Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕವನಗಳು»ಸಮತ ಸಾಕ್ಷರತೆ
ಕವನಗಳು

ಸಮತ ಸಾಕ್ಷರತೆ

ಬೇಳೂರು ಸುದರ್ಶನBy ಬೇಳೂರು ಸುದರ್ಶನMarch 4, 2007Updated:May 19, 2025No Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಸಮತೆ – ಸಾಕ್ಷರತೆ
೯-೯-೯೦ 
ಬಳ್ಳಾರಿ

ಕೋಟಿ ಸೂರುಗಳ ಬರಿಯೊಡಲೊಳಗೆ
ಹೊಲೆತನ ತೊಟ್ಟವರಿದ್ದಾರೆ
ಅಗಣಿತ ನಕ್ಷತ್ರಗಳಂತೇನೇ
ಅಕ್ಷರ ಬರೆದವರಿದ್ದಾರೆ.

ಹೆಬ್ಬೆಟ್ಟಿನ ಅರೆಗೆರೆಗಳ ಜತೆಗೇ
ಹೊಲಮನೆ ಕೊಟ್ಟವರಿದ್ದಾರೆ
ದಾರಿದೀಪಗಳ ಬೆಳಕಿನ ಕೆಳಗೆ
ಕತ್ತಲು ಹೊದ್ದವರಿದ್ದಾರೆ.

ಕನಸಿಗೆ ಕಾಣದ ಮನಸಿಗೆ ಮೂಡದ
ಸುಖಗಳ ಸುಟ್ಟವರಿದ್ದಾರೆ.
ದಲಿತರಾಗಿ ನಿರ್ವೇಶಿತರಾಗಿ
ದಹಿಸಿದ ಮನುಷ್ಯರಿದ್ದಾರೆ.

ತುತ್ತಿನ ಚೀಲವೆ ಬದುಕಿನ ಗುರಿಯೆ?
ಇತ್ತಲ್ಲವೆ ಸಂತೃಪ್ತಿಯ ಹೊತ್ತು?
ಕಾಲಮಾನಗಳು ಬೆಳೆದಿವೆ ಧುತ್ತನೆ
ಕಲ್ಕಿಯ ರೂಪವ ಹೊತ್ತು.

ಎಲೆ ಹಸಿರಿಲ್ಲವೆ? ನೆಲಕುಸಿರಿಲ್ಲವೆ?
ಜಲಕ್ಕಿಲ್ಲವೆ ಜೀವನದೃಷ್ಟಿ?
ನಮಗಿಲ್ಲವೆ ಹೃದಯ? ಇಲ್ಲವೆ ಮನ?
ಮತ್ತೇನದು ಜಾತಿಯ ಸೃಷ್ಟಿ?

ದುಡಿಯುವ ದುಸ್ತರ ಜೀವಿಗಳೆಡೆಗೆ
ನಮಗಿಲ್ಲವೆ ಕಿರುನೋಟ?
ಎಲ್ಲರಂತೆ ಎದ್ದೇಳುವ ಹಾಗೆ
ಅಕ್ಷರ ಕಲಿಕೆಯ ಪಾಠ?

ಹಳ್ಳಿಹಳ್ಳಿಗಳ ಹೃದಯಗಳಲ್ಲಿ
ಅಕ್ಷರಗಳ ತೆನೆ ಬೆಳೆಯೋಣ
ಮುಟ್ಟುವ ಮನೆಗಳ, ಮೌನದ ಮನಗಳ
ಅಸ್ಪೃಶ್ಯತೆಯನು ಅಳಿಸೋಣ

ಬಿಡಿ ಮಾತೇತಕೆ, ಬರಿಯಳಲೇತಕೆ?
ಬನ್ನಿ ಭೇದಗಳ ಮರೆಯೋಣ
ಹೊಲೆತನವೇತಕೆ? ಹಿರಿತನವೇತಕೆ?
ಸುಖ ಬದುಕಿನ ಕಥೆ ಬರೆಯೋಣ.

ಹುಯ್ಯಲಿ ಧೋ ಮಳೆ ಹರಿಯಲಿ ನೀರು
ಮೌಲ್ಯದ ದಾರಿಯ ತೊಳೆದು
ಬೀಸಲಿ ಬಾಂಧವ್ಯದ ಮೆದುಗಾಳಿ
ದ್ವೇಷದ ಧೂಳನು ಕಳೆದು

ಸರ್ವಜಗತ್ತಿನ ಜನಸಾಮಾನ್ಯರಿಗೆ
ಬೇಕಿದೆ ಸಾಮಾಜಿಕ ಸಮತೆ
ಜೀವ ಸೌಂದರ್ಯ ಗೌರವ ಪಡೆಯಲಿ
ಬೆಳಗಲಿ ಸಾಕ್ಷರತಾ ಹಣತೆ.

