವಾರದಲ್ಲಿ ಏಳು ಕಥೆ ಸಿಗುವುದಿಲ್ಲವೆ ಎಂದು ಪ್ರಶ್ನಿಸಬಹುದು. ಆದರೆ ಸಿಗುವುದಿಲ್ಲ ಎಂಬುದೇ ನಿಜ. ಅದಕ್ಕೇ ಕೆಲವು ದಿನಪತ್ರಿಕೆಗಳು ವಾರ್ಷಿಕ ಕಥಾಸ್ಪರ
&#
3277;ಧೆಯನ್ನು ಏರ್ಪಡಿಸಿ ವರ್ಷದ ಅರ್ಧ ಭಾಗದಲ್ಲಿ ಒಳ್ಳೆಯ ಕಥೆಗಳನ್ನು ಸಂಚಯಿಸಿಕೊಳ್ಳಲು ಯೋಜನೆ ಹಾಕಿಕೊಂಡಿವೆ. ಬಹುಮಾನಗಳನ್ನು ಹೊರತುಪಡಿಸಿಯೂ ಬರುವ ಒಳ್ಳೆಯ ಕಥೆಗಳನ್ನು ಕ್ರಮೇಣ ಬಳಸಿಕೊಳ್ಳುವ ಪರಿಪಾಠ  ಅನಿವಾರ್ಯವಾಗಿ ಸೃಷ್ಟಿಯಾಗಿದ್ದು. ಸಾಹಿತ್ಯದ ಬೆಳವಣಿಗೆಯಲ್ಲಿ ನಮ್ಮ ದಿನಪತ್ರಿಕೆಗಳು ಈ ಪ್ರಮಾಣದ ನಿಯತ್ತನ್ನು ಹೊಂದಿರುವುದನ್ನು ನಾವೆಲ್ಲರೂ ಸ್ವಾಗತಿಸಲೇಬೇಕು. ಗ್ರಾಹಕ ಪ್ರೇರಿತ ಮಾರುಕಟ್ಟೆಯೇ ಮಾಧ್ಯಮ ಸಂಸ್ಥೆಗಳನ್ನು ಅವುಗಳ ವಸ್ತುವಿಷಯಗಳನ್ನು ನಿಯಂತ್ರಿಸುತ್ತಿರುವ ಇಂದಿನ ದಿನಗಳಲ್ಲಿ ಇಂಥ ಪ್ರಯತ್ನ ವಿಶೇಷವೇ.

ಸಾಪ್ತಾಹಿಕಗಳಲ್ಲಿ ಬರುವ ಅಂಕಣಗಳು ಮತ್ತು ಇತರೆ ಸಾಹಿತ್ಯ ಲೇಖನಗಳೂ ಈ ಕಾಯಕದಲ್ಲಿ ನೆರವಾಗಿವೆ ಎನ್ನುವುದು ನಿಜ. ವಿಮರ್ಶೆಯ ಮಟ್ಟಿಗೆ ಅದು ತೀರಾ ನಿರ್ದಿಷ್ಟ ಓದುಗರನ್ನು ತಲುಪುವ ಹಾಗೆಯೇ ಇದೆ ಎನ್ನುವುದು ವಾಸ್ತವ.  ವಿಮರ್ಶೆಯ ಪರಿಭಾಷೆ ಇನ್ನಷ್ಟು ತಿಳಿಯಾಗಿ ಅದು ಸಾಮಾನ್ಯ ಓದುಗರನ್ನು ತಲುಪುವುದು ಕಷ್ಟದ ಮಾತೇ ಸರಿ. ಮಾರುಕಟ್ಟೆಯಲ್ಲಿ ಸಿಗುವ ಕನ್ನಡ ಸಾಹಿತ್ಯವೇ ಬೇರೆ, ಇಲ್ಲಿ ವಿಮರ್ಶೆಗೆ ಸಿಕ್ಕಿಹಾಕಿಕೊಂಡ ಪುಸ್ತಕಗಳೇ ಬೇರೆ. ಆದ್ದರಿಂದ ಈ ವಿಷಯದಲ್ಲಿ ಸಾಹಿತ್ಯದ ಬೆಳವಣಿಗೆಯಾಗದು. ಇಲ್ಲಿ ಯಾವ ಸ್ವರ್ಣಮಾಧ್ಯಮವನ್ನು ಆಯ್ದುಕೊಳ್ಳಬೇಕು ಎಂಬ ಬಗ್ಗೆ ಲೇಖಕರು ಮತ್ತು ವಿಮರ್ಶಕರು ಕೂತು ಮಾತಾಡಬೇಕಿದೆ.

