Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕವನಗಳು»ಡೊಂಕು ಮನಸ್ಸಿನ ಮಾನವರೇ
ಕವನಗಳು

ಡೊಂಕು ಮನಸ್ಸಿನ ಮಾನವರೇ

ಬೇಳೂರು ಸುದರ್ಶನBy ಬೇಳೂರು ಸುದರ್ಶನOctober 3, 2007Updated:May 19, 2025No Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಡೊಂಕು ಮನಸ್ಸಿನ ಮಾನವರೇ

ಡೊಂಕು ಮನಸ್ಸಿನ ಮಾನವರೇ
ನೀವೇನೇನಬ್ಬರ ನಡೆಸಿದಿರಿ ?
ಹುಟ್ಟಿದ ಹಾಗೇ ಬದುಕಲಾಗದೇ
ಸುಮ್ಮನೆ ತಲೆಯನು ತುರಿಸಿದಿರಿ

ನೀಟು ಗೀರುಗಳು ಬಳುಕುತ್ತಿದ್ದರೆ
ಅಕ್ಷರಗಳ ಪಡೆ ಪಡೆಯುವಿರಿ
ಕೊಂಬು ಕಹಳೆಗಳು ಕೂಗುತ್ತಿದ್ದರೆ
ಕಾಕಾಕೀಕಿ ಬರೆಯುವಿರಿ

ಕೆರೆದಂಡೆಯಲಿ ಕೋಣಗಳಿದ್ದರೆ
`ಕಮಲ' `ಬಸವ'ರನು ಕರೆಯುವಿರಿ.
ಕಣ್ಣಳತೆಯಲಿ ಹಣ್ಣುಗಳಿದ್ದರೆ
`ಬಾಬಾ ಗಿಳಿಯೇ' ರಮಿಸುವಿರಿ

ಸಿಟಿಬಸ್ಸುಗಳು ಸಿಗದಿದ್ದಾಗ
ಟಿಕ್‌ಟಿಕ್‌ಟಿಕ್‌ಟಿಕ್ ತೊದಲುವಿರಿ.
ಕೊಳಚೆಗೆ ಹುಟ್ಟಿದ ಸೊಳ್ಳೆ ಕಡಿದಾಗ
ಅಜ್ಜನ ಕಂಬಳಿ ನೆನೆಯುವಿರಿ.

ಬಾಡಿಗೆ ಮನೆಯನು ನೋಡಲು ಹೋದರೆ
ಹಾವಿನ ಠಾವಿದು ಎನ್ನುವಿರಿ
ಸೈಟೊಂದಿದ್ದರೆ ಸಾಲವು ದೊರೆತರೆ
ಹೂವಿನ ಹೊಸನಗು ಬೀರುವಿರಿ.

ಹಳೆ ಮಾಡೆಲ್ಲಿನ ಮಾರುತಿ ಸಿಕ್ಕರೆ
`ಅಜ್ಜನ ಕೋಲಿದು !' ಕಿರುಚುವಿರಿ
ರೇಸುಟ್ರಾಕಿನಲ್ಲಿ ಕತ್ತೆ ಗೆದ್ದರೂ
`ನನ್ನಯ ಕುದುರೆ' ಎನ್ನುವಿರಿ

ಟೀಯೇಡೀಯೆ ಲೆಕ್ಕಗಳಿಗೆ
ಮಗ್ಗಿಕೋಷ್ಟಕವ ಹುಡುಕುವಿರಿ
ಸೀಮೆಯೆಣ್ಣೆ ಸಕ್ಕರೆಯಿದ್ದರೆ
ಮಿಠಾಯಿ ಮಾಡಿ ಮೆಲ್ಲುವಿರಿ

ಚಿಟ್‌ಫಂಡ್ ಕಂಪನಿ ದಿವಾಳಿಯಾದರೆ
ಮೊದಲನೆ ಪಾಠ ಕಲಿಯುವಿರಿ
ಎರಡನೆ ಪಾಠ ಮೂರನೆ ಪಾಠ
ನಾಲ್ಕನೆ ಪಾಠ ಓದುವಿರಿ

ನಾಚುವ ಹುಡುಗರು ನಡೆಯುತ್ತಿದ್ದರೆ
ಗಾಂಧಿತಾತನ ನೆನಸುವಿರಿ
ಬೀಚುಗಳಲ್ಲಿ ಬಾರುಗಳಲ್ಲಿ
ಮಾನಮರ್‍ಯಾದೆ ಕಳೆಯುವಿರಿ.

