Facebook X (Twitter) Instagram
    Wednesday, November 29
    Facebook X (Twitter) Instagram Pinterest YouTube
    ಬೇಳೂರುಸುದರ್ಶನ
    • ಮುಖಪುಟ
    • ಲೇಖನಗಳು
    • ನನ್ನ ಪಯಣ
      • ನನ್ನ ಕಿರು ಪರಿಚಯ
    • ಕವನಗಳು
    • ಸುದ್ದಿ
    • ವಿಮರ್ಶೆ
    • ಸಣ್ಣ ಕಥೆಗಳು
    Subscribe
    ಬೇಳೂರುಸುದರ್ಶನ
    You are at:Home»ಕವನಗಳು»ಮೂರು ಜೈವಿಕ ಇಂಧನ ಹಾಡುಗಳು
    ಕವನಗಳು

    ಮೂರು ಜೈವಿಕ ಇಂಧನ ಹಾಡುಗಳು

    adminBy adminMarch 10, 20114 Comments2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    1. ಜೈವಿಕ ಇಂಧನ ಚಿರಂತನ

     

    ಹೊಂಗೆಯ ದೀಪವ ಹೊತ್ತಿಸಬನ್ನಿ

    ಬೇವಿನೆಣ್ಣೆಯನು ಬಸಿಯುವ ಬನ್ನಿ

    ಹಿಪ್ಪೆಯ ಹಿಂಡಿಯ ಬಳಸುವ ಬನ್ನಿ

    ಜೈವಿಕ ಇಂಧನ ಒಳ್ಳೆಯದಣ್ಣ

    ಡೀಸೆಲ್ ಪೆಟ್ರೋಲ್ ಎಷ್ಟು ದಿನ?

    ಜೈವಿಕ ಇಂಧನ ಚಿರಂತನ !

    ಬೀದಿಯ ಬದಿಯಲಿ ಬೆಳೆಯಲು ಬಹುದು

    ಹೊಲಗಳ ಬದುವಲಿ ಬೆಳಯಲು ಅಹುದು

    ಬೇವಿನ, ಹೊಂಗೆಯ, ಹಿಪ್ಪೆಯ ಮರಗಳ

    ಬೆಳೆಸುವ ಕಾಯಕ ಒಳ್ಳೆಯದಣ್ಣ

    ಬರಗಾಲಕ್ಕೆ ಎಷ್ಟು ದಿನ?

    ಜೈವಿಕ ಇಂಧನ ಚಿರಂತನ !

    ನದಿಯ ದಡದಲ್ಲಿ, ಬೇಲಿಗೆ ಬದಲಿ

    ಪಾಳು ಭೂಮಿಯಲಿ, ನಾಲೆಯ ಪಕ್ಕ

    ಹೊಂಗೆಯ ಮರಗಳ ಬೆಳೆಯೋಣ

    ಇಂಧನ ಕ್ರಾಂತಿಯ ಮಾಡೋಣ

    ಆಮದು ಪೆಟ್ರೋಲ್ ಎಷ್ಟು ದಿನ?

    ಜೈವಿಕ ಇಂಧನ ಚಿರಂತನ !

    ಬೇವಿನ ಬೀಜವೆ ಔಷಧವಾಗಿ

    ಕಷಾಯ ಕೀಟನಾಶಕವಾಗಿ

    ಬೇವಿನ ಮರವೇ ಕುರ್ಚಿಗಳಾಗಿ

    ಬೇವಿನ ಕೃಷಿಯೇ ಸೋಜಿಗವಣ್ಣ

    ಓಟದ ಬದುಕು ಎಷ್ಟು ದಿನ?

    ಜೈವಿಕ ಇಂಧನ ಚಿರಂತನ !

    ಟಿಲ್ಲರ್, ಪಂಪ್ಸೆಟ್, ಜನರೇಟ್ರಲ್ಲಿ

    ಬಸ್ಸು ರೈಲು ಟ್ರಾಕ್ಟರಿನಲ್ಲಿ

    ಹೊಂಗೆಯ ಡೀಸೆಲ್ ಬಳಸಲೆ ಬಹುದು

    ಇಂಧನ ಕ್ರಾಂತಿಯ ಮಾಡಲೆ ಬಹುದು

    ಅರ್ಬನ್ ಕಲ್ಚರ್ ಎಷ್ಟು ದಿನ?