ಆದರೆ ಕನ್ನಡದಲ್ಲಿ ಒಳ್ಳೆಯ ಕಾದಂಬರಿಗಳ ಪ್ರಮಾಣ ಕುಗ್ಗಿರುವ ಹಾಗೆಯೇ ಹಾಸ್ಯ, ಲಲಿತ, ಗಂಭೀರ ಪ್ರಬಂಧಗಳ ಪ್ರಮಾಣವೂ ತಗ್ಗಿದೆ. 

ನಮ್ಮ ರಾಜ್ಯದಲ್ಲಿ ಸ್ಥಳೀಯ ಪತ್ರಿಕೆಗಳು ಸಾಕಷ್ಟಿವೆ. ಅವುಗಳಲ್ಲಿಯೂ ಸಾಪ್ತಾಹಿಕಗಳಿವೆ. ಅಲ್ಲಿ ಗುಣಮಟ್ಟದ ವ್ಯಾಖ್ಯೆ ಬದಲಾಗುತ್ತದೆ. ಸ್ಥಳೀಯ ಯುವಪ್ರತಿಭೆ ಎಂಬುದೇ ದೊಡ್ಡ ಅರ್ಹತೆಯಾಗುತ್ತದೆ. ಇದೂ ಒಳ್ಳೆಯದೇ.

ನಮ್ಮ ಸಾಪ್ತಾಹಿಕಗಳು ಸಾಮಾನ್ಯವಾಗಿ ರಾಜ್ಯಮಟ್ಟದವು. ರಾಜ್ಯ ಮಟ್ಟದ ಪತ್ರಿಕೆಯೊಂದು ಸ್ಥಳೀಯ ಮಟ್ಟದ  ಸಾಪ್ತಾಹಿಕವನ್ನು ತಂದಿರುವ ನಿದರ್ಶನ ನಮಗಿನ್ನೂ ಸಿ&a
mp;#
3221;್ಕಿಲ್ಲ. ಸಾಪ್ತಾಹಿಕವೇ ಒಂದು ಹಣಕಾಸಿನ ಹೊರೆಯಾಗಿರುವಾಗ ಇದು ಬೇರೆ ತಾಪತ್ರಯ ಎಂದು ಪತ್ರಿಕೆಗಳ ಯಜಮಾನರು ಹೇಳಿದರೆ  ತಪ್ಪಿಲ್ಲ. ಆದರೆ ಪತ್ರಿಕೋದ್ಯಮವು ಸಾಮಾಜಿಕ ಮುಖ ಹೊಂದಿರುವ ಉದ್ದಿಮೆ. ಅಂದಮೇಲೆ  ಸಾಹಿತ್ಯದ, ಅದರಲ್ಲೂ ಪ್ರಾದೇಶಿಕ ಪ್ರತಿಭೆಗಳ, ಸಂಗತಿಗಳ, ಪುಸ್ತಕಗಳ ಚರ್ಚೆಗೆ, ಯುವ ಸಾಹಿತಿಗಳ ಪ್ರೋತ್ಸಾಹಕ್ಕೆ ಇಂಥ ಯತ್ನ ಮಾಡಬಹುದೇನೋ. ಗ್ರಾಮೀಣ ಪ್ರದೇಶಗಳಲ್ಲಿನ ಸಾವಿರಾರು ಕನ್ನಡಪ್ರಿಯ ಕಾಲೇಜು ವಿದ್ಯಾರ್ಥಿಗಳು ಸಾಪ್ತಾಹಿಕವನ್ನು ಓದುವುದಂತೂ ನಿಜ.

