Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»The policy of my column
ಕಲಿ ಯುಗ

The policy of my column

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 27, 2007Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನನ್ನ ಅಂಕಣದ ನೀತಿ: ನೀವೇ ನಿರೂಪಿಸಿ ಮಾರಾಯ್ರೆ… !

ನಿಮಗೆ ಬೇಸರವಾಗಿದೆ. ನಿಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾದು ಕುಳಿತಿದ್ದೀರಿ; ನಿಂತಿದ್ದೀರಿ; ಶಥಪಥ ಹಾಕುತ್ತಿದ್ದೀರಿ.  ಬೀಡಿಯನ್ನೋ ಸಿಗರೇಟನ್ನೋ ಎಳೆಯುತ್ತ ದೃಷ್ಟಿ ಹಾಯಿಸಿದ್ದೀರಿ. ಬಸ್ಸುಗಳು ಹಾಗೆ ಬಂದು ಹೀಗೆ ತಿರುಗಿದ ಕೂಡಲೇ ಬೋರ್ಡು ನೋಡುತ್ತೀರಿ. ಆ ಬಸ್ಸು ನಿಮ್ಮ ಊರಿಗೆ ಹೋಗುವುದಿಲ್ಲ. ನಿಮ್ಮೂರಿನ ಬಸ್ಸು ಬರುವ ಬಗ್ಗೆ ಕಂಟ್ರೋಲರ್ ಏನೂ ಹೇಳುತ್ತಿಲ್ಲ. ಬರಬಹುದು; ಬರದೇ ಇರಬಹುದು.
ನಿಮ್ಮ ಬದುಕು ಆ ರಾತ್ರಿ ಎಷ್ಟು ಅನಿಶ್ಚಿತವಾಗಿದೆ ಎಂದರೆ ಬೆಳಗ್ಗೆ ನೀವು ಗಮ್ಯ ತಲುಪುವ ಬಗ್ಗೆ ಅನುಮಾನಗಳು ದಟ್ಟವಾಗಿವೆ.`  ಚಾ ಕಾಫಿ ಯಾರು ಈ ಕಡೆ ಬರ್ರಿ' ಎಂದು ಜಬರ್ದಸ್ತಾಗಿ ಕರೆಯುವ ಯಜಮಾನನ ದನಿ ಕೇಳಿ ನಿಮ್ಮ ಬೇಸರ ಹೆಚ್ಚುತ್ತಿದೆ. ಅಲ್ಲೇ ಇರುವ ಮ್ಯಾಗಜಿನ್ ಅಂಗಡಿಯಲ್ಲಿ ಕಂಡ ಎಲ್ಲ ಮುಖಪುಟಗಳನ್ನೂ ಬಾಯಿಪಾಠ ಮಾಡುತ್ತೀರಿ. ಹಣ್ಣಿನ ಅಂಗಡಿಯವನು ನಿಧಾನವಾಗಿ ಬಾಗಿಲು ಮುಚ್ಚುತ್ತಾನೆ. ಯಾರೋ ಎದ್ದು ಸರಸರ ತಮ್ಮ ಬಸ್ಸಿನತ್ತ ನಡೆಯುತ್ತಾರೆ. ಇನ್ನಾರೋ ಪೇದೆ ಬಂದು ಯಾರನ್ನೋ ಗದರಿಸುತ್ತ ನಿಂತಿರುತ್ತಾನೆ.
ಹೌದ್ರೀ.. ಮುಂದೆ ಹೇಳ್ರಿ ಎಂದು ನೀವು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತೀರಿ. ದೃಶ್ಯಗಳನ್ನುಕಟ್ಟಿಕೊಡುತ್ತ ಯಾವುದೋ ಭಾವವನ್ನು ನಿಮ್ಮೊಳಗೆ ಸ್ಫುರಿಸುತ್ತ ಕೂಡ್ರುವುದು ಅಷ್ಟೇನೂ ಕಷ್ಟದ ಕೆಲಸವಲ್ಲ.  ಆದರೆ ಈ ಭಾವನೆಗಳು ಮುಗಿದ ಮೇಲೆ ಮಾಡುವುದೇನು ಎಂಬುದೇ ಮುಖ್ಯ ಪ್ರಶ್ನೆ. ನಿಮ್ಮನ್ನು ಕಾಡುವ ಭಾವನೆಗಳನ್ನು ಮತ್ತಷ್ಟು ಪ್ರಚೋದಿಸಿ ಯಾವುದೋ ತೀರದೆಡೆಗೆ ನಿಮ್ಮನ್ನು ಒಯ್ದು ಕಣ್ಣನ್ನು ತೇವಗೊಳಿಸಿ ಅರೆ… ಈ ಪೇಪರ್ ಮಂಜಾಗಿದೆಯಲ್ಲ ಎಂದು ನೀವು ಸಾವರಿಸಿಕೊಳ್ಳುವ ದೃಶ್ಯವನ್ನು ಕಲ್ಪಿಸಿಕೊಳ್ಳಲು ನನಗೂ ಇಷ್ಟ. ಆದರೆ ಯಾಕೋ ಇದೆಲ್ಲ ಕೊಂಚ ಕಷ್ಟ……