    ಜೈವಿಕ ಇಂಧನ ಚಿರಂತನ !

    ಕೈಯಲಿ ತಿರುಗಿಸಿ, ಸೈಕಲ್ ಓಡಿಸಿ

    ಜೈವಿಕ ಎಣ್ಣೆಯ ತೆಗೆಯುವ ಬನ್ನಿ

    ಹಿಂಡಿಯನೆಲ್ಲ ಹೊಲಕ್ಕೆ ಹಾಕಿ

    ಹೆಚ್ಚಿನ ಫಸಲನು  ಪಡೆಯುವ ಬನ್ನಿ

    ಡೀಸೆಲ್ ಭ್ರಾಂತಿ ಎಷ್ಟು ದಿನ?

    ಜೈವಿಕ ಇಂಧನ ಚಿರಂತನ !

     

    2. ನಮ್ಮೂರ ಹೊಂಗೆಯ ಮರವೆ….

    (ನಮ್ಮೂರ ಮಂದಾರ ಹೂವೆ ಧಾಟಿಯಲ್ಲಿ)

    ನಮ್ಮೂರ ಹೊಂಗೆಯಾ ಮರವೆ

    ನಿನ್ನೊಲುಮೆ ಇಂಧನದ ಚೆಲುವೆ

    ಬೆಳಕಾಗಿ ಮನೆಯನು ಬೆಳಗು

    ನಮ್ಮ ಬರಿದಾದ ಟ್ಯಾಂಕನ್ನು ತುಂಬು

    ಬೆಳೆದಿರುವ ನೀನು, ಬಳಲಿರುವೆ ನಾನು

    ಡೀಸೆಲ್ಲು ಮರೆಯಾದ ಯುಗದಿ

    ನಿನ್ನನ್ನೆ ಬಳಸಿ, ಇಂಧನವ ಗಳಿಸಿ

    ವಾಹನವಾ ಚಲಿಸುವೆನು ನಾನು

    ನಮ್ಮೂರ ಸಿಮರೂಬ ಮರವೆ

    ನೀನೆನ್ನ ನೆರಳಾಗಿ ಬರುವೆ

    ಹಸಿರಾಗಿ ಬರಗಾಲ ನೀಗಿ

    ನಮ್ಮ ಭೂತಾಯಿ ಬವಣೆಗಳ ಕಳೆವೆ

    ಸವಕಳಿಯ ತಡೆದು, ಭೂಸಾರ ಹಿಡಿದು

    ಬೆಳೆಗಳಿಗೆ ಹೊಸ ಜೀವ ಕೊಡುವೆ

    ಇಂಧನವಾ ನೀಡಿ, ಬದುಕನ್ನೆ ಚಲಿಸಿ

    ನಮಗೆಲ್ಲ ಮರುಜನ್ಮ ಕೊಡುವೆ

    3. ದೇಶವ ಕಟ್ಟೋಣ

    (ಜಾನಪದ ಧಾಟಿ)