ದುಃಖಿ ದರಿದ್ರರು ಎದುರಿಗೆ ಬಂದರೆ
ಸಮಾಜವಾದವ ಜಡಿಯುವಿರಿ
ಶಿವರಾತ್ರಿಯಲಿ ಸಿಗರೇಟಿನ ಜತೆ
ಕಲ್ಲಂಗಡಿಯನು ಕೊಯ್ಯುವಿರಿ

ಬೆಪ್ಪಗೆ ಕೂಡುವ ಜನಗಣವಿದ್ದರೆ
ಮೋಕ್ಷ ಸಿದ್ಧಾಂತ ಕೊರೆಯುವಿರಿ.
ಕೊನೆಯ ದಿನಗಳು ಕೇಕೆಹಾಕಿದರೆ
ಸುದೀರ್ಘ ಮೌನವ ತಾಳುವಿರಿ.

Share. Facebook Twitter Pinterest LinkedIn Tumblr Email
Previous Articleಅವರು
Next Article ಇಹ
ಬೇಳೂರು ಸುದರ್ಶನ
  • Website

Related Posts

ಓ ಗುರುವೇ..

February 7, 2019

ದಶಕದ ಹಿಂದಿನ ಡಿಜಿಟಲ್ ಕಾವ್ಯ

January 1, 2015

ಮೂರು ಜೈವಿಕ ಇಂಧನ ಹಾಡುಗಳು

March 10, 2011

Comments are closed.