ಇನ್ನು ಸಾಮಾಜಿಕ ಸಮಸ್ಯೆಗಳನ್ನು ಹೇಳಿ, ಸಾಂದರ್ಭಿಕವಾಗಿ ಎದುರಾಗುವ ರಾಷ್ಟ್ರಪತಿ ಚುನಾವಣೆ, ಮಹಿಳಾ ಮೀಸಲಾತಿ, ಸಿ ಇ ಟಿ ಗೊಂದಲ, ಇತ್ಯಾದಿ ಸ&#3202
;&
#3223;ತಿಗಳನ್ನು ಐತಿಹಾಸಿಕವಾಗಿ ಚರ್ಚಿಸಿ  ಅವಕ್ಕೊಂದು ಪರಿಹಾರವನ್ನು  ಘೋಷಿಸುವುದು ಕೂಡಾ ನನಗೆ ಸಾಧ್ಯವಿರಬಹುದು. ಆದರೆ ಇದರಿಂದ ಅಂಥ ಪರಿಣಾಮವೇನೂ ಆಗುವುದಿಲ್ಲ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೋ, ಇಲ್ಲವೋ, ಅವರು ಗುಣ ಅವಗುಣಗಳೇನು ಎಂದು ಚರ್ಚಿಸಿ, ಕುಮಾರಸ್ವಾಮಿಯವರು ಯಾಕೆ ಹೀಗಿದ್ದಾರೆ, ಅವರು ಹ್ಯಾಗೆ ತಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಬಹುದು ಎಂದು ಅವಲೋಕಿಸುವುದೂ ಅಂಥ ದೊಡ್ಡ ಸಮಸ್ಯೆಯಲ್ಲ.  ಆದರೆ ಹೀಗೆ ಮುಖ್ಯಮಂತ್ರಿಗಳು ಬದಲಾದ ಮಾತ್ರಕ್ಕೆ  ರಾಜ್ಯದಲ್ಲಿ ಯಾವುದಾದರೂ ಮೌಲಿಕ, ವಾಸ್ತವಿಕ ಬೆಳವಣಿಗೆ, ಅಭಿವೃದ್ಧಿ ಆಗಿದೆಯೆ ಎಂಬುದನ್ನು ಲೆಕ್ಕ ಹಾಕಲು ನನಗೆ ಬರುವುದಿಲ್ಲ. ಕಾಲಂ ತುಂಬುತ್ತದೆಯೇ ಹೊರತು ಜನರ ಕಿಸೆಯೇನೂ ಭರ್ತಿಯಾಗುವುದಿಲ್ಲ.
ಹಾಗಾದರೆ ಈ ಕಾಲಂ ಬರೆದು ನಾನು ಸಾಧಿಸುವುದಾದರೂ ಏನು? ಅಥವಾ ನನಗೆ ಏನು ಸಾಧಿಸುವುದಕ್ಕೆ ಬರುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಯಾಕೆಂದರೆ ನನಗೆ  ಪಿ.ಸಾಯಿನಾಥ್ ಇರಲಿ, ಕರ್ನಾಟಕದ ಫ್ರೀಲ್ಯಾನ್ಸಿ ಪತ್ರಕರ್ತರ ಹಾಗೆ ಹಳ್ಳಿಗಳಲ್ಲಿ ಅಲೆದಾಡಿದ ಅನುಭವವೂ ಇಲ್ಲ. ವಿಧಾನಸೌಧದಲ್ಲಿ ಅಲೆದಾಡಿ, ಅಲ್ಲಿನ ಮೊಗಸಾಲೆಗಳು ಹೇಳುವ ನೂರಾರು ಕಥೆಗಳು ನನ್ನೊಳಗಿಲ್ಲ.  ನೂರಾರು ಗ್ರಂಥಗಳ ಹಿನ್ನೆಲೆಯಲ್ಲಿ ಯಾವುದೋ ವಾದವನ್ನು ಪ್ರತಿಪಾದಿಸಿ ನಿಮ್ಮೆದುರು ಬೀಗುವುದಕ್ಕೆ ನನಗೆ ಖಂಡಿತ ಆಗದು.
ಆದ್ದರಿಂದ ನಾನು ನನ್ನ ಅಂಕಣದಲ್ಲಿ ಇಂಥ ವಿಷಯಗಳನ್ನು ಹೇಳಬೇಕು ಅಥವಾ ಹೇಳಬಾರದು ಎಂದುಕೊಂಡಿದ್ದೇನೆ:
೧) ಯಾವುದೇ ರಾಜಕೀಯ ವಿಮರ್ಶೆ, ಪಕ್ಷಗಳ ಬಲಾಬಲ, ಸಾಂದರ್ಭಿಕ ಬೆಳವಣಿಗೆಯೊಂದರ ತರ್ಕ – ಇಂಥ ಮಾಹಿತಿಗಳು ನನ್ನ ಅಂಕಣದಲ್ಲಿ ಇರುವುದಿಲ್ಲ.
೨) ನಾನು ಯಾವುದೇ ಇಸಂಗಳನ್ನು ಪ್ರತಿಪಾದಿಸುವ ಅಥವಾ ವಿರೋಧಿಸುವ ವಾದಗಳನ್ನು ಮಂಡಿಸುವುದಿಲ್ಲ. ಆದರೆ ನನ್ನ ಅನುಭವ, ಅಧ್ಯಯನದ ಮಟ್ಟಿಗೆ ಸರಿ ಎಂದು ಅನ್ನಿಸಿದ್ದನ್ನು ಮಾತ್ರ ನಿಶ್ಚಿತವಾಗಿ ಹೇಳುವೆ.