ನಿಜಕ್ಕೂ ನಮ್ಮ ಪತ್ರಿಕೆಗಳು ಯಾವ ಹೆಚ್ಚಿನ ಆರ್ಥಿಕ  ಲಾಭವೂ ಇಲ್ಲದೆ ಸಾಪ್ತಾಹಿಕಗಳನ್ನು ನಡೆಸುತ್ತಿವೆ. ಯಾವ ಪತ್ರಿಕೆಯೂ ಈ ಪುರವಣಿಗಳನ್ನು ಮುಚ್ಚಲು ಮುಂದಾಗಿಲ್ಲ. ಅದರಲ್ಲೂ ಹೆಚ್ಚು ಜನ ಓದುವ ಭಾನುವಾರವೇ ಸಾಪ್ತಾಹಿಕಗಳು ಪ್ರಕಟವಾಗುತ್ತವೆ. ಅಕಸ್ಮಾತ್ ಈ ಪುರವಣಿಗಳು ನಿಂತರೆ ಏನಾಗುತ್ತದೆ ಎಂದು ಯೋಚಿಸಿ. ಆದ್ದರಿಂದ ಸದ್ಯದಲ್ಲಿ ಈ ಸಾಪ್ತಾಹಿಕಗಳು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ.

ಸಾಪ್ತಾಹಿಕಗಳು ಕನ್ನಡ ಸಾಹಿತ್ಯದ ಗುಣಮಟ್ಟ  ನಿಯಂತ್ರಣಕ್ಕೆ  ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಕಥೆ, ಕವನಗಳ ಆಯ್ಕೆಯ ಹಂತದಲ್ಲೇ ಹತ್ತಿರದಲ್ಲೇ ಸಿಗುವ ಸಾಹಿತಿಗಳ ಪುಟ್ಟ ತಂಡವೊಂದನ್ನು ಇಟ್ಟುಕೊಳ್ಳಬಹುದು. ಆದಷ್ಟೂ ಈ ತಂಡದ ಜೊತೆಗೆ ಸಂಯೋಜಿತವಾಗಿ ಕೆಲಸ ಮಾಡಿದಲ್ಲಿ ಪ್ರಕಟಣೆಯ ಹಂತದಲ್ಲೇ ಗುಣಮಟ್ಟ ಸಾಧಿಸಬಹುದು. ಪತ್ರಿಕೆಗಳಲ್ಲಿ ಇರುವವರು ಆಯ್ಕೆ ಮಾಡಲು ಅಸಮರ್ಥರು ಎಂದಲ್ಲ. ಅವರು ದೈನಂದಿನ ಒತ್ತಡದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಈ ತಂಡದಿಂದ ಇನ್ನಷ್ಟು ನಿಖರವಾಗಬಹುದು. ಪತ್ರಿಕೆಯಲ್ಲಿ ಅವಕಾಶ ಪಡೆದ ಲೇಖಕರ ಸಮ್ಮೇಳನಗಳನ್ನು ಮಾಡಬಹುದು. ಲೇಖಕರ ಸಮ್ಮೇಳನ ಎಂದ ಕೂಡಲೇ ಅದು ಕೇವಲ ಸರ್ಕಾರದ ಕೆಲಸ ಎಂಬ ಭಾವನೆ ಬಂದುಬಿಟ್ಟಿರುವ ಇಂದಿನ ದಿನಗಳಲ್ಲಿ ಇಂಥ ಸಾರ್ವಜನಿಕ ಯತ್ನಗಳಿಗೆ ಬೆಲೆ ಇದೆ. ಎಲ್ಲ ಪ್ರಮುಖ ಪತ್ರಿಕೆಗಳು ಸಂಯುಕ್ತವಾಗಿಯೂ ಈ  ಸಾಹಿತ್ಯ ಸಮ್ಮೇಳನವನ್ನು ಸಂಘ

ಟಿಸಬಹುದು.