    ಹೊಂಗೆಯ ಬೆಳೆಯೋಣ|ನಾವು| ಹಿಪ್ಪೆಯ ಬೆಳೆಸೋಣ

    ಬೇವನ್ನು ಬೆಳೆದು|ಸಿಮರೂಬ ನೆಟ್ಟು|

    ಡೀಸೆಲ್ಲು ಪಡೆಯೋಣ|ನಾವು| ಡೀಸೆಲ್ಲು ಪಡೆಯೋಣ

    ಡೀಸೆಲ್ಲು ಖಾಲಿಯಾಗಿ | ಪೆಟ್ರೋಲು ಇಲ್ಲವಾಗಿ

    ಊರೆಲ್ಲ ವಾಹನ ನಿಂತಾಗ ನಾವು

    ಟ್ರಾಕ್ಟರ್ರು ನಡೆಸೋಣ|ನಾವು ಬಸ್ಸನ್ನೆ ಓಡಿಸೋಣ

    ಬರಗಾಲ ಬರದಂತೆ|ನಾವು|ಭರವಸೆಯಾಗೋಣ

    ಬರಡೆಂಬ ಭೂಮೀಲಿ ಹೊಂಗೇಯ ಬೆಳೆದು

    ಡೀಸೆಲ್ಲು ಎತ್ತೋಣ|ನಾವು ಹಸಿರನ್ನು ಬಿತ್ತೋಣ

    ಸಂಾವ ಕಟ್ಟೋಣ|ನಾವು|ಒಟ್ಟಾಗಿ ಬೆಳೆಯೋಣ

    ಜೈವಿಕ ಇಂಧನ ಪೂರೈಕೆ ಮಾಡಿ

    ದೇಶಾವ ಕಟ್ಟೋಣ | ನಾವು | ನಾಡನ್ನು ಬೆಳೆಸೋಣ

    ಜೈವಿಕ ಇಂಧನವಾ|ನಾವು|ಎಲ್ಲೆಲ್ಲೂ ಬಳಸೋಣ

    ಪಾಳೆಂಬ ಭೂಮಿಯು | ಹಾಳೆಂಬ ಶಾಪವ

    ನೀಗಿಸಿ ಬೆಳೆಯೋಣ|ನಾವು|ಹೊಂಗೇಯ ಬೆಳೆಯೋಣ

    (ಫೆಬ್ರುವರಿ ಮೊದಲ ವಾರದಲ್ಲಿ ಧಾರವಾಡದ ಬಳಿಯ ಗುಂಗರಗಟ್ಟಿಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವತಿಯಿಂದ ನಡೆದ ಜೈವಿಕ  ಇಂಧನ ಲೇಖಕರ ಕಾರ್ಯಾಗಾರದಲ್ಲಿ ಬರೆದ ಕವನಗಳು)

    Share. Facebook Twitter Pinterest LinkedIn Tumblr Email
    Previous Articleಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
    Next Article ಸಹಕಾರ ಚಳವಳಿ : ಒಂದು `ಹೊರ’ನೋಟ
    admin
    • Website

    Related Posts

    ಓ ಗುರುವೇ..

    February 7, 2019

    ದಶಕದ ಹಿಂದಿನ ಡಿಜಿಟಲ್ ಕಾವ್ಯ

    January 1, 2015

    ನೀನೇನಂಥ ಮೆದು ಹುಡುಗನಲ್ಲ

    December 25, 2008

    4 Comments

    1. Chetana TeerthahaLLi on March 10, 2011 8:48 pm

      1. ಒಳ್ಳೆ ಸರ್ಕಾರೀ ಜಾಹೀರಾತಿನ ಹಾಡು! ಜನರನ್ನ ಎಜುಕೇಟ್ ಮಾಡೋದಕ್ಕೆ ಸರಳ ಮತ್ತು attractive.
      2. ನಿಜ್ವಾಗ್ಲೂ ಅದೇ ರಾಗದಲ್ಲಿ ಓದಿಕೊಂಡು ಎಂಜಾಯ್ ಮಾಡುವಂತಾಯ್ತು 🙂
      3. ಈ ಮೂರು ತಲುಪಬೇಕಾದವರನ್ನ ತಲುಪಿದೆಯಾ? ರೈತರನ್ನ? ಹಾಗಾದ್ರೆ ಚೆಂದ…
      ಜೈವಿಕ ಇಂಧನ ಲೇಖಕರ ಕಾರ್ಯಾಗಾರ ಸಾರ್ಥಕ!! (kidding 🙂 )

      Reply
    2. sunil on March 10, 2011 9:46 pm

      thumba chennagide sir nimma krushi kavithegalu, please continue sir.

      Reply
    3. Dr.Shivasharana C.T on September 27, 2013 7:48 pm

      sir, thank you very much. tumba upayuktha mahitiyulla kavanagaLu. eega kala odagi bandide. paryaya indhanada atyavshyakate yide.

      Reply
    4. Pingback: ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ | ಬೇಳೂರು ಸುದರ್ಶನ