೩) ಬದುಕಿನಲ್ಲಿ ಬಳಕೆಗೆ ಬೇಕಾದ ಮಾಹಿತಿಗಳನ್ನು ಸಾಮಾಜ&#
3263
;ಕ ಹಿನ್ನೆಲೆಯಲ್ಲಿ ವಿವರಿಸುವುದಕ್ಕೆ ನಾನು ಆದ್ಯತೆ ನೀಡುವೆ. ಜನರಿಗೆ ಭಾವನೆಗಳಿಗಿಂತ ಬದುಕುವುದು ಮುಖ್ಯ;  ಅದರಲ್ಲೂ ನಮ್ಮ ಯುವಪೀಳಿಗೆಯು ಬಾಲಿವುಡ್ಡಿನಲ್ಲಿ ಮೈಮರೆಯುವುದಕ್ಕಿಂತ ಬದುಕಿನ ಕಟುಸತ್ಯಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯ ಎಂಬುದು ನನ್ನ ನಿಲುವು.
೪) ನನ್ನ ಅಂಕಣಗಳ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದವರಿಗೆ ಮಾಹಿತಿಯನ್ನು ಮುಕ್ತವಾಗಿ ಮತ್ತು ಸಂಪೂರ್ಣವಾಗಿ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ. ಮುಕ್ತಮಾಹಿತಿ ನೀಡುವ ನನ್ನ ವೈಯಕ್ತಿಕ ನಿಲುವನ್ನು ಈ ಅಂಕಣದಲ್ಲೂ ಮುಂದುವರೆಸಬಯಸುತ್ತೇನೆ.
೫) ನಾನು ನನ್ನ ಸಂಸ್ಕೃತಿ ಪರಂಪರೆಯನ್ನು, ನಮ್ಮ ಸಿಂಧೂ ನಾಗರಿಕತೆಯ ಕುರುಹುಗಳನ್ನು ನನ್ನ ಹಿರಿಯರು ನೀಡಿದ ಬಹುಮುಖ್ಯ ಬಳುವಳಿ ಎಂದು ತಿಳಿದಿದ್ದೇನೆ. ಈ ವಿಷಯದ ಬಗ್ಗೆ ಯಾವುದೇ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ,
೬) ನಾನು ಉದಯವಾಣಿ ಪತ್ರಿಕೆಯ ಓದುಗರು ಬಯಸುವ ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿ ಬರೆಯುವುದಕ್ಕೂ ಸಿದ್ಧನಿದ್ದೇನೆ. `ಭಾಗೇದಾರಿ ಪತ್ರಿಕೋದ್ಯಮ` (ಪಾರ್ಟಿಸಿಪೇಟರಿ ಜರ್ನಲಿಸಮ್)ನಲ್ಲಿ ನಾನು ನಂಬಿಕೆಯನ್ನು ಇಟ್ಟಿದ್ದೇನೆ.
೭) ನನ್ನ ಅನುಭವವನ್ನು ಮೀರಿದ ಸಂಗತಿಗಳನ್ನು ಬರೆಯುವಾಗ ಆದಷ್ಟೂ ವಾಸ್ತವಿಕವಾಗಿ ಬಿಂಬಿಸುವೆ.
೮) ನನ್ನ ಅಂಕಣಗಳಲ್ಲಿ `ನಾನು' ಎಂಬುದು ಕನಿಷ್ಠ ಪ್ರಮಾಣದಲ್ಲಿ ಇರುವಂತೆ ಪ್ರಯತ್ನಿಸುವೆ.
೯) ಅಂಕಣವೆಂದರೆ ಜನಾಭಿಪ್ರಾಯ ಮೂಡಿಸುವ ಸಾಧನವೂ ಹೌದು; ಆದರೆ ಒಂದು ವ ಇಷಯದ ಮೇಲೆ ತರ್ಕವನ್ನೇ ತಾರ್ಕಿಕತೆಗಿಂತ ಮಾಹಿತಿಯೇ ಇಂಥ ಅಭಿಮತ ಹುಟ್ಟುಹಾಕಬೇಕು ಎಂಬುದು ನನ್ನ ನಿಲುವು.
ಇದಿಷ್ಟು ನನ್ನ ಅಂಕಣದ ಕುರಿತಂತೆ ನಾನು ಹೇಳಲೇಬೇಕು ಎಂದು ಪಟ್ಟಿ ಮಾಡಿದ್ದಲ್ಲ, ಬದಲಿಗೆ ನನ್ನ  ಇನ್‌ಸ್ಟಂಟ್ ಭಾವಗಳು. ಇನ್‌ಸ್ಟಂಟ್ ಆಗಿ ವರ್ತಿಸುವುದರಿಂದ ಹಲವು ಲಾಭಗಳೂ ಇವೆ; (ಅಪಾಯಗಳಂತೂ ಇದ್ದೇ ಇವೆ).  ಸಾರ್ವಜನಿಕ ಸಂಗತಿಗಳ ಬಗ್ಗೆ ಅನಿಸುವ ಭಾವನೆಗಳನ್ನು ಕೂಡಲೇ ನಿಮ್ಮ ಸುಮಾರಿನ ಅನುಭವದ ಹಿನ್ನೆಲೆಯಲ್ಲ&#