Share. Facebook Twitter Pinterest LinkedIn Tumblr Email
Previous Articleಈಗಲೂ ಹಟ ಹಿಡಿಯುತ್ತೀರ?
Next Article ಶಂಕರನಾರಾಯಣನ ಸೈಕಲ್ಲು ಪುರಾಣ
ಬೇಳೂರು ಸುದರ್ಶನ
  • Website

Related Posts

ಓ ಗುರುವೇ..

February 7, 2019

ದಶಕದ ಹಿಂದಿನ ಡಿಜಿಟಲ್ ಕಾವ್ಯ

January 1, 2015

ಮೂರು ಜೈವಿಕ ಇಂಧನ ಹಾಡುಗಳು

March 10, 2011

Comments are closed.

ಕವನಗಳು
  • ಓ ಗುರುವೇ..
  • ದಶಕದ ಹಿಂದಿನ ಡಿಜಿಟಲ್ ಕಾವ್ಯ
  • ಮೂರು ಜೈವಿಕ ಇಂಧನ ಹಾಡುಗಳು
  • ನೀನೇನಂಥ ಮೆದು ಹುಡುಗನಲ್ಲ
  • ಅಪಾರ, ನಿನ್ನ ಜೊತೆ…
  • ಶೂನ್ಯಗಳ ಕುರಿತು
  • ತಣ್ಣಗೆ ಮಲಗಿದೆ ರಸ್ತೆ
  • ಕುರುಹಿಲ್ಲದ ನೆರಳು
  • ಆಶಾ ನನ್ನ ಆಶಾ
  • ನಿನಗಾಗಿ
  • ಆಪ್ಟಿಮಿಸಮ್
  • ಊಹೆಗಳು
  • ನಾಳೆ ಬರಬಹುದೇ ?
  • ಹಾಡು
  • ಓದಬೇಡ
  • ನಾಳೆಯೇ ಮುಂಜಾನೆ
  • ದ್ವೇಷದ ಹಾದಿ
  • ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ
  • ನಿನ್ನ ಹುಡುಕಿದ ಮೇಲೆ
  • ನೆಲವಾಗಿ ಹಬ್ಬಿದವಳಿಗೆ
  • ಬೆವರು
  • ಗೆರೆಗಳ ಕಥೆ
  • ಕತ್ತಲಿನ ಬೆಳಕು
  • ಮೌನವೂ ನನಗೇ
  • ಎಲ್ಲಿರಬಹುದು ನಮ್ಮ ಸುರಸುಂದರಿಯರು?
  • ಆ ಕಲಾವಿದ ಹೊರಟುಹೋದ ಮೇಲೆ
  • ಪ್ರಯೋಗಗಳು
  • ಶಬ್ದಗಳ ನಡುವೆದ್ದ ಮೌನ ಬೆಟ್ಟದ ಮೇಲೆ
  • You liberate
  • ಪಾರಿಜಾತದ ಉವಾಚ
  • ಅವಳೊಂದು ಗಿಡವಾಗಿದ್ದರೆ
  • ನನಗಂಟಿದ ಕರ್ಮದ ಕರೆ
  • ನಾನು ಬದಲಾಗಿದ್ದೇನೆ
  • ಹಾಗಿದ್ದರೇ ಚಂದ
  • ಗಾಳಿ
  • ಇಹ
  • ಡೊಂಕು ಮನಸ್ಸಿನ ಮಾನವರೇ
  • ಅವರು
  • ಜೀವ ಬಿಡಾರ
  • ಇಂತಹ ಹುಡುಗಿ
  • ಕ್ರಿಯಾಪದ್ಯ
  • ಸೂರ್ಯಕುಮಾರ ಮತ್ತು ಚಂದ್ರಕುಮಾರಿ
  • ಬಿರುಕು
  • Yet
  • ನಮ್ಮದೆಂಬೋ ವಸ್ತುಗಳು
  • ಗೋಡೆ ಬರಹ
  • ಅದೇನಂಥಾ…
  • ಸಲಹೆ
  • `ಅರ್ಥ’ಗಳು ನವ್ಯಕಥೆ ಕಟ್ಟುವ ಮೊದಲು
  • ಹೀಗೆ
  • ಸಂಬಂಧಪಟ್ಟವರಿಗೆ
  • ಅಳಿದ ಮೇಲೆ
  • ಉತ್ತರ