    Leave A Reply Cancel Reply

    ಕವನಗಳು
    • ಓ ಗುರುವೇ..
    • ದಶಕದ ಹಿಂದಿನ ಡಿಜಿಟಲ್ ಕಾವ್ಯ
    • ನೀನೇನಂಥ ಮೆದು ಹುಡುಗನಲ್ಲ
    • ಅಪಾರ, ನಿನ್ನ ಜೊತೆ…
    • ಶೂನ್ಯಗಳ ಕುರಿತು
    • ತಣ್ಣಗೆ ಮಲಗಿದೆ ರಸ್ತೆ
    • ಕುರುಹಿಲ್ಲದ ನೆರಳು
    • ಆಶಾ ನನ್ನ ಆಶಾ
    • ನಿನಗಾಗಿ
    • ಆಪ್ಟಿಮಿಸಮ್
    • ಊಹೆಗಳು
    • ನಾಳೆ ಬರಬಹುದೇ ?
    • ಹಾಡು
    • ಓದಬೇಡ
    • ನಾಳೆಯೇ ಮುಂಜಾನೆ
    • ದ್ವೇಷದ ಹಾದಿ
    • ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ
    • ನಿನ್ನ ಹುಡುಕಿದ ಮೇಲೆ
    • ನೆಲವಾಗಿ ಹಬ್ಬಿದವಳಿಗೆ
    • ಬೆವರು
    • ಗೆರೆಗಳ ಕಥೆ
    • ಕತ್ತಲಿನ ಬೆಳಕು
    • ಮೌನವೂ ನನಗೇ
    • ಎಲ್ಲಿರಬಹುದು ನಮ್ಮ ಸುರಸುಂದರಿಯರು?
    • ಆ ಕಲಾವಿದ ಹೊರಟುಹೋದ ಮೇಲೆ
    • ಪ್ರಯೋಗಗಳು
    • ಶಬ್ದಗಳ ನಡುವೆದ್ದ ಮೌನ ಬೆಟ್ಟದ ಮೇಲೆ
    • You liberate
    • ಪಾರಿಜಾತದ ಉವಾಚ
    • ಅವಳೊಂದು ಗಿಡವಾಗಿದ್ದರೆ
    • ನನಗಂಟಿದ ಕರ್ಮದ ಕರೆ
    • ನಾನು ಬದಲಾಗಿದ್ದೇನೆ
    • ಹಾಗಿದ್ದರೇ ಚಂದ
    • ಗಾಳಿ
    • ಇಹ
    • ಡೊಂಕು ಮನಸ್ಸಿನ ಮಾನವರೇ
    • ಅವರು
    • ಜೀವ ಬಿಡಾರ
    • ಇಂತಹ ಹುಡುಗಿ
    • ಕ್ರಿಯಾಪದ್ಯ
    • ಸೂರ್ಯಕುಮಾರ ಮತ್ತು ಚಂದ್ರಕುಮಾರಿ
    • ಬಿರುಕು
    • Yet
    • ನಮ್ಮದೆಂಬೋ ವಸ್ತುಗಳು
    • ಗೋಡೆ ಬರಹ
    • ಅದೇನಂಥಾ…
    • ಸಲಹೆ
    • `ಅರ್ಥ’ಗಳು ನವ್ಯಕಥೆ ಕಟ್ಟುವ ಮೊದಲು
    • ಹೀಗೆ
    • ಸಂಬಂಧಪಟ್ಟವರಿಗೆ
    • ಅಳಿದ ಮೇಲೆ
    • ಉತ್ತರ
    • ಬೀಜಕ್ಕೆ
    • ಬೇಡಿಕೆಗಳು
    • ವೈಫಲ್ಯದತ್ತ
    • ಒಂದು ಗುಟ್ಟಿನ ಮಾತು
    • ಪ್ರತಿನಾಯಕ
    • ಕೊನೆಯ ಮಾತು
    • ಪುಷ್ಯದಂಗಳದಲ್ಲಿ
    • ರಾತ್ರಿ
    • ಹರಪನಹಳ್ಳಿಯಲ್ಲಿ ಮಳೆ
    • ನನ್ನ ಕನಸಿನ ಗೆಳೆಯ
    • ಇಬ್ಬನಿ
    • ಸ್ಥಿತಿ
    • ಒಮ್ಮೆ…
    • ಕ್ಷಮೆ
    • ಹಳೆ ಹಾಡು
    • ಕಾಲನುವಾಚ
    • ಪದರ
    • ಇಷ್ಟೇನಾ?
    • ನನ್ನ ಅಕ್ಕನಿಗೊಂದು ಪತ್ರ
    • ಡಿಜಿಟಲ್‌ ಕಚೇರಿ
    • ಹೊಸ ಭ್ರಮೆ
    • ಸಮತ ಸಾಕ್ಷರತೆ
    • ಈಗಲೂ ಹಟ ಹಿಡಿಯುತ್ತೀರ?
    • ಬಳ್ಳಕ್ಕನ ನಗೆ
    • ಕೆಲವು ವಿಳಾಸಗಳು