3263
; ಹೇಳಿಬಿಡುವುದು ವಾಸಿ.
ಉದಾಹರಣೆಗೆ ನಾನು ಇತ್ತೀಚೆಗೆ ಓದಿದ ಹಲವು ಪುಸ್ತಕಗಳ ಹಿನ್ನೆಲೆಯಲ್ಲಿ ನನ್ನದೇ ಆದ ವಿಚಾರಗಳನ್ನು ಹೇಳಬಹುದು. ಈ ಪುಸ್ತಕಗಳ ಬಗ್ಗೆ ಬರೆಯುವಾಗ ನಾನು ಭಾವುಕನಾಗುವ ಸಾಧ್ಯತೆಗಳೂ ಇವೆ. ಆದರೆ ಪುಸ್ತಕದ ವಿಷಯಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಕ್ಷಣದವರೆಗೆ ಈ ಭಾವುಕತೆಗೆ ಬೆಲೆ ಇದೆ ಎಂಬುದು ನನ್ನ ಅನಿಸಿಕೆ.
ಬೇಕಾದಷ್ಟು ಥಿಯರಿ ಹೇಳಿದ್ದೀರಲ್ಲ… ಬರೆಯುವುದು ಯಾವಾಗ ಎಂದು ನೀವು ಕೇಳಬಹುದು. ನಾನು ಬರೆದದ್ದನ್ನು ಇಲ್ಲಿಯವರೆಗೆ ಓದುವ ದೊಡ್ಡ ಮನಸ್ಸು ಮಾಡಿದ ನಿಮ್ಮ ಆರಂಭಿಕ ಅಭಿಮಾನವನ್ನು ಹೀಗೆಯೇ ಬಿಡಲಾದೀತೆ? ಮುಂದಿನ ವಾರ ಖಂಡಿತ  ವರ್ತಮಾನದ ಹೊಸ ವಾರ್ತೆಯೊಂದಿಗೆ ಸಿಗುತ್ತೇನೆ.  

Share. Facebook Twitter Pinterest LinkedIn Tumblr Email
Previous ArticleMy new service: Downloadable files and softwares
Next Article Oh! Kawaguchi Ekai!!
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ಬ್ಯಾಲಾಳು ಮತ್ತು ಬಿಳಲು

December 1, 2008

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

Comments are closed.

ಕಲಿ ಯುಗ
  • Try these essential Desktop tools!
  • ಬ್ಯಾಲಾಳು ಮತ್ತು ಬಿಳಲು
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ವರ್ತಮಾನದ ಹೊಸ ವಾರ್ತೆಗಳು
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • Ayahuasca: Your future was known much ealrier!
  • New dimensions of the media
  • This journalist disrespects even the Supreme Court
  • Blogging and hanging
  • Your PC and the virus that you let in
  • Sunday Supplements and development of Literature
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • A slow Tsunami called civilization
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.