  • ಬೀಜಕ್ಕೆ
  • ಬೇಡಿಕೆಗಳು
  • ವೈಫಲ್ಯದತ್ತ
  • ಒಂದು ಗುಟ್ಟಿನ ಮಾತು
  • ಪ್ರತಿನಾಯಕ
  • ಕೊನೆಯ ಮಾತು
  • ಪುಷ್ಯದಂಗಳದಲ್ಲಿ
  • ರಾತ್ರಿ
  • ಹರಪನಹಳ್ಳಿಯಲ್ಲಿ ಮಳೆ
  • ನನ್ನ ಕನಸಿನ ಗೆಳೆಯ
  • ಇಬ್ಬನಿ
  • ಸ್ಥಿತಿ
  • ಒಮ್ಮೆ…
  • ಕ್ಷಮೆ
  • ಹಳೆ ಹಾಡು
  • ಕಾಲನುವಾಚ
  • ಪದರ
  • ಇಷ್ಟೇನಾ?
  • ನನ್ನ ಅಕ್ಕನಿಗೊಂದು ಪತ್ರ
  • ಡಿಜಿಟಲ್‌ ಕಚೇರಿ
  • ಹೊಸ ಭ್ರಮೆ
  • ಈಗಲೂ ಹಟ ಹಿಡಿಯುತ್ತೀರ?
  • ಬಳ್ಳಕ್ಕನ ನಗೆ
  • ಕೆಲವು ವಿಳಾಸಗಳು
  • ತಡವಾಯಿತಾದರೂ
  • ಅವಳ ನೆನಪು
  • ಸುಕುಮಾರನ ನೆನಪುಗಳು
  • ನನ್ನ ಕವಿ
  • ನಿಶ್ಶಬ್ದಕ್ಕೂ ಕೊಳಲು
  • ಹೊಸ ವರ್ತಮಾನ
  • ಕವಿ ಗೆಳೆಯನ ಸಲಹೆಗಳು
  • ನಿಶ್ಶಬ್ದದ ವಾದ
  • ಬರೀ ಮಾತುಗಳಿರುವ ಸಾಲುಗಳು
  • ಅಕಿಯಾಮ ಯಾನ (ನನ್ನ ಸ್ವಂತ ವರದಿ)
  • ಬಲಿಪೀಠದ ಹೇಳಿಕೆ
  • ಸ್ನೇಹಪೂರ್ವಕವಾಗಿ
  • ರೂಪಾಂತರ
  • ಹರಿವ ನದಿಗಿದೆ ಜೀವ
  • ನಾನು ಸಮುದ್ರ
  • We wither away
  • ನತದೃಷ್ಟ ವೀರನ ಒಂದು ಕ್ಷಣ
  • ಸಮೀಕರಣ
  • ವರ್ತಮಾನದ ಬಿಸಿಲು
  • ಮರೆಯಬೇಡ
  • ಒಂದು ಗೀಗೀ ಪದ
  • ಅನಾವರಣ
  • ತಾರಾಲೋಕದ ಅನಾಥ ಹುಡುಗ
  • ನನ್ನ ಮೇಡಂ ಜಯಲಕ್ಷ್ಮಿ
  • ಪರಿಚಯ
  • ವಿವರಣೆ
  • ಪಾಪಿಯ ಪದ್ಯ
  • ನಿವೇದನೆ
  • ಅಸ್ವಸ್ಥನೆದೆ
  • ನಡೆದದ್ದು
  • ನೆನಪು
  • ಅವರು
  • ದಿನಚರಿ
  • ಖಳನಾಯಕಿ
  • ನನಗೆ ಸಂತೈಸುವ ಬೆರಳುಗಳಿವೆ
  • ಅವಳು
  • ಸ್ವಾರ್ಥಿಯೊಬ್ಬನ ಸ್ವಗತ
  • ಅಸಂಗತ
  • ಭ್ರಮೆ
  • ಜಲಪಾತದ ಶಬ್ದ
  • ಭೇಟಿ
  • ಮುಟ್ಟಬೇಡ ಗೆಳೆಯ ನೀನು
  • ಎಚ್ಚರಿಕೆ
  • ಮೌನವೂ ನನಗೇ
  • ಗೆರೆಗಳ ಕಥೆ
  • ಕುರುಹಿಲ್ಲದ ನೆರಳು
  • ನೆಲವಾಗಿ ಹಬ್ಬಿದವಳಿಗೆ
  • ಆಘ್ರಾಣಿಸೋ ಹಾಗೆ
  • ನಮ್ಮನ್ನೆ ಬದಲಿಸಿಕೊಂಡು
  • ನನ್ನ ನಿನ್ನೆ
  • ಬೆವರು
  • ಕತ್ತಲಿನ ಬೆಳಕು
  • ಕಾಯದ ಮಾಟ
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.