Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕವನಗಳು»ಶೂನ್ಯಗಳ ಕುರಿತು
ಕವನಗಳು

ಶೂನ್ಯಗಳ ಕುರಿತು

ಬೇಳೂರು ಸುದರ್ಶನBy ಬೇಳೂರು ಸುದರ್ಶನDecember 1, 2008Updated:May 19, 2025No Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನನ್ನ ಹಿರಿಯ ಗೆಳೆಯ, ನನ್ನೊಳಗಿನ ಕವಿಯನ್ನು ತಿದ್ದಿ ತೀಡಿದ ಕಣಜನಹಳ್ಳಿ ನಾಗರಾಜ್ ಈಗಿನ ಪೀಳಿಗೆಯ ಸಾಹಿತಿಗಳಿಗೆ ಗೊತ್ತಿಲ್ಲದ ಕವಿ. ಅವರು ಕವನದ ಮಾರುಕಟ್ಟೆಯಲ್ಲಿ ಏನಾದರೂ ಸ್ಟ್ರಾಟೆಜಿ ಮಾಡಿದ್ದರೆ ಇಷ್ಟು ಹೊತ್ತಿಗೆ ನಾಡಿನ ಪ್ರಖ್ಯಾತ ಕವಿಯಾಗುತ್ತಿದ್ದರು. ಏನೋ, ಗೊತ್ತಿಲ್ಲ, ಒಂಥರದ ನಿಗೂಢ, ಮೌನದ ಹಳ್ಳಿ ಬದುಕಿಗೆ ಹಿಂದಿರುಗಿದರು. ಅವರು ೧೯೮೪ರ ಒಂದು ಚಳಿಗಾಲದ ದಿನ ಭದ್ರಾವತಿ ಆಕಾಶವಾಣಿಯಲ್ಲಿ ನನ್ನೊಂದಿಗೆ ಇದ್ದು ಕವನ ಓದಿದರು. ಅದೇ ಕವನ ಈಗಲೂ ನನ್ನೊಳಗೆ ಭದ್ರವಾಗಿದೆ. ನಿಮಗಾಗಿ ಈ ಕವನ….. ಇಲ್ಲಿದೆ. 

ಅಲ್ಪಜೀವಿಯು ನಾನು, ಓ ಗೆಳೆಯರೆ,
ಸ್ತಬ್ಧ ಮೌನದ ಹಾಡ ನುಡಿಸಲಾರೆ.
ಅಗಾಧತೆಯ ಒಂದಂಶ ನಾನೇ ಆಗಿ ಹೊಸ
ನಕ್ಷತ್ರಗಳ ಸ್ನೇಹ ಬಯಸಲಾರೆ.

ಯಾವುದೋ ನದಿಯ ಹೊಸ ರೋಮಾಂಚನದ
ಧ್ವನಿಯು ನನ್ನ ಹುಡುಕಾಡಿದ್ದು ಇಲ್ಲಿ ತಾನೆ?
ಗೂಢ ನಾದದ ರೂಢ ಶಬ್ದಗಳ ಜಗಳದಲಿ
ಒಬ್ಬಂಟಿ ನಡುಗಿದ್ದು ಇಲ್ಲಿ ನಾನೆ.

ಮಾನವೀಯತೆಯ ವಿಚಿತ್ರ ವೇಷಗಳ ನಡುವೆ
ಮೂಲತತ್ವಗಳಲ್ಲಿ ಬೇರೂರಲು
ಬಯಸಿ ಬಾಯ್ತೆರೆದದ್ದು ಮಾತ್ರ ನಿಜ
ಈ ಹರೆಯದೆದೆ ಮಾತೃಭಾಷೆಯೊಳಗೆ

ನನ್ನ ಹಳ್ಳಿಯ ಹಳೆಯ ಕೋಟೆಯುದ್ದಗಲಕ್ಕು
ತಡವಾಗಿ ಸುರಿದ ಹೊಸ ಮಳೆಯ ಹಾಗೆ
ಕೊನೆಯ ಹುಲ್ಲಿನ ಎಳೆ ಚಿಗುರು ಬಾಗಲು ನೆಲಕೆ
ಅದರ ಕನಸುಗಳಲ್ಲಿ ನಾವು ಜತೆಗೆ

ಯುದ್ಧ ಪ್ರೇಮಗಳಲ್ಲಿ ನಾವೆ ಗೆಲ್ಲಬುಹುದು;
ಕಾಲ ಪರಿಧಿಗಳಾಚೆ ಹತ್ತಿ ನಿಲ್ಲಲುಬಹುದು;
ಮುಗ್ಧ ರಕ್ತದ ಮರೆಗೂ ಹರಡಿ ನಿಲ್ಲುವ ಕ್ರೂರ
ಪರಿಣಾಮಗಳ ಯಾರು ನಿಲ್ಲಿಸುವರು?