    • ತಡವಾಯಿತಾದರೂ
    • ಅವಳ ನೆನಪು
    • ಸುಕುಮಾರನ ನೆನಪುಗಳು
    • ನನ್ನ ಕವಿ
    • ನಿಶ್ಶಬ್ದಕ್ಕೂ ಕೊಳಲು
    • ಹೊಸ ವರ್ತಮಾನ
    • ಕವಿ ಗೆಳೆಯನ ಸಲಹೆಗಳು
    • ನಿಶ್ಶಬ್ದದ ವಾದ
    • ಬರೀ ಮಾತುಗಳಿರುವ ಸಾಲುಗಳು
    • ಅಕಿಯಾಮ ಯಾನ (ನನ್ನ ಸ್ವಂತ ವರದಿ)
    • ಬಲಿಪೀಠದ ಹೇಳಿಕೆ
    • ಸ್ನೇಹಪೂರ್ವಕವಾಗಿ
    • ರೂಪಾಂತರ
    • ಹರಿವ ನದಿಗಿದೆ ಜೀವ
    • ನಾನು ಸಮುದ್ರ
    • We wither away
    • ನತದೃಷ್ಟ ವೀರನ ಒಂದು ಕ್ಷಣ
    • ಸಮೀಕರಣ
    • ವರ್ತಮಾನದ ಬಿಸಿಲು
    • ಮರೆಯಬೇಡ
    • ಒಂದು ಗೀಗೀ ಪದ
    • ಅನಾವರಣ
    • ತಾರಾಲೋಕದ ಅನಾಥ ಹುಡುಗ
    • ನನ್ನ ಮೇಡಂ ಜಯಲಕ್ಷ್ಮಿ
    • ಪರಿಚಯ
    • ವಿವರಣೆ
    • ಪಾಪಿಯ ಪದ್ಯ
    • ನಿವೇದನೆ
    • ಅಸ್ವಸ್ಥನೆದೆ
    • ನಡೆದದ್ದು
    • ನೆನಪು
    • ಅವರು
    • ದಿನಚರಿ
    • ಖಳನಾಯಕಿ
    • ನನಗೆ ಸಂತೈಸುವ ಬೆರಳುಗಳಿವೆ
    • ಅವಳು
    • ಸ್ವಾರ್ಥಿಯೊಬ್ಬನ ಸ್ವಗತ
    • ಅಸಂಗತ
    • ಭ್ರಮೆ
    • ಜಲಪಾತದ ಶಬ್ದ
    • ಭೇಟಿ
    • ಮುಟ್ಟಬೇಡ ಗೆಳೆಯ ನೀನು
    • ಎಚ್ಚರಿಕೆ
    • ಮೌನವೂ ನನಗೇ
    • ಗೆರೆಗಳ ಕಥೆ
    • ಕುರುಹಿಲ್ಲದ ನೆರಳು
    • ನೆಲವಾಗಿ ಹಬ್ಬಿದವಳಿಗೆ
    • ಆಘ್ರಾಣಿಸೋ ಹಾಗೆ
    • ನಮ್ಮನ್ನೆ ಬದಲಿಸಿಕೊಂಡು
    • ನನ್ನ ನಿನ್ನೆ
    • ಬೆವರು
    • ಕತ್ತಲಿನ ಬೆಳಕು
    • ಕಾಯದ ಮಾಟ
    ಹುಡುಕಿ!
    ವಿಭಾಗಗಳು
    • FREE BOOK CULTURE (6)
    • News Flashes (25)
    • Reviews (15)
    • Uncategorized (4)
    • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
    • ಕಲಿ ಯುಗ (62)
    • ಕವನಗಳು (131)
    • ನನ್ನ ಮಾಧ್ಯಮಯಾನ (3)
    • ಮಕ್ಕಳ ಪ್ರಬಂಧಗಳು (7)
    • ಮಾಹಿತಿ / ಲೇಖನ (22)
    • ಲೇಖನಗಳು (240)
    • ವಿಮರ್ಶೆ (45)
    • ಶಂಕರ್ ಶರ್ಮ (22)
    • ಸಣ್ಣ ಕಥೆಗಳು (20)
    • ಸುದ್ದಿ (140)
    • ಹಿಮದೊಡಲ ತಳಮಳ (1)
    • ಹುಲ್ಲಿನ ಸಾರು (1)
    Archives
    © 2023 ಬೇಳೂರುಸುದರ್ಶನ.

    Type above and press Enter to search. Press Esc to cancel.