ಕವನಗಳು
  • ಓ ಗುರುವೇ..
  • ದಶಕದ ಹಿಂದಿನ ಡಿಜಿಟಲ್ ಕಾವ್ಯ
  • ಮೂರು ಜೈವಿಕ ಇಂಧನ ಹಾಡುಗಳು
  • ನೀನೇನಂಥ ಮೆದು ಹುಡುಗನಲ್ಲ
  • ಅಪಾರ, ನಿನ್ನ ಜೊತೆ…
  • ಶೂನ್ಯಗಳ ಕುರಿತು
  • ತಣ್ಣಗೆ ಮಲಗಿದೆ ರಸ್ತೆ
  • ಕುರುಹಿಲ್ಲದ ನೆರಳು
  • ಆಶಾ ನನ್ನ ಆಶಾ
  • ನಿನಗಾಗಿ
  • ಆಪ್ಟಿಮಿಸಮ್
  • ಊಹೆಗಳು
  • ನಾಳೆ ಬರಬಹುದೇ ?
  • ಹಾಡು
  • ಓದಬೇಡ
  • ನಾಳೆಯೇ ಮುಂಜಾನೆ
  • ದ್ವೇಷದ ಹಾದಿ
  • ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ
  • ನಿನ್ನ ಹುಡುಕಿದ ಮೇಲೆ
  • ನೆಲವಾಗಿ ಹಬ್ಬಿದವಳಿಗೆ
  • ಬೆವರು
  • ಗೆರೆಗಳ ಕಥೆ
  • ಕತ್ತಲಿನ ಬೆಳಕು
  • ಮೌನವೂ ನನಗೇ
  • ಎಲ್ಲಿರಬಹುದು ನಮ್ಮ ಸುರಸುಂದರಿಯರು?
  • ಆ ಕಲಾವಿದ ಹೊರಟುಹೋದ ಮೇಲೆ
  • ಪ್ರಯೋಗಗಳು
  • ಶಬ್ದಗಳ ನಡುವೆದ್ದ ಮೌನ ಬೆಟ್ಟದ ಮೇಲೆ
  • You liberate
  • ಪಾರಿಜಾತದ ಉವಾಚ
  • ಅವಳೊಂದು ಗಿಡವಾಗಿದ್ದರೆ
  • ನನಗಂಟಿದ ಕರ್ಮದ ಕರೆ
  • ನಾನು ಬದಲಾಗಿದ್ದೇನೆ
  • ಹಾಗಿದ್ದರೇ ಚಂದ
  • ಗಾಳಿ
  • ಇಹ
  • ಅವರು
  • ಜೀವ ಬಿಡಾರ
  • ಇಂತಹ ಹುಡುಗಿ
  • ಕ್ರಿಯಾಪದ್ಯ
  • ಸೂರ್ಯಕುಮಾರ ಮತ್ತು ಚಂದ್ರಕುಮಾರಿ
  • ಬಿರುಕು
  • Yet
  • ನಮ್ಮದೆಂಬೋ ವಸ್ತುಗಳು
  • ಗೋಡೆ ಬರಹ
  • ಅದೇನಂಥಾ…
  • ಸಲಹೆ
  • `ಅರ್ಥ’ಗಳು ನವ್ಯಕಥೆ ಕಟ್ಟುವ ಮೊದಲು
  • ಹೀಗೆ
  • ಸಂಬಂಧಪಟ್ಟವರಿಗೆ
  • ಅಳಿದ ಮೇಲೆ
  • ಉತ್ತರ
  • ಬೀಜಕ್ಕೆ
  • ಬೇಡಿಕೆಗಳು
  • ವೈಫಲ್ಯದತ್ತ
  • ಒಂದು ಗುಟ್ಟಿನ ಮಾತು
  • ಪ್ರತಿನಾಯಕ
  • ಕೊನೆಯ ಮಾತು
  • ಪುಷ್ಯದಂಗಳದಲ್ಲಿ
  • ರಾತ್ರಿ
  • ಹರಪನಹಳ್ಳಿಯಲ್ಲಿ ಮಳೆ
  • ನನ್ನ ಕನಸಿನ ಗೆಳೆಯ
  • ಇಬ್ಬನಿ
  • ಸ್ಥಿತಿ
  • ಒಮ್ಮೆ…
  • ಕ್ಷಮೆ
  • ಹಳೆ ಹಾಡು
  • ಕಾಲನುವಾಚ
  • ಪದರ
  • ಇಷ್ಟೇನಾ?
  • ನನ್ನ ಅಕ್ಕನಿಗೊಂದು ಪತ್ರ
  • ಡಿಜಿಟಲ್‌ ಕಚೇರಿ
  • ಹೊಸ ಭ್ರಮೆ
  • ಸಮತ ಸಾಕ್ಷರತೆ
  • ಈಗಲೂ ಹಟ ಹಿಡಿಯುತ್ತೀರ?
  • ಬಳ್ಳಕ್ಕನ ನಗೆ
  • ಕೆಲವು ವಿಳಾಸಗಳು
  • ತಡವಾಯಿತಾದರೂ
  • ಅವಳ ನೆನಪು
  • ಸುಕುಮಾರನ ನೆನಪುಗಳು
  • ನನ್ನ ಕವಿ
  • ನಿಶ್ಶಬ್ದಕ್ಕೂ ಕೊಳಲು
  • ಹೊಸ ವರ್ತಮಾನ
  • ಕವಿ ಗೆಳೆಯನ ಸಲಹೆಗಳು
  • ನಿಶ್ಶಬ್ದದ ವಾದ
  • ಬರೀ ಮಾತುಗಳಿರುವ ಸಾಲುಗಳು
  • ಅಕಿಯಾಮ ಯಾನ (ನನ್ನ ಸ್ವಂತ ವರದಿ)
  • ಬಲಿಪೀಠದ ಹೇಳಿಕೆ
  • ಸ್ನೇಹಪೂರ್ವಕವಾಗಿ
  • ರೂಪಾಂತರ
  • ಹರಿವ ನದಿಗಿದೆ ಜೀವ
  • ನಾನು ಸಮುದ್ರ
  • We wither away
  • ನತದೃಷ್ಟ ವೀರನ ಒಂದು ಕ್ಷಣ
  • ಸಮೀಕರಣ
  • ವರ್ತಮಾನದ ಬಿಸಿಲು
  • ಮರೆಯಬೇಡ
  • ಒಂದು ಗೀಗೀ ಪದ
  • ಅನಾವರಣ
  • ತಾರಾಲೋಕದ ಅನಾಥ ಹುಡುಗ
  • ನನ್ನ ಮೇಡಂ ಜಯಲಕ್ಷ್ಮಿ
  • ಪರಿಚಯ
  • ವಿವರಣೆ
  • ಪಾಪಿಯ ಪದ್ಯ
  • ನಿವೇದನೆ
  • ಅಸ್ವಸ್ಥನೆದೆ
  • ನಡೆದದ್ದು
  • ನೆನಪು
  • ಅವರು
  • ದಿನಚರಿ
  • ಖಳನಾಯಕಿ
  • ನನಗೆ ಸಂತೈಸುವ ಬೆರಳುಗಳಿವೆ
  • ಅವಳು
  • ಸ್ವಾರ್ಥಿಯೊಬ್ಬನ ಸ್ವಗತ
  • ಅಸಂಗತ
  • ಭ್ರಮೆ
  • ಜಲಪಾತದ ಶಬ್ದ
  • ಭೇಟಿ
  • ಮುಟ್ಟಬೇಡ ಗೆಳೆಯ ನೀನು
  • ಎಚ್ಚರಿಕೆ
  • ಮೌನವೂ ನನಗೇ
  • ಗೆರೆಗಳ ಕಥೆ
  • ಕುರುಹಿಲ್ಲದ ನೆರಳು
  • ನೆಲವಾಗಿ ಹಬ್ಬಿದವಳಿಗೆ
  • ಆಘ್ರಾಣಿಸೋ ಹಾಗೆ
  • ನಮ್ಮನ್ನೆ ಬದಲಿಸಿಕೊಂಡು
  • ನನ್ನ ನಿನ್ನೆ
  • ಬೆವರು
  • ಕತ್ತಲಿನ ಬೆಳಕು
  • ಕಾಯದ ಮಾಟ
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.