ನಾನು ಅಲ್ಪಜ್ಞಾನಿ; ನನಗೆ ತಿಳಿಯುತ್ತಿಲ್ಲ-
ಕಣ್ಣ ಮುಂದಿದೆಯಂತೆ ಕೊನೆಯ ಹೆಜ್ಜೆ.
ಈ ಹಾಡಿಗೀ ಬಣ್ಣ ಇರುವುದಷ್ಟೇ ಗೊತ್ತು
ಗುಂಡಿಗೆಯ ಮಿಡಿತವೂ ಇದರ ಇಚ್ಛೆ.

ಉಪ್ಪು ಕಡಲಿನ ನಡುವೆ ಬಾಯಾರಿಕೆಗೆ ನರಳಿ
ತೂತುದೋಣಿಯ ಮೇಲೆ ನಮ್ಮ ಪಯಣ;
ದಡವ ಮುಟ್ಟುವುದೆಂದೋ ಗೊತ್ತಿಲ್ಲ; ಬರುವಿರಾ –
ಶೂನ್ಯಗಳ ಕುರಿತಷ್ಟು ಮಾತನಾಡೋಣ.

…………………………..

ಕೆ.ಎನ್. ನಾಗರಾಜ್,

ಕಣಜನಹಳ್ಳಿ.

 

 

Share. Facebook Twitter Pinterest LinkedIn Tumblr Email
Previous Articleಬ್ಯಾಲಾಳು ಮತ್ತು ಬಿಳಲು
Next Article ಅಪಾರ, ನಿನ್ನ ಜೊತೆ…
ಬೇಳೂರು ಸುದರ್ಶನ
  • Website

Related Posts

ಓ ಗುರುವೇ..

February 7, 2019

ದಶಕದ ಹಿಂದಿನ ಡಿಜಿಟಲ್ ಕಾವ್ಯ

January 1, 2015

ಮೂರು ಜೈವಿಕ ಇಂಧನ ಹಾಡುಗಳು

March 10, 2011

Comments are closed.

ಕವನಗಳು
  • ಓ ಗುರುವೇ..
  • ದಶಕದ ಹಿಂದಿನ ಡಿಜಿಟಲ್ ಕಾವ್ಯ
  • ಮೂರು ಜೈವಿಕ ಇಂಧನ ಹಾಡುಗಳು
  • ನೀನೇನಂಥ ಮೆದು ಹುಡುಗನಲ್ಲ
  • ಅಪಾರ, ನಿನ್ನ ಜೊತೆ…
  • ತಣ್ಣಗೆ ಮಲಗಿದೆ ರಸ್ತೆ
  • ಕುರುಹಿಲ್ಲದ ನೆರಳು
  • ಆಶಾ ನನ್ನ ಆಶಾ
  • ನಿನಗಾಗಿ
  • ಆಪ್ಟಿಮಿಸಮ್
  • ಊಹೆಗಳು
  • ನಾಳೆ ಬರಬಹುದೇ ?
  • ಹಾಡು
  • ಓದಬೇಡ
  • ನಾಳೆಯೇ ಮುಂಜಾನೆ
  • ದ್ವೇಷದ ಹಾದಿ
  • ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ
  • ನಿನ್ನ ಹುಡುಕಿದ ಮೇಲೆ
  • ನೆಲವಾಗಿ ಹಬ್ಬಿದವಳಿಗೆ
  • ಬೆವರು
  • ಗೆರೆಗಳ ಕಥೆ
  • ಕತ್ತಲಿನ ಬೆಳಕು
  • ಮೌನವೂ ನನಗೇ
  • ಎಲ್ಲಿರಬಹುದು ನಮ್ಮ ಸುರಸುಂದರಿಯರು?
  • ಆ ಕಲಾವಿದ ಹೊರಟುಹೋದ ಮೇಲೆ
  • ಪ್ರಯೋಗಗಳು
  • ಶಬ್ದಗಳ ನಡುವೆದ್ದ ಮೌನ ಬೆಟ್ಟದ ಮೇಲೆ
  • You liberate
  • ಪಾರಿಜಾತದ ಉವಾಚ
  • ಅವಳೊಂದು ಗಿಡವಾಗಿದ್ದರೆ
  • ನನಗಂಟಿದ ಕರ್ಮದ ಕರೆ
  • ನಾನು ಬದಲಾಗಿದ್ದೇನೆ
  • ಹಾಗಿದ್ದರೇ ಚಂದ
  • ಗಾಳಿ
  • ಇಹ
  • ಡೊಂಕು ಮನಸ್ಸಿನ ಮಾನವರೇ
  • ಅವರು
  • ಜೀವ ಬಿಡಾರ
  • ಇಂತಹ ಹುಡುಗಿ
  • ಕ್ರಿಯಾಪದ್ಯ
  • ಸೂರ್ಯಕುಮಾರ ಮತ್ತು ಚಂದ್ರಕುಮಾರಿ
  • ಬಿರುಕು
  • Yet
  • ನಮ್ಮದೆಂಬೋ ವಸ್ತುಗಳು
  • ಗೋಡೆ ಬರಹ
  • ಅದೇನಂಥಾ…
  • ಸಲಹೆ
  • `ಅರ್ಥ’ಗಳು ನವ್ಯಕಥೆ ಕಟ್ಟುವ ಮೊದಲು
  • ಹೀಗೆ
  • ಸಂಬಂಧಪಟ್ಟವರಿಗೆ
  • ಅಳಿದ ಮೇಲೆ
  • ಉತ್ತರ
  • ಬೀಜಕ್ಕೆ
  • ಬೇಡಿಕೆಗಳು
  • ವೈಫಲ್ಯದತ್ತ
  • ಒಂದು ಗುಟ್ಟಿನ ಮಾತು
  • ಪ್ರತಿನಾಯಕ
  • ಕೊನೆಯ ಮಾತು
  • ಪುಷ್ಯದಂಗಳದಲ್ಲಿ
  • ರಾತ್ರಿ
  • ಹರಪನಹಳ್ಳಿಯಲ್ಲಿ ಮಳೆ
  • ನನ್ನ ಕನಸಿನ ಗೆಳೆಯ
  • ಇಬ್ಬನಿ
  • ಸ್ಥಿತಿ
  • ಒಮ್ಮೆ…
  • ಕ್ಷಮೆ
  • ಹಳೆ ಹಾಡು
  • ಕಾಲನುವಾಚ
  • ಪದರ
  • ಇಷ್ಟೇನಾ?
  • ನನ್ನ ಅಕ್ಕನಿಗೊಂದು ಪತ್ರ
  • ಡಿಜಿಟಲ್‌ ಕಚೇರಿ
  • ಹೊಸ ಭ್ರಮೆ
  • ಸಮತ ಸಾಕ್ಷರತೆ
  • ಈಗಲೂ ಹಟ ಹಿಡಿಯುತ್ತೀರ?
  • ಬಳ್ಳಕ್ಕನ ನಗೆ
  • ಕೆಲವು ವಿಳಾಸಗಳು
  • ತಡವಾಯಿತಾದರೂ
  • ಅವಳ ನೆನಪು
  • ಸುಕುಮಾರನ ನೆನಪುಗಳು
  • ನನ್ನ ಕವಿ
  • ನಿಶ್ಶಬ್ದಕ್ಕೂ ಕೊಳಲು
  • ಹೊಸ ವರ್ತಮಾನ
  • ಕವಿ ಗೆಳೆಯನ ಸಲಹೆಗಳು
  • ನಿಶ್ಶಬ್ದದ ವಾದ
  • ಬರೀ ಮಾತುಗಳಿರುವ ಸಾಲುಗಳು
  • ಅಕಿಯಾಮ ಯಾನ (ನನ್ನ ಸ್ವಂತ ವರದಿ)
  • ಬಲಿಪೀಠದ ಹೇಳಿಕೆ
  • ಸ್ನೇಹಪೂರ್ವಕವಾಗಿ
  • ರೂಪಾಂತರ
  • ಹರಿವ ನದಿಗಿದೆ ಜೀವ
  • ನಾನು ಸಮುದ್ರ
  • We wither away
  • ನತದೃಷ್ಟ ವೀರನ ಒಂದು ಕ್ಷಣ
  • ಸಮೀಕರಣ
  • ವರ್ತಮಾನದ ಬಿಸಿಲು
  • ಮರೆಯಬೇಡ
  • ಒಂದು ಗೀಗೀ ಪದ
  • ಅನಾವರಣ
  • ತಾರಾಲೋಕದ ಅನಾಥ ಹುಡುಗ
  • ನನ್ನ ಮೇಡಂ ಜಯಲಕ್ಷ್ಮಿ
  • ಪರಿಚಯ
  • ವಿವರಣೆ
  • ಪಾಪಿಯ ಪದ್ಯ
  • ನಿವೇದನೆ
  • ಅಸ್ವಸ್ಥನೆದೆ
  • ನಡೆದದ್ದು
  • ನೆನಪು
  • ಅವರು
  • ದಿನಚರಿ
  • ಖಳನಾಯಕಿ
  • ನನಗೆ ಸಂತೈಸುವ ಬೆರಳುಗಳಿವೆ
  • ಅವಳು
  • ಸ್ವಾರ್ಥಿಯೊಬ್ಬನ ಸ್ವಗತ
  • ಅಸಂಗತ
  • ಭ್ರಮೆ
  • ಜಲಪಾತದ ಶಬ್ದ
  • ಭೇಟಿ
  • ಮುಟ್ಟಬೇಡ ಗೆಳೆಯ ನೀನು
  • ಎಚ್ಚರಿಕೆ
  • ಮೌನವೂ ನನಗೇ
  • ಗೆರೆಗಳ ಕಥೆ
  • ಕುರುಹಿಲ್ಲದ ನೆರಳು
  • ನೆಲವಾಗಿ ಹಬ್ಬಿದವಳಿಗೆ
  • ಆಘ್ರಾಣಿಸೋ ಹಾಗೆ
  • ನಮ್ಮನ್ನೆ ಬದಲಿಸಿಕೊಂಡು
  • ನನ್ನ ನಿನ್ನೆ
  • ಬೆವರು
  • ಕತ್ತಲಿನ ಬೆಳಕು
  • ಕಾಯದ ಮಾಟ
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.