ಮುಂದಿನ ದಿನಗಳಲ್ಲಿ ಸಾಪ್ತಾಹಿಕಗಳಲ್ಲಿ ಪ್ರಾಯೋಜಿತ ಲೇಖನಗಳ ಸಂಖ್ಯೆ ಹೆಚ್ಚಾಗಬಹುದು. ಆದರೆ ಸಾಂಸ್ಥಿಕ ಪ್ರಾಯೋಜಕರ  ಕತೆ, ಕವನಗಳೂ ಬರುತ್ತವೆಯೆ? ಗೊತ್ತಿಲ್ಲ.

ಅವಸರದ ಸಾಹಿತ್ಯ ಎಂದೇ ಕರೆಯೋ ಈ ಪತ್ರಿಕೆಗಳು ಸಾಪ್ತಾಹಿಕದ ವಿಷಯದಲ್ಲಿ ತೋರುತ್ತಿರುವ ಸಹನೆ ಮತ್ತು ಕಾಳಜಿ ಅಚ್ಚರಿ ತರುತ್ತದೆ. ನಮ್ಮ ನಾಡಿನ ಸಾಹಿತ್ಯಪ್ರಿಯ ಯುವಕರು ಇಲ್ಲಿ ಪ್ರಕಟವಾಗೋ ಸಾಹಿತ್ಯವನ್ನೂ ದಿಕ್ಸೂಚಿಯಾಗಿ ಪರಿಗಣಿಸಿದರೆ ಅದರಿಂದಲೂ ಸಾಹಿತ್ಯ ಬೆಳೆಯುತ್ತೆ. ಹಾಗೇ ಹಿರಿಯ  ಸಾಹಿತಿಗಳೂ ಈ ಸಾಪ್ತಾಹಿಕಗಳಲ್ಲಿ ಮಾರ್ಗದರ್ಶಿ ಪಾತ್ರವನ್ನು ನಿರ್ವಹಿಸಿದರೆ ಅದಕ್ಕಿಂತ ಒಳ್ಳೆಯ ಬೆಳವಣಿಗೆ ಇನ್ನೊಂದಿಲ್ಲ.

ಸಾಪ್ತಾಹಿಕಗಳಲ್ಲಿ ಸಾಹಿತ್ಯವೂ ಒಂದು ವಿಭಾಗವಷ್ಟೆ. ವಾಸ್ತವದಲ್ಲಿ ಸಾಪ್ತಾಹಿಕಗಳು ನಾಡಿನ ಸಂಸ್ಕೃತಿಯ ಎಲ್ಲ ಮುಖಗಳನ್ನು, ಸಮಕಾಲೀನ ಸಂಗತಿಗಳನ್ನು  ಬಿಂಬಿಸುವ ಹೊಣೆಗಾರಿಕೆ ಹೊಂದಿವೆ. ಈ ಹೊಣೆಗಾರಿಕೆ ಕೇವಲ ಸಾಂದರ್ಭಿಕ ಲೇಖನಗಳಿಗಷ್ಟೇ ಸೀಮಿತವಾಗದಿರಲಿ. ಸಾಹಿತ್ಯವೂ ಇಂದಿನ ಸವಾಲುಗಳನ್ನು ಎದುರಿಸಲು ಸಾಪ್ತಾಹಿಕವೂ ಇನ್ನಷ್ಟು ತೊಡಗಿಕೊಳ್ಳಲಿ ಎಂದು ನಿರೀಕ್ಷಿಸೋಣ.

Share. Facebook Twitter Pinterest LinkedIn Tumblr Email
Previous ArticleOscar awards and dreams of realistic cinema
Next Article Your PC and the virus that you let in
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ಬ್ಯಾಲಾಳು ಮತ್ತು ಬಿಳಲು

December 1, 2008

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

Comments are closed.

ಕಲಿ ಯುಗ
  • Try these essential Desktop tools!
  • ಬ್ಯಾಲಾಳು ಮತ್ತು ಬಿಳಲು
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ವರ್ತಮಾನದ ಹೊಸ ವಾರ್ತೆಗಳು
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • Ayahuasca: Your future was known much ealrier!
  • New dimensions of the media
  • This journalist disrespects even the Supreme Court
  • Blogging and hanging
  • Your PC and the virus that you let in
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • A slow Tsunami called civilization
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
  • The policy of my